Homeಎಂಟರ್ತೈನ್ಮೆಂಟ್ಮಂಡ್ಯದಲ್ಲೊಂದು ವಿಶಿಷ್ಠ ಸಿನಿಮಾ ಹಬ್ಬ

ಮಂಡ್ಯದಲ್ಲೊಂದು ವಿಶಿಷ್ಠ ಸಿನಿಮಾ ಹಬ್ಬ

- Advertisement -
- Advertisement -

ಸಿನಿಮಾ ಎಂದಾಕ್ಷಣ ಎಲ್ಲರಲ್ಲೂ ಆಸಕ್ತಿ ಇದ್ದೇ ಇರುತ್ತದೆ. ಸಿನಿಮಾ ಬಗ್ಗೆ ತಿಳಿದುಕೊಳ್ಳುವ, ವಿಮರ್ಶಿಸುವ, ಚರ್ಚಿಸುವ ಸಿನಿಮಾಸಕ್ತರಿಗೆ ‘ಮನುಜಮತ ಸಿನಿಯಾನ’ ತಂಡ ನಡೆಸಿಕೊಡುವ ಸಿನಿಮಾ ಪ್ರದರ್ಶನದ ಸಿನಿಹಬ್ಬಗಳು ವಿಶಿಷ್ಟ ಪ್ರಯೋಗಗಳಿಗೆ ಹಿಡಿದ ಕನ್ನಡಿಯಂತಿವೆ. ಈ ತಂಡದಲ್ಲಿ ವಿಶ್ವದ ಸಿನಿಮಾಗಳ ಬಗ್ಗೆ ವಿಭಿನ್ನವಾಗಿ ಚಿಂತಿಸುವ ಹಲವು ಮುಖಗಳು ಸಕ್ರಿಯವಾಗಿ ತೊಡಗಿಸಿಕೊಂಡು, ಸದಾಕಾಲ ಸಿನಿಪ್ರೇಮಿಗಳಿಗೆ ಚಲನಚಿತ್ರ ರಸಗ್ರಹಣದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡುವ ಸಫಲ ಪ್ರಯತ್ನಗಳನ್ನು ಮಾಡಿಕೊಂಡು ಬಂದಿದ್ದಾರೆ.

ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೊಂದಿರುವ ಫಣಿರಾಜ್‍ರಂತಹ ಸಿನಿ ಮೇಧಾವಿಗಳು ತಮ್ಮ ಸಿನಿಮಾ ಜ್ಞಾನವನ್ನು ಹಲವರಿಗೆ ಧಾರೆ ಎರೆಯುತ್ತಾ, ಈ ತಂಡವನ್ನು ಮುನ್ನೆಲೆಗೆ ತಂದಿರುವುದು ಸಂತಸದ ಸಂಗತಿ. ಬರೀ ಮಾಸ್, ಕ್ಲಾಸ್, ಹೊಡೆದಾಟ, ಕಾಮಿಡಿ ಡೈಲಾಗ್‍ಗಳ ಸಿನಿಮಾಗಳಿಗೆ ಮೀಸಲಾದ ಹಲವು ಯುವ ಮನಸ್ಸುಗಳಿಗೆ ಪ್ರಾಪಂಚಿಕ ಸಿನಿಮಾಗಳ ಕಡೆ ಒಲವು ಮೂಡಿಸಿದ ಕೀರ್ತಿ ತಂಡದ ಎಲ್ಲಾ ಸಂಘಟಕರಿಗೂ ಸಲ್ಲುತ್ತದೆ. ಅದರಲ್ಲೂ ಯದುನಂದನ್, ರೋಹಿತ್ ಅಗಸರಹಳ್ಳಿ, ಕುಮಾರ್ ರೈತ, ಮನು ಮೈಸೂರು, ಐವನ್ ಡಿ ಸಿಲ್ವ, ಹರ್ಷ ಕುಮಾರ್ ಕುಗ್ವೆ, ಜಿ.ಟಿ ಸತೀಶ್ ಹಾಗೂ ಹೊನ್ನಾಳಿ ಚಂದ್ರಶೇಖರ್ ಸೇರಿದಂತೆ ಹಲವು ಘಟಾನುಘಟಿ ಸಿನಿ ಸಂಘಟಕರು ಈ ಕೆಲಸಕ್ಕೆ ಕೈಹಾಕಿರುವುದು ಸಿನಿಹಬ್ಬಗಳ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.

ಗಂಡು-ಹೆಣ್ಣು, ಜಾತಿ-ಮತ, ಪ್ರಾಂತ್ಯಗಳ ಭೇದವಿಲ್ಲದೇ ಒಂದೇ ಸ್ಥಳದಲ್ಲಿ ಒಟ್ಟಾಗಿ ಕುಳಿತು ಸಿನಿಮಾಗಳನ್ನು ನೋಡಿ, ಆ ಸಿನಿಮಾದ ಹಲವು ಆಯಾಮಗಳನ್ನು ಚರ್ಚಿಸಿ, ವಿಮರ್ಶಿಸುವ, ಸಿನಿಮಾಗಳ ಬಗ್ಗೆ ಸಲಹೆ, ಮಾಹಿತಿ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ನಡೆಯುವ ಇಂತಹ ಸಿನಿಹಬ್ಬಗಳ ಪ್ರಯತ್ನ ನಿಜಕ್ಕೂ ಸಾರ್ಥಕ. ಇದಲ್ಲದೇ ಮನುಜಮತ ಸಿನಿಯಾನ ವಾಟ್ಸಾಪ್ ಗ್ರೂಪಿನಲ್ಲಿ ಹಲವು ಸಿನಿಮಾಗಳ ಬಗ್ಗೆ ಚರ್ಚೆಯಾಗುತ್ತವೆ. ಉತ್ತಮ ಮಾಹಿತಿಗಳು ಪರಸ್ಪರ ಹಂಚಿಕೆಯಾಗುತ್ತಿವೆ.

ಗ್ಲೋರಿ ಸಿನಿಮಾದ ದೃಶ್ಯ

ಸಿನಿಹಬ್ಬಕ್ಕೆ ಸಂಬಂಧಿಸಿದಂತೆ ಮೊದಲು ಸಿನಿಹಬ್ಬ ನಡೆಸುವ ಸ್ಥಳ ನಿಗದಿಯಾಗಿ, ದಿನ ಗೊತ್ತು ಮಾಡಿ, ಥೀಮ್ ಆಯ್ಕೆ ಮಾಡಿ, ಆ ಥೀಮ್‍ಗೆ ಸಂಬಂಧಿಸಿದ ಸಿನಿಮಾಗಳನ್ನು ಹೆಕ್ಕಿ ತೆಗೆದು, ಆ ಸಿನಿಮಾಗಳನ್ನು ವೀಕ್ಷಿಸಿ ಅತ್ಯುತ್ತಮವಾದ ಸಾಕ್ಷ್ಯಚಿತ್ರ, ಕಿರುಚಿತ್ರ ಸೇರಿದಂತೆ ಸುಮಾರು 7-8 ಸಿನಿಮಾಗಳನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿ, ಸಿನಿಹಬ್ಬದಂದು ಪ್ರದರ್ಶಿಸಲಾಗುತ್ತದೆ. ಸಿನಿಹಬ್ಬದ ಮತ್ತೊಂದು ವಿಶೇಷವೆಂದರೆ ಊಟದ ಮೆನು. ಯಾವ ಯಾವ ಭಾಗದಲ್ಲಿ ಸಿನಿಹಬ್ಬ ಜರುಗುತ್ತದೆಯೋ ಆ ಭಾಗದಲ್ಲಿ ವಿಶೇಷ ತಿನಿಸುಗಳನ್ನು ಉಣಬಡಿಸುವುದು ವಿಶೇಷ. ಸಿನಿಮಾಗಳ ಹೂರಣ ಹಾಗೂ ನಿಸರ್ಗದ ಕಡೆ ಚಾರಣ – ಇದು ಸಿನಿಹಬ್ಬದ ಪ್ಲಸ್ ಪಾಯಿಂಟ್.

ಇದನ್ನು ಓದಿ: ಮನುಜಮತ ಸಿನೆಮಾ ಹಬ್ಬ : ಹೊಸ ಕಾಲದ ಸಮುದಾಯ ಕಟ್ಟುವ ನಡೆ

ಮಂಡ್ಯ ಸಿನಿಮಾ ಹಬ್ಬ

ಈ ಬಾರಿ ಮನುಜಮತ ಸಿನಿಯಾದ ಸಂಘಟಕರು ಮಂಡ್ಯದಲ್ಲಿ ಸಿನಿಹಬ್ಬವನ್ನು ಆಯೋಜಿಸಿದ್ದರು. ಯಾವುದೇ ಕೊರತೆಗಳು ನುಸುಳದಂತೆ ಅಚ್ಚುಕಟ್ಟಾಗಿ ನಿಭಾಯಿಸಿದ ಸಿನಿಹಬ್ಬದ ಸಂಘಟಕರು ಅಭಿನಂದನಾರ್ಹರು. ಇಲ್ಲಿ ‘ಮಾಧ್ಯಮ ರಾಜಕಾರಣ’ ಎಂಬ ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಅನುಸರಿಸುತ್ತಿರುವ ಧೋರಣೆಗಳು ಹಾಗೂ ಕೆಲವು ಮಾಧ್ಯಮಗಳ ಕರಾಳ ಮುಖವನ್ನು ತೆರೆದಿಡಲು ಪ್ರಯತ್ನಿಸಿತು. ಮಾಧ್ಯಮಗಳು ತಮ್ಮ ಟಿ.ಆರ್.ಪಿ ಎಂಬ ವ್ಯಾವಹಾರಿಕ ಪ್ರಜ್ಞೆಯಿಂದ ಸಾಮಾಜಿಕ ಪ್ರಜ್ಞೆಯನ್ನು ಮರೆತಿದ್ದಾರೆ. ಮಾಧ್ಯಮಗಳ ಕೆಲವು ಸುಳ್ಳು ಸುದ್ದಿಗಳ ಪ್ರಸಾರದಿಂದ ನಿಜ ಯಾವುದು? ಸುಳ್ಳು ಯಾವುದು? ಎಂಬ ಗೊಂದಲ ಮೂಡುವುದಂತೂ ಸತ್ಯ. ಇದು ಹುಲಿ ಬಂತು ಹುಲಿ ಕಥೆಯ ಹಾಗೇ ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ.

ಎರಡು ದಿನಗಳ ಕಾಲ ನಡೆದ ಮಂಡ್ಯ ಸಿನಿಹಬ್ಬದಲ್ಲಿ ಮೊದಲಿಗೆ ಫಾಲನ್ ಆರ್ಟ್ ಎಂಬ ಕಿರುಚಿತ್ರದೊಂದಿಗೆ ಪ್ರಾರಂಭವಾಗಿ ಸ್ಪಾಟ್‍ಲೈಟ್, ಪೀಪ್ಲಿಲೈವ್, ದಿ ರೆವಲ್ಯೂಷನ್ ವಿಲ್ ನಾಟ್ ಬಿ ಟೆಲಿವೈಸ್ಡ್, ಈಡಿ ಟಿವಿ ಹಾಗೂ ಗ್ಲೋರಿ ಚಲನಚಿತ್ರ ಪ್ರದರ್ಶನಗಳೊಂದಿಗೆ ಸಿನಿಹಬ್ಬ ಮುಕ್ತಾಯಗೊಂಡಿತು.

ಪೋಲ್ಯಾಂಡಿನ ‘ಫಾಲನ್ ಆರ್ಟ್’ ಕಿರುಚಿತ್ರವು ಪೋಲ್ಯಾಂಡಿನ ರಾಜಕೀಯ ವ್ಯವಸ್ಥೆಯನ್ನು ಹಾಗೂ ಅಲ್ಲಿನ ಮಾಧ್ಯಮಗಳ ಕಠೋರತೆಯನ್ನು ತಿಳಿಸುತ್ತದೆ. 2015ರಲ್ಲಿ ತೆರೆಕಂಡ ಹಾಲಿವುಡ್‍ನ ‘ಸ್ಪಾಟ್‍ಲೈಟ್’ ಚಿತ್ರವು ಪತ್ರಿಕೆಯಲ್ಲಿ ಪ್ರಕಟವಾದ ಸತ್ಯಘಟನೆಯನ್ನು ಆಧರಿಸಿದೆ. ಬೋಸ್ಟನ್ ನಗರದ ಚರ್ಚ್‍ಗಳಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ಹೊರಗೆಳೆಯುವ ಸಂದರ್ಭದಲ್ಲಿ ಪತ್ರಕರ್ತರು ಅನುಭವಿಸಿದ ನೋವು-ಅವಮಾನಗಳನ್ನು ಚಿತ್ರವು ತೆರೆದಿಡುತ್ತದೆ.

2010ರಲ್ಲಿ ಭಾರತದಲ್ಲಿ ತೆರೆಕಂಡ ಅನುಷ್ಕ ರಿಜ್ವಿ ನಿರ್ದೇಶನದ ‘ಪೀಪ್ಲಿ ಲೈವ್’ ಚಿತ್ರವು ಒಬ್ಬ ಸಾಮಾನ್ಯ ಬಡರೈತನ ಬದುಕನ್ನು ಮಾಧ್ಯಮಗಳು ಹೇಗೆ ಬಿಂಬಿಸುತ್ತವೆ ಎಂಬುದನ್ನು ತೋರಿಸುತ್ತದೆ. ಭೂಮಿ ಕಳೆದುಕೊಂಡು ಸಾಲ ತೀರಿಸಲಾಗದೇ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ, ಸರ್ಕಾರದಿಂದ ತನ್ನ ಕುಟುಂಬಕ್ಕೆ ಪರಿಹಾರಧನ ಕೊಡಿಸಲು ಹೆಣಗಾಡುವ ನಾಥೂದಾಸ್ ಎಂಬ ಬಡರೈತ ಒಂದು ಕಡೆ, ಅದನ್ನೇ ದುರುಪಯೋಗ ಪಡಿಸಿಕೊಂಡು ರೈತನ ಆತ್ಮಹತ್ಯೆಯನ್ನು ಲೈವ್ ಆಗಿ ತೋರಿಸುವ ಪ್ರಯತ್ನಿಸುವ ಮಾಧ್ಯಮಗಳ ಕೆಟ್ಟ ಮನಸ್ಥಿತಿಯನ್ನು ಈ ಚಿತ್ರವು ಬಿಚ್ಚಿಡುತ್ತದೆ.

2003ರಲ್ಲಿ ತಯಾರಾದ ‘The Revolution will not be televisied’ ಎಂಬ ಸಾಕ್ಷ್ಯಾಚಿತ್ರವು ವೆನಿಜುವೆಲಾದ ಅಧ್ಯಕ್ಷ ಹ್ಯುಗೋ ಚಾವೆಝ್‍ರ ಪರ, ವಿರೋಧಗಳ ಜನತೆ ನಡೆಸಿದ ಪ್ರತಿಭಟನೆಯನ್ನು ತೆರೆದಿಡುತ್ತದೆ. ಮಿಲಿಟರಿ ಮತ್ತು ನಿರಂಕುಶ ಆಡಳಿತದ ತಾರ್ಕಿಕ ಸಂಘರ್ಷಗಳ ಬಗ್ಗೆ ಹಾಗೂ ಅಲ್ಲಿನ ಜನರಿಗೆ ಚಾವೆಝ್ ಮೇಲಿದ್ದ ಅಭಿಮಾನವನ್ನು ಚಿತ್ರವು ಸಾರಿ ಹೇಳುತ್ತದೆ. ನೈಜವಾಗಿ ಚಿತ್ರೀಕರಿಸಿರುವ ಈ ಸಾಕ್ಷ್ಯಾಚಿತ್ರವು ತುಂಬಾ ಅದ್ಭುತವಾಗಿ ಮೂಡಿಬಂದಿದೆ.

1999ರಲ್ಲಿ ತೆರೆಕಂಡ ಹಾಲಿವುಡ್‍ನ ‘ಈಡಿ ಟಿವಿ’ ಚಿತ್ರದಲ್ಲಿ ಮಾಧ್ಯಮಗಳ ಮತ್ತೊಂದು ಮುಖವನ್ನು ಅನಾವರಣ ಮಾಡಲಾಗಿದೆ. ಭಾರತದಲ್ಲಿ ಪ್ರಸ್ತುತವಾಗಿ ರಿಯಾಲಿಟಿ ಷೋಗಳದ್ದೇ ಕಾರುಬಾರು. ಈ ರಿಯಾಲಿಟಿ ಷೋಗಳಿಂದ ವ್ಯಕ್ತಿಗಳ ವೈಯಕ್ತಿಕ ಬದುಕು ಹರಣವಾಗುತ್ತಿದೆ ಎಂಬುದನ್ನು ಈ ಚಿತ್ರವು ತಿಳಿಸುತ್ತದೆ. ಕೆಲವು ವರ್ಷಗಳ ಹಿಂದೆ ನಡೆದ ಸಿದ್ದಿ ಜನಾಂಗದ ಆದಿವಾಸಿ ಹುಡುಗ ರಾಜೇಶ್‍ನ ದುರಂತ ಅಂತ್ಯವನ್ನು ಈ ಚಿತ್ರವು ನೆನಪಿಸುತ್ತದೆ. ಪ್ರೇಕ್ಷಕರ ಮನೋರಂಜನಾ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡು ಟಿ.ಆರ್.ಪಿ ತೆವಲಿಗಾಗಿ ಮಾಧ್ಯಮಗಳು ಏನೇನೆಲ್ಲಾ ಪ್ರಸಾರ ಮಾಡುತ್ತವೆ ಎಂಬುದನ್ನು ತಿಳಿಸುತ್ತದೆ.

ಇನ್ನೂ 2016ರಲ್ಲಿ ತೆರೆಕಂಡ ಬಲ್ಗೇರಿಯಾದ ‘ಗ್ಲೋರಿ’ ಚಿತ್ರವು ಒಬ್ಬ ಸಾಮಾನ್ಯ ರೈಲ್ವೆ ಕಾರ್ಮಿಕನ ಮುಗ್ಧತೆ, ಪ್ರಾಮಾಣಿಕತೆಯನ್ನು ಹೇಗೆ ಸಮಾಜ ದುರುಪಯೋಗಪಡಿಸಿಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ. ಪೆಟ್ರೋವ್ ಅನುಭವಿಸುವ ನೋವು-ಯಾತನೆ, ಅವನಿಗಿರುವ ಮುಗ್ಧತೆ, ಪ್ರಾಮಾಣಿಕತೆ, ಸಮಯಪ್ರಜ್ಞೆ, ಪ್ರಾಣಿಪ್ರಜ್ಞೆಯನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಸಾರಿಗೆ ಮಂತ್ರಿಯ ಭ್ರಷ್ಟಾಚಾರವನ್ನು ಹೊರಗೆಳೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ, ಕಳೆದುಕೊಂಡ ವಾಚನ್ನು ಹುಡುಕಲು ಕಷ್ಟ ಪಡುವ ಪೆಟ್ರೋವ್‍ನ ಚಿತ್ರಣ ಈ ಚಿತ್ರದಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಮಾಧ್ಯಮಗಳು ಸಕಾರಾತ್ಮಕ ಸಂಗತಿಗಳಿಗಿಂತ ನಕಾರಾತ್ಮಕ ಅಂಶಗಳನ್ನೇ ಹೆಚ್ಚು ಪ್ರಸಾರ ಮಾಡುತ್ತಿರುವುದು ದುರಂತದ ಸಂಗತಿ. ಈ ಬಗ್ಗೆ ಜನ ಸಮುದಾಯ ಜಾಗೃತ ಆಗಬೇಕೆಂದು ಈ ಥೀಮ್‍ನ ಆಶಯವಾಗಿದೆ.

ನಿಮ್ಮ ಓದಿಗಾಗಿ ಮತ್ತಷ್ಟು

ಪಾಲ್ ಥಾಮಸ್ ಆಂಡರ್ಸನ್ – ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಏನಿದು ಫಿಲ್ಮ್ ಡೈರೆಕ್ಷನ್?

ಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...