Homeನ್ಯಾಯ ಪಥರಾಜಕಾರಣದ ಆಗಸದಲ್ಲಿ ಮಿನುಗುವ ನಕ್ಷತ್ರ ಅರಸು

ರಾಜಕಾರಣದ ಆಗಸದಲ್ಲಿ ಮಿನುಗುವ ನಕ್ಷತ್ರ ಅರಸು

- Advertisement -
- Advertisement -

ಸ್ವಾತಂತ್ರ್ಯಾನಂತರದ ಕರ್ನಾಟಕದಲ್ಲಿ ಹಲವಾರು ಮುಖ್ಯಮಂತ್ರಿಗಳು ಆಗಿಹೋಗಿದ್ದಾರೆ. ಆದರೆ ಇಲ್ಲಿನ ರಾಜಕೀಯಾಗಸದಲ್ಲಿ ದೇವರಾಜ ಅರಸು ಎಂದೆಂದೂ ಹೊಳೆಯುವ ನಕ್ಷತ್ರವಾಗುಳಿದಿರುವುದೊಂದು ವಿಶೇಷ. ಅರಸು ಯುಗವನ್ನು ಅಳೆದು ನೋಡಿದರೆ ಇದು ತಿಳಿಯುತ್ತದೆ.

ದೇವರಾಜ ಅರಸು ಬಿ.ಎಸ್ಸಿ ಪದವಿ ಮುಗಿಸಿದ ನಂತರ ಊರಿಗೆ ಹೋಗಿ ಬೇಸಾಯ ಮಾಡುತ್ತಾರೆ. ಬಲಿಷ್ಠವಾದ ಎತ್ತುಗಳೊಂದಿಗೆ ಅವರು ಹೊಲ ಉಳುವುದನ್ನ ನೋಡಿದವರಿದ್ದಾರೆ. ಆದರೆ ಅವರೆಂದಿಗೂ ಮಣ್ಣಿನ ಮಗನೆಂದು ಹೇಳಿಕೊಳ್ಳಲಿಲ್ಲ. ತಮ್ಮ 26ನೇ ವಯಸ್ಸಿಗೆ ರಾಜಕಾರಣ ಪ್ರವೇಶ ಮಾಡುತ್ತಾರೆ. ಒಕ್ಕಲಿಗರೇ ಬಹುಸಂಖ್ಯೆಯಲ್ಲಿರುವ ಹುಣಸೂರಿನಲ್ಲಿ ಒಕ್ಕಲಿಗರ ನಾಯಕನನ್ನೇ ಸೋಲಿಸಿ ಗೆದ್ದು ಬರುತ್ತಾರೆ. 1962ರಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗುತ್ತಾರೆ ಮತ್ತು ನಿಜಲಿಂಗಪ್ಪ ಸಂಪುಟದಲ್ಲಿ ಮಂತ್ರಿಯಾಗುತ್ತಾರೆ. ಅವರು ಕೇಳದಿದ್ದರು ನಿಜಲಿಂಗಪ್ಪನವರು ಅರಸುರನ್ನು ಸಾರಿಗೆ ಮಂತ್ರಿಯನ್ನಾಗಿ ಮಾಡುತ್ತಾರೆ. ಆಗ ಸಾರಿಗೆಯಲ್ಲಿದ್ದ ಮೂರುಸಾವಿರ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಅದು ಮಾಧ್ಯಮದವರಿಗೆ ಒಂದು ಸುದ್ದಿಯಾಗುವುದಿಲ್ಲ. ಅದಾಗಲೇ ಸಾಮಾಜಿಕ ನ್ಯಾಯದ ಬಗ್ಗೆ ಅರಿವು ಮೂಡಿಸಿಕೊಂಡು ಒಳಗೊಳಗೇ ಕುದಿಯುತ್ತಿದ್ದ ಅರಸು ತಮ್ಮ ಸುತ್ತಲೂ ಬಲಾಢ್ಯ ಜಾತಿಗಳ ಅಬ್ಬರ ನೋಡಿಕೊಂಡು ಸುಮ್ಮನಿದ್ದರು. ಸಾಮಾಜಿಕವಾಗಿ ಪರಿವರ್ತನೆಗೆ ತಯಾರಾಗಿ ನಿಂತಿದ್ದ ಅರಸುರವರಿಗೆ ಸುವರ್ಣಾವಕಾಶ ಎದುರಾದಂತೆ ರಾಷ್ಟ್ರಪತಿ ಚುನಾವಣೆ ಬಂತು. ವಿ.ವಿ. ಗಿರಿ ಮತ್ತು ಸಂಜೀವರೆಡ್ಡಿಯವರ ನಡುವಿನ ಪೈಪೋಟಿಯಲ್ಲಿ ಇಂದಿರಾಗಾಂಧಿ ವಿ.ವಿ ಗಿರಿಯವರನ್ನ ಬೆಂಬಲಿಸಿದ ಕಾರಣವಾಗಿ ಕಾಂಗ್ರೆಸ್ ಇಬ್ಭಾಗವಾಯ್ತು. ಆಗ ಅರಸು ಇಂದಿರಾಗಾಂಧಿಯನ್ನು ಬೆಂಬಲಿಸಿದ್ದರಿಂದ ಅರಸುರವರಿಗೆ ಕರ್ನಾಟಕ ಕಾಂಗ್ರೆಸ್ ಯಜಮಾನಿಕೆಯನ್ನು ಬಿಟ್ಟುಕೊಟ್ಟರು. 1971ರಲ್ಲಿ ಮಧ್ಯಂತರ ಚುನಾವಣೆ ಬಂತು. ಆಗ ಅರಸು ತಮ್ಮ ಬತ್ತಳಿಕೆಯಲ್ಲಿದ್ದ ಸಾಮಾಜಿಕ ಪರಿವರ್ತನೆಯ ಅಸ್ತ್ರಗಳನ್ನ ಒಂದೊಂದೇ ತೆಗೆಯತೊಡಗಿದ್ದರು. ಕರ್ನಾಟಕದಲ್ಲಿ ಮೇಲು ಜಾತಿಗಳನ್ನ ಒಂದು ತಕ್ಕಡಿಗೆ ಹಾಕಿ, ಹಿಂದುಳಿದ ಜಾತಿಗಳನ್ನ ಒಂದು ತಕ್ಕಡಿಗೆ ಹಾಕಿ ತೂಗಿ ನೋಡಿದರು. ಹಿಂದುಳಿದ ವರ್ಗದ ತಕ್ಕಡಿ ಮೇಲೇಳಲಿಲ್ಲ. ಅಲ್ಲಿಗೆ ಕರ್ನಾಟಕದ ಬಹುಸಂಖ್ಯಾತರೆಂದರೆ ಹಿಂದುಳಿದವರ ಓಟು ಪಡೆದ ಬಲಾಢ್ಯ ಜಾತಿವಂತರು ಎಲ್ಲಾ ಸವಲತ್ತುಗಳನ್ನ ಹಂಚಿಕೊಂಡು ಈ ಲೋಕ ಇರುವುದೇ ಹೀಗೆಂದು ಆರಾಮವಾಗಿದ್ದರು.

 

ಅಂತಹ ಸಮಯದಲ್ಲಿ ಇಂದಿರಾಗಾಂಧಿ ಹೆಸರಿನ ಧ್ವಜವನ್ನು ನೆಟ್ಟು ಸವಾಲೆಸೆದ ಅರಸು, ಅನಾಮಧೇಯರಿಗೆಲ್ಲಾ ಕಾಂಗೈ ಟಿಕೆಟ್ ಕೊಟ್ಟು 27 ಜನ ಎಂಪಿಗಳನ್ನ ಗೆಲ್ಲಿಸಿಕೊಂಡು ಬಂದರು. ಮುಂದೆ 1972ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈವರೆಗಿನ ಸಂಪ್ರದಾಯವನ್ನ ಮುರಿದುಹಾಕಿದರು. 223 ವಿಧಾನಸಭಾ ಕ್ಷೇತ್ರಗಳ ಪೈಕಿ 170 ಜನ ಮೇಲು ವರ್ಗದವರು ಟಿಕೆಟ್ ಹಂಚಿಕೊಂಡು ಉಳಿದ 73 ಸೀಟುಗಳನ್ನು ಹಿಂದುಳಿದವರಿಗೆ ಪ್ರಸಾದದಂತೆ ಹಂಚುತ್ತಿದ್ದರು. ಆದರೆ ಅರಸು ಮೊದಲಬಾರಿಗೆ ಈ ಸಂಪ್ರದಾಯ ಮುರಿದು 133 ಮಂದಿ ಹಿಂದುಳಿದ ಜಾತಿ ನಾಯಕರನ್ನ ಗುರುತಿಸಿ ಟಿಕೆಟ್ ನೀಡಿದರು. ಇದು ಅರಸುರವರ ಒಂದು ಐತಿಹಾಸಿಕ ತೀರ್ಮಾನವಾಗಿತ್ತು. ಅದಷ್ಟೇ ಅಲ್ಲದೆ ಆ ಪೈಕಿ 92 ಮಂದಿ ಹಿಂದುಳಿದವರನ್ನ ಗೆಲ್ಲಿಸಿಕೊಂಡು ಬಂದರು. ಆ ನಂತರ ನಡೆದ ಸಂಪುಟ ರಚನೆಯಲ್ಲೂ ಅರಸು ಮೊಟ್ಟಮೊದಲ ಬಾರಿಗೆ ಹಿಂದುಳಿದವರಿಗೆ ಪ್ರಬಲ ಖಾತೆಗಳನ್ನು ಹಂಚಿದರು. ಹಾಗೆಂದು ಮೇಲುವರ್ಗದವರನ್ನೇನು ಕಡೆಗಣಿಸಲಿಲ್ಲ; ಅಲ್ಲಿಯೂ ಸಮರ್ಥರನ್ನು ಗುರುತಿಸಿದರು. ಸಿದ್ದವೀರಪ್ಪ, ಚನ್ನಬಸಪ್ಪ, ಕೆ.ಹೆಚ್ ಪಾಟೀಲ್, ಹುಚ್ಚಮಾಸ್ತಿಗೌಡ, ಶ್ರೀಕಂಠಯ್ಯ ಇವರಲ್ಲದೆ ಬ್ರಾಹ್ಮಣರ ಪೈಕಿ ಗುಂಡೂರಾವ್, ಕೆ. ಶ್ರೀನಿವಾಸ್, ಬದರಿನಾರಾಯಣ್, ರಮೇಶ್‌ಕುಮಾರ್ ಇದ್ದರು. ಜೊತೆಗೆ ಮೊದಲ ಬಾರಿಗೆ ಚಮ್ಮಾರ, ಈಡಿಗ, ಲಂಬಾಣಿ, ಭೋವಿ ಜಾತಿ ನಾಯಕರೆಲ್ಲಾ ಅರಸು ಜೊತೆಗಿದ್ದರು. ಹಾಗೆ ನೋಡಿದರೆ ಅರಸು ಮೇಲುಜಾತಿಯ ವಿರೋಧಿಗಳಾಗಿರದೆ, ಇಲ್ಲಿನ ಆಡಳಿತ ಮತ್ತು ಸಂಪತ್ತನ್ನು ಸಮನಾಗಿ ಹಂಚುವ ನಾಯಕರಾಗಿದ್ದರು. ಇದು ಕರ್ನಾಟಕದ ಜನಸ್ತೋಮ ಕೂಡ ಒಪ್ಪಿದ ನ್ಯಾಯದಾನವಾಗಿತ್ತು ಮತ್ತಾಗ ಯಾವ ಪ್ರತಿಭಟನೆಯೂ ನಡೆಯಲಿಲ್ಲ. ಆದರೂ ಮುಂದೆ 1972ರಲ್ಲಿ ನಡೆದ ಪ್ರತಿಭಟನೆ ಮತ್ತು ದೊಂಬಿಯನ್ನು ಸಮರ್ಥವಾಗಿ ನಿಭಾಯಿಸಿ, ಸಾಮಾಜಿಕ ನ್ಯಾಯದ ಸರಕಾರ ಅಂದರೆ ಏನೆಂಬುದನ್ನ ತೋರಿಸಿಕೊಟ್ಟರು. ಮುಖ್ಯಮಂತ್ರಿಯಾದ ಆರು ತಿಂಗಳಲ್ಲಿ ಸರಕಾರಿ ನೌಕರಿಗೆ ತಿದ್ದುಪಡಿ ಮಾಡಿ ಜಿಲ್ಲಾ ಮಟ್ಟದಲ್ಲೇ ಆಯ್ಕೆ ನಡೆಸುವ ಸಮಿತಿ ರಚಿಸಿದರು.

ಇದನ್ನೂ ಓದಿ:ದೇಶವ್ಯಾಪಿ ಹಬ್ಬಿದ ರೈತ ಚಳವಳಿ: ಭಾಗ-1

ಮುಂದಿನ ಮಹತ್ವದ ಹೆಜ್ಜೆ ಅಂದರೆ ಹಾವನೂರು ಕಮಿಷನ್ ನೇಮಕ ಮಾಡಿದ್ದು. ಅದಕ್ಕೆ ಸರಕಾರದ ಕರ್ಮಚಾರಿಗಳು ಸ್ಪಂದಿಸಲಿಲ್ಲ. ಆಗ ಅರಸು ಅಂತಹ ಅಧಿಕಾರಿಗಳನ್ನ ಶಿಕ್ಷಿಸುವ ಕಾನೂನು ತರಲು ಮುಂದಾದಾಗ ಎಲ್ಲವೂ ಸರಿಯಾಯ್ತು.

ಹಾವನೂರು ವರದಿಯ ಪ್ರಭಾವ ದೇಶದಲ್ಲೆಲ್ಲಾ ಹಬ್ಬಿತ್ತು. ಬಿಹಾರದಲ್ಲಿ ಕರ್ಪೂರಿ ಠಾಕೂರ್ ಇಂತದೇ ವರದಿ ರೂಪಿಸುವುದಕ್ಕೆ ಕೈಹಾಕಿದರು. ಮುಂದೆ ಮಂಡಲ ಕಮಿಷನ್ ನೇಮಕಕ್ಕೂ ಇದೇ ಪ್ರೇರಣೆಯಾಯ್ತು. ಅಂತೂ ಅರಸು ಮೀಸಲಾತಿ ಪಾಲು ಕೇಳುವ ಹಕ್ಕನ್ನು ದೇಶಕ್ಕೇ ಹಬ್ಬಿಸಿದ್ದರು. ಶ್ರೇಣಿಕೃತ ವ್ಯವಸ್ಥೆಗೆ ಒಗ್ಗಿಕೊಂಡು ತಮ್ಮ ಅದಮ್ಯ ಧೀಶಕ್ತಿಯನ್ನ ಅದುಮಿಕೊಂಡು ಬದುಕಿದ್ದ ಜನರನ್ನ ಮೇಲೆತ್ತುವುದು ಸಾಮಾನ್ಯ ಸಂಗತಿಯಲ್ಲ. ಅರಸುರವರ ಮುಂದಿನ ಕಾರ್ಯಕ್ರಮಗಳೆಲ್ಲಾ ಆ ದಿಸೆಯಲ್ಲೆ ಇದ್ದವು. ಮೊದಲನೆಯದಾಗಿ ಭೂ ಸುಧಾರಣೆ ಕಾಯ್ದೆ ತಂದು ಉಳುವವನೇ ಹೊಲದೊಡೆಯ ಎಂದರು. ಈ ಕಾನೂನಿಗೆ ಓಗೊಟ್ಟು ಅವರ ಆತ್ಮೀಯ ಗೆಳೆಯರಾಗಿದ್ದ ಆರ್.ಎಂ ದೇಸಾಯಿ ನಾಲ್ಕು ಎಕರೆ ಜಮೀನು ಬಿಟ್ಟುಕೊಡುತ್ತಾರೆ. ಹಿಂದುಳಿದ ವರ್ಗದವರಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ತರುತ್ತಾರೆ. ಅದಕ್ಕಾಗಿಯೇ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಸ್ಥಾಪನೆ ಮಾಡುತ್ತಾರೆ. ನೆನಸಿಕೊಳ್ಳಲು ಹೇಸಿಗೆಯಾಗುವ ಮಲಹೊರುವ ಪದ್ದತಿಯನ್ನು ಸಂಪುಟ ಸಚಿವ ಬಿ ಬಸವಲಿಂಗಪ್ಪನವರ ಮುಂದಾಳತ್ವದಲ್ಲಿ ನಿಷೇಧ ಮಾಡುತ್ತಾರೆ. ಅವರು ತಂದ ಜೀತ ಮುಕ್ತಿ ಕಾನೂನಿನ ಪರಿಧಿಗೆ 65ಸಾವಿರ ಜನ ಒಳಪಡುತ್ತಾರೆ. ಜೊತೆಗೆ ಹಿಂದುಳಿದ ವರ್ಗದ ಅಭಿವೃದ್ದಿ ನಿಗಮ ಸ್ಥಾಪಿಸುತ್ತಾರೆ. ವಿದ್ಯಾರ್ಥಿಗಳಿಗೆ ವಸತಿಶಾಲೆ ಮಹಿಳಾ ಕಲ್ಯಾಣ ಕೇಂದ್ರಗಳ ಸ್ಥಾಪನೆ, ಋಣ ಪರಿಹಾರ ಕಾಯ್ದೆ, ವೃದ್ಧಾಪ್ಯ ವೇತನ, ಅಂಗವಿಕಲರಿಗೆ ವೇತನ ಕೊಟ್ಟಿದ್ದಲ್ಲದೆ, ಅಂದು ಡಿಗ್ರಿ ಮುಗಿಸಿ ಮನೆಯಲ್ಲಿದ್ದ ಪದವೀಧರರಿಗೂ ನಿರುದ್ಯೋಗ ವೇತನ ಕೊಡುತ್ತಾರೆ. ಜೊತೆಗೆ ಪೌರಕಾರ್ಮಿಕರನ್ನು ಕಾಯಂ ಮಾಡಿ ಸರಕಾರ ಕರ್ತವ್ಯ ಏನೆಂಬುದನ್ನ ತೋರಿಸಿಕೊಡುತ್ತಾರೆ.

ಇದನ್ನೂ ಓದಿ:ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿವಮೊಗ್ಗ: ಮತೋನ್ಮತ್ತ ರಣಕಣದಿಂದ ಈಶ್ವರಪ್ಪ ಕಡ್ಡಾಯ ನಿವೃತ್ತಿ?!

ಅರಸು ತಂದ ಕಾರ್ಯಕ್ರಮಗಳೆಲ್ಲಾ ಯಶಸ್ವಿಯಾದದ್ದು ತುರ್ತುಪರಿಸ್ಥಿತಿಯ ಕಾಲದಲ್ಲಿ. ಇಂದಿರಾಗಾಂಧಿ ಘೋಷಿಸಿದ 20 ಅಂಶದ ಕಾರ್ಯಕ್ರಮಗಳನ್ನ ಚಾಚೂತಪ್ಪದೆ ಅರಸು ಜಾರಿಗೆ ತಂದ ಫಲವಾಗಿ 1978ರ ಚುನಾವಣೆಯಲ್ಲಿ ಮುತ್ತೆ ಬಹುಮತದೊಂದಿಗೆ ಆರಿಸಿಬರುತ್ತಾರೆ. ಅಷ್ಟರಲ್ಲಾಗಲೇ ಕಾಂಗ್ರೆಸ್ ದೇಶದಾದ್ಯಂತ ಸೋತು ಇಂದಿರಾಗಾಂಧಿ ಮತ್ತು ಸಂಜಯಗಾಂಧಿ ಮನೆ ಸೇರಿರುತ್ತಾರೆ. ಆಗ ಅರಸು ದೆಹಲಿಯಲ್ಲಿ ಇಂದಿರಾಗಾಂಧಿಯವರನ್ನು ಭೇಟಿಯಾಗಲು ಅವರ ಮನೆಗೆ ಹೋದಾಗ, ಅವರು ರಾಹುಲ್‌ಗಾಂಧಿಯ ಬೆರಳಿಡಿದು ಸಾಮಾನ್ಯ ಮಹಿಳೆಯಂತೆ ಮನೆಯ ವರಾಂಡದಲ್ಲಿ ಮೊಮ್ಮಗನನ್ನು ತಿರುಗಾಡಿಸುತ್ತಿರುತ್ತಾರೆ. ನಮ್ಮ ನಾಯಕಿಗೆ ಇಂತಹ ಸ್ಥಿತಿ ಬಂದುಬಿಟ್ಟಿತೆ ಎಂದು ಒಂದು ಕ್ಷಣ ಅರಸುಗೆ ಮರುಕವುಂಟಾಗುತ್ತದೆ. ಇಂದಿರಾ ಗಾಂಧಿಯವರನ್ನು ಸಂತೈಸಿ, ನಿಮ್ಮನ್ನ ಕರೆದುಕೊಂಡುಹೋಗಿ ಕರ್ನಾಟಕದಲ್ಲಿ ಗೆಲ್ಲಿಸಿ ಮತ್ತೆ ಸಂಸತ್ ಪ್ರವೇಶ ಮಾಡಿಸುತ್ತೇನೆ, ನೀವು ಈಗಿಂದೀಗಲೇ ತಯಾರಾಗಿ ಬನ್ನಿ ಎಂದು ಹೊರಡುತ್ತಾರೆ. ಕರ್ನಾಟಕಕ್ಕೆ ಬಂದ ಅರಸು ತಮ್ಮ ಮೆಚ್ಚಿನ ಶಿಷ್ಯ ಡಿ.ಬಿ. ಚಂದ್ರೇಗೌಡನನ್ನು ಒಪ್ಪಿಸಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ರಾಜಿನಾಮೆ ಕೊಡಿಸಿ ಇಂದಿರಾಗಾಂಧಿ ಬಂದುನಿಲ್ಲುವಂತೆ ಮಾಡುತ್ತಾರೆ.

ಅರಸು ಕ್ರಮದಿಂದ ಬೆಚ್ಚಿದ ಜನತಾ ಪಕ್ಷದವರು, ’ನಿಮ್ಮ ಈ ಕ್ರಮದಿಂದ ಹಿಂದೆ ಸರಿದರೆ ನಿಮ್ಮ ಮೇಲಿರುವ ಆಪಾದನೆಗಳಿಗೆ ಕ್ರಮ ತೆಗೆದುಕೊಳ್ಳುವುದನ್ನು ಸ್ಥಗಿತಗೊಳಿಸತ್ತೇವೆ’ ಎಂದು ಜಾರ್ಜ್ ಫರ್ನಾಂಡಿಸ್ ಮುಖಾಂತರ ಸಂದೇಶ ರವಾನಿಸುತ್ತಾರೆ. ಆದರೆ ಅರಸು ಕೇರ್ ಮಾಡುವುದಿಲ್ಲ. ಬೆಂಗಳೂರಿಗೆ ಬಂದ ಇಂದಿರಾಗಾಂಧಿಯನ್ನು ಕರೆದುಕೊಂಡು ಚಿಕ್ಕಮಗಳೂರಲ್ಲಿ ನಾಮಪತ್ರ ಸಲ್ಲಿಸುವ ಸಲುವಾಗಿ ಬರುತ್ತಾರೆ. ಆ ಐತಿಹಾಸಿಕ ಚುನಾವಣೆಯಲ್ಲಿ ಇಂದಿರಾಗಾಂಧಿ ಗೆಲ್ಲುತ್ತಾರೆ. ಅವರ ಎದುರು ನಿಂತು ಸೋತ ವಿರೇಂದ್ರ ಪಾಟೀಲರು ಕೆಲವೇ ತಿಂಗಳಲ್ಲಿ ಇಂದಿರಾ ಕಾಂಗ್ರೆಸ್ ಸೇರುತ್ತಾರೆ. ಆ ಚುನಾವಣೆಯಲ್ಲಿ ಇಂದಿರಾಗಾಂಧಿಯವರನ್ನು ಸೋಲಿಸಲು ಹೋರಾಡಿದ್ದವರೆಲ್ಲಾ ಇಂದಿರಾ ಕಾಂಗ್ರೆಸ್ ಪಾಲಾಗುತ್ತಾರೆ. ಇಲ್ಲಿಂದ ಅರಸು ಪತನ ಆರಂಭವಾಗುತ್ತದೆ.

ದೇವರಾಜ ಅರಸು ದೈತ್ಯರಾಗಿ ಬೆಳೆದಿದ್ದಾರೆ. ಮುಂದೆ ನಮಗೆ ಅವರಿಂದ ಅಪಾಯವಾಗಬಹುದೆಂದು ಗುಂಡೂರಾವ್ ಸಂಜಯಗಾಂಧಿಗೆ ಹೇಳಲಾಗಿ, ಅದಾಗಲೇ ಸನ್‌ಸ್ಟ್ರೋಕಿಗೆ ಒಳಗಾಗಿದ್ದ ಇಂದಿರಾಗಾಂಧಿ ಅದನ್ನು ನಂಬಲಾಗಿ, ಆಕೆಯ ಮಗನ ಗೆಳೆಯ ಗುಂಡೂರಾವ್‌ರವರನ್ನು ಕರ್ನಾಟಕದ ಮುಖ್ಯ ಮಂತ್ರಿಯಾಗಿ ಹೇರಲಾಗುತ್ತದೆ. ಚಿಕ್ಕಮಗಳೂರಿನ ಚುನಾವಣೆಯಲ್ಲಿ ಕೇಳಲಸಾಧ್ಯವಾದ ಬೈಗುಳಗಳನ್ನು ಇಂದಿರಾಗಾಂಧಿ ವಿರುದ್ಧ ತಿರುಗಿಸಿದ್ದ ಸಿ.ಎಂ ಇಬ್ರಾಹಿಂ ಗುಂಡೂರಾಯರ ಸಂಪುಟದಲ್ಲಿ ಮಂತ್ರಿಯಾಗುತ್ತಾರೆ. ಕರ್ನಾಟಕದ ಜನಸ್ತೋಮಕ್ಕೆ ರಾಜಕಾರಣಿಗಳು ಅಚ್ಚರಿ ಹುಟ್ಟಿಸಿದ ಸಮಯ ಅದು. ರಾಷ್ಟಮಟ್ಟದಲ್ಲೂ ಕೂಡ ಇಂದಿರಾಗಾಂಧಿಯನ್ನು ಸೋಲಿಸಿದ್ದ ರಾಜನಾರಾಯಣ, ಮೊರಾರ್ಜಿಯವರನ್ನು ಇಳಿಸಿ ಚರಣ್ ಸಿಂಗ್‌ರನ್ನು ಪ್ರಧಾನಿ ಮಾಡುತ್ತೇವೆ ಬೆಂಬಲ ಕೊಡುತ್ತೀರಾ ಎಂದು ಸಂಜಯ್‌ಗಾಂಧಿಗೆ ಕೇಳುತ್ತಾರೆ. ಈ ವಿಷಯವನ್ನು ಸಂಜಯ್ ಗಾಂಧಿಯಿಂದ ತಿಳಿದುಕೊಂಡ ಇಂದಿರಾಗಾಂಧಿ ಅಚ್ಚರಿಗೊಂಡು ತಮ್ಮ ಬೆಂಬಲವಿದೆ ಎಂಬ ಸಂದೇಶ ಕಳಿಸುತ್ತಾರೆ. ಅದರಂತೆ ಚರಣ್‌ಸಿಂಗ್ ಪ್ರಧಾನಿಯಾದ ನಂತರ ಇಂದಿರಾಗಾಂಧಿ ನೀಡಿದ್ದ ಬೆಂಬಲ ವಾಪಾಸ್ ಪಡೆದು ಜನತಾಪಕ್ಷ ಪತನಗೊಳಿಸುತ್ತಾರೆ.

ಇತ್ತ ದೇವರಾಜ್ ಅರಸು ಚರಣ್‌ಸಿಂಗ್‌ರವರ ಬೆಂಬಲಕ್ಕೆ ನಿಲ್ಲುತ್ತಾರೆ. ಅಂದು ನಡೆದ ಚುನಾವಣೆಯಲ್ಲಿ ನಿಲ್ಲಿಸಿದ್ದ ಅವರ ಎಲ್ಲಾ ಅಭ್ಯರ್ಥಿಗಳು ಸೋತುಹೋಗುತ್ತಾರೆ. ಏಕೆಂದರೆ ಅರಸು ಸಾಧನೆಯಲ್ಲಾ ಇಂದಿರಾಗಾಂಧಿ ಖಾತೆಗೆ ವರ್ಗಾವಣೆಯಾಗಿ ಅವರು ಬರಿಗೈಯಾಗಿದ್ದರು. ಆದರೂ ಕರ್ನಾಟಕ ಕ್ರಾಂತಿರಂಗ ಸ್ಥಾಪಿಸಿ ಹೋರಾಟ ಮುಂದುವರಿಸಿದ್ದರು. ಅವರೇ ಗುರುತಿಸಿ ಬೆಳಸಿದ ನಾಯಕರೆಲ್ಲಾ ಕೈಕೊಟ್ಟು ಪಲಾಯನ ಮಾಡಿ ಗುಂಡೂರಾಯರ ಆಸ್ಥಾನ ಸೇರಿದ್ದರು. ಇದು ಅರಸುಗೆ ಆಘಾತ ತರುವ ವಿಷಯವೇನಾಗಿರಲಿಲ್ಲ; ತಾವು ಗುರುತಿಸಿದ ಯುವ ನಾಯಕರಿಗೆ, ನಿಮ್ಮ ಭವಿಷ್ಯ ಎಲ್ಲಿದೆ ಅಲ್ಲಿಗೆ ಹೋಗಿ ಎಂದಿದ್ದರು. ಅರಸು ಗುರುತಿಸಿದವರಲ್ಲಿ ಮೂರು ಜನ ಮುಖ್ಯಮಂತ್ರಿಗಳಾದರು. ಅಂದು ಅರಸು ಹುಟ್ಟುಹಾಕಿದ ಪರಂಪರೆಯ ಪರಿಣಾಮವನ್ನು ಇನ್ನೂ ಗುರುತಿಸಬಹುದಾಗಿದೆ. ಅರಸು ಯುಗದ ರಾಜಕಾರಣದ ವರಸೆಯಿಂದ ಕರ್ನಾಟಕದ ಚಿತ್ರಣವೇ ಬದಲಾಗಿದೆ.

ಪ್ರಸ್ತುತ ಸರಕಾರಕ್ಕಂತೂ ಅರಸು ಅವರ ಜನ್ಮದಿನಾಚರಣೆ ಬೇಕಿಲ್ಲದ ಆಚರಣೆಯಾಗಿ ಕಾಟಾಚಾರಕ್ಕೆಂಬಂತೆ ಜರುಗುತ್ತಿದೆ. ಆದರೆ ಕರ್ನಾಟಕದ ಚರಿತ್ರೆಯಲ್ಲಿ ಅರಸು ಯುಗವನ್ನು ಅಳಿಸಲು ಅಸಾಧ್ಯ. ಅವರ ಸಾಧನೆಗಳ ಪೈಕಿ ಕರ್ನಾಟಕ ಎಂದು ನಾಮಕರಣ ಮಾಡಿದ್ದೊಂದು ಐತಿಹಾಸಿಕ ಘಟನೆ. ಇಂತಹ ಹಲವು ಘಟನೆ ಮತ್ತು ದಾಖಲೆಗಳು ಅವರ ಹೆಸರಿನಲ್ಲಿವುದುದರಿಂದ ಅವರು ಎಂದೂ ಕರ್ನಾಟಕ ರಾಜಕೀಯಾಗಸದಲ್ಲಿ ಮಿನುಗುವ ನಕ್ಷತ್ರ.

ಒಂದು ಜಾತಿ, ಒಂದು ಮತ, ಒಂದೇ ದೇವರು ಎಂಬ ಸಂದೇಶ ಸಾರಿದ ಸಂತ ನಾರಾಯಣ ಗುರುಗಳು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...

ಚೆನ್ನೈನಲ್ಲಿ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಹೋರಾಟ ನಡೆಸುತ್ತಿದ್ದ ಅಂಗವಿಕಲರ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ

ಚೆನ್ನೈ: ರಾಜ್ಯ ಸರ್ಕಾರದಿಂದ ನೀಡುತ್ತಿರುವ ಮಾಸಿಕ ಸಹಾಯಧನ ಹೆಚ್ಚಿಸುವಂತೆ ಒತ್ತಾಯಿಸಿ ಚೆನ್ನೈನಲ್ಲಿ ಅಂಗವಿಕಲರು ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.  ಅಂಗವಿಕಲರು ನಡೆಸುತ್ತಿದ್ದ ಈ ಪ್ರತಿಭಟನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹಲವಾರು ಪ್ರತಿಭಟನಾಕಾರರನ್ನು...

ರಾಜ್ಯಸಭೆ 37 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ; ವೇಳಾಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ

10 ರಾಜ್ಯಗಳಿಂದ ಖಾಲಿ ಇರುವ 37 ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಬುಧವಾರ ವೇಳಾಪಟ್ಟಿ ಪ್ರಕಟಿಸಿದೆ. ಆಯೋಗದ ಪ್ರಕಾರ, ಮಾರ್ಚ್ 16 ರಂದು ಬೆಳಿಗ್ಗೆ 9:00...

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹಿಂದೂ ಕುಟುಂಬಗಳು ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಮಂಗಳವಾರ ಲಕ್ನೋದ ಸರಸ್ವತಿ ಶಿಶು ಮಂದಿರದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ಹಿಂದೂ...

5% ಮುಸ್ಲಿಂ ಮೀಸಲಾತಿ ಪ್ರಕ್ರಿಯೆ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಗಾಗಿ ಜಾತಿ ಪರಿಶೀಲನೆ ಮತ್ತು ಪ್ರಮಾಣೀಕರಣ ಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ (ಫೆ.17) ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ತಕ್ಷಣದ ಬದಲಾವಣೆಯನ್ನು ತರದಿದ್ದರೂ,...

‘ಆರ್‌ಎಸ್‌ಎಸ್ ನೋಂದಣಿಗೆ ಕಾಂಗ್ರೆಸ್ ಕಾನೂನು ತರಲಿದೆ’: ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತ ತಮ್ಮ ಹೇಳಿಕೆಗಳನ್ನು ಮತ್ತು ಕರಾವಳಿ ಕರ್ನಾಟಕದ ಹೂಡಿಕೆಗಳ ಮೇಲೆ ಕೋಮು ಉದ್ವಿಗ್ನತೆ ಪರಿಣಾಮ...

ವಿನೋದ್ ಅದಾನಿ ಸಹಚರರ ವಿರುದ್ಧ ತನಿಖೆ ನಡೆಸಿದ ಇಟಾಲಿಯನ್ ಬ್ಯಾಂಕ್; ಅನುಮಾನಾಸ್ಪದ ‘ಹೆಡ್ಜ್ ಫಂಡ್’ ಹೂಡಿಕೆ ಪತ್ತೆ

ಜನವರಿ 2023 ರಲ್ಲಿ ಹಿಂಡೆನ್‌ಬರ್ಗ್‌ ರಿಸರ್ಚ್ ವರದಿಯ ಬೆನ್ನಲ್ಲೇ, ಇಟಲಿಯ ಅತಿದೊಡ್ಡ ಬ್ಯಾಂಕ್ 'ಇಂಟೆಸಾ ಸ್ಯಾನ್ಪೋಲೊ' ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರ ಇಬ್ಬರು ಸಹಚರರನ್ನು...

‘ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

"ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು, ಅವರನ್ನು ಚರಂಡಿ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯುವುದು 'ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ" ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ್ನು ಸುಪ್ರೀಂ...

‘ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ನಾವು ನಿಮ್ಮಿಂದ ಶಕ್ತಿ ಪಡೆಯುತ್ತೇವೆ’: ಕೇರಳ ಸಮ್ಮೇಳನದಲ್ಲಿ ಫಾರೂಕ್ ಅಬ್ದುಲ್ಲಾ ಭಾವುಕ ಮಾತು

"ದೇವರಿಗೆ ಧನ್ಯವಾದಗಳು, ದಕ್ಷಿಣ ಇನ್ನೂ ಸ್ವತಂತ್ರವಾಗಿದೆ, ಮತ್ತು ಅದು ಸ್ವತಂತ್ರವಾಗಿಯೇ ಉಳಿದಿದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಮತ್ತು ಬಲಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ನಿಮ್ಮಿಂದ ಶಕ್ತಿಯನ್ನು ಪಡೆಯುತ್ತೇವೆ. ನಾವು ನಿಮ್ಮನ್ನು ನೋಡುತ್ತೇವೆ...

ದತ್ತಾಂಶ ಸಂರಕ್ಷಣಾ ಕಾನೂನಿನಡಿಯಲ್ಲಿ ಆರ್‌ಟಿಐ ತಿದ್ದುಪಡಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಮೂಲಕ ಪರಿಚಯಿಸಲಾದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಎಂದು 'ಬಾರ್ ಮತ್ತು ಬೆಂಚ್' ವರದಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ...