Homeಅಂಕಣಗಳುಡಾರ್ಕ್ ವೆಬ್ ಎಂಬ ಮಬ್ಬಲೆಯೊಳಗೆ ಬೀಳದಿರಿ ಜೋಕೆ..

ಡಾರ್ಕ್ ವೆಬ್ ಎಂಬ ಮಬ್ಬಲೆಯೊಳಗೆ ಬೀಳದಿರಿ ಜೋಕೆ..

- Advertisement -
- Advertisement -

ನಮ್ಮ ಬಳ್ಳಾರಿ ಜಿಲ್ಲೆಯ ಮೈಲಾರದಾಗ ದೇವರ ಭಕ್ತ ಗೊರಪ್ಪ ಪ್ರತಿ ವರ್ಷ ಜಾತ್ರಿಯೊಳಗ ಕರಣಿಕ ಅಂದರ ಭವಿಷ್ಯ ಹೇಳತಾನ. ಒಂದು ಹತ್ತು ವರ್ಷ ಹಿಂದ ಆತ ಹೇಳಿದ್ದು ಏನಪಾ ಅಂದರ `ಸಂಪೆಲ್ಲಾ ಮಬ್ಬಲೆ ಕಳೀತಲೇ ಪರಾಕ’ ಅಂತ. ಹಂಗಂದರ `ಎಷ್ಟು ಸಮೃದ್ಧಿ ಬಂದರ ಏನು, ಅಜ್ಞಾನ ಇದ್ದರ ಎಲ್ಲಾ ವ್ಯರ್ಥ,’ ಅಂತ.

ಆದರ ಈಗ ನಮಗ ಬೇಕಾಗಿರೋದು ಆ ಮಬ್ಬಲೆ ಅಲ್ಲ. ಇದು ಬ್ಯಾರೆ ಮಬ್ಬಲೆ. ನಮ್ಮ ಈ ವಾರದ ಪದ ಯಾವುದು ಅಂದರ ಡಾರ್ಕ ವೆಬ್ಬು. ಅಂದರ ಮಬ್ಬು ಬಲೆ- `ಮಬ್ಬಲೆ’

ಮೊನ್ನೆ ಒಂದು ಸುದ್ದಿ ಏನು ಬಂತಪಾ ಅಂದರ ನಮ್ಮ ದೇಶದ ಮೂರು ಕೋಟಿ ನಿರುದ್ಯೋಗಿ ಯುವ ಜನರ ವೈಯಕ್ತಿಕ ಮಾಹಿತಿ ಎಲ್ಲಾ ಡಾರ್ಕ ವೆಬ್ಬಿನ್ಯಾಗ/ ಮಬ್ಬಲೆಯೊಳಗ ಯಾರೋ ಅಪರಿಚಿತರು ಹಾಕಿ ಬಿಟ್ಟಾರಂತ. ಇದು ಬರೇ ಭಾರತದ ಪತ್ರಿಕೆಗಳಲ್ಲಿ ಅಲ್ಲ, ನ್ಯೂಯಾರ್ಕ ಟೈಮ್ಸ್ ಮುಂತಾದ ವಿದೇಶದ ಪತ್ರಿಕೆಗಳಲ್ಲಿ ಸಹಿತಿ ಬಂದು ಬಿಟ್ಟೇತಿ.

ಹಿಂಗಂದರೇನು? ಇದರಿಂದ ನಮಗ ಯಾವ ರೀತಿ ತೊಂದರೆ ಆಗತೇತಿ?

ಮೊದಲಿಗೆ- ಮಬ್ಬಲೆ ಅಂದರ ಜನಸಾಮಾನ್ಯರಿಗೆ ಅಂದರ ನಮಗೂ ನಿಮಗೂ ಸುಲಭಕ್ಕ ಸಿಗಲಾರದ ಅಂತರ್ಜಾಲ, ಸರಳವಾಗಿ ಹೇಳಬೇಕಂದರ ಗೂಗಲ್ಲಿನ್ಯಾಗ ಸಿಗಲಾರದ ಮಾಹಿತಿ. ಇಂತಾದ್ದೂ ಒಂದು ಐತಿ ಅಂತ ಭಾಳ ಜನರಿಗೆ ಗೊತ್ತು ಮಾಡಿಕೊಡಬೇಕಾಗತೇತಿ. ಎಲ್ಲಾರೂ ಗೂಗಲ್ ಹುಡುಕಾಟದ ಅಸ್ತ್ರ ಒಂದು ನಮ್ಮ ಫೋನಿನ್ಯಾಗ ಇದ್ದರ ಸಾಕು, ನಮಗ ಏನು ಬೇಕು ಎಲ್ಲಾ ಸಿಕ್ಕು ಬಿಡತದ ಅಂತ ತಿಳಕೊಂಡಿರತಾರ. ಆದರ ಅದು ಹಂಗಂಲ್ಲ.

ನಮಗ ಗೊತ್ತಿರಲಾರದ್ದು, ನಮ್ಮ ಕೈಯ್ಯಾಗ ಸಿಗಲಾರದ್ದು, ತಿಳಿಸಿದರೂ ತಿಳಿಯಲಾರದ್ದು ಬೇಕಾದಷ್ಟು ಐತಿ. ಈದು ಏನಪಾ ಅಂದರ ಸಾಫ್ಟವೇರು ತಂತ್ರಜ್ಞಾನದೊಳಗ ಸಾಕಷ್ಟು ಪರಿಣಿತಿ ಹೊಂದಿರೋ ಕೆಲವರು, ತಮ್ಮ ಶಾಣೆತನಾ ಉಪಯೋಗಿಸಿ ಅಂತರಜಾಲದಾಗ ಒಂದಿಷ್ಟು ಮಾಹಿತಿ ಮುಚ್ಚಿ ಇಡತಾರ. ಅದನ್ನ ತೆಗೀಲಿಕ್ಕೆ ಆ ಮಟ್ಟಿಗಿನ ತಾಂತ್ರಿಕತೆ ಇದ್ದವರಿಗೆ ಅಷ್ಟ ಸಾಧ್ಯ. ಅದು ಹೆಂಗಪಾ ಅಂದರ ಪಾತಾಳ ಗರಡಿ ಹಾಕಿ ತಾಮ್ರದ ಕೊಡಾ ತಗದ ಹಂಗ. ಅಥವಾ ಅಕ್ಕ ಹೇಳಿದಂಗ `ನೆಲದ ಮರೆಯ ನಿದಾನದಂತೆ’.

ಇದನ್ನ ಟೋರು, ಫ್ರೀನೆಟ್ಟು, ರಿಫಲ್ಲು, ಐಟುಪಿ, ಮುಂತಾದ ತಂತ್ರಜ್ಞಾನದ ಉಪಕರಣಗಳನ್ನ ಬಳಸಿ ನೋಡಲಿಕ್ಕೆ ಬರತೇತಿ. ಇವನ್ನ ಯಾವ ಕಾಲೇಜಿನಾಗೂ ಕಲಿಸೋದಿಲ್ಲ. ಆಸಕ್ತಿ ಇದ್ದವರು ಅದನ್ನ ಕಲಕೋಬೇಕು.

ಮೊದಲಿಗೆ ಏನು ಆತಪಾ ಅಂದರ ಕೆಲವು ಉತ್ಸಾಹಿ ತರುಣರು, (ಎಲ್ಲಾ ತರುಣರು ಉತ್ಸಾಹಿ ಇರಲಿಕ್ಕೆ ಸಾಧ್ಯ ಇಲ್ಲ. ಎಲ್ಲಾ ಉತ್ಸಾಹಿಗಳು ತರುಣರಾಗಿರಬೇಕು ಅಂತೇನೂ ಇಲ್ಲ) ಸೇರಿಕೊಂಡು ಕೆಲವು ವಿಶೇಷ ಮಾಹಿತಿ- ಹೊಸದಾಗಿ ಕಂಡುಹಿಡಿದ, ಆದರ ಎಲ್ಲಾರ ಜೊತೆ ಪುಕ್ಕಟೆಯಾಗಿ ಹಂಚಿಕೊಳ್ಳಲಿಕ್ಕೆ ಸಾಧ್ಯವಿಲ್ಲದ ತಾಂತ್ರಿಕತೆ, ರಹಸ್ಯ ನಾಣ್ಯ, ಜನರಿಗೆ ಅನುಕೂಲವಾಗಬಹುದಾದ ಸರಕಾರಿ ರಹಸ್ಯಗಳು, ಅಧಿಕಾರದಲ್ಲಿ ಇರೋರ ಕಾರಸ್ಥಾನ ಇತ್ಯಾದಿಗಳನ್ನು ಒಂದು ಕಡೆ ಇಡೋ ಉದ್ದೇಶದಿಂದ ಇದನ್ನ ಆರಂಭ ಮಾಡಿದರು. ಆದರ ಅದು ಮುಂದ ಹೋದಂಗ, ಶಿಶು ಲೈಂಗಿಕತೆ, ಶಸ್ತ್ರಾಸ್ತ್ರ, ಮಾದಕ ದೃವ್ಯ, ಕಳ್ಳ ಸಾಗಾಣಿಕೆ ಇತ್ಯಾದಿಗಳ ಖರೀದಿ- ಮಾರಾಟದ ರಹದಾರಿ ಆತು.

ಹಂಗಂತ ಮಬ್ಬಲೆಯ ಎಲ್ಲಾ ಬಳಕೆದಾರರು ಕೆಟ್ಟವರು ಅಂತಲ್ಲ. ಅದನ್ನು ಬಹಳ ಒಳ್ಳೆ ಕೆಲಸಕ್ಕೆ ಬಳಸಿಕೊಳ್ಳೋರು ಬಹಳ ಜನ ಇದ್ದಾರ. ಅವರು ಗೂಗಲ್ಲು- ಫೇಸುಬುಕ್ಕು, ಅಮೇಜಾನು ಮುಂತಾದ ದೈತ್ಯ ಕಂಪನಿಗಳ ಕೈಯಿಂದ ತಂತ್ರಜ್ಞಾನವನ್ನು ಬಿಡುಗಡೆ ಮಾಡಬೇಕು, ಅದು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಸರಳವಾಗಿ ಸಿಗಬೇಕು ಅಂತ ಹೇಳಿ ಅದನ್ನು ಬಳಸಿಕೊಳ್ಳತಾರ. ದೊಡ್ಡ ದೊಡ್ಡ ಕಂಪನಿಗಳ ಟ್ರಕ್ಕುಗಳು ಹೆದ್ದಾರಿ ಉಪಯೋಗಿಸಿದರ, ಮಬ್ಬಲೆ ಬಳಸುವವರು ಕಿರಿದಾರಿ ಬಳಸುವ ಸೈಕಲ್ಲು ಇದ್ದಂಗ.

ಇವರಿಗೆ ಬೈಯುವರೂ ಇದ್ದಾರ, ಹೊಗಳುವವರೂ ಇದ್ದಾರ. ನೀವು ಎಲ್ಲರ ಹತ್ತರ ಏನನ್ನೋ ಮುಚ್ಚಿಇಡತಾ ಇದ್ದೀರಿ ಅಂತ ಕೆಲವರು ಆರೋಪಿಸಿದರ, ಅಂತರ್ಜಾಲವನ್ನು ಬಂಧ ಮುಕ್ತರನ್ನಾಗಿ ಮಾಡತಾ ಇದ್ದೀರಿ ಅಂತ ಕೆಲವರು ಕೊಂಡಾಡತಾರ.

ರೋಜರ ಡಿಂಗಲಡಿನ್ ಅನ್ನೋ ವಿಚಿತ್ರ ಹೆಸರಿನ ಒಬ್ಬ ಮನುಷಾ ಇದ್ದಾನ. ಟೋರು ತಂತ್ರಜ್ಞಾನದ ಸಂಶೋಧಕರಲ್ಲಿ ಒಬ್ಬ. ಅವ “ನೀವು ನಮ್ಮನ್ನ ಏನು ಮಬ್ಬಲೆ ಬಳಕೆದಾರರು ಅಂತ ಕರೀತೀರಿ? ನೀವು ಉಪಯೋಗಿಸೋ ಫೇಸುಬುಕ್ಕು ಅದಲಾ ಅದ ದೊಡ್ಡ ಮಬ್ಬಲೆ. ಅದರಾಗ ಸಿಕ್ಕವ ಯಾರೂ ಹೊರಗ ಬರಲಿಕ್ಕೆ ಸಾಧ್ಯ ಇಲ್ಲ. ಅದರಾಗ ನಿಮಗ ಸಿಗೋ ಮಾಹಿತಿ ಶೇಕಡಾ ಹತ್ತಕ್ಕಿಂತಲೂ ಕಮ್ಮಿ” ಅಂತ ಹೇಳಿಕೊಂಡು ನಗತಾನ.

ಅಂದಂಗ ನಮ್ಮ ನಿರುದ್ಯೋಗಿಗಳ ಮಾಹಿತಿ ಮಬ್ಬಲೆಯೊಳಗ ಸಿಕ್ಕರ ಏನು ಆಗತೇತಿ? ಅದನ್ನ ಒಳ್ಳೆಯವರು ಬಳಸಿದರ ಇವರಿಗೆ ನೌಕರಿ ಸಿಗಬಹುದು, ಒಳ್ಳೆಯ ಸ್ಥಾನಮಾನ ದೊರಕಿ ಒಂದಿಷ್ಟು ಹಣ ಸಿಕ್ಕಬಹುದು. ಅವರ ತಂತ್ರಜ್ಞಾನದ ಅರಿವು ಹೆಚ್ಚಾಗಬಹುದು. ಆದರ ಕೆಟ್ಟವರ ಕೈಗೆ ಸಿಕ್ಕರ? ಅದನ್ನ ಅವರು ನೌಕರಿ ಡಾಟ್ ಕಾಂ ನಂಥಾ ಕಂಪನಿಗಳಿಗೆ ಮಾರಿಕೊಳ್ಳಬಹುದು. ಅವರು ಅದನ್ನ ಯಾವುದೋ ಕಂಪನಿಯವರಿಗೆ ಮಾರಿಕೊಳ್ಳಬಹುದು. ಅವರು ಕೆಲಸ ಕೇಳಲಿಕ್ಕೆ ಹೋದ ನಿರುದ್ಯೋಗಿಗಳನ್ನ ಯಾಮಾರಿಸಬಹುದು, ಬ್ಲ್ಯಾಕ ಮೇಲು ಮಾಡಬಹುದು. ವಿನಾಕಾರಣ ತೊಂದರೆ ಕೊಡಬಹುದು.

ಏನು ಇದ್ದರೂ ನಮ್ಮ ವೈಯಕ್ತಿಕ ಮಾಹಿತಿ ಅನ್ನೋದು ನಮಗ ಪರಿಚಯ ಇಲ್ಲದ ಇನ್ನೊಬ್ಬನಿಗೆ ಸಿಗೋದು ಬಹಳ ಅಪಾಯಕಾರಿ. ಅವರ ಕೈಯಾಗ ನಮ್ಮ ಕುತಗಿ ಕೊಟ್ಟಂಗ. ಅವರು ಮಾಲಿಷು ಮಾಡಬಹುದು, ಅಥವಾ ಕುತಗಿ ಹಿಚಗಬಹುದು.

ಎಲ್ಲಾ ಸರಿ, ಇಷ್ಟೆಲ್ಲಾ ರಾದ್ಧಾಂತ ಆಗಿ ಹೋದ ಮ್ಯಾಲೆ ನಮ್ಮ ಸರಕಾರದವರು ಏನು ಮಾಡಿದರು? ಛಪ್ಪನ ಇಂಚಿನ ಛಾತಿ ಇದ್ದವರು ಇಂಥಾ ಮಾಹಿತಿ ಸೋರಿ ಹೋಗಲಾರದ ಹಂಗ ಏನರ ಮಾಡಿದರ? ಇಲ್ಲಾ. ಏನರ ಮಾಡೋದು ಹೋಗಲಿ, ಸರಕಾರದಾಗ ಯಾರುನೂ- ದೊಡ್ಡವರಾಗಲೀ, ಸಣ್ಣವರಾಗಲೀ, ಇದು ಸಮಸ್ಯೆ ಆಗೇದ ಅಂತ ಒಪ್ಪಿಕೊಳ್ಳಲಿಲ್ಲ.

ಅವರು ಹೋಗಲಿ, ವಿಶ್ವದಾದ್ಯಂತ ಭಾರತದ ಹಿರಿಮೆಯನ್ನು ಬಿತ್ತಿದ ನಮ್ಮ ಹೆಮ್ಮೆಯ ಐಟಿ- ಬಿಟಿ ಹುಡುಗರು ಏನರ ಮಾಡಿದರ? ಇಲ್ಲಾ. ಅವರೆಲ್ಲಾ ಇವರನ್ನು ಸುಳ್ಳೇ ಹೊಗಳಿ, ಅವರನ್ನ ಸುಳ್ಳು ಸುಳ್ಳೇ ತೆಗಳೋದರಾಗ ಬಿಜಿ ಇದ್ದಾರ. ಅವರಿಗೆ ಇಂಥಾದಕ್ಕೆಲ್ಲಾ ಎಲ್ಲೆ ಟೈಂ ಇರಬೇಕು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...