Homeಅಂಕಣಗಳುಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು

ಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು

- Advertisement -
- Advertisement -

ಗೋವು ತಿಂದು ಗೋವಿನಂತಾದವನು
ನಿಮ್ಮಂತೆ ಮನುಷ್ಯರನ್ನು ಕೊಂದು
ಮನುಷ್ಯನಾಗಲಾರೆ

ಇದು ಕವಿ ಎನ್. ಕೆ. ಹನುಮಂತಯ್ಯನವರ ಕವಿತೆಯೊಂದರ ಸಾಲುಗಳು. ಈ ಸಾಲುಗಳು 2002ರಲ್ಲಿ ಹರ್‍ಯಾಣದ ಜಜ್ಜಾರಿನಲ್ಲಿ ನಡೆದ ದಲಿತರ ಹತ್ಯಾಕಾಂಡಕ್ಕೆ ಪ್ರತಿರೋಧವಾಗಿ ಕಾಣುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಗೋವಿನ ಕಳೇಬರವನ್ನು ವಿಲೇವಾರಿ ಮಾಡುವ ಕಾಯಕವನ್ನು ದಲಿತರಿಗೆ ಒಪ್ಪಿಸಿ ಅಸ್ಪೃಶ್ಯತೆಗೊಂದು ಕಾರಣ ಹುಡುಕಿಕೊಂಡ ಹಿಂದೂ ಮೇಲ್ಜಾತಿಗಳು ಮುಸ್ಲಿಮರನ್ನು ಗುರಿ ಮಾಡಿಕೊಳ್ಳುವ ಮುಂಚೆ ದಲಿತರನ್ನು ಗುರಿಯಾಗಿಸಿಕೊಂಡಿದ್ದರು. ಅಂತಹ ಲಿಂಚಿಂಗ್ ಪ್ರಕರಣಕ್ಕೆ ಉದಾಹರಣೆ ’ಜಜ್ಜಾರ್ ಫೈಲ್’ ಆಗಿದೆ.

ಅದು 2002ನೇ ಇಸವಿಯ ಅಕ್ಟೋಬರ್ 15, ದಸರಾ ನಡೆಯುತ್ತಿದ್ದ ದಿನವದು. ಹರ್‍ಯಾಣದ ಜಜ್ಜಾರ್‌ನಲ್ಲಿಯೂ ಅಂದು ಸಂಜೆ ದಸರಾ ಮೆರವಣಿಗೆಯನ್ನು ಮುಗಿಸಿಕೊಂಡು ಮರಳುತ್ತಿದ್ದ ಒಂದಷ್ಟು ’ವಿಶ್ವ ಹಿಂದೂ ಪರಿಷತ್’ ಕಾರ್ಯಕರ್ತರು ಏಕಾಏಕಿ ಪೊಲೀಸ್ ಠಾಣೆಗೆ ಐವರು ದಲಿತರನ್ನು ಕರೆದುತಂದರು. ಆ ಐವರ ಮೇಲೆ ಅವರು ಹೊರಿಸಿದ ಆರೋಪ, ಜೀವಂತ ದನವನ್ನು ಕೊಂದು ಅದರ ಚರ್ಮವನ್ನು ರಸ್ತೆ ಪಕ್ಕದಲ್ಲಿಯೇ ಸುಲಿಯುತ್ತಿದ್ದರು ಎಂಬುದಾಗಿದೆ. ಹೀಗೆ ಠಾಣೆಗೆ ಕರೆದುಕೊಂಡು ಬಂದ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಗುಂಪು ಆ ಐವರ ಮೇಲೆ ಗೋ ಹತ್ಯಾ ನಿಷೇಧ ಕಾಯ್ದೆಯಡಿ ದೂರು ದಾಖಲಾಗುವಂತೆ ನೋಡಿಕೊಂಡಿದೆ. ಅಲ್ಲಿಂದ ಆ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಿ ಹಿಂದೂ ಸಂಘಟನೆಯವರು ಮನೆಗೆ ಮರಳಿದ್ದರೆ ಇಂದು ಈ ಲೇಖನವನ್ನು ಬರೆಯಬೇಕಾಗಿಯೇ ಬರುತ್ತಿರಲಿಲ್ಲ. ಅದಕ್ಕೆ ಬದಲಾಗಿ ಆ ಐವರು ದಲಿತರನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದುಕೊಂಡು ಬಂದ ಗುಂಪು ಥಳಿಸಿ, ಕ್ರೂರವಾಗಿ ಹಿಂಸಿಸಿ ಕೊಂದುಹಾಕಿತು.

ಆ ಐವರು ದಲಿತ ಯುವಕರಿಗೆ ಇನ್ನೂ 20 ತುಂಬಿರಲಿಲ್ಲ. ವೀರೆಂದರ್, ದಯಾನಂದ್, ತೋಟ ರಾಮ್, ರಾಜು ಮತ್ತು ಕೈಲಾಶ್ ಇವರೇ ಆ ನತದೃಷ್ಟ ದಲಿತ ಯುವಕರು. ಈ ಐವರ ಕೆಲಸ ಕಸಾಯಿ ಖಾನೆಯ ಪ್ರಾಣಿಗಳ ಮೂಳೆಯನ್ನು ಸಂಗ್ರಹಿಸುವುದು ಹಾಗೂ ಸತ್ತ ಪ್ರಾಣಿಗಳ ಚರ್ಮ ಸುಲಿದು ವ್ಯಾಪಾರ ಮಾಡುವುದು. ಈ ಕಾಯಕವನ್ನು ಸೊಹ್ನಾ ಪಂಚಾಯತ್ ಸಮಿತಿ ಹಾಗೂ ಆದರ್ಶ ಗೋಶಾಲೆಯು ಇವರಿಗೆ ಲೈಸೆನ್ಸ್ ನೀಡಿ ನಡೆಸುತ್ತಿತ್ತು. ಈ ಐವರು 35,000 ಹಣ ನೀಡಿ ಲೈಸೆನ್ಸ್ ಪಡೆದಿದ್ದರು. ಈ ಕಾಯಕವನ್ನು ಅವರ ಕುಟುಂಬ ಕಳೆದ 35 ವರ್ಷಗಳಿಂದ ಮಾಡಿಕೊಂಡು ಬರುತ್ತಿತ್ತು.

ಎಲ್ಲರಿಗೂ ತಿಳಿದಿರುವ ಸತ್ಯವೆಂದರೆ, ಸತ್ತ ಗೋವುಗಳ ಚರ್ಮವನ್ನು ದೂರದ ಕಾಡಿನಲ್ಲಿಯೋ ಅಥವಾ ಪ್ರತ್ಯೇಕ ಕೊಠಡಿಗಳಲ್ಲಿಯೋ ಸುಲಿಯುತ್ತಾರೆ ಎಂಬುದು. ಆದರೆ ಅಕ್ಟೋಬರ್ 15ರ ಸಂಜೆ 6 ಗಂಟೆ ಸಮಯದಲ್ಲಿ ವ್ಯಾನ್ ಮೂಲಕ ಚರ್ಮವನ್ನು ಹೊತ್ತೊಯ್ಯುತ್ತಿದ್ದ ದಲಿತರನ್ನು ಅಡ್ಡಗಟ್ಟಿದ ವಿಹೆಚ್‌ಪಿಯವರಿಗೆ ದನದ ಚರ್ಮ ಇರುವುದು ಕಂಡುಬಂದಿದೆ. ಇದೇನು ಹೊಸ ಸುದ್ದಿಯಲ್ಲದಿದ್ದರೂ, ಉನ್ಮಾದದಲ್ಲಿದ್ದ ಗುಂಪಿಗೆ ಗಲಾಟೆ ಮಾಡಲು ಅಥವಾ ಗೋರಕ್ಷಕರಂತೆ ಪೋಸು ಕೊಡಲು ಅದಷ್ಟು ಸಾಕಾಗಿದೆ. ಥಳಿತದಲ್ಲಿ ಒಬ್ಬ ದಲಿತ ಅಲ್ಲಿಯೇ ಅಸುನೀಗಿದ್ದಾನೆ. ಆಗ ಈ ಪ್ರಕರಣಕ್ಕೆ ಗೋವನ್ನು ಕೊಂದು ಬಹಿರಂಗವಾಗಿ ಚರ್ಮ ಸುಲಿಯುತ್ತಿದ್ದವರನ್ನು ಥಳಿಸಲಾಗಿದೆ ಎಂಬ ಬಣ್ಣ ಹಚ್ಚಲಾಗಿದೆ. ನಂತರ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ಪೊಲೀಸರು ಸಹ ಈ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಹಲವು ಪತ್ರಿಕೆಗಳು ಸಾಕ್ಷಿ ಸಮೇತ ಸಾಬೀತುಮಾಡಿವೆ. ಪೊಲೀಸರು, ಬಹುದೊಡ್ಡ ಗುಂಪು ಬಂದು ಆ ಐವರನ್ನು ಎಳೆದೊಯ್ದಿತು; ನಾವು ಏನು ಮಾಡಲಾಗಲಿಲ್ಲ ಎಂದು ಕೋರ್ಟಿನಲ್ಲಿ ಉತ್ತರಿಸಿದ್ದಾರಾದರೂ ಪೊಲೀಸ್ ಸ್ಟೇಷನ್ನಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಬಂದೂಕುಗಳಿರಲಿಲ್ಲವೇ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಅತ್ಯಂತ ನೋವು ತರುವ ಹಾಗೂ ಕಣ್ಣು ಕೆಂಪಗಾಗಿಸುವ ವಿಚಾರವೇನೆಂದರೆ ದಲಿತರನ್ನು ವಿಹೆಚ್‌ಪಿಯವರು ಥಳಿಸುವಾಗ ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸರೊಂದಿಗೆ ಡೆಪ್ಯೂಟಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಹ ಅಲ್ಲಿದ್ದರು! ಅವರೆಲ್ಲರ ಸಮ್ಮುಖದಲ್ಲಿಯೇ ಐವರು ದಲಿತರನ್ನು ಥಳಿಸಿದರು. ಅದೆಷ್ಟರ ಮಟ್ಟಿಗೆ ಥಳಿಸಿದರೆಂದರೆ ನೆಲದ ಮೇಲೆ ಮೆತ್ತಿಕೊಂಡಿದ್ದ ರಕ್ತದ ಕಲೆಗಳು ಮಾಯವಾಗಲು ವಾರಗಳೇ ಬೇಕಾದವಂತೆ. ಇಬ್ಬರ ಕಣ್ಣು ಕಿತ್ತರು. ಇಬ್ಬರ ಮುಖದ ಮೇಲೆ ಪೆಟ್ರೋಲ್ ಸುರಿದು ಸುಡುತ್ತಾ ಕೇಕೆ ಹಾಕಿದರು. ಈ ಹತ್ಯಾಕಾಂಡ ಪೊಲೀಸರ ಸಮ್ಮುಖದಲ್ಲಿಯೇ ನಡೆದಿದ್ದರೂ, ಅವರು ದಲಿತ ಯುವಕರ ಕುಟುಂಬಗಳಿಗೆ ತಿಳಿಸಿದ್ದು ಆಕ್ಸಿಡೆಂಟ್ ಆಗಿದೆ ಎಂದು. ಇಷ್ಟರಲ್ಲಿಯೇ ದಲಿತ ಕುಟುಂಬಗಳಿಗೆ ಅರ್ಥವಾಗಿ ಹೋಯಿತು. ತಮ್ಮ ಮಕ್ಕಳ ಹತ್ಯೆಯಲ್ಲಿ ಪೊಲೀಸರ ಪಾತ್ರವೂ ಸಹ ಇದೆ ಎಂಬುದು. ಇದನ್ನು ಕುಟುಂಬದವರು ಒಪ್ಪದಿದ್ದಾಗ ’ನಿಮ್ಮ ಮಕ್ಕಳನ್ನು ಮುಸ್ಲಿಮರೆಂದು ಭಾವಿಸಿ ಕೊಂದಿದ್ದಾರೆ’ ಎಂಬ ಸಬೂಬನ್ನೂ ನೀಡಿದರು. ಆದರೆ ದಲಿತ ಕುಟುಂಬಗಳು ಅದಕ್ಕೆ ಒಪ್ಪಲಿಲ್ಲ. ’ಮುಸ್ಲಿಮರೂ ನಮ್ಮಂತೆ ಮನುಷ್ಯರಲ್ಲವೇ’ ಎಂದು ಪೊಲೀಸರನ್ನೇ ಪ್ರಶ್ನಿಸಿದವು.

ಇದಾದ ಮಾರನೇ ದಿನ ಅಂದರೆ ಅಕ್ಟೋಬರ್ 16ರಂದು ಜಜ್ಜಾರ್‌ನ ಬೀದಿಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಹಾಗೂ ಭಜರಂಗ ದಳದ ಕಾರ್ಯಕರ್ತರು ದಿಗ್ವಿಜಯದ ಮೆರವಣಿಗೆ ನಡೆಸಿದರು. ಅವರೆಲ್ಲರೂ ಬಹಿರಂಗವಾಗಿಯೇ ಐವರು ದಲಿತ ಯುವಕರ ಕೊಲೆಯನ್ನು ಸಮರ್ಥಿಸಿಕೊಂಡರು. ದೆಹಲಿಯ ವಿಹೆಚ್‌ಪಿಯ ಪ್ರಮುಖ ಮುಖಂಡ ಆಚಾರ್ಯ ಗಿರಿರಾಜ್ ಕಿಶೋರ್ ’ನಮಗೆ ದಲಿತರ ಜೀವಕ್ಕಿಂತ ಗೋವಿನ ಜೀವ ದೊಡ್ಡದು’ ಎಂದು ಬಹಿರಂಗವಾಗಿ ಹೇಳಿದ.

ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಯಿತು. ಆದರೆ ಅದರಿಂದ ಹೆಚ್ಚೇನು ಪ್ರಯೋಜನವಾಗಲಿಲ್ಲ. ಪೊಲೀಸರು ದೊಂಬಿ ಪ್ರಕರಣ ದಾಖಲಿಸಿಕೊಂಡರು. ಕೋರ್ಟುಗಳಿಗೆ ಸಾಕ್ಷಿ ಬೇಕು. ಆರೋಪಿಗಳು ಬೇಕು. ಆದರೆ ಪೊಲೀಸರೇ ದೊಂಬಿ ಎಂದ ಮೇಲೆ ಆರೋಪಿಗಳನ್ನು ಹಿಡಿದು ಕೊಡುವವರಾರು?


ಇದನ್ನೂ ಓದಿ: ಮಾತು ಮರೆತ ಭಾರತ; ರೋಹಿತ್ ವೇಮುಲ ಫೈಲ್: ದಲಿತ ವಿದ್ಯಾರ್ಥಿಯನ್ನು ಬಲಿ ಪಡೆದ ಪ್ರಭುತ್ವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...