Homeಕರ್ನಾಟಕಅಡ್ಡಂಡ ಕಾರ್ಯಪ್ಪ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧಾರ; ವಜಾಕ್ಕೆ ಮತ್ತೆ ಆಗ್ರಹ

ಅಡ್ಡಂಡ ಕಾರ್ಯಪ್ಪ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧಾರ; ವಜಾಕ್ಕೆ ಮತ್ತೆ ಆಗ್ರಹ

ರಂಗಾಯಣ ನಿರ್ದೇಶಕರ ನಡೆಗೆ ಮಾಜಿ ನಿರ್ದೇಶಕರು ಮತ್ತು ಚಿಂತಕರು ಕಿಡಿ ಕಾರಿದ್ದಾರೆ

- Advertisement -
- Advertisement -

ರಂಗಾಯಣ ವಿವಾದ ಮತ್ತೆ ಬುಗಿಲೆದ್ದಿದ್ದು, ಭಾನುವಾರ ನಡೆದ ಆನ್‌ಲೈನ್ ಚಿಂತನಾ ಕಾರ್ಯಕ್ರಮದಲ್ಲಿ ರಂಗಾಯಣದ ಮಾಜಿ ನಿರ್ದೇಶಕರುಗಳು ಮತ್ತು ಚಿಂತಕರುಗಳು ರಂಗಾಯಣದ ಹಾಲಿ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರ ವಿರುದ್ಧ ಕಿಡಿಕಾರಿದ್ದಾರೆ. ಅವರ ವಿರುದ್ದ ಮಾನನಷ್ಟ ಮೊಕದ್ದಮೆಗೆ ನಿರ್ಧಾರ ಮಾಡಿರುವುದಾಗಿ ಹಿರಿಯ ರಂಗಕರ್ಮಿ, ರಂಗಾಯಣದ ಮಾಜಿ ನಿರ್ದೇಶಕರೂ ಆಗಿರುವ ಸಿ.ಬಸವಲಿಂಗಯ್ಯ ಹೇಳಿದ್ದಾರೆ.

‘ಸಮುದಾಯ ಕರ್ನಾಟಕ ರಾಜ್ಯ ಸಮಿತಿ’ ಮತ್ತು ಸಮಾನ ಆಸಕ್ತ ಸಂಘಟನೆಗಳು ಭಾನುವಾರ ನಡೆಸಿದ ‘ರಂಗಾಯಣ ಉಳಿಸಿ’ ಆನ್‌ಲೈನ್ ಪ್ರತಿರೋಧ ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕರನ್ನು ವಜಾಗೊಳಿಸಲು ಮತ್ತೆ ಆಗ್ರಹಿಸಲಾಯಿತು. ಬಹುತ್ವ ಸಂಸ್ಕೃತಿಗೆ ಧಕ್ಕೆಯಾಗಬಾರದು, ಹಾಗಾಗಿ ನಮಗೆ ಯಾವುದೇ ಪಟ್ಟ ಕಟ್ಟಿದರೂ ಹೋರಾಟದಿಂದ ಹಿಂಜರಿಯುವುದಿಲ್ಲ ಎಂದು ಗುಡುಗಿದ್ದಾರೆ.

ಇದನ್ನೂ ಓದಿ:ರಂಗಾಯಣದ ಗೌರವ ಹಾಳುಮಾಡದಿರಿ: ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಚಿಂತಕರ ಆಗ್ರಹ

ಈ ವೇಳೆ ರಂಗಾಯಣ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ಮಾತನಾಡಿ, ರಂಗಾಯಣದಲ್ಲಿ ರಾಜಕೀಯ ಅಜೆಂಡಾ ಶುರುವಾಗಿದೆ. ಧನಿ ಎತ್ತಬೇಕಾದ ಕಲಾವಿದರೂ ಮೌನ ವಹಿಸಿದ್ದಾರೆ. ಸಂಘ ಪರಿವಾರದ ಚಿಂತನೆ ಯುವ ಸಮೂಹದ ದಿಕ್ಕು ತಪ್ಪಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ರಂಗಾಯಣದಲ್ಲಿ ಪ್ರಸನ್ನ ಅವರು ಬಹುರೂಪಿ ಉತ್ಸವ ಜಾರಿಗೆ ತಂದರು. ನನ್ನ ಅವಧಿಯಲ್ಲಿ ಚಿಣ್ಣರ ಮೇಳ ಶುರುವಾಯಿತು. ಹೀಗೆ ಪ್ರತಿ ನಿರ್ದೇಶಕರೂ ಒಂದೊಂದು ಹೊಸ ಯೋಜನೆ ತಂದಿದ್ದಾರೆ. ಜನಮೆಚ್ಚುಗೆ ಪಡೆದ ಯೋಜನೆಗಳು ಉಳಿದುಕೊಂಡಿವೆ. ಕಾರ್ಯಪ್ಪ ಅವರೂ ಹೊಸ ಯೋಜನೆ ತರಲಿ. ಅವರ ಆರ್‌ಎಸ್‌ಎಸ್ ಸಂಸ್ಕೃತಿಯದ್ದೇ ನಾಟಕ ಮಾಡಿ ಪ್ರದರ್ಶಿಸಲಿ. ನಮ್ಮನ್ನು ಮಾವೋವಾದಿಗಳು ಎನ್ನುವವರು ನಮ್ಮ ಯೋಜನೆಗಳನ್ನೇಕೆ ಮುಂದುವರಿಸಬೇಕು” ಎಂದು ಬಸವಲಿಂಗಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಪ್ಪ ರಾಜಕೀಯ ಆಕಾಂಕ್ಷಿ:

ರಂಗಕರ್ಮಿ ಮತ್ತು ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ) ಮಾತನಾಡಿ, “ಕಾರ್ಯಪ್ಪ ಅವರು ಮೂಲ ರಾಜಕೀಯ ಆಕಾಂಕ್ಷಿ. ಜನವಿರೋಧಿ ನೀತಿಗಳ ಮೂಲಕ ರಂಗಾಯಣ ನೀತಿಗೆ ವಿರೋಧವಾಗಿ ಮಾತನಾಡುವುದು, ರಾಜಕೀಯ ಬೆರಸುವುದು, ‘ಕೋಮುವಾದ ಪಡೆಯಿಂದ ಬಂದಿದೇನೆ ಏನು ಬೇಕಾದರೂ ಮಾಡಿಕೊಳ್ಳಿ’ ಎನ್ನುವ ಅಪ್ರಬುದ್ಧ ಹೇಳಿಕೆಗಳನ್ನು ಬಳಸುತ್ತಿರುವುದು ರಂಗಾಯಣದ ಇತಿಹಾಸಲ್ಲಿ ಇದೇ ಮೊದಲು. ಇಂಥವರ ವಿರುದ್ಧ ಕ್ರಮ ಆಗಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ರಂಗಾಯಣ ನಿರ್ದೇಶಕರ ವಜಾಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಬಹುರೂಪಿ ಬಹಿಷ್ಕರಿಸಲು ನಿರ್ಧಾರ

ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, “ವ್ಯಕ್ತಿಗೆ ಯಾವುದೇ ಸಿದ್ದಾಂತವಿದ್ದರೂ, ಧರ್ಮ ಅನುಸರಿಸಿದರೂ ರಂಗಾಯಣಕ್ಕೆ ಬಂದ ಮೇಲೆ ಎಲ್ಲರನ್ನೂ ಒಳಗೊಳ್ಳುವಂತಿರಬೇಕು. ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಹಿಂದಿನ ನಿರ್ದೇಶಕರೆಲ್ಲರೂ ಕಲೆ ಸಂಸ್ಕೃತಿ ಬೆಳೆಸುವತ್ತ ಚಿತ್ತ ಹರಿಸಿದ್ದರು. ಆದರೆ, ಕಾರ್ಯಪ್ಪ ಅವರು ಹಿಂದೂ ಧರ್ಮದ ಪರ ವಾಲಿದ್ದಾರೆ” ಎಂದು ತಿಳಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, “ಅಡ್ಡಂಡ ಸಿ.ಕಾರ್ಯಪ್ಪ ಅವರ ನೇಮಕಾತಿಯನ್ನು ನಾವು ವಿರೋಧಿಸಿರಲಿಲ್ಲ. ಏಕೆಂದರೆ ರಂಗಪ್ರಜ್ಞೆ ಹೊಂದಿದ್ದ ವ್ಯಕ್ತಿ ಎಂದು ಖುಷಿಯಾಗಿತ್ತು. ನಂತರದಲ್ಲಿ ನಡವಳಿಕೆಯನ್ನು ನೋಡಿದಾಗ ರಂಗಾಯಣವನ್ನು ಆರ್‌ಎಸ್‌ಎಸ್ ಪ್ರೇರಿತ ಆದೇಶಗಳ ವೇದಿಕೆಯಾಗಿ ರೂಪಿಸುತ್ತಿದ್ದಾರೆ ಎನ್ನಿಸುತ್ತಿದೆ.

ವಿಶ್ವಪ್ರಜ್ಞೆಯಂತೆ ಎಲ್ಲರನ್ನೂ ಒಳಗೊಳ್ಳುವ ರಂಗಾಯಣದಲ್ಲಿ ಎಡ-ಬಲವನ್ನು ತರುತ್ತಾ, ಆರ್‌ಎಸ್‌ಎಸ್ ಬೈಠಕ್ ಕೇಂದ್ರವಾಗಿ ನಡೆದುಕೊಳ್ಳುತ್ತಿರುವುದು ನಾಚಿಗೇಡಿನ ಸಂಗತಿ. ಕಾರ್ಯಪ್ಪ ಅವರ ಮನಸ್ಸು- ಮಾತು, ಅಸಾಂಸ್ಕೃತಿಕ ಮತ್ತು ರಂಗಾಯಣಕ್ಕೆ ಅಪಚಾರ ಮಾಡುವ ರೀತಿ ನಡೆಯುತ್ತಿದೆ. ಹಾಗಾಗಿ, ರಂಗಾಯಣ ಕೋಮುವಾದದೆಡೆಗೆ ಹೋಗದಂತೆ ಎಚ್ಚರವಹಿಸಬೇಕಿದೆ” ಎಂದು ಕರೆ ನೀಡಿದ್ದಾರೆ.

ರಂಗಾಯಣ ಮಾಜಿ ನಿರ್ದೇಶಕರಾದ ಚಿದಂಬರರಾವ್ ಜಂಬೆ, ಭಾಗೀರಥಿ ಬಾಯಿ ಕದಂ, ಲಕ್ಷ್ಮೀ ಚಂದ್ರಶೇಖರ್, ನಾ.ದಿವಾಕರ್, ಸುಮಾ, ಕೆ.ಎಸ್.ವಿಮಲಾ, ಟಿ.ಸುಂದರ್‌ರಾವ್, ಗೋಪಾಲಕೃಷ್ಣ, ಎಸ್.ದೇವೇಂದ್ರಗೌಡ, ಜೆ.ಸಿ.ಶಶಿಧರ್, ಅಶ್ವಿನಿ, ಬಾಬು ಇಲಿಗರ್, ಜೆ.ಸಿ.ಶಶಿಧರ್, ಡಿ.ಆರ್.ಲಕ್ಷ್ಮೀನಾರಾಯಣ, ಕಾವ್ಯ ಅಚ್ಚುತ್, ಎನ್.ಎಸ್.ಶಾಂತಕುಮಾರ್, ಲಾವಣಿಕಾ, ಪುರುಷೋತ್ತಮ್, ಸುಷ್ಮಾ, ಮಲ್ಲಿಕಾರ್ಜುನ ಕಡಕೊಳ, ಸುಶೀಲ, ಲಕ್ಷ್ಮಣ್, ಪ್ರವೀಣ್ ರೆಡ್ಡಿ ರಾಯಚೂರು ಇನ್ನಿತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ಸೂಲಿಬೆಲೆ ಹೇಳುವುದು ನಿಮಗೆ ಸುಳ್ಳಾಗಿರಬಹುದು, ನಮಗಲ್ಲ: ರಂಗಾಯಣ ನಿರ್ದೇಶಕ

ರಂಗಾಯಣದಲ್ಲಿ ಈ ರೀತಿಯ ನಡವಳಿಕೆಯಾಗಲಿ, ನಿರ್ದೇಶಕರಿಂದ ಈ ರೀತಿ ಮಾತುಗಳಾಗಲಿ ನಾವು ಕಂಡರಿಲಿಲ್ಲ. ಸಾಮಾಜಿಕವಾಗಿ ಮಾಡುವ ಕೆಲಸವನ್ನು ಬಿಟ್ಟು , ಉಳಿದೆಲ್ಲವನ್ನೂ ಮಾಡುತ್ತಿದ್ದಾರೆ. ನನ್ನ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಿದ್ದು, ನೋವುಂಟು ಮಾಡಿದೆ.
-ಭಾಗೀರಥಿ ಬಾಯಿ ಕದಂ, ರಂಗಾಯಣ ಮಾಜಿ ನಿರ್ದೇಶಕರು

ಯಾವುದೇ ವ್ಯಕ್ತಿಯ ರಾಗದ್ವೇಷ ಆ ಸಂಸ್ಥೆಯದ್ದಾಗಬಾರದು. ಇಂದಿನ ವಿದ್ಯಮಾನ ಕಂಡು ಬೇಸರವಾಗಿದೆ. ರಂಗಾಯಣ ತನ್ನ ಘನತೆಯಂತೆಯೇ ಬೆಳೆಯಬೇಕು. ನಿರ್ದೇಶಕರು ಪೂರಕವಾಗಿ ಜವಾಬ್ದಾರಿ ನಿರ್ವಹಿಸಬೇಕು. ಹೊರತುಪಡಿಸಿ, ಬೇಜಾಬ್ದಾರಿಯಿಂದ ಮಾತನಾಡುವುದು ಆ ಸ್ಥಾನಕ್ಕೆ ಅವಮಾನ ಮಾಡಿದಂತೆ. ಅಡ್ಡಂಡ ಸಿ.ಕಾರ್ಯಪ್ಪ ಅವರು ರಂಗಾಯಣ ಕಟ್ಟುವ ಬಗ್ಗೆ ಯೋಚನೆ ಮಾಡಿಲ್ಲ. ಮಾಡಿದ್ದರೆ ಉದ್ಧಟತನದ ಮಾತುಗಳು ಬರುತ್ತಿರಲಿಲ್ಲ.
-ಚಿದಂಬರ ರಾವ್ ಜಂಬೆ, ರಂಗಾಯಣ ಮಾಜಿ ನಿರ್ದೇಶಕರು

ಅಡ್ಡಂಡ ಸಿ.ಕಾರ್ಯಪ್ಪ ಅವರು ರಂಗಾಯಣದಲ್ಲಿ ಆರ್‌ಎಸ್‌ಎಸ್- ಬಿಜೆಪಿ ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ. ಅದಕ್ಕಾಗಿ ಅವರನ್ನು ವಿರೋಧಿಸುತ್ತಿದ್ದೇವೆ. ನಾವು ಅವರನ್ನು ಕೋಮುವಾದಿ ಅಂದೆವು. ಆದರೆ, ಕೆಟ್ಟ ಭಾಷೆಗಳನ್ನು ಉಪಯೋಗಿಸಿಲ್ಲ. ಆದರೆ, ಅವರು ತಮ್ಮ ಪದ ಪ್ರಯೋಗದಿಂದ ಸಂಸ್ಕೃತಿ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಹಾಗಾಗಿ, ಎಂತಹ ಸಂದರ್ಭ ಬಂದರೂ ಅವರು ವರ್ಗಾವಣೆ ಆಗಬೇಕು. ನಾವೆಲ್ಲರೂ ಸಂಘಟಕರಾಗಿ ಹೋರಾಡಬೇಕು.
– ಪ.ಮಲ್ಲೇಶ್, ಸಮಾಜವಾದಿ

ಇದನ್ನೂ ಓದಿ:ಬಹುರೂಪಿಗೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...