Homeಮುಖಪುಟಜಮ್ಮು ಕಾಶ್ಮೀರದಲ್ಲಿ ಸೆರೆ ಸಿಕ್ಕ ಲಷ್ಕರ್-ಎ-ತೊಯ್ಬಾ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!

ಜಮ್ಮು ಕಾಶ್ಮೀರದಲ್ಲಿ ಸೆರೆ ಸಿಕ್ಕ ಲಷ್ಕರ್-ಎ-ತೊಯ್ಬಾ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!

- Advertisement -
- Advertisement -

ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಸೆರೆ ಸಿಕ್ಕ ಲಷ್ಕರ್-ಎ-ತೊಯ್ಬಾ ಉಗ್ರ ಬಿಜೆಪಿಯ ಸಕ್ರಿಯ ಸದಸ್ಯನಾಗಿದ್ದ ಜೊತೆಗೆ ಜಮ್ಮು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸಾಮಾಜಿಕ ಮಾಧ್ಯಮ ಉಸ್ತುವಾರಿ ಕೂಡ ಆಗಿದ್ದ ಎಂಬ ಸ್ಪೋಟಕ ಮಾಹಿತಿ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.

ಇಂದು ಬೆಳಗ್ಗೆ ಜಮ್ಮುವಿನ ರಿಯಾಸಿ ಪ್ರದೇಶದಲ್ಲಿ ಉಗ್ರರಾದ ತಾಲಿಬ್ ಹುಸೇನ್ ಶಾ ಮತ್ತು ಆತನ ಸಹಚರರನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ಅವರಿಂದ ಎರಡು ಎಕೆ ರೈಫಲ್‌ಗಳು, ಹಲವಾರು ಗ್ರೆನೇಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡು, ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.

ಮೇ 9 ರಂದು ಬಿಜೆಪಿಯು ಜಮ್ಮು ಪ್ರಾಂತ್ಯದಲ್ಲಿ ಪಕ್ಷದ ಐಟಿ ಮತ್ತು ಸಾಮಾಜಿಕ ಮಾಧ್ಯಮದ ಉಸ್ತುವಾರಿಯಾಗಿ ತಾಲಿಬ್ ಹುಸೇನ್ ಶಾನನ್ನು ನೇಮಿಸಲಾಗಿತ್ತು ಎನ್ನಲಾಗಿದೆ. ಜಮ್ಮು ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರೊಂದಿಗೆ ಉಗ್ರ ಶಾ ಇರುವ ಹಲವರು ಫೋಟೊಗಲು ವೈರಲ್ ಆಗುತ್ತಿವೆ.

ಭಯೋತ್ಪಾದಕನೊಬ್ಬನನ್ನು ಪಕ್ಷದ ಐಟಿ ಸೆಲ್ ಮುಖ್ಯಸ್ಥನಾಗಿ ಬಿಜೆಪಿ ನೇಮಿಸಿದೆ, ಹೆಸರಿಗೆ ಮಾತ್ರ ಭಯೋತ್ಪಾದನೆ ವಿರುದ್ಧ ಹೋರಾಡುವ ಬಿಜೆಪಿಯು ಭಯೋತ್ಪಾದಕರನ್ನೇ ಸಾಕುತ್ತಿದೆ ಎಂದು ಹಲವಾರು ಜನರು ದೂರಿದ್ದಾರೆ.

ಬಿಜೆಪಿ ಪಕ್ಷದಲ್ಲಿಯೇ ಉಗ್ರಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷವು, “ಆನ್‌ಲೈನ್ ಸದಸ್ಯತ್ವ ವ್ಯವಸ್ಥೆಯು ಯಾವುದೇ ಹಿನ್ನೆಲೆ ಪರಿಶೀಲನೆಯಿಲ್ಲದೆ ಜನರನ್ನು ಪಕ್ಷಕ್ಕೆ ಸೇರಲು ಅನುವು ಮಾಡಿಕೊಡುತ್ತದೆ” ಎಂದು ಹೇಳುವ ಮೂಲಕ ಜಾರಿಕೊಳ್ಳಲು ಯತ್ನಿಸಿದೆ.

ಬಿಜೆಪಿ ವಕ್ತಾರ ಆರ್.ಎಸ್.ಪಠಾನಿಯಾ ಮಾತನಾಡಿ, “ಇದು ಹೊಸ ಮಾದರಿಯಾಗಿದೆ. ಉಗ್ರರು ಬಿಜೆಪಿಗೆ ಪ್ರವೇಶ ಪಡೆಯುವುದು, ಅಲ್ಲಿ ಹೆಸರು ಗಳಿಸುವುದು ನಂತರ ಉನ್ನತ ನಾಯಕತ್ವವನ್ನು ಕೊಲ್ಲುವ ಸಂಚು ಮಾಡಿದ್ದರು, ಆದರೆ ಅದನ್ನು ಪೊಲೀಸರು ಭೇದಿಸಿದ್ದರು” ಎಂದು ಹೇಳಿದ್ದಾರೆ.

“ಗಡಿಯಲ್ಲಿ, ಭಯೋತ್ಪಾದನೆಯನ್ನು ಹರಡಲು ಬಯಸುವವರು ಇದ್ದಾರೆ. ಈಗ ಯಾರು ಬೇಕಾದರೂ ಆನ್‌ಲೈನ್‌ನಲ್ಲಿ ಬಿಜೆಪಿ ಸದಸ್ಯರಾಗಬಹುದು. ಇದು ಒಂದು ನ್ಯೂನತೆ ಎಂದು ನಾನು ಹೇಳುತ್ತೇನೆ ಏಕೆಂದರೆ ಅಪರಾಧ ದಾಖಲೆ ಅಥವಾ ಜನರ ಪೂರ್ವಾಪರಗಳನ್ನು ಪರಿಶೀಲಿಸುವ ವ್ಯವಸ್ಥೆ ಇಲ್ಲ” ಎಂದು ಅವರು ಹೇಳಿದರು.

ಸಾಮಾನ್ಯ ಸದಸ್ಯರಾದರೆ ಬೇರೆ ವಿಚಾರ. ಆದರೆ ಬಂಧಿಸಲ್ಪಟ್ಟಿರುವ ಉಗ್ರನಿಗೆ ಸಾಮಾಜಿಕ ಜಾಲತಾಣ ನಿರ್ವಹಣೆಯ ಹುದ್ದೆ ನೀಡಲಾಗಿದೆ. ಅಲ್ಲದೆ ಪಕ್ಷದ ಹಿರಿಯರೊಂದಿಗೆ ಆತನಿಗೆ ಉತ್ತಮ ಸಂಬಂಧವಿರುವುದು ಫೋಟೊಗಳಿಂದ ತಿಳಿದುಬಂದಿದೆ. ಇಷ್ಟಿದ್ದು ಆತ ಆನ್‌ಲೈನ್ ಮೂಲಕ ಸದಸ್ಯನಾಗಿದ್ದಾನೆ ಎಂಬುದನ್ನು ಒಪ್ಪಲು ಸಾಧ್ಯವೇ? ಎಂಬ ಪ್ರಶ್ನೆಗಳು ಕೇಳಿಬಂದಿವೆ.

“ಶ್ರೀ ತಾಲಿಬ್ ಹುಸೇನ್ ಷಾ, ಡ್ರಜ್ ಕೊಟ್ರಂಕಾ, ಬುಧಾನ್, ರಾಜೌರಿ ಜಿಲ್ಲೆ, ಇವರನ್ನು ತಕ್ಷಣವೇ ಜಾರಿಗೆ ಬರುವಂತೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಮ್ಮು ಪ್ರಾಂತ್ಯದ ಹೊಸ ಐಟಿ ಮತ್ತು ಸಾಮಾಜಿಕ ಮಾಧ್ಯಮ ಉಸ್ತುವಾರಿಯಾಗನಿ ನೇಮಿಸಲಾಗಿದೆ” ಎಂದು ಬಿಜೆಪಿ J&K ಅಲ್ಪಸಂಖ್ಯಾತ ಮೋರ್ಚಾ ಮೇ 09 ರಂದು ಆದೇಶ ಹೊರಡಿಸಿತ್ತು. ಈ ಎರಡು ತಿಂಗಳೊಳಗೆ ಆತ ಭಯೋತ್ಪಾದನಾ ಚಟುವಟಿಕೆ ನಡೆಸಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಮಾನವ ಸಂಬಂಧಗಳನ್ನು ದ್ವೇಷದಿಂದ ಕದಡಿ ದೇಶ ಕಟ್ಟಲು ಸಾಧ್ಯವಿಲ್ಲ: ರಹಮತ್ ತರೀಕೆರೆ

ಉಗ್ರರನ್ನು ಹಿಡಿದುಕೊಟ್ಟ ರಿಯಾಸಿ ಜಿಲ್ಲೆಯ ತುಕ್ಸಾನ್‌ನ ಗ್ರಾಮಸ್ಥರ ಧೈರ್ಯವನ್ನು ಶ್ಲಾಘಿಸಿರುವ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮತ್ತು ಪೊಲೀಸ್ ಮುಖ್ಯಸ್ಥರು ರಿಯಾಸಿ ಗ್ರಾಮಸ್ಥರಿಗೆ 2 ಲಕ್ಷ ರೂ ನಗದು ಬಹುಮಾನ ಘೋಷಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಬಿಜೆಪಿಯ ತುಂಡು ಬಿಸ್ಕೆಟ್ ತಿನ್ನುವ ಹಲ್ಕಟ್, ಕಜ್ಜಿ, ಕಂತ್ರಿ ನಾಯಿ ಒಂದು ಯಾವಾಗ್ಲೂ ಒಂದು ಧರ್ಮದ ವಿರುದ್ಧ ಬೊಗಳತಿತ್ತು ಇವಾಗ ಬಂದು ಬೊಗಳೋಕೆ ಯಾವುದಾದರು ಇನ್ನೊಂದು ಕಂತ್ರಿ ನಾಯಿ ತೊಡ್ಡು ಸಿಕ್ಕಿದಿಯಾ ಬಾಯಲ್ಲಿ..? ಅಪ್ಪನಿಗೆ ಹುಟ್ಟಿದವರು ಮಾತ್ರ ಸತ್ಯ ಹೇಳ್ತಾರೆ ಮತ್ತೆ ಬೇರೆಯವರು ಹೇಳುವ ಸತ್ಯವನ್ನು ಒಪ್ಪುತ್ತಾರೆ. ಇಡೀ ಕ್ರಿಕೆಟ್ ತಂಡಕ್ಕೆ ಹುಟ್ಟಿದೋರು ಬರಿ ಬೊಗಳೆ ಬಿಟ್ಕೊಂಡ ದೇಶದ ಸ್ವಾಸ್ತ್ಯ ಹಾಳು ಮಾಡತಾವೆ ### ಮಕ್ಕಳು

  2. ಕೆಲವು ಸಮುದಾಯಕ್ಕೆ ಸೇರಿದವರನ್ನ ಯಾವುದೇ ಹುದ್ದೆಗೆ ನೇಮಿಸಿದರೂ ಆ ಹುದ್ದೆಯಿಂದ ನಿರ್ಗಮಿಸಿದ ನಂತರ ದೇಶ ದ್ರೋಹಿಗಳೇ ಆಗೋದು ಅನ್ನೋದು ಅವರ ಮೂಲದಲ್ಲಿಯೇ ಅಡಗಿದೆ

LEAVE A REPLY

Please enter your comment!
Please enter your name here

- Advertisment -

Must Read

ಎವರೆಸ್ಟ್, ಎಂಡಿಹೆಚ್ ಮಸಾಲೆ ಪದಾರ್ಥಗಳನ್ನು ನಿಷೇಧಿಸಿದ ನೇಪಾಳ

0
ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯು ಎರಡು ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎವರೆಸ್ಟ್ ಮತ್ತು ಎಂಡಿಎಂಹೆಚ್‌ಗಳ ಆಮದು, ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದೆ. ಅಲ್ಲದೆ ಈ ಮಸಾಲೆಗಳಲ್ಲಿನ ಎಥಿಲೀನ್ ಆಕ್ಸೈಡ್...