Homeಕರ್ನಾಟಕಉತ್ತರ ಕನ್ನಡ: ಬನವಾಸಿ ಮೇಲ್ಯಾಕೆ ಯಡ್ಡಿ ಕುಟುಂಬದ ಕಣ್ಣು!?

ಉತ್ತರ ಕನ್ನಡ: ಬನವಾಸಿ ಮೇಲ್ಯಾಕೆ ಯಡ್ಡಿ ಕುಟುಂಬದ ಕಣ್ಣು!?

`ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ' ಎಂದು ಎದೆತುಂಬಿ ಪಂಪ ಮಹಾಕವಿ ಹಾಡಿದ್ದ ಐತಿಹಾಸಿಕ ಮಹತ್ವದ ಬನವಾಸಿಗೆ ಉತ್ತರ ಕನ್ನಡದೊಂದಿಗೆ, ಅದರಲ್ಲೂ ಮಲೆನಾಡಿನ ಸೆರಗಿನ ಶಿರಸಿ ಸೀಮೆಯೊಂದಿಗೆ ಅವಿನಾಭಾವ ಸಂಬಂಧ.

- Advertisement -
- Advertisement -

| ನಹುಷ |

`ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ’ ಎಂದು ಎದೆತುಂಬಿ ಪಂಪ ಮಹಾಕವಿ ಹಾಡಿದ್ದ ಐತಿಹಾಸಿಕ ಮಹತ್ವದ ಬನವಾಸಿಗೆ ಉತ್ತರ ಕನ್ನಡದೊಂದಿಗೆ, ಅದರಲ್ಲೂ ಮಲೆನಾಡಿನ ಸೆರಗಿನ ಶಿರಸಿ ಸೀಮೆಯೊಂದಿಗೆ ಅವಿನಾಭಾವ ಸಂಬಂಧ. ಶಿವಮೊಗ್ಗ ಜಿಲ್ಲೆಯ ಸೊರಬ-ಶಿಕಾರಿಪುರ ತಾಲ್ಲೂಕಿನ ಅಂಚಿನಲ್ಲಿರುವ ಕನ್ನಡದ ಈ ಮೊದಲ ರಾಜಧಾನಿ, ಯಡ್ಡಿ ಮುಖ್ಯಮಂತ್ರಿ ಆದಾಗೆಲ್ಲಾ ಕರುಳು ಸಂಬಂಧವೇ ಕಡಿದು ಹೋಗುವ ಆತಂಕಕ್ಕೆ ಬಿದ್ದು ಒದ್ದಾಡುತ್ತದೆ.

ಯಡ್ಡಿ ಈ ಹಿಂದೆ ಸಿಎಂ ಆಗಿದ್ದಾಗ ಬನವಾಸಿಯನ್ನು ಸೊರಬದ ಆನವಟ್ಟಿ ಹೋಬಳಿಗೆ ಸೇರಿಸುವ ಮಸಲತ್ತು ನಡೆದಿತ್ತು. ಆದರೆ ಯಡ್ಡಿ ಭಿನ್ನಮತಕ್ಕೆ ಬಲಿಯಾಗಿ ಅಧಿಕಾರ ಕಳಕೊಂಡು ಬಿಜೆಪಿ ಪಾಲಿಗೆ “ಕಾಫಿರ್” ಆಗಿಹೋಗಿದ್ದರು. ಹೀಗಾಗಿ ಬನವಾಸಿಯನ್ನು ಉತ್ತರ ಕನ್ನಡದಿಂದ ಹೊತ್ತೊಯ್ಯುವ ಯಡ್ಡಿ ಮತ್ತವರ ಮಗನೂ ಸಂಸದನೂ ಆಗಿರುವ ಬಸ್‍ಸ್ಟ್ಯಾಂಡ್ ರಾಘುನ ಪ್ಲಾನ್ ಫ್ಲಾಪ್ ಆಗಿತ್ತು. ಈಗ ಮತ್ತೆ ಶಿರಸಿಯ ಬನವಾಸಿ ಮೇಲೆ ಯಡ್ಡಿ ಕುಟುಂಬದ ಕಣ್ಣು ಬಿದ್ದಿದೆ. ಈ ರಹಸ್ಯ ಹುನ್ನಾರದ ಹೂರಣ ಹೊರಬರುತ್ತಲೇ ಬನವಾಸಿ ಭಾಗದ ಜನರು ಕೆರಳಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಅಷ್ಟಕ್ಕೂ ಈ ಅಪ್ಪ-ಮಗನಿಗೆ ಉತ್ತರ ಕನ್ನಡ ಸಂಸ್ಕøತಿ-ಸಂಸ್ಕಾರದ ಬನವಾಸಿ ಮತ್ತದರ ಸುತ್ತಲಿನ ಹಳ್ಳಿಗಳನ್ನು ಕಬಳಿಸುವ ಹಠವೇಕೆಂದು ಬಲ್ಲಿರಾ? ಶಿವಮೊಗ್ಗ ಜಿಲ್ಲೆಯನ್ನು ಒಡೆದು ಶಿಕಾರಿಪುರ ಜಿಲ್ಲೆ ರಚನೆ ಮಾಡಿ ರಾಜಕೀಯ ಫಾಯ್ದೆ ಹೊಡೆಯಲು ಯಡ್ಡಿ-ರಾಘು ಸ್ಕೆಚ್ ಹಾಕಿದ್ದಾರೆ. ಆದರೆ ಜಿಲ್ಲೆ ರಚನೆಗೆ ಬೇಕಾದ ಭೌಗೋಳಿಕ ಪ್ರದೇಶ ಮತ್ತು ಜನಸಂಖ್ಯೆಯ ಕೊರತೆಯಿದೆ. ಪಕ್ಕದ ಬನವಾಸಿ ಮತ್ತು ಅದರ ಆಚೀಚೆಯ ಹತ್ತು ಗ್ರಾಮ ಪಂಚಾಯತ್ ಏರಿಯಾ ಸೇರಿಸಿಕೊಂಡರೆ ಏಕ್‍ದಮ್ 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯೂ ಸಿಗುತ್ತದೆ! ಈ ದೂ(ದು)ರಾಲೋಚನೆಯಿಂದ ಬನವಾಸಿ ಸೀಮೆ ಆಪೋಷನಕ್ಕೆ ಯಡ್ಡಿ-ರಾಘು ಸರ್ಕಸ್ ನಡೆಸಿದ್ದಾರೆ.

ಯಡ್ಡಿ ಅಕ್ರಮ ಸರ್ಕಾರದ ಚಕ್ರವರ್ತಿಯಾಗುತ್ತಲೇ ಆತನ ತವರೂರು ಶಿಕಾರಿಪುರಕ್ಕೆ ಭರಪೂರ ಅನುದಾನ ಹರಿದುಬರುತ್ತಿದೆ. ಪಕ್ಕದ ಶಿಕಾರಿಪುರದ ಉದ್ಧಾರಕ್ಕೆ ಯಥೇಚ್ಛವಾಗಿ ಹಣ ಹರಿದು ಬರುತ್ತಿದ್ದರೆ ಉತ್ತರ ಕನ್ನಡಕ್ಕೆ ಅನ್ಯಾಯ-ಅತ್ಯಾಚಾರ ಆಗುತ್ತಿದೆ! ಅನುದಾನ ತರುವುದು ಸಾಯಲಿ, ಜಿಲ್ಲೆ ಬರಡಾಗದಂತೆ ತಡೆಯಬೇಕೆಂಬ ಕನಿಷ್ಟ ಕಾಳಜಿಯೂ ಉತ್ತರ ಕನ್ನಡದ ಹೇತ್ಲಾಂಡಿ ಶಾಸಕ-ಸಂಸದ-ಮಂತ್ರಿಗಳಿಗಿಲ್ಲ. ಲಾಗಾಯ್ತಿನಿಂದ ಉತ್ತರ ಕನ್ನಡದ ಪ್ರಗತಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಅಂಕೋಲಾ-ಹುಬ್ಬಳ್ಳಿ, ಹಾವೇರಿ-ಶಿರಸಿ ಮತ್ತು ತಾಳಗುಪ್ಪ-ಸಿದ್ಧಾಪುರ ರೈಲು ಮಾರ್ಗ ಹಲವು ವರ್ಷದಿಂದ ಬರೀ ಕನಸಾಗೇ ಕಾಡುತ್ತಿದೆ. ಉತ್ತರ ಕನ್ನಡಕ್ಕೆ ತೀರಾ ಹತ್ತಿರದಲ್ಲಿರುವ ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ರೈಲು ಟರ್ಮಿನಲನ್ನು ಯಡ್ಡಿ ಪರ್ವದಲ್ಲಿ ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಕಿತಾಪತಿ ನಡೆಯುತ್ತಿದೆ. ತಾಳಗುಪ್ಪ ಜಂಕ್ಷನ್ ಆಗಿದ್ದರೆ ಈ ರೈಲು ಮಾರ್ಗ ಸಿದ್ಧಾಪುರದವರೆಗೆ ವಿಸ್ತರಿಸಲು ಅನುಕೂಲವಾಗುತ್ತಿತ್ತು.

ಈಗ ಅದಕ್ಕೂ ಕಲ್ಲು ಹಾಕಲಾಗುತ್ತಿದೆ. ಜಂಕ್ಷನ್ ಸ್ಥಳಾಂತರಕ್ಕೆ ಸಾಕ್ಷಾತ್ ಸಿಎಂ ಸಾಹೇಬರೇ ಒಪ್ಪಿಗೆ ಕೊಟ್ಟಿದ್ದಾರೆ. ತಾಳಗುಪ್ಪ-ಸಿದ್ಧಾಪುರ ರೈಲು ಮಾರ್ಗಕ್ಕೆಂದು ಅಂದಿನ ರೈಲು ಮಂತ್ರಿ ಸುರೇಶ್ ಪ್ರಭು 320 ಕೋಟಿ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಈ ಹಣ ಎಲ್ಲಿ ಹೋಯಿತೆಂದು ಸಂಸದ ಅನಂತ್ಮಾಣಿಗೂ ಗೊತ್ತಾಗಿಲ್ಲ. ಉತ್ತರ ಕನ್ನಡದ ಅಭಿವೃದ್ಧಿಗಾಗೇ ಅವತಾರ ಎತ್ತಿದ್ದೇನೆಂದು ಒಣ ಘರ್ಜನೆ ಮಾಡುವ ಮಾಣಿ ಮೋದಿ ಮಂತ್ರಿಗಿರಿಯಿಂದ ತೆಗೆದುಹಾಕಿದ ಕ್ಷಣದಿಂದಲೇ ಬಿಲ ಸೇರಿಕೊಂಡಿದ್ದಾನೆ. ಬನವಾಸಿ ಅಪಹರಿಸುವ ಸುದ್ಧಿ ಕೇಳಿ ಜನರು ಬೀದಿಗಿಯಲು ಅಣಿಯಾದರೂ ಶಿರಸಿ ಶಾಸಕ ಕಂ ಸ್ಪೀಕರ್ ಕಾಗೇರಿಯಾಗಲಿ, ಬನವಾಸಿಯ ‘ಅನರ್ಹ’ ಶಾಸಕ ಶಿವರಾಮ ಹೆಬ್ಬಾರನಾಗಲಿ, ಶಿರಸಿಯಲ್ಲೇ ಐಷಾರಾಮಿ ಬಂಗಲೆ ಕಟ್ಟಿಕೊಂಡು ವಾಸಿಸುತ್ತಿರುವ ಸ್ವಯಂ ಘೋಷಿತ ದೇಶಭಕ್ತ ಅನಂತ್ಮಾಣಿಯಾಗಲಿ ತುಟಿಪಿಟಿಕ್ ಅಂದಿಲ್ಲ.

ಗುರುವಾರ 10ನೇ ತಾರೀಖಿನಂದು ಬನವಾಸಿ ಮತ್ತು ಸುತ್ತಲಿನ ಹಳ್ಳಿಗರು ಸಹಸ್ರಾರು ಸಂಖ್ಯೆಯಲ್ಲಿ ಮಧುಕೇಶ್ವರ ದೇವಾಲಯದ ಅಂಗಳದಲ್ಲಿ ಜಮೆಯಾಗಿ ಬನವಾಸಿ ಹೈಜಾಕ್ ಮಾಡದಂತೆ ಎಚ್ಚರಿಕೆಯ ರ್ಯಾಲಿ ನಡೆಸಿದ್ದಾರೆ. ಇದನ್ನು ಕಂಡು ಬೆಚ್ಚಿಬಿದ್ದಿರುವ ಅನರ್ಹ ಶಾಸಕ ಹೆಬ್ಬಾರ್ `ಬನವಾಸಿ ಶಿಕಾರಿಪುರಕ್ಕೆ ಸೇರಿಸುವ ಸುದ್ದಿ ಸುಳ್ಳೆಂದು’ ತಿಪ್ಪರಲಾಗ ಹೊಡೆದಿದ್ದಾನೆ. ಉಪಚುನಾವಣೆಯಲ್ಲಿ ಬನವಾಸಿ ಭಾನ್ಗಡಿ ತನಗೆ ದುಬಾರಿ ಆಗಬಾರದೆಂಬ ಭಯವೇ ಹೊರತು ಕ್ಷೇತ್ರದ ಬಗ್ಗೆ ಪ್ರಾಮಾಣಿಕ ಕಾಳಜಿಯೇನಿಲ್ಲ ಈ ರಾಜಕಾರಣಿಗೆ.

ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ವರ್ಷಗಳು ಉರುಳಿದರೂ ಹೆಬ್ಬಾರ್‍ನ ಅಯೋಗ್ಯತೆಯಿಂದಾಗಿ ಅರ್ಧಕಾಸಿನ ಪ್ರಯೋಜನವಾಗಿಲ್ಲ. ಬನವಾಸಿಯನ್ನು ತಾಲ್ಲೂಕು ಮಾಡಿಯೆಂದು ಜನ ಬೊಬ್ಬೆ ಹೊಡೆಯುತ್ತಿದ್ದರೂ ಶಾಸಕನಾಗಿದ್ದ ಹೆಬ್ಬಾರ್‍ಗೆ ಅಡ್ಡದಾರಿಯಲ್ಲಿ ಮಂತ್ರಿಯಾಗುವುದೇ ಮುಖ್ಯವಾಗಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...