Homeಮುಖಪುಟಟ್ರಂಪಣ್ಣನ ಜೊತೆ ಎರಡು ಲಕ್ಷ ಕೋಟಿಯ ಹೆಲಿಕ್ಯಾಪ್ಟರ್ ಒಪ್ಪಂದಕ್ಕೆ ಚರ್ಚೆ ಇಲ್ಲದೇ ಮೋದಿ ಸಹಿ ಮಾಡಿದರೆ?

ಟ್ರಂಪಣ್ಣನ ಜೊತೆ ಎರಡು ಲಕ್ಷ ಕೋಟಿಯ ಹೆಲಿಕ್ಯಾಪ್ಟರ್ ಒಪ್ಪಂದಕ್ಕೆ ಚರ್ಚೆ ಇಲ್ಲದೇ ಮೋದಿ ಸಹಿ ಮಾಡಿದರೆ?

- Advertisement -
- Advertisement -

ವಿಶ್ವದ ಅತಿ ದೊಡ್ಡ ಮಿಲಿಟರಿಯ ಮಹಾ ದಂಡನಾಯಕ ಎಂದೇ ಹೆಸರಾಗಿರೋ ಅಮೆರಿಕಾ ಅಧ್ಯಕ್ಷ ಡೊನಾಲ್ಡ ಟ್ರಂಪ ಅವರು ಭಾರತಕ್ಕೆ ಭೇಟಿ ಕೊಟ್ಟಾರ. ಆ ದೇಶದ 244 ವರ್ಷ ಹಾಗೂ ನಮ್ಮ ದೇಶದ 73ನೇ ವರ್ಷದ ಸ್ವತಂತ್ರ ಅಸ್ತಿತ್ವದಲ್ಲಿ ಕೇವಲ ಏಳು ಜನ ಅಮೆರಿಕಾ ಅಧ್ಯಕ್ಷರು ಭರತ ವರ್ಷಕ್ಕೆ ಭೇಟಿ ಕೊಟ್ಟಾರ ಅನ್ನೋದು ವಿಶೇಷ.

ಆದರ ವಿಶ್ವದ ಅತಿದೊಡ್ಡ ವಾಣಿಜ್ಯ ಉದ್ದಿಮೆಗಳನ್ನು ಹುಟ್ಟಿಸಿರುವ ದೇಶನೂ ಅಮೆರಿಕಾನ. ಅವರು ಹಂಗ ಬರಂಗಿಲ್ಲ. ತಮಗ ಲಾಭ ಇದ್ದರ ಅಷ್ಟ ಬರತಾರ. ಅದರಾಗ ಡಾನ್ ಡೋನಾಲ್ಡ್ ಅವರು ತಮ್ಮ ಮಗಳು, ಅಳಿಯ ಸೇರಿದಂಗ ಒಂದು ದೊಡ್ಡ ಹಿಂಡನ್ನ ಕರಕೊಂಡ ಬಂದಾರ. ಇಷ್ಟೆಲ್ಲಾ ಇರಬೇಕಾರ ಅವರಿಗೆ ಏನು ಲಾಭ ಇರಬಹುದು?

ನನ್ನ ಸ್ವಾಗತಕ್ಕ 60 ಲಕ್ಷದಿಂದ ಒಂದು ಕೋಟಿ ಜನಾ ಬರತಾರ ಅಂತ ಹೇಳಿ ಪ್ರಧಾನಿ ಮೋದಿ ಅವರು ನನಗ ಹೇಳ್ಯಾರ ಅಂತ ಟ್ರಂಪ ಅವರು ತಮ್ಮ ಜನಸಭೆಯೊಳಗ ಹೇಳಿಕೊಂಡಾರ. ನೀವು ಅದೀರಿ ನೋಡ್ರಿ, ಬರೇ 50 ಸಾವಿರ ಜನ ಬಂದರ ಭಾಳ ಬಂದಾರ ಅಂತ ಚಪ್ಪಾಳಿ ತಟ್ಟಿ ಕುಣೀತೀರಿ ಅಂತ ತಮ್ಮ ಬೆಂಬಲಿಗರಿಗೆ ಛೇಡಿಸಿ ಬಿಟ್ಟಾರ. ಆದರ ಅಹಮದಾಬಾದಿನ್ಯಾಗ ಅವರ ಸ್ವಾಗತಕ್ಕ ಮೊಟೆರಾದ ಸರದಾರ ಪಟೇಲ ಸ್ಟೇಡಿಯಂದಾಗ ಒಂದು ಲಕ್ಷ ಜನಾ ಸೇರಿದ್ದರು ಅಂತ ವಾಷಿಂಗಟನ್ ಪೋಸ್ಟ ವರದಿ ಮಾಡೇದ. ಬಹುಶಃ ಮೋದಿ ಅವರು ನಾವು ಹೊಸದಾಗಿ ಕಟ್ಟಿದ ಗೋಡೆಯ ಹಿಂದಿನ ಸ್ಲಂದಾಗ 60 ಲಕ್ಷ ಜನಾ ಇರತಾರ ಅಂತ ಹೇಳಿದ್ದರೇನೋ. ಟ್ರಂಪ ಅವರು ಗೋಡೆ ಅಂದಕೂಡಲೇ ಖುಷಿಯಾಗಿ ಬಿಟ್ಟಾರ. ಅವರಿಗೆ ತಾವು ಕಟ್ಟದೇ ಉಳಿದಿರುವ ಮೆಕ್ಸಿಕೋ ಗೋಡೆ ನೆನಪಾಗಿರಬೇಕು.

ಇನ್ನ ಭಾರತ ಭೇಟಿಯ ಬಂದ ಕಾರಣ ಅಂತೂ ಅವರು ಹೇಳೇಬಿಟ್ಟಾರ. ಅವರಿಗೆ 2.15 ಲಕ್ಷ ಕೋಟಿಯ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕ ನಾವು ಸಹಿ ಹಾಕೇವಿ ಅಂತ ಜಂಟೀ ಘೋಷಣೆ ಸಮಯದಾಗ ಟ್ರಂಪಣ್ಣಾರು ಹೇಳಿದರು. ಆವಾಗ ನಮ್ಮ ಪ್ರಧಾನಿ ಅವರು ಸುಮ್ಮನೇ ಇದ್ದರು. ಇಷ್ಟು ದೊಡ್ಡ ಒಪ್ಪಂದ ಭಾರತದ ಸಂಸತ್ತಿನಾಗ ಚರ್ಚೆ ಆಗೇದೋ ಇಲ್ಲೋ, ಯಾಕಾಗಿಲ್ಲಾ? ಆಗೋಕಿಂತಾ ಮೊದಲಿಗೆ ಆ ಅಧ್ಯಕ್ಷರು ಈ ಘೋಷಣೆ ಮಾಡಿರ‍್ಯಾಕ? ಹೋಗಲಿ, ಆ ಎರಡು ಲಕ್ಷ ಕೋಟಿ ರೂಪಾಯಿ ನಮಗ ಬರೋಹಂಗ ಇದ್ದರ ನಾವು ಸುಮ್ಮನೇ ಇರಬಹುದಾಗಿತ್ತು. ಆದರೆ ಅದು ನಾವು ಕೊಡಬೇಕಾದ ದಮ್ಮಡಿ. ಹಂಗಿದ್ದರ ನಮ್ಮ ಪ್ರತಿನಿಧಿಗಳು ಅದನ್ನ ಒಪ್ಪಿದಮ್ಯಾಲೆ ಅದರ ಘೋಷಣೆ ಆಗಬೇಕಿತ್ತು ಆಗಿಲ್ಲ. ಇದು ಒಂದು.

A pair of US Navy Sikorsky MH-60R Seahawks, NE 700 166541 and NE 712 166556 of HSM-77 ‘Sabrehawks’, cruise over the Pacific Ocean

ಭಾರತದ ಪ್ರಧಾನಿಗೂ ಅಮೆರಿಕಾದ ಅಧ್ಯಕ್ಷನಿಗೂ ಕೆಲವು ಮೂಲಭೂತ ವ್ಯತ್ಯಾಸ ಅವ. ಅವರಂಗ ಇವರಿಗೆ ಇರಲಿಕ್ಕೆ ಆಗಂಗಿಲ್ಲ. ಅಲ್ಲೆ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಅಧಿಕಾರಗಳು ಪ್ರತ್ಯೇಕ. ಹೀಗಾಗಿ ಅಧ್ಯಕ್ಷರು ಏನರ ನಿರ್ಧಾರ ತೊಗೊಂಡು ಹಿಂದಾಗಡೆ ಅಲ್ಲಿನ ಶಾಸಕಾಂಗದ ಒಪ್ಪಿಗೆ ತೊಗೋಬಹುದು. ತೊಗೊಳ್ಳಲಾರದನೂ ಇರಬಹುದು. ನಮ್ಮಲ್ಲಿ ಹಂಗಿಲ್ಲ. ಪ್ರತಿ ಒಂದು ರುಪಾಯಿ ಖರ್ಚಾಗಬೇಕಾದರೂ ಸಹ ಶಾಸಕಾಂಗದ ಒಪ್ಪಿಗೆ ಬೇಕು. ಅದು ಸರಿಯಾಗಿ ಬಳಕೆ ಆಗೇದ ಅಂತ ಶಾಸಕಾಂಗಕ್ಕ ಅನ್ನಿಸಬೇಕು. ಇದು ಟ್ರಂಪಣ್ಣ ಅವರಿಗೆ ಗೊತ್ತಿಲ್ಲ. ನಮ್ಮವರು ಅವರಿಗೆ ಗೊತ್ತು ಮಾಡಿಕೊಡಲಿಕ್ಕೆ ಹೋಗಿಲ್ಲ. ಇದು ಎರಡನೆದು.

ಟ್ರಂಪ ಅವರು ಭಾರತದ ಪೇಟೆಂಟ ಕಾಯಿದೆಯ ಬದಲಾವಣೆಗೆ ಒತ್ತಾಯಿಸಲಿಕ್ಕೆ, ಔಷಧ, ಕೃಷಿ ಹಾಗೂ ಕುಕ್ಕುಟ ಉದ್ಯಮಕ್ಕ ಸಂಬಂಧಪಟ್ಟ ಒಪ್ಪಂದಗಳನ್ನ ಮಾಡಲಿಕ್ಕೆ ಬರಲಿಕ್ಕೆ ಹತ್ಯಾರ. ಇದು ಹಿಡನ ಅಜಂಡಾ ಅಂತ ಕೆಲವು ಸರಕಾರದ ವಿರೋಧಿಗಳು ಹೇಳ್ಯಾರ. ಜಗತ್ತಿನೊಳಗ ಉತ್ಪನ್ನ ಪೇಟೆಂಟು ಇದ್ದರ ಭಾರತದಾಗ ಪ್ರಕ್ರಿಯೆ ಪೇಟೆಂಟು ಅದ. ಇದು ಇಂದಿರಾ ಗಾಂಧಿ ಕಾಲದಿಂದ ಅದ. ಇದರ ಪ್ರಕಾರ ಒಂದು ಔಷಧಿ ತಯಾರು ಮಾಡೋ ಒಂದು ವಿಧಾನ ಮಾತ್ರ ಪೇಟೆಂಟು ಮಾಡಬಹುದು. ಬೇರೆಯವರು ಅದೇ ಔಷಧಿ ಉಳಿದ ವಿಧಾನದಿಂದ ಮಾಡಬಹುದು. ಇದರಿಂದ ಬಡವರಿಗೆ ಕಮ್ಮಿ ಖರ್ಚಿನಾಗ ಔಷಧಿ ಸಿಗತಾವ. ಆದರ ಬ್ಯಾರೆ ದೇಶದಾಗ ಒಂದು ಔಷಧಿನ ಪೇಟೆಂಟು ಮಾಡಬಹುದು. ಅದನ್ನ ನೀವ ಹೆಂಗರ ಮಾಡರಿ, ಮೊದಲ ಅದನ್ನ ತಯಾರಿಸಿದ ಕಂಪನಿಗೆನ ರೊಕ್ಕ ಹೊಗತಾವ. ಟ್ರಂಪ ಸಾಹೇಬರು ಈ ಕಾನೂನನ್ನ ಭಾರತದಾಗ ತರಬೇಕು ಅಂತ ವಿಚಾರ ಇಟಗೊಂಡಾರ. ಅವರನ್ನ ಆರಾಧಿಸುವ ನಮ್ಮನ್ನಾಳುವವರು ಅವರ ಮಾತಿಗೆ ಹೂಂ ಅಂದರ ಆಶ್ಚರ್ಯ ಇಲ್ಲ.

ಇನ್ನ ಅಮೆರಿಕದ ಕೃಷಿ ಹಾಗೂ ಚಿಕನ್, ಮೊಟ್ಟೆ ಮುಂತಾದವನ್ನ ನಮ್ಮಲ್ಲೆ ಮುಕ್ತ ಆಮದು ಮಾಡಲಿಕ್ಕೆ ಅವಕಾಶ ಕೊಟ್ಟರ ನಮ್ಮ ರೈತರ ಗತಿ ಹೇಳಬ್ಯಾಡ್ರಿ. ಮೊದಲೇ ಸ್ವರ್ಗದ ಹಾದಿ ಹಿಡದಿರೋ ನಮ್ಮ ರೈತರು ಅಲ್ಲಿಗೆ ಹೋಗಲಿಕ್ಕೆ ಬುಲೆಟ ಟ್ರೇನು ಬುಕ್ಕ ಮಾಡತಾರ. ತನ್ನ ರೈತರಿಗೆ 63 ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ಕೊಡೋ ಅಮೇರಿಕಾ ಸರಕಾರ ನಾವು ನಮ್ಮ ರೈತರಿಗೆ ಯಾವುದೇ ಸಬ್ಸಿಡಿ ಕೊಡಬಾರದು ಅಂತ ಬದನೇಕಾಯಿ ಪುರಾಣ ಹೇಳತದ. ನಮ್ಮವರು ಬದನೇಕಾಯಿ ಭಾಷಣ ಅಂತ ಹೇಳಿ ಅದನ್ನ ತಿನ್ನೋದು ಬಿಟ್ಟು ಉಪವಾಸ ಬೀಳತಾರ.

ಇನ್ನು ವಿದೇಶಿ ಅತಿಥಿಗಳು ಭಾರತಕ್ಕ ಬಂದಾಗ ರಾಷ್ಟ್ರಪತಿ ಭವನದಾಗ ಊಟಕ್ಕ ನೀಡತಾರ. ಆಗ ಎಲ್ಲಾ ಪ್ರಮುಖ ನಾಯಕರನ್ನ ಕರೀತಾರ. ಯಾವ್ಯಾವ ಪುಣ್ಯಾತ್ಮರನ್ನ ಕರದರು ಅಂತ ನೀವು ನಾಳೆ ಯಾರರ ಸೆಲೆಬ್ರಿಟಿಗಳ ಸೆಲ್ಫೀಗಳಿಂದ ಗೊತ್ತಾಗತದ. ಅದಕ್ಕ ಏನೂ ತಲಿ ಕೆಡಿಸಿಕೋಬ್ಯಾಡ್ರಿ.

ಆದರ ಇದು ಈ ಪವಿತ್ರ ಪ್ರಜಾಸತ್ತೆಯೊಳಗ ಇದು ದಶಕಗಳಿಂದ ನಡಕೊಂಡ ಬಂದ ಸತ್ಸಂಪ್ರದಾಯ. ಇದರ ಮುಖ್ಯ ಉದ್ದೇಶ ಏನಪಾ ಅಂದರ ದೇಶ ಅನ್ನೋದು ಸರಕಾರಕ್ಕಿಂತ ದೊಡ್ಡದು. ರಾಷ್ಟ್ರಪತಿ ಭವನದಾಗ ಆಡಳಿತ ಪಕ್ಷ- ವಿರೋಧ ಪಕ್ಷ ಎರಡೂ ಕೂಡಿ ಇರತಾವ. ದೇಶದ ಮುನ್ನಡೆಗೆ ಎರಡೂ ಕಾರಣ ಆಗತಾವ ಅನ್ನೋದನ್ನ ವಿದೇಶಿ ಅತಿಥಿಗಳಿಗೆ ತೋರಿಸಿಕೊಡಲಿಕ್ಕೆ ಇದೊಂದು ಅವಕಾಶ. ಆದರ ಈ ಸಾರೆ ಈ ಔತಣಕೂಟಕ್ಕ ವಿರೋಧ ಪಕ್ಷದವರನ್ನ ಕರೆಯುವಾಗ ಪಕ್ಷಪಾತ ಆಗೇದ ಅಂತ ಹೇಳಿ ಕಾಂಗ್ರೆಸ್ ನಾಯಕ ಅಧೀರ ರಂಜನ ಚೌಧರಿ ಆರೋಪಿಸಿದರು. ಕಾಂಗ್ರೆಸನ ಹಿರಿಯ ನಾಯಕರಾದ ಸೊನಿಯಾ ಗಾಂಧಿ, ರಾಹುಲ ಗಾಂಧಿ ಹಾಗೂ ಚೌಧರಿ ಮುಂತಾದವರು ಹೋಗಿಲ್ಲ.

ನಮ್ಮ ವಿರೋಧ ಪಕ್ಷಗಳು ಅವರ ಭೇಟಿಗೆ ಹೋಗಲಾರದನ್ನ ನೋಡಿ ಟ್ರಂಪ ಅವರು ಖುಷಿಯಾಗಬಹುದು. ಯಾಕಂದರ ಅವರು ತಮ್ಮ ದೇಶದೊಳಗ ತಮ್ಮ ವಿರೋಧ ಪಕ್ಷಗಳನ್ನೂ ಹಿಂಗ ನಡಸಿಕೊಂಡಾರ. ಅದಕ್ಕ ಇರಬೇಕು ಅವರು ಭಾರತದ ಪ್ರಧಾನಿ ನನ್ನ ಅತ್ಯಂತ ಆತ್ಮೀಯ ಸ್ನೇಹಿತ ಅಂತ ಅನ್ನೋದು. ʻನಾ ಮಾಡಬೇಕಂದಿದ್ದೆಲ್ಲಾ ಅವರು ಮಾಡತಾರ ಅಂತ,ʼ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...