Homeಮುಖಪುಟಟ್ರಂಪಣ್ಣನ ಜೊತೆ ಎರಡು ಲಕ್ಷ ಕೋಟಿಯ ಹೆಲಿಕ್ಯಾಪ್ಟರ್ ಒಪ್ಪಂದಕ್ಕೆ ಚರ್ಚೆ ಇಲ್ಲದೇ ಮೋದಿ ಸಹಿ ಮಾಡಿದರೆ?

ಟ್ರಂಪಣ್ಣನ ಜೊತೆ ಎರಡು ಲಕ್ಷ ಕೋಟಿಯ ಹೆಲಿಕ್ಯಾಪ್ಟರ್ ಒಪ್ಪಂದಕ್ಕೆ ಚರ್ಚೆ ಇಲ್ಲದೇ ಮೋದಿ ಸಹಿ ಮಾಡಿದರೆ?

- Advertisement -
- Advertisement -

ವಿಶ್ವದ ಅತಿ ದೊಡ್ಡ ಮಿಲಿಟರಿಯ ಮಹಾ ದಂಡನಾಯಕ ಎಂದೇ ಹೆಸರಾಗಿರೋ ಅಮೆರಿಕಾ ಅಧ್ಯಕ್ಷ ಡೊನಾಲ್ಡ ಟ್ರಂಪ ಅವರು ಭಾರತಕ್ಕೆ ಭೇಟಿ ಕೊಟ್ಟಾರ. ಆ ದೇಶದ 244 ವರ್ಷ ಹಾಗೂ ನಮ್ಮ ದೇಶದ 73ನೇ ವರ್ಷದ ಸ್ವತಂತ್ರ ಅಸ್ತಿತ್ವದಲ್ಲಿ ಕೇವಲ ಏಳು ಜನ ಅಮೆರಿಕಾ ಅಧ್ಯಕ್ಷರು ಭರತ ವರ್ಷಕ್ಕೆ ಭೇಟಿ ಕೊಟ್ಟಾರ ಅನ್ನೋದು ವಿಶೇಷ.

ಆದರ ವಿಶ್ವದ ಅತಿದೊಡ್ಡ ವಾಣಿಜ್ಯ ಉದ್ದಿಮೆಗಳನ್ನು ಹುಟ್ಟಿಸಿರುವ ದೇಶನೂ ಅಮೆರಿಕಾನ. ಅವರು ಹಂಗ ಬರಂಗಿಲ್ಲ. ತಮಗ ಲಾಭ ಇದ್ದರ ಅಷ್ಟ ಬರತಾರ. ಅದರಾಗ ಡಾನ್ ಡೋನಾಲ್ಡ್ ಅವರು ತಮ್ಮ ಮಗಳು, ಅಳಿಯ ಸೇರಿದಂಗ ಒಂದು ದೊಡ್ಡ ಹಿಂಡನ್ನ ಕರಕೊಂಡ ಬಂದಾರ. ಇಷ್ಟೆಲ್ಲಾ ಇರಬೇಕಾರ ಅವರಿಗೆ ಏನು ಲಾಭ ಇರಬಹುದು?

ನನ್ನ ಸ್ವಾಗತಕ್ಕ 60 ಲಕ್ಷದಿಂದ ಒಂದು ಕೋಟಿ ಜನಾ ಬರತಾರ ಅಂತ ಹೇಳಿ ಪ್ರಧಾನಿ ಮೋದಿ ಅವರು ನನಗ ಹೇಳ್ಯಾರ ಅಂತ ಟ್ರಂಪ ಅವರು ತಮ್ಮ ಜನಸಭೆಯೊಳಗ ಹೇಳಿಕೊಂಡಾರ. ನೀವು ಅದೀರಿ ನೋಡ್ರಿ, ಬರೇ 50 ಸಾವಿರ ಜನ ಬಂದರ ಭಾಳ ಬಂದಾರ ಅಂತ ಚಪ್ಪಾಳಿ ತಟ್ಟಿ ಕುಣೀತೀರಿ ಅಂತ ತಮ್ಮ ಬೆಂಬಲಿಗರಿಗೆ ಛೇಡಿಸಿ ಬಿಟ್ಟಾರ. ಆದರ ಅಹಮದಾಬಾದಿನ್ಯಾಗ ಅವರ ಸ್ವಾಗತಕ್ಕ ಮೊಟೆರಾದ ಸರದಾರ ಪಟೇಲ ಸ್ಟೇಡಿಯಂದಾಗ ಒಂದು ಲಕ್ಷ ಜನಾ ಸೇರಿದ್ದರು ಅಂತ ವಾಷಿಂಗಟನ್ ಪೋಸ್ಟ ವರದಿ ಮಾಡೇದ. ಬಹುಶಃ ಮೋದಿ ಅವರು ನಾವು ಹೊಸದಾಗಿ ಕಟ್ಟಿದ ಗೋಡೆಯ ಹಿಂದಿನ ಸ್ಲಂದಾಗ 60 ಲಕ್ಷ ಜನಾ ಇರತಾರ ಅಂತ ಹೇಳಿದ್ದರೇನೋ. ಟ್ರಂಪ ಅವರು ಗೋಡೆ ಅಂದಕೂಡಲೇ ಖುಷಿಯಾಗಿ ಬಿಟ್ಟಾರ. ಅವರಿಗೆ ತಾವು ಕಟ್ಟದೇ ಉಳಿದಿರುವ ಮೆಕ್ಸಿಕೋ ಗೋಡೆ ನೆನಪಾಗಿರಬೇಕು.

ಇನ್ನ ಭಾರತ ಭೇಟಿಯ ಬಂದ ಕಾರಣ ಅಂತೂ ಅವರು ಹೇಳೇಬಿಟ್ಟಾರ. ಅವರಿಗೆ 2.15 ಲಕ್ಷ ಕೋಟಿಯ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕ ನಾವು ಸಹಿ ಹಾಕೇವಿ ಅಂತ ಜಂಟೀ ಘೋಷಣೆ ಸಮಯದಾಗ ಟ್ರಂಪಣ್ಣಾರು ಹೇಳಿದರು. ಆವಾಗ ನಮ್ಮ ಪ್ರಧಾನಿ ಅವರು ಸುಮ್ಮನೇ ಇದ್ದರು. ಇಷ್ಟು ದೊಡ್ಡ ಒಪ್ಪಂದ ಭಾರತದ ಸಂಸತ್ತಿನಾಗ ಚರ್ಚೆ ಆಗೇದೋ ಇಲ್ಲೋ, ಯಾಕಾಗಿಲ್ಲಾ? ಆಗೋಕಿಂತಾ ಮೊದಲಿಗೆ ಆ ಅಧ್ಯಕ್ಷರು ಈ ಘೋಷಣೆ ಮಾಡಿರ‍್ಯಾಕ? ಹೋಗಲಿ, ಆ ಎರಡು ಲಕ್ಷ ಕೋಟಿ ರೂಪಾಯಿ ನಮಗ ಬರೋಹಂಗ ಇದ್ದರ ನಾವು ಸುಮ್ಮನೇ ಇರಬಹುದಾಗಿತ್ತು. ಆದರೆ ಅದು ನಾವು ಕೊಡಬೇಕಾದ ದಮ್ಮಡಿ. ಹಂಗಿದ್ದರ ನಮ್ಮ ಪ್ರತಿನಿಧಿಗಳು ಅದನ್ನ ಒಪ್ಪಿದಮ್ಯಾಲೆ ಅದರ ಘೋಷಣೆ ಆಗಬೇಕಿತ್ತು ಆಗಿಲ್ಲ. ಇದು ಒಂದು.

A pair of US Navy Sikorsky MH-60R Seahawks, NE 700 166541 and NE 712 166556 of HSM-77 ‘Sabrehawks’, cruise over the Pacific Ocean

ಭಾರತದ ಪ್ರಧಾನಿಗೂ ಅಮೆರಿಕಾದ ಅಧ್ಯಕ್ಷನಿಗೂ ಕೆಲವು ಮೂಲಭೂತ ವ್ಯತ್ಯಾಸ ಅವ. ಅವರಂಗ ಇವರಿಗೆ ಇರಲಿಕ್ಕೆ ಆಗಂಗಿಲ್ಲ. ಅಲ್ಲೆ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದ ಅಧಿಕಾರಗಳು ಪ್ರತ್ಯೇಕ. ಹೀಗಾಗಿ ಅಧ್ಯಕ್ಷರು ಏನರ ನಿರ್ಧಾರ ತೊಗೊಂಡು ಹಿಂದಾಗಡೆ ಅಲ್ಲಿನ ಶಾಸಕಾಂಗದ ಒಪ್ಪಿಗೆ ತೊಗೋಬಹುದು. ತೊಗೊಳ್ಳಲಾರದನೂ ಇರಬಹುದು. ನಮ್ಮಲ್ಲಿ ಹಂಗಿಲ್ಲ. ಪ್ರತಿ ಒಂದು ರುಪಾಯಿ ಖರ್ಚಾಗಬೇಕಾದರೂ ಸಹ ಶಾಸಕಾಂಗದ ಒಪ್ಪಿಗೆ ಬೇಕು. ಅದು ಸರಿಯಾಗಿ ಬಳಕೆ ಆಗೇದ ಅಂತ ಶಾಸಕಾಂಗಕ್ಕ ಅನ್ನಿಸಬೇಕು. ಇದು ಟ್ರಂಪಣ್ಣ ಅವರಿಗೆ ಗೊತ್ತಿಲ್ಲ. ನಮ್ಮವರು ಅವರಿಗೆ ಗೊತ್ತು ಮಾಡಿಕೊಡಲಿಕ್ಕೆ ಹೋಗಿಲ್ಲ. ಇದು ಎರಡನೆದು.

ಟ್ರಂಪ ಅವರು ಭಾರತದ ಪೇಟೆಂಟ ಕಾಯಿದೆಯ ಬದಲಾವಣೆಗೆ ಒತ್ತಾಯಿಸಲಿಕ್ಕೆ, ಔಷಧ, ಕೃಷಿ ಹಾಗೂ ಕುಕ್ಕುಟ ಉದ್ಯಮಕ್ಕ ಸಂಬಂಧಪಟ್ಟ ಒಪ್ಪಂದಗಳನ್ನ ಮಾಡಲಿಕ್ಕೆ ಬರಲಿಕ್ಕೆ ಹತ್ಯಾರ. ಇದು ಹಿಡನ ಅಜಂಡಾ ಅಂತ ಕೆಲವು ಸರಕಾರದ ವಿರೋಧಿಗಳು ಹೇಳ್ಯಾರ. ಜಗತ್ತಿನೊಳಗ ಉತ್ಪನ್ನ ಪೇಟೆಂಟು ಇದ್ದರ ಭಾರತದಾಗ ಪ್ರಕ್ರಿಯೆ ಪೇಟೆಂಟು ಅದ. ಇದು ಇಂದಿರಾ ಗಾಂಧಿ ಕಾಲದಿಂದ ಅದ. ಇದರ ಪ್ರಕಾರ ಒಂದು ಔಷಧಿ ತಯಾರು ಮಾಡೋ ಒಂದು ವಿಧಾನ ಮಾತ್ರ ಪೇಟೆಂಟು ಮಾಡಬಹುದು. ಬೇರೆಯವರು ಅದೇ ಔಷಧಿ ಉಳಿದ ವಿಧಾನದಿಂದ ಮಾಡಬಹುದು. ಇದರಿಂದ ಬಡವರಿಗೆ ಕಮ್ಮಿ ಖರ್ಚಿನಾಗ ಔಷಧಿ ಸಿಗತಾವ. ಆದರ ಬ್ಯಾರೆ ದೇಶದಾಗ ಒಂದು ಔಷಧಿನ ಪೇಟೆಂಟು ಮಾಡಬಹುದು. ಅದನ್ನ ನೀವ ಹೆಂಗರ ಮಾಡರಿ, ಮೊದಲ ಅದನ್ನ ತಯಾರಿಸಿದ ಕಂಪನಿಗೆನ ರೊಕ್ಕ ಹೊಗತಾವ. ಟ್ರಂಪ ಸಾಹೇಬರು ಈ ಕಾನೂನನ್ನ ಭಾರತದಾಗ ತರಬೇಕು ಅಂತ ವಿಚಾರ ಇಟಗೊಂಡಾರ. ಅವರನ್ನ ಆರಾಧಿಸುವ ನಮ್ಮನ್ನಾಳುವವರು ಅವರ ಮಾತಿಗೆ ಹೂಂ ಅಂದರ ಆಶ್ಚರ್ಯ ಇಲ್ಲ.

ಇನ್ನ ಅಮೆರಿಕದ ಕೃಷಿ ಹಾಗೂ ಚಿಕನ್, ಮೊಟ್ಟೆ ಮುಂತಾದವನ್ನ ನಮ್ಮಲ್ಲೆ ಮುಕ್ತ ಆಮದು ಮಾಡಲಿಕ್ಕೆ ಅವಕಾಶ ಕೊಟ್ಟರ ನಮ್ಮ ರೈತರ ಗತಿ ಹೇಳಬ್ಯಾಡ್ರಿ. ಮೊದಲೇ ಸ್ವರ್ಗದ ಹಾದಿ ಹಿಡದಿರೋ ನಮ್ಮ ರೈತರು ಅಲ್ಲಿಗೆ ಹೋಗಲಿಕ್ಕೆ ಬುಲೆಟ ಟ್ರೇನು ಬುಕ್ಕ ಮಾಡತಾರ. ತನ್ನ ರೈತರಿಗೆ 63 ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ಕೊಡೋ ಅಮೇರಿಕಾ ಸರಕಾರ ನಾವು ನಮ್ಮ ರೈತರಿಗೆ ಯಾವುದೇ ಸಬ್ಸಿಡಿ ಕೊಡಬಾರದು ಅಂತ ಬದನೇಕಾಯಿ ಪುರಾಣ ಹೇಳತದ. ನಮ್ಮವರು ಬದನೇಕಾಯಿ ಭಾಷಣ ಅಂತ ಹೇಳಿ ಅದನ್ನ ತಿನ್ನೋದು ಬಿಟ್ಟು ಉಪವಾಸ ಬೀಳತಾರ.

ಇನ್ನು ವಿದೇಶಿ ಅತಿಥಿಗಳು ಭಾರತಕ್ಕ ಬಂದಾಗ ರಾಷ್ಟ್ರಪತಿ ಭವನದಾಗ ಊಟಕ್ಕ ನೀಡತಾರ. ಆಗ ಎಲ್ಲಾ ಪ್ರಮುಖ ನಾಯಕರನ್ನ ಕರೀತಾರ. ಯಾವ್ಯಾವ ಪುಣ್ಯಾತ್ಮರನ್ನ ಕರದರು ಅಂತ ನೀವು ನಾಳೆ ಯಾರರ ಸೆಲೆಬ್ರಿಟಿಗಳ ಸೆಲ್ಫೀಗಳಿಂದ ಗೊತ್ತಾಗತದ. ಅದಕ್ಕ ಏನೂ ತಲಿ ಕೆಡಿಸಿಕೋಬ್ಯಾಡ್ರಿ.

ಆದರ ಇದು ಈ ಪವಿತ್ರ ಪ್ರಜಾಸತ್ತೆಯೊಳಗ ಇದು ದಶಕಗಳಿಂದ ನಡಕೊಂಡ ಬಂದ ಸತ್ಸಂಪ್ರದಾಯ. ಇದರ ಮುಖ್ಯ ಉದ್ದೇಶ ಏನಪಾ ಅಂದರ ದೇಶ ಅನ್ನೋದು ಸರಕಾರಕ್ಕಿಂತ ದೊಡ್ಡದು. ರಾಷ್ಟ್ರಪತಿ ಭವನದಾಗ ಆಡಳಿತ ಪಕ್ಷ- ವಿರೋಧ ಪಕ್ಷ ಎರಡೂ ಕೂಡಿ ಇರತಾವ. ದೇಶದ ಮುನ್ನಡೆಗೆ ಎರಡೂ ಕಾರಣ ಆಗತಾವ ಅನ್ನೋದನ್ನ ವಿದೇಶಿ ಅತಿಥಿಗಳಿಗೆ ತೋರಿಸಿಕೊಡಲಿಕ್ಕೆ ಇದೊಂದು ಅವಕಾಶ. ಆದರ ಈ ಸಾರೆ ಈ ಔತಣಕೂಟಕ್ಕ ವಿರೋಧ ಪಕ್ಷದವರನ್ನ ಕರೆಯುವಾಗ ಪಕ್ಷಪಾತ ಆಗೇದ ಅಂತ ಹೇಳಿ ಕಾಂಗ್ರೆಸ್ ನಾಯಕ ಅಧೀರ ರಂಜನ ಚೌಧರಿ ಆರೋಪಿಸಿದರು. ಕಾಂಗ್ರೆಸನ ಹಿರಿಯ ನಾಯಕರಾದ ಸೊನಿಯಾ ಗಾಂಧಿ, ರಾಹುಲ ಗಾಂಧಿ ಹಾಗೂ ಚೌಧರಿ ಮುಂತಾದವರು ಹೋಗಿಲ್ಲ.

ನಮ್ಮ ವಿರೋಧ ಪಕ್ಷಗಳು ಅವರ ಭೇಟಿಗೆ ಹೋಗಲಾರದನ್ನ ನೋಡಿ ಟ್ರಂಪ ಅವರು ಖುಷಿಯಾಗಬಹುದು. ಯಾಕಂದರ ಅವರು ತಮ್ಮ ದೇಶದೊಳಗ ತಮ್ಮ ವಿರೋಧ ಪಕ್ಷಗಳನ್ನೂ ಹಿಂಗ ನಡಸಿಕೊಂಡಾರ. ಅದಕ್ಕ ಇರಬೇಕು ಅವರು ಭಾರತದ ಪ್ರಧಾನಿ ನನ್ನ ಅತ್ಯಂತ ಆತ್ಮೀಯ ಸ್ನೇಹಿತ ಅಂತ ಅನ್ನೋದು. ʻನಾ ಮಾಡಬೇಕಂದಿದ್ದೆಲ್ಲಾ ಅವರು ಮಾಡತಾರ ಅಂತ,ʼ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...