Homeಅಂಕಣಗಳುಮೋದಿ ಸರ್ವಾಧಿಕಾರ ಇಂದಿರಾಗಾಂಧಿ ಸರ್ವಾಧಿಕಾರ ಒಂದೇನಾ?..: ಪ್ರಭಾತ್ ಪಟ್ನಾಯಕ್

ಮೋದಿ ಸರ್ವಾಧಿಕಾರ ಇಂದಿರಾಗಾಂಧಿ ಸರ್ವಾಧಿಕಾರ ಒಂದೇನಾ?..: ಪ್ರಭಾತ್ ಪಟ್ನಾಯಕ್

ಮೋದಿಯವರು ಮತ್ತು ಇಂದಿರಾಗಾಂಧಿಯವರ ನಡುವೆ ಇರುವ ವ್ಯತ್ಯಾಸಗಳು

- Advertisement -
ಮೂಲ : ಪ್ರಬಾತ್ ಪಟ್ನಾಯಕ್
ಅನು : ಬಿ. ಶ್ರೀಪಾದ ಭಟ್
ಓದುಗರಿಗೆ ಸೂಚನೆ:
ಈ ಲೇಖನದ ನಿರೂಪಣೆ ಡಿ.ಎನ್.ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಕಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು, ಪ್ರೂಫ್ ವ್ಯತ್ಯಾಸ ಎಂದು ಬಗೆಯಬಾರದೆಂದು ಕೋರುತ್ತೇವೆ.
ಮಾನವ ಹಕ್ಕುಗಳ ಮೇಲೆ ಹಲ್ಲೆ, ಅದಿಕಾರದ ಕೇಂದ್ರೀಕರಣ ಮತ್ತು ಭಯವನ್ನ ಸೃಶ್ಟಿಸುವ ವಾತವರಣ ಈ ಕಾರಣಗಳಿಗೆ ನರೇಂದ್ರ ಮೋದಿಯನ್ನ ಇಂದಿರಾ ಗಾಂದಿಯವರ ತುರ್ತುಪರಿಸ್ಥಿತಿಯ ದಿನಗಳಿಗೆ ಹೋಲಿಸಬಹುದು. ಆದರೆ ಈ ಹೋಲಿಕೆ ಇಲ್ಲಿಗೆ ನಿಲ್ಲುತ್ತದೆ. ವಾಸ್ತವದಲ್ಲಿ ಅನೇಕ ವಿಶಯಗಳಲ್ಲಿ ಇವರಿಬ್ಬರೂ ತುಂಬಾ ಬಿನ್ನವಾಗಿದ್ದಾರೆ. ಮೊದಲನೆಯದಾಗಿ ತುರ್ತುಪರಿಸ್ಥಿತಿಯ ಸಂದರ್ಬದಲ್ಲಿ ದೊಂಬಿ ಹತ್ಯೆಗಳು (lynch mobs) ನಡೆಯುತ್ತಿರಲಿಲ್ಲ, ಮತಾಂದರು ಬೀದಿಯಲ್ಲಿ ನಿಂತು ಜನರನ್ನ ಹೆದರಿಸುತ್ತ ‘ರಾಶ್ಟ್ರೀಯತೆ’ಯ ಪಾಠ ಹೇಳಿಕೊಡುತ್ತಿರಲಿಲ್ಲ. ಈಗ ಸರಕಾರದ ವೈಫಲ್ಯವನ್ನ ಟೀಕೆ ಮಾಡುವವರ ಮೇಲೆ ಹಿಂದುತ್ವದ ಮತೀಯವಾದಿಗಳು ಹಲ್ಲೆ ಮಾಡಿ ತಪ್ಪು ಒಪ್ಪಿಕೊಳ್ಳುವಂತೆ ದೌರ್ಜನ್ಯ ನಡೆಸುತ್ತಿದ್ದಾರೆ. ಮತ್ತು ಈ ಪ್ರಜ್ಞಾವಂತರ ನೆತ್ತಿಯ ಮೇಲೆ ಸದಾ ಬಂದನದ ಬೀತಿಯ ಕತ್ತಿ ತೂಗುತ್ತಲೆ ಇರುತ್ತದೆ. ಫೇಸ್‍ಬುಕ್‍ನಲ್ಲಿ   ಸರಕಾರವನ್ನ ಟೀಕಿಸಿದ ಪ್ರಾದ್ಯಾಪಕರನ್ನ ಮಂಡಿಯೂರಿ ಕ್ಷಮಾಪಣೆ ಕೇಳುವಂತೆ ಮಾಡಿದ ಇತ್ತೀಚಿನ ಘಟನೆಯನ್ನ ಮರೆಯಲು ಸಾದ್ಯವಿಲ್ಲ.
ಹೊಸ ರಾಶ್ಟ್ರೀಯತೆ
ಎರಡನೆಯದಾಗಿ ಈಗಿನ ದಬ್ಬಾಳಿಕೆಯು ಹಿಂದುತ್ವವೆಂದರೆ ಅದು ‘ರಾಶ್ಟ್ರೀಯತೆ’ಯ ಸಿದ್ದಾಂತವೆಂದು ಹುಯಿಲಿಡುತ್ತಿದೆ. ಆದರೆ ಯಾವುದೆ ಸಾಮ್ಯತೆ ಇಲ್ಲದ ಸ್ವಾತಂತ್ರ್ಯ ಸಂದರ್ಬದ ಕಲೋನಿಯಲ್ ವಿರೋದಿ ರಾಶ್ಟ್ರೀಯತೆಯ ಹೆಸರನ್ನ ಬಳಸಿಕೊಂಡು ಲಾಬ ಪಡೆದುಕೊಳ್ಳುತ್ತಿದೆ. ತುರ್ತುಪರಿಸ್ಥಿತಿಯ ಕಾಲದ ದಬ್ಬಾಳಿಕೆಯಲ್ಲಿ ಇಂದಿರಾಗಾಂದಿಯವರ ಟೀಕಾಕಾರರನ್ನ ಗೌರವಾನ್ವಿತರು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗಿನ ದಬ್ಬಾಳಿಕೆಯು ಟೀಕಾಕಾರರನ್ನ ತುಚ್ಚವಾಗಿ ಪರಿಗಣಿಸುತ್ತಿದೆ  ಮತ್ತು ಅವರನ್ನ ‘ಜನವಿರೋದಿ’ ಎಂದು ಕರೆಯಲಾಗುತ್ತಿದೆ. ವಿರೋದಪಕ್ಷಗಳನ್ನ ಬ್ರಶ್ಟರು ಎಂದು ದಾಳಿ ಮಾಡಲಾಗುತ್ತಿದೆ. ಜನರ ಮುಂದೆ ಅವರ ನೈತಿಕತೆಯನ್ನ ನಾಶ ಮಾಡುವ ಉದ್ದೇಶದಿಂದ ಈ ದಬ್ಬಾಳಿಕೆ ಮಾಡಲಾಗುತ್ತಿದೆ.
ಮೂರನೆಯ ವ್ಯತ್ಯಾಸವೆಂದರೆ ಸರಕಾರವು ಮಾದ್ಯಮವನ್ನ ಕಬ್ಜಾ ಮಾಡಿಕೊಂಡಿರುವುದು. ತುರ್ತುಪರಿಸ್ಥಿತಿಯ ಸಂದರ್ಬದಲ್ಲಿ ಮುದ್ರಣ ಮಾದ್ಯಮವನ್ನ ಸೆನ್ಸಾರ್‍ಶಿಪ್ ಮಾಡಲಾಗಿತ್ತು. ಇದನ್ನ ವಿರೋದಿಸಿ ಖಾಲಿ ಪುಟಗಳಲ್ಲಿ ಪತ್ರಿಕೆಯನ್ನ ಮುದ್ರಿಸಲಾಗುತ್ತಿತ್ತು. ಈಗ (ಕೆಲವನ್ನ ಹೊರತುಪಡಿಸಿ) ಬಹುಪಾಲು ಮಾದ್ಯಮಗಳು ಹಿಂದುತ್ವದ ಅಂಗಣದಲ್ಲಿವೆ. ಈ ಮಾದ್ಯಮಗಳನ್ನ ಬಳಿಸಿಕೊಂಡು ವಿರೋದ ಪಕ್ಷಗಳನ್ನ ಬಗ್ಗುಬಡಿಯಲಾಗುತ್ತಿದೆ
ಮಾದ್ಯಮಗಳ ಬದಲಾದ ಪಾತ್ರವು ತುರ್ತುಪರಿಸ್ಥಿತಿ ಮತ್ತು ಈಗಿನ ಪರಿಸ್ಥಿತಿಯ ನಡುವಿನ ನಾಲ್ಕನೆ ಮುಖ್ಯ ವ್ಯತ್ಯಾಸ. ಬಂಡವಾಳಶಾಹಿಗಳ ಹಿತಾಸಕ್ತಿಯೊಂದಿಗೆ ಸಂಪೂರ್ಣವಾಗಿ  ಅಡವಿಟ್ಟಿರುವ ಮೋದಿ ಸರಕಾರಕ್ಕೆ ಹೋಲಿಸಿದರೆ ಇಂದಿರಾಗಾಂದಿ ಸರಕಾರವು ಬಂಡವಾಳಶಾಹಿಗಳೊಂದಿಗೆ ಅಂತರವನ್ನ ಕಾಯ್ದುಕೊಂಡಿತ್ತು  ಮತ್ತು ಬಂಡವಾಳಶಾಹಿ ವಿರೋದಿ ಮುಂಗಡಪತ್ರ ಮಂಡಿಸಿತ್ತು. ಸ್ವಾತಂತ್ರೋತ್ತರ ನಂತರ ಯಾವುದೆ ಸರಕಾರವು ಮೋದಿ ಸರಕಾರದಶ್ಟು ಬಂಡವಾಳಶಾಹಿಗಳ ಜೊತೆ ಅನೋನ್ಯತೆಯಿಂದ ಇರಲಿಲ್ಲ. ಇದು ಅಡಾನಿಯ ಖಾಸಗಿ ವಿಮಾನಗಳಲ್ಲಿ ಮೋದಿ ಸುತ್ತಾಡುವಶ್ಟರ ಮಟ್ಟಿಗೆ ಗೆಳೆತನ ಹೊಂದಿದೆ. (ತಮ್ಮ ಪತ್ನಿ ಕಮಲಾ ನೆಹರೂ ಅವರು ಸ್ವಿಸ್ ದೇಶದ ಆರೋಗ್ಯದಾಮದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾಗ ಹಿಂದುತ್ವವಾದಿಗಳು ಸದಾ ಹೀಗೆಳೆಯುವ ನೆಹರೂ ಅವರಿಗೆ ವಿದೇಶಕ್ಕೆ ತೆರಳಲು ಅವಶ್ಯಕವಾದ ಹಣವಿರಲಿಲ್ಲ. ಜಿ.ಡಿ.ಬಿರ್ಲಾ ಹಣಕಾಸು ನೆರವು ಒದಗಿಸಲು ಮುಂದಾದಾಗ ನೆಹರೂ ಆ ನೆರವನ್ನ ತಿರಸ್ಕರಿಸಿದರು. ಬದಲಿಗೆ ತಾವೆ ಹಣದ ವ್ಯವಸ್ಥೆ  ಮಾಡಿಕೊಂಡರು)
ಅಲ್ಪಸಂಖ್ಯಾತ ವಿರೋದಿ
ಅಲ್ಪಸಂಖ್ಯಾತರ ವಿರುದ್ದ ಅದರಲ್ಲೂ ಮುಸ್ಲಿಂರ ವಿರುದ್ದ ಮೋದಿ ಸರಕಾರದ ದೌರ್ಜನ್ಯ ಐದನೆ ವ್ಯತ್ಯಾಸ. ಇಂದಿರಾಗಾಂದಿಯವರ ದಬ್ಬಾಳಿಕೆಯು ಯಾವುದೆ ಜಾತಿ, ದರ್ಮ, ಜನಾಂಗದ ವಿರುದ್ದವಿರಲಿಲ್ಲ. ಇದು ತುಂಬಾ ಸರಳವಾಗಿ ತನ್ನ ರಾಜಕೀಯ ವಿರೋದಿಗಳ ವಿರುದ್ದ ಅದರಲ್ಲೂ ಮೋಸದ ಚಟುವಟಿಕೆ ಮಾಡುತ್ತಿದ್ದ ಅವರ ಮಗ ಸಂಜಯ ಗಾಂದಿಯವರ ವಿರೋದಿಗಳ ವಿರುದ್ದವಾಗಿತ್ತು. ಜೊತೆಗೆ ಇತಿಹಾಸವನ್ನ ತಿರುಚಿ ಸತ್ಯವನ್ನ ಮರೆಮಾಚಿ ಮಕ್ಕಳ ತಲೆಯೊಳಗೆ ಸುಳ್ಳುಗಳನ್ನ ತುರುಕಿ ತಮ್ಮದೆ ದೇಶದ ಪ್ರಜೆಗಳ ವಿರುದ್ದ ದ್ವೇಶ ಹುಟ್ಟಿಸುವಂತಹ ಕೆಲಸವನ್ನ ಇಂದಿರಾಗಾಂದಿ ಎಂದಿಗೂ ಮಾಡಲಿಲ್ಲ.
ವೈಜ್ಞಾನಿಕ ಮನೋದರ್ಮವನ್ನ ತಿರಸ್ಕರಿಸಿ ಅವೈಜ್ಞಾನಿಕವಾದ, ಕಟ್ಟು ಕತೆಗಳ ಸಿದ್ದಾಂತವನ್ನ ವಿಜ್ಞಾನವೆಂದು ಪ್ರತಿಪಾದಿಸುವ ಪ್ರಮಾಣಿಸಿ ನೋಡುವ ಮನೋದರ್ಮವನ್ನ ಗೇಲಿ ಮಾಡುವ ಈಗಿನ ಮೋದಿ ಸರಕಾರದ ಮನಸ್ಥಿತಿ ಆರನೆ ವ್ಯತ್ಯಾಸವಾಗಿದೆ. ಕಳೆದ ಅನೇಕ ದಶಕಗಳಿಂದ ಆರೆಸ್ಸಸ್ ಈ ತರಹದ ಮತಿಹೀನ ಸಿದ್ದಾಂತಗಳನ್ನ ಪ್ರಚಾರ ಮಾಡುತ್ತಿತ್ತು ಇಂದು ಇದು ಸರಕಾರದ ಇಲಾಖೆಗಳಲ್ಲಿ ವ್ಯಾಪಿಸಿಕೊಂಡಿದೆ. ಬಾರತೀಯ ವಿಜ್ಞಾನ ಕಾಂಗ್ರೆಸ್ ಸಹ ಇದರಿಂದ ಹೊರತಾಗಿಲ್ಲ.
ಮೋದಿ ಸರಕಾರವು ಸಾರ್ವಜನಿಕ ಸಂಸ್ಥೆಗಳನ್ನ ಅದರಲ್ಲೂ ಕೇಂದ್ರೀಯ ವಿಶ್ವವಿದ್ಯಾಲಯಗಳು, ರಾಜ್ಯ ವಿವಿಗಳನ್ನ ನೈತಿಕವಾಗಿ ನಾಶ ಮಾಡಿದ್ದು ಏಳನೆ ವ್ಯತ್ಯಾಸವಾಗಿದೆ. ವಿಮರ್ಶಾತ್ಮಕ ಚಿಂತನೆಗಳನ್ನ ಹತ್ತಿಕ್ಕುವುದರ ಮೂಲಕ ಬೌದ್ದಿಕವಾಗಿ ಅವುಗಳನ್ನ ಸಾಯಿಸಲಾಗುತ್ತಿದೆ. ಒಂದುವೇಳೆ ವಿಮರ್ಶಾತ್ಮಕ ಚಿಂತನೆ, ಬೋದನೆಗಳಿಗೆ ಒತ್ತಾಯಿಸಿದರೆ  ಆ ಸಾರ್ವಜನಿಕ ಸಂಸ್ಥೆಗಳಿಗೆ ಅನುದಾನವನ್ನ ನಿರಾಕರಿಸಲಾಗುತ್ತದೆ ಮತ್ತು ಜೆಎನ್‍ಯುನಲ್ಲಿ ನಡೆದಂತೆ “ರಾಶ್ಟ್ರವಿರೋದಿ”ಗಳಿಗೆ ಆಶ್ರಯ ನೀಡಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತದೆ. ಈ ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಾದ ಜೆಎನ್‍ಯು, ಹೈದರಬಾದ್ ವಿವಿ, ಪುಣೆಯ ಫಿಲ್ಮ ಇನ್ಸಟ್ಯೂಟ್, ಟಾಟಾ ಇನ್ಸಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಇತ್ಯಾದಿಗಳು ಇಂದು ಉಸಿರಾಡಲು ಕಶ್ಟಪಡುತ್ತಿರುವುದನ್ನ ಕಂಡಾಗ ಇದು ಈ ಕಾಲದ ದುರಂತವನ್ನ ಹೇಳುತ್ತದೆ. ಈ ಮುಂಚೆ ಈ ರೀತಿ ಎಂದಿಗೂ ನಡೆದಿರಲಿಲ್ಲ ಯಾವುದೆ ಸರಕಾರವು ಸ್ವತಂತ್ರ ಚಿಂತನೆಗೆ ಇಂತಹ ಅಸಡ್ಡೆ, ತಿರಸ್ಕರಾರ ತೋರಿರಲಿಲ್ಲ
ದಬ್ಬಾಳಿಕೆ
ತುರ್ತುಪರಿಸ್ಥಿತಿಯ ದಿನಗಳಿಗೂ ಮೋದಿಯ ವರ್ಶಗಳಿಗೂ ಇರುವ ಮೇಲಿನ ಈ ವ್ಯತ್ಯಾಸಗಳನ್ನ ಸಂಕ್ಷಿಪ್ತವಾಗಿ ಈ ರೀತಿ ಮಂಡಿಸಬಹುದು
ತುರ್ತುಪರಿಸ್ಥಿತಿಯು ಪ್ರಬುತ್ವದಿಂದ ಹೇರಲ್ಪಟ್ಟ ನಿರಂಕುಶ ಅದಿಕಾರವಾಗಿತ್ತು. ಸಂಪೂರ್ಣ ಕೇಂದ್ರೀಕರಣಗೊಂಡಿತ್ತು. ಅದು ಪ್ರಜಾಪ್ರಬುತ್ವದ ಸಮಾಜ ವ್ಯವಸ್ಥೆ ಮತ್ತು ಬಂಡವಾಳಶಾಹಿ ಅಬಿವೃದ್ದಿಯ ನಡುವಿನ ವೈರುಧ್ಯಗಳ ಕಾರಣದಿಂದ ಉಂಟಾಗಿತ್ತು. ಆದರೆ ಆಗ ಬಂಡವಾಳಶಾಹಿ ನೇರವಾಗಿ ಆಡಳಿತದ ಪ್ರತಿನಿದಿ ಆಗಿರಲಿಲ್ಲ. ಮೋದಿಯವರ ಈ ವರ್ಶಗಳು ಸಮಾಜದ ಮೇಲೆ ಪ್ರಬುತ್ವದ ನಿರಂಕುಶ ಅದಿಕಾರದ ದಬ್ಬಾಳಿಕೆಯ ಜೊತೆಗೆ ಅತಿಯಾಗಿ ಕೇಂದ್ರೀಕರಣಗೊಂಡಿತ್ತು. ದ್ವೇಶ ಸಾದಿಸುವ ಭಕ್ತರ ಒಂದು ಪಡೆಯನ್ನ ಪ್ರೋತ್ಸಾಹಿಸುತ್ತಿರುವ ಮೋದಿಯವರ ಆಡಳಿತ ಒಬ್ಬರನ್ನ ಮತ್ತೊಬ್ಬರ ವಿರುದ್ದ ಎತ್ತಿಕಟ್ಟುತ್ತಿದೆ. ಮತ್ತು ಬಂಡವಾಳಶಾಹಿಗಳ ಹಿತಾಸಕ್ತಿಯ ಪರವಾಗಿ ಕೆಲಸ ಮಾಡುತ್ತಿದೆ.
ಮುಂದಿನ ಕಂತು ಓದಲು ಇಲ್ಲಿ ಕ್ಲಿಕ್ಕಿಸಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...