Homeಕರೋನಾ ತಲ್ಲಣಗಂಡಾಂತರದಲ್ಲಿ ಡಯಾಲಿಸಿಸ್ ರೋಗಿಗಳು: ಆರೋಗ್ಯ ಮಂತ್ರಿ ಡಾ. ಸುಧಾಕರ್ ಸರಿ ಮಾಡಬಲ್ಲರಾ?

ಗಂಡಾಂತರದಲ್ಲಿ ಡಯಾಲಿಸಿಸ್ ರೋಗಿಗಳು: ಆರೋಗ್ಯ ಮಂತ್ರಿ ಡಾ. ಸುಧಾಕರ್ ಸರಿ ಮಾಡಬಲ್ಲರಾ?

- Advertisement -
- Advertisement -

ಕೊರೊನಾ ವೈರಾಣುಗಳ ರುದ್ರ ತಾಂಡವದ ಆರ್ಭಟದಲ್ಲಿ ಅದಕ್ಕಿಂತಲೂ ಗಂಡಾಂತರಕಾರಿಯಾದ ರೋಗಗಳಿಂದ ಆಗುತ್ತಿರುವ ಅನಾಹುತವನ್ನು ಆಳುವ ಸರ್ಕಾರ ಕಡೆಗಣಿಸಿ ಕೂತಿದೆಯಾ? ರಾಜ್ಯಾದ್ಯಂತ ಇರುವ ಸಾವಿರಾರು ಕಿಡ್ನಿವೈಫಲ್ಯದ ರೋಗಿಗಳು ಅನುಭವಿಸುತ್ತಿರುವ ಸಾವುಬದುಕಿನ ನಡುವಿನ ಸಂಕಟ ಇಂತಹ ಅನುಮಾನವನ್ನು ಹುಟ್ಟುಹಾಕಿದೆ!

ಎರಡೂ ಮೂತ್ರಪಿಂಡ ವಿಫಲವಾಗಿರುವ ಮಂದಿಯದು ತೀರಾ ನಾಜೂಕಿನ ಮತ್ತು ಅಷ್ಟೇ ಕ್ಲಿಷ್ಟಕರ ಬದುಕು. ಒಂಚೂರು ಹೆಚ್ಚು ಕಮ್ಮಿಯಾದರೂ ಜೀವಕ್ಕೇ ಕುತ್ತು. ಕೆಲವರಿಗಂತೂ ವಾರದಲ್ಲಿ 2-3 ಬಾರಿ ಡಯಾಲಿಸಿಸ್ ಅನಿವಾರ್ಯ. ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಇಂಥ ಸುಮಾರು 30-50 ಡಯಾಲಿಸಿಸ್ ರೋಗಿಗಳಿದ್ದಾರೆ. ಇವರಲ್ಲಿ ಬಹುತೇಕರು ಬಡ ಅಥವಾ ಕೆಳ ಮಧ್ಯಮವರ್ಗದ ಕುಟುಂಬದವರು; ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವಷ್ಟು ಚೈತನ್ಯ ಇಲ್ಲದವರು. ಇವರೆಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡುವ ಸರ್ಕಾರಿ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗಳನ್ನು ಅವಲಂಬಿಸಿದ್ದಾರೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿದ್ದ ಯು.ಟಿ ಖಾದರ್‌ಗೆ ಡಯಾಲಿಸಿಸ್ ರೋಗಿಗಳ ಗೋಳು ಗೊತ್ತಾಗಿತ್ತು. ಅವರ ಐದು ವರ್ಷದ ಕಾಲಮಿತಿಯಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಡಯಾಲಿಸಿಸ್ ಕೇಂದ್ರ ನಡೆಸುವಂಥ ಯೋಜನೆ ಹಾಕಿಕೊಂಡಿದ್ದರು. ಖಾದರ್ ಈ ಯೋಜನೆ ಸಿದ್ಧಪಡಿಸುತ್ತಿದ್ದ ಸಮಯದಲ್ಲೇ ಅವರ ಬಳಿಯಿದ್ದ ಆರೋಗ್ಯ ಖಾತೆ ಹೋಗಿ, ಅವರು ಆಹಾರ ಸಚಿವರಾದರು. ಅವರ ನಂತರ ಬಂದ ರಮೇಶ್‌ಕುಮಾರ್ ಅವರಿಗೆ ಇದಕ್ಕಿಂತ ಖಾಸಗಿಯವರಿಗೆ ಡಯಾಲಿಸಿಸ್ ಯೋಜನೆಯ ಗುತ್ತಿಗೆ ನೀಡುವುದು ಅನುಕೂಲಕರ ಎಂದೆನಿಸಿರಬೇಕು. ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕಲು ಹೊರಟಿದ್ದ ಅವರು ಈ ಖಾಸಗಿ ಗುತ್ತಿಗೆಯಿಂದ ಆಗುವ ಅನಾಹುತಗಳ ಬಗ್ಗೆಯೇಕೋ ಗಮನಹರಿಸಲಿಲ್ಲ.

ರಾಜ್ಯದ 23 ತಾಲ್ಲೂಕುಗಳ 122 ತಾಲ್ಲೂಕು ಕೇಂದ್ರಗಳಲ್ಲಿ ಮೂತ್ರಪಿಂಡ ಕಾಯಿಲೆಯವರಿಗೆ ಡಯಾಲಿಸಿಸ್ ನಡೆಸುವ ಗುತ್ತಿಗೆ ಅನಿವಾಸಿ ಭಾರತೀಯ ಆರೋಗ್ಯ ಉದ್ಯಮಿ ಬಿ.ಆರ್.ಶೆಟ್ಟಿಯ ಕಂಪನಿಗೆ ರಮೇಶ್ ಕುಮಾರ್ ಕಾಲದಲ್ಲಿ ಸಲೀಸಾಗಿ ದಕ್ಕಿತ್ತು. ಪ್ರತಿ ರೋಗಿಗೆ ಒಂದೂವರೆ ಸಾವಿರ ರೂ.ನಂತೆ ಡಯಾಲಿಸಿಸ್ ನಡೆಸುವ ಗುತ್ತಿಗೆಯನ್ನು ಬಿ.ಆರ್.ಶೆಟ್ಟಿ ಕಂಪನಿ ಪಡೆದುಕೊಂಡಿದೆ. ಹಾಗೆ ನೋಡಿದರೆ ತಲಾ 500-600ರೂ ಖರ್ಚು ತಗಲುವ ಈ ಡಯಾಲಿಸಿಸ್ ದುಬಾರಿ ರೇಟಿಗೆ ಬಿ.ಆರ್.ಶೆಟ್ಟಿ ಕುದುರಿಸಿಕೊಂಡಿದ್ದಾರೆ.

ಯಡಿಯೂರಪ್ಪ ಸರ್ಕಾರದಲ್ಲಿ ಡಾ. ಸುಧಾಕರ್ ಆರೋಗ್ಯ ಮಂತ್ರಿಯಾಗುವ ತನಕ ಡಯಾಲಿಸಿಸ್ ಹೇಳುವಂಥ ತೊಂದರೆ ತೊಡಕಿಲ್ಲದೆ ನಡೆದುಕೊಂಡು ಹೋಗಿತ್ತು. ದುಬೈನಲ್ಲಿ ಬಿ.ಆರ್.ಶೆಟ್ಟರ ಉದ್ಯಮ ಸಾಮ್ರಾಜ್ಯ ಪತನವಾಗುತ್ತಿದ್ದಂತೆಯೇ ಇತ್ತ ಕರ್ನಾಟಕದಲ್ಲೂ ಆತನ ವ್ಯವಹಾರವೆಲ್ಲ ಎಡವಟ್ಟಾಗುತ್ತ ಹೋಯಿತು. ಮಂತ್ರಿ ಡಾ.ಸುಧಾಕರ್ ಮತ್ತವರ ಆರೋಗ್ಯ ಇಲಾಖೆಯ ಆಯಕಟ್ಟಿನ ಅಧಿಕಾರಿಗಳ ಮಧ್ಯೆ ಸಾಮರಸ್ಯ ಇಲ್ಲದಾಯಿತು. ಬಿಆರ್‌ಎಸ್ ಕಂಪನಿಯ ಡಯಾಲಿಸಿಸ್ ಕೇಂದ್ರಗಳಲ್ಲಿ ನಾನಾ ನಮೂನೆಯ ಅವ್ಯವಸ್ಥೆ-ಅವಾಂತರ ನಡೆಯತೊಡಗಿತು.

ರೋಗಿಗಳು ದಿಕ್ಕೆಟ್ಟು ಹೋದರು. ಸರ್ಕಾರದಿಂದ ಬರಬೇಕಾದ ಹಣ ಕಾಲ ಕಾಲಕ್ಕೆ ಪಾವತಿ ಆಗದಿರುವುದೇ ಅವ್ಯವಸ್ಥೆಗೆ ಕಾರಣವೆಂದು ಬಿಆರ್‌ಎಸ್‌ನವರು ಬಹಿರಂಗವಾಗೇ ದೂರಹತ್ತಿದರು; ಆರೋಗ್ಯ ಮಂತ್ರಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಅಸಹಕಾರದಿಂದಾಗಿ ಡಯಾಲಿಸಿಸ್ ಸೆಂಟರ್‌ಗಳನ್ನು ನಡೆಸಲು ಸಾಧ್ಯವಾಗದಂತಾಗಿದೆ ಎಂದು ಬಿಆರ್‌ಎಸ್ ಕಂಪನಿಯ ಕಾರ್ಯನಿರ್ವಾಹಕ ಹೇಳಿರುವ ಆಡಿಯೋ ಒಂದು ವೈರಲ್ ಆಯಿತು.

ಆರೋಗ್ಯ ಇಲಾಖೆ ಬಿಆರ್‌ಎಸ್ ಕಂಪನಿಯದೇ ತಪ್ಪೆನ್ನುತ್ತಿದೆ. ಬಿಆರ್‌ಎಸ್ ಕಂಪನಿ ಒಪ್ಪಂದ ಉಲ್ಲಂಘಿಸಿದೆ. ವಿದ್ಯುತ್ ಶಕ್ತಿ ಮತ್ತು ನೀರಿನ ಪೂರೈಕೆ ಬಿಆರ್‌ಎಸ್ ಕಂಪನಿಯೇ ಮಾಡಿಕೊಳ್ಳಬೇಕೆಂಬುದು ಒಪ್ಪಂದದ ಷರತ್ತು. ಆದರೆ ಬಿಆರ್‌ಎಸ್ ಕಂಪನಿಯವರು ಸರ್ಕಾರಿ ಆಸ್ಪತ್ರೆಗಳಲ್ಲಿನ ನೀರು ಮತ್ತು ವಿದ್ಯುತ್ ಬಳಸಿಕೊಂಡು ಅದರ ಖರ್ಚುವೆಚ್ಚ ಭರಿಸದೆ ಪಂಗನಾಮ ಹಾಕುತ್ತಿದ್ದಾರೆ. ಲೆಕ್ಕಪತ್ರ ಪರಿಶೀಲನೆಯಲ್ಲಿ ಇದು ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ಬಿಲ್ ತಡೆಹಿಡಿಯಲಾಗಿದೆ ಎಂಬುದು ಆರೋಗ್ಯ ಇಲಾಖೆಯ ಸಮಜಾಯಿಷಿ.

ಬಿಆರ್‌ಎಸ್ ಕಂಪನಿ ಹಾಗು ಆರೋಗ್ಯ ಇಲಾಖೆಯ ಮೇಲಾಟದಲ್ಲಿ ಬಲಿ ಪಶುವಾಗುತ್ತಿರುವುದು ಮಾತ್ರ ನಿಸ್ಸಹಾಯಕ-ನಿರ್ಗತಿಕ ಡಯಾಲಿಸಿಸ್ ರೋಗಿಗಳು! ಬಿಆರ್‌ಎಸ್‌ನ ಎಲ್ಲ 122 ಡಯಾಲಿಸಿಸ್ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಪಾಪದ ಪೇಶೆಂಟ್‌ಗಳು ಒದ್ದಾಡುತ್ತಿದ್ದಾರೆ. ಡಯಾಲಿಸಿಸ್‌ಗೆ ಬೇಕಾದ ರಾಸಾಯನಿಕ ಔಷಧ ಡಯಲೈಸರ್ ಮುಂತಾದ ಸಲಕರಣೆ ಸೆಂಟರ್‌ಗಳಲ್ಲಿ ಇಲ್ಲದಾಗಿದೆ! ಡಯಾಲಿಸಿಸ್ ಮಾಡುವ ನರ್ಸ್, ಟೆಕ್ನಿಶಿಯನ್‌ಗಳಿಗೆ ಬೇಕಾದ ಕನಿಷ್ಟ ಕೈಗ್ಲೌಸುಗಳು, ಮಾಸ್ಕ್‌ಗಳಿಗೂ ತತ್ವಾರವಾಗಿದೆ.

ಕೆಲವು ತಾಲ್ಲೂಕಿನ ರೋಗಿಗಳು ಅಥವಾ ಅವರ ಸಂಬಂಧಿಕರು ತೀರಾ ಅಗತ್ಯವಾದ ಪರಿಕರ-ಔಷಧ-ರಾಸಾಯನಿಕ ತಂದುಕೊಟ್ಟು ಡಯಾಲಿಸಿಸ್ ಮಾಡಿಸಿಕೊಂಡು ಹೋಗುತ್ತಿದ್ದಾರೆ. ಸರಿಯಾಗಿ ಸಂಬಳ ಸಿಗದೆ ಸಿಬ್ಬಂದಿ ಒಬ್ಬೊಬ್ಬರಾಗಿ ಬಿಆರ್‌ಎಸ್ ಕಂಪನಿ ಬಿಟ್ಟು ಹೋಗುತ್ತಿರುವುದು, ರೋಗಿಗಳು ಮತ್ತವರ ಪರಿವಾರದವರನ್ನು ಚಿಂತೆಗೀಡುಮಾಡಿದೆ! ಸರ್ಕಾರದಿಂದ ಬರೋಬ್ಬರಿ 28 ಕೋಟಿ ಹಣ ಬರದಿರುವುದರಿಂದ ಡಯಾಲಿಸಿಸ್ ಸೆಂಟರ್‌ಗಳನ್ನು ನಡೆಸುವುದು ಸಾಧ್ಯವೇ ಇಲ್ಲವೆಂದು ಬಿಆರ್‌ಎಸ್ ಕಂಪನಿಯವರು ಹೇಳುತ್ತಿದ್ದಾರೆ. ಹಾಗಂತ ಸಂಬಂಧಿಸಿದ ಸಚಿವ ಅಧಿಕಾರಿಗಳಿಗೂ ಪತ್ರ ಬರೆದಿರುವುದಾಗಿ ಬಿಆರ್‌ಎಸ್ ಕಂಪನಿ ಹೇಳಿಯೂ ಆಗಿದೆ.

ಇದು ಪರ್ಸೆಂಟೇಜ್ ಪರಾಕ್ರಮದ ಅಡ್ಡ ಪರಿಣಾಮವೆಂಬ ಆರೋಪವೂ ಕೇಳಿ ಬರುತ್ತಿದೆ. ಈಗಲಾದರೂ ಆರೋಗ್ಯ ಮಂತ್ರಿ ಹಾಗು ಆ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ಡಯಾಲಿಸಿಸ್ ಪೇಶೆಂಟ್‌ಗಳು ಸಾಲು ಸಾಲಾಗಿ ಸಾಯುವುದು ಖಂಡಿತ! ಆರೋಗ್ಯ ಸೌಲಭ್ಯಗಳಿಲ್ಲದೆ ಜಿಲ್ಲಾ ಕೇಂದ್ರಗಳಲ್ಲಿ ಮೊದಲೇ ಹೈರಾಣಾಗಿರುವ ಡಯಾಲಿಸಿಸ್ ರೋಗಿಗಳು ದೂರದ ಖಾಸಗಿ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ತುಂಬ ಕಷ್ಟ. ಉದಾಹರಣೆಗೆ ಉತ್ತರಕನ್ನಡದ ರೋಗಿಗಳು ಉಡುಪಿ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ಪಣಜಿಗೆ ಹೋಗಬೇಕು. ಹೋಗಲಿಕ್ಕೆ ನಾಲ್ಕೈದು ತಾಸು ಬೇಕು; ಬರುವುದಕ್ಕೆ ಅಷ್ಟೇ ಸಮಯಬೇಕು. ಡಯಾಲಿಸಿಸ್‌ಗೆ 2-3 ಗಂಟೆ ಬೇಕಾಗುತ್ತದೆ. ಅಷ್ಟರಲ್ಲಿ ರೋಗಿ ಏದುಸಿರು ಬಿಡತೊಡಗುತ್ತಾನೆ/ಳೆ. ನಸೀಬ್ ಇದ್ದರಷ್ಟೇ ಬಚಾವ್!!

ತಕ್ಷಣಕ್ಕೆ ಮಂತ್ರಿ ಡಾ. ಸುಧಾಕರ್ ಬಿಆರ್‌ಎಸ್ ಕಂಪನಿಯನ್ನು ಹಳಿಗೆ ತರಲು ಗಂಭೀರ-ನಿಷ್ಠುರ ಪ್ರಯತ್ನ ಮಾಡಬೇಕಿದೆ; ಅದಾಗದಿದ್ದರೆ ಬಡ ರೋಗಿಗಳನ್ನು ಬದುಕಿಸಲು ಬದಲಿ ವ್ಯವಸ್ಥೆ ಮಾಡಬೇಕಿದೆ. ನಂತರ ನಿಧಾನಕ್ಕೆ ಪ್ರತಿ ತಾಲ್ಲೂಕಾಸ್ಪತ್ರೆಗಳಲ್ಲಿ ಸರಕಾರದ್ದೇ ಸ್ವತಂತ್ರ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ಯೋಜನೆ ಹಾಕಿ ಕಾರ್ಯಗತಗೊಳಿಸಬೇಕಿದೆ.


ಇದನ್ನೂ ಓದಿ: ಬೀದಿಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಾಟ ಮಾಡುತ್ತಿರುವ, ದೇಶಕ್ಕಾಗಿ 28 ಚಿನ್ನದ ಪದಕ ಗೆದ್ದ ಅಂತರರಾಷ್ಟ್ರೀಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...