Homeಮುಖಪುಟʼಬಾರ್ಡರ್‌ʼಗಳಲ್ಲಿ ರಾತ್ರಿ ಆಗಿದ್ದೇನು? - ಗ್ರೌಂಡ್‌ ರಿಪೋರ್ಟ್‌

ʼಬಾರ್ಡರ್‌ʼಗಳಲ್ಲಿ ರಾತ್ರಿ ಆಗಿದ್ದೇನು? – ಗ್ರೌಂಡ್‌ ರಿಪೋರ್ಟ್‌

- Advertisement -
- Advertisement -

(ಗೌರಿ ಮೀಡಿಯಾದ ಮೂವರು ಪತ್ರಕರ್ತೆಯರ – ಸ್ವಾತಿ, ಮಮತಾ ಮತ್ತು ಕಾವ್ಯ – ತಂಡ ಮತ್ತು ದೊಡ್ಡಿಪಾಳ್ಯ ನರಸಿಂಹಮೂರ್ತಿ ಹಾಗೂ ಸಂಯುಕ್ತ್ ಕಿಸಾನ್ ಮೋರ್ಚಾದ ಕಡೆಯಿಂದ ಬಂದಿರುವ ನೇರ ಮಾಹಿತಿ)

1. ಸಿಂಘುವಿನಲ್ಲಿ ಏನಾಯಿತು?
ಸುಮಾರು 30 ಜನ (ಸ್ಥಳೀಯರೆಂದು ಗೋದಿ ಮೀಡಿಯಾ ಹೇಳಿದ್ದು) ಪೊಲೀಸ್ ಪ್ರೊಟೆಕ್ಷನ್‌ನಲ್ಲಿ ಟಿವಿ ಕ್ಯಾಮೆರಾಗಳನ್ನೂ ಕರೆತಂದು ಸುಮಾರು ಒಂದು ಕಿ.ಮೀ ದೂರದಲ್ಲಿ ಒಂದು ಪ್ರೊಟೆಸ್ಟ್ ಪೋಸ್ ಕೊಟ್ಟು ಹೋಗಿದ್ದಾರೆ. ಅಲ್ಲಿರುವ ಸುಮಾರು 50,000 ಜನರಿಗೆ ಇದರ ಸುಳಿವೇ ಇಲ್ಲ. ಯಾವ ಸ್ಥಳೀಯರೂ ಇದನ್ನು ವಿರೋಧಿಸಿಲ್ಲ. ಏಕೆಂದರೆ ಸುಮಾರು 12 ಕಿ.ಮೀ.ವರೆಗೆ ಈ ಪ್ರತಿಭಟನಾಕಾರರು ಗುಂಪಾಗಿ ಇದ್ದಾರೆ. ವಾಸ್ತವವೇನೆಂದರೆ ಇಲ್ಲಿಗೆ ಬಂದು ಇದರ ವಿರುದ್ಧವೇ ಪ್ರತಿಭಟನೆ ಮಾಡಲು ಹೆದರುವಷ್ಟು ಇಲ್ಲಿನ ಸಂಖ್ಯೆ ಇದೆ. ಪಂಜಾಬಿ ಯುವಜನರಿಂದ ಈ ಪ್ರದೇಶ ತುಂಬಿ ಹೋಗಿದೆ.

ಇದನ್ನೂ ಓದಿ: ಹರಿಯಾಣದ ಹಳ್ಳಿ ಹಳ್ಳಿಯಿಂದ ತೀರ್ಮಾನ: ರಾತ್ರಿಯೇ ದೆಹಲಿ ಗಡಿಗಳಿಗೆ ಹೋಗಿ ಹೋರಾಟದಲ್ಲಿ ಭಾಗಿಯಾಗಲು ನಿರ್ಧಾರ

2. ಟಿಕ್ರಿಯಲ್ಲಿ ಏನಾಯಿತು?
ಇಲ್ಲಿಯೂ 40,000ದಷ್ಟು ಜನರಿದ್ದಾರಾದರೂ ಅವರು 25 ಕಿ.ಮೀ.ಗಳಷ್ಟು ಜಾಗದಲ್ಲಿ ಚದುರಿ ಹೋಗಿದ್ದಾರೆ. ಹಾಗಾಗಿ ಅಲ್ಲಲ್ಲಿ ಅವರ ಮೇಲೆ ದಾಳಿ ನಡೆಸಬಹುದು ಎಂಬ ನಿರೀಕ್ಷೆಯಿತ್ತು. (ಸ್ವತಃ ನಮ್ಮ ತಂಡ ಸಂದರ್ಶನಕ್ಕಾಗಿ ಟಿಕ್ರಿ ಬಾರ್ಡರ್ ಮೆಟ್ರೋ ಸ್ಟೇಷನ್‌ನಿಂದ ಸ್ವಲ್ಪ ದೂರದ ಒಂದು ಮನೆಗೆ ತೆರಳಿದ್ದರು. ಅಲ್ಲಿ ಬಂದೂಕುಧಾರಿ ಗೂಂಡಾಗಳು ಹೋಗಿ ಹೆದರಿಸಿದ್ದರು. ಈ ಬಗ್ಗೆ ಪ್ರತ್ಯೇಕ ಸ್ಟೋರಿ ಬರಲಿದೆ). ಆದರೆ ಅಂಥದ್ದೇನೂ ಆಗಿಲ್ಲ. ಇಡೀ ಟಿಕ್ರಿ ಬಾರ್ಡರ್ ಸುರಕ್ಷಿತವಾಗಿದೆ.

3. ಘಾಜಿಪುರ ಬಾರ್ಡರ್’ನಲ್ಲಿ ಏನಾಯಿತು?
ಇದು ಉತ್ತರ ಪ್ರದೇಶದ ಭಾಗ. ಇಲ್ಲಿ ಪೊಲೀಸರು ಖಾಲಿ ಮಾಡಬೇಕೆಂದು ಅಲ್ಟಿಮೇಟಂ ಕೊಟ್ಟಿದ್ದಲ್ಲದೇ ನೀರು ಕಟ್ ಮಾಡಿದ್ದರು. ಮೊಬೈಲ್ ಟಾಯ್ಲೆಟ್‌ಗಳನ್ನು ಎತ್ತಿಕೊಂಡು ಹೋಗಿಬಿಟ್ಟರು. ಒಂದು ಹಂತದಲ್ಲಿ ಶಾಂತಿಯುತವಾಗಿ ಎಲ್ಲರೂ ಬಂಧನಕ್ಕೊಳಗಾಗೋಣ ಎಂಬ ನಿಲುವಿಗೆ ಬರಬಹುದು ಎಂದು ಕಾಣುತ್ತಿತ್ತು. ಆದರೆ ಯಾವಾಗ ಸ್ಥಳೀಯ ಬಿಜೆಪಿ ಎಂಎಲ್‌ಎ ಹಾಗೂ ಇತರ ಬಿಜೆಪಿ ಕಾರ್ಯಕರ್ತರು ಬಂದು ನೇರವಾಗಿ ಪ್ರತಿಭಟನಾಕಾರರನ್ನು ಎಬ್ಬಿಸಲು ಪ್ರಯತ್ನಿಸಿದರೋ, ಹಾಗೂ ಕೆಲವರು ನೇರವಾಗಿ ವೇದಿಕೆ ಏರಲು ಹೊರಟರೋ ಇಡೀ ಸನ್ನಿವೇಶ ಬದಲಾಯಿತು. ಬಿಕೆಯು ಟಿಕಾಯಿತ್ ನಾಯಕ ರಾಕೇಶ್ ಟಿಕಾಯಿತ್ ಮೈಕ್ ಎತ್ತಿಕೊಂಡು ಮಾಡಿದ 30 ನಿಮಿಷಗಳ ಭಾಷಣ ಇದೀಗ ವೈರಲ್.

ಇದನ್ನೂ ಓದಿ: ಜನರನ್ನು ಪ್ರಚೋದಿಸುವ ಟಿವಿ ಕಾರ್ಯಕ್ರಮ ನಿಗ್ರಹಿಸಿ: ಕೇಂದ್ರಕ್ಕೆ ಸುಪ್ರೀಂ ತಾಕೀತು

ನಮ್ಮ ಮೇಲೆ ಗುಂಡು ಹಾರಿಸಲಿ, ನಾನಿಲ್ಲೇ ನೇಣು ಹಾಕಿಕೊಳ್ಳುತ್ತೇನೆ, ಆದರೆ ಸತ್ಯಾಗ್ರಹದ ಜಾಗ ಖಾಲಿ ಮಾಡಲ್ಲ ಎಂದು ರಾಕೇಶ್ ಮಾಡಿದ ಭಾಷಣ ಸಂಚಲನ ಮೂಡಿಸಿತು. ಸ್ವಲ್ಪ ಹೊತ್ತಿನಲ್ಲಿ ರಾಕೇಶ್ ಟಿಕಾಯಿತ್ ಅವರ ಊರಿನ ಮನೆಯ ಮುಂದೆ ಸಾವಿರಾರು ಜನರು ಸೇರಿದರು ಮತ್ತು 10.45ರ ಹೊತ್ತಿಗೆ ಅವರ ಮೊದಲ ಗುಂಪು ಘಾಜಿಪುರ ಸೇರಿಯಾಗಿತ್ತು. ಬೆಳಗಿನ ಹೊತ್ತಿಗೆ 10,000 ಜನರಾದರೂ ಸೇರಬೇಕು ಎಂದು ಕರೆ ನೀಡಿದ್ದಾರೆ.

ಒಂದೆರಡು ಕಡೆ ನಡೆಯುತ್ತಿದ್ದ ನಿರಂತರ ಸತ್ಯಾಗ್ರಹ ನಿಂತಿದೆ ಎಂಬ ಸುದ್ದಿ ಇದೆ, ಅದೇ ಸಂದರ್ಭದಲ್ಲಿ ಪಂಜಾಬಿನಾದ್ಯAತ ನಡೆಯುತ್ತಿದ್ದ ಧರಣಿ ಸತ್ಯಾಗ್ರಹಗಳಲ್ಲಿ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂಬ ತೀರ್ಮಾನ ಮಾಡಿದ್ದಾರೆ. ಹರಿಯಾಣದ ವಿವಿಧ ಹಳ್ಳಿಗಳ ಪಂಚಾಯತ್‌ಗಳಲ್ಲಿ ದೆಹಲಿಗೆ ತೆರಳಬೇಕು ಎಂಬ ನಿರ್ಣಯ ಕೈಗೊಂಡಿದ್ದಾರೆ.

ಚಳವಳಿಯ ತೀವ್ರತೆ ಉತ್ತರ ಪ್ರದೇಶದ ಕಡೆಯೂ ಹೆಚ್ಚುತ್ತಿದೆ. ಸ್ವಲ್ಪ ಹೊತ್ತಿನಲ್ಲಿ ಸಂಪೂರ್ಣ ಸುದ್ದಿ ನೀಡಲಾಗುತ್ತದೆ.


ಇದನ್ನೂ ಓದಿ: ರೈತರ ಹೋರಾಟ; ಜ. 30ರಂದು ರಾಜ್ಯದಲ್ಲೂ ಉಪವಾಸ ಸತ್ಯಾಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...