ಉತ್ತರ ಪ್ರದೇಶ ಸರ್ಕಾರ ಗುರುವಾರ ಗಾಜಿಪುರ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಸ್ಥಳದಿಂದ ಖಾಲಿ ಮಾಡುವಂತೆ ತಿಳಿಸಿದ ನಂತರ ರೈತ ನಾಯಕ ರಾಕೇಶ್ ಟೀಕಾಯತ್ ಯಾವುದೇ ಕಾರಣಕ್ಕೂ ಪ್ರತಿಭಟನಾ ಸ್ಥಳದಿಂದ ಕದಲಲ್ಲ ಎಂದು ಹೇಳಿಕೆ ನೀಡಿದ್ದು, ಕಣ್ಣೀರು ಹಾಕಿದ್ದರು. ಈ ಹಿನ್ನಲೆಯಲ್ಲಿ ದೇಶದಾದ್ಯಂತ ಸರ್ಕಾರದ ವಿರುದ್ದ ಭಾರಿ ಆಕ್ರೋಶಗಳೆದಿದ್ದು, ನಿನ್ನೆ ರಾತ್ರಿಯಿಂದಲೇ ಭಾರಿ ಸಂಖ್ಯೆ ಜನರು ಗಾಜಿಪುರ್ ಗಡಿಯಲ್ಲಿ ನೆರೆಯುತ್ತಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ನಿನ್ನೆಗಿಂತ ಇಂದು ಮೂರು ಪಟ್ಟು ಹೆಚ್ಚು ಜನರು ಗಾಜೀಪುರದಲ್ಲಿ ಸೇರುತ್ತಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶ ಸರ್ಕಾರವು ಗಡಿಯಲ್ಲಿ ಕಳೆದ 32 ಗಂಟೆಗಳಿಂದ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಬೆಂಬಲಿಸಿದ್ದಾರೆ. ರೈತರಿಗೆ ಬೇಕಾಗುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ʼಬಾರ್ಡರ್ʼಗಳಲ್ಲಿ ರಾತ್ರಿ ಆಗಿದ್ದೇನು? – ಗ್ರೌಂಡ್ ರಿಪೋರ್ಟ್
Let’s stay united for even stronger comeback. The strength of Ghazipur Morcha has increased by 3 times since last night. Lot of contingents have reached early morning.#FarmerTikaitVsModiDakait#मोदी_कायर_है pic.twitter.com/v4BHVJbIU6
— navuu_ (@_avdeep_) January 29, 2021
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನರೇಶ್ ಟೀಕಾಯತ್ ನೇತೃತ್ವದಲ್ಲಿ ರೈತರ ಮಹಾಪಂಚಾಯತ್ ನಡೆಯುತ್ತಿದ್ದು, ಭಾರಿ ಸಂಖ್ಯೆಯ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಅಲ್ಲಿ ನೆರೆದಿರುವ ಎಲ್ಲಾ ರೈತರು ಗಾಜಿಪುರ್ ಗಡಿಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.
कल शाम तक कुछ लोग कह रहे थे किसान गुंडे है
ये वीडियो देख दोबारा कहिए
मुज़फ्फरनगर खाप पंचायत का नज़ारा।
जय -जवान, जय किसान
Via- @brajeshlive #Mahapanchayat#farmersrprotest pic.twitter.com/b3io3n8SjC
— Ravi Miri (@RaviMiri1) January 29, 2021
योगी सरकार ने पानी बंद कराया तो दिल्ली की @ArvindKejriwal जी की सरकार ने किसान भाइयों के लिए पानी का इंतज़ाम कर दिया। आधी रात में पानी के टैंकर लेकर गाजीपुर बॉर्डर के लिए निकले विधायक @KuldeepKumarAAP ।#ghazipurborder pic.twitter.com/HEkRgPP8RT
— Ajit Tyagi (@_AjitTyagi) January 28, 2021
ಇದನ್ನೂ ಓದಿ: ರೈತರ ಹೋರಾಟ; ಜ. 30ರಂದು ರಾಜ್ಯದಲ್ಲೂ ಉಪವಾಸ ಸತ್ಯಾಗ್ರಹ