Homeಅಂತರಾಷ್ಟ್ರೀಯಅಪರಾಧಗಳಲ್ಲಿ ಹೆಚ್ಚಳ: 'ಒಡೆದ ಕಿಟಕಿ ಗಾಜು' ಹೇಳುವ ಸಾರ್ವಕಾಲೀನ ಕತೆ

ಅಪರಾಧಗಳಲ್ಲಿ ಹೆಚ್ಚಳ: ‘ಒಡೆದ ಕಿಟಕಿ ಗಾಜು’ ಹೇಳುವ ಸಾರ್ವಕಾಲೀನ ಕತೆ

- Advertisement -
- Advertisement -

ಒಡೆದ ಕಿಟಕಿಯ ಗಾಜು ಕತೆ ಹೇಳಬಹುದೇ ಎಂದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಮೇಲೆ ತೋರಿಸಿದ ಕಿಟಕಿಯನ್ನು ನೋಡಿದ ತಕ್ಷಣ ಅದರಲ್ಲಿ ಏನೋ ಕತೆ ಇದೆ ಎಂದು ನಿಮಗೆ ಅನಿಸಲಿಲ್ಲವೇ?

ತಕ್ಷಣ ಗೋಚರಿಸುವುದು “ಇಲ್ಲಿ ಏನೋ ಅಪರಾಧ ನಡೆದಿದೆ” ಎಂಬುದನ್ನು ತಿಳಿಸಲು ಉಳಿದಿರುವ ಮೂಕ ಸಾಕ್ಷಿ. ಹಾಗಾದರೆ ಯಾರು, ಯಾವಾಗ ಮತ್ತು ಹೇಗೆ ಈ ಕೃತ್ಯ ಎಸಗಿದರು ಎಂಬುದು ನಿಮ್ಮ ಮುಂದಿನ ಪ್ರಶ್ನೆ ಆಗಿರಬಹುದು. ಇರಲಿ, ಅದಕ್ಕೆ ಮುನ್ನ, ಒಡೆದ ಕಿಟಕಿ ಗಾಜು ಸಾರಿ ಹೇಳುತ್ತಿರುವುದು “ಇಲ್ಲಿಯ ಕಾನೂನು ಸುವ್ಯವಸ್ಥೆ ಸರಿ ಇಲ್ಲ” ಎಂದು. ಹೌದು, ಇದನ್ನು ಅಪರಾಧ ತನಿಖಾ ಶಾಸ್ತ್ರದಲ್ಲಿ “ದಿ ಬ್ರೋಕನ್ ವಿಂಡೋ ಥಿಯರಿ” ಎನ್ನುತ್ತಾರೆ.

1982ರಲ್ಲಿ ಸಾಮಾಜಿಕ ಶಾಸ್ತ್ರಜ್ಞರಾದ ಜೇಮ್ಸ್ ಕ್ಯೂ. ವಿಲ್ಸನ್ ಮತ್ತು ಜಾರ್ಜ್ ಎಲ್. ಕೆಲ್ಲಿಂಗ್ ಅವರು ಬರೆದ ಲೇಖನ. ಎಲ್ಲರ ಕಣ್ಣಿಗೆ ಕಾಣುವಂತಹ ಸಣ್ಣ ಪುಟ್ಟ ಅಪರಾಧದ ಕುರುಹುಗಳು ಸಮಾಜಘಾತಕರನ್ನು ಇನ್ನಷ್ಟು ಗಂಭೀರ ಅಪರಾಧವೆಸಗಲು ಪ್ರಚೋದಿಸುತ್ತವೆ ಮತ್ತು ಸಮಾಜದಲ್ಲಿ ಕಾನೂನು ಪಾಲಿಸುವ ಜನಸಾಮಾನ್ಯರಿಗೆ “ಇಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ, ಹೇಳುವವರು-ಕೇಳುವವರು ಯಾರೂ ಇಲ್ಲ. ಈ ಪ್ರದೇಶ ಸುರಕ್ಷಿತವಲ್ಲ, ಇಲ್ಲಿಂದ ಬೇಗನೇ ಕಾಲು ಕೀಳುವುದು ಉತ್ತಮ” ಎಂಬ ಸಂದೇಶ ರವಾನಿಸುತ್ತದೆ. ಕೇವಲ ಕಿಟಕಿಯ ಒಡೆದ ಗಾಜು ಮಾತ್ರವಲ್ಲ, ಗೋಡೆಯ ಮೇಲೆ ಬರೆದ ಗ್ರಾಫಿಟಿ (ಅಸಂಬದ್ಧ ಬರಹ/ಚಿತ್ರಗಳು), ಎಲ್ಲೆಡೆ ಬಿದ್ದಿರುವ ಕಸದ ರಾಶಿ, ಸಮಯಕ್ಕೆ ಸರಿಯಾಗಿ ಸಂಚರಿಸದ ಸಾರಿಗೆ ವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರ, ಎಲ್ಲವೂ ಸಹ ಇದೇ ರೀತಿಯ ಸಂದೇಶ ರವಾನಿಸುತ್ತವೆ.

1980-1994ರ ಕಾಲಘಟ್ಟದಲ್ಲಿ ಅಮೇರಿಕದ ನ್ಯೂಯಾರ್ಕ್ ನಗರ ಅತೀವ ಅಪರಾಧ ಹಾವಳಿಗೆ ಒಳಗಾಗಿತ್ತು. ನಗರದ ಕೇಂದ್ರ ಭಾಗದಲ್ಲಿ ಸಂಜೆಯ ನಂತರ, ರಸ್ತೆಯಲ್ಲಾಗಲೀ, ನಗರದ ಜೀವನಾಡಿಯಾದ ಸಬ್-ವೇ (ನಮ್ಮ ಮೆಟ್ರೋ) ರೈಲಿನಲ್ಲಾಗಲೀ ಸಭ್ಯ ಜನರು ಓಡಾಡುವುದೇ ದುಸ್ತರವಾಗಿತ್ತು. ಆ ಸಮಯದಲ್ಲಿ ವರ್ಷಕ್ಕೆ ಸರಾಸರಿ 2,000 ಕೊಲೆಗಳು, ಆರು ಲಕ್ಷ ಲೂಟಿ, ಬೆದರಿಕೆ, ಮಾರಕಾಸ್ತ್ರಗಳಿಂದ ಹೊಡೆದಾಟ ಮುಂತಾದ ಗಂಭೀರ ಅಪರಾಧಗಳು ನಡೆಯುತ್ತಿತ್ತು ಎಂದರೆ ಆಘಾತಕಾರಿಯಲ್ಲವೇ? ಸಬ್-ವೇ ಸಮಯಕ್ಕೆ ಸರಿಯಾಗಿ ಓಡುತ್ತಿರಲಿಲ್ಲ, ರೈಲಿನ ಬೋಗಿಯ ಒಳಗಡೆ ಕಸ, ಅಶ್ಲೀಲ ಬರಹ, ಚಿತ್ರಗಳು, ಮುರಿದ ಬೆಂಚು, ದೀಪಗಳು, ಕೆಲಸ ಮಾಡದ ವಾತಾನುಕೂಲ ವ್ಯವಸ್ಥೆ, ಭಿಕ್ಷುಕರ ಮತ್ತು ಕುಡುಕರ ಹಾವಳಿ, ರೌಡಿಗಳ ಕಾಟ ಎಲ್ಲರಿಗೂ ಎಲ್ಲವೂ ಅಸಹ್ಯವಾಗಿತ್ತು.


ಇದನ್ನೂ ಓದಿ: 2020 ರಲ್ಲಿ ಅತಿ ಹೆಚ್ಚು ಅಪಹರಣ ಮತ್ತು ಕೊಲೆ ನಡೆದ ರಾಜ್ಯ ಯುಪಿ – NCRB


1990ರಲ್ಲಿ ನ್ಯೂಯಾರ್ಕ್ ನಗರ ಸಾರಿಗೆ ಪೋಲಿಸ್ ಆಯುಕ್ತರಾಗಿ, ನಂತರ 1994ರಲ್ಲಿ ನ್ಯೂಯಾರ್ಕ್ ನಗರ ಪೋಲಿಸ್ ಆಯುಕ್ತರಾಗಿ ಬಂದ ವಿಲಿಯಮ್ ಬ್ರಾಟನ್ ಮತ್ತು ನ್ಯೂಯಾರ್ಕ್ ಮಹಾಪೌರರಾಗಿದ್ದ ರುಡಿ ಜುಲಿಯಾನಿ ದಿ ಬ್ರೋಕನ್ ವಿಂಡೋ ಥಿಯರಿಯಿಂದ ಪ್ರಭಾವಿತಗೊಂಡವರು. ಸಣ್ಣ ಅಪರಾಧಗಳಾದ ಸಾರ್ವಜನಿಕ ಸಂಪತ್ತನು ನಾಶಗೊಳಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಕುಡಿಯುವುದು, ಹೇಸಿಗೆ ಮಾಡುವುದು,  ಸಾರ್ವಜನಿಕ ಸಾರಿಗೆಯಲ್ಲಿ ಚೀಟಿ ಪಡೆಯದೆ ಪ್ರಯಾಣ ಮಾಡುವುದು, ಮುಂತಾದವುಗಳನ್ನು ನಿಯಂತ್ರಿಸಿದರೆ ಮುಂದೆ ದೊಡ್ಡ ಅಪರಾಧವಾಗುವುದನ್ನು ತಡೆಗಟ್ಟಬಹುದು ಎಂದು ಕಾರ್ಯನಿರತರಾದರು.

ಇವರ ಪೋಲಿಸ್ ಗಿರಿಗೆ ಮಾನವ ಹಕ್ಕುಗಳ ಕಾರ್ಯಕರ್ತರಿಂದ ತೀವ್ರ ಆಲೋಚನೆಗೆ ಸಿಲುಕಿದರೂ ಮತ್ತು ಈ ತತ್ವದ ಪರ-ವಿರೋಧ ಎಷ್ಟೇ ಚರ್ಚೆ ನಡೆದಿದ್ದರೂ ಸಹ, ಇದರ ಮೂಲ ಅನಿಸಿಕೆ “ಯಾವುದೇ ಕಾರಣದಿಂದ ಒಡೆದ ಒಂದು ಕಿಟಕಿಯ ಗಾಜನ್ನು ಕೂಡಲೇ ಬದಲಾಯಿಸದಿದ್ದಲ್ಲಿ ಮಾರನೆಯ ದಿನ ಇನ್ನೊಂದು ಗಾಜು ಪುಡಿಪುಡಿಯಾಗಬಹುದು” ಎಂಬ ಮಾತು ಅಷ್ಟೇ ಖಚಿತ.

ಕಾನೂನು ಪಾಲನೆ ಕೇವಲ ನಾಗರಿಕರ ಕೆಲಸವಷ್ಟೇ ಅಲ್ಲ ಪೋಲಿಸರೂ ಸಹ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ. ಆದ್ದರಿಂದ ಪೋಲಿಸರು ಜನರ ಮೇಲೆ ದೌರ್ಜನ್ಯವೆಸಗದೆ, ಅಪರಾಧಿಗಳಿಗೆ ಅವರ ಸಂಪೂರ್ಣ ಹಕ್ಕುಗಳನ್ನು ನೀಡಿ, ಕೇವಲ ಅವರ ಅಪರಾಧಕ್ಕೆ ತಕ್ಕ ಶಿಕ್ಷೆಯಾಗಲೇಬೇಕು. ಅಂದು ನಡೆದ ಪೋಲಿಸ್ಗಿರಿ, ಅದರಲ್ಲೂ ರಸ್ತೆಯಲ್ಲಿ ನಡೆಯುತ್ತಿದ್ದ ಎಲ್ಲ ಸಂಶಯಾಸ್ಪದ ಜನರ “ತಡೆ ಮತ್ತು ತಪಾಸಣೆ”ಯನ್ನು ಅಪರಾಧಕ್ಕೆ ಸೊನ್ನೆ ಸಹನೆ ಅಥವಾ ಅನಾವಶ್ಯಕ ದೌರ್ಜನ್ಯ ಎಂದು ಕೆಲವರಿಂದ ಪರಿಗಣಿಸಲ್ಪಟ್ಟರೂ ಸಹ, ಜೊತೆಗೆ ಪೋಲಿಸರಿಗೆ ಬೇಕಾದ ಸೂಕ್ಷ್ಮತೆ ತರಬೇತಿ, ಸಾಧನಗಳು, ಸಮಾಜದ ಜೊತೆ ಮಾನವೀಯ ಸಂಬಂಧ, ಸ್ಪಷ್ಟವಾದ ಆದೇಶಗಳು ಮತ್ತು ಸಮುದಾಯದ ಪೋಲಿಸ್ ಗಸ್ತು ಇಂತಹ ಧನಾತ್ಮಕ ಬದಲಾವಣೆಗಳೂ ಬಂದವು.

ನ್ಯೂಯಾರ್ಕ್ ನಗರ ಸಾರಿಗೆಯ ಅಧ್ಯಕ್ಷರಾಗಿ 1984ರಲ್ಲಿ ಬಂದ ಡೇವಿಡ್ ಎಲ್. ಗನ್ನ್ ಮತ್ತು ಸಲಹೆಗಾರರಾದ ಜಾರ್ಜ್ ಕೆಲ್ಲಿಂಗ್ ಕೂಡಲೇ ಎಲ್ಲ ಮುರಿದ ಗಾಜು, ಕಿಟಕಿಗಳನ್ನು ದುರಸ್ತಿಗೊಳಿಸಿದರು, ಗೋಡೆ ಮತ್ತು ರೈಲಿನ ಬೋಗಿಗಳ ಬರಹವನ್ನು ಸ್ವಚ್ಛಗೊಳಿಸಿದರು. ಟಿಕೇಟು ರಹಿತ ಪ್ರಯಾಣಿಕರನ್ನು ಹಿಡಿಯುವುದರಲ್ಲಿ ಅರ್ಥವಿರಲಿಲ್ಲ. ಏಕೆಂದರೆ ಅವರ ಈ ಅಪರಾಧಕ್ಕೆ ಯಾವ ನ್ಯಾಯಾಲಯವೂ ಕಠಿಣ ಶಿಕ್ಷೆ ವಿಧಿಸುವುದಿಲ್ಲ ಮತ್ತೆ ಅದಕ್ಕೋಸ್ಕರ ಪೋಲಿಸರಿಗೆ ಕಾರಕೂನಿ, ಓಡಾಟವೇ ಜಾಸ್ತಿ ಆಗುತ್ತದೆ ಎಂದು ತಿಳಿದಿದ್ದರೂ ಸಹ ಅವರನ್ನು ಅಟ್ಟಿಸಿಕೊಂಡು ಹೋಗಿ, ಹಿಡಿದು ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಅಪರಾಧಿಗಳಿಂದ ವಸೂಲಾದ ಚಾಕು, ಚೂರಿ, ಬಂದೂಕು, ಮಾದಕ ವಸ್ತು, ಹಿಂದಿನ ಅಪರಾಧ ಇತಿಹಾಸ ಎಲ್ಲವೂ ಅಪರಾಧಿಗಳ ಕಠಿಣ ಶಿಕ್ಷೆಗೆ ನೆರವಾಗುತ್ತಿತ್ತು. ಅಪರಾಧಿಗಳಿಗೆ ನಡುಕ ಹುಟ್ಟಿತ್ತು, ಅವರ ಧೈರ್ಯದ ಬೆನ್ನು ಮೂಳೆ ಮುರಿದಿತ್ತು.

1980ರ ದಶಕದಲ್ಲಿ ಅಪರಾಧ ಹೆಚ್ಚಾಗಿರುವುದಕ್ಕೆ ಇನ್ನೂ ಕೆಲವಾರು ಕಾರಣಗಳಿದ್ದವು. ಉದಾಹರಣೆಗೆ ಅಮೇರಿಕದ ಮತ್ತು ನ್ಯೂಯಾರ್ಕ್ ನಗರದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿತ್ತು. ಮಾದಕ ವಸ್ತುಗಳ, ಮಾರಕಾಸ್ತ್ರಗಳ ಲಭ್ಯತೆ ಸುಲಭವಾಗಿತ್ತು. 1994ರ ನಂತರ ನ್ಯೂಯಾರ್ಕ್ ನಗರದ ಅಪರಾಧಿಕ ಕೃತ್ಯದಲ್ಲಿ ಇದ್ದಕ್ಕಿದಂತೆ ತೀವ್ರ ಇಳಿತ ಕಂಡುಬಂತು. ಈ ಇಳಿತಕ್ಕೂ ಅನೇಕ ಕಾರಣಗಳಿವೆ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡು ಜನರಿಗೆ ಒಳ್ಳೆಯ ಕೆಲಸ ಸಿಗಲು ಪ್ರಾರಂಭವಾಯಿತು. ನಗರದ ಪೋಲಿಸ್ಗಿರಿಯಿಂದ ಮಾದಕ ವಸ್ತುಗಳ, ಮಾರಕಾಸ್ತ್ರಗಳ ಲಭ್ಯತೆ ಕಡಿಮೆಯಾಯಿತು. ಇನ್ನೂ ಅನೇಕ ಕಾರಣಗಳಿಂದಾಗಿ ಅಪರಾಧದ ಇಳಿತ ಸಾಧ್ಯವಾಯಿತು.

ಅಮೇರಿಕದ ಕತೆ ಹಾಗಿರಲಿ, ನಮ್ಮ ದೇಶಕ್ಕೆ ಮರಳಿ ಬರೋಣ.

ಎಲ್ಲೆಡೆ ಕಸದ ರಾಶಿ ಬಿದ್ದಿರುವ ಬೆಂಗಳೂರನ್ನೇ ತೆಗೆದುಕೊಳ್ಳಿ. ಕಸದ ರಾಶಿ ಏನು ಸಂದೇಶ ರವಾನಿಸುತ್ತದೆ? ಕಸ ಬಿದ್ದಿರುವ ಕಡೆಯಲ್ಲೇ ಇನ್ನಷ್ಟು ಹೆಚ್ಚಿನ ಕಸ ಬಂದು ಬೀಳುವುದು ಏಕೆ? ಜನರು ಅಲ್ಲೇ ಹೇಸಿಗೆ ಮಾಡುವುದು ಏಕೆ?

ಹೊಂಡ ತುಂಬಿದ ರಸ್ತೆ, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಮಳೆ-ಚರಂಡಿ ನೀರು, ಒತ್ತುವರಿಯಾದ ಅರಣ್ಯ, ಮಾಯವಾದ ಕೆರೆಗಳು-ರಾಜಾಕಾಲುವೆಗಳು ಏನು ಸಂದೇಶ ರವಾನಿಸುತ್ತದೆ? ಬೆಂಗಳೂರಿನ ತೆರಿಗೆ ಪಾವತಿಸುವ ಜನರಿಗೆ ಬಿಬಿಎಂಪಿಯ ಅನಧಿಕೃತ ಬಡಾವಣೆಗಳು, ಸರಕಾರದ ಅಕ್ರಮ-ಸಕ್ರಮ ನೀತಿ, ಏನು ಸಂದೇಶ ರವಾನಿಸುತ್ತದೆ? ಐಎಂಎ ಜುವೆಲರ್ಸ್ ಹಗರಣ ಏನು ಸಂದೇಶ ರವಾನಿಸುತ್ತದೆ?

ಇದನ್ನೂ ಓದಿ: SC/ST ಗಳ ವಿರುದ್ಧದ ಅಪರಾಧಗಳು 2020 ರಲ್ಲಿ 9% ಹೆಚ್ಚಳ – NCRB ಮಾಹಿತಿ

ನಗರದಿಂದ ಹೊರಬಂದು ದೇಶದ ಪರಿಸ್ಥಿತಿ ಅವಲೋಕಿಸೋಣ. ದೇಶದ ಬ್ಯಾಂಕುಗಳಿಗೆ ನಾಮ ಹಾಕಿ ಓಡಿ ಹೋದವರ ಕತೆ ಏನು ಸಂದೇಶ ರವಾನಿಸುತ್ತದೆ? 2ಜಿ, ಕಲ್ಲಿದ್ದಲಿ ಮತ್ತು ಇತರ ಆರ್ಥಿಕ ಹಗರಣದಲ್ಲಿ ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆಯಾಗದಿರುವುದು ಏನು ಸಂದೇಶ ರವಾನಿಸುತ್ತದೆ? ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಹತ್ಯೆ ಏನು ಸಂದೇಶ ರವಾನಿಸುತ್ತದೆ? ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿ ಏನು ಸಂದೇಶ ರವಾನಿಸುತ್ತದೆ?

ಇವೂ ಸಹ ಒಡೆದ ಗಾಜಿನ ಕತೆಯಲ್ಲವೇ?


ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: BJP ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ವಿರುದ್ದ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ಹೊಸ ಕಾಯ್ದೆಯಿಂದ ಸಂಕಷ್ಟ : ಇಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳಿಗೆ ಹಾರ್ಮೋನ್ ಚಿಕಿತ್ಸೆ ಮುಂದುವರಿಸಲು ಕೇರಳ ಹೈಕೋರ್ಟ್ ಅನುಮತಿ

ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026 ಅಂಗೀಕಾರಗೊಂಡ ನಂತರ ಆಸ್ಪತ್ರೆಗಳು ತಮ್ಮ ಚಿಕಿತ್ಸೆಯನ್ನು ಸ್ಥಗಿತಗೊಳಿಸಿವೆ ಎಂದು ಆರೋಪಿಸಿದ್ದ ಇಬ್ಬರು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಹಾರ್ಮೋನ್ ಬದಲಿ ಚಿಕಿತ್ಸೆಯನ್ನು ಮುಂದುವರಿಸಲು ಕೇರಳ ಹೈಕೋರ್ಟ್...

ಮಾದಕವಸ್ತು ತನಿಖೆಗೆ ಸಹಾಯಕವಾಗಿ AI ಆಧಾರಿತ ಅಪ್ಲಿಕೇಶನ್ ಆರಂಭಿಸಿದ ಗುಜರಾತ್ ಪೊಲೀಸರು

ಅಹಮದಾಬಾದ್: ಮಾದಕವಸ್ತು ಪ್ರಕರಣಗಳ ತನಿಖೆಯನ್ನು ಸುಲಭವಾಗಿಸಲು ಮತ್ತು ವಿಚಾರಣೆಯ ಸಮಯದಲ್ಲಿ ಅವುಗಳನ್ನು ಬಲಪಡಿಸಲು, ಇದರಿಂದಾಗಿ ಶಿಕ್ಷೆಯ ಪ್ರಮಾಣ ಸುಧಾರಿಸಲು ಗುಜರಾತ್ ಪೊಲೀಸರು ಶುಕ್ರವಾರ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಪ್ಲಿಕೇಶನ್ "NARIT AI"...

ಇಸ್ಲಾಮಾಬಾದ್‌ ಶಾಂತಿ ಮಾತುಕತೆ | ಅಮೆರಿಕ–ಇಸ್ರೇಲ್ ಹತ್ಯೆಗೈದ ಮಕ್ಕಳ ರಕ್ತಸಿಕ್ತ ಬ್ಯಾಗ್‌, ಶೂ ಹೊತ್ತು ತಂದ ಇರಾನ್

ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಆಗಮಿಸುವಾಗ, ಅಮೆರಿಕ-ಇಸ್ರೇಲ್‌ನ ಬಾಂಬ್‌ ದಾಳಿ ನಡೆಸಿ ಹತ್ಯೆಗೈದ ಮಕ್ಕಳ ಫೋಟೋ, ರಕ್ತಸಿಕ್ತ ಬ್ಯಾಗ್ ಮತ್ತು ಶೂಗಳನ್ನು ವಿಮಾನದಲ್ಲಿ ಹೊತ್ತು ತರುವ ಮೂಲಕ ಇರಾನ್‌ ಜಗತ್ತಿನ ಗಮನಸೆಳೆದಿದೆ. ಸಾಮಾಜಿಕ ಜಾಲತಾಣ...

ಮಣಿಪುರ: ಶಸ್ತ್ರಾಸ್ತ್ರಗಳು ಮತ್ತು ಗಸಗಸೆ ಬೀಜಗಳ ಚೀಲಗಳೊಂದಿಗೆ ಇಬ್ಬರನ್ನು ಬಂಧಿಸಿದ ಭದ್ರತಾ ಪಡೆ

ಇಂಫಾಲ: ಮಣಿಪುರದ ಚುರಚಂದಪುರ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಗಸಗಸೆ ಬೀಜಗಳ ಚೀಲಗಳನ್ನು(ಪಾಪಿ ಸೀಡ್ಸ್) ವಶಪಡಿಸಿಕೊಂಡ ನಂತರ ಭದ್ರತಾ ಪಡೆಗಳು ಅವರನ್ನು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಚುರಾಚಂದ್‌ಪುರ ಪೊಲೀಸ್ ಠಾಣೆ...

ಚಿತ್ರದುರ್ಗ: ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ): ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ಆಕೆಯ ಗರ್ಭಪಾತ ಮಾಡಿದ ಆರೋಪದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀಡಿದ ದೂರು ಆಧರಿಸಿ...

ಎಸ್‌ಐಆರ್‌ನಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ : ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೋರಿದ್ದ ಮಹಿಳೆಯ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಿರುವ ಮಹಿಳೆಯೊಬ್ಬರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಏ.10) ತಿರಸ್ಕರಿಸಿದೆ ಎಂದು ಕಾನೂನು...

ಇಸ್ಲಾಮಾಬಾದ್‌ನಲ್ಲಿ ಅಮೆರಿಕ–ಇರಾನ್ ಶಾಂತಿ ಮಾತುಕತೆ; ಪಾಕಿಸ್ತಾನ ಮಧ್ಯಸ್ಥಿಕೆ

ಹಲವು ರೀತಿಯ ಪ್ರತಿಷ್ಠೆ ಪ್ರದರ್ಶನ, ಭಿನ್ನಾಭಿಪ್ರಾಯಗಳ ನಡುವೆ ಅಮೆರಿಕ-ಇರಾನ್ ಶಾಂತಿ ಮಾತುಕತೆ ಶನಿವಾರ (ಏ.11) ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಪಾಕಿಸ್ತಾನದ ಪಾಲಿಗೆ ಇದು ಅತ್ಯಂತ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ....

ಕಾಂಗ್ರೆಸ್ ನಿಂದ ಏಪ್ರಿಲ್ 12ರಂದು ‘ರನ್ ಫಾರ್ ಅಂಬೇಡ್ಕರ್, ರನ್ ಫಾರ್ ಕಾನ್ಸ್ಟಿಟ್ಯೂಷನ್’ ಮ್ಯಾರಥಾನ್ ಆಯೋಜನೆ

ನವದೆಹಲಿ: ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಭಾನುವಾರ 'ಅಂಬೇಡ್ಕರ್‌ಗಾಗಿ ಓಟ, ಸಂವಿಧಾನಕ್ಕಾಗಿ ಓಟ' ಮ್ಯಾರಥಾನ್ ಆಯೋಜಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಮಂಡಿ ಹೌಸ್‌ನಿಂದ ಮ್ಯಾರಥಾನ್‌ಗೆ...

ಮುಖ್ಯವಾಹಿನಿಗೆ ಬಂದ 42 ಕೇಡರ್‌ಗಳು; ರಾಜ್ಯದಲ್ಲಿ’ಮಾವೋವಾದಿ ಕಾರ್ಯಾಚರಣೆ’ ಅಂತ್ಯವಾಗಿದೆ ಎಂದ ತೆಲಂಗಾಣ ಪೊಲೀಸರು

ರಾಜ್ಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆಯ ಕಾರ್ಯಚರಣೆ ಅಂತಿಮವಾಗಿದೆ ಎಂದು ತೆಲಂಗಾಣ ಪೊಲೀಸರು ಘೋಷಣೆ ಮಾಡಿದ್ದಾರೆ. ಬೆಟಾಲಿಯನ್ ಕಮಾಂಡರ್ ಮತ್ತು ಎರಡು ಪ್ರಮುಖ ಗುಂಪುಗಳ ಹಿರಿಯ ನಾಯಕತ್ವ ಸೇರಿದಂತೆ ನಿಷೇಧಿತ ಸಂಘಟನೆಯ 42 ಕೇಡರ್‌ಗಳು...

‘ಹಿಂದಿ ನಿರ್ಮೂಲನೆ ಮಾಡುತ್ತೇವೆ’ ಎಂದು ಸಚಿವರು ಹೇಳಿಲ್ಲ; ಹಿಂದಿ ಪರ ಅರ್ಜಿ ವಜಾ; ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳ ಮೌಲ್ಯಮಾಪನ ಸಂಬಂಧ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ ಹೇಳಿಕೆಯ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಕರ್ನಾಟಕ...