Homeಮುಖಪುಟಆತ ಮಸಣದ ಅರ್ಚಕ! ಅತ್ಯಾಚಾರ ಮಾಡಿ ಹೆಣ ಸುಟ್ಟುಹಾಕಿದ- ಬಿ. ಪೀರ್ ಬಾಷ

ಆತ ಮಸಣದ ಅರ್ಚಕ! ಅತ್ಯಾಚಾರ ಮಾಡಿ ಹೆಣ ಸುಟ್ಟುಹಾಕಿದ- ಬಿ. ಪೀರ್ ಬಾಷ

- Advertisement -
- Advertisement -

“ಅಮ್ಮಾ…ಕೇರಂ ಆಡ್ತೀನಮ್ಮಾ” ಎಂದ ಮಗಳಿಗೆ ಕರೆದು, “ಒಂದು ಕೊಡ ನೀರು ತಂದಿಟ್ಟು ಆಡುವಂತೆ ಬಾರೆ” ಎಂದು ಹೇಳಿ, ಕೊಡ ಕೊಟ್ಟು ಕಳಿಸಿದ್ದೇ ತಪ್ಪಾಯ್ತು. ನೀರುತರಲು ಹೋದ ಆ 9 ವರ್ಷದ ಕರುಳ ಕುಡಿ, ಹೆಣವಾಗಿಯೂ ಕಾಣದಂತೆ ಸುಟ್ಟು ಬೂದಿಯಾಗುತ್ತಾಳೆಂದು ಆ ತಾಯಿ ಅಂದುಕೊಂಡಿರಲಿಲ್ಲ. ಅಷ್ಟಕ್ಕೂ ನೀರು ತರಲು ಹೋದ ಆ ಹೆಣ್ಣುಮಗುವನ್ನು ಕಚ್ಚಿಕೊಂದದ್ದು ವಿಷದ ಹಾವಾಗಲಿ, ಕ್ರೂರ ಹುಲಿಯಾಗಲಿ ಅಲ್ಲ. ಬದಲಿಗೆ ಗಂಡು- ಗಂಡಸುತನವೆಂಬ ಕೋರೆ ಪಂಜುಗಳು! ಈ ಕೊರೆ ಪಂಜುಗಳಿಗೆ ಜಾತಿ ಎಂಬ ನಂಜುನಶೆಯೇ ರಾಕ್ಷಸ ಶಕ್ತಿಯಾಯಿತೇ…ಗೊತ್ತಿಲ್ಲ. ಆದರೆ ಹಾಗೆ ಆ ಎಳೆಹುಡುಗಿಯ ಮೇಲೆ ಅತ್ಯಾಚಾರಗೈದವನು ಒಬ್ಬ ಅರ್ಚಕ, ಆತನ ಹೆಸರು ರಾಧೇಶ್ಯಾಮ. ಆತನ ದಾಳಿಗೆ ಜೀವ ಬಿಟ್ಟ ಹುಡುಗಿ ಬಡವರ ಮಗಳು, ದಲಿತ ಸಮುದಾಯದ ಜೀವ ಎಂಬುದಂತೂ ಹೌದು.

ಅತ್ಯಾಚಾರಗೈದು ಮಗಳನ್ನು ಹುಡುಕಲು ಬಂದ ತಾಯಿಗೆ “ಆಗಿದ್ದು ಆಗಿ ಹೋಯ್ತು, ಸುಟ್ಟು ಹಾಕು” ಎಂದವನೇ, ತಾಯಿ ಕೈಗೆ ಹೆಣವನ್ನೂ ಒಪ್ಪಿಸದೇ ತಾನಿರುವ ಜಾಗದಲ್ಲಿಯೇ ಆ ಮಗುವಿನ ಹೆಣಕ್ಕೆ ಬೆಂಕಿ ಇಟ್ಟಿದ್ದಾನೆ. ತಾಯಿ ಜೀವ ಜೋರಾಗಿ ಕೂಗಿ ಕೊಂಡರೆ “ಕೂಗಿ ರಂಪಾಟ ಮಾಡಿ ಕೇಸ್ ಮಾಡಿದರೆ, ಗೆಲ್ಲೋ ತಾಕತ್ತು ನಿನ್ನಲ್ಲಿದೆಯಾ, ಬಾಯಿ ಮುಚ್ವಿಕೊಂಡಿರು” ಎಂದು ಅರ್ಚಕ ಗದರಿಸಿದ್ದಾನೆ.

ಹೆತ್ತ ತಾಯಿಯ ಸಂಕಟದ ಚೀರಾಟಕ್ಕೆ ಕಿಂಚಿತ್ತೂ ಅಳುಕದ, ಮನಕರಗದ ಆ ನೀಚ, ಮುಕ್ಕಾಲು ಪಾಲು ದೇಹವನ್ನು ಬೆಂಕಿಯಲ್ಲಿ‌ ಕರಗಿಸಿದ್ದಾನೆ. ನಂತರ ಸೇರಿದ ಜನ, ಚಿತೆಗೆ ನೀರು ಚೆಲ್ಲಿ ಬೆಂಕಿ ನಂದಿಸಿದಾಗ ಸಿಕ್ಕಿದ್ದು ಆ ಮಗುವಿನ ಪಾದಗಳು ಮತ್ತು ಎಲುಬುಗಳಷ್ಟೆ. ಎಲ್ಲ ಮುಗಿದ ನಂತರ ಬಂದ ಪೊಲೀಸರು ಆ ಸುಟ್ಟ ಮಾಂಸದ ಚೂರುಗಳನ್ನು ವಶಪಡಿಸಿಕೊಂಡು ತನಿಖೆಯ ಮಾತು ‘ಆಡಿದ್ದಾರೆ’.

ಇದನ್ನೂ ಓದಿ: ದೆಹಲಿ: ದಲಿತ ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ, ಮ್ಯಾಜಿಸ್ಟೀರಿಯಲ್ ತನಿಖೆಗೆ ಕೇಜ್ರಿವಾಲ್ ಆದೇಶ

ದೇಶದ ರಾಜಧಾನಿಯಲ್ಲಿ, ಕೊಡ ನೀರಿಗೆಂದು ಕಳಿಸಿದ ಮಗಳು ಹೆಣವಾಗಿ ಬೆಂಕಿಯಲ್ಲಿ ಸುಡುತ್ತಿರುವುದನ್ನು ಕಂಡು‌ ಸಂಕಟ ಪಟ್ಟ ಆ ತಾಯಿಯನ್ನು, ಮತ್ತು ತಂದೆಯನ್ನೂ ಕರೆದೊಯ್ದು ಆ ಇಡೀರಾತ್ರಿ ಬೇರೆಬೇರೆ ಕೋಣೆಗಳಲ್ಲಿ ಕೂಡಿ ಹಾಕಿ ವಿಚಾರಣೆ ಮಾಡಿದ ಘನಂದಾರಿ ಕಾರ್ಯ ಈ ಪೊಲೀಸರದ್ದು. ಸಿಟ್ಟಿಗೆದ್ದ ಜನರಿಂದ ಬಚಾವು ಮಾಡಲೆಂಬಂತೇನೋ ಅತ್ಯಾಚಾರಿಯೊಂದಿಗೆ ಇನ್ನು ಕೆಲವರನ್ನು ಬಂಧಿಸಿದ್ದಾರೆ ಎಂಬುದೇನೋ ನಿಜ. ಆದರೆ ಇವರ ಮೇಲೆ ಹಾಕಲಾದ ಕೇಸುಗಳು, ಬಂಧನ ಇವೆಲ್ಲಾ ಜನರ ಆಕ್ರೋಶ ತಡೆಯಲು ಮಾಡಿದ ಕ್ರಮಗಳು ಎಂಬ ಬಗ್ಗೆ ಅನುಮಾನ ಪಡಬೇಕಿಲ್ಲ.

ಅದೇ ದೆಹಲಿಯಲ್ಲಿ ನಿರ್ಭಯಾಳಿಗೆ ಹೀಗಾದಾಗ, ಹೈದ್ರಾಬಾದಿನಲ್ಲಿ ಹೀಗಾದಾಗ ಬಂದ ಈ ಮಧ್ಯಮವರ್ಗದ ರೋಷಾವೇಶ, ಸಂಸ್ಕೃತಿ ಸಭ್ಯತೆಗಳು ಈಗ ಯಾವ ಗುಹೆ ಸೇರಿವೆ..? ಈಗೇಕೇ ಮೇಣದ ಬತ್ತಿಗಳು ಹೊತ್ತಿಕೊಳ್ಳುತ್ತಿಲ್ಲ..? ಎಲ್ಲಕ್ಕೂ ಹೆಚ್ಚಾಗಿ ದೇಶದ ವಿದ್ಯಮಾನವನ್ನು “ನಿರ್ಧರಿಸುವ” ಈ ಬಗಲಕುನ್ನಿ ಮಾಧ್ಯಮಗಳ ಗಂಟಲಲ್ಲಿ ಯಾವ ಅಮೇಧ್ಯ ಸಿಕ್ಕಿಕೊಂಡಿದೆ..?

ಅತ್ಯಾಚಾರವನ್ನು ಖಂಡಿಸಲೂ ಜಾತಿ ನೋಡುವಷ್ಟು ಹೇಸಿಗೆಯಾಗಿಬಿಟ್ಟಿದೆಯಾ ಮನಸ್ಸು. ದಲಿತ ಹೆಣ್ಣು ಮಕ್ಕಳಮೇಲೆ ಅತ್ಯಾಚಾರವಾದರೆ ಅದು ಸುದ್ದಿಯೇ ಅಲ್ಲವೇ..? ಏನಾಗಿದೆ ನಮ್ಮ ವಿವೇಕಕ್ಕೆ..? ಈ ದೇಶಕ್ಕೆ..?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...