Homeಅಂಕಣಗಳು370ನೇ ವಿಧಿ ರದ್ದು ಮಾಡುವುದರಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ

370ನೇ ವಿಧಿ ರದ್ದು ಮಾಡುವುದರಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ

- Advertisement -
- Advertisement -

| ಎಚ್.ಎಸ್. ದೊರೆಸ್ವಾಮಿ |

2019ರ ಆಗಸ್ಟ್ 5ರಂದು 50000 ಸೈನಿಕರನ್ನು ಹಠಾತ್ತನೆ ಕಾಶ್ಮೀರಕ್ಕೆ ಕಳಿಸಲಾಯಿತು. ಕಫ್ರ್ಯೂ ವಿಧಿಸಲಾಯಿತು. ಅಲ್ಲಿ ಏನು ನಡೆಯುತ್ತಿದೆ ಎಂಬ ಸುದ್ದಿ ಭಾರತದ ಇತರ ಭಾಗದ ಜನರಿಗೆ ಗೊತ್ತಾಗದಂತೆ ಅಲ್ಲಿಯ ಸುದ್ದಿ ಸಂಸ್ಥೆಗಳನ್ನು ಸ್ಥಗಿತಗೊಳಿಸಲಾಯಿತು. ಕಾಶ್ಮೀರದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ ಮುಂತಾದವರನ್ನು ಗೃಹಬಂಧನದಲ್ಲಿ ಇಡಲಾಯಿತು. ಕಾಶ್ಮೀರದ ಭವಿಷ್ಯವನ್ನು ಇತರ ರಾಜ್ಯಗಳ ಬಿಜೆಪಿ ಲೋಕಸಭಾ ಸದಸ್ಯರು ನಿರ್ಧರಿಸಿಬಿಟ್ಟರು. ಆರ್ಟಿಕಲ್ 370ನ್ನು ಹಿಂಪಡೆಯಲಾಯಿತು. ಪಾರ್ಲಿಮೆಂಟಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರು, ಇನ್ನೂ ಖಚಿತವಾಗಿ ಹೇಳಬೇಕಾದರೆ ಮೋದಿ ಮತ್ತು ಅಮಿತ್ ಶಾರವರು ಕಾಶ್ಮೀರದ ಭವಿಷ್ಯವನ್ನು ನಿರ್ಧರಿಸಿಬಿಟ್ಟರು.

370ನೇ ವಿಧಿಯನ್ನು ತಿದ್ದುಪಡಿ ಮಾಡುವ ಮೊದಲು ಕಾಶ್ಮೀರ ಜನರ ಅಭಿಪ್ರಾಯ ಕೇಳಬೇಕಾಗಿತ್ತು. ಲೋಕಸಭೆಯ ವಿರೋಧ ಪಕ್ಷದವರ ಅಭಿಪ್ರಾಯ ಏನೆಂದು ತಿಳಿಯಬೇಕಿತ್ತು. ಕೇಂದ್ರ ಸರ್ಕಾರ ಈ ರೀತಿ ಹಠತ್ತಾಗಿ ಕಾಶ್ಮೀರದ ಮೇಲೆ ತಮ್ಮ ತೀರ್ಮಾನ ಹೇರುವ ಬದಲು ಮೇಲೆ ಹೇಳಿದ ಎಲ್ಲರ ಒಟ್ಟು ಅಭಿಪ್ರಾಯವನ್ನು ತಿಳಿಯುವ ಅವಶ್ಯಕತೆ ಇತ್ತು.

ಹಿಂದೆ ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಕೂಡಿಸಿ ವಿಶಾಲಾಂಧ್ರ ರಚಿಸಬೇಕೆಂದು ಸರ್ಕಾರ ತೀರ್ಮಾನಿಸಿತು. ಎಲ್ಲಾ ದೃಷ್ಟಿಯಿಂದಲೂ ಹಿಂದುಳಿದಿದ್ದ ತೆಲಂಗಾಣವನ್ನು ಬುದ್ಧಿವಂತರೂ, ಐಶ್ವರ್ಯವಂತರೂ, ಸಾಹಸಿ ಉದ್ಯಮಿಗಳೂ ಆದ ಆಂಧ್ರ ಪ್ರದೇಶದವರ ವಶಕ್ಕೆ ವಸಾಹತು ನೀಡಿದಂತೆ ನೀಡಬೇಕೆಂಬ ರೀತಿಯಲ್ಲಿ ಈ ಘೋಷಣೆ ಮಾಡಿತು. ಹಾಗೆಯೇ ತೆಲಂಗಾಣದವರಿಗೆ ತಮ್ಮ ನದಿಗಳ ಮೇಲಿನ ಹಕ್ಕುಗಳ ಬಗೆಗೂ ಮತ್ತು ನೀರಿನ ಭದ್ರತೆಯ ಬಗೆಗೂ ಕಾಳಜಿ ಇತ್ತು.

ಈ ಕಾರಣಗಳಿಗಾಗಿ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸಬೇಕೆಂದು ತೆಲಂಗಾಣದ ನಾಯಕರು ಅಭಿಪ್ರಾಯಪಟ್ಟರು. ಆದರೂ 1956ರಲ್ಲಿ ತೆಲಂಗಾಣ ಒಳಗೊಂಡ ಆಂಧ್ರಪ್ರದೇಶ ಅಸ್ತಿತ್ವಕ್ಕೆ ಬಂತು. ಈ ಮಧ್ಯೆ ತೆಲಂಗಾಣದ ಹಿಂದುಳಿದಿರುವಿಕೆಯನ್ನು ಸುಧಾರಿಸುವ ಆಶ್ವಾಸನೆಗಳು ಕೇಂದ್ರ ಸರ್ಕಾರದಿಂದ ಪ್ರಕಟವಾದವು. ಆ ಭರವಸೆಗಳು ಭರವಸೆಗಳಾಗಿಯೇ ಉಳಿದವು.

ಕಾಶ್ಮೀರದ 370ನೇ ವಿಧಿ ಹಾಗೂ ಆಂಧ್ರಪ್ರದೇಶದಲ್ಲಿ ತೆಲಂಗಾಣವನ್ನು ವಿಲೀನಗೊಳಿಸುವ ಮಸೂದೆಗಳನ್ನು ಪಾರ್ಲಿಮೆಂಟ್ ಅಧಿವೇಶನದ ಕೊನೆಯ ದಿನಗಳಲ್ಲಿ ಮಂಡಿಸಲಾಯಿತು. ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ. ಜಂಟಿ ಸಮಿತಿಗೆ ಒಪ್ಪಿಸುವುದಕ್ಕೂ ಸರ್ಕಾರ ಒಪ್ಪಲಿಲ್ಲ. ರಾಜ್ಯ ಸರ್ಕಾರಗಳ ಹಾಗೂ ಶಾಸನಸಭೆಯ ಅಭಿಪ್ರಾಯ ತಿಳಿಯಲು ಅವಕಾಶ ಕಲ್ಪಿಸಲಿಲ್ಲ. ಅಂದಹಾಗೆ ಇದಕ್ಕೆ ಮೊದಲೇ ಕಾಶ್ಮೀರ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತವನ್ನು ಕಾಶ್ಮೀರದ ಮೇಲೆ ಹೇರಲಾಗಿತ್ತು.

ಜಮ್ಮು ಕಾಶ್ಮೀರಗಳ ಗಲಭೆಗಳು, ಭಯೋತ್ಪಾದಕ ಕೃತ್ಯಗಳು 370ನೇ ವಿಧಿಯನ್ನು ತೆಗೆದುಹಾಕುವುದರಿಂದ ಕೊನೆಗೊಳ್ಳುವುದು ಎಂದು ಗೃಹ ಸಚಿವರು ಹೇಳಿದ್ದಾರೆ. ಕಾಶ್ಮೀರದಲ್ಲಿ ಒಂದು ಸಶಕ್ತ ಸಮ್ಮಿಶ್ರ ಸರ್ಕಾರ ಇದ್ದರೆ ಮಾತ್ರ ಅಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುವುದು. ಅದಿಲ್ಲವಾದರೆ ಬೂದಿ ಮುಚ್ಚಿದ ಕೆಂಡದಂತಿರುವ ಈ ಪರಿಸ್ಥಿತಿ ಯಾವಾಗ ಬೇಕಾದರೂ ಹದಗೆಡಬಹುದು. ಅಲ್ಲಿಯ ಸರ್ಕಾರಕ್ಕೂ ಕೇಂದ್ರ ಸರ್ಕಾರಕ್ಕೂ ಒಂದು ಮಧುರ ಬಾಂಧವ್ಯ ಇದ್ದರೆ ಮಾತ್ರ ಶಾಶ್ವತ ಶಾಂತಿ ನೆಲೆಸೀತು. ಒಂದು ಬಹುಮುಖ್ಯ ವಿಚಾರವೆಂದರೆ ಮಿಲಿಟರಿಯ ಮೃಗೀಯ ಶಕ್ತಿ ಬಳಸಿಕೊಂಡು ಕಾಶ್ಮೀರದಲ್ಲಿ ಶಾಂತಿಸ್ಥಾಪನೆ ಮಾಡುವುದು ಆಗದ ಮಾತು.

ಶ್ರೀಲಂಕಾದಲ್ಲಿ ತಮಿಳರಿಗೆ ಸ್ವತಂತ್ರವಾಗಿ ಬದುಕಲು ಸಿಂಹಳೀಯರು ಅವಕಾಶ ಮಾಡಿಕೊಡಲು ನಿರಾಕರಿಸಿ ಅವರಿಗೆ ಕಿರುಕುಳ ಕೊಟ್ಟಿದ್ದರಿಂದ ಅಲ್ಲಿ ಎಲ್.ಟಿ.ಟಿ.ಈಗೂ ಸಿಂಹಳ ಸರ್ಕಾರಕ್ಕೂ ಯುದ್ಧವೇ ನಡೆದುಹೋಯಿತು ಎಂಬುದನ್ನು ನಾವು ಮರೆಯಬಾರದು. ಅಂತಹ ಯುದ್ಧದಲ್ಲಿ ಮನುಷ್ಯತ್ವವೇ ಕರಗಿಹೋಗುವ ಮಾರಣಹೋಮಗಳು ನಡೆದವು.

370ನೇ ವಿಧಿಯನ್ನು ಆಗ ರಾಷ್ಟ್ರಾಧ್ಯಕ್ಷರ ಆದೇಶದ ಮೇರೆಗೆ ಜಾರಿಗೆ ತರಲಾಗಿತ್ತು. ಈಗ ರಾಷ್ಟ್ರಾಧ್ಯಕ್ಷರ ಆದೇಶದಿಂದಲೇ ಕಿತ್ತು ಹಾಕುತ್ತೇವೆ ಆದ್ದರಿಂದ ಅದು ರಾಜ್ಯಾಂಗದ ಉಲ್ಲಂಘನೆಯಲ್ಲ ಎಂದು ಅಮಿತ್ ಶಾ ಅವರು ಹೇಳುತ್ತಾರೆ. ಇದು ಅಷ್ಟು ಸರಳ ಸಂಗತಿಯಾಗಿಲ್ಲ. ನಾವು ಪ್ರೀತಿಯಿಂದ ಒಲಿಸಿಕೊಳ್ಳಬೇಕಿದ್ದ, ಒಂದು ಭೂಭಾಗವು ನಮ್ಮೊಡನೆ ಸೇರಲು ಮಾಡಿಕೊಂಡಿದ್ದ ಕರಾರು ಅದು. ದೇಶ ರೂಪುಗೊಳ್ಳಬೇಕಾದ ಸಂದರ್ಭದಲ್ಲಿ ಮಾಡಿಕೊಳ್ಳಲಾಗಿದ್ದ ಅಂತಹ ರಾಜ್ಯಾಂಗ ಬದಲಾವಣೆಗಳನ್ನು ಹೀಗೆ ಅಧಿಕಾರಬಲದಿಂದ ಹಿಂತೆಗೆದುಕೊಳ್ಳುವ ಅಧಿಕಾರ ರಾಷ್ಟ್ರಾಧ್ಯಕ್ಷರಿಗೆ ಇದೆಯೇ ಎಂಬುದು ಚರ್ಚೆಗೆ ಬರುವ ಸಂಭವವಿದೆ. ಕಾಲ ನಿಂತ ನೀರಲ್ಲ. ಬದಲಾವಣೆಗಳು ಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಮೆಜಾರಿಟಿ ಇದೆ, ಬದಲಿಸಿಕೊಳ್ಳುತ್ತೇವೆ ಎಂಬ ಧೋರಣೆಗಿಂತ, ಯಾರ ಮೇಲೆ ಇದರ ಹೆಚ್ಚಿನ ಪರಿಣಾಮ ಆಗುತ್ತದೋ, ಅವರ ಅಭಿಪ್ರಾಯವನ್ನು ಪರಿಗಣಿಸುವುದಕ್ಕೆ ಹೆಚ್ಚಿನ ಮುತುವರ್ಜಿ ಇರಬೇಕು.

ಸ್ವಾತಂತ್ರ್ಯ ಬಂದಮೇಲೆ ಸಂಸ್ಥಾನಗಳ ರಾಜರುಗಳು, ಇಂಡಿಯನ್ ಯೂನಿಯನ್ ಜೊತೆಗೆ ಕೂಡಿಕೊಂಡಾಗ ಅವರಿಗೆ ರಾಜಧನ ನೀಡಬೇಕೆಂದು ಒಪ್ಪಂದ ಆಗಿತ್ತು. ಮುಂದೆ ರಾಜಧನ ಕೊಡುವುದಿಲ್ಲವೆಂದು ರಾಷ್ಟ್ರಾಧ್ಯಕ್ಷರು ತೀರ್ಮಾನ ತೆಗೆದುಕೊಂಡಾಗ ಮಾಜಿ ರಾಜರು ಸವ್ರ್ಚೊಚ್ಚ ನ್ಯಾಯಾಲಯದ ಮೆಟ್ಟಿಲು ಏರಿದರು. ಒಮ್ಮೆ ಕೊಡಲು ಒಪ್ಪಿಕೊಂಡಿರುವ ರಾಜಧನವನ್ನು ತಡೆಹಿಡಿಯುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು. ಅಂದಿನ ಕಾಶ್ಮೀರ ರಾಜರೊಡನೆ ಮಾಡಿಕೊಂಡಿರುವ ಒಪ್ಪಂದವನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವುದು ಕಾನೂನಾತ್ಮಕವಾಗಿ ಮತ್ತು ನ್ಯಾಯಯುತವಾಗಿ ಸಾಧುವೇ? ಈ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಎತ್ತಲು ಸಾಧ್ಯವೇ ಎಂಬುದನ್ನು ಕಾನೂನುಪಂಡಿತರು ಜನರಿಗೆ ತಿಳಿಸಿ ಹೇಳಬೇಕು.

ಈ ದೇಶದ ಆಡಳಿತದ ಹೊಣೆಗಾರಿಕೆ ಪ್ರಜೆಯದು. ರಾಷ್ಟ್ರಾಧ್ಯಕ್ಷರಾಗಲಿ, ಸರ್ಕಾರವೇ ಆಗಲಿ ತಮ್ಮ ಸಾರ್ವಭೌಮತ್ವವನ್ನು ಪ್ರಜೆಗಳ ಮೇಲೆ ಕಾನೂನುಬಾಹಿರವಾಗಿ ಹೇರುವುದು ಸರಿಯಿಲ್ಲ. ಆರ್ಥಿಕ ಸಂಯೋಜನೆ ಮತ್ತು ಅಭಿವೃದ್ಧಿ ಮಂತ್ರ ಮಾತ್ರ ಸಂಯೋಜನೆಗೆ ಮಾರ್ಗಸೂಚಿ ಅಲ್ಲ. ಜಮ್ಮು ಕಾಶ್ಮೀರದ ಜನತೆಯ ಅನುಮತಿ ಮತ್ತು ಸಹಕಾರವಿಲ್ಲದೆ ಇದ್ದರೆ ಆ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಲಿ, 370ರ ವಿಧಿಯನ್ನು ರದ್ದು ಮಾಡುವುದಾಗಲೀ ಸುಸೂತ್ರವಾಗಿ ನಡೆಯಲಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...