Homeಮುಖಪುಟದ್ರಾವಿಡಮೂಲದ ಕನ್ನಡವನ್ನು ಬೆನ್ನತ್ತಿ...

ದ್ರಾವಿಡಮೂಲದ ಕನ್ನಡವನ್ನು ಬೆನ್ನತ್ತಿ…

- Advertisement -
- Advertisement -

| ಡಾ. ಸರ್ಜಾಶಂಕರ ಹರಳಿಮಠ |

ದ್ರಾವಿಡಶೋಧದ ನೆಲೆಯ ಕನ್ನಡ ಅಸ್ಮಿತೆಯ ಮುಖ್ಯ ಚಹರೆಯೆಂದರೆ ಸ್ವವಿಮರ್ಶೆಯ ಗುಣ. ಇದು ಇಂಗ್ಲಿಷನ್ನೋ ಅಥವಾ ನೆರೆಯ ಭಾಷೆಯನ್ನೋ ಕನ್ನಡದ ವೈರಿಭಾಷೆಯೆಂದು ಪರಿಗಣಿಸುವುದಿಲ್ಲ. ಸಂಸ್ಕೃತವನ್ನು ಕನ್ನಡಕ್ಕೆ ಕಂಟಕ ತರುತ್ತಿದೆ ಎಂದು ಭಾವಿಸಿದರೂ ಅಲ್ಲಿ ಮುಖ್ಯವಾಗಿರುವುದು ಭಾಷೆಯಾಗಿ ಸಂಸ್ಕೃತಕ್ಕಿಂತಲೂ ಸಂಸ್ಕೃತದ ಮೂಲಕ ತಮ್ಮ ಶ್ರೇಷ್ಠತೆಯನ್ನು ಪ್ರತಿಷ್ಟಾಪಿಸಲು ಬಯಸುವ ಸಾಮಾಜಿಕ ವರ್ಗ.

ಭಾರತದಲ್ಲಿ ಬ್ರಿಟಿಷ್ ಅಧಿಕಾರಿಗಳು ದಕ್ಷಿಣ ಭಾರತದ ಭಾಷೆಗಳ ಮೂಲವನ್ನು ಅರಿಯಲು ಸಂಶೋಧನೆಗೆ ತೊಡಗಲು ಭಾಷಾ ಸಂಬಂಧಿ ಆಸಕ್ತಿ ಮತ್ತು ಸ್ಥಳೀಯ ಭಾಷೆಗಳನ್ನು ಅರ್ಥಮಾಡಿಕೊಳ್ಳುವುದು ಪ್ರಮುಖ ಪ್ರೇರಣೆಯಾಗಿದ್ದವು. ಆದರೆ ಈ ಸಂಶೋಧಕರು ಹೊರಗೆಡಹಿದ ಫಲಿತಗಳು ಮಾತ್ರ ಭಾರತದ ಸಾಮಾಜಿಕ ವಲಯದಲ್ಲಿ ಸಂಚಲನೆಗೆ ಕಾರಣವಾಯಿತು. ಪುರೋಹಿತಶಾಹಿ ವರ್ಗದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದ, ಬಹುಸಂಖ್ಯಾತ ತಳವರ್ಗದವರಿಗೆ ಅಲಭ್ಯವಾಗಿದ್ದ ಶಿಕ್ಷಣ ಸೌಲಭ್ಯವೇ ಕಾರಣವಾಗಿ ಸಮಾಜದಲ್ಲಿ ಜಾತಿ ತಾರತಮ್ಯ, ಅವಮಾನ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗಿತ್ತು. ಸಂಸ್ಕೃತ ಪುರೋಹಿತಶಾಹಿ ವರ್ಗದ ಭಾಷೆಯಾಗಿದ್ದು ಈ ಭಾಷೆಯನ್ನು ಕಲಿಯಲು ಬೇರೆಯವರಿಗೆ ನಿರ್ಬಂಧವಿತ್ತು. ಪರಿಣಾಮವಾಗಿ ಭಾರತೀಯ ಬಹುಸಂಖ್ಯಾತ ತಳವರ್ಗದಲ್ಲಿ ಪುರೋಹಿತಶಾಹಿ ಮತ್ತು ಸಂಸ್ಕೃತದ ಮೇಲಿನ ಸಿಟ್ಟು ಬೇರ್ಪಡಿಸಲಾಗದಂತಿತ್ತು. ಆದರೂ ಕನ್ನಡದ ಮೂಲಭಾಷೆ ಸಂಸ್ಕೃತ ಎನ್ನುವ ಪ್ರಚಲಿತದಲ್ಲಿದ್ದ ನಂಬಿಕೆಯ ಹಿನ್ನೆಲೆಯಲ್ಲಿ ಆ ಸಿಟ್ಟು ವ್ಯಕ್ತವಾಗುತ್ತಿರಲಿಲ್ಲ. ಯಾವಾಗ ಕನ್ನಡ ಸಂಸ್ಕೃತದಿಂದ ಟಿಸಿಲೊಡೆದ ಭಾಷೆ ಅಲ್ಲ, ಇದು ದ್ರಾವಿಡಭಾಷಾ ಕುಟುಂಬದಿಂದ ಬಂದ ಭಾಷೆ ಎನ್ನುವ ಸತ್ಯ ಅನಾವರಣವಾಯಿತೋ ಅದು ತಳವರ್ಗದವರಲ್ಲಿ ಸ್ವಾಭಿಮಾನದ ಸಂಗತಿಯಾಗಿ ಹೊರಹೊಮ್ಮತೊಡಗಿತು. ಅಂದರೆ ಕನ್ನಡವನ್ನು ಸಂಸ್ಕೃತದಿಂದ ಬೇರ್ಪಡಿಸಿ, ದ್ರಾವಿಡ ನೆಲೆಯಿಂದ ನೋಡುವುದು ಭಾಷಿಕ ಕಾರಣಕ್ಕಿಂತ ಸಾಮಾಜಿಕ ಕಾರಣಕ್ಕಾಗಿ ಮುನ್ನೆಲೆಗೆ ಬಂದಿತು. ಈ ಅಂಶಗಳು ದ್ರಾವಿಡಮೂಲದ ಕನ್ನಡವನ್ನು ಪುನರೂಪಿಸುವ ಪ್ರಯತ್ನದ ಹಿಂದೆಯೂ ದಟ್ಟವಾಗಿರುವುದನ್ನು ಗುರುತಿಸಬಹುದು.

‘ದ್ರಾವಿಡ’ ಎಂಬ ಪದವು ದೇಶವಾಚಕವಾಗಿ, ಜನಾಂಗವಾಚಕವಾಗಿ ಸಾಮಾನ್ಯವಾಗಿ ರೂಢಿಯಲ್ಲಿದೆ. ದ್ರಾವಿಡಭಾಷೆ ಎಂದಾಗ ಅದು ಒಂದು ಭಾಷಾವರ್ಗವನ್ನು ಹೆಸರಿಸುತ್ತದೆ. ಸಂಸ್ಕೃತ ವಿದ್ವಾಂಸರ ಪ್ರಕಾರ ದ್ರಾವಿಡ ಎಂಬುದು ದಕ್ಷಿಣ ಭಾರತದ ಒಂದು ಭೂಭಾಗವೇ ಆಗಿದೆ. ಸಂಸ್ಕೃತದ ಮಹಾವಿದ್ವಾಂಸನಾದ ಫೆಡ್ರಿಕ್ ಮ್ಯಾಕ್ಸ್ ಮುಲ್ಲರ್ ಮೊತ್ತಮೊದಲ ಬಾರಿಗೆ ಹತ್ತೊಂಬತ್ತನೆಯ ಶತಮಾನದ ದಶಕದಲ್ಲಿ ದ್ರಾವಿಡ ಭಾಷೆಗಳನ್ನು ವಿಭಾಗಿಸಿದ. ಅಲ್ಲಿಂದ ಮುಂದೆ ‘ದ್ರಾವಿಡ’ ಎಂಬುದು ಒಂದು ಭಾಷಿಕ ಪರಿಕಲ್ಪನೆಯಾಗಿ ಭಾರತದಲ್ಲಿ ನಿರ್ದಿಷ್ಟವಾದ ಒಂದು ‘ಭಾಷಾ ಪರಿವಾರ’ ಎಂಬರ್ಥದಲ್ಲಿ ಪ್ರಕಟಗೊಂಡಿತು ಸಾಮಾನ್ಯವಾಗಿ ದಕ್ಷಿಣ ಭಾರತವನ್ನು ದೃಷ್ಟಿಯಲ್ಲಿರಿಸಿಕೊಂಡು ಅದನ್ನು ದ್ರಾವಿಡ ನಾಡೆಂದು, ಇಲ್ಲಿ ವಾಸ ಮಾಡುವ ಜನರನ್ನು ದ್ರಾವಿಡರು ಎಂದು ಗುರುತಿಸುವುದಿದೆ. ಇನ್ನೂ ನಿರ್ದಿಷ್ಟವಾಗಿ ದ್ರಾವಿಡ ಪದವನ್ನು ವ್ಯಾಪಕವಾಗಿ ‘ತಮಿಳ’ ಪದಕ್ಕೆ ಪರ್ಯಾಯವಾಗಿ ಬಳಸಲಾಗಿದೆ.

ಶಂಬಾ ಅವರು ಪಾಶ್ಚಾತ್ಯ ಮಾನವಶಾಸ್ತ್ರಜ್ಞರು ಮತ್ತು ದೇಶಿ ವಿದ್ವಾಂಸರ ‘ದ್ರಾವಿಡ’ ಅಧ್ಯಯನಗಳನ್ನು ಆಧರಿಸಿ, ‘ದ್ರಾವಿಡ’ ಪದಕ್ಕಿರುವ ಅರ್ಥವ್ಯಾಪ್ತಿಯನ್ನು ಚರ್ಚಿಸುತ್ತಾರೆ. ‘ದ್ರಾವಿಡ’ ಪ್ರಯೋಗ ವೈದಿಕ ವಾಙ್ಮಯದಲ್ಲಿ ‘ದಸ್ಯು’ಗಳನ್ನು ನಿರ್ದೇಶಿಸುವ ಪದ. ಆರ್ಯರೊಂದಿಗೆ ಹೋರಾಡಿದ ದಸ್ಯುಗಳೇ ದ್ರಾವಿಡರಾಗಿದ್ದು, ದ್ರಾವಿಡ ಮೂಲದ ‘ಬ್ರಾಹೂಯಿ’ ಭಾಷೆ ಇಂದಿಗೂ ಬಲೂಚಿಸ್ಥಾನದ ಪರಿಸರದಲ್ಲಿರುವುದು, ಸಿಂಧು ಸಂಸ್ಕೃತಿಯು ದ್ರಾವಿಡರ ಅಸ್ತಿತ್ವಕ್ಕೆ ಪ್ರಬಲ ಪುರಾವೆಯೆನ್ನುವುದು ಶಂಬಾ ಅವರ ವಾದ. ಇಂದಿನ ತಮಿಳರು ಮತ್ತು ಕನ್ನಡಿಗರು ಮೂಲ ದ್ರಾವಿಡ ಪಂಗಡಕ್ಕೆ ಸೇರಿದವರೆನ್ನುವುದನ್ನು ಹಳಗನ್ನಡ ಮತ್ತು ತಮಿಳು ಭಾಷೆಗಳೆರಡು ಒಡೆಯುವ ಪೂರ್ವದಲ್ಲಿದ್ದ ಏಕರೂಪ ‘ಕಂದಮಿಳ’ ಭಾಷೆ. ಕಂದಮಿಳ ಭಾಷೆಯನ್ನಾಡುವವರೇ ‘ಕಂದಮಿಳರು’, ದ್ರಾವಿಡ ಸಂಸ್ಕøತಿಯ ಮೂಲಿಗರಾದ ‘ಕಂದಮಿಳರು’ ಕ್ರಿಸ್ತಪೂರ್ವ ಸು.2000 ವರ್ಷಗಳ ಹಿಂದೆ ನರ್ಮದೆಯ ಪರಿಸರದಲ್ಲಿ ಅಂದರೆ ಇಂದಿನ ಗುಜರಾಥ (ಲಾಟ), ಬಂಗಾಲ, ಮಹಾರಾಷ್ಟ್ರದಲ್ಲಿ ನೆಲೆಸಿದ್ದರು ಎಂದು ಶಂಬಾ ಅವರು ನಿರ್ಣಯಕ್ಕೆ ಬರುತ್ತಾರೆ.

ದ್ರಾವಿಡಶೋಧದ ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಳ್ಳುವ ಪ್ರಯತ್ನದ ಹಿಂದಿನ ಪ್ರೇರಣೆಗಳಿಗೆ ಹಲವು ಆಯಾಮಗಳಿವೆ. ತಿಳಿವಳಿಕೆಯ ಕೊರತೆಯಿಂದ ಆಗಿರಬಹುದಾದ ಸಂಸ್ಕೃತವೇ ಕನ್ನಡದ ಮೂಲ ಎಂಬ ಸಮಾಜದಲ್ಲಿದ್ದ ನಂಬಿಕೆಯು ಸಂಶೋಧನೆಗಳು ನಡೆದು ಸತ್ಯ ತಿಳಿದ ನಂತರ ಸ್ವಲ್ಪಮಟ್ಟಿಗೆ ಬದಲಾಯಿತು. ಆದರೆ ಸಂಸ್ಕೃತವೇ ಕನ್ನಡದ ಮೂಲ ಎಂಬ ವಾದವನ್ನು ಒಂದು ವರ್ಗ ಮುಂದುವರೆಸಿದ್ದು ಇದರ ಹಿಂದೆ ನಿರ್ದಿಷ್ಠ ಉದ್ದೇಶ ಇರುವುದನ್ನು ಹೇಳಿತು. ಈ ಉದ್ದೇಶ ಭಾಷಾಮೂಲದ್ದಾಗಿರದೆ ವರ್ಗ ಹಿತಾಸಕ್ತಿಯದ್ದಾಗಿತ್ತು.

ಕನ್ನಡ ಅಸ್ಮಿತೆಯನ್ನು ದ್ರಾವಿಡ ನೆಲೆಯಿಂದ ನೋಡುವ ಚಿಂತನಾಕ್ರಮದ ಹಿಂದೆ ಭಾಷಿಕ ಕಾರಣವೂ ಇದೆ. ಈ ಭಾಷಿಕ ಕಾರಣವೂ ಸಾಮಾಜಿಕ ನೆಲೆಯಲ್ಲಿ ಅಂತರ್ಗತವಾಗಿದೆ. ಬರಹದ ಭಾಷೆ ಸಂಸ್ಕೃತದಿಂದ ಪ್ರಭಾವಿತವಾಗಿದ್ದು ಆಡುಭಾಷೆಗಿಂತ ಭಿನ್ನವಾಗಿದೆ. ಬರಹದ ಭಾಷೆಯ ಎದುರು ಆಡುಭಾಷೆ ಕೀಳರಿಮೆಯನ್ನು ಅನುಭವಿಸುತ್ತಿದ್ದು, ಮುಖ್ಯವಾಗಿ ತಳವರ್ಗದವರಿಗೆ ಇದು ಬಳಕೆಯ ಸಂದರ್ಭದಲ್ಲಿ ತೊಡಕಾಗಿ ಪರಿಣಮಿಸುತ್ತ್ತಿದೆ. ಆಡುಭಾಷೆಯ ಕನ್ನಡ ಹೆಚ್ಚು ಸಂಸ್ಕೃತ ಪದಗಳಿಲ್ಲದ ಮೂಲ ಕನ್ನಡ ಭಾಷೆಗೆ ಹತ್ತಿರವಾಗಿದೆ. ಇದು ತಳವರ್ಗದವರಿಗೆ ಬಳಸಲು ಸುಲಭವಾಗಿದೆ. ಆಡುಭಾಷೆಯ ಕನ್ನಡವನ್ನೇ ಬರಹದಲ್ಲಿಯೂ ಬಳಸುವಂತೆ ದ್ರಾವಿಡ ನೆಲೆಯ ಕನ್ನಡ ಅಸ್ಮಿತೆ ಒತ್ತಾಯಿಸುತ್ತದೆ. ಈ ಒತ್ತಾಯದ ಹಿಂದೆ ಎರಡು ಉದ್ದೇಶಗಳಿವೆ. ಮೊದಲನೆಯದು ಸಂಸ್ಕೃತದ ವಿರೋಧ. ಒಂದು ಭಾಷೆಯ ಹೇರಿಕೆಯ ವಿರೋಧ, ಆ ಸಂಸ್ಕೃತಿಯ ವಿರೋಧವೂ ಆಗಿಬಿಡುತ್ತದೆ. ಎರಡನೆಯದು ಸಂಸ್ಕೃತದ ಹಿಡಿತದಿಂದ ಹೊರಬರುವ ಮತ್ತು ತಳವರ್ಗದ ಕನ್ನಡ ಭಾಷೆಯನ್ನು ಮೇಲ್ಚಲನೆಗೊಳಪಡಿಸುವ ಉದ್ದೇಶ.

ದ್ರಾವಿಡಶೋಧದ ನೆಲೆಯ ಕನ್ನಡ ಅಸ್ಮಿತೆಯ ಮುಖ್ಯ ಚಹರೆಯೆಂದರೆ ಸ್ವವಿಮರ್ಶೆಯ ಗುಣ. ಇದು ಇಂಗ್ಲಿಶನ್ನೋ ಅಥವಾ ನೆರೆಯ ಭಾಷೆಯನ್ನೋ ಕನ್ನಡದ ವೈರಿಭಾಷೆಯೆಂದು ಪರಿಗಣಿಸುವುದಿಲ್ಲ. ಸಂಸ್ಕೃತವನ್ನು ಕನ್ನಡಕ್ಕೆ ಕಂಟಕ ತರುತ್ತಿದೆ ಎಂದು ಭಾವಿಸಿದರೂ ಅಲ್ಲಿ ಮುಖ್ಯವಾಗಿರುವುದು ಭಾಷೆಯಾಗಿ ಸಂಸ್ಕೃತಕ್ಕಿಂತಲೂ ಸಂಸ್ಕೃತದ ಮೂಲಕ ತಮ್ಮ ಶ್ರೇಷ್ಠತೆಯನ್ನು ಪ್ರತಿಷ್ಟಾಪಿಸಲು ಬಯಸುವ ಸಾಮಾಜಿಕ ವರ್ಗ. ದ್ರಾವಿಡಶೋಧದ ನೆಲೆ ಕನ್ನಡದೊಳಗೆ ಪರಿವರ್ತನೆ ಮತ್ತು ಸುಧಾರಣೆಯ ಮೂಲಕ ಕನ್ನಡವನ್ನು ಉಳಿಸಲು ಮತ್ತು ಬೆಳೆಸಲು ಪ್ರಯತ್ನಿಸುತ್ತದೆ. ಇದು ಕನ್ನಡದೊಳಗೇ ಇರುವ ವಿವಿಧ ಸಾಮಾಜಿಕ ವರ್ಗಗಳ ಹಿತಾಸಕ್ತಿಗಳು ಕನ್ನಡಕ್ಕೆ ಉಂಟು ಮಾಡುತ್ತಿರುವ ತೊಡಕುಗಳನ್ನು ಪ್ರಧಾನವಾಗಿ ಗಮನಿಸುತ್ತದೆ.

ಕನ್ನಡದಲ್ಲಿ ದ್ರಾವಿಡಶೋಧದ ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಕಟ್ಟಿಕೊಡುತ್ತಿರುವವರಲ್ಲಿ ಡಿ.ಎನ್.ಶಂಕರಭಟ್ಟರು ಮತ್ತು ಕೆ.ವಿ.ನಾರಾಯಣ ಅವರು ಪ್ರಮುಖರು. ಡಿ.ಎನ್.ಶಂಕರಭಟ್ಟರು ದ್ರಾವಿಡಮೂಲದ ಕನ್ನಡವನ್ನು ಪುನರ್ ರೂಪಿಸುವ ಪ್ರಯತ್ನದಲ್ಲಿದ್ದಾರೆ. ಕೆ.ವಿ.ನಾರಾಯಣ ಅವರು ಜಾಗತಿಕ ಪರಿವರ್ತನೆಗಳು, ಆಧುನಿಕ ತಂತ್ರಜ್ಞಾನ, ಸಾಮಾಜಿಕ ಚಲನೆಗಳು, ವ್ಶೆಜ್ಞಾನಿಕವಾಗಿ ಕಂಡುಕೊಂಡ ಕಲಿಕೆಯ ಸಾಮಥ್ರ್ಯ, ಹೀಗೆ ಎಲ್ಲ ಆಯಾಮಗಳಿಂದಲೂ ಕನ್ನಡಕ್ಕೆ ಆಗುವ ಪರಿಣಾಮಗಳನ್ನು ಮುಕ್ತವಾಗಿ ಚಿಂತಿಸಿದರೂ ಈ ಚಿಂತನೆಗಳು ದ್ರಾವಿಡ ಮೂಲದಿಂದ ಹೊರಡುತ್ತವೆ ಎನ್ನುವುದು ಮುಖ್ಯವಾದ ಸಂಗತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...