Homeಅಂಕಣಗಳುಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು

ಮಾತು ಮರೆತ ಭಾರತ; ಜಜ್ಜಾರ್ ಫೈಲ್: ದಲಿತರಿಗಿಂತ ಗೋವಿನ ಜೀವ ದೊಡ್ಡದು

- Advertisement -
- Advertisement -

ಗೋವು ತಿಂದು ಗೋವಿನಂತಾದವನು
ನಿಮ್ಮಂತೆ ಮನುಷ್ಯರನ್ನು ಕೊಂದು
ಮನುಷ್ಯನಾಗಲಾರೆ

ಇದು ಕವಿ ಎನ್. ಕೆ. ಹನುಮಂತಯ್ಯನವರ ಕವಿತೆಯೊಂದರ ಸಾಲುಗಳು. ಈ ಸಾಲುಗಳು 2002ರಲ್ಲಿ ಹರ್‍ಯಾಣದ ಜಜ್ಜಾರಿನಲ್ಲಿ ನಡೆದ ದಲಿತರ ಹತ್ಯಾಕಾಂಡಕ್ಕೆ ಪ್ರತಿರೋಧವಾಗಿ ಕಾಣುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಗೋವಿನ ಕಳೇಬರವನ್ನು ವಿಲೇವಾರಿ ಮಾಡುವ ಕಾಯಕವನ್ನು ದಲಿತರಿಗೆ ಒಪ್ಪಿಸಿ ಅಸ್ಪೃಶ್ಯತೆಗೊಂದು ಕಾರಣ ಹುಡುಕಿಕೊಂಡ ಹಿಂದೂ ಮೇಲ್ಜಾತಿಗಳು ಮುಸ್ಲಿಮರನ್ನು ಗುರಿ ಮಾಡಿಕೊಳ್ಳುವ ಮುಂಚೆ ದಲಿತರನ್ನು ಗುರಿಯಾಗಿಸಿಕೊಂಡಿದ್ದರು. ಅಂತಹ ಲಿಂಚಿಂಗ್ ಪ್ರಕರಣಕ್ಕೆ ಉದಾಹರಣೆ ’ಜಜ್ಜಾರ್ ಫೈಲ್’ ಆಗಿದೆ.

ಅದು 2002ನೇ ಇಸವಿಯ ಅಕ್ಟೋಬರ್ 15, ದಸರಾ ನಡೆಯುತ್ತಿದ್ದ ದಿನವದು. ಹರ್‍ಯಾಣದ ಜಜ್ಜಾರ್‌ನಲ್ಲಿಯೂ ಅಂದು ಸಂಜೆ ದಸರಾ ಮೆರವಣಿಗೆಯನ್ನು ಮುಗಿಸಿಕೊಂಡು ಮರಳುತ್ತಿದ್ದ ಒಂದಷ್ಟು ’ವಿಶ್ವ ಹಿಂದೂ ಪರಿಷತ್’ ಕಾರ್ಯಕರ್ತರು ಏಕಾಏಕಿ ಪೊಲೀಸ್ ಠಾಣೆಗೆ ಐವರು ದಲಿತರನ್ನು ಕರೆದುತಂದರು. ಆ ಐವರ ಮೇಲೆ ಅವರು ಹೊರಿಸಿದ ಆರೋಪ, ಜೀವಂತ ದನವನ್ನು ಕೊಂದು ಅದರ ಚರ್ಮವನ್ನು ರಸ್ತೆ ಪಕ್ಕದಲ್ಲಿಯೇ ಸುಲಿಯುತ್ತಿದ್ದರು ಎಂಬುದಾಗಿದೆ. ಹೀಗೆ ಠಾಣೆಗೆ ಕರೆದುಕೊಂಡು ಬಂದ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಗುಂಪು ಆ ಐವರ ಮೇಲೆ ಗೋ ಹತ್ಯಾ ನಿಷೇಧ ಕಾಯ್ದೆಯಡಿ ದೂರು ದಾಖಲಾಗುವಂತೆ ನೋಡಿಕೊಂಡಿದೆ. ಅಲ್ಲಿಂದ ಆ ಪ್ರಕರಣವನ್ನು ಪೊಲೀಸರಿಗೆ ಒಪ್ಪಿಸಿ ಹಿಂದೂ ಸಂಘಟನೆಯವರು ಮನೆಗೆ ಮರಳಿದ್ದರೆ ಇಂದು ಈ ಲೇಖನವನ್ನು ಬರೆಯಬೇಕಾಗಿಯೇ ಬರುತ್ತಿರಲಿಲ್ಲ. ಅದಕ್ಕೆ ಬದಲಾಗಿ ಆ ಐವರು ದಲಿತರನ್ನು ಪೊಲೀಸ್ ಠಾಣೆಯಿಂದ ಹೊರಗೆ ಎಳೆದುಕೊಂಡು ಬಂದ ಗುಂಪು ಥಳಿಸಿ, ಕ್ರೂರವಾಗಿ ಹಿಂಸಿಸಿ ಕೊಂದುಹಾಕಿತು.

ಆ ಐವರು ದಲಿತ ಯುವಕರಿಗೆ ಇನ್ನೂ 20 ತುಂಬಿರಲಿಲ್ಲ. ವೀರೆಂದರ್, ದಯಾನಂದ್, ತೋಟ ರಾಮ್, ರಾಜು ಮತ್ತು ಕೈಲಾಶ್ ಇವರೇ ಆ ನತದೃಷ್ಟ ದಲಿತ ಯುವಕರು. ಈ ಐವರ ಕೆಲಸ ಕಸಾಯಿ ಖಾನೆಯ ಪ್ರಾಣಿಗಳ ಮೂಳೆಯನ್ನು ಸಂಗ್ರಹಿಸುವುದು ಹಾಗೂ ಸತ್ತ ಪ್ರಾಣಿಗಳ ಚರ್ಮ ಸುಲಿದು ವ್ಯಾಪಾರ ಮಾಡುವುದು. ಈ ಕಾಯಕವನ್ನು ಸೊಹ್ನಾ ಪಂಚಾಯತ್ ಸಮಿತಿ ಹಾಗೂ ಆದರ್ಶ ಗೋಶಾಲೆಯು ಇವರಿಗೆ ಲೈಸೆನ್ಸ್ ನೀಡಿ ನಡೆಸುತ್ತಿತ್ತು. ಈ ಐವರು 35,000 ಹಣ ನೀಡಿ ಲೈಸೆನ್ಸ್ ಪಡೆದಿದ್ದರು. ಈ ಕಾಯಕವನ್ನು ಅವರ ಕುಟುಂಬ ಕಳೆದ 35 ವರ್ಷಗಳಿಂದ ಮಾಡಿಕೊಂಡು ಬರುತ್ತಿತ್ತು.

ಎಲ್ಲರಿಗೂ ತಿಳಿದಿರುವ ಸತ್ಯವೆಂದರೆ, ಸತ್ತ ಗೋವುಗಳ ಚರ್ಮವನ್ನು ದೂರದ ಕಾಡಿನಲ್ಲಿಯೋ ಅಥವಾ ಪ್ರತ್ಯೇಕ ಕೊಠಡಿಗಳಲ್ಲಿಯೋ ಸುಲಿಯುತ್ತಾರೆ ಎಂಬುದು. ಆದರೆ ಅಕ್ಟೋಬರ್ 15ರ ಸಂಜೆ 6 ಗಂಟೆ ಸಮಯದಲ್ಲಿ ವ್ಯಾನ್ ಮೂಲಕ ಚರ್ಮವನ್ನು ಹೊತ್ತೊಯ್ಯುತ್ತಿದ್ದ ದಲಿತರನ್ನು ಅಡ್ಡಗಟ್ಟಿದ ವಿಹೆಚ್‌ಪಿಯವರಿಗೆ ದನದ ಚರ್ಮ ಇರುವುದು ಕಂಡುಬಂದಿದೆ. ಇದೇನು ಹೊಸ ಸುದ್ದಿಯಲ್ಲದಿದ್ದರೂ, ಉನ್ಮಾದದಲ್ಲಿದ್ದ ಗುಂಪಿಗೆ ಗಲಾಟೆ ಮಾಡಲು ಅಥವಾ ಗೋರಕ್ಷಕರಂತೆ ಪೋಸು ಕೊಡಲು ಅದಷ್ಟು ಸಾಕಾಗಿದೆ. ಥಳಿತದಲ್ಲಿ ಒಬ್ಬ ದಲಿತ ಅಲ್ಲಿಯೇ ಅಸುನೀಗಿದ್ದಾನೆ. ಆಗ ಈ ಪ್ರಕರಣಕ್ಕೆ ಗೋವನ್ನು ಕೊಂದು ಬಹಿರಂಗವಾಗಿ ಚರ್ಮ ಸುಲಿಯುತ್ತಿದ್ದವರನ್ನು ಥಳಿಸಲಾಗಿದೆ ಎಂಬ ಬಣ್ಣ ಹಚ್ಚಲಾಗಿದೆ. ನಂತರ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ಪೊಲೀಸರು ಸಹ ಈ ಕೃತ್ಯಕ್ಕೆ ಸಹಕಾರ ನೀಡಿದ್ದಾರೆ ಎಂದು ಹಲವು ಪತ್ರಿಕೆಗಳು ಸಾಕ್ಷಿ ಸಮೇತ ಸಾಬೀತುಮಾಡಿವೆ. ಪೊಲೀಸರು, ಬಹುದೊಡ್ಡ ಗುಂಪು ಬಂದು ಆ ಐವರನ್ನು ಎಳೆದೊಯ್ದಿತು; ನಾವು ಏನು ಮಾಡಲಾಗಲಿಲ್ಲ ಎಂದು ಕೋರ್ಟಿನಲ್ಲಿ ಉತ್ತರಿಸಿದ್ದಾರಾದರೂ ಪೊಲೀಸ್ ಸ್ಟೇಷನ್ನಿನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ಬಂದೂಕುಗಳಿರಲಿಲ್ಲವೇ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಅತ್ಯಂತ ನೋವು ತರುವ ಹಾಗೂ ಕಣ್ಣು ಕೆಂಪಗಾಗಿಸುವ ವಿಚಾರವೇನೆಂದರೆ ದಲಿತರನ್ನು ವಿಹೆಚ್‌ಪಿಯವರು ಥಳಿಸುವಾಗ ಸ್ಥಳದಲ್ಲಿ 50ಕ್ಕೂ ಹೆಚ್ಚು ಪೊಲೀಸರೊಂದಿಗೆ ಡೆಪ್ಯೂಟಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಹ ಅಲ್ಲಿದ್ದರು! ಅವರೆಲ್ಲರ ಸಮ್ಮುಖದಲ್ಲಿಯೇ ಐವರು ದಲಿತರನ್ನು ಥಳಿಸಿದರು. ಅದೆಷ್ಟರ ಮಟ್ಟಿಗೆ ಥಳಿಸಿದರೆಂದರೆ ನೆಲದ ಮೇಲೆ ಮೆತ್ತಿಕೊಂಡಿದ್ದ ರಕ್ತದ ಕಲೆಗಳು ಮಾಯವಾಗಲು ವಾರಗಳೇ ಬೇಕಾದವಂತೆ. ಇಬ್ಬರ ಕಣ್ಣು ಕಿತ್ತರು. ಇಬ್ಬರ ಮುಖದ ಮೇಲೆ ಪೆಟ್ರೋಲ್ ಸುರಿದು ಸುಡುತ್ತಾ ಕೇಕೆ ಹಾಕಿದರು. ಈ ಹತ್ಯಾಕಾಂಡ ಪೊಲೀಸರ ಸಮ್ಮುಖದಲ್ಲಿಯೇ ನಡೆದಿದ್ದರೂ, ಅವರು ದಲಿತ ಯುವಕರ ಕುಟುಂಬಗಳಿಗೆ ತಿಳಿಸಿದ್ದು ಆಕ್ಸಿಡೆಂಟ್ ಆಗಿದೆ ಎಂದು. ಇಷ್ಟರಲ್ಲಿಯೇ ದಲಿತ ಕುಟುಂಬಗಳಿಗೆ ಅರ್ಥವಾಗಿ ಹೋಯಿತು. ತಮ್ಮ ಮಕ್ಕಳ ಹತ್ಯೆಯಲ್ಲಿ ಪೊಲೀಸರ ಪಾತ್ರವೂ ಸಹ ಇದೆ ಎಂಬುದು. ಇದನ್ನು ಕುಟುಂಬದವರು ಒಪ್ಪದಿದ್ದಾಗ ’ನಿಮ್ಮ ಮಕ್ಕಳನ್ನು ಮುಸ್ಲಿಮರೆಂದು ಭಾವಿಸಿ ಕೊಂದಿದ್ದಾರೆ’ ಎಂಬ ಸಬೂಬನ್ನೂ ನೀಡಿದರು. ಆದರೆ ದಲಿತ ಕುಟುಂಬಗಳು ಅದಕ್ಕೆ ಒಪ್ಪಲಿಲ್ಲ. ’ಮುಸ್ಲಿಮರೂ ನಮ್ಮಂತೆ ಮನುಷ್ಯರಲ್ಲವೇ’ ಎಂದು ಪೊಲೀಸರನ್ನೇ ಪ್ರಶ್ನಿಸಿದವು.

ಇದಾದ ಮಾರನೇ ದಿನ ಅಂದರೆ ಅಕ್ಟೋಬರ್ 16ರಂದು ಜಜ್ಜಾರ್‌ನ ಬೀದಿಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಹಾಗೂ ಭಜರಂಗ ದಳದ ಕಾರ್ಯಕರ್ತರು ದಿಗ್ವಿಜಯದ ಮೆರವಣಿಗೆ ನಡೆಸಿದರು. ಅವರೆಲ್ಲರೂ ಬಹಿರಂಗವಾಗಿಯೇ ಐವರು ದಲಿತ ಯುವಕರ ಕೊಲೆಯನ್ನು ಸಮರ್ಥಿಸಿಕೊಂಡರು. ದೆಹಲಿಯ ವಿಹೆಚ್‌ಪಿಯ ಪ್ರಮುಖ ಮುಖಂಡ ಆಚಾರ್ಯ ಗಿರಿರಾಜ್ ಕಿಶೋರ್ ’ನಮಗೆ ದಲಿತರ ಜೀವಕ್ಕಿಂತ ಗೋವಿನ ಜೀವ ದೊಡ್ಡದು’ ಎಂದು ಬಹಿರಂಗವಾಗಿ ಹೇಳಿದ.

ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಯಿತು. ಆದರೆ ಅದರಿಂದ ಹೆಚ್ಚೇನು ಪ್ರಯೋಜನವಾಗಲಿಲ್ಲ. ಪೊಲೀಸರು ದೊಂಬಿ ಪ್ರಕರಣ ದಾಖಲಿಸಿಕೊಂಡರು. ಕೋರ್ಟುಗಳಿಗೆ ಸಾಕ್ಷಿ ಬೇಕು. ಆರೋಪಿಗಳು ಬೇಕು. ಆದರೆ ಪೊಲೀಸರೇ ದೊಂಬಿ ಎಂದ ಮೇಲೆ ಆರೋಪಿಗಳನ್ನು ಹಿಡಿದು ಕೊಡುವವರಾರು?


ಇದನ್ನೂ ಓದಿ: ಮಾತು ಮರೆತ ಭಾರತ; ರೋಹಿತ್ ವೇಮುಲ ಫೈಲ್: ದಲಿತ ವಿದ್ಯಾರ್ಥಿಯನ್ನು ಬಲಿ ಪಡೆದ ಪ್ರಭುತ್ವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...