Homeಕರ್ನಾಟಕಅಪ್ಪ ಎಂಬ ಆಕಾಶ ಮತ್ತು ಭೂಮಿ: ಸುಧೀಂದ್ರ ಹಾಲ್ದೊಡ್ಡೇರಿ ಬಗ್ಗೆ ಮಗಳ ಮನತುಂಬಿದ ಮಾತುಗಳು...

ಅಪ್ಪ ಎಂಬ ಆಕಾಶ ಮತ್ತು ಭೂಮಿ: ಸುಧೀಂದ್ರ ಹಾಲ್ದೊಡ್ಡೇರಿ ಬಗ್ಗೆ ಮಗಳ ಮನತುಂಬಿದ ಮಾತುಗಳು…

- Advertisement -
- Advertisement -

ಖ್ಯಾತ ವಿಜ್ಞಾನ ಬರಹಗಾರ, ಡಿಆರ್‌ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರು ಇಂದು ನಿಧನರಾಗಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಅವರ ಮಗಳು, ಲೇಖಕಿ ಮೇಘನಾ ಸುಧೀಂದ್ರ ಅವರು ಅಪ್ಪಂದಿರ ದಿನದಂದು ತಮ್ಮ ಅಪ್ಪನ ಬಗ್ಗೆ ಬರೆದ ಬರಹವನ್ನು ಅವರ ನೆನಪಿನಲ್ಲಿ ಇಂದು ಪ್ರಕಟಿಸುತ್ತಿದ್ದೆವೆ.

’ಅಪ್ಪ ಎಂದಾಗಲ್ಲೆಲ್ಲ ನನಗೆ ಎರಡು ಇಂಸಿಡೆಂಟ್ ನೆನಪಾಗುತ್ತದೆ. ನನ್ನ ಪೂರ್ತಿ ಹೆಸರಿನ ಅರ್ಧ ಭಾಗ ಅಪ್ಪನೇ ತುಂಬಿಕೊಂಡಿದ್ದಾರೆ. ಅರ್ಧ ಜನ ನನ್ನನ್ನು “ಸುಧೀಂದ್ರನ ಮಗಳು” ಎಂದು ಗುರುತಿಸಿ ನನ್ನ ಹೆಸರನ್ನೇ ಮರೆಯುವಷ್ಟು ಅಪ್ಪನ್ನನ್ನು ಪ್ರೀತಿಸುವವರಿದ್ದಾರೆ’.
ಘಟನೆ 1
ಒಮ್ಮೆ ಅಪ್ಪ ಕೆಲಸದ ಮೇಲೆ ರಷ್ಯಾದ ಮಾಸ್ಕೋಗೆ ಹೋಗಿದ್ದರು. ಎಂದಿನಂತೆ ಅಪ್ಪನಿಗೆ ದಿನಾ ಫೋನ್ ಮಾಡಿ, “ಯಾವಾಗ ಬರ್ತ್ಯಾ ಅಪ್ಪ, ಯಾವಾಗ ಬರ್ತ್ಯಾ ಅಪ್ಪ” ಎಂದು ಕೇಳಿ ಕೇಳಿ ಸುಸ್ತು ಮಾಡಿದ್ದೆ. ಅಪ್ಪ “ಒಂದು ವಾರ ಬಿಟ್ಟು, 2 ವಾರ ಬಿಟ್ಟು” ಎಂದು ಅನ್ನುತ್ತಿದ್ದರು. ಇನ್ನು ಮಾಸ್ಕೋದಿಂದ ಹೊರಡುವ ದಿನ ಬಂತು, “ಏನು ಬೇಕು ಮಗಳೇ?” ಎಂದು ಕೇಳಿದ್ದರು, “ಸೂಟ್ ಕೇಸ್ ತುಂಬ ಚಾಕ್ಲೇಟ್ ಬೇಕಪ್ಪ” ಎಂದು ಅಂದಿದ್ದೆ. ಅದನ್ನೆಲ್ಲಾ ಹೇಳಿ ಮರೆತೂ ಹೋಗಿದ್ದೆ.

ಸರಿ ಅಪ್ಪ ಮನೆಗೆ ಬಂದರು, ನಾನು ಸ್ಕೂಲಿಗೆ ಹೋಗಿದ್ದೆ, ಸಂಜೆ ಬಂದರೆ ಒಂದು ರೂಮಿನಲ್ಲಿ ದೊಡ್ಡ ಸೂಟ್ ಕೇಸ್ ಇಟ್ಟಿದ್ದರು. ತೆಗೆದರೆ ನಿಜವಾಗಿಯೂ ಅದರ ಪೂರ್ತಿ ಚಾಕ್ಲೇಟ್ ಇತ್ತು. ಒಂದು 35 ಕೆಜಿಯ ಸೂಟ್ಕೇಸಿನ ತುಂಬಾ ಚಾಕ್ಲೇಟ್ ತಂದಿದ್ದರು ಅಪ್ಪ. ಅವರನ್ನ ಕಸ್ಟಮ್ಸಿನಲ್ಲಿ ಹಿಡಿದ್ದಿದ್ದರೂ ಸಹ. ವೈಟ್ ಪಾಸ್‌ಪೋರ್ಟ್ ಮತ್ತು ಮಗಳಿಗೆ ಚಾಕ್ಲೇಟ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂಬ ಸಬೂಬಿನೊಂದಿಗೆ ಬಿಟ್ಟಿದ್ದರಂತೆ. ಒಂದು ಸೂಟ್ಕೇಸಿನ ಬಟ್ಟೆಯನ್ನೆಲ್ಲಾ ಬಿಟ್ಟು, ಮಗಳಿಗೆ ಚಾಕ್ಲೇಟ್ ತಂದಿದ್ದರು ಅಪ್ಪ. ನಾನು ಸುಮ್ಮನೆ ಹೇಳುವ ಮಾತನ್ನ ನಿಜ ಮಾಡೋದು ಅಪ್ಪ ಮಾತ್ರ.

ಘಟನೆ 2
ನಾನು ಸೆಕೆಂಡ್ ಪಿಯೂಸಿಯಲ್ಲಿ ಓದೋದು ಬಿಟ್ಟು ಆರಾಮಾಗಿ ಸಂಗೀತ, ನಾಟಕ ಅಂದುಕೊಂಡಿದ್ದೆ. ಹೋಗಲಿ ಅದರಲ್ಲೂ ಏನು ಅಂತಹ ಸಾಧನೆ ಮಾಡಿರಲ್ಲಿಲ್ಲ. ಸುಮ್ಮನೆ ಕ್ಲಾಸ್ ಚಕ್ಕರ್ ಹಾಕೋಕೆ ಒಂದು ನೆಪ ಅಷ್ಟೆ. ಎಸ್ಸೆಸೆಲ್ಸಿಯಲ್ಲಿ ವಿಪರೀತ ಮಾರ್ಕ್ಸ್ ತೆಗೆದುಕೊಂಡ ಓವರ್ ಕಾನ್ಫೆಡೆನ್ಸ್ ನನ್ನಲ್ಲಿತ್ತು. “ಬರತ್ತೆ ಬಿಡು ಮಾರ್ಕ್ಸ್” ಅನ್ನೋ ಕೊಬ್ಬು. ಅಪ್ಪ ಒಂದೆರೆಡು ಬಾರಿ ಮೆತ್ತಗೆ ಹೇಳಿದ್ದರು, “ಹತ್ತನೇ ಕ್ಲಾಸಿನ ಹಾಗಲ್ಲ ಇದು, ಸರಿಯಾಗಿ ಓದು, ಇದು ನಿನ್ನ ಜೀವನದ ಟರ್ನಿಂಗ್ ಪಾಯಿಂಟ್” ಎಂದು. ನಾನು ಆರಾಮಾಗಿಯೇ ಇದ್ದೆ. ಎಕ್ಸಾಮು ಬರೆದೆ. ಅತೀ ಸಾಧಾರಣ ಮಾರ್ಕ್ಸು, ಅತೀ ಸಾಧಾರಣ ಸಿಇಟಿ ರ್ಯಾಂಕು ಬಂತು. ಅಪ್ಪನಿಗೆ ಇದ್ದ ಕನೆಕ್ಷನ್ಸು, ದುಡ್ಡು ಇವೆಲ್ಲವೂ ನನ್ನನ್ನ ಕಾಪಾಡುತ್ತದೆ ಎಂಬ ಕೆಟ್ಟ ಕಾನ್ಫಿಡೆನ್ಸು ನನ್ನಲ್ಲಿತ್ತು. ಅಪ್ಪ ರಿಸೆಲ್ಟ್ ನೋಡಿ ಒಂದೇ ಮಾತು ಹೇಳಿದರು, “ನಿನ್ನ ಯೋಗ್ಯತೆಗೆ ಎಲ್ಲಿ ಸೀಟು ಸಿಗತ್ತೋ ಅಲ್ಲಿ ಸೇರ್ಕೊಂಡು ಇಂಜಿನಿಯರಿಂಗ್ ಮುಗಿಸು, ಗುಡ್ ಲಕ್” ಅಂದರು. “ನೆನೆಪಿರಲಿ ನೀನು ಎಷ್ಟೇ ಮಾರ್ಕ್ಸ್ ತೆಗೆದರೂ ನನ್ನ ಮಗಳೇ ಅದೇನು ಬದಲಾಗಲ್ಲ” ಎಂದು ಸಾಂತ್ವನ ಹೇಳಿ ಹೋದರು.

ನಾನು ಊರಾಚೆ ಕಾಲೇಜಿಗೆ ಸೇರಿದೆ. ದಿನಾ ಬೆಳಗ್ಗೆ 6 ಘಂಟೆಗೆ ಹೊರಟರೆ ಸಂಜೆ 6 ಘಂಟೆಗೆ ಬರುತ್ತಿದ್ದೆ. 1 ವರ್ಷ ಆಟಾಡಿದ್ದಕ್ಕೆ 4 ವರ್ಷ ಒದ್ದಾಡಿದೆ. ಅಪ್ಪ ಸುಮ್ಮನೆ ಮುಗುಳ್ನಗುತ್ತಿದ್ದರು. ಇಂಜಿನಿಯರಿಂಗ್ ಮುಗಿಸಿದ ನಂತರ, “ನೀನು ಯಾರ ಶಿಫಾರಸ್ಸಿನಲ್ಲೋ, ಯಾರ ದುಡ್ಡಲ್ಲೋ ಓದಲ್ಲಿಲ್ಲ ನಿನ್ನ ಯೋಗ್ಯತೆಗೆ ತಕ್ಕ ಹಾಗೆ ಓದಿದೆ, ಯಾವತ್ತೂ ಅಷ್ಟೇ ನೀನು ಕಷ್ಟ ಪಟ್ಟು ನೀನು ದಕ್ಕಿಸಿಕೊಂಡಿದ್ದೇ ನಿನ್ನ ಬಳಿ ಶಾಶ್ವತವಾಗಿ ಉಳಿಯೋದು, ಅಪ್ಪ ಅಮ್ಮ ಫ್ರೀಯಾಗಿ ಕೊಟ್ಟಿದ್ದೂ ಉಳಿಯಲ್ಲ” ಎಂಬ ಅತಿ ದೊಡ್ಡ ಜೀವನದ ಪಾಠವನ್ನು ಹೇಳಿಕೊಟ್ಟರು.

ಇದಾದ ನಂತರ ನಾನು ಯಾವತ್ತೂ ಯಾವುದನ್ನೂ ಲೈಟಾಗಿ ತೆಗೆದುಕೊಳ್ಳಲ್ಲಿಲ್ಲ. ತಲೆ ಬಗ್ಗಿಸಿ ಕೆಲಸ ಮಾಡಿಕೊಂಡು ಹೋಗಿದ್ದೇನೆ. ಅದು ವಿದೇಶದಲ್ಲಿ ಮಾಸ್ಟರ್ಸ್ ಇರಬಹುದು, ಅಥವಾ ಕೆಲಸ ಇರಬಹುದು ಅಥವಾ ಪುಸ್ತಕ-ಲೇಖನ ಬರೆಯೋದಿರಬಹುದು.

ಪ್ರೀತಿ ಮಾಡುತ್ತಲೇ ಅಸಂಖ್ಯಾತ ಜೀವನ ಪಾಠ ಕಲಿಸುತ್ತಿರುವ ಅಪ್ಪನಿಗೆ ಅಪ್ಪನ ದಿನದ ಶುಭಾಶಯಗಳು. ನೀನೆ ನನಗೆ ಸ್ಪೂರ್ತಿ ಅಪ್ಪ. ನನ್ನ ಮೂರನೆಯ ಪುಸ್ತಕವನ್ನ( #AI ಕಥೆಗಳು) ನಿನಗೇ ಅರ್ಪಣೆ ಮಾಡಿದ್ದೇನೆ.

  • ಮೇಘನಾ ಸುಧೀಂದ್ರ

ಇದನ್ನೂ ಓದಿ: ಖ್ಯಾತ ವಿಜ್ಞಾನ ಬರಹಗಾರ, DRDO ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ (61) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...