Homeನಿಜವೋ ಸುಳ್ಳೋFact check: ಕೊರೊನಾದಿಂದಾದ ಹಾನಿ ಭರಿಸುವಂತೆ ಚೀನಾಕ್ಕೆ ಜರ್ಮನಿ ತಾಕೀತು?

Fact check: ಕೊರೊನಾದಿಂದಾದ ಹಾನಿ ಭರಿಸುವಂತೆ ಚೀನಾಕ್ಕೆ ಜರ್ಮನಿ ತಾಕೀತು?

- Advertisement -
- Advertisement -

ಲಂಡನ್ ಮೂಲದ ಎಕ್ಸ್‌ಪ್ರೆಸ್.ಕೊ.ಯುಕೆ ಎಂಬ ಪತ್ರಿಕೆ ಏಪ್ರಿಲ್ 20 ರಂದು ವಿವಾದಾತ್ಮಕ ಶೀರ್ಷಿಕೆಯೊಂದಿಗೆ ವರದಿಯೊಂದನ್ನು ಪ್ರಕಟಿಸಿತ್ತು. ಅದರಲ್ಲಿ ಕೊರೊನಾ ಹಾನಿಗೆ ಪರಿಹಾರವಾಗಿ ಚೀನಾ ದೇಶವು ಜರ್ಮನಿಗೆ 130 ಬಿಲಿಯನ್ ಪೌಂಡ್ ಬಿಲ್ ಅನ್ನು ಕಟ್ಟಬೇಕೆಂದು ಜರ್ಮನಿಯು ಬಿಲ್‌ ಕಳಿಸಿದೆ ಎಂದು ಬರೆಯಲಾಗಿತ್ತು.ಅದಲ್ಲದೆ ಇದರ ನಂತರ ಹಲವಾರು ಮಾಧ್ಯಮಗಳು ಇದೇ ರೀತಿಯ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿದ್ದವು. ಇಂಡಿಯಾ ಟಿವಿ ನ್ಯೂಸ್, ದಿ ಔಟ್‌ಲುಕ್, ಒರಿಸ್ಸಾ ಪೋಸ್ಟ್, ಅಮರ್ ಉಜಲಾ, ಪಂಜಾಬ್ ಕೇಸರಿ ಮತ್ತು ದಿ ಎಕನಾಮಿಕ್ ಟೈಮ್ಸ್ ವರದಿಯನ್ನು ಪ್ರಕಟಿಸಿದ ಪ್ರಮುಖ ಪತ್ರಿಕೆಗಳಾಗಿವೆ. ಆದರೆ ದಿ ಔಟ್‌ಲುಕ್ ಮತ್ತು ದಿ ಎಕನಾಮಿಕ್ ಟೈಮ್ಸ್ ವರದಿಗಳು ಮಾತ್ರ ವರದಿ ಮೂಲವನ್ನು ಐಎಎನ್‌ಎಸ್ ಎಂದು ಉಲ್ಲೇಖಿಸಿದೆ.

ಬಲಪಂಥೀಯ ಪ್ರಚಾರ ವೆಬ್‌ಸೈಟ್ ಒಪಿ ಇಂಡಿಯಾಕ್ಕಾಗಿ ಬರೆಯುವ ಅಶುತೋಷ್ ಮುಗ್ಲಿಕರ್ (ಆರ್ಕೈವ್ ಲಿಂಕ್) ಮತ್ತು ಡೆಮಾಕ್ರಸಿ ನ್ಯೂಸ್ ಲೈವ್‌ನಲ್ಲಿ ಮುಖ್ಯ ಸಂಪಾದಕ ರೋಹಿತ್ ಗಾಂಧಿ (ಆರ್ಕೈವ್ ಲಿಂಕ್) ಅವರು ಏಪ್ರಿಲ್ 20 ರಂದು ದಿ ಎಕ್ಸ್‌ಪ್ರೆಸ್ ವರದಿಯಲ್ಲಿನ ಇದೇ ವಿಷಯವನ್ನು ಹಂಚಿಕೊಂಡಿದ್ದಾರೆ. ಮುಗ್ಲಿಕರ್ ಅವರ ಟ್ವೀಟ್ ಅನ್ನು ಇದುವರೆಗೆ 850 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ.ಫ್ಯಾಕ್ಟ್-ಚೆಕ್

ದಿ ಎಕ್ಸ್‌ಪ್ರೆಸ್‌ನ ಶೀರ್ಷಿಕೆಯೂ ಓದುಗರನ್ನು ತಪ್ಪುದಾರಿಗೆಳೆಯುವಂತಿದೆ. ಲೇಖನದ ಮೊದಲ ಸಾಲು ಹೀಗಿದೆ, “ಕೊರೊನಾ ಸಾಂಕ್ರಾಮಿಕದಿಂದಾಗಿ ಚೀನಾದ ವಿರುದ್ಧ ಜರ್ಮನಿ ಸಿಟ್ಟಿಗೆದ್ದಿದೆ. ಹಾನಿಯ ನಷ್ಟ ಪರಿಹಾರವಾಗಿ 130 ಬಿಲಿಯನ್ ಪೌಂಡ್ ಬಿಲ್ ಅನ್ನು ಕಟ್ಟಬೇಕೆಂದು ಜರ್ಮನಿಯು ಬಿಲ್‌ ಕಳಿಸಿದೆ ಎಂದು ಟ್ಯಾಬ್ಲಾಡ್‌ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಅಂತಹ ಬಿಲ್‌ ಅನ್ನು ಜರ್ಮನಿ ಕಳಿಸಿಲ್ಲ ಎಂದು ಕೊನೆಯಲ್ಲಿ ಬರೆದಿದೆ.

25 ಗಂಟೆಗಳ ನಂತರ ದಿ ಎಕ್ಸ್‌ಪ್ರೆಸ್ ತಪ್ಪಾದ ಶೀರ್ಷಿಕೆಯನ್ನು ಬದಲಾಯಿಸಿತು. ವೆಬ್‌ಸೈಟ್‌ನ ಪ್ರಕಾರ, ಈ ಲೇಖನವು ‘ವಿಶ್ವ’ ವಿಭಾಗದಲ್ಲಿ ಹೆಚ್ಚು ಓದಿದ ಲೇಖನವಾಗಿತ್ತು ಎಂಬುದನ್ನು ಗಮನಿಸಬೇಕು.

ಈ ವಿಷಯದ ಕುರಿತು ಫ್ಯಾಕ್‌ ಚೆಕೆ ನಡೆಸಿದಾಗ ಥಾಯ್ಬಾವೊ ಎಂಬ ವಿಯೆಟ್ನಾಮಿ ಬ್ಲಾಗ್ ಒಂದು ಲೇಖನವನ್ನು ಪ್ರಕಟಿಸಿರುವುದನ್ನು ಕಂಡುಬಂದಿದೆ. ಇದು ಚೀನಾಕ್ಕೆ ರಶೀತಿಯನ್ನು ಮಾಡಿರುವ ‘ಬಿಲ್ಡ್’ ಪತ್ರಿಕೆಯ ವರದಿಯ ಸ್ಕ್ರೀನ್‌ಶಾಟ್ (ಕೆಳಗೆ ಚಿತ್ರವಿದೆ) ಒಳಗೊಂಡಿತ್ತು. ಏಪ್ರಿಲ್ 15 ರಂದು ಬಿಲ್ಡ್ ಕೆಳಗಿನ ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಅದೇ ಶೀರ್ಷಿಕೆಯೊಂದಿಗೆ ಒಂದು ಲೇಖನವನ್ನು ಪ್ರಕಟಿಸಿತ್ತು, ಅದರಲ್ಲಿ ‘ಚೀನಾ ಈಗಾಗಲೇ ನಮಗೆ ನೀಡಬೇಕಾಗಿರುವುದು’ ಎಂದು ಬರೆದಿತ್ತು.

ಏಪ್ರಿಲ್ 18 ರಂದು, ಜರ್ಮನಿ ಮೂಲದ ನ್ಯೂಸ್ ಚಾನೆಲ್ ಡಿಡಬ್ಲ್ಯೂ, ಬಿಲ್ಡ್ ವರದಿಯ ರಶೀತಿಯನ್ನು ಪ್ರದರ್ಶಿಸುವ ಯೂಟ್ಯೂಬ್ ವರದಿಯನ್ನು ಪ್ರಕಟಿಸಿತು. ವರದಿಯ ಪ್ರಕಾರ ಲೇಖನವನ್ನು ಏಪ್ರಿಲ್ 15 ರಂದು (ಬುಧವಾರ) ಪ್ರಕಟಿಸಲಾಗಿದೆ.

ರಶೀತಿಯಲ್ಲಿನ ಕೆಲವು ವಿಷಯಗಳನ್ನು ಡಿಡಬ್ಲ್ಯೂ ವರದಿ ಮಾಡಿದೆ – ಪ್ರವಾಸೋದ್ಯಮದಲ್ಲಿ 24 ಬಿಲಿಯನ್ ಪೌಂಡ್ ಆದಾಯ ನಷ್ಟ, ಚಲನಚಿತ್ರೋದ್ಯಮಕ್ಕೆ 27.2 ಬಿಲಿಯನ್ ಪೌಂಡ್ ಆದಾಯ ನಷ್ಟ, ಜರ್ಮನ್ ವಿಮಾನಯಾನ ಲುಫ್ಥಾನ್ಸ ಗಂಟೆಗೆ 1 ಮಿಲಿಯನ್ ಪೌಂಡ್ ನಷ್ಟ ಮತ್ತು ಸಣ್ಣ ಉದ್ಯಮಗಳಿಗೆ 50 ಬಿಲಿಯನ್ ಪೌಂಡ್ ನಷ್ಟ ಎಂದು ಸೂಚಿಸಿದೆ.

ಇದಲ್ಲದೆ, ಯುಕೆ ಮೂಲದ ಫ್ಯಾಕ್ಟ್-ಚೆಕಿಂಗ್ ವೆಬ್‌ಸೈಟ್ ಫುಲ್ ಫ್ಯಾಕ್ಟ್ ಏಪ್ರಿಲ್ 20 ರಂದು ಜರ್ಮನಿಯ ವಿದೇಶಾಂಗ ಸಚಿವ ಹೆಕೊ ಮಾಸ್ ಸಂದರ್ಶನದಲ್ಲಿ ಬಿಲ್ಡ್ ಚೀನಾದಿಂದ ಹಣಕ್ಕೆ ಬೇಡಿಕೆಯೂ ಭ್ರಮೆ ಎಂದಿದ್ದಾರೆ ಎಂದು ವರದಿ ಮಾಡಿದೆ.

ಏಪ್ರಿಲ್ 15 ರಂದು, ಬರ್ಲಿನ್‌ನ ಚೀನೀ ರಾಯಭಾರ ಕಚೇರಿಯು ಮಾಧ್ಯಮಗಳ ಆರೋಪಗಳಿಗೆ ಬಿಲ್ಡ್‌ನ ಸಂಪಾದಕ ಮುಖ್ಯಸ್ಥ ಜೂಲಿಯನ್ ರೀಚೆಲ್ಟ್‌ಗೆ ಬಹಿರಂಗ ಪತ್ರ ಬರೆದು ಪ್ರತಿಕ್ರಿಯಿಸಿತು. ಚೀನಾದ ರಾಯಭಾರ ಕಚೇರಿಯ ವಕ್ತಾರ ಟಾವೊ ಲಿಲಿ ಮಾತನಾಡಿ ಚೀನಾದ ನಾಯಕತ್ವವು ಪ್ರಮುಖ ಮಾಹಿತಿಯನ್ನು ವಾರಗಳವರೆಗೆ ಮುಚ್ಚಿಟ್ಟಿತ್ತು ಎಂಬ ಆರೋಪವನ್ನು ಅಲ್ಲಗೆಲೆದಿದ್ದಾರೆ.

ಚೀನಾ ಮಾಹಿತಿಯನ್ನು ಮರೆಮಾಡಲಿಲ್ಲ ಎಂದು ಪ್ರತಿಪಾದಿಸಲು ಲಿಲಿ ವಿಶ್ವ ಆರೋಗ್ಯ ಸಂಸ್ಥೆಯ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ, ಇದು ಕೊರೊನಾ ವೈರಸ್‌ಗೆ ಸಂಬಂಧಿಸಿದ ಪ್ರಮುಖ ಘಟನೆಗಳ ಸಮಯವನ್ನು ತೋರಿಸುತ್ತದೆ. ಈ ಬಗ್ಗೆ ಲಿಲಿ ಬಿಲ್ಡ್ ಪತ್ರಿಕೋದ್ಯಮದ ಬದ್ದತೆಯನ್ನು ಪ್ರಶ್ನಿಸಿ, ಅದು ರಾಷ್ಟ್ರೀಯತೆ, ಪೂರ್ವಾಗ್ರಹ ಮತ್ತು ಸೆನೋಫೋಬಿಯಾವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದರು.

ಎರಡು ದಿನಗಳ ನಂತರ ಬಿಲ್ಡ್ ಸಂಪಾದಕ ರೀಚೆಲ್ಟ್ ಅವರು ಲಿಲಿಯ ಬರೆದ ಬಹಿರಂಗ ಪತ್ರಕ್ಕೆ ಮೌಖಿಕವಾಗಿ 3 ನಿಮಿಷಗಳ ವೀಡಿಯೊದಲ್ಲಿ ಪ್ರತಿಕ್ರಿಯಿಸಿ, ವೀಡಿಯೊದಲ್ಲಿ, ಅವರು ಚೀನಾದ ಆಂತರಿಕ ನೀತಿಗಳಾದ ಕಣ್ಗಾವಲು ಮತ್ತು ಸೆನ್ಸಾರ್ಶಿಪ್ ಅನ್ನು ಪ್ರಶ್ನಿಸಿದ್ದಾರೆ. ಮುಖ್ಯವಾಗಿ “ನಿಮ್ಮ ನಿಯಮವನ್ನು ಟೀಕಿಸುವ ಪ್ರತಿಯೊಂದು ಪತ್ರಿಕೆ ಮತ್ತು ವೆಬ್‌ಸೈಟ್‌ಗಳನ್ನು ನೀವು ಮುಚ್ಚುತ್ತೀರಿ, ಆದರೆ ಬಾವಲಿ ಸೂಪ್ ಮಾರಾಟವಾಗುವ ಸ್ಟಾಲ್‌ಗಳನ್ನಲ್ಲ. ನಿಮ್ಮ ಜನರನ್ನು ನೀವು ಮೇಲ್ವಿಚಾರಣೆ ಮಾಡುತ್ತಿಲ್ಲ, ಆದರೆ ಅವರಿಗೆ ನೀವು ಅಪಾಯವನ್ನುಂಟುಮಾಡುತ್ತಿರುವಿರಿ ಜೊತೆಗೆ ಪ್ರಪಂಚದ ಉಳಿದ ಭಾಗಗಳಿಗೂ” ಎಂದಿದ್ದಾರೆ.

China‘s embassy in Berlin wrote me an open letter because they weren‘t too happy with our Corona coverage. I responded.

Posted by Julian Reichelt on Saturday, April 18, 2020

ಆದ್ದರಿಂದ, ಲಂಡನ್ ಮೂಲದ ದಿ ಎಕ್ಸ್‌ಪ್ರೆಸ್ ವರದಿಯ ನಂತರ ಹಲವಾರು ಭಾರತೀಯ ಮಾಧ್ಯಮಗಳು ಜನರನ್ನು ದಾರಿತಪ್ಪಿಸುವ ವರದಿಯನ್ನು ಮಾಡಿವೆ. ಇದು ಕೊರೊನಾದಿಂದಾಗಿ ಜರ್ಮನಿಯೂ ಚೀನಾದಿಂದ ಪರಿಹಾರವನ್ನು ಬಯಸುತ್ತಿದೆ ಎಂದು ಸೂಚಿಸುತ್ತದೆ. ಸತ್ಯವೇನೆಂದರೆ, ಜರ್ಮನ್ ಟ್ಯಾಬ್ಲಾಯ್ಡ್ ಪತ್ರಿಕೆ ಬಿಲ್ಡ್ ಒಂದು ತನ್ನ ಅಭಿಪ್ರಾಯದ ತುಣುಕನ್ನು ಪ್ರಕಟಿಸಿ, ಕೊರೊನಾ ವೈರಸ್‌ನಿಂದ ಉಂಟಾದ ಹಾನಿಗಳಿಗೆ ಚೀನಾವನ್ನು ಹೊಣೆಗಾರನ್ನಾಗಿಸುವ ಒಂದು ವಿಚಾರವನ್ನು ಒಳಗೊಂಡಿದೆ. ಅದು ಸುಳ್ಳಾಗಿದ್ದು ಅಂತಹ ಸಾಕ್ಷ್ಯಗಳು ಸಿಕ್ಕಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...