Homeಫ್ಯಾಕ್ಟ್‌ಚೆಕ್ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್!!

ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್!!

- Advertisement -
- Advertisement -

| ಮುತ್ತುರಾಜ್ |

1. ಮೋದಿಗಿಂತ ಮನಮೋಹನ್ ಸಿಂಗ್ ಅತಿ ಹೆಚ್ಚು ವಿದೇಶಿ ಪ್ರವಾಸ ಮಾಡಿದ್ದಾರೆ: ಅಮಿತ್ ಶಾ

ಸುಳ್ಳು: ಮನಮೋಹನ್ ಸಿಂಗ್‍ಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ಕಡಿಮೆ ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಯಾಣದ ಕೈತಾಲ್‍ನಲ್ಲಿ ಚುನಾವಣೆ ಪ್ರಚಾರದ ವೇಳೆ ಹೇಳಿದ್ದಾರೆ.

ಸತ್ಯ: ಆದರೆ ಈ ಹೇಳಿಕೆ ಸಂಪೂರ್ಣ ಸುಳ್ಳಾಗಿದೆ. ಎರಡೂ ನಾಯಕರ ಮೊದಲ ಐದು ವರ್ಷಗಳ ಅವಧಿಯ ಸರ್ಕಾರಿ ಡೇಟಾವನ್ನು ಪರಿಶೀಲಿಸಿದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮನಮೋಹನ್ ಸಿಂಗ್ ಗಿಂತ ಹೆಚ್ಚು ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಕಂಡುಬಂದಿದೆ.

ಪ್ರಧಾನ ಮಂತ್ರಿಗಳ ಕಚೇರಿಯ (ಪಿಎಂಒ) ದತ್ತಾಂಶ ಪಟ್ಟಿ ನೋಡಿದಾಗ,
ಮನಮೋಹನ್ ಸಿಂಗ್ ರವರು ಒಟ್ಟು 10 ವರ್ಷಗಳ ಆಡಳಿತದಲ್ಲಿ 72 ಬಾರಿ 93 ದೇಶಗಳಿಗೆ ಪ್ರವಾಸ ಮಾಡಿದ್ದಾರೆ

ಆದರೆ ಮೋದಿಯವರು ತಮ್ಮ ಮೊದಲ ಐದು ವಷಗಳ ಅವಧಿಯಲ್ಲಿಯೇ 49 ಬಾರಿ ಪ್ರವಾಸ ಮಾಡಿದ್ದು 93 ದೇಶಗಳಿಗೆ ಭೇಟಿ ನೀಡಿದ್ದಾರೆ. ಅಂದರೆ ಮನಮೋಹನ್‍ಸಿಂಗ್‍ಗಿಂತ ಹೆಚ್ಚು ಪ್ರವಾಸ ಮತ್ತು ಹೆಚ್ಚು ಖರ್ಚು ಕೂಡ ಮಾಡಿದ್ದಾರೆ. ಆದರೆ ಅಮಿತ್ ಶಾ ಚುನಾವಣಾ ದೃಷ್ಟಿಯಿಂದ ಸುಳ್ಳು ಹೇಳಿದ್ದಾರೆ.

2. ಗೋ ಬ್ಯಾಕ್ ಮೋದಿ ಟ್ವೀಟ್‍ಗಳು ಪಾಕಿಸ್ತಾನದಿಂದ ಮಾಡಲ್ಪಡುತ್ತಿವೆ

ಅಕ್ಟೋಬರ್ 11ರಂದು ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ಕೊಟ್ಟಾಗ ಎಂದಿನಂತೆ #GoBackModi ಎಂಬ ಟ್ವೀಟುಗಳು ಮೊಳಗಿದವು. ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಟ್ವೀಟ್‍ಗಳು ದಾಖಲಾಗಿ ನಂಬರ್1 ಸ್ಥಾನದಲ್ಲಿ ಟ್ರೆಂಡಿಂಗ್ ಆಗಿತ್ತು. ಇದರಿಂದ ಸಹಜವಾಗಿ ಮೋದಿ ಮತ್ತವರ ಅಭಿಮಾನಿಗಳಿಗೆ ಮುಜುಗರವಾಗಿತ್ತು.

ಕೂಡಲೇ ವಾಟ್ಸಾಪ್ ಯೂನಿವರ್ಸಿಟಿಯ ಸಂಚುಕೋರರು ಈ ಟ್ವೀಟ್‍ಗಳು ಪಾಕಿಸ್ತಾನದಲ್ಲಿ ಆಗುತ್ತಿವೆ ಎಂದು ಸುಳ್ಳು ಹಬ್ಬಿಸಿದರು. ಇದಕ್ಕೆ ಬಕೆಟ್ ಪತ್ರಕರ್ತರು ಮತ್ತು ಗೋದಿ ಮೀಡಿಯಾಗಳು ಸಹ ಕೈ ಜೋಡಿಸಿದರು.

ವಾಸ್ತವ ಏನೆಂದರೆ 98% ಟ್ವೀಟ್ ಗಳು ಭಾರತದಿಂದಲೇ ಟ್ವೀಟಾಗಿದ್ದವು. ತಮಿಳುನಾಡು ರಾಜ್ಯವೊಂದರಲ್ಲೇ 78,000 ಟ್ವೀಟ್ ದಾಖಲಾಗಿತ್ತು. ದೆಹಲಿಯಿಂದ 45,000 ಟ್ವೀಟ್‍ಗಳು ಬಂದಿದ್ದವು… ಚಿತ್ರ ನೋಡಿ…

3 ಕನಕಪುರದ ಮರಿಗೌಡನ ದೊಡ್ಡಿಯಲ್ಲಿ ಕಾಣಿಸಿಕೊಂಡ ಏಳ್ಹೆಡೆ ಕಾಳಿಂಗನ ಪೊರೆ..

ಎರಡು ತಲೆ ಸರ್ಪ ಇದೆ, ಮೂರು ತಲೆ, ಏಳು ತಲೆ ಸರ್ಪ ಇದೆ ಎಂಬ ಸುದ್ದಿಗಳನ್ನು ಅಲ್ಲಲ್ಲಿ ಓದಿರುತ್ತೇವೆ. ಈ ಇಂಟರ್‍ನೆಟ್ ಯುಗದಲ್ಲಂತೂ ಮೊಬೈಲ್‍ನಲ್ಲಿ ಆ ರೀತಿಯ ಫೋಟೊಗಳು ಕಾಣಿಸಿಕೊಳ್ಳುತ್ತವೆ. ಜನ ಕುತೂಹಲದಿಂದ ನೋಡುವುದಲ್ಲದೇ ಫಾರ್ವಡ್ ಕೂಡ ಮಾಡಿಬಿಡುತ್ತಾರೆ. ಅಂತದ್ದೇ ಸುದ್ದಿ ರಾಮನಗರ ಜಿಲ್ಲೆಯಿಂದ ಹೊರಟಿದೆ.

ಏಳ್ಹೆಡೆ ಕಾಳಿಂಗನ ಪೊರೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಎಲ್ಲಡೆ ವೈರಲ್ ಆಗಿದೆ. ವೈಜ್ಞಾನಿಕ ಸತ್ಯ ಏನೆಂದರೆ ಒಂದಕ್ಕಿಂತ ಹೆಚ್ಚು ತಲೆಯ ಜೀವಿಗಳು ಹುಟ್ಟುತ್ತಲೇ ಸಾಯುತ್ತವೆ. ಏಕೆಂದರೆ ಒಂದು ಜೀವಿಗೆ ಒಂದಕ್ಕಿಂತ ಹೆಚ್ಚು ತಲೆಗಳಿದ್ದರೆ ಅದಕ್ಕೆ ಬಹಳಷ್ಟು ತೊಂದರೆಯಾಗುತ್ತದೆ. ಅದು ಓಡಾಡಲು ಸಾಧ್ಯವಿಲ್ಲ, ಆಹಾರ ಸೇವಿಸಲು ಸಾಧ್ಯವಿಲ್ಲ. ಹಾಗಾಗಿ ಅದು ಬಹುಬೇಗ ಸಾಯುತ್ತದೆ.

ಆದರೆ ಈ ಫೋಟೊಗಳು ಎಲ್ಲಿಯವು ಎಂದು ಹಲವರಿಗೆ ಅನುಮಾನವಿರುತ್ತದೆ. ಇದು ಫೋಟೊಶಾಪ್ ಚಿತ್ರ. ಕೆಲವು ವಿಕೃತರು ಈ ರೀತಿ ಮಾಡಿ ಹರಿಯಬಿಡುತ್ತಿದ್ದಾರೆ ಅಷ್ಟೇ..

ಒಂದು ಹಾವಿನ ಅಸಲಿ ಫೋಟೋ ಮೇಲೆ ಫೋಟೋಶಾಪ್‍ನ ಕ್ಲೋನ್ ಸ್ಟಾಂಪ್ ಟೂಲ್ ಬಳಸಿ ಒಂದೊಂದಾಗಿ ಏಳಲ್ಲ, ಹತ್ತು, ನೂರು ತಲೆಗಳನ್ನು ಬೇಕಾದರೂ ಕೂರಿಸಬಹುದಾಗಿದೆ.

4. ಇಲ್ಲಿದ್ದು ಪ್ರಯೋಜನವಿಲ್ಲ; ಲಂಡನ್‍ಗೆ ಹೋಗಿ ಸೆಟ್ಲ್ ಆಗುತ್ತೇನೆ- ರಾಹುಲ್ ಗಾಂಧಿ..

ಸುಳ್ಳು: ಭಾರತದಲ್ಲಿದ್ದು ಯಾವುದೇ ಪ್ರಯೋಜನವಿಲ್ಲ. ನನ್ನ ಬಳಿ ಕೋಟ್ಯಾಂತರ ರೂ ಹಣವಿದೆ. ಯಾವುದೇ ಸಮಯದಲ್ಲಿ ಬೇಕಾದರೂ ಲಂಡನ್‍ಗೆ ಹೋಗಿ ಸೆಟ್ಲ್ ಆಗುತ್ತೇನೆ. ನನ್ನ ಮಕ್ಕಳು ಅಮೆರಿಕದಲ್ಲಿ ಓದುತ್ತಾರೆ.. ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ ವಿಡಿಯೋ ಈ ವಾರ ವೈರಲ್ ಆಗಿದೆ.

ಸತ್ಯ: ಆದರೆ ಇದು ತಿರುಚಿದ ವಿಡಿಯೋವಾಗಿದೆ. ವರ್ಷದ ಹಿಂದೆ ರಾಹುಲ್ ಗಾಂಧಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯವರನ್ನು ಉದ್ದೇಶಿಸಿ ಮಾಡಿದ ಭಾಷಣವಾಗಿದೆ. ಆದರೆ ಆರಂಭದ 11 ಸೆಕೆಂಡ್ ವಿಡಿಯೋವನ್ನು ಕತ್ತರಿಸಿ ರಾಹುಲ್ ಗಾಂಧಿಯ ಬಗ್ಗೆ ಅಪಪ್ರಚಾರ ನಡೆಸಲು ಈ ವಿಡಿಯೋ ತಯಾರಿಸಲಾಗಿದೆ. ಹತ್ತಾರು ಮಂದಿ ಟ್ವಿಟ್ಟರ್‍ನಲ್ಲಿ ಈ ನಕಲಿ ವಿಡಿಯೋ ಲಗತ್ತಿಸಿದ್ದು ಸಾವಿರಾರು ಜನ ವೀಕ್ಷಿಸಿದ್ದಾರೆ.

5. ಮೋದಿಯಿಂದ ಪ್ರಭಾವಿತನಾಗಿ ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್

ಅಕ್ಟೋಬರ್ 11 ರಂದು ಭಾರತದ ಚನ್ನೈಗೆ ಕ್ಸಿ ಜಿನ್‍ಪಿಂಗ್ ಭೇಟಿ ಕೊಟ್ಟಾಗ ಮೋದಿಯವರು ಸಾಂಪ್ರದಾಯಿಕ ಬಿಳಿ ಅಂಗಿ ಬಿಳಿ ಲುಂಗಿ ಧರಿಸಿದ್ದರು.

ಇದನ್ನೇ ನೆಪಮಾಡಿಕೊಂಡ ಭಕ್ತರು ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇರುವ ಹಳೆಯ ಫೋಟೊವೊಂದನ್ನು ಫೋಟೊಶಾಪ್ ಮಾಡಿ ಕ್ಸಿ ಜಿನ್‍ಪಿಂಗ್‍ಗೂ ಬಿಳಿ ಅಂಗಿ ಲುಂಗಿ ತೊಡಿಸಿಬಿಟ್ಟಿದ್ದಾರೆ. ಮೋದಿಯಿಂದ ಪ್ರಭಾವಿತನಾಗಿ ಲುಂಗಿಯಲ್ಲಿ ಪಾಕ್‍ಗೆ ಭೇಟಿಕೊಟ್ಟ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಎಂದು ಸುಳ್ಳು ಹರಡಿದ್ದಾರೆ. ಮೋದಿಯ ಇಮೇಜ್ ಅನ್ನು ಹೆಚ್ಚಿಸಲು ಇಲ್ಲಿ ಕ್ಸಿ ಜಿನ್‍ಪಿಂಗ್ ಇಮೇಜ್‍ಅನ್ನು ಫೋಟೊಶಾಪ್ ಮಾಡಲಾಗಿದೆ ಅಷ್ಟೇ.. ವಾಸ್ತವವೆಂದರೆ ಚೀನಾಗೆ ಭಾರತಕ್ಕಿಂತ ಪಾಕ್ ಅಚ್ಚುಮೆಚ್ಚಿನ ರಾಷ್ಟ್ರ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೀವ್ರ ವಿರೋಧಗಳ ನಡುವೆ ಗಣರಾಜ್ಯೋತ್ಸವ ಆಚರಣೆಯಲ್ಲಿ ‘ವಂದೇ ಮಾತರಂ’ ಹಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ 

ಗಣರಾಜ್ಯೋತ್ಸವದ ಸಂದರ್ಭದಲ್ಲಿ 'ವಂದೇ ಮಾತರಂ' ಗೀತೆಯನ್ನು ಪ್ರಧಾನವಾಗಿ ಹಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯುರೋಪಿಯನ್ ಒಕ್ಕೂಟದ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಮುಂದಿನ ತಿಂಗಳು ಭಾರತಕ್ಕೆ ಆಗಮಿಸುವ...

ಅಣು ವಿದ್ಯುತ್ ಯೋಜನೆ ಕುರಿತು ಯುಪಿ ಸರ್ಕಾರದೊಂದಿಗೆ ಅದಾನಿ ಗ್ರೂಪ್ ಮಾತುಕತೆ: ವರದಿ

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, ‘ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿದೆ. ಈ ಬೆನ್ನಲ್ಲೇ...

ಅನಧಿಕೃತ ಬುದ್ಧಿಮಾಂದ್ಯ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಅಮಾನವೀಯ ಹಲ್ಲೆ: ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರು

ಬಾಗಲಕೋಟೆ: ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ಶಾಲೆಯಲ್ಲಿ ಶಿಕ್ಷಕ ದಂಪತಿ ಬುದ್ಧಿಮಾಂದ್ಯನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ವೀಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮುಧೋಳ ತಾಲೂಕಿನ ಮಂಟೂರು ಗ್ರಾಮದ 16...

ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಿಂದ ಟ್ರಂಪ್ ಫೋಟೋ ಸೇರಿದಂತೆ 16 ದಾಖಲೆಗಳು ಕಣ್ಮರೆ 

ನ್ಯೂಯಾರ್ಕ್: ಜೆಫ್ರಿ ಎಪ್‌ಸ್ಟೀನ್ ಗೆ ಸಂಬಂಧಿಸಿದ ದಾಖಲೆಗಳಿರುವ ಅಮೆರಿಕದ ನ್ಯಾಯ ಇಲಾಖೆಯ (Justice Department) ಸಾರ್ವಜನಿಕ ವೆಬ್‌ಪುಟದಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಸೇರಿದಂತೆ ಕನಿಷ್ಟ 16 ದಾಖಲೆಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತ...

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ| ಬಿಎನ್‌ಪಿ ನಾಯಕನ ಮನೆಗೆ ಬೆಂಕಿ : 7 ವರ್ಷದ ಮಗಳು ಸಜೀವ ದಹನ

ವಿದ್ಯಾರ್ಥಿ ನಾಯಕ ಹಾಗೂ ಸ್ವತಂತ್ರ ರಾಜಕಾರಣಿ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾ ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಯ ಮೂರನೇ ದಿನವಾದ ಶನಿವಾರ, ಪ್ರತಿಭಟನಾಕಾರರು ಬಾಂಗ್ಲಾದೇಶ್...

ದಕ್ಷಿಣ ಆಫ್ರಿಕಾದಲ್ಲಿ ಸಾರ್ವಜನಿಕರ ಮೇಲೆ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 9 ಜನರ ಸಾವು 

ಜೋಹಾನ್ಸ್‌ಬರ್ಗ್‌ನ ಹೊರಗಿನ ಬಾರ್‌ನಲ್ಲಿ ಭಾನುವಾರ ಮುಂಜಾನೆ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಗುಂಡಿನ ದಾಳಿ...

ಬೆಂಗಳೂರು : ಜಿಬಿಎ ಅಧಿಕಾರಿಗಳಿಂದ 200ರಷ್ಟು ಮನೆಗಳ ನೆಲಸಮ : ಬೀದಿಗೆ ಬಿದ್ದ ಬಡ ಜನರು

ಅತಿಕ್ರಮಣ ಆರೋಪದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿಯ 5 ಎಕರೆ ಜಾಗದಲ್ಲಿದ್ದ ಸುಮಾರು 200ರಷ್ಟು ಮನೆಗಳನ್ನು ಶನಿವಾರ (ಡಿ.20)...

ಕೇರಳ ದಲಿತ ಕಾರ್ಮಿಕನ ಗುಂಪುಹತ್ಯೆ: ನನ್ನ ವೃತ್ತಿ ಬದುಕಿನಲ್ಲೇ ಇಂತಹ ಹಿಂಸಾಚಾರ ನೋಡಿಲ್ಲ ಎಂದ ವೈದ್ಯರು

ಕೇರಳದ ಪಾಲಕ್ಕಾಡ್ ಜಿಲ್ಲೆಯ ವಲಯಾರ್‌ನಲ್ಲಿ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿದ ಛತ್ತೀಸ್‌ಗಢದ ದಲಿತ ವಲಸೆ ಕಾರ್ಮಿಕ ರಾಮ್ ನಾರಾಯಣ್ ಅವರ ಮರಣೋತ್ತರ ಪರೀಕ್ಷೆಯು ದಾಳಿಯ ತೀವ್ರ ಕ್ರೌರ್ಯವನ್ನು ಬಹಿರಂಗಪಡಿಸಿದೆ, ದೇಹದ ಒಂದು...

ಪೊಲೀಸ್ ಕಾರ್ಯಾಚರಣೆ ತಡೆದು ಕೋಳಿ ಅಂಕ : ಪುತ್ತೂರು ಶಾಸಕ ಅಶೋಕ್ ರೈ ಸೇರಿ 17 ಮಂದಿ ವಿರುದ್ಧ ಪ್ರಕರಣ ದಾಖಲು

ಶಾಸಕರೇ ಮುಂದೆ ನಿಂತು ಕಾನೂನುಬಾಹಿರ ಚಟುವಟಿಕೆ ನಡೆಸಲು ಜನರನ್ನು ಪ್ರೋತ್ಸಾಹಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿ ಶನಿವಾರ (ಡಿ.20) ನಡೆದಿದೆ. ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯುತ್ತಿದ್ದ...

ನಾಲ್ವರು ಬಾಲಕರಿಂದ ಬಾಲಕಿಗೆ ಕಿರುಕುಳ ಆರೋಪ : ‘ಉತ್ತಮ ಸಂಸ್ಕಾರ ಕಲಿಸಿಲ್ಲ’ ಎಂದು ತಾಯಂದಿರನ್ನು ಬಂಧಿಸಿದ ಪೊಲೀಸರು!

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಾಲ್ವರು ಬಾಲಕರ ವಿರುದ್ಧ ಬಾಲಕಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಪೊಲೀಸರು ಬಾಲಕರ ತಾಯಂದಿರನ್ನು 'ಪ್ರಿವೆಂಟಿವ್ ಅರೆಸ್ಟ್' ಮಾಡಿದ್ದಾರೆ ಎಂದು indianexpress.com ಶನಿವಾರ (ಡಿ.20) ವರದಿ...