Homeಅಂತರಾಷ್ಟ್ರೀಯಅಪರಾಧಗಳಲ್ಲಿ ಹೆಚ್ಚಳ: 'ಒಡೆದ ಕಿಟಕಿ ಗಾಜು' ಹೇಳುವ ಸಾರ್ವಕಾಲೀನ ಕತೆ

ಅಪರಾಧಗಳಲ್ಲಿ ಹೆಚ್ಚಳ: ‘ಒಡೆದ ಕಿಟಕಿ ಗಾಜು’ ಹೇಳುವ ಸಾರ್ವಕಾಲೀನ ಕತೆ

- Advertisement -
- Advertisement -

ಒಡೆದ ಕಿಟಕಿಯ ಗಾಜು ಕತೆ ಹೇಳಬಹುದೇ ಎಂದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಮೇಲೆ ತೋರಿಸಿದ ಕಿಟಕಿಯನ್ನು ನೋಡಿದ ತಕ್ಷಣ ಅದರಲ್ಲಿ ಏನೋ ಕತೆ ಇದೆ ಎಂದು ನಿಮಗೆ ಅನಿಸಲಿಲ್ಲವೇ?

ತಕ್ಷಣ ಗೋಚರಿಸುವುದು “ಇಲ್ಲಿ ಏನೋ ಅಪರಾಧ ನಡೆದಿದೆ” ಎಂಬುದನ್ನು ತಿಳಿಸಲು ಉಳಿದಿರುವ ಮೂಕ ಸಾಕ್ಷಿ. ಹಾಗಾದರೆ ಯಾರು, ಯಾವಾಗ ಮತ್ತು ಹೇಗೆ ಈ ಕೃತ್ಯ ಎಸಗಿದರು ಎಂಬುದು ನಿಮ್ಮ ಮುಂದಿನ ಪ್ರಶ್ನೆ ಆಗಿರಬಹುದು. ಇರಲಿ, ಅದಕ್ಕೆ ಮುನ್ನ, ಒಡೆದ ಕಿಟಕಿ ಗಾಜು ಸಾರಿ ಹೇಳುತ್ತಿರುವುದು “ಇಲ್ಲಿಯ ಕಾನೂನು ಸುವ್ಯವಸ್ಥೆ ಸರಿ ಇಲ್ಲ” ಎಂದು. ಹೌದು, ಇದನ್ನು ಅಪರಾಧ ತನಿಖಾ ಶಾಸ್ತ್ರದಲ್ಲಿ “ದಿ ಬ್ರೋಕನ್ ವಿಂಡೋ ಥಿಯರಿ” ಎನ್ನುತ್ತಾರೆ.

1982ರಲ್ಲಿ ಸಾಮಾಜಿಕ ಶಾಸ್ತ್ರಜ್ಞರಾದ ಜೇಮ್ಸ್ ಕ್ಯೂ. ವಿಲ್ಸನ್ ಮತ್ತು ಜಾರ್ಜ್ ಎಲ್. ಕೆಲ್ಲಿಂಗ್ ಅವರು ಬರೆದ ಲೇಖನ. ಎಲ್ಲರ ಕಣ್ಣಿಗೆ ಕಾಣುವಂತಹ ಸಣ್ಣ ಪುಟ್ಟ ಅಪರಾಧದ ಕುರುಹುಗಳು ಸಮಾಜಘಾತಕರನ್ನು ಇನ್ನಷ್ಟು ಗಂಭೀರ ಅಪರಾಧವೆಸಗಲು ಪ್ರಚೋದಿಸುತ್ತವೆ ಮತ್ತು ಸಮಾಜದಲ್ಲಿ ಕಾನೂನು ಪಾಲಿಸುವ ಜನಸಾಮಾನ್ಯರಿಗೆ “ಇಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ, ಹೇಳುವವರು-ಕೇಳುವವರು ಯಾರೂ ಇಲ್ಲ. ಈ ಪ್ರದೇಶ ಸುರಕ್ಷಿತವಲ್ಲ, ಇಲ್ಲಿಂದ ಬೇಗನೇ ಕಾಲು ಕೀಳುವುದು ಉತ್ತಮ” ಎಂಬ ಸಂದೇಶ ರವಾನಿಸುತ್ತದೆ. ಕೇವಲ ಕಿಟಕಿಯ ಒಡೆದ ಗಾಜು ಮಾತ್ರವಲ್ಲ, ಗೋಡೆಯ ಮೇಲೆ ಬರೆದ ಗ್ರಾಫಿಟಿ (ಅಸಂಬದ್ಧ ಬರಹ/ಚಿತ್ರಗಳು), ಎಲ್ಲೆಡೆ ಬಿದ್ದಿರುವ ಕಸದ ರಾಶಿ, ಸಮಯಕ್ಕೆ ಸರಿಯಾಗಿ ಸಂಚರಿಸದ ಸಾರಿಗೆ ವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರ, ಎಲ್ಲವೂ ಸಹ ಇದೇ ರೀತಿಯ ಸಂದೇಶ ರವಾನಿಸುತ್ತವೆ.

1980-1994ರ ಕಾಲಘಟ್ಟದಲ್ಲಿ ಅಮೇರಿಕದ ನ್ಯೂಯಾರ್ಕ್ ನಗರ ಅತೀವ ಅಪರಾಧ ಹಾವಳಿಗೆ ಒಳಗಾಗಿತ್ತು. ನಗರದ ಕೇಂದ್ರ ಭಾಗದಲ್ಲಿ ಸಂಜೆಯ ನಂತರ, ರಸ್ತೆಯಲ್ಲಾಗಲೀ, ನಗರದ ಜೀವನಾಡಿಯಾದ ಸಬ್-ವೇ (ನಮ್ಮ ಮೆಟ್ರೋ) ರೈಲಿನಲ್ಲಾಗಲೀ ಸಭ್ಯ ಜನರು ಓಡಾಡುವುದೇ ದುಸ್ತರವಾಗಿತ್ತು. ಆ ಸಮಯದಲ್ಲಿ ವರ್ಷಕ್ಕೆ ಸರಾಸರಿ 2,000 ಕೊಲೆಗಳು, ಆರು ಲಕ್ಷ ಲೂಟಿ, ಬೆದರಿಕೆ, ಮಾರಕಾಸ್ತ್ರಗಳಿಂದ ಹೊಡೆದಾಟ ಮುಂತಾದ ಗಂಭೀರ ಅಪರಾಧಗಳು ನಡೆಯುತ್ತಿತ್ತು ಎಂದರೆ ಆಘಾತಕಾರಿಯಲ್ಲವೇ? ಸಬ್-ವೇ ಸಮಯಕ್ಕೆ ಸರಿಯಾಗಿ ಓಡುತ್ತಿರಲಿಲ್ಲ, ರೈಲಿನ ಬೋಗಿಯ ಒಳಗಡೆ ಕಸ, ಅಶ್ಲೀಲ ಬರಹ, ಚಿತ್ರಗಳು, ಮುರಿದ ಬೆಂಚು, ದೀಪಗಳು, ಕೆಲಸ ಮಾಡದ ವಾತಾನುಕೂಲ ವ್ಯವಸ್ಥೆ, ಭಿಕ್ಷುಕರ ಮತ್ತು ಕುಡುಕರ ಹಾವಳಿ, ರೌಡಿಗಳ ಕಾಟ ಎಲ್ಲರಿಗೂ ಎಲ್ಲವೂ ಅಸಹ್ಯವಾಗಿತ್ತು.


ಇದನ್ನೂ ಓದಿ: 2020 ರಲ್ಲಿ ಅತಿ ಹೆಚ್ಚು ಅಪಹರಣ ಮತ್ತು ಕೊಲೆ ನಡೆದ ರಾಜ್ಯ ಯುಪಿ – NCRB


1990ರಲ್ಲಿ ನ್ಯೂಯಾರ್ಕ್ ನಗರ ಸಾರಿಗೆ ಪೋಲಿಸ್ ಆಯುಕ್ತರಾಗಿ, ನಂತರ 1994ರಲ್ಲಿ ನ್ಯೂಯಾರ್ಕ್ ನಗರ ಪೋಲಿಸ್ ಆಯುಕ್ತರಾಗಿ ಬಂದ ವಿಲಿಯಮ್ ಬ್ರಾಟನ್ ಮತ್ತು ನ್ಯೂಯಾರ್ಕ್ ಮಹಾಪೌರರಾಗಿದ್ದ ರುಡಿ ಜುಲಿಯಾನಿ ದಿ ಬ್ರೋಕನ್ ವಿಂಡೋ ಥಿಯರಿಯಿಂದ ಪ್ರಭಾವಿತಗೊಂಡವರು. ಸಣ್ಣ ಅಪರಾಧಗಳಾದ ಸಾರ್ವಜನಿಕ ಸಂಪತ್ತನು ನಾಶಗೊಳಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಕುಡಿಯುವುದು, ಹೇಸಿಗೆ ಮಾಡುವುದು,  ಸಾರ್ವಜನಿಕ ಸಾರಿಗೆಯಲ್ಲಿ ಚೀಟಿ ಪಡೆಯದೆ ಪ್ರಯಾಣ ಮಾಡುವುದು, ಮುಂತಾದವುಗಳನ್ನು ನಿಯಂತ್ರಿಸಿದರೆ ಮುಂದೆ ದೊಡ್ಡ ಅಪರಾಧವಾಗುವುದನ್ನು ತಡೆಗಟ್ಟಬಹುದು ಎಂದು ಕಾರ್ಯನಿರತರಾದರು.

ಇವರ ಪೋಲಿಸ್ ಗಿರಿಗೆ ಮಾನವ ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ಆಲೋಚನೆಗೆ ಸಿಲುಕಿದರೂ ಮತ್ತು ಈ ತತ್ವದ ಪರ-ವಿರೋಧ ಎಷ್ಟೇ ಚರ್ಚೆ ನಡೆದಿದ್ದರೂ ಸಹ, ಇದರ ಮೂಲ ಅನಿಸಿಕೆ “ಯಾವುದೇ ಕಾರಣದಿಂದ ಒಡೆದ ಒಂದು ಕಿಟಕಿಯ ಗಾಜನ್ನು ಕೂಡಲೇ ಬದಲಾಯಿಸದಿದ್ದಲ್ಲಿ ಮಾರನೆಯ ದಿನ ಇನ್ನೊಂದು ಗಾಜು ಪುಡಿಪುಡಿಯಾಗಬಹುದು” ಎಂಬ ಮಾತು ಅಷ್ಟೇ ಖಚಿತ.

ಕಾನೂನು ಪಾಲನೆ ಕೇವಲ ನಾಗರಿಕರ ಕೆಲಸವಷ್ಟೇ ಅಲ್ಲ ಪೋಲಿಸರೂ ಸಹ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ ಪೋಲಿಸರು ಜನರ ಮೇಲೆ ದೌರ್ಜನ್ಯವೆಸಗದೆ, ಅಪರಾಧಿಗಳಿಗೆ ಅವರ ಸಂಪೂರ್ಣ ಹಕ್ಕುಗಳನ್ನು ನೀಡಿ, ಕೇವಲ ಅವರ ಅಪರಾಧಕ್ಕೆ ತಕ್ಕ ಶಿಕ್ಷೆಯಾಗಲೇಬೇಕು. ಅಂದು ನಡೆದ ಪೋಲಿಸ್ಗಿರಿ, ಅದರಲ್ಲೂ ರಸ್ತೆಯಲ್ಲಿ ನಡೆಯುತ್ತಿದ್ದ ಎಲ್ಲ ಸಂಶಯಾಸ್ಪದ ಜನರ “ತಡೆ ಮತ್ತು ತಪಾಸಣೆ”ಯನ್ನು ಅಪರಾಧಕ್ಕೆ ಸೊನ್ನೆ ಸಹನೆ ಅಥವಾ ಅನಾವಶ್ಯಕ ದೌರ್ಜನ್ಯ ಎಂದು ಕೆಲವರಿಂದ ಪರಿಗಣಿಸಲ್ಪಟ್ಟರೂ ಸಹ, ಜೊತೆಗೆ ಪೋಲಿಸರಿಗೆ ಬೇಕಾದ ಸೂಕ್ಷ್ಮತೆ ತರಬೇತಿ, ಸಾಧನಗಳು, ಸಮಾಜದ ಜೊತೆ ಮಾನವೀಯ ಸಂಬಂಧ, ಸ್ಪಷ್ಟವಾದ ಆದೇಶಗಳು ಮತ್ತು ಸಮುದಾಯದ ಪೋಲಿಸ್ ಗಸ್ತು ಇಂತಹ ಧನಾತ್ಮಕ ಬದಲಾವಣೆಗಳೂ ಬಂದವು.

ನ್ಯೂಯಾರ್ಕ್ ನಗರ ಸಾರಿಗೆಯ ಅಧ್ಯಕ್ಷರಾಗಿ 1984ರಲ್ಲಿ ಬಂದ ಡೇವಿಡ್ ಎಲ್. ಗನ್ನ್ ಮತ್ತು ಸಲಹೆಗಾರರಾದ ಜಾರ್ಜ್ ಕೆಲ್ಲಿಂಗ್ ಕೂಡಲೇ ಎಲ್ಲ ಮುರಿದ ಗಾಜು, ಕಿಟಕಿಗಳನ್ನು ದುರಸ್ತಿಗೊಳಿಸಿದರು, ಗೋಡೆ ಮತ್ತು ರೈಲಿನ ಬೋಗಿಗಳ ಬರಹವನ್ನು ಸ್ವಚ್ಛಗೊಳಿಸಿದರು. ಟಿಕೇಟು ರಹಿತ ಪ್ರಯಾಣಿಕರನ್ನು ಹಿಡಿಯುವುದರಲ್ಲಿ ಅರ್ಥವಿರಲಿಲ್ಲ. ಏಕೆಂದರೆ ಅವರ ಈ ಅಪರಾಧಕ್ಕೆ ಯಾವ ನ್ಯಾಯಾಲಯವೂ ಕಠಿಣ ಶಿಕ್ಷೆ ವಿಧಿಸುವುದಿಲ್ಲ ಮತ್ತೆ ಅದಕ್ಕೋಸ್ಕರ ಪೋಲಿಸರಿಗೆ ಕಾರಕೂನಿ, ಓಡಾಟವೇ ಜಾಸ್ತಿ ಆಗುತ್ತದೆ ಎಂದು ತಿಳಿದಿದ್ದರೂ ಸಹ ಅವರನ್ನು ಅಟ್ಟಿಸಿಕೊಂಡು ಹೋಗಿ, ಹಿಡಿದು ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಅಪರಾಧಿಗಳಿಂದ ವಸೂಲಾದ ಚಾಕು, ಚೂರಿ, ಬಂದೂಕು, ಮಾದಕ ವಸ್ತು, ಹಿಂದಿನ ಅಪರಾಧ ಇತಿಹಾಸ ಎಲ್ಲವೂ ಅಪರಾಧಿಗಳ ಕಠಿಣ ಶಿಕ್ಷೆಗೆ ನೆರವಾಗುತ್ತಿತ್ತು. ಅಪರಾಧಿಗಳಿಗೆ ನಡುಕ ಹುಟ್ಟಿತ್ತು, ಅವರ ಧೈರ್ಯದ ಬೆನ್ನು ಮೂಳೆ ಮುರಿದಿತ್ತು.

1980ರ ದಶಕದಲ್ಲಿ ಅಪರಾಧ ಹೆಚ್ಚಾಗಿರುವುದಕ್ಕೆ ಇನ್ನೂ ಕೆಲವಾರು ಕಾರಣಗಳಿದ್ದವು. ಉದಾಹರಣೆಗೆ ಅಮೇರಿಕದ ಮತ್ತು ನ್ಯೂಯಾರ್ಕ್ ನಗರದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿತ್ತು. ಮಾದಕ ವಸ್ತುಗಳ, ಮಾರಕಾಸ್ತ್ರಗಳ ಲಭ್ಯತೆ ಸುಲಭವಾಗಿತ್ತು. 1994ರ ನಂತರ ನ್ಯೂಯಾರ್ಕ್ ನಗರದ ಅಪರಾಧಿಕ ಕೃತ್ಯದಲ್ಲಿ ಇದ್ದಕ್ಕಿದಂತೆ ತೀವ್ರ ಇಳಿತ ಕಂಡುಬಂತು. ಈ ಇಳಿತಕ್ಕೂ ಅನೇಕ ಕಾರಣಗಳಿವೆ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು ಜನರಿಗೆ ಒಳ್ಳೆಯ ಕೆಲಸ ಸಿಗಲು ಪ್ರಾರಂಭವಾಯಿತು. ನಗರದ ಪೋಲಿಸ್ಗಿರಿಯಿಂದ ಮಾದಕ ವಸ್ತುಗಳ, ಮಾರಕಾಸ್ತ್ರಗಳ ಲಭ್ಯತೆ ಕಡಿಮೆಯಾಯಿತು. ಇನ್ನೂ ಅನೇಕ ಕಾರಣಗಳಿಂದಾಗಿ ಅಪರಾಧದ ಇಳಿತ ಸಾಧ್ಯವಾಯಿತು.

ಅಮೇರಿಕದ ಕತೆ ಹಾಗಿರಲಿ, ನಮ್ಮ ದೇಶಕ್ಕೆ ಮರಳಿ ಬರೋಣ.

ಎಲ್ಲೆಡೆ ಕಸದ ರಾಶಿ ಬಿದ್ದಿರುವ ಬೆಂಗಳೂರನ್ನೇ ತೆಗೆದುಕೊಳ್ಳಿ. ಕಸದ ರಾಶಿ ಏನು ಸಂದೇಶ ರವಾನಿಸುತ್ತದೆ? ಕಸ ಬಿದ್ದಿರುವ ಕಡೆಯಲ್ಲೇ ಇನ್ನಷ್ಟು ಹೆಚ್ಚಿನ ಕಸ ಬಂದು ಬೀಳುವುದು ಏಕೆ? ಜನರು ಅಲ್ಲೇ ಹೇಸಿಗೆ ಮಾಡುವುದು ಏಕೆ?

ಹೊಂಡ ತುಂಬಿದ ರಸ್ತೆ, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಮಳೆ-ಚರಂಡಿ ನೀರು, ಒತ್ತುವರಿಯಾದ ಅರಣ್ಯ, ಮಾಯವಾದ ಕೆರೆಗಳು-ರಾಜಾಕಾಲುವೆಗಳು ಏನು ಸಂದೇಶ ರವಾನಿಸುತ್ತದೆ? ಬೆಂಗಳೂರಿನ ತೆರಿಗೆ ಪಾವತಿಸುವ ಜನರಿಗೆ ಬಿಬಿಎಂಪಿಯ ಅನಧಿಕೃತ ಬಡಾವಣೆಗಳು, ಸರಕಾರದ ಅಕ್ರಮ-ಸಕ್ರಮ ನೀತಿ, ಏನು ಸಂದೇಶ ರವಾನಿಸುತ್ತದೆ? ಐಎಂಎ ಜುವೆಲರ್ಸ್ ಹಗರಣ ಏನು ಸಂದೇಶ ರವಾನಿಸುತ್ತದೆ?

ಇದನ್ನೂ ಓದಿ: SC/ST ಗಳ ವಿರುದ್ಧದ ಅಪರಾಧಗಳು 2020 ರಲ್ಲಿ 9% ಹೆಚ್ಚಳ – NCRB ಮಾಹಿತಿ

ನಗರದಿಂದ ಹೊರಬಂದು ದೇಶದ ಪರಿಸ್ಥಿತಿ ಅವಲೋಕಿಸೋಣ. ದೇಶದ ಬ್ಯಾಂಕುಗಳಿಗೆ ನಾಮ ಹಾಕಿ ಓಡಿ ಹೋದವರ ಕತೆ ಏನು ಸಂದೇಶ ರವಾನಿಸುತ್ತದೆ? 2ಜಿ, ಕಲ್ಲಿದ್ದಲಿ ಮತ್ತು ಇತರ ಆರ್ಥಿಕ ಹಗರಣದಲ್ಲಿ ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆಯಾಗದಿರುವುದು ಏನು ಸಂದೇಶ ರವಾನಿಸುತ್ತದೆ? ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಹತ್ಯೆ ಏನು ಸಂದೇಶ ರವಾನಿಸುತ್ತದೆ? ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ ಏನು ಸಂದೇಶ ರವಾನಿಸುತ್ತದೆ?

ಇವೂ ಸಹ ಒಡೆದ ಗಾಜಿನ ಕತೆಯಲ್ಲವೇ?


ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: BJP ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ವಿರುದ್ದ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...