Homeಫ್ಯಾಕ್ಟ್‌ಚೆಕ್ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್!!

ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್!!

- Advertisement -
- Advertisement -

| ಮುತ್ತುರಾಜ್ |

1. ಮೋದಿಗಿಂತ ಮನಮೋಹನ್ ಸಿಂಗ್ ಅತಿ ಹೆಚ್ಚು ವಿದೇಶಿ ಪ್ರವಾಸ ಮಾಡಿದ್ದಾರೆ: ಅಮಿತ್ ಶಾ

ಸುಳ್ಳು: ಮನಮೋಹನ್ ಸಿಂಗ್‍ಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ಕಡಿಮೆ ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಯಾಣದ ಕೈತಾಲ್‍ನಲ್ಲಿ ಚುನಾವಣೆ ಪ್ರಚಾರದ ವೇಳೆ ಹೇಳಿದ್ದಾರೆ.

ಸತ್ಯ: ಆದರೆ ಈ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ. ಎರಡೂ ನಾಯಕರ ಮೊದಲ ಐದು ವರ್ಷಗಳ ಅವಧಿಯ ಸರ್ಕಾರಿ ಡೇಟಾವನ್ನು ಪರಿಶೀಲಿಸಿದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮನಮೋಹನ್ ಸಿಂಗ್ ಗಿಂತ ಹೆಚ್ಚು ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಕಂಡುಬಂದಿದೆ.

ಪ್ರಧಾನ ಮಂತ್ರಿಗಳ ಕಚೇರಿಯ (ಪಿಎಂಒ) ದತ್ತಾಂಶ ಪಟ್ಟಿ ನೋಡಿದಾಗ,
ಮನಮೋಹನ್ ಸಿಂಗ್ ರವರು ಒಟ್ಟು 10 ವರ್ಷಗಳ ಆಡಳಿತದಲ್ಲಿ 72 ಬಾರಿ 93 ದೇಶಗಳಿಗೆ ಪ್ರವಾಸ ಮಾಡಿದ್ದಾರೆ

ಆದರೆ ಮೋದಿಯವರು ತಮ್ಮ ಮೊದಲ ಐದು ವಷಗಳ ಅವಧಿಯಲ್ಲಿಯೇ 49 ಬಾರಿ ಪ್ರವಾಸ ಮಾಡಿದ್ದು 93 ದೇಶಗಳಿಗೆ ಭೇಟಿ ನೀಡಿದ್ದಾರೆ. ಅಂದರೆ ಮನಮೋಹನ್‍ಸಿಂಗ್‍ಗಿಂತ ಹೆಚ್ಚು ಪ್ರವಾಸ ಮತ್ತು ಹೆಚ್ಚು ಖರ್ಚು ಕೂಡ ಮಾಡಿದ್ದಾರೆ. ಆದರೆ ಅಮಿತ್ ಶಾ ಚುನಾವಣಾ ದೃಷ್ಟಿಯಿಂದ ಸುಳ್ಳು ಹೇಳಿದ್ದಾರೆ.

2. ಗೋ ಬ್ಯಾಕ್ ಮೋದಿ ಟ್ವೀಟ್‍ಗಳು ಪಾಕಿಸ್ತಾನದಿಂದ ಮಾಡಲ್ಪಡುತ್ತಿವೆ

ಅಕ್ಟೋಬರ್ 11ರಂದು ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ಕೊಟ್ಟಾಗ ಎಂದಿನಂತೆ #GoBackModi ಎಂಬ ಟ್ವೀಟುಗಳು ಮೊಳಗಿದವು. ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಟ್ವೀಟ್‍ಗಳು ದಾಖಲಾಗಿ ನಂಬರ್1 ಸ್ಥಾನದಲ್ಲಿ ಟ್ರೆಂಡಿಂಗ್ ಆಗಿತ್ತು. ಇದರಿಂದ ಸಹಜವಾಗಿ ಮೋದಿ ಮತ್ತವರ ಅಭಿಮಾನಿಗಳಿಗೆ ಮುಜುಗರವಾಗಿತ್ತು.

ಕೂಡಲೇ ವಾಟ್ಸಾಪ್ ಯೂನಿವರ್ಸಿಟಿಯ ಸಂಚುಕೋರರು ಈ ಟ್ವೀಟ್‍ಗಳು ಪಾಕಿಸ್ತಾನದಲ್ಲಿ ಆಗುತ್ತಿವೆ ಎಂದು ಸುಳ್ಳು ಹಬ್ಬಿಸಿದರು. ಇದಕ್ಕೆ ಬಕೆಟ್ ಪತ್ರಕರ್ತರು ಮತ್ತು ಗೋದಿ ಮೀಡಿಯಾಗಳು ಸಹ ಕೈ ಜೋಡಿಸಿದರು.

ವಾಸ್ತವ ಏನೆಂದರೆ 98% ಟ್ವೀಟ್ ಗಳು ಭಾರತದಿಂದಲೇ ಟ್ವೀಟಾಗಿದ್ದವು. ತಮಿಳುನಾಡು ರಾಜ್ಯವೊಂದರಲ್ಲೇ 78,000 ಟ್ವೀಟ್ ದಾಖಲಾಗಿತ್ತು. ದೆಹಲಿಯಿಂದ 45,000 ಟ್ವೀಟ್‍ಗಳು ಬಂದಿದ್ದವು… ಚಿತ್ರ ನೋಡಿ…

3 ಕನಕಪುರದ ಮರಿಗೌಡನ ದೊಡ್ಡಿಯಲ್ಲಿ ಕಾಣಿಸಿಕೊಂಡ ಏಳ್ಹೆಡೆ ಕಾಳಿಂಗನ ಪೊರೆ..

ಎರಡು ತಲೆ ಸರ್ಪ ಇದೆ, ಮೂರು ತಲೆ, ಏಳು ತಲೆ ಸರ್ಪ ಇದೆ ಎಂಬ ಸುದ್ದಿಗಳನ್ನು ಅಲ್ಲಲ್ಲಿ ಓದಿರುತ್ತೇವೆ. ಈ ಇಂಟರ್‍ನೆಟ್ ಯುಗದಲ್ಲಂತೂ ಮೊಬೈಲ್‍ನಲ್ಲಿ ಆ ರೀತಿಯ ಫೋಟೊಗಳು ಕಾಣಿಸಿಕೊಳ್ಳುತ್ತವೆ. ಜನ ಕುತೂಹಲದಿಂದ ನೋಡುವುದಲ್ಲದೇ ಫಾರ್ವಡ್ ಕೂಡ ಮಾಡಿಬಿಡುತ್ತಾರೆ. ಅಂತದ್ದೇ ಸುದ್ದಿ ರಾಮನಗರ ಜಿಲ್ಲೆಯಿಂದ ಹೊರಟಿದೆ.

ಏಳ್ಹೆಡೆ ಕಾಳಿಂಗನ ಪೊರೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಎಲ್ಲಡೆ ವೈರಲ್ ಆಗಿದೆ. ವೈಜ್ಞಾನಿಕ ಸತ್ಯ ಏನೆಂದರೆ ಒಂದಕ್ಕಿಂತ ಹೆಚ್ಚು ತಲೆಯ ಜೀವಿಗಳು ಹುಟ್ಟುತ್ತಲೇ ಸಾಯುತ್ತವೆ. ಏಕೆಂದರೆ ಒಂದು ಜೀವಿಗೆ ಒಂದಕ್ಕಿಂತ ಹೆಚ್ಚು ತಲೆಗಳಿದ್ದರೆ ಅದಕ್ಕೆ ಬಹಳಷ್ಟು ತೊಂದರೆಯಾಗುತ್ತದೆ. ಅದು ಓಡಾಡಲು ಸಾಧ್ಯವಿಲ್ಲ, ಆಹಾರ ಸೇವಿಸಲು ಸಾಧ್ಯವಿಲ್ಲ. ಹಾಗಾಗಿ ಅದು ಬಹುಬೇಗ ಸಾಯುತ್ತದೆ.

ಆದರೆ ಈ ಫೋಟೊಗಳು ಎಲ್ಲಿಯವು ಎಂದು ಹಲವರಿಗೆ ಅನುಮಾನವಿರುತ್ತದೆ. ಇದು ಫೋಟೊಶಾಪ್ ಚಿತ್ರ. ಕೆಲವು ವಿಕೃತರು ಈ ರೀತಿ ಮಾಡಿ ಹರಿಯಬಿಡುತ್ತಿದ್ದಾರೆ ಅಷ್ಟೇ..

ಒಂದು ಹಾವಿನ ಅಸಲಿ ಫೋಟೋ ಮೇಲೆ ಫೋಟೋಶಾಪ್‍ನ ಕ್ಲೋನ್ ಸ್ಟಾಂಪ್ ಟೂಲ್ ಬಳಸಿ ಒಂದೊಂದಾಗಿ ಏಳಲ್ಲ, ಹತ್ತು, ನೂರು ತಲೆಗಳನ್ನು ಬೇಕಾದರೂ ಕೂರಿಸಬಹುದಾಗಿದೆ.

4. ಇಲ್ಲಿದ್ದು ಪ್ರಯೋಜನವಿಲ್ಲ; ಲಂಡನ್‍ಗೆ ಹೋಗಿ ಸೆಟ್ಲ್ ಆಗುತ್ತೇನೆ- ರಾಹುಲ್ ಗಾಂಧಿ..

ಸುಳ್ಳು: ಭಾರತದಲ್ಲಿದ್ದು ಯಾವುದೇ ಪ್ರಯೋಜನವಿಲ್ಲ. ನನ್ನ ಬಳಿ ಕೋಟ್ಯಾಂತರ ರೂ ಹಣವಿದೆ. ಯಾವುದೇ ಸಮಯದಲ್ಲಿ ಬೇಕಾದರೂ ಲಂಡನ್‍ಗೆ ಹೋಗಿ ಸೆಟ್ಲ್ ಆಗುತ್ತೇನೆ. ನನ್ನ ಮಕ್ಕಳು ಅಮೆರಿಕದಲ್ಲಿ ಓದುತ್ತಾರೆ.. ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ವಿಡಿಯೋ ಈ ವಾರ ವೈರಲ್ ಆಗಿದೆ.

ಸತ್ಯ: ಆದರೆ ಇದು ತಿರುಚಿದ ವಿಡಿಯೋವಾಗಿದೆ. ವರ್ಷದ ಹಿಂದೆ ರಾಹುಲ್ ಗಾಂಧಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯವರನ್ನು ಉದ್ದೇಶಿಸಿ ಮಾಡಿದ ಭಾಷಣವಾಗಿದೆ. ಆದರೆ ಆರಂಭದ 11 ಸೆಕೆಂಡ್ ವಿಡಿಯೋವನ್ನು ಕತ್ತರಿಸಿ ರಾಹುಲ್ ಗಾಂಧಿಯ ಬಗ್ಗೆ ಅಪಪ್ರಚಾರ ನಡೆಸಲು ಈ ವಿಡಿಯೋ ತಯಾರಿಸಲಾಗಿದೆ. ಹತ್ತಾರು ಮಂದಿ ಟ್ವಿಟ್ಟರ್‍ನಲ್ಲಿ ಈ ನಕಲಿ ವಿಡಿಯೋ ಲಗತ್ತಿಸಿದ್ದು ಸಾವಿರಾರು ಜನ ವೀಕ್ಷಿಸಿದ್ದಾರೆ.

5. ಮೋದಿಯಿಂದ ಪ್ರಭಾವಿತನಾಗಿ ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್

ಅಕ್ಟೋಬರ್ 11 ರಂದು ಭಾರತದ ಚನ್ನೈಗೆ ಕ್ಸಿ ಜಿನ್‍ಪಿಂಗ್ ಭೇಟಿ ಕೊಟ್ಟಾಗ ಮೋದಿಯವರು ಸಾಂಪ್ರದಾಯಿಕ ಬಿಳಿ ಅಂಗಿ ಬಿಳಿ ಲುಂಗಿ ಧರಿಸಿದ್ದರು.

ಇದನ್ನೇ ನೆಪಮಾಡಿಕೊಂಡ ಭಕ್ತರು ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇರುವ ಹಳೆಯ ಫೋಟೊವೊಂದನ್ನು ಫೋಟೊಶಾಪ್ ಮಾಡಿ ಕ್ಸಿ ಜಿನ್‍ಪಿಂಗ್‍ಗೂ ಬಿಳಿ ಅಂಗಿ ಲುಂಗಿ ತೊಡಿಸಿಬಿಟ್ಟಿದ್ದಾರೆ. ಮೋದಿಯಿಂದ ಪ್ರಭಾವಿತನಾಗಿ ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಎಂದು ಸುಳ್ಳು ಹರಡಿದ್ದಾರೆ. ಮೋದಿಯ ಇಮೇಜ್ ಅನ್ನು ಹೆಚ್ಚಿಸಲು ಇಲ್ಲಿ ಕ್ಸಿ ಜಿನ್‍ಪಿಂಗ್ ಇಮೇಜ್‍ಅನ್ನು ಫೋಟೊಶಾಪ್ ಮಾಡಲಾಗಿದೆ ಅಷ್ಟೇ.. ವಾಸ್ತವವೆಂದರೆ ಚೀನಾಗೆ ಭಾರತಕ್ಕಿಂತ ಪಾಕ್ ಅಚ್ಚುಮೆಚ್ಚಿನ ರಾಷ್ಟ್ರ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...