Homeಫ್ಯಾಕ್ಟ್‌ಚೆಕ್ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್!!

ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್!!

- Advertisement -
- Advertisement -

| ಮುತ್ತುರಾಜ್ |

1. ಮೋದಿಗಿಂತ ಮನಮೋಹನ್ ಸಿಂಗ್ ಅತಿ ಹೆಚ್ಚು ವಿದೇಶಿ ಪ್ರವಾಸ ಮಾಡಿದ್ದಾರೆ: ಅಮಿತ್ ಶಾ

ಸುಳ್ಳು: ಮನಮೋಹನ್ ಸಿಂಗ್‍ಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ಕಡಿಮೆ ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಯಾಣದ ಕೈತಾಲ್‍ನಲ್ಲಿ ಚುನಾವಣೆ ಪ್ರಚಾರದ ವೇಳೆ ಹೇಳಿದ್ದಾರೆ.

ಸತ್ಯ: ಆದರೆ ಈ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ. ಎರಡೂ ನಾಯಕರ ಮೊದಲ ಐದು ವರ್ಷಗಳ ಅವಧಿಯ ಸರ್ಕಾರಿ ಡೇಟಾವನ್ನು ಪರಿಶೀಲಿಸಿದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮನಮೋಹನ್ ಸಿಂಗ್ ಗಿಂತ ಹೆಚ್ಚು ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಕಂಡುಬಂದಿದೆ.

ಪ್ರಧಾನ ಮಂತ್ರಿಗಳ ಕಚೇರಿಯ (ಪಿಎಂಒ) ದತ್ತಾಂಶ ಪಟ್ಟಿ ನೋಡಿದಾಗ,
ಮನಮೋಹನ್ ಸಿಂಗ್ ರವರು ಒಟ್ಟು 10 ವರ್ಷಗಳ ಆಡಳಿತದಲ್ಲಿ 72 ಬಾರಿ 93 ದೇಶಗಳಿಗೆ ಪ್ರವಾಸ ಮಾಡಿದ್ದಾರೆ

ಆದರೆ ಮೋದಿಯವರು ತಮ್ಮ ಮೊದಲ ಐದು ವಷಗಳ ಅವಧಿಯಲ್ಲಿಯೇ 49 ಬಾರಿ ಪ್ರವಾಸ ಮಾಡಿದ್ದು 93 ದೇಶಗಳಿಗೆ ಭೇಟಿ ನೀಡಿದ್ದಾರೆ. ಅಂದರೆ ಮನಮೋಹನ್‍ಸಿಂಗ್‍ಗಿಂತ ಹೆಚ್ಚು ಪ್ರವಾಸ ಮತ್ತು ಹೆಚ್ಚು ಖರ್ಚು ಕೂಡ ಮಾಡಿದ್ದಾರೆ. ಆದರೆ ಅಮಿತ್ ಶಾ ಚುನಾವಣಾ ದೃಷ್ಟಿಯಿಂದ ಸುಳ್ಳು ಹೇಳಿದ್ದಾರೆ.

2. ಗೋ ಬ್ಯಾಕ್ ಮೋದಿ ಟ್ವೀಟ್‍ಗಳು ಪಾಕಿಸ್ತಾನದಿಂದ ಮಾಡಲ್ಪಡುತ್ತಿವೆ

ಅಕ್ಟೋಬರ್ 11ರಂದು ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ಕೊಟ್ಟಾಗ ಎಂದಿನಂತೆ #GoBackModi ಎಂಬ ಟ್ವೀಟುಗಳು ಮೊಳಗಿದವು. ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಟ್ವೀಟ್‍ಗಳು ದಾಖಲಾಗಿ ನಂಬರ್1 ಸ್ಥಾನದಲ್ಲಿ ಟ್ರೆಂಡಿಂಗ್ ಆಗಿತ್ತು. ಇದರಿಂದ ಸಹಜವಾಗಿ ಮೋದಿ ಮತ್ತವರ ಅಭಿಮಾನಿಗಳಿಗೆ ಮುಜುಗರವಾಗಿತ್ತು.

ಕೂಡಲೇ ವಾಟ್ಸಾಪ್ ಯೂನಿವರ್ಸಿಟಿಯ ಸಂಚುಕೋರರು ಈ ಟ್ವೀಟ್‍ಗಳು ಪಾಕಿಸ್ತಾನದಲ್ಲಿ ಆಗುತ್ತಿವೆ ಎಂದು ಸುಳ್ಳು ಹಬ್ಬಿಸಿದರು. ಇದಕ್ಕೆ ಬಕೆಟ್ ಪತ್ರಕರ್ತರು ಮತ್ತು ಗೋದಿ ಮೀಡಿಯಾಗಳು ಸಹ ಕೈ ಜೋಡಿಸಿದರು.

ವಾಸ್ತವ ಏನೆಂದರೆ 98% ಟ್ವೀಟ್ ಗಳು ಭಾರತದಿಂದಲೇ ಟ್ವೀಟಾಗಿದ್ದವು. ತಮಿಳುನಾಡು ರಾಜ್ಯವೊಂದರಲ್ಲೇ 78,000 ಟ್ವೀಟ್ ದಾಖಲಾಗಿತ್ತು. ದೆಹಲಿಯಿಂದ 45,000 ಟ್ವೀಟ್‍ಗಳು ಬಂದಿದ್ದವು… ಚಿತ್ರ ನೋಡಿ…

3 ಕನಕಪುರದ ಮರಿಗೌಡನ ದೊಡ್ಡಿಯಲ್ಲಿ ಕಾಣಿಸಿಕೊಂಡ ಏಳ್ಹೆಡೆ ಕಾಳಿಂಗನ ಪೊರೆ..

ಎರಡು ತಲೆ ಸರ್ಪ ಇದೆ, ಮೂರು ತಲೆ, ಏಳು ತಲೆ ಸರ್ಪ ಇದೆ ಎಂಬ ಸುದ್ದಿಗಳನ್ನು ಅಲ್ಲಲ್ಲಿ ಓದಿರುತ್ತೇವೆ. ಈ ಇಂಟರ್‍ನೆಟ್ ಯುಗದಲ್ಲಂತೂ ಮೊಬೈಲ್‍ನಲ್ಲಿ ಆ ರೀತಿಯ ಫೋಟೊಗಳು ಕಾಣಿಸಿಕೊಳ್ಳುತ್ತವೆ. ಜನ ಕುತೂಹಲದಿಂದ ನೋಡುವುದಲ್ಲದೇ ಫಾರ್ವಡ್ ಕೂಡ ಮಾಡಿಬಿಡುತ್ತಾರೆ. ಅಂತದ್ದೇ ಸುದ್ದಿ ರಾಮನಗರ ಜಿಲ್ಲೆಯಿಂದ ಹೊರಟಿದೆ.

ಏಳ್ಹೆಡೆ ಕಾಳಿಂಗನ ಪೊರೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಎಲ್ಲಡೆ ವೈರಲ್ ಆಗಿದೆ. ವೈಜ್ಞಾನಿಕ ಸತ್ಯ ಏನೆಂದರೆ ಒಂದಕ್ಕಿಂತ ಹೆಚ್ಚು ತಲೆಯ ಜೀವಿಗಳು ಹುಟ್ಟುತ್ತಲೇ ಸಾಯುತ್ತವೆ. ಏಕೆಂದರೆ ಒಂದು ಜೀವಿಗೆ ಒಂದಕ್ಕಿಂತ ಹೆಚ್ಚು ತಲೆಗಳಿದ್ದರೆ ಅದಕ್ಕೆ ಬಹಳಷ್ಟು ತೊಂದರೆಯಾಗುತ್ತದೆ. ಅದು ಓಡಾಡಲು ಸಾಧ್ಯವಿಲ್ಲ, ಆಹಾರ ಸೇವಿಸಲು ಸಾಧ್ಯವಿಲ್ಲ. ಹಾಗಾಗಿ ಅದು ಬಹುಬೇಗ ಸಾಯುತ್ತದೆ.

ಆದರೆ ಈ ಫೋಟೊಗಳು ಎಲ್ಲಿಯವು ಎಂದು ಹಲವರಿಗೆ ಅನುಮಾನವಿರುತ್ತದೆ. ಇದು ಫೋಟೊಶಾಪ್ ಚಿತ್ರ. ಕೆಲವು ವಿಕೃತರು ಈ ರೀತಿ ಮಾಡಿ ಹರಿಯಬಿಡುತ್ತಿದ್ದಾರೆ ಅಷ್ಟೇ..

ಒಂದು ಹಾವಿನ ಅಸಲಿ ಫೋಟೋ ಮೇಲೆ ಫೋಟೋಶಾಪ್‍ನ ಕ್ಲೋನ್ ಸ್ಟಾಂಪ್ ಟೂಲ್ ಬಳಸಿ ಒಂದೊಂದಾಗಿ ಏಳಲ್ಲ, ಹತ್ತು, ನೂರು ತಲೆಗಳನ್ನು ಬೇಕಾದರೂ ಕೂರಿಸಬಹುದಾಗಿದೆ.

4. ಇಲ್ಲಿದ್ದು ಪ್ರಯೋಜನವಿಲ್ಲ; ಲಂಡನ್‍ಗೆ ಹೋಗಿ ಸೆಟ್ಲ್ ಆಗುತ್ತೇನೆ- ರಾಹುಲ್ ಗಾಂಧಿ..

ಸುಳ್ಳು: ಭಾರತದಲ್ಲಿದ್ದು ಯಾವುದೇ ಪ್ರಯೋಜನವಿಲ್ಲ. ನನ್ನ ಬಳಿ ಕೋಟ್ಯಾಂತರ ರೂ ಹಣವಿದೆ. ಯಾವುದೇ ಸಮಯದಲ್ಲಿ ಬೇಕಾದರೂ ಲಂಡನ್‍ಗೆ ಹೋಗಿ ಸೆಟ್ಲ್ ಆಗುತ್ತೇನೆ. ನನ್ನ ಮಕ್ಕಳು ಅಮೆರಿಕದಲ್ಲಿ ಓದುತ್ತಾರೆ.. ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ವಿಡಿಯೋ ಈ ವಾರ ವೈರಲ್ ಆಗಿದೆ.

ಸತ್ಯ: ಆದರೆ ಇದು ತಿರುಚಿದ ವಿಡಿಯೋವಾಗಿದೆ. ವರ್ಷದ ಹಿಂದೆ ರಾಹುಲ್ ಗಾಂಧಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯವರನ್ನು ಉದ್ದೇಶಿಸಿ ಮಾಡಿದ ಭಾಷಣವಾಗಿದೆ. ಆದರೆ ಆರಂಭದ 11 ಸೆಕೆಂಡ್ ವಿಡಿಯೋವನ್ನು ಕತ್ತರಿಸಿ ರಾಹುಲ್ ಗಾಂಧಿಯ ಬಗ್ಗೆ ಅಪಪ್ರಚಾರ ನಡೆಸಲು ಈ ವಿಡಿಯೋ ತಯಾರಿಸಲಾಗಿದೆ. ಹತ್ತಾರು ಮಂದಿ ಟ್ವಿಟ್ಟರ್‍ನಲ್ಲಿ ಈ ನಕಲಿ ವಿಡಿಯೋ ಲಗತ್ತಿಸಿದ್ದು ಸಾವಿರಾರು ಜನ ವೀಕ್ಷಿಸಿದ್ದಾರೆ.

5. ಮೋದಿಯಿಂದ ಪ್ರಭಾವಿತನಾಗಿ ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್

ಅಕ್ಟೋಬರ್ 11 ರಂದು ಭಾರತದ ಚನ್ನೈಗೆ ಕ್ಸಿ ಜಿನ್‍ಪಿಂಗ್ ಭೇಟಿ ಕೊಟ್ಟಾಗ ಮೋದಿಯವರು ಸಾಂಪ್ರದಾಯಿಕ ಬಿಳಿ ಅಂಗಿ ಬಿಳಿ ಲುಂಗಿ ಧರಿಸಿದ್ದರು.

ಇದನ್ನೇ ನೆಪಮಾಡಿಕೊಂಡ ಭಕ್ತರು ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇರುವ ಹಳೆಯ ಫೋಟೊವೊಂದನ್ನು ಫೋಟೊಶಾಪ್ ಮಾಡಿ ಕ್ಸಿ ಜಿನ್‍ಪಿಂಗ್‍ಗೂ ಬಿಳಿ ಅಂಗಿ ಲುಂಗಿ ತೊಡಿಸಿಬಿಟ್ಟಿದ್ದಾರೆ. ಮೋದಿಯಿಂದ ಪ್ರಭಾವಿತನಾಗಿ ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಎಂದು ಸುಳ್ಳು ಹರಡಿದ್ದಾರೆ. ಮೋದಿಯ ಇಮೇಜ್ ಅನ್ನು ಹೆಚ್ಚಿಸಲು ಇಲ್ಲಿ ಕ್ಸಿ ಜಿನ್‍ಪಿಂಗ್ ಇಮೇಜ್‍ಅನ್ನು ಫೋಟೊಶಾಪ್ ಮಾಡಲಾಗಿದೆ ಅಷ್ಟೇ.. ವಾಸ್ತವವೆಂದರೆ ಚೀನಾಗೆ ಭಾರತಕ್ಕಿಂತ ಪಾಕ್ ಅಚ್ಚುಮೆಚ್ಚಿನ ರಾಷ್ಟ್ರ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...