Homeಮುಖಪುಟಲೋಕಸಭಾ ಚುನಾವಣೆ ಮುಗಿದ ನಾಲ್ಕು ತಿಂಗಳಲ್ಲೇ ನಿಯಮ ಮೀರಿ ವಿವಿ ಪ್ಯಾಟ್‌ ಸ್ಲಿಪ್‌ಗಳ ನಾಶ: ಉತ್ತರ...

ಲೋಕಸಭಾ ಚುನಾವಣೆ ಮುಗಿದ ನಾಲ್ಕು ತಿಂಗಳಲ್ಲೇ ನಿಯಮ ಮೀರಿ ವಿವಿ ಪ್ಯಾಟ್‌ ಸ್ಲಿಪ್‌ಗಳ ನಾಶ: ಉತ್ತರ ಕೊಡದ ಚುನಾವಣಾ ಆಯೋಗ..!

ಚುನಾವಣಾ ಆಯೋಗವು ನಿಯಮಗಳನ್ನು ಏಕೆ ಪಾಲಿಸಲಿಲ್ಲ. ಕೇವಲ ನಾಲ್ಕು ತಿಂಗಳಲ್ಲಿ ವಿವಿಪಿಎಟಿ ಸ್ಲಿಪ್‌ಗಳನ್ನು ಏಕೆ ನಾಶಪಡಿಸಿತು? ಮತಯಂತ್ರ ಟ್ಯಾಂಪರ್‌ ಆಗಿರುವ ಪುರಾವೆಗಳನ್ನು ನಾಶ ಮಾಡಲು ಹೀಗೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

- Advertisement -
- Advertisement -

ಯಾವುದೇ ಚುನಾವಣೆಯಲ್ಲಿ ಬಳಸಿದ ಮುದ್ರಿತ ವಿವಿಪಿಎಟಿ ಸ್ಲಿಪ್‌ಗಳನ್ನು ಒಂದು ವರ್ಷದವರೆಗೆ ಉಳಿಸಿಕೊಂಡು ನಂತರ ನಾಶ ಮಾಡಬೇಕೆಂದು 1961ರ ಚುನಾವಣಾ ನಿಯಮಗಳ ನಿಯಮ 94 (ಬಿ) ಹೇಳುತ್ತದೆ. ಆದರೆ ಚುನಾವಣಾ ಆಯೋಗವು 2019ರ ಲೋಕಸಭಾ ಚುನಾವಣೆಯಲ್ಲಿ ಬಳಸಿದ ಮುದ್ರಿತ ವಿವಿಪಿಎಟಿ ಸ್ಲಿಪ್‌ಗಳನ್ನು ಈಗಾಗಲೇ ನಾಶಪಡಿಸಿದೆ. ಅದೂ ಸಹ 2019ರ ಮೇನಲ್ಲಿ ಫಲಿತಾಂಶಗಳನ್ನು ಘೋಷಿಸಿದ ನಾಲ್ಕು ತಿಂಗಳ ನಂತರ… ಯಾಕಿಷ್ಟು ಅವಸರ, ತರಾತುರಿ ಎಂಬ ಪ್ರಶ್ನೆ ಭುಗಿಲೆದ್ದಿದೆ.

ಇಂಗ್ಲಿಷ್‌ನ ಖ್ಯಾತ ವೆಬ್‌ ಪೋರ್ಟಲ್‌ ’ದಿ ಕ್ವಿಂಟ್‌’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ದೆಹಲಿ ಚುನಾವಣಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿ “ವಿವಿಪಿಎಟಿ ಸ್ಲಿಪ್‌ಗಳನ್ನು ವಿಲೇವಾರಿ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಆರ್‌ಟಿಐ ಉತ್ತರದೊಂದಿಗೆ ಲಗತ್ತಿಸಲಾದ ಮಾಹಿತಿಯಲ್ಲಿ ಚುನಾವಣಾ ಆಯೋಗವು 24 ಸೆಪ್ಟೆಂಬರ್ 2019ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ “ವಿವಿಪಿಎಟಿ ಮುದ್ರಿತ ಕಾಗದದ ಸ್ಲಿಪ್‌ಗಳನ್ನು ವಿಲೇವಾರಿ ಮಾಡಲು” ಆದೇಶಿಸಿದೆ.

ಚುನಾವಣೆ ಮುಗಿದ ನಾಲ್ಕು ತಿಂಗಳಲ್ಲಿಯೇ ವಿವಿಪಿಎಟಿ ಸ್ಲಿಪ್‌ಗಳನ್ನು ನಾಶಮಾಡುವ ಅವಸರ ಮತ್ತು ತುರ್ತು ಏಕೆ? ನೀವು ಮತ್ತು ನಾನು ಹೇಗೆ ಮತ ಚಲಾಯಿಸಿದ್ದೇವೆ ಎಂಬುದಕ್ಕೆ ನಿರ್ಣಾಯಕ ಸಾಕ್ಷಿಯಾಗಿರುವ ವಿವಿಪಿಎಟಿ ಸ್ಲಿಪ್‌ಗಳನ್ನು ಚುನಾವಣಾ ಆಯೋಗವು ಒಂದು ವರ್ಷದ ಅವಧಿಗೆ ಏಕೆ ಸಂಗ್ರಹಿಸಲು ಸಾಧ್ಯವಾಗಲಿಲ್ಲ?

ನೆನಪಿಡಿ, ನಾವು ಮತ ​​ಚಲಾಯಿಸಿದಾಗ, ನಮ್ಮ ಮತವು ನಮ್ಮ ಆಯ್ಕೆಯ ಅಭ್ಯರ್ಥಿಗೆ ಹೋಗಿದೆಯೇ ಎಂದು ವಿವಿಪಿಎಟಿ ಸ್ಲಿಪ್ ಪರಿಶೀಲಿಸುತ್ತದೆ. ವಿವಿಪಿಎಟಿ ಸ್ಲಿಪ್ ನಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರನ್ನು ತೋರಿಸದಿದ್ದರೆ, ವಿವಿಪಿಎಟಿ ಯಂತ್ರದ ಅಸಮರ್ಪಕ ಕಾರ್ಯದ ಬಗ್ಗೆ ನಾವು ತಕ್ಷಣ ಮತದಾನ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗೆ ತಿಳಿಸಿ ದೂರು ದಾಖಲಿಸಬಹುದು.

ಇಡೀ ಮತದಾನ ಪ್ರಕ್ರಿಯೆಯಲ್ಲಿ ಸಂಭವನೀಯ ರಿಗ್ಗಿಂಗ್‌, ಅಕ್ರಮ ಮತದಾನ, ದುರ್ಬಳಕೆ ನಡೆದಿದ್ದರೆ ಪತ್ತೆಹಚ್ಚಲು ವಿವಿಪಿಎಟಿ ಸ್ಲಿಪ್‌ಗಳು ಎಷ್ಟು ನಿರ್ಣಾಯಕವಾಗಿವೆ ಎಂಬುದರ ಬಗ್ಗೆ ಕ್ವಿಂಟ್ ಈ ಹಿಂದೆ ವರದಿ ಮಾಡಿತ್ತು.

ಪ್ರತಿ ಮತದಾನ ಕೇಂದ್ರದಲ್ಲಿ, ವಿವಿಪಿಎಟಿ ಯಂತ್ರವನ್ನು ಬ್ಯಾಲೆಟ್ ಘಟಕಕ್ಕೆ ಸಂಪರ್ಕಿಸಲಾಗಿರುತ್ತದೆ. ನಾವು ಮತ ​​ಚಲಾಯಿಸಿದಾಗ, ಅದನ್ನು ಮೊದಲು ವಿವಿಪಿಎಟಿ ಯಂತ್ರದಲ್ಲಿ ದಾಖಲಿಸಲಾಗುತ್ತದೆ, ಮತ್ತು ಅದರ ನಂತರವೇ ಅದು ಇವಿಎಂ ನಿಯಂತ್ರಣ ಘಟಕಕ್ಕೆ ಹೋಗುತ್ತದೆ.

ಪ್ರತಿ ಕ್ಷೇತ್ರಕ್ಕೂ ವಿವಿಪಿಎಟಿ ಯಂತ್ರಗಳನ್ನು ಗುರುತಿಸಿದ ನಂತರ, ಅವುಗಳನ್ನು ಎರಡು ವಾರಗಳವರೆಗೆ ಸರ್ಕಾರವು ತೊಡಗಿಸಿಕೊಂಡ ಖಾಸಗಿ ಎಂಜಿನಿಯರ್‌ಗಳು ಹೇಗೆ ಪರಿಶೀಲಿಸಿದರು, ನಿರ್ವಹಿಸುತ್ತಿದ್ದರು ಮತ್ತು ಪ್ರೋಗ್ರಾಮ್ ಮಾಡಿದರು, ಈ ಸಮಯದಲ್ಲಿ ವಿವಿಪಿಎಟಿ ಯಂತ್ರಗಳು ಟ್ಯಾಂಪರಿಂಗ್‌ಗೆ ಸ್ಪಷ್ಟವಾಗಿ ಗುರಿಯಾಗುತ್ತವೆ.

ಆದ್ದರಿಂದ, 2019 ರಲ್ಲಿ ಎಲ್ಲಾ ಇವಿಎಂ-ವಿವಿಪಿಎಟಿ ಯಂತ್ರಗಳನ್ನು ಹಾಳುಗೆಡವಿದ್ದರೆ, ಮತದಾರರು ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರನ್ನು ತೋರಿಸುವ ವಿವಿಪಿಎಟಿ ಸ್ಲಿಪ್ ಅಂತಹ ಯಾವುದೇ ಆರೋಪದ ಬಗ್ಗೆ ತನಿಖೆ ನಡೆಸುವಾಗ ನಿರ್ಣಾಯಕ ಸಾಕ್ಷಿಯಾಗಬಹುದು.

ಆದರೆ ಈಗ, ಈ ಆರ್‌ಟಿಐ ಉತ್ತರವು ಬಹಿರಂಗಪಡಿಸಿದಂತೆ, ಎಲ್ಲಾ ವಿವಿಪಿಎಟಿ ಸ್ಲಿಪ್‌ಗಳು ನಾಶವಾಗಿವೆ ಮತ್ತು ವಿವಿಪಿಎಟಿ ಸ್ಲಿಪ್‌ಗಳ ಬಗ್ಗೆ ಇರಬಹುದಾದ ಯಾವುದೇ ಸಂಭಾವ್ಯ ಅನುಮಾನಕ್ಕೂ ಪುರಾವೆಗಳು ಸಹ ನಾಶವಾಗಿವೆ.

ಮತ್ತು ನಾವು ಮೊದಲೇ ಸೂಚಿಸಿದಂತೆ ಅದು ಚುನಾವಣಾ ನಿಯಮಗಳಿಗೆ ವಿರುದ್ಧವಾಗಿದೆ.

ಯಾವುದೇ ಪ್ರಯೋಜನವಿಲ್ಲದಿದ್ದರೂ ಸಹ, ದಶಕಗಳಿಂದ ‘ಬಾಬುಡೊಮ್’ ದಾಖಲೆಗಳು ಮತ್ತು ಫೈಲ್‌ಗಳನ್ನು ಹಿಡಿದಿಟ್ಟುಕೊಂಡಿರುವ ದೇಶದಲ್ಲಿ, ವಿವಿಪಿಎಟಿ ಸ್ಲಿಪ್‌ಗಳನ್ನು ಇಷ್ಟು ತುರ್ತಾಗಿ ಏಕೆ ವಿಲೇವಾರಿ ಮಾಡಲಾಗಿದೆ ಎಂದರೆ ಆಶ್ಚರ್ಯವಾಗುವುದಿಲ್ಲವೇ?

ಕಾನೂನು ತಜ್ಞರು ಹೇಳುವಂತೆ, ಈ ವಿವಿಪಿಎಟಿ ಸ್ಲಿಪ್‌ಗಳನ್ನು ನಾಲ್ಕು ತಿಂಗಳಲ್ಲಿ ನಾಶಪಡಿಸಿರುವುದು ಚಿಂತೆಗೀಡುಮಾಡುವು ವಿಷಯವಾಗಿದೆ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗದ ಇಷ್ಟು ಅವಸರಕ್ಕೆ ಕಾರಣವೇನೆಂದು ವಿವರಿಸಬೇಕು. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ, ಹಾಗೆ ಮಾಡಲು ಸರಿಯಾದ ಕಾರಣವಿದ್ದಲ್ಲಿ ಮಾತ್ರ ಚುನಾವಣಾ ಆಯೋಗ ವಿವಿಪಿಎಟಿ ಸ್ಲಿಪ್‌ಗಳನ್ನು ನಾಶಪಡಿಸುವ ಅಧಿಕಾರ ಹೊಂದಿದೆ. ಅಂತಹ ಸಕಾರಣವೇನೆಂದು ಅದು ವಿವರಿಸಬೇಕಿದೆ.

ಚುನಾವಣಾ ಆಯೋಗದ ಆರ್‌ಟಿಐ ಉತ್ತರವನ್ನು ನೋಡಿದ್ದೇವೆ. ಆದರೆ ಅದರಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ವಿವಿಪಿಎಟಿ ಸ್ಲಿಪ್‌ಗಳನ್ನು ಏಕೆ ವಿಲೇವಾರಿ ಮಾಡಲಾಗಿದೆ ಎಂಬುದನ್ನು ವಿವರಿಸಲು ಯಾವುದೇ ಸ್ಪಷ್ಟ ಕಾರಣ ಕಂಡುಬಂದಿಲ್ಲ.

ರಾಜಸ್ಥಾನ, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ಆಂಧ್ರಪ್ರದೇಶದಲ್ಲಿ ಇವಿಎಂ ಮತ್ತು ವಿವಿಪಿಎಟಿ ಮತ ಎಣಿಕೆಗಳ ನಡುವೆ ಕನಿಷ್ಠ ಎಂಟು ‘ಹೊಂದಿಕೆಯಾಗದ’ ಪ್ರಕರಣಗಳು ವರದಿಯಾಗಿವೆ ಎಂದು ಈ ಹಿಂದೆ ಕ್ವಿಂಟ್ ವರದಿ ಮಾಡಿತ್ತು.

ಈ ಪ್ರಕರಣಗಳ ವಿಚಾರಣೆಗೆ ಚುನಾವಣಾ ಆಯೋಗವು ಜುಲೈ 2019ರಲ್ಲಿ ಆದೇಶ ನೀಡಿತು. ನಡೆಸಿದ ವಿಚಾರಣೆಯ ಮಾಹಿತಿ ಕೋರಿ ಕ್ವಿಂಟ್ ಆರ್‌ಟಿಐ ಸಲ್ಲಿಸಿದರು. ಇಸಿ 2019 ರ ನವೆಂಬರ್‌ನಲ್ಲಿ ಉತ್ತರಿಸುತ್ತಾ, ಈ ವಿಷಯವು ಇಸಿಯ ತಾಂತ್ರಿಕ ತಜ್ಞರ ಸಮಿತಿಯ ಪರಿಗಣನೆಯಲ್ಲಿ ಇರುವುದರಿಂದ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದೆ.

ಈಗ, ಈ ಎಂಟು ಪ್ರಕರಣಗಳಿಗೆ ಸಂಬಂಧಿಸಿದ ವಿವಿಪಿಎಟಿ ಸ್ಲಿಪ್‌ಗಳನ್ನು ಇಸಿ ವಿಲೇವಾರಿ ಮಾಡಿದೆಯೇ ಅಥವಾ ನಾಶಪಡಿಸಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ ಸೆಪ್ಟೆಂಬರ್ 2019ರಿಂದ ಈ ಚುನಾವಣಾ ಆಯೋಗ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವಿವಿಪಿಎಟಿ ಸ್ಲಿಪ್‌ಗಳನ್ನು ವಿಲೇವಾರಿ ಮಾಡಲು ಆದೇಶಿಸಿದೆ…

ಇದು ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಈ ಎಂಟು ಪ್ರಕರಣಗಳಿಗೆ ಸಂಬಂಧಿಸಿದ ವಿವಿಪಿಎಟಿ ಸ್ಲಿಪ್‌ಗಳು ಸಹ ನಾಶವಾಗಿದ್ದರೆ, ಇವಿಎಂ ಮತ್ತು ವಿವಿಪಿಎಟಿ ಮತ ಎಣಿಕೆಗಳ ‘ಹೊಂದಾಣಿಕೆಯಾಗದ’ ಕುರಿತು ವಿಚಾರಣೆಯನ್ನು ಹೇಗೆ ನಡೆಸಬಹುದು?

ಹಾಗಾಗಿ, ನಾವು ಮತ್ತೆ ಕೇಳುತ್ತೇವೆ – ಚುನಾವಣಾ ಆಯೋಗವು ನಿಯಮಗಳನ್ನು ಏಕೆ ಪಾಲಿಸಲಿಲ್ಲ, ಮತ್ತು ಕೇವಲ ನಾಲ್ಕು ತಿಂಗಳಲ್ಲಿ ವಿವಿಪಿಎಟಿ ಸ್ಲಿಪ್‌ಗಳನ್ನು ಏಕೆ ನಾಶಪಡಿಸಿತು? ಮತಯಂತ್ರ ಟ್ಯಾಂಪರ್‌ ಆಗಿರುವ ಪುರಾವೆಗಳನ್ನು ನಾಶ ಮಾಡಲು ಹೀಗೆ ಮಾಡಲಾಗಿದೆ ಎಂದು ನಾವು ಹೇಳುವ ಧೈರ್ಯವಿದೆಯೇ?

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನ ಮಂತ್ರಿಯನ್ನು ನಿರ್ಧರಿಸುವ, ಭಾರತದ ಅತ್ಯಂತ ನಿರ್ಣಾಯಕ ಚುನಾವಣೆಗಳ ವಿವಿಪಿಎಟಿ ಸ್ಲಿಪ್‌ಗಳನ್ನು ಇಸಿ ಏಕೆ ಉಳಿಸಿಕೊಳ್ಳಲಿಲ್ಲ?

ಕ್ವಿಂಟ್ ತನ್ನ ಈ ಪ್ರಶ್ನೆಗಳೊಂದಿಗೆ ಭಾರತದ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ನಾವೀಗ ಚುನಾವಣಾ ಆಯೋಗದ ಸಮರ್ಪಕ ಉತ್ತರದ ನಿರೀಕ್ಷೆಯಲ್ಲಿದ್ದೇವೆ…

ಕೃಪೆ: ದಿ ಕ್ವಿಂಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತೀಯ ಚುನಾವಣಾ ಆಯೋಗ, ಬಿಜೆಪಿಯ ಚುನಾವಣಾ ಏಜೆಂಟನಂತೆ ವರ್ತಿಸುತ್ತಿರುವುದಕ್ಕೆ ಈ ಪ್ರಕರಣ ಪ್ರಮುಖ ಸಾಕ್ಷಿಯಾಗಿದೆ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...