Homeಎಂಟರ್ತೈನ್ಮೆಂಟ್ಮಂಡ್ಯದಲ್ಲೊಂದು ವಿಶಿಷ್ಠ ಸಿನಿಮಾ ಹಬ್ಬ

ಮಂಡ್ಯದಲ್ಲೊಂದು ವಿಶಿಷ್ಠ ಸಿನಿಮಾ ಹಬ್ಬ

- Advertisement -
- Advertisement -

ಸಿನಿಮಾ ಎಂದಾಕ್ಷಣ ಎಲ್ಲರಲ್ಲೂ ಆಸಕ್ತಿ ಇದ್ದೇ ಇರುತ್ತದೆ. ಸಿನಿಮಾ ಬಗ್ಗೆ ತಿಳಿದುಕೊಳ್ಳುವ, ವಿಮರ್ಶಿಸುವ, ಚರ್ಚಿಸುವ ಸಿನಿಮಾಸಕ್ತರಿಗೆ ‘ಮನುಜಮತ ಸಿನಿಯಾನ’ ತಂಡ ನಡೆಸಿಕೊಡುವ ಸಿನಿಮಾ ಪ್ರದರ್ಶನದ ಸಿನಿಹಬ್ಬಗಳು ವಿಶಿಷ್ಟ ಪ್ರಯೋಗಗಳಿಗೆ ಹಿಡಿದ ಕನ್ನಡಿಯಂತಿವೆ. ಈ ತಂಡದಲ್ಲಿ ವಿಶ್ವದ ಸಿನಿಮಾಗಳ ಬಗ್ಗೆ ವಿಭಿನ್ನವಾಗಿ ಚಿಂತಿಸುವ ಹಲವು ಮುಖಗಳು ಸಕ್ರಿಯವಾಗಿ ತೊಡಗಿಸಿಕೊಂಡು, ಸದಾಕಾಲ ಸಿನಿಪ್ರೇಮಿಗಳಿಗೆ ಚಲನಚಿತ್ರ ರಸಗ್ರಹಣದ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಡುವ ಸಫಲ ಪ್ರಯತ್ನಗಳನ್ನು ಮಾಡಿಕೊಂಡು ಬಂದಿದ್ದಾರೆ.

ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೊಂದಿರುವ ಫಣಿರಾಜ್‍ರಂತಹ ಸಿನಿ ಮೇಧಾವಿಗಳು ತಮ್ಮ ಸಿನಿಮಾ ಜ್ಞಾನವನ್ನು ಹಲವರಿಗೆ ಧಾರೆ ಎರೆಯುತ್ತಾ, ಈ ತಂಡವನ್ನು ಮುನ್ನೆಲೆಗೆ ತಂದಿರುವುದು ಸಂತಸದ ಸಂಗತಿ. ಬರೀ ಮಾಸ್, ಕ್ಲಾಸ್, ಹೊಡೆದಾಟ, ಕಾಮಿಡಿ ಡೈಲಾಗ್‍ಗಳ ಸಿನಿಮಾಗಳಿಗೆ ಮೀಸಲಾದ ಹಲವು ಯುವ ಮನಸ್ಸುಗಳಿಗೆ ಪ್ರಾಪಂಚಿಕ ಸಿನಿಮಾಗಳ ಕಡೆ ಒಲವು ಮೂಡಿಸಿದ ಕೀರ್ತಿ ತಂಡದ ಎಲ್ಲಾ ಸಂಘಟಕರಿಗೂ ಸಲ್ಲುತ್ತದೆ. ಅದರಲ್ಲೂ ಯದುನಂದನ್, ರೋಹಿತ್ ಅಗಸರಹಳ್ಳಿ, ಕುಮಾರ್ ರೈತ, ಮನು ಮೈಸೂರು, ಐವನ್ ಡಿ ಸಿಲ್ವ, ಹರ್ಷ ಕುಮಾರ್ ಕುಗ್ವೆ, ಜಿ.ಟಿ ಸತೀಶ್ ಹಾಗೂ ಹೊನ್ನಾಳಿ ಚಂದ್ರಶೇಖರ್ ಸೇರಿದಂತೆ ಹಲವು ಘಟಾನುಘಟಿ ಸಿನಿ ಸಂಘಟಕರು ಈ ಕೆಲಸಕ್ಕೆ ಕೈಹಾಕಿರುವುದು ಸಿನಿಹಬ್ಬಗಳ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ.

ಗಂಡು-ಹೆಣ್ಣು, ಜಾತಿ-ಮತ, ಪ್ರಾಂತ್ಯಗಳ ಭೇದವಿಲ್ಲದೇ ಒಂದೇ ಸ್ಥಳದಲ್ಲಿ ಒಟ್ಟಾಗಿ ಕುಳಿತು ಸಿನಿಮಾಗಳನ್ನು ನೋಡಿ, ಆ ಸಿನಿಮಾದ ಹಲವು ಆಯಾಮಗಳನ್ನು ಚರ್ಚಿಸಿ, ವಿಮರ್ಶಿಸುವ, ಸಿನಿಮಾಗಳ ಬಗ್ಗೆ ಸಲಹೆ, ಮಾಹಿತಿ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ನಡೆಯುವ ಇಂತಹ ಸಿನಿಹಬ್ಬಗಳ ಪ್ರಯತ್ನ ನಿಜಕ್ಕೂ ಸಾರ್ಥಕ. ಇದಲ್ಲದೇ ಮನುಜಮತ ಸಿನಿಯಾನ ವಾಟ್ಸಾಪ್ ಗ್ರೂಪಿನಲ್ಲಿ ಹಲವು ಸಿನಿಮಾಗಳ ಬಗ್ಗೆ ಚರ್ಚೆಯಾಗುತ್ತವೆ. ಉತ್ತಮ ಮಾಹಿತಿಗಳು ಪರಸ್ಪರ ಹಂಚಿಕೆಯಾಗುತ್ತಿವೆ.

ಗ್ಲೋರಿ ಸಿನಿಮಾದ ದೃಶ್ಯ

ಸಿನಿಹಬ್ಬಕ್ಕೆ ಸಂಬಂಧಿಸಿದಂತೆ ಮೊದಲು ಸಿನಿಹಬ್ಬ ನಡೆಸುವ ಸ್ಥಳ ನಿಗದಿಯಾಗಿ, ದಿನ ಗೊತ್ತು ಮಾಡಿ, ಥೀಮ್ ಆಯ್ಕೆ ಮಾಡಿ, ಆ ಥೀಮ್‍ಗೆ ಸಂಬಂಧಿಸಿದ ಸಿನಿಮಾಗಳನ್ನು ಹೆಕ್ಕಿ ತೆಗೆದು, ಆ ಸಿನಿಮಾಗಳನ್ನು ವೀಕ್ಷಿಸಿ ಅತ್ಯುತ್ತಮವಾದ ಸಾಕ್ಷ್ಯಚಿತ್ರ, ಕಿರುಚಿತ್ರ ಸೇರಿದಂತೆ ಸುಮಾರು 7-8 ಸಿನಿಮಾಗಳನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿ, ಸಿನಿಹಬ್ಬದಂದು ಪ್ರದರ್ಶಿಸಲಾಗುತ್ತದೆ. ಸಿನಿಹಬ್ಬದ ಮತ್ತೊಂದು ವಿಶೇಷವೆಂದರೆ ಊಟದ ಮೆನು. ಯಾವ ಯಾವ ಭಾಗದಲ್ಲಿ ಸಿನಿಹಬ್ಬ ಜರುಗುತ್ತದೆಯೋ ಆ ಭಾಗದಲ್ಲಿ ವಿಶೇಷ ತಿನಿಸುಗಳನ್ನು ಉಣಬಡಿಸುವುದು ವಿಶೇಷ. ಸಿನಿಮಾಗಳ ಹೂರಣ ಹಾಗೂ ನಿಸರ್ಗದ ಕಡೆ ಚಾರಣ – ಇದು ಸಿನಿಹಬ್ಬದ ಪ್ಲಸ್ ಪಾಯಿಂಟ್.

ಇದನ್ನು ಓದಿ: ಮನುಜಮತ ಸಿನೆಮಾ ಹಬ್ಬ : ಹೊಸ ಕಾಲದ ಸಮುದಾಯ ಕಟ್ಟುವ ನಡೆ

ಮಂಡ್ಯ ಸಿನಿಮಾ ಹಬ್ಬ

ಈ ಬಾರಿ ಮನುಜಮತ ಸಿನಿಯಾದ ಸಂಘಟಕರು ಮಂಡ್ಯದಲ್ಲಿ ಸಿನಿಹಬ್ಬವನ್ನು ಆಯೋಜಿಸಿದ್ದರು. ಯಾವುದೇ ಕೊರತೆಗಳು ನುಸುಳದಂತೆ ಅಚ್ಚುಕಟ್ಟಾಗಿ ನಿಭಾಯಿಸಿದ ಸಿನಿಹಬ್ಬದ ಸಂಘಟಕರು ಅಭಿನಂದನಾರ್ಹರು. ಇಲ್ಲಿ ‘ಮಾಧ್ಯಮ ರಾಜಕಾರಣ’ ಎಂಬ ಥೀಮ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಅನುಸರಿಸುತ್ತಿರುವ ಧೋರಣೆಗಳು ಹಾಗೂ ಕೆಲವು ಮಾಧ್ಯಮಗಳ ಕರಾಳ ಮುಖವನ್ನು ತೆರೆದಿಡಲು ಪ್ರಯತ್ನಿಸಿತು. ಮಾಧ್ಯಮಗಳು ತಮ್ಮ ಟಿ.ಆರ್.ಪಿ ಎಂಬ ವ್ಯಾವಹಾರಿಕ ಪ್ರಜ್ಞೆಯಿಂದ ಸಾಮಾಜಿಕ ಪ್ರಜ್ಞೆಯನ್ನು ಮರೆತಿದ್ದಾರೆ. ಮಾಧ್ಯಮಗಳ ಕೆಲವು ಸುಳ್ಳು ಸುದ್ದಿಗಳ ಪ್ರಸಾರದಿಂದ ನಿಜ ಯಾವುದು? ಸುಳ್ಳು ಯಾವುದು? ಎಂಬ ಗೊಂದಲ ಮೂಡುವುದಂತೂ ಸತ್ಯ. ಇದು ಹುಲಿ ಬಂತು ಹುಲಿ ಕಥೆಯ ಹಾಗೇ ಜನರಲ್ಲಿ ಗೊಂದಲ ಸೃಷ್ಟಿಸುತ್ತದೆ.

ಎರಡು ದಿನಗಳ ಕಾಲ ನಡೆದ ಮಂಡ್ಯ ಸಿನಿಹಬ್ಬದಲ್ಲಿ ಮೊದಲಿಗೆ ಫಾಲನ್ ಆರ್ಟ್ ಎಂಬ ಕಿರುಚಿತ್ರದೊಂದಿಗೆ ಪ್ರಾರಂಭವಾಗಿ ಸ್ಪಾಟ್‍ಲೈಟ್, ಪೀಪ್ಲಿಲೈವ್, ದಿ ರೆವಲ್ಯೂಷನ್ ವಿಲ್ ನಾಟ್ ಬಿ ಟೆಲಿವೈಸ್ಡ್, ಈಡಿ ಟಿವಿ ಹಾಗೂ ಗ್ಲೋರಿ ಚಲನಚಿತ್ರ ಪ್ರದರ್ಶನಗಳೊಂದಿಗೆ ಸಿನಿಹಬ್ಬ ಮುಕ್ತಾಯಗೊಂಡಿತು.

ಪೋಲ್ಯಾಂಡಿನ ‘ಫಾಲನ್ ಆರ್ಟ್’ ಕಿರುಚಿತ್ರವು ಪೋಲ್ಯಾಂಡಿನ ರಾಜಕೀಯ ವ್ಯವಸ್ಥೆಯನ್ನು ಹಾಗೂ ಅಲ್ಲಿನ ಮಾಧ್ಯಮಗಳ ಕಠೋರತೆಯನ್ನು ತಿಳಿಸುತ್ತದೆ. 2015ರಲ್ಲಿ ತೆರೆಕಂಡ ಹಾಲಿವುಡ್‍ನ ‘ಸ್ಪಾಟ್‍ಲೈಟ್’ ಚಿತ್ರವು ಪತ್ರಿಕೆಯಲ್ಲಿ ಪ್ರಕಟವಾದ ಸತ್ಯಘಟನೆಯನ್ನು ಆಧರಿಸಿದೆ. ಬೋಸ್ಟನ್ ನಗರದ ಚರ್ಚ್‍ಗಳಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ಹೊರಗೆಳೆಯುವ ಸಂದರ್ಭದಲ್ಲಿ ಪತ್ರಕರ್ತರು ಅನುಭವಿಸಿದ ನೋವು-ಅವಮಾನಗಳನ್ನು ಚಿತ್ರವು ತೆರೆದಿಡುತ್ತದೆ.

2010ರಲ್ಲಿ ಭಾರತದಲ್ಲಿ ತೆರೆಕಂಡ ಅನುಷ್ಕ ರಿಜ್ವಿ ನಿರ್ದೇಶನದ ‘ಪೀಪ್ಲಿ ಲೈವ್’ ಚಿತ್ರವು ಒಬ್ಬ ಸಾಮಾನ್ಯ ಬಡರೈತನ ಬದುಕನ್ನು ಮಾಧ್ಯಮಗಳು ಹೇಗೆ ಬಿಂಬಿಸುತ್ತವೆ ಎಂಬುದನ್ನು ತೋರಿಸುತ್ತದೆ. ಭೂಮಿ ಕಳೆದುಕೊಂಡು ಸಾಲ ತೀರಿಸಲಾಗದೇ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ, ಸರ್ಕಾರದಿಂದ ತನ್ನ ಕುಟುಂಬಕ್ಕೆ ಪರಿಹಾರಧನ ಕೊಡಿಸಲು ಹೆಣಗಾಡುವ ನಾಥೂದಾಸ್ ಎಂಬ ಬಡರೈತ ಒಂದು ಕಡೆ, ಅದನ್ನೇ ದುರುಪಯೋಗ ಪಡಿಸಿಕೊಂಡು ರೈತನ ಆತ್ಮಹತ್ಯೆಯನ್ನು ಲೈವ್ ಆಗಿ ತೋರಿಸುವ ಪ್ರಯತ್ನಿಸುವ ಮಾಧ್ಯಮಗಳ ಕೆಟ್ಟ ಮನಸ್ಥಿತಿಯನ್ನು ಈ ಚಿತ್ರವು ಬಿಚ್ಚಿಡುತ್ತದೆ.

2003ರಲ್ಲಿ ತಯಾರಾದ ‘The Revolution will not be televisied’ ಎಂಬ ಸಾಕ್ಷ್ಯಾಚಿತ್ರವು ವೆನಿಜುವೆಲಾದ ಅಧ್ಯಕ್ಷ ಹ್ಯುಗೋ ಚಾವೆಝ್‍ರ ಪರ, ವಿರೋಧಗಳ ಜನತೆ ನಡೆಸಿದ ಪ್ರತಿಭಟನೆಯನ್ನು ತೆರೆದಿಡುತ್ತದೆ. ಮಿಲಿಟರಿ ಮತ್ತು ನಿರಂಕುಶ ಆಡಳಿತದ ತಾರ್ಕಿಕ ಸಂಘರ್ಷಗಳ ಬಗ್ಗೆ ಹಾಗೂ ಅಲ್ಲಿನ ಜನರಿಗೆ ಚಾವೆಝ್ ಮೇಲಿದ್ದ ಅಭಿಮಾನವನ್ನು ಚಿತ್ರವು ಸಾರಿ ಹೇಳುತ್ತದೆ. ನೈಜವಾಗಿ ಚಿತ್ರೀಕರಿಸಿರುವ ಈ ಸಾಕ್ಷ್ಯಾಚಿತ್ರವು ತುಂಬಾ ಅದ್ಭುತವಾಗಿ ಮೂಡಿಬಂದಿದೆ.

1999ರಲ್ಲಿ ತೆರೆಕಂಡ ಹಾಲಿವುಡ್‍ನ ‘ಈಡಿ ಟಿವಿ’ ಚಿತ್ರದಲ್ಲಿ ಮಾಧ್ಯಮಗಳ ಮತ್ತೊಂದು ಮುಖವನ್ನು ಅನಾವರಣ ಮಾಡಲಾಗಿದೆ. ಭಾರತದಲ್ಲಿ ಪ್ರಸ್ತುತವಾಗಿ ರಿಯಾಲಿಟಿ ಷೋಗಳದ್ದೇ ಕಾರುಬಾರು. ಈ ರಿಯಾಲಿಟಿ ಷೋಗಳಿಂದ ವ್ಯಕ್ತಿಗಳ ವೈಯಕ್ತಿಕ ಬದುಕು ಹರಣವಾಗುತ್ತಿದೆ ಎಂಬುದನ್ನು ಈ ಚಿತ್ರವು ತಿಳಿಸುತ್ತದೆ. ಕೆಲವು ವರ್ಷಗಳ ಹಿಂದೆ ನಡೆದ ಸಿದ್ದಿ ಜನಾಂಗದ ಆದಿವಾಸಿ ಹುಡುಗ ರಾಜೇಶ್‍ನ ದುರಂತ ಅಂತ್ಯವನ್ನು ಈ ಚಿತ್ರವು ನೆನಪಿಸುತ್ತದೆ. ಪ್ರೇಕ್ಷಕರ ಮನೋರಂಜನಾ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡು ಟಿ.ಆರ್.ಪಿ ತೆವಲಿಗಾಗಿ ಮಾಧ್ಯಮಗಳು ಏನೇನೆಲ್ಲಾ ಪ್ರಸಾರ ಮಾಡುತ್ತವೆ ಎಂಬುದನ್ನು ತಿಳಿಸುತ್ತದೆ.

ಇನ್ನೂ 2016ರಲ್ಲಿ ತೆರೆಕಂಡ ಬಲ್ಗೇರಿಯಾದ ‘ಗ್ಲೋರಿ’ ಚಿತ್ರವು ಒಬ್ಬ ಸಾಮಾನ್ಯ ರೈಲ್ವೆ ಕಾರ್ಮಿಕನ ಮುಗ್ಧತೆ, ಪ್ರಾಮಾಣಿಕತೆಯನ್ನು ಹೇಗೆ ಸಮಾಜ ದುರುಪಯೋಗಪಡಿಸಿಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ. ಪೆಟ್ರೋವ್ ಅನುಭವಿಸುವ ನೋವು-ಯಾತನೆ, ಅವನಿಗಿರುವ ಮುಗ್ಧತೆ, ಪ್ರಾಮಾಣಿಕತೆ, ಸಮಯಪ್ರಜ್ಞೆ, ಪ್ರಾಣಿಪ್ರಜ್ಞೆಯನ್ನು ಈ ಚಿತ್ರದಲ್ಲಿ ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಸಾರಿಗೆ ಮಂತ್ರಿಯ ಭ್ರಷ್ಟಾಚಾರವನ್ನು ಹೊರಗೆಳೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವ, ಕಳೆದುಕೊಂಡ ವಾಚನ್ನು ಹುಡುಕಲು ಕಷ್ಟ ಪಡುವ ಪೆಟ್ರೋವ್‍ನ ಚಿತ್ರಣ ಈ ಚಿತ್ರದಲ್ಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಮಾಧ್ಯಮಗಳು ಸಕಾರಾತ್ಮಕ ಸಂಗತಿಗಳಿಗಿಂತ ನಕಾರಾತ್ಮಕ ಅಂಶಗಳನ್ನೇ ಹೆಚ್ಚು ಪ್ರಸಾರ ಮಾಡುತ್ತಿರುವುದು ದುರಂತದ ಸಂಗತಿ. ಈ ಬಗ್ಗೆ ಜನ ಸಮುದಾಯ ಜಾಗೃತ ಆಗಬೇಕೆಂದು ಈ ಥೀಮ್‍ನ ಆಶಯವಾಗಿದೆ.

ನಿಮ್ಮ ಓದಿಗಾಗಿ ಮತ್ತಷ್ಟು

ಪಾಲ್ ಥಾಮಸ್ ಆಂಡರ್ಸನ್ – ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಏನಿದು ಫಿಲ್ಮ್ ಡೈರೆಕ್ಷನ್?

ಇದು ನಮ್ಮ ಚಿಂತನಾ ವಲಯದ ಸೋಲೂ ಹೌದು – ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...