Homeಮುಖಪುಟಆತ ಮಸಣದ ಅರ್ಚಕ! ಅತ್ಯಾಚಾರ ಮಾಡಿ ಹೆಣ ಸುಟ್ಟುಹಾಕಿದ- ಬಿ. ಪೀರ್ ಬಾಷ

ಆತ ಮಸಣದ ಅರ್ಚಕ! ಅತ್ಯಾಚಾರ ಮಾಡಿ ಹೆಣ ಸುಟ್ಟುಹಾಕಿದ- ಬಿ. ಪೀರ್ ಬಾಷ

- Advertisement -
- Advertisement -

“ಅಮ್ಮಾ…ಕೇರಂ ಆಡ್ತೀನಮ್ಮಾ” ಎಂದ ಮಗಳಿಗೆ ಕರೆದು, “ಒಂದು ಕೊಡ ನೀರು ತಂದಿಟ್ಟು ಆಡುವಂತೆ ಬಾರೆ” ಎಂದು ಹೇಳಿ, ಕೊಡ ಕೊಟ್ಟು ಕಳಿಸಿದ್ದೇ ತಪ್ಪಾಯ್ತು. ನೀರುತರಲು ಹೋದ ಆ 9 ವರ್ಷದ ಕರುಳ ಕುಡಿ, ಹೆಣವಾಗಿಯೂ ಕಾಣದಂತೆ ಸುಟ್ಟು ಬೂದಿಯಾಗುತ್ತಾಳೆಂದು ಆ ತಾಯಿ ಅಂದುಕೊಂಡಿರಲಿಲ್ಲ. ಅಷ್ಟಕ್ಕೂ ನೀರು ತರಲು ಹೋದ ಆ ಹೆಣ್ಣುಮಗುವನ್ನು ಕಚ್ಚಿಕೊಂದದ್ದು ವಿಷದ ಹಾವಾಗಲಿ, ಕ್ರೂರ ಹುಲಿಯಾಗಲಿ ಅಲ್ಲ. ಬದಲಿಗೆ ಗಂಡು- ಗಂಡಸುತನವೆಂಬ ಕೋರೆ ಪಂಜುಗಳು! ಈ ಕೊರೆ ಪಂಜುಗಳಿಗೆ ಜಾತಿ ಎಂಬ ನಂಜುನಶೆಯೇ ರಾಕ್ಷಸ ಶಕ್ತಿಯಾಯಿತೇ…ಗೊತ್ತಿಲ್ಲ. ಆದರೆ ಹಾಗೆ ಆ ಎಳೆಹುಡುಗಿಯ ಮೇಲೆ ಅತ್ಯಾಚಾರಗೈದವನು ಒಬ್ಬ ಅರ್ಚಕ, ಆತನ ಹೆಸರು ರಾಧೇಶ್ಯಾಮ. ಆತನ ದಾಳಿಗೆ ಜೀವ ಬಿಟ್ಟ ಹುಡುಗಿ ಬಡವರ ಮಗಳು, ದಲಿತ ಸಮುದಾಯದ ಜೀವ ಎಂಬುದಂತೂ ಹೌದು.

ಅತ್ಯಾಚಾರಗೈದು ಮಗಳನ್ನು ಹುಡುಕಲು ಬಂದ ತಾಯಿಗೆ “ಆಗಿದ್ದು ಆಗಿ ಹೋಯ್ತು, ಸುಟ್ಟು ಹಾಕು” ಎಂದವನೇ, ತಾಯಿ ಕೈಗೆ ಹೆಣವನ್ನೂ ಒಪ್ಪಿಸದೇ ತಾನಿರುವ ಜಾಗದಲ್ಲಿಯೇ ಆ ಮಗುವಿನ ಹೆಣಕ್ಕೆ ಬೆಂಕಿ ಇಟ್ಟಿದ್ದಾನೆ. ತಾಯಿ ಜೀವ ಜೋರಾಗಿ ಕೂಗಿ ಕೊಂಡರೆ “ಕೂಗಿ ರಂಪಾಟ ಮಾಡಿ ಕೇಸ್ ಮಾಡಿದರೆ, ಗೆಲ್ಲೋ ತಾಕತ್ತು ನಿನ್ನಲ್ಲಿದೆಯಾ, ಬಾಯಿ ಮುಚ್ವಿಕೊಂಡಿರು” ಎಂದು ಅರ್ಚಕ ಗದರಿಸಿದ್ದಾನೆ.

ಹೆತ್ತ ತಾಯಿಯ ಸಂಕಟದ ಚೀರಾಟಕ್ಕೆ ಕಿಂಚಿತ್ತೂ ಅಳುಕದ, ಮನಕರಗದ ಆ ನೀಚ, ಮುಕ್ಕಾಲು ಪಾಲು ದೇಹವನ್ನು ಬೆಂಕಿಯಲ್ಲಿ‌ ಕರಗಿಸಿದ್ದಾನೆ. ನಂತರ ಸೇರಿದ ಜನ, ಚಿತೆಗೆ ನೀರು ಚೆಲ್ಲಿ ಬೆಂಕಿ ನಂದಿಸಿದಾಗ ಸಿಕ್ಕಿದ್ದು ಆ ಮಗುವಿನ ಪಾದಗಳು ಮತ್ತು ಎಲುಬುಗಳಷ್ಟೆ. ಎಲ್ಲ ಮುಗಿದ ನಂತರ ಬಂದ ಪೊಲೀಸರು ಆ ಸುಟ್ಟ ಮಾಂಸದ ಚೂರುಗಳನ್ನು ವಶಪಡಿಸಿಕೊಂಡು ತನಿಖೆಯ ಮಾತು ‘ಆಡಿದ್ದಾರೆ’.

ಇದನ್ನೂ ಓದಿ: ದೆಹಲಿ: ದಲಿತ ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ, ಮ್ಯಾಜಿಸ್ಟೀರಿಯಲ್ ತನಿಖೆಗೆ ಕೇಜ್ರಿವಾಲ್ ಆದೇಶ

ದೇಶದ ರಾಜಧಾನಿಯಲ್ಲಿ, ಕೊಡ ನೀರಿಗೆಂದು ಕಳಿಸಿದ ಮಗಳು ಹೆಣವಾಗಿ ಬೆಂಕಿಯಲ್ಲಿ ಸುಡುತ್ತಿರುವುದನ್ನು ಕಂಡು‌ ಸಂಕಟ ಪಟ್ಟ ಆ ತಾಯಿಯನ್ನು, ಮತ್ತು ತಂದೆಯನ್ನೂ ಕರೆದೊಯ್ದು ಆ ಇಡೀರಾತ್ರಿ ಬೇರೆಬೇರೆ ಕೋಣೆಗಳಲ್ಲಿ ಕೂಡಿ ಹಾಕಿ ವಿಚಾರಣೆ ಮಾಡಿದ ಘನಂದಾರಿ ಕಾರ್ಯ ಈ ಪೊಲೀಸರದ್ದು. ಸಿಟ್ಟಿಗೆದ್ದ ಜನರಿಂದ ಬಚಾವು ಮಾಡಲೆಂಬಂತೇನೋ ಅತ್ಯಾಚಾರಿಯೊಂದಿಗೆ ಇನ್ನು ಕೆಲವರನ್ನು ಬಂಧಿಸಿದ್ದಾರೆ ಎಂಬುದೇನೋ ನಿಜ. ಆದರೆ ಇವರ ಮೇಲೆ ಹಾಕಲಾದ ಕೇಸುಗಳು, ಬಂಧನ ಇವೆಲ್ಲಾ ಜನರ ಆಕ್ರೋಶ ತಡೆಯಲು ಮಾಡಿದ ಕ್ರಮಗಳು ಎಂಬ ಬಗ್ಗೆ ಅನುಮಾನ ಪಡಬೇಕಿಲ್ಲ.

ಅದೇ ದೆಹಲಿಯಲ್ಲಿ ನಿರ್ಭಯಾಳಿಗೆ ಹೀಗಾದಾಗ, ಹೈದ್ರಾಬಾದಿನಲ್ಲಿ ಹೀಗಾದಾಗ ಬಂದ ಈ ಮಧ್ಯಮವರ್ಗದ ರೋಷಾವೇಶ, ಸಂಸ್ಕೃತಿ ಸಭ್ಯತೆಗಳು ಈಗ ಯಾವ ಗುಹೆ ಸೇರಿವೆ..? ಈಗೇಕೇ ಮೇಣದ ಬತ್ತಿಗಳು ಹೊತ್ತಿಕೊಳ್ಳುತ್ತಿಲ್ಲ..? ಎಲ್ಲಕ್ಕೂ ಹೆಚ್ಚಾಗಿ ದೇಶದ ವಿದ್ಯಮಾನವನ್ನು “ನಿರ್ಧರಿಸುವ” ಈ ಬಗಲಕುನ್ನಿ ಮಾಧ್ಯಮಗಳ ಗಂಟಲಲ್ಲಿ ಯಾವ ಅಮೇಧ್ಯ ಸಿಕ್ಕಿಕೊಂಡಿದೆ..?

ಅತ್ಯಾಚಾರವನ್ನು ಖಂಡಿಸಲೂ ಜಾತಿ ನೋಡುವಷ್ಟು ಹೇಸಿಗೆಯಾಗಿಬಿಟ್ಟಿದೆಯಾ ಮನಸ್ಸು. ದಲಿತ ಹೆಣ್ಣು ಮಕ್ಕಳಮೇಲೆ ಅತ್ಯಾಚಾರವಾದರೆ ಅದು ಸುದ್ದಿಯೇ ಅಲ್ಲವೇ..? ಏನಾಗಿದೆ ನಮ್ಮ ವಿವೇಕಕ್ಕೆ..? ಈ ದೇಶಕ್ಕೆ..?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...