Homeಅಂಕಣಗಳುಡಾರ್ಕ್ ವೆಬ್ ಎಂಬ ಮಬ್ಬಲೆಯೊಳಗೆ ಬೀಳದಿರಿ ಜೋಕೆ..

ಡಾರ್ಕ್ ವೆಬ್ ಎಂಬ ಮಬ್ಬಲೆಯೊಳಗೆ ಬೀಳದಿರಿ ಜೋಕೆ..

- Advertisement -
- Advertisement -

ನಮ್ಮ ಬಳ್ಳಾರಿ ಜಿಲ್ಲೆಯ ಮೈಲಾರದಾಗ ದೇವರ ಭಕ್ತ ಗೊರಪ್ಪ ಪ್ರತಿ ವರ್ಷ ಜಾತ್ರಿಯೊಳಗ ಕರಣಿಕ ಅಂದರ ಭವಿಷ್ಯ ಹೇಳತಾನ. ಒಂದು ಹತ್ತು ವರ್ಷ ಹಿಂದ ಆತ ಹೇಳಿದ್ದು ಏನಪಾ ಅಂದರ `ಸಂಪೆಲ್ಲಾ ಮಬ್ಬಲೆ ಕಳೀತಲೇ ಪರಾಕ’ ಅಂತ. ಹಂಗಂದರ `ಎಷ್ಟು ಸಮೃದ್ಧಿ ಬಂದರ ಏನು, ಅಜ್ಞಾನ ಇದ್ದರ ಎಲ್ಲಾ ವ್ಯರ್ಥ,’ ಅಂತ.

ಆದರ ಈಗ ನಮಗ ಬೇಕಾಗಿರೋದು ಆ ಮಬ್ಬಲೆ ಅಲ್ಲ. ಇದು ಬ್ಯಾರೆ ಮಬ್ಬಲೆ. ನಮ್ಮ ಈ ವಾರದ ಪದ ಯಾವುದು ಅಂದರ ಡಾರ್ಕ ವೆಬ್ಬು. ಅಂದರ ಮಬ್ಬು ಬಲೆ- `ಮಬ್ಬಲೆ’

ಮೊನ್ನೆ ಒಂದು ಸುದ್ದಿ ಏನು ಬಂತಪಾ ಅಂದರ ನಮ್ಮ ದೇಶದ ಮೂರು ಕೋಟಿ ನಿರುದ್ಯೋಗಿ ಯುವ ಜನರ ವೈಯಕ್ತಿಕ ಮಾಹಿತಿ ಎಲ್ಲಾ ಡಾರ್ಕ ವೆಬ್ಬಿನ್ಯಾಗ/ ಮಬ್ಬಲೆಯೊಳಗ ಯಾರೋ ಅಪರಿಚಿತರು ಹಾಕಿ ಬಿಟ್ಟಾರಂತ. ಇದು ಬರೇ ಭಾರತದ ಪತ್ರಿಕೆಗಳಲ್ಲಿ ಅಲ್ಲ, ನ್ಯೂಯಾರ್ಕ ಟೈಮ್ಸ್ ಮುಂತಾದ ವಿದೇಶದ ಪತ್ರಿಕೆಗಳಲ್ಲಿ ಸಹಿತಿ ಬಂದು ಬಿಟ್ಟೇತಿ.

ಹಿಂಗಂದರೇನು? ಇದರಿಂದ ನಮಗ ಯಾವ ರೀತಿ ತೊಂದರೆ ಆಗತೇತಿ?

ಮೊದಲಿಗೆ- ಮಬ್ಬಲೆ ಅಂದರ ಜನಸಾಮಾನ್ಯರಿಗೆ ಅಂದರ ನಮಗೂ ನಿಮಗೂ ಸುಲಭಕ್ಕ ಸಿಗಲಾರದ ಅಂತರ್ಜಾಲ, ಸರಳವಾಗಿ ಹೇಳಬೇಕಂದರ ಗೂಗಲ್ಲಿನ್ಯಾಗ ಸಿಗಲಾರದ ಮಾಹಿತಿ. ಇಂತಾದ್ದೂ ಒಂದು ಐತಿ ಅಂತ ಭಾಳ ಜನರಿಗೆ ಗೊತ್ತು ಮಾಡಿಕೊಡಬೇಕಾಗತೇತಿ. ಎಲ್ಲಾರೂ ಗೂಗಲ್ ಹುಡುಕಾಟದ ಅಸ್ತ್ರ ಒಂದು ನಮ್ಮ ಫೋನಿನ್ಯಾಗ ಇದ್ದರ ಸಾಕು, ನಮಗ ಏನು ಬೇಕು ಎಲ್ಲಾ ಸಿಕ್ಕು ಬಿಡತದ ಅಂತ ತಿಳಕೊಂಡಿರತಾರ. ಆದರ ಅದು ಹಂಗಂಲ್ಲ.

ನಮಗ ಗೊತ್ತಿರಲಾರದ್ದು, ನಮ್ಮ ಕೈಯ್ಯಾಗ ಸಿಗಲಾರದ್ದು, ತಿಳಿಸಿದರೂ ತಿಳಿಯಲಾರದ್ದು ಬೇಕಾದಷ್ಟು ಐತಿ. ಈದು ಏನಪಾ ಅಂದರ ಸಾಫ್ಟವೇರು ತಂತ್ರಜ್ಞಾನದೊಳಗ ಸಾಕಷ್ಟು ಪರಿಣಿತಿ ಹೊಂದಿರೋ ಕೆಲವರು, ತಮ್ಮ ಶಾಣೆತನಾ ಉಪಯೋಗಿಸಿ ಅಂತರಜಾಲದಾಗ ಒಂದಿಷ್ಟು ಮಾಹಿತಿ ಮುಚ್ಚಿ ಇಡತಾರ. ಅದನ್ನ ತೆಗೀಲಿಕ್ಕೆ ಆ ಮಟ್ಟಿಗಿನ ತಾಂತ್ರಿಕತೆ ಇದ್ದವರಿಗೆ ಅಷ್ಟ ಸಾಧ್ಯ. ಅದು ಹೆಂಗಪಾ ಅಂದರ ಪಾತಾಳ ಗರಡಿ ಹಾಕಿ ತಾಮ್ರದ ಕೊಡಾ ತಗದ ಹಂಗ. ಅಥವಾ ಅಕ್ಕ ಹೇಳಿದಂಗ `ನೆಲದ ಮರೆಯ ನಿದಾನದಂತೆ’.

ಇದನ್ನ ಟೋರು, ಫ್ರೀನೆಟ್ಟು, ರಿಫಲ್ಲು, ಐಟುಪಿ, ಮುಂತಾದ ತಂತ್ರಜ್ಞಾನದ ಉಪಕರಣಗಳನ್ನ ಬಳಸಿ ನೋಡಲಿಕ್ಕೆ ಬರತೇತಿ. ಇವನ್ನ ಯಾವ ಕಾಲೇಜಿನಾಗೂ ಕಲಿಸೋದಿಲ್ಲ. ಆಸಕ್ತಿ ಇದ್ದವರು ಅದನ್ನ ಕಲಕೋಬೇಕು.

ಮೊದಲಿಗೆ ಏನು ಆತಪಾ ಅಂದರ ಕೆಲವು ಉತ್ಸಾಹಿ ತರುಣರು, (ಎಲ್ಲಾ ತರುಣರು ಉತ್ಸಾಹಿ ಇರಲಿಕ್ಕೆ ಸಾಧ್ಯ ಇಲ್ಲ. ಎಲ್ಲಾ ಉತ್ಸಾಹಿಗಳು ತರುಣರಾಗಿರಬೇಕು ಅಂತೇನೂ ಇಲ್ಲ) ಸೇರಿಕೊಂಡು ಕೆಲವು ವಿಶೇಷ ಮಾಹಿತಿ- ಹೊಸದಾಗಿ ಕಂಡುಹಿಡಿದ, ಆದರ ಎಲ್ಲಾರ ಜೊತೆ ಪುಕ್ಕಟೆಯಾಗಿ ಹಂಚಿಕೊಳ್ಳಲಿಕ್ಕೆ ಸಾಧ್ಯವಿಲ್ಲದ ತಾಂತ್ರಿಕತೆ, ರಹಸ್ಯ ನಾಣ್ಯ, ಜನರಿಗೆ ಅನುಕೂಲವಾಗಬಹುದಾದ ಸರಕಾರಿ ರಹಸ್ಯಗಳು, ಅಧಿಕಾರದಲ್ಲಿ ಇರೋರ ಕಾರಸ್ಥಾನ ಇತ್ಯಾದಿಗಳನ್ನು ಒಂದು ಕಡೆ ಇಡೋ ಉದ್ದೇಶದಿಂದ ಇದನ್ನ ಆರಂಭ ಮಾಡಿದರು. ಆದರ ಅದು ಮುಂದ ಹೋದಂಗ, ಶಿಶು ಲೈಂಗಿಕತೆ, ಶಸ್ತ್ರಾಸ್ತ್ರ, ಮಾದಕ ದೃವ್ಯ, ಕಳ್ಳ ಸಾಗಾಣಿಕೆ ಇತ್ಯಾದಿಗಳ ಖರೀದಿ- ಮಾರಾಟದ ರಹದಾರಿ ಆತು.

ಹಂಗಂತ ಮಬ್ಬಲೆಯ ಎಲ್ಲಾ ಬಳಕೆದಾರರು ಕೆಟ್ಟವರು ಅಂತಲ್ಲ. ಅದನ್ನು ಬಹಳ ಒಳ್ಳೆ ಕೆಲಸಕ್ಕೆ ಬಳಸಿಕೊಳ್ಳೋರು ಬಹಳ ಜನ ಇದ್ದಾರ. ಅವರು ಗೂಗಲ್ಲು- ಫೇಸುಬುಕ್ಕು, ಅಮೇಜಾನು ಮುಂತಾದ ದೈತ್ಯ ಕಂಪನಿಗಳ ಕೈಯಿಂದ ತಂತ್ರಜ್ಞಾನವನ್ನು ಬಿಡುಗಡೆ ಮಾಡಬೇಕು, ಅದು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಸರಳವಾಗಿ ಸಿಗಬೇಕು ಅಂತ ಹೇಳಿ ಅದನ್ನು ಬಳಸಿಕೊಳ್ಳತಾರ. ದೊಡ್ಡ ದೊಡ್ಡ ಕಂಪನಿಗಳ ಟ್ರಕ್ಕುಗಳು ಹೆದ್ದಾರಿ ಉಪಯೋಗಿಸಿದರ, ಮಬ್ಬಲೆ ಬಳಸುವವರು ಕಿರಿದಾರಿ ಬಳಸುವ ಸೈಕಲ್ಲು ಇದ್ದಂಗ.

ಇವರಿಗೆ ಬೈಯುವರೂ ಇದ್ದಾರ, ಹೊಗಳುವವರೂ ಇದ್ದಾರ. ನೀವು ಎಲ್ಲರ ಹತ್ತರ ಏನನ್ನೋ ಮುಚ್ಚಿಇಡತಾ ಇದ್ದೀರಿ ಅಂತ ಕೆಲವರು ಆರೋಪಿಸಿದರ, ಅಂತರ್ಜಾಲವನ್ನು ಬಂಧ ಮುಕ್ತರನ್ನಾಗಿ ಮಾಡತಾ ಇದ್ದೀರಿ ಅಂತ ಕೆಲವರು ಕೊಂಡಾಡತಾರ.

ರೋಜರ ಡಿಂಗಲಡಿನ್ ಅನ್ನೋ ವಿಚಿತ್ರ ಹೆಸರಿನ ಒಬ್ಬ ಮನುಷಾ ಇದ್ದಾನ. ಟೋರು ತಂತ್ರಜ್ಞಾನದ ಸಂಶೋಧಕರಲ್ಲಿ ಒಬ್ಬ. ಅವ “ನೀವು ನಮ್ಮನ್ನ ಏನು ಮಬ್ಬಲೆ ಬಳಕೆದಾರರು ಅಂತ ಕರೀತೀರಿ? ನೀವು ಉಪಯೋಗಿಸೋ ಫೇಸುಬುಕ್ಕು ಅದಲಾ ಅದ ದೊಡ್ಡ ಮಬ್ಬಲೆ. ಅದರಾಗ ಸಿಕ್ಕವ ಯಾರೂ ಹೊರಗ ಬರಲಿಕ್ಕೆ ಸಾಧ್ಯ ಇಲ್ಲ. ಅದರಾಗ ನಿಮಗ ಸಿಗೋ ಮಾಹಿತಿ ಶೇಕಡಾ ಹತ್ತಕ್ಕಿಂತಲೂ ಕಮ್ಮಿ” ಅಂತ ಹೇಳಿಕೊಂಡು ನಗತಾನ.

ಅಂದಂಗ ನಮ್ಮ ನಿರುದ್ಯೋಗಿಗಳ ಮಾಹಿತಿ ಮಬ್ಬಲೆಯೊಳಗ ಸಿಕ್ಕರ ಏನು ಆಗತೇತಿ? ಅದನ್ನ ಒಳ್ಳೆಯವರು ಬಳಸಿದರ ಇವರಿಗೆ ನೌಕರಿ ಸಿಗಬಹುದು, ಒಳ್ಳೆಯ ಸ್ಥಾನಮಾನ ದೊರಕಿ ಒಂದಿಷ್ಟು ಹಣ ಸಿಕ್ಕಬಹುದು. ಅವರ ತಂತ್ರಜ್ಞಾನದ ಅರಿವು ಹೆಚ್ಚಾಗಬಹುದು. ಆದರ ಕೆಟ್ಟವರ ಕೈಗೆ ಸಿಕ್ಕರ? ಅದನ್ನ ಅವರು ನೌಕರಿ ಡಾಟ್ ಕಾಂ ನಂಥಾ ಕಂಪನಿಗಳಿಗೆ ಮಾರಿಕೊಳ್ಳಬಹುದು. ಅವರು ಅದನ್ನ ಯಾವುದೋ ಕಂಪನಿಯವರಿಗೆ ಮಾರಿಕೊಳ್ಳಬಹುದು. ಅವರು ಕೆಲಸ ಕೇಳಲಿಕ್ಕೆ ಹೋದ ನಿರುದ್ಯೋಗಿಗಳನ್ನ ಯಾಮಾರಿಸಬಹುದು, ಬ್ಲ್ಯಾಕ ಮೇಲು ಮಾಡಬಹುದು. ವಿನಾಕಾರಣ ತೊಂದರೆ ಕೊಡಬಹುದು.

ಏನು ಇದ್ದರೂ ನಮ್ಮ ವೈಯಕ್ತಿಕ ಮಾಹಿತಿ ಅನ್ನೋದು ನಮಗ ಪರಿಚಯ ಇಲ್ಲದ ಇನ್ನೊಬ್ಬನಿಗೆ ಸಿಗೋದು ಬಹಳ ಅಪಾಯಕಾರಿ. ಅವರ ಕೈಯಾಗ ನಮ್ಮ ಕುತಗಿ ಕೊಟ್ಟಂಗ. ಅವರು ಮಾಲಿಷು ಮಾಡಬಹುದು, ಅಥವಾ ಕುತಗಿ ಹಿಚಗಬಹುದು.

ಎಲ್ಲಾ ಸರಿ, ಇಷ್ಟೆಲ್ಲಾ ರಾದ್ಧಾಂತ ಆಗಿ ಹೋದ ಮ್ಯಾಲೆ ನಮ್ಮ ಸರಕಾರದವರು ಏನು ಮಾಡಿದರು? ಛಪ್ಪನ ಇಂಚಿನ ಛಾತಿ ಇದ್ದವರು ಇಂಥಾ ಮಾಹಿತಿ ಸೋರಿ ಹೋಗಲಾರದ ಹಂಗ ಏನರ ಮಾಡಿದರ? ಇಲ್ಲಾ. ಏನರ ಮಾಡೋದು ಹೋಗಲಿ, ಸರಕಾರದಾಗ ಯಾರುನೂ- ದೊಡ್ಡವರಾಗಲೀ, ಸಣ್ಣವರಾಗಲೀ, ಇದು ಸಮಸ್ಯೆ ಆಗೇದ ಅಂತ ಒಪ್ಪಿಕೊಳ್ಳಲಿಲ್ಲ.

ಅವರು ಹೋಗಲಿ, ವಿಶ್ವದಾದ್ಯಂತ ಭಾರತದ ಹಿರಿಮೆಯನ್ನು ಬಿತ್ತಿದ ನಮ್ಮ ಹೆಮ್ಮೆಯ ಐಟಿ- ಬಿಟಿ ಹುಡುಗರು ಏನರ ಮಾಡಿದರ? ಇಲ್ಲಾ. ಅವರೆಲ್ಲಾ ಇವರನ್ನು ಸುಳ್ಳೇ ಹೊಗಳಿ, ಅವರನ್ನ ಸುಳ್ಳು ಸುಳ್ಳೇ ತೆಗಳೋದರಾಗ ಬಿಜಿ ಇದ್ದಾರ. ಅವರಿಗೆ ಇಂಥಾದಕ್ಕೆಲ್ಲಾ ಎಲ್ಲೆ ಟೈಂ ಇರಬೇಕು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...