Homeಅಂಕಣಗಳುಮಾತು ಮರೆತ ಭಾರತ; ಕಾರಂಚೇಡು ಫೈಲ್ : ದಲಿತರ ಮೇಲೆ ಶೂದ್ರರ ಅಟ್ಟಹಾಸ

ಮಾತು ಮರೆತ ಭಾರತ; ಕಾರಂಚೇಡು ಫೈಲ್ : ದಲಿತರ ಮೇಲೆ ಶೂದ್ರರ ಅಟ್ಟಹಾಸ

- Advertisement -
- Advertisement -

ಅದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿನ ಕಾರಂಚೇಡು ಎಂಬ ಊರು. ಈ ಊರಿನ ಹೆಸರು ಕೇಳಿದರೆ ಸಾಕು ಇಡೀ ಆಂಧ್ರಪ್ರದೇಶದ ದಲಿತರು ಹಾಗೂ ಮೇಲ್ಜಾತಿ ಭೂಮಾಲೀಕರು ಇಬ್ಬರೂ ಬೆಚ್ಚಿ ಬೀಳುತ್ತಾರೆ. ಅದಕ್ಕೆ ಕಾರಣ ಜುಲೈ 17, 1985ರಲ್ಲಿ ಕಾರಂಚೇಡುವಿನಲ್ಲಿ ನಡೆದಿದ್ದ ಭೀಕರ ನರಮೇಧ ಹಾಗೂ ನಂತರದ ಬೆಳವಣಿಗೆಗಳು.

ಈ ಘಟನೆ ನಡೆದು 23 ವರ್ಷಗಳ ನಂತರ ಸುಪ್ರೀಂಕೋರ್ಟ್ ಈ ನರಮೇಧಕ್ಕೆ ಕಾರಣರಾದ ಹಲವರಲ್ಲಿ ಒಬ್ಬನಿಗೆ ಜೀವಾವಧಿ ಶಿಕ್ಷೆ ನೀಡಿ, ಉಳಿದಂತೆ 30 ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತು. ದಲಿತ ಭಾರತದ ಇತಿಹಾಸದಲ್ಲಿ ಕಾರಂಚೇಡು ಅಚ್ಚಳಿಯದಂತೆ ನಿಲ್ಲಲು ಮುಖ್ಯ ಕಾರಣವೇ ಕನಿಷ್ಟಪಕ್ಷ ದಲಿತರನ್ನು ಕೊಂದ ಕೆಲವರಿಗಾದರೂ ಶಿಕ್ಷೆಯಾದದ್ದಾಗಿದೆ.

1960ರ ದಶಕದಲ್ಲಿ ಆಂಧ್ರಪ್ರದೇಶದ ಪ್ರಮುಖ ರೈತಾಪಿ ಜಾತಿಯವರಾದ ಕಮ್ಮಾಗಳು ಕೃಷಿ ಗೇಣಿದಾರರಾಗಿದ್ದರು. ಜೊತೆಗೆ ಕೃಷಿ ಕೂಲಿಗಳೂ ಆಗಿದ್ದರು. ಈ ಕಾರಣದಿಂದ ಸಹಜವಾಗಿ ಕೂಲಿಗಳ ಪರವಾಗಿ ವರ್ಗ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಮ್ಯುನಿಸ್ಟ್ ಪಕ್ಷದೊಂದಿಗೆ ಈ ಕಮ್ಮಾಗಳು ಗುರುತಿಸಿಕೊಂಡಿದ್ದರು. ಮತ್ತೊಂದು ಕಡೆ ರೆಡ್ಡಿಗಳು ಆಡಳಿತ ಪಕ್ಷವಾದ ಕಾಂಗ್ರೆಸ್ಸಿನೊಂದಿಗೆ ಗುರುತಿಸಿಕೊಂಡಿದ್ದರು. ಇಲ್ಲಿನ ಪ್ರಮುಖ ದಲಿತ ಜಾತಿಗಳಾದ ಮಾಲ ಮತ್ತು ಮಾದಿಗರೂ ಸಹ ರಾಜಕೀಯವಾಗಿ ಕಮ್ಯುನಿಸ್ಟ್ ಹಾಗೂ ಕಾಂಗ್ರೆಸ್ಸಿನಲ್ಲಿ ಹಂಚಿಹೋಗಿದ್ದರು. ಆದರೆ 70-80ರ ದಶಕದ ಭೂಸುಧಾರಣೆ ಹಾಗೂ ಇನ್ನಿತರ ಆರ್ಥಿಕ ಪಲ್ಲಟಗಳ ಕಾರಣವಾಗಿ ಕಮ್ಮಾ ಜಾತಿಗಳ ಕೈಗೆ ಭೂಮಿ ದಕ್ಕಿತು. ಸದಾ ಮೇಲ್ಮುಖ ಚಲನೆಗೆ ಹಾತೊರೆಯುತ್ತಿದ್ದ ಕಮ್ಮಾ ಕೃಷಿಕರು ಕೊನೆಗೂ ಜಮೀನುಗಳನ್ನು ಪಡೆದುಕೊಂಡರು. ಇದು ಅವರನ್ನು ಭೂಮಾಲೀಕ ಜಾತಿಯನ್ನಾಗಿ ಮಾಡಿತು. ಇದೇ ಕಾರಣದಿಂದ 80ರ ದಶಕದಲ್ಲಿ ಪ್ರಮುಖವಾಗಿ ಕಮ್ಮಾ ಮುಂಚೂಣಿ ನಾಯಕರೆಲ್ಲ ಸೇರಿ ’ತೆಲುಗು ದೇಶಂ’ ಪಕ್ಷವನ್ನು ಸ್ಥಾಪಿಸುವಂತಾಯಿತು. ತೆಲುಗು ನಾಡಿನ ಪ್ರಖ್ಯಾತ ನಟ ಎನ್.ಟಿ.ರಾಮರಾವ್ ಇದರ ಮುಖ್ಯಸ್ಥ. ಇವರೇ 1983ರಲ್ಲಿ ಮುಖ್ಯಮಂತ್ರಿಯೂ ಆದರು. ಈ ರಾಮರಾವ್‌ರವರ ಮಗಳಿಗೆ ಕಾರಂಚೇಡುವಿನ ಕಮ್ಮಾ ಭೂಮಾಲೀಕ ದಗ್ಗುಬಾಟಿ ಚೆಂಚುರಾಮಯ್ಯನ ಮಗ ದಗ್ಗುಬಾಟಿ ಚೆಂಚು ವೆಂಕಟೇಶ್ವರರಾವ್ ಜೊತೆ ವಿವಾಹವಾದಾಗಿನಿಂದ ಕಾರಂಚೇಡುವಿನ ಕಮ್ಮಾ ಭೂಮಾಲೀಕರ ಕಾಲುಗಳು ನೆಲದ ಮೇಲೆ ನಿಲ್ಲಲಿಲ್ಲ. ಇದರ ಜೊತೆಗೆ ದಗ್ಗುಬಾಟಿ ಚೆಂಚು ವೆಂಕಟೇಶ್ವರ ರಾವ್ 1983ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿಬಿಟ್ಟ. ಇದರಿಂದ ಅಲ್ಲಿನ ಕಮ್ಮಾ ಭೂಮಾಲೀಕರ ಆಟಾಟೋಪಗಳಿಗೆ ತಡೆ ಇಲ್ಲದಂತಾಯಿತು. ಅವರ ಹೊಲಗಳಲ್ಲಿ ಕೃಷಿಕೂಲಿಗಳಾಗಿ ಕೆಲಸ ಮಾಡುತ್ತಿದ್ದ ದಲಿತರಿಗೆ ಅದರಲ್ಲೂ ಮಾದಿಗರಿಗೆ ಕಿರುಕುಳ ನೀಡಲು ಆರಂಭಿಸಿದರು. ಕೂಲಿಯನ್ನೂ ಕಡಿಮೆ ಮಾಡಿದರು. ಇದರ ಜೊತೆಗೆ ಆ ಕಾಲದ ಹಿಂದಿನ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿದ್ದನ್ನು ಕಂಡಿದ್ದ ಕಮ್ಮಾ ಭೂಮಾಲೀಕರು ಚೆಂಚುರಾಮಯ್ಯನ ಮುಖಂಡತ್ವದಲ್ಲಿ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಆ ದಿನ ಬಂದೇಬಿಟ್ಟಿತು.

ಅಂದು ಜುಲೈ 16, 1985ರ ಸಂಜೆಯ ಸಮಯ. ಕಾರಂಚೇಡುವಿನ ದಲಿತರ ನೀರಿನ ತೊಟ್ಟಿಯ ಬಳಿ ಕಮ್ಮಾ ಜಾತಿಯ ರೈತನೊಬ್ಬ ತನ್ನ ಎಮ್ಮೆಗಳನ್ನು ತೊಳೆಯುತ್ತಿದ್ದ. ಆ ಕೊಳಕು ನೀರು ನೇರವಾಗಿ ದಲಿತರ ನೀರಿನ ತೊಟ್ಟಿಗೆ ಹರಿಯುತ್ತಿತ್ತು. ಇದನ್ನು ಕಂಡ ದಲಿತನೊಬ್ಬ ಪ್ರಶ್ನಿಸಿದನು. ಇದನ್ನೇ ನೆಪ ಮಾಡಿಕೊಂಡು ಕಮ್ಮಾ ರೈತ ಕೈಲಿದ್ದ ಹಗ್ಗದಿಂದಲೇ ದಲಿತ ಯುವಕನನ್ನು ಹೊಡೆಯಲು ಆರಂಭಿಸಿದನು. ಇದನ್ನು ಕಂಡ ದಲಿತೆ ಮುನ್ನಂಗಿ ಸುವಾರ್ತ ತನ್ನ ಕೈಯಲ್ಲಿದ್ದ ಬಿಂದಿಗೆಯಿಂದಲೇ ಆ ಕಮ್ಮಾ ರೈತನನ್ನು ಹೊಡೆದು ಓಡಿಸಿದಳು. ಆ ಕಮ್ಮಾ ರೈತನೊಬ್ಬನಿಗಾದ ಶಾಸ್ತಿಯನ್ನು ಇಡೀ ಕಮ್ಮಾ ಜಾತಿ ತನಗಾದ ಅವಮಾನವೆಂದು ಭಾವಿಸಿತು. ಈ ಹಿಂದಿನ ಚುನಾವಣೆಯ ಘಟನೆಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದವರಿಗೆ ತತ್‌ಕ್ಷಣದ ಕಾರಣ ದೊರಕಿತು.

ನೀರಿನ ತೊಟ್ಟಿಯ ಬಳಿ ನಡೆದಿದ್ದ ಗಲಾಟೆ ಸಂಬಂಧಿಸಿ ರಾಜಿ ಸಂಧಾನ ಮಾಡಿಕೊಳ್ಳೋಣವೆಂದು ದಲಿತ ಹಿರಿಯರನ್ನು ಕಮ್ಮಾ ಭೂಮಾಲೀಕರು ಒಪ್ಪಿಸಿದರು. ಜುಲೈ 17ರಂದು ಎರಡೂ ಕಡೆಯವರು ಪಂಚಾಯಿತಿ ಕಟ್ಟೆಯ ಬಳಿ ನೆರೆದರು. ಇದೇ ಸಮಯಕ್ಕೆ ಕಾಯುತ್ತಿದ್ದ ಕಮ್ಮಾ ಭೂಮಾಲೀಕರ ತಂಡ ಹಾಗೂ ಸುತ್ತಮುತ್ತಲಿದ್ದ ಅವರ ಸಂಬಂಧಿಕರು ಕತ್ತಿ, ಪಿಕಾಸಿ, ದೊಣ್ಣೆ, ಚೂರಿ, ಕುಡುಗೋಲುಗಳನ್ನು ಹಿಡಿದು ದಲಿತರ ಮೇಲೆರಗಿದರು. ನಿರಾಯುಧರಾದ ದಲಿತರು ಜೀವ ಉಳಿಸಿಕೊಳ್ಳಲು ಹೊಲಗದ್ದೆಗಳ ಹಾದಿಯನ್ನು ಹಿಡಿದರು. ಆದರೆ ಅವರನ್ನು ಬಿಡದಂತೆ ಹಿಂಬಾಲಿಸಿದ ಕಮ್ಮಾ ಸಮುದಾಯದ ಜಾತಿವಾದಿ ಕ್ರೂರಿಗಳು ಬೈಕು, ಟ್ರ್ಯಾಕ್ಟರ್, ಸೈಕಲ್ಲುಗಳ ಮೇಲೆ ಹತ್ತಿ ಬೆನ್ನತ್ತಿ ಒಬ್ಬೊಬ್ಬರನ್ನು ಪತ್ತೆ ಹಚ್ಚಿ ಕೊಲ್ಲುತ್ತಾ ಹೋದರು. ಸಿಕ್ಕಸಿಕ್ಕವರ ಮೇಲೆ ಹಲ್ಲೆ ಮಾಡಿದರು. ಈ ನರಮೇಧದಲ್ಲಿ ಕಮ್ಮಾಗಳು 6 ಜನ ಮಾದಿಗ ಯುವಕರನ್ನು ಕೊಂದುಹಾಕಿದರು. ಮೂವರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅಟ್ಟಹಾಸ ಮೆರೆದರು. ಗರ್ಭಿಣಿಯರನ್ನೂ ಬಿಡದೆ ದೊಣ್ಣೆಯಿಂದ ಥಳಿಸಿದರು. ಹಲವರು ಪ್ರಾಣವನ್ನು ಉಳಿಸಿಕೊಳ್ಳಲು ಪಕ್ಕದ ಚಿರಾಲ ಪಟ್ಟಣಕ್ಕೆ ಓಡಿಹೋದರು. ಅಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಬ್ಬರು ಯುವಕರೂ ತೀರಿಕೊಂಡರು. ಈ ಸಮಯದಲ್ಲಿ ದಲಿತರನ್ನು ಕಾಪಾಡಿದ್ದು ಚಿರಾಲ ಪಟ್ಟಣದ ಒಂದು ಕ್ರೈಸ್ತ ಚರ್ಚ್. ವಾರವಿಡೀ ಅನ್ನವಿಟ್ಟು ಅವರನ್ನು ಪ್ರಾಣ ಭಯದಿಂದ ದೂರ ಮಾಡಿತು. ಆದರೆ ಈ ವಿಷಯ ತಿಳಿದ ಪೊಲೀಸರು ಚರ್ಚಿನಲ್ಲಿ ಪ್ರಾಣ ಭಯದಿಂದ ಬದುಕುತ್ತಿದ್ದ ದಲಿತರನ್ನೇ ಬಂಧಿಸಿತು. ಅಷ್ಟೊತ್ತಿಗೆ ಈ ನರಮೇಧ ಇಡೀ ಭಾರತದಾದ್ಯಂತ ಮನೆಮಾತಾಗಿತ್ತು. ಆಂಧ್ರಪ್ರದೇಶದ ದಕ್ಷ ಹೋರಾಟಗಾರರಾದ ಬೊಜ್ಜಾ ತಾರಕಂ ಮತ್ತು ಕಟ್ಟಿ ಪದ್ಮರಾವ್ ಇಬ್ಬರೂ ಸ್ಥಳೀಯವಾಗಿ ಎಚ್ಚೆತ್ತ ದಲಿತರನ್ನು ಸಂಘಟಿಸಿ ಕಾರಂಚೇಡು ದಲಿತರಿಗೆ ನ್ಯಾಯ ಕೊಡಿಸಲೋಸುಗ ಆಂಧ್ರಪ್ರದೇಶ ದಲಿತ ಮಹಾಸಭಾ ಸಂಘಟನೆ ಕಟ್ಟಿದರು. ಅದರ ಮೂಲಕ ದಲಿತರಿಗೆ ಧೈರ್ಯ ತುಂಬಲು ನೂರಾರು ಕಾರ್ಯಕ್ರಮ ರೂಪಿಸಿದರು. ಪ್ರಕಾಶಂ ಜಿಲ್ಲೆಯಲ್ಲಿ ಜಾಥಾ ಹಮ್ಮಿಕೊಂಡರು.

ಈ ಮೇಲಿನ ಹೋರಾಟದಿಂದಾಗಿ ಸೆಷನ್ ನ್ಯಾಯಾಲಯವು 159 ಕಮ್ಮಾ ಜಾತಿಯ ಜಾತಿವಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಆದರೆ ಪ್ರಮುಖ ಸಾಕ್ಷಿಯಾಗಿದ್ದ ದಲಿತ ಮಹಿಳೆಯ ಕೊಲೆಯೊಡನೆ ಪ್ರಕರಣ ಬೇರೆಯದೇ ಜಾಡು ಹಿಡಿಯಿತು. ಆಂಧ್ರಪ್ರದೇಶ ಹೈಕೋರ್ಟ್ ಅನುಮಾನಾಸ್ಪದ ವಿಚಾರಣೆ ಎಂಬ ನೆಪವೊಡ್ಡಿ ಅಪರಾಧಿಗಳಿಗೆ ಶಿಕ್ಷೆಯನ್ನು ತಡೆಹಿಡಿಯಿತು. ಆದರೆ ಬೊಜ್ಜಾ ತಾರಕಂರವರ ಸತತ ಪ್ರಯತ್ನದಿಂದ 2008ರಲ್ಲಿ ಸುಪ್ರೀಂ ಕೋರ್ಟ್, ಪ್ರಕರಣದ ಆರೋಪಿ ಒಬ್ಬನಿಗೆ ಜೀವಾವಧಿ ಶಿಕ್ಷೆಯನ್ನೂ ಉಳಿದ 30 ಮಂದಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಉಳಿದವರನ್ನು ಖುಲಾಸೆಗೊಳಿಸಿತು. ಈ ಪ್ರಕರಣದ ಮುಖ್ಯ ರೂವಾರಿ ಚೆಂಚುರಾಮಯ್ಯ ನ್ಯಾಯಾಲಯದ ಕಣ್ಣುಗಳಿಂದ ತಪ್ಪಿಸಿಕೊಂಡನು. ಆದರೆ ಪೀಪಲ್ಸ್ ವಾರ್ ತಂಡವು ಕಾರಂಚೇಡುವಿನ ಮನೆಗೆ ನುಗ್ಗಿ ಚೆಂಚುರಾಮಯ್ಯನನ್ನು ಹಾಡುಹಗಲೇ ಕೊಂದುಹಾಕಿತು. ಈ ನಡೆಯನ್ನು ದಲಿತ ಮಹಾಸಭಾ ಖಂಡಿಸಿತು. ನಿಜವೆಂದರೆ ಅಲ್ಲಿಂದ ಇಲ್ಲಿಯವರೆಗೂ ಪ್ರಕಾಶಂ ಜಿಲ್ಲೆಯಲ್ಲಿ ಇಂತಹ ಭೀಕರ ಘಟನೆ ಮತ್ತೊಂದು ನಡೆದಿಲ್ಲ.

ಆದರೂ ಇಂದಿಗೂ ಕಾರಂಚೇಡು ಗ್ರಾಮವನ್ನು ತೊರೆದು ಬಂದಿರುವ ಮಾದಿಗ ಕುಟುಂಬಗಳು ಮತ್ತೆ ಅಲ್ಲಿಗೆ ಹೋಗುವ ಮನಸ್ಸು ಮಾಡಿಲ್ಲವೆಂದರೆ ಅವರ ಮನಸ್ಸಲ್ಲಿ ಆ ಭೀಕರ ಹತ್ಯಾಕಾಂಡ ಮೂಡಿಸಿರುವ ಭಯವನ್ನು
ಅಂದಾಜಿಸಬಹುದಾಗಿದೆ. ಕಾರಂಚೇಡುವಿನಿಂದ ಓಡಿಬಂದ ಸುಮಾರು 500ಕ್ಕೂ ಹೆಚ್ಚು ಮಾದಿಗರು ಇಂದಿಗೂ ಪ್ರಕಾಶಂ ಜಿಲ್ಲೆಯಾದ್ಯಂತ ಅಲ್ಲಲ್ಲಿ ಬದುಕುಕಟ್ಟಿಕೊಂಡು ಜೀವಿಸುತ್ತಿದ್ದಾರೆ.

ಒಟ್ಟಾರೆ ಜಾತಿ ಅಸಮಾನತೆ ಹಾಗೂ ಜಾತಿಯ ದರ್ಪ ಶೂದ್ರ ಜಾತಿಗಳನ್ನೂ ಬಿಟ್ಟಿಲ್ಲ. ಮೇಲ್ಜಾತಿಗಳು ಶೂದ್ರರನ್ನು ಹಿಂದೆ ಹೇಗೆ ನಡೆಸಿಕೊಂಡು ಶೋಷಿಸಿದವೋ ಹಾಗೆಯೇ ಇಂದು ಶೂದ್ರ ಜಾತಿಗಳು ದಲಿತರನ್ನು ನಡೆಸಿಕೊಳ್ಳುತ್ತಿವೆ. ಜಾತಿ ವೈರಸ್ ಭಾರತೀಯರನ್ನೇ ಬಲಿ ತೆಗೆದುಕೊಂಡಿದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಬೆಲ್ಚಿ ಫೈಲ್: ಭಾರತವನ್ನು ಬೆಚ್ಚಿ ಬೀಳಿಸಿದ ದಲಿತರ ನರಮೇಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೆಲವೇ ಕೆಲವರು ನಡೆಸುವ ಇಂಥಾ ಕೃತ್ಯಗಳಿಗೆ ಇಡೀ ಶೂದ್ರರೇ ಹೀಗೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಸುಳ್ಳು ದಲಿತ ದೌರ್ಜನ್ಯ ಕೇಸುಗಳಲ್ಲಿ ಅತೀ ಹೆಚ್ಚು ಕಷ್ಟನಷ್ಟಗಳನ್ನು ಅನುಭವಿಸಿದವರು ನಾವು ಶೂದ್ರರೇ…

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...