Homeಪುಸ್ತಕ ವಿಮರ್ಶೆಗಾಂಧೀಜಿಗೆ ಪ್ರಭಾವ ಬೀರಿದ ಪುಸ್ತಕ ಜಾನ್ ರಸ್ಕಿನ್‌ರ ’ಅನ್‍ಟು ದಿಸ್ ಲಾಸ್ಟ್’ ಬಗ್ಗೆ

ಗಾಂಧೀಜಿಗೆ ಪ್ರಭಾವ ಬೀರಿದ ಪುಸ್ತಕ ಜಾನ್ ರಸ್ಕಿನ್‌ರ ’ಅನ್‍ಟು ದಿಸ್ ಲಾಸ್ಟ್’ ಬಗ್ಗೆ

- Advertisement -
- Advertisement -

ಗಾಂಧೀಜಿಗೆ ಸರ್ವೋದಯವಾಗಿ ಕಂಡ ಜಾನ್ ರಸ್ಕಿನ್ ಅವರ ಅನ್ಟು ದಿಸ್ ಲಾಸ್ಟ್ ಶಿರೋಬರಹದ ಬೇರು ಬೈಬಲ್ಲಿನ ಒಬ್ಬ ಉದಾರ ಮನದ ಮಾಲಿಕನ ದೃಷ್ಟಾಂತದಲ್ಲಿದೆ. ಸ್ವರ್ಗ ಸಾಮ್ರಾಜ್ಯದ ರೂಪಕವನ್ನು ಅರ್ಥೈಸಲು ಯೇಸು ಹೇಳುವ ಕತೆ.

ದ್ರಾಕ್ಷಿತೋಟದ ಯಜಮಾನ ಕೂಲಿಯಾಳುಗಳಿಗೆ ದಿನಕ್ಕೆ ಒಂದು ಬೆಳ್ಳಿ ನಾಣ್ಯದಂತೆ ಗೊತ್ತು ಮಾಡಿ ಕೆಲಸಕ್ಕೆ ಕಳುಹಿಸುತ್ತಾನೆ. ತೋಟದೊಡೆಯ ಕೆಲಸವಿಲ್ಲದೇ ಇರುವ ಇತರರನ್ನೂ ಕಂಡು ತಡವಾಗಿದ್ದರೂ ಅವರನ್ನೂ ಕೂಲಿಗೆ ಕಳುಹಿಸುತ್ತಾನೆ. ಅದೇ ರೀತಿಯಲ್ಲಿ ಇನ್ನೂ ದಿನದ ಕೊನೆಯ ಭಾಗದಲ್ಲಿ ಬಂದು ಸೇರಿಕೊಂಡವರಿಗೆಲ್ಲಾ ಕೆಲಸಕ್ಕೆ ಸೇರಿಸಿಕೊಳ್ಳುತ್ತಾನೆ. ಸಂಜೆ ಎಲ್ಲರೂ ಹೊರಡುವಾಗ ಎಲ್ಲರಿಗೂ ಸಮನಾಗಿ ಒಂದು ಬೆಳ್ಳಿ ನಾಣ್ಯದ ಕೂಲಿಯೇ ಸಿಗುತ್ತದೆ. ಮೊದಲು ಕೆಲಸಕ್ಕೆ ಬಂದವರು ಮೊದಲು, ನಡುವೆ ಮತ್ತು ಕೊನೆಗೆ ಬಂದವರೆಲ್ಲರಿಗೂ ಒಂದೇ ಸರಿಸಮ ಕೂಲಿ ಎಂದು ಗೊಣಗಿದಾಗ ತೋಟದೊಡೆಯ ಹೇಳುತ್ತಾನೆ.

“ನಿನಗೆ ಅನ್ಯಾಯ ಮಾಡಲಿಲ್ಲ. ಒಪ್ಪಂದದ ಪ್ರಕಾರ ನಿನಗೆ ನಿನ್ನ ಬೆಳ್ಳಿನಾಣ್ಯ ಸಿಕ್ಕಿದೆ. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ. ನನ್ನ ಔದಾರ್ಯ ಕಂಡು ನಿನಗೇಕೆ ಅಸೂಯೆ?”

ಈ ಕಟ್ಟ ಕಡೆಯವನಿಗೆ ಎನ್ನುವುದೇ “ಅನ್ ಟು ದಿಸ್ ಲಾಸ್ಟ್.”

ನ್ಯಾಯ ಮತ್ತು ಪ್ರಾಮಾಣಿಕತೆಗಳೆಂಬ ಮೌಲ್ಯಾಧಾರದಲ್ಲಿ ಸಂಪತ್ತನ್ನು ವ್ಯಾಖ್ಯಾನಿಸುವ ರಸ್ಕಿನ್ ಗಾಂಧಿ ಮತ್ತು ಟಾಲ್‌ ಸ್ಟಾಯ್‌ ಒಳಗೊಂಡಂತೆ ಅನೇಕಾನೇಕರನ್ನು ತಮ್ಮ ಬರಹದ ಮೂಲಕ ಪ್ರಭಾವಿಸಿದ್ದರು. ಹಾಗೆಯೇ ಅವರನ್ನು ಬಂಡವಾಳಶಾಹಿಯನ್ನು ಪ್ರತಿನಿಧಿಸುವವರು ವಿರೋಧಿಸುತ್ತಿದ್ದರು. ಸೃಷ್ಟಿಯ ಸಂರಚನೆಯಲ್ಲಿ ಕೈಗಾರಿಕೆಗಳ ಆಡಳಿತಯಂತ್ರಗಳು ಮತ್ತು ಬಂಡವಾಳಶಾಹಿಯು ಹೇಗೆ ಅಮಾನ್ಯವಾಗುತ್ತದೆ ಎಂಬ ಅರಿವನ್ನೂ ಈ ಕೃತಿಯಲ್ಲಿ ಉಸುರಿದ್ದರು.

ಎಲ್ಲಾ ಕೆಲಸಗಳನ್ನೂ ಗೌರವಿಸುತ್ತಾ ಕೊಟ್ಟೆಲ್ಲಾ ಕೆಲಸಗಳಿಗೆ ಸಮವಾಗಿ ಸಂದಾಯ ಮಾಡಬೇಕೆನ್ನುವ ರಸ್ಕಿನ್ ಪ್ರತಿಯೊಬ್ಬರನ್ನೂ ಕುಶಲಿಗಳನ್ನಾಗಿ, ವಿದ್ಯಾವಂತರನ್ನಾಗಿ ರೂಪಿಸುವುದು ಸರಕಾರದ ಕೆಲಸವೆನ್ನುತ್ತಾರೆ. ಅವರ ಆದರ್ಶವೆಂದರೆ; ಯಜಮಾನನು ತನ್ನ ಮಗನನ್ನು ವಿದ್ಯಾವಂತನನ್ನಾಗಿ, ಹಣವಂತನನ್ನಾಗಿ ಆಸ್ಥೆಯಿಂದ ರೂಪಿಸುವಂತೆ ತನ್ನ ಕೆಲಸಗಾರರನ್ನೂ ರೂಪಿಸಬೇಕು.

ಮತ್ತೊಬ್ಬರನ್ನು ಬಳಸಿಕೊಳ್ಳುತ್ತಾ ತಾನು ಸಿರಿವಂತನಾಗುವುದು ಪಾಪದ ಕೆಲಸ. ಅದು ಸರಕಾರದ ಆರ್ಥಿಕತೆಗೂ ಅನ್ಯಾಯ. ತನ್ನ ನೆರೆಯವನನ್ನು ಬಡತನಕ್ಕೆ ದೂಡುತ್ತಾ ತನ್ನನ್ನು ಶ್ರೀಮಂತಗೊಳಿಸಿಕೊಳ್ಳುವ ಯಾವುದೇ ವಿಧಾನ ಅನ್ಯಾಯ. ತಾನೊಬ್ಬ ಸಿರಿವಂತನಾಗಿ ಬಡ ಸಮಾಜದಲ್ಲಿರುವುದು ಮೌಲ್ಯಹೀನ. ಹಾಗಾಗಿ ಸಂಪತ್ತು ಎಂಬುದು ನ್ಯಾಯದ ಆಧಾರದಲ್ಲಿರಬೇಕು. ಇತರರ ದುಡಿಮೆಯಿಂದ ತಾನು ಶ್ರೀಮಂತನಾಗುವುದು ಶೀಲವಲ್ಲ.

ರಾಷ್ಟ್ರೀಯ ಸಂಪತ್ತೆನ್ನುವುದು ಕೆಲವು ಜನರ ಒಟ್ಟುಗೂಡಿಸಿದ ಸಂಪತ್ತಾಗಬಾರದು. ರಾಷ್ಟ್ರದ ಎಲ್ಲಾ ಜನರ ವಿದ್ಯಾರ್ಹತೆ, ಪ್ರತಿಭೆ, ದುಡಿಮೆಗಳಿಂದ ಕ್ರೋಢೀಕರಿಸಿರುವಂತಹ ಸಂಪತ್ತಾಗಬೇಕು. ವ್ಯಕ್ತಿಗತವಾಗಿ ಶ್ರೀಮಂತರಾಗಿರುವವರಿಂದ ಸಮಾಜಕ್ಕೆ ಎಂತಹ ಕೊಡುಗೆ ದೊರಕುತ್ತದೆ!

ವಾಣಿಜ್ಯ ವ್ಯವಹಾರವು ನ್ಯಾಯಸಮ್ಮತವಾಗಿಯೇ ನಡೆಯಬೇಕು. ಏಕೆಂದರೆ ಸೃಷ್ಟಿಯ ವ್ಯವಹಾರಗಳಲ್ಲಿ ತಾರತಮ್ಯವಿಲ್ಲ. ಅದೇರೀತಿ ನ್ಯಾಯದ ಪ್ರಜ್ಞೆಯಿಂದ ಆರ್ಥಿಕ ವ್ಯವಹಾರಗಳೂ ನಡೆಯಬೇಕು. ಆರ್ಥಿಕತೆಯೂ ಕೆಲವು ಜನರ ಕೈಯೊಡೆತನದಲ್ಲಿರದೇ ಸಹಜೀವಿಗಳೆಲ್ಲ ಸರಣಿಯಲ್ಲಿ ವ್ಯಾಪ್ತವಾಗಿ ಪ್ರಾಪ್ತಿಯಲ್ಲಿರಬೇಕು. ರಸ್ಕಿನ್ ಹೇಳುವಂತೆ ಯಾರುಯಾರನ್ನೂ ಕಡೆಯಾಗಿ ನೋಡಬಾರದು, ಯಾರು ಯಾರಿಗೂ ಗುಲಾಮರಾಗಿರಕೂಡದು. ಕೆಲವು ಜನರ ಕೈಯೊಡೆತನದಲ್ಲಿರುವ ಸಂಪತ್ತು ಹಲವು ಜನರನ್ನು ಬಡತನಕ್ಕೆ ದೂಡುತ್ತದೆ.

ರಸ್ಕಿನ್ ಧ್ವನಿಸುವುದಿಷ್ಟೇ, ಜೀವನಕ್ಕೆ ಆಧಾರವಾಗುವುದೋ ಅದೇ ಮೌಲ್ಯ. ಹಣ, ಬೆಲೆ, ಉತ್ಪಾದನೆ ಯಾವುದಾದರೂ ಜೀವಿಗಳ ಜೀವನಕ್ಕೆ ಆಧಾರವಾಗುವುದಾದರೆ ಮಾತ್ರವೇ ಅವು ಮೌಲ್ಯ. ಉಪಯೋಗಿಸದ ಸಂಪತ್ತನ್ನು ಶೇಖರಿಸಿಟ್ಟುಕೊಳ್ಳುವುದು ಸಿರಿವಂತಿಕೆಯ ರೋಗ. ಉತ್ಪಾದನೆಗಳು ಹಣವನ್ನು ಸೃಷ್ಟಿಸುವ ಆಧಾರದಲ್ಲಾಗದೇ ಬಳಕೆಯ ಆಧಾರದಲ್ಲಾದರೆ ಅದು ಉಪಯುಕ್ತ ಮತ್ತು ಮೌಲ್ಯಾಧಾರಿತವಾದ ಪ್ರಗತಿ.

ರಸ್ಕಿನ್‍ರವರ ಆರ್ಥಿಕ ತತ್ವ, ಜೀವನಕ್ಕೆ ಹೊರತಾದ ಸಂಪತ್ತಿಲ್ಲ. ಪ್ರೀತಿ, ಆನಂದ, ಅಭಿಮಾನ ಎಲ್ಲವನ್ನೂ ಒಳಗೊಳ್ಳುವ ಶಕ್ತಿಯೇ ಜೀವನವಾಗಿರುವಾಗ ದೇಶದ ಸರ್ಕಾರವೂ ಕೂಡಾ ಘನತೆಯ ಮತ್ತು ಸಂತೋಷದ ಮನುಷ್ಯರನ್ನು ತನ್ನ ನೆಲದಲ್ಲಿ ರೂಪಿಸಬೇಕು. ಇತರರ ಮರ್ಜಿಯಲ್ಲಿ ದೈನೇಸಿಯಿಂದ ಬದುಕುವಂತಹ ಪರಾವಲಂಬಿಗಳನ್ನಾಗಿ ಮಾಡುವುದಲ್ಲ.

ಇದೇ ರಸ್ಕಿನ್ನನ್ನಿಂದ ಗಾಂಧೀಜಿ ಗ್ರಹಿಸಿದ ಸರ್ವೋದಯ ತತ್ವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...