Homeಮುಖಪುಟಆತ ಮಸಣದ ಅರ್ಚಕ! ಅತ್ಯಾಚಾರ ಮಾಡಿ ಹೆಣ ಸುಟ್ಟುಹಾಕಿದ- ಬಿ. ಪೀರ್ ಬಾಷ

ಆತ ಮಸಣದ ಅರ್ಚಕ! ಅತ್ಯಾಚಾರ ಮಾಡಿ ಹೆಣ ಸುಟ್ಟುಹಾಕಿದ- ಬಿ. ಪೀರ್ ಬಾಷ

- Advertisement -
- Advertisement -

“ಅಮ್ಮಾ…ಕೇರಂ ಆಡ್ತೀನಮ್ಮಾ” ಎಂದ ಮಗಳಿಗೆ ಕರೆದು, “ಒಂದು ಕೊಡ ನೀರು ತಂದಿಟ್ಟು ಆಡುವಂತೆ ಬಾರೆ” ಎಂದು ಹೇಳಿ, ಕೊಡ ಕೊಟ್ಟು ಕಳಿಸಿದ್ದೇ ತಪ್ಪಾಯ್ತು. ನೀರುತರಲು ಹೋದ ಆ 9 ವರ್ಷದ ಕರುಳ ಕುಡಿ, ಹೆಣವಾಗಿಯೂ ಕಾಣದಂತೆ ಸುಟ್ಟು ಬೂದಿಯಾಗುತ್ತಾಳೆಂದು ಆ ತಾಯಿ ಅಂದುಕೊಂಡಿರಲಿಲ್ಲ. ಅಷ್ಟಕ್ಕೂ ನೀರು ತರಲು ಹೋದ ಆ ಹೆಣ್ಣುಮಗುವನ್ನು ಕಚ್ಚಿಕೊಂದದ್ದು ವಿಷದ ಹಾವಾಗಲಿ, ಕ್ರೂರ ಹುಲಿಯಾಗಲಿ ಅಲ್ಲ. ಬದಲಿಗೆ ಗಂಡು- ಗಂಡಸುತನವೆಂಬ ಕೋರೆ ಪಂಜುಗಳು! ಈ ಕೊರೆ ಪಂಜುಗಳಿಗೆ ಜಾತಿ ಎಂಬ ನಂಜುನಶೆಯೇ ರಾಕ್ಷಸ ಶಕ್ತಿಯಾಯಿತೇ…ಗೊತ್ತಿಲ್ಲ. ಆದರೆ ಹಾಗೆ ಆ ಎಳೆಹುಡುಗಿಯ ಮೇಲೆ ಅತ್ಯಾಚಾರಗೈದವನು ಒಬ್ಬ ಅರ್ಚಕ, ಆತನ ಹೆಸರು ರಾಧೇಶ್ಯಾಮ. ಆತನ ದಾಳಿಗೆ ಜೀವ ಬಿಟ್ಟ ಹುಡುಗಿ ಬಡವರ ಮಗಳು, ದಲಿತ ಸಮುದಾಯದ ಜೀವ ಎಂಬುದಂತೂ ಹೌದು.

ಅತ್ಯಾಚಾರಗೈದು ಮಗಳನ್ನು ಹುಡುಕಲು ಬಂದ ತಾಯಿಗೆ “ಆಗಿದ್ದು ಆಗಿ ಹೋಯ್ತು, ಸುಟ್ಟು ಹಾಕು” ಎಂದವನೇ, ತಾಯಿ ಕೈಗೆ ಹೆಣವನ್ನೂ ಒಪ್ಪಿಸದೇ ತಾನಿರುವ ಜಾಗದಲ್ಲಿಯೇ ಆ ಮಗುವಿನ ಹೆಣಕ್ಕೆ ಬೆಂಕಿ ಇಟ್ಟಿದ್ದಾನೆ. ತಾಯಿ ಜೀವ ಜೋರಾಗಿ ಕೂಗಿ ಕೊಂಡರೆ “ಕೂಗಿ ರಂಪಾಟ ಮಾಡಿ ಕೇಸ್ ಮಾಡಿದರೆ, ಗೆಲ್ಲೋ ತಾಕತ್ತು ನಿನ್ನಲ್ಲಿದೆಯಾ, ಬಾಯಿ ಮುಚ್ವಿಕೊಂಡಿರು” ಎಂದು ಅರ್ಚಕ ಗದರಿಸಿದ್ದಾನೆ.

ಹೆತ್ತ ತಾಯಿಯ ಸಂಕಟದ ಚೀರಾಟಕ್ಕೆ ಕಿಂಚಿತ್ತೂ ಅಳುಕದ, ಮನಕರಗದ ಆ ನೀಚ, ಮುಕ್ಕಾಲು ಪಾಲು ದೇಹವನ್ನು ಬೆಂಕಿಯಲ್ಲಿ‌ ಕರಗಿಸಿದ್ದಾನೆ. ನಂತರ ಸೇರಿದ ಜನ, ಚಿತೆಗೆ ನೀರು ಚೆಲ್ಲಿ ಬೆಂಕಿ ನಂದಿಸಿದಾಗ ಸಿಕ್ಕಿದ್ದು ಆ ಮಗುವಿನ ಪಾದಗಳು ಮತ್ತು ಎಲುಬುಗಳಷ್ಟೆ. ಎಲ್ಲ ಮುಗಿದ ನಂತರ ಬಂದ ಪೊಲೀಸರು ಆ ಸುಟ್ಟ ಮಾಂಸದ ಚೂರುಗಳನ್ನು ವಶಪಡಿಸಿಕೊಂಡು ತನಿಖೆಯ ಮಾತು ‘ಆಡಿದ್ದಾರೆ’.

ಇದನ್ನೂ ಓದಿ: ದೆಹಲಿ: ದಲಿತ ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ, ಮ್ಯಾಜಿಸ್ಟೀರಿಯಲ್ ತನಿಖೆಗೆ ಕೇಜ್ರಿವಾಲ್ ಆದೇಶ

ದೇಶದ ರಾಜಧಾನಿಯಲ್ಲಿ, ಕೊಡ ನೀರಿಗೆಂದು ಕಳಿಸಿದ ಮಗಳು ಹೆಣವಾಗಿ ಬೆಂಕಿಯಲ್ಲಿ ಸುಡುತ್ತಿರುವುದನ್ನು ಕಂಡು‌ ಸಂಕಟ ಪಟ್ಟ ಆ ತಾಯಿಯನ್ನು, ಮತ್ತು ತಂದೆಯನ್ನೂ ಕರೆದೊಯ್ದು ಆ ಇಡೀರಾತ್ರಿ ಬೇರೆಬೇರೆ ಕೋಣೆಗಳಲ್ಲಿ ಕೂಡಿ ಹಾಕಿ ವಿಚಾರಣೆ ಮಾಡಿದ ಘನಂದಾರಿ ಕಾರ್ಯ ಈ ಪೊಲೀಸರದ್ದು. ಸಿಟ್ಟಿಗೆದ್ದ ಜನರಿಂದ ಬಚಾವು ಮಾಡಲೆಂಬಂತೇನೋ ಅತ್ಯಾಚಾರಿಯೊಂದಿಗೆ ಇನ್ನು ಕೆಲವರನ್ನು ಬಂಧಿಸಿದ್ದಾರೆ ಎಂಬುದೇನೋ ನಿಜ. ಆದರೆ ಇವರ ಮೇಲೆ ಹಾಕಲಾದ ಕೇಸುಗಳು, ಬಂಧನ ಇವೆಲ್ಲಾ ಜನರ ಆಕ್ರೋಶ ತಡೆಯಲು ಮಾಡಿದ ಕ್ರಮಗಳು ಎಂಬ ಬಗ್ಗೆ ಅನುಮಾನ ಪಡಬೇಕಿಲ್ಲ.

ಅದೇ ದೆಹಲಿಯಲ್ಲಿ ನಿರ್ಭಯಾಳಿಗೆ ಹೀಗಾದಾಗ, ಹೈದ್ರಾಬಾದಿನಲ್ಲಿ ಹೀಗಾದಾಗ ಬಂದ ಈ ಮಧ್ಯಮವರ್ಗದ ರೋಷಾವೇಶ, ಸಂಸ್ಕೃತಿ ಸಭ್ಯತೆಗಳು ಈಗ ಯಾವ ಗುಹೆ ಸೇರಿವೆ..? ಈಗೇಕೇ ಮೇಣದ ಬತ್ತಿಗಳು ಹೊತ್ತಿಕೊಳ್ಳುತ್ತಿಲ್ಲ..? ಎಲ್ಲಕ್ಕೂ ಹೆಚ್ಚಾಗಿ ದೇಶದ ವಿದ್ಯಮಾನವನ್ನು “ನಿರ್ಧರಿಸುವ” ಈ ಬಗಲಕುನ್ನಿ ಮಾಧ್ಯಮಗಳ ಗಂಟಲಲ್ಲಿ ಯಾವ ಅಮೇಧ್ಯ ಸಿಕ್ಕಿಕೊಂಡಿದೆ..?

ಅತ್ಯಾಚಾರವನ್ನು ಖಂಡಿಸಲೂ ಜಾತಿ ನೋಡುವಷ್ಟು ಹೇಸಿಗೆಯಾಗಿಬಿಟ್ಟಿದೆಯಾ ಮನಸ್ಸು. ದಲಿತ ಹೆಣ್ಣು ಮಕ್ಕಳಮೇಲೆ ಅತ್ಯಾಚಾರವಾದರೆ ಅದು ಸುದ್ದಿಯೇ ಅಲ್ಲವೇ..? ಏನಾಗಿದೆ ನಮ್ಮ ವಿವೇಕಕ್ಕೆ..? ಈ ದೇಶಕ್ಕೆ..?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...