Homeಸಿನಿಮಾಕ್ರೀಡೆಟೆನಿಸ್ ಪ್ರೇಮಿಗಳ ಹೃದಯ ಭಾರಗೊಳಿಸಿದ ಫೆಡರರ್ ವಿದಾಯ!

ಟೆನಿಸ್ ಪ್ರೇಮಿಗಳ ಹೃದಯ ಭಾರಗೊಳಿಸಿದ ಫೆಡರರ್ ವಿದಾಯ!

- Advertisement -
- Advertisement -

sa“Dear Roger, my friend and rival. I wish this day would have never come. It’s a sad day for me personally and for sports around the world”(ಪ್ರಿಯ ರೋಜರ್, ನನ್ನ ಗೆಳೆಯ ಮತ್ತು ಪ್ರಬಲ ಪ್ರತಿಸ್ಪರ್ಧಿ. ಈ ದಿನ ಬರಲೇಬಾರದಿತ್ತು. ವೈಯಕ್ತಿಕವಾಗಿ ಮತ್ತು ಜಾಗತಿಕ ಕ್ರೀಡೆಗೆ ಈ ದಿನ ಅತ್ಯಂತ ದುಃಖಭರಿತ ದಿನ).

ಟೆನಿಸ್ ಲೋಕದ ಜೀವಂತ ದಂತಕಥೆ ರೋಜರ್ ಫೆಡರರ್ ಟೆನಿಸ್ ಅಂಗಳಕ್ಕೆ ವಿದಾಯ ಘೋಷಿಸಿದ ಮರುಕ್ಷಣ ಮತ್ತೋರ್ವ ಸಮಕಾಲೀನ ದಿಗ್ಗಜ ರಫೇಲ್ ನಡಾಲ್ ಮಾಡಿದ್ದ ಈ ಒಂದು ಟ್ವೀಟ್ ಫೆಡರರ್ ಅಭಿಮಾನಿಗಳ ಆ ಕ್ಷಣದ ನೋವು ಮತ್ತು ದುಗುಡವನ್ನು ಪ್ರತಿಬಿಂಬಿಸುವಂತಿತ್ತು. ಏಕೆಂದರೆ ವಿಶ್ವದ ಎಲ್ಲ ಟೆನಿಸ್ ಪ್ರಿಯರು ಅಂದು ತಮ್ಮ ಮನಸ್ಸಿನಲ್ಲಿ ಹೇಳಿಕೊಂಡಿದ್ದ ಮಾತು ಇದೊಂದೆ, “ಈ ದಿನ ಬರಬಾರದಿತ್ತು!”

ಹೌದು ಈ ದಿನ ಬರಬಾರದಿತ್ತು. ಏಕೆಂದರೆ ಟೆನಿಸ್ ಅಂಗಳದಲ್ಲಿ ಫೆಡರರ್ ಮಾಡಿದ್ದ ಸಾಧನೆ ಮತ್ತು ಟೆನಿಸ್ ಅಂಗಳದ ಆಚೆಗೂ ಅನುಕರಣೆಯಾಗಬಲ್ಲ ಆತನ ವ್ಯಕ್ತಿತ್ವ ಕೋಟಿಕೋಟಿ ಸಂಖ್ಯೆಯ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿದ್ದ ಸಂಗತಿಗಳಾಗಿದ್ದವು. ಇದರಾಚೆಗೂ ಟೆನಿಸ್ ಅಷ್ಟೇನು ಪ್ರಸಿದ್ಧಿಯಲ್ಲದ, ಬರೀ ಕ್ರಿಕೆಟನ್ನಷ್ಟೇ ಕೊಂಡಾಡುವ ಭಾರತದಂತಹ ದೇಶಗಳಲ್ಲೂ ಅಪಾರ ಪ್ರಮಾಣದ ಪ್ರೇಕ್ಷಕರನ್ನು ಟೆನಿಸ್ ನೋಡಲೆಂದು ಟಿವಿ ಪರದೆಯ ಮುಂದೆ ಕೂರಿಸಿದ ಹಿರಿಮೆ ಖಚಿತವಾಗಿ ರೋಜರ್ ಫೆಡರರ್ ಅವರಿಗೇ ಸಲ್ಲುತ್ತದೆ. ರೋಜರ್ ಫೆಡರರ್ ಕಾಲವನ್ನು ಟೆನಿಸ್ ಲೋಕದ ಸುವರ್ಣ ಯುಗ ಎಂದು ಟೆನಿಸ್ ವಿಶ್ಲೇಷಕರು ಕೊಂಡಾಡುವುದು ಸಹ ಇದೇ ಕಾರಣಕ್ಕೆ.

ಗಾಡ್ ಆಫ್ ಗ್ರಾಸ್ ಸರ್ಫೇಸ್

1981 ಆಗಸ್ಟ್.8 ರಂದು ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ನಗರದಲ್ಲಿ ಹುಟ್ಟಿದ ಫೆಡರರ್‌ನ ತಂದೆ ಸ್ವಿಸ್, ತಾಯಿ ದಕ್ಷಿಣ ಆಫ್ರಿಕಾದವರು. ಫೆಡರರ್ ಹುಟ್ಟು ಕ್ರೀಡಾಪಟು. ಸ್ವಿಸ್ ಮತ್ತು ಆಫ್ರಿಕಾ ಪ್ರಜೆ. ಬ್ಯಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್ ಪಟುವಾದ ಫೆಡರರ್‌ಗೆ ಕೈ ಮತ್ತು ಕಣ್ಣುಗಳ ಉತ್ತಮ ಸಮನ್ವಯವಿತ್ತು. ಹಾಗಾಗಿ, ಟೆನಿಸ್ ಆತನ ಸಹಜ ಆಯ್ಕೆಯಾಗಿತ್ತು. ಆತ ಟೆನಿಸ್ ಅಂಗಳಕ್ಕೆ ಕಾಲಿಟ್ಟಾಗ ವಯಸ್ಸಿನ್ನೂ ಒಂಭತ್ತು. 1992-93ನೇ ವರ್ಷದಲ್ಲಿ ತನ್ನ ನಗರದ ಟೆನಿಸ್ ಕೋರ್ಟ್‌ಗಳಲ್ಲಿ ’ಬಾಲ್ ಬಾಯ್’ ಆಗಿದ್ದ ಆ ಪುಟಾಣಿ ಹುಡುಗ ಭವಿಷ್ಯದಲ್ಲಿ 20 ಗ್ರ್ಯಾಂಡ್ ಸ್ಲಾಮ್ ಜಯಿಸುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸುತ್ತಾನೆ, ಟೆನಿಸ್ ಪ್ರೇಮಿಗಳು ಮತ್ತು ಕ್ರೀಡಾ ವಿಶ್ಲೇಷಕರಿಂದ ಗಾಡ್ ಆಫ್ ಗ್ರಾಸ್ ಸರ್ಫೇಸ್ ಎಂಬ ಬಿರುದನ್ನೂ ಪಡೆಯುತ್ತಾನೆ ಎಂದು ಆಗ ಯಾರು ತಾನೆ ಊಹಿಸಿಯಾರು?

ರೋಜರ್ ಫೆಡರರ್‌ನ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಪೈಕಿ ಆತ ತನ್ನ ಮೊದಲ ಪ್ರಶಸ್ತಿಯನ್ನು ಜಯಿಸಿದ್ದೇ ವಿಂಬಲ್ಡನ್‌ನ ಹಸಿರು ಹುಲ್ಲುಹಾಸಿನ ಅಂಗಳದಲ್ಲಿ ಎಂಬುದು ವಿಶೇಷ. ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳ ಪೈಕಿ ಹುಲ್ಲು ಹಾಸು ಹೊಂದಿರುವ ಏಕೈಕ ಟೂರ್ನಿ ವಿಂಬಲ್ಡನ್ ಎಂಬುದು ವಿಶೇಷ.

ಹುಲ್ಲು ಹಾಸಿನ ಅಂಗಳದಲ್ಲಿ ಫೆಡರರ್‌ನನ್ನು ಸೋಲಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಂಗಳದಲ್ಲಿನ ಗಾಳಿಯ ವೇಗವನ್ನು ಖಚಿತವಾಗಿ ಗುರುತಿಸಿ ಫೆಡರರ್ ಹೊಡೆಯುವ ಸರ್ವ್ ಮತ್ತು ಬ್ಯಾಕ್‌ಹ್ಯಾಂಡ್ ರಿವರ್ಸ್‌ಗಳಿಗೆ ಎದುರಾಳಿಗಳು ಈವರೆಗೆ ಉತ್ತರ ಕಂಡುಕೊಂಡಿಲ್ಲ. ಆತನ ಹಗುರಾದ ಪಾದ ಚಲನೆ (footwork) ಮತ್ತು ಸುಲಲಿತ ಆಟವನ್ನು ನೋಡುವುದೇ ಒಂದು ಸೊಬಗು. ಇನ್ನೂ ಬೇಸ್ ಲೈನ್‌ನಲ್ಲಿ ಪಾಯಿಂಟ್ ಗಿಟ್ಟಿಸುವ ಆತನ ಡ್ರಾಪ್ ಶಾಟ್‌ಗಳ ಬಗ್ಗೆ ಟೆನಿಸ್ ಲೋಕದಲ್ಲಿ ದಂತಕಥೆಗಳೇ ಇವೆ. ವಿಂಬಲ್ಡನ್‌ನಲ್ಲಿ ಆತ ಗೆದ್ದ ಪ್ರಶಸ್ತಿಗಳೇ ಈ ಎಲ್ಲ ಹೊಗಳಿಕೆಗಳಿಗೂ ಸಾಕ್ಷಿ ನುಡಿಯುವಂತಿದೆ. ಏಕೆಂದರೆ ಫೆಡರರ್ ಗೆದ್ದ 20 ಗ್ರ್ಯಾಂಡ್ ಸ್ಲಾಮ್‌ಗಳ ಪೈಕಿ ಅತಿಹೆಚ್ಚು ಪ್ರಶಸ್ತಿಗಳನ್ನು ಬಂದದ್ದು ವಿಂಬಲ್ಡನ್‌ನಿಂದಲೇ. ಕಳೆದ 150 ವರ್ಷಗಳ ಇತಿಹಾಸದಲ್ಲಿ ವಿಂಬಲ್ಡನ್‌ನಲ್ಲಿ ಅತಿಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ದಾಖಲೆಯೂ ಫೆಡರರ್ ಹೆಸರಲ್ಲೇ ಇದೆ.

ಬ್ರಿಟನ್‌ನ ದಂತಕಥೆ ವಿಲಿಯಂ ರೆನ್ಷಾ ಒಟ್ಟಾರೆ 7 ಬಾರಿ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರೆ, ರೋಜರ್ ಫೆಡರರ್ 8 ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಇದೇ ಕಾರಣಕ್ಕೆ ಫೆಡರರ್‌ನನ್ನು ಗಾಡ್ ಆಫ್ ಗ್ರಾಸ್ ಸರ್ಫೇಸ್ ಎಂದು ಗುರುತಿಸಲಾಗುತ್ತದೆ.

ರೋಮಾಂಚನಗೊಳಿಸಿತ್ತು ಆ ಒಂದು ಸೋಲು

ಈ ಹೊತ್ತಿನಲ್ಲಿ ಎಲ್ಲರೂ ಫೆಡರರ್ ಗೆದ್ದ 20 ಗ್ರಾಂಡ್ ಸ್ಲಾಮ್‌ಗಳನ್ನು ನೆನಪಿಸಿಕೊಂಡರೆ, ಹಲವು ಟೆನಿಸ್ ಪ್ರಿಯರಲ್ಲಿ ಪದೇಪದೆ ನೆನಪಾಗೋದು ಫೆಡರರ್ ಸೋತ 2008ರ ವಿಂಬಲ್ಡನ್ ಫೈನಲ್. ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದ ಆ ಪಂದ್ಯವನ್ನು ಟೆನಿಸ್ ಲೋಕದ ಶ್ರೇಷ್ಠ ಪಂದ್ಯವೆಂದು ಗುರುತಿಸಲಾಗುತ್ತದೆ. ಸುಮಾರು ಐದು ಗಂಟೆಗಳ ಕಾಲ ನಡೆದ 5 ಸೆಟ್‌ಗಳ ಆ ಪಂದ್ಯದಲ್ಲಿ ರಫೇಲ್ ನಡಾಲ್ ಗೆದ್ದರೂ ಫೆಡರರ್ ಸೋಲಲಿಲ್ಲ! ಟೆನಿಸ್ ಕ್ರೀಡೆ ಗೆದ್ದ ದಿನವದು.

ಆ ಪಂದ್ಯದಲ್ಲಿ ಮೊದಲ ಎರಡು ಸೆಟ್‌ಗಳಲ್ಲಿ ಫೆಡರರ್ ವಿರುದ್ಧ 4-6, 4-6 ಅಂತರದಲ್ಲಿ ಸೋಲು ಕಂಡಿದ್ದ ರಫೇಲ್ ನಡಾಲ್ ಮುಂದಿನ ಮೂರೂ ಸೆಟ್‌ಗಳನ್ನು ಟೈ ಬ್ರೇಕ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಗೆದ್ದು ಬೀಗಿದ್ದರು. ಈ ಮೂಲಕ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಆ ಪಂದ್ಯದಲ್ಲಿ ಫೆಡರರ್ ಸೋಲುಂಡಿರಬಹುದು. ಆದರೆ, ಐದೂ ಸೆಟ್‌ಗಳಲ್ಲಿ ಆತ ತೋರಿದ ಹೋರಾಟದ ಕಾರಣಕ್ಕೆ ಆ ಪಂದ್ಯ ಟೆನಿಸ್ ಲೋಕದ ಅತ್ಯಂತ ಮಹತ್ವದ ಪಂದ್ಯಗಳಲ್ಲೊಂದು ಎಂಬ ಶ್ರೇಯಕ್ಕೆ ಪಾತ್ರವಾಗಿದೆ.

ಟೆನಿಸ್ ಅಂಗಳದಲ್ಲಿ ರಫೇಲ್ ನಡಾಲ್‌ನ ಬಿರುಸಿನ ಆಟ, ಫೆಡರರ್‌ನ ಸಮಚಿತ್ತತೆ, ಶಾಂತಭಾವ ಮತ್ತು ನೊವಾಕ್ ಜೊಕೊವಿಕ್‌ನ ಹಠ, ಛಲಕ್ಕೆ ಬಹುಶಃ ಮುಂದಿನ ಪೀಳಿಗೆಯವರು ಸಾಕ್ಷಿಯಾಗಲಾರರು. ಈ ಮೂವರನ್ನೂ ಏಕಕಾಲಕ್ಕೆ ನೋಡಿದ ಸೌಭಾಗ್ಯ ನಮ್ಮ ಪೀಳಿಗೆಯದು ಎಂಬುದೇ ಹಲವರಿಗೆ ಹೆಮ್ಮೆಯ ವಿಚಾರವಾಗಿರುವುದೂ ಸುಳ್ಳಲ್ಲ. ಏಕೆಂದರೆ ಕಳೆದ 20 ವರ್ಷದಲ್ಲಿ ಈ ಮೂವರು ಆಟಗಾರರು ಒಟ್ಟಾರೆಯಾಗಿ 62 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಸದ್ಯಕ್ಕಂತೂ ಯಾರೂ ಇವರ ಹತ್ತಿರವೂ ಸುಳಿಯಲು ಸಾಧ್ಯವಿಲ್ಲದ ಕಾರಣ ಈ ಮೂವರೂ ಆಟಗಾರರ ದಾಖಲೆ ಇನ್ನೂ ದಶಕಗಳ ಕಾಲ ಹಾಗೆಯೇ ಉಳಿಯಲಿದೆ.

ಫೆಡರರ್ ಎಂದರೆ ಫೀನಿಕ್ಸ್!

ರೋಜರ್ ಫೆಡರರ್‌ನ ಹೋರಾಟದ ಮನೋಭಾವವನ್ನು ಸೂಚಿಸುವ ಹಲವು ಉದಾಹರಣೆಗಳಿವೆ. 2003ರಲ್ಲಿ ವಿಂಬಲ್ಡನ್ ಗೆಲುವಿನೊಂದಿಗೆ ತನ್ನ ಮೊದಲ ಗ್ರ್ಯಾಂಡ್ ಗೆಲುವಿನ ಓಟಕ್ಕೆ ಮುನ್ನುಡಿ ಬರೆದ ಫೆಡರರ್ 2012ರ ವೇಳೆಗೆ ಬರೋಬ್ಬರಿ 17 ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದ. ಕೇವಲ 31ನೇ ವಯಸ್ಸಿನಲ್ಲೇ ತನ್ನ ಆರಾಧ್ಯ ದೈವ ಪೀಟ್ ಸಾಂಪ್ರಸ್‌ನನ್ನೂ ಆತ ಹಿಂದಿಕ್ಕಿದ್ದ. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಇಲ್ಲಿಂದ ಎಲ್ಲವೂ ಬದಲಾಗತೊಡಗಿತ್ತು. ಟೆನಿಸ್ ಲೋಕದ ಅಗ್ರ ಶ್ರೇಯಾಂಕಿತ ಆಟಗಾರ ಎನಿಸಿಕೊಂಡಿದ್ದರೂ 2012ರಿಂದ ಸತತ ಐದು ವರ್ಷ ಫೆಡರರ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯ ಬರ ಎದುರಿಸಿದ್ದರು.

ಈ ವೇಳೆ ಎಂದಿನಂತೆ ಕ್ರೀಡಾ ವಿಮರ್ಶಕರು ಮತ್ತು ಪತ್ರಕರ್ತರು ಆತನನ್ನು ಯಾವಾಗ ನಿವೃತ್ತಿ, ಇನ್ನು ನಿಮ್ಮ ಆಟ ಮುಗಿಯಿತು ಎಂದು ಕಿಚಾಯಿಸತೊಡಗಿದ್ದರು. ಈ ನಿರಾಸೆಯ ಮಧ್ಯೆ ಒಂದು ಶಸ್ತ್ರಚಿಕಿತ್ಸೆಗೂ ಆತ ಒಳಗಾಗಿದ್ದ. ಪರಿಣಾಮ ಸುಮಾರು 6 ತಿಂಗಳು ಮೈದಾನದಿಂದ ಹೊರಗಿರಬೇಕಾಯಿತು. ನಂತರ ಚೇತರಿಸಿಕೊಂಡು ಆಸ್ಟ್ರೇಲಿಯಾ ಓಪನ್‌ಗೆ ಪ್ರವೇಶಿಸಿದ್ದ ಫೆಡರರ್ 2017 ಮತ್ತು 2018ರಲ್ಲಿ ಸತತ ಎರಡು ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ಬೀಗಿದ್ದ. ಅದೂ ತನ್ನ 36ನೇ ವಯಸ್ಸಿನಲ್ಲಿ!

ಫೆಡರರದ ದಾಖಲೆಗಳ ಇನ್ನೊಂದು ವಿಶೇಷವೆಂದರೆ, ಇಲ್ಲಿಯವರೆಗೂ ಆರ್ಥರ್ ಆಶ್ ಎಂಬ ಮತ್ತೊಬ್ಬ ಟಿನಿಸ್ ಪ್ರತಿಭೆ, 1973ರಲ್ಲಿ ಎದುರಾಳಿಗಳಿಗೆ ಒಂದೂ ಸೆಟ್ ಬಿಟ್ಟುಕೊಡದೆ ಗೆದ್ದ ನಂತರ ಫೆಡರರ್ 36ನೇ ವಯಸ್ಸಿನಲ್ಲಿ ಮತ್ತೆ ಅದೇ ಸಾಧನೆಯನ್ನು ಪುನರಾವರ್ತಿಸಿದ್ದರು.

24 ವರ್ಷಗಳ ವೃತ್ತಿಜೀವನದಲ್ಲಿ 1500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಫೆಡರರ್, ತನ್ನ ಕೇವಲ 21ನೇ ವಯಸ್ಸಿನಲ್ಲೇ 2003ರಲ್ಲಿ ನಡೆದ ವಿಂಬಲ್ಡನ್‌ನಲ್ಲಿ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದು, ಈಗ 41ನೇ ವಯಸ್ಸಿನ ಅಂತ್ಯಕ್ಕೆ ಒಟ್ಟು 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಅವರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ. ಕಳೆದ ಸುಮಾರು ಮೂರು ವರ್ಷಗಳಿಂದ ಗಾಯದಿಂದ ಬಳಲುತ್ತಿರುವ ಫೆಡರರ್, ಕೊನೆಯ ಬಾರಿಗೆ 2021ರ ಫ್ರೆಂಚ್ ಓಪನ್‌ನಲ್ಲಿ ಆಡಿದ್ದರು. ಅಲ್ಲೂ ಕೂಡ ಗಾಯದ ಸಮಸ್ಯೆಗೆ ತುತ್ತಾಗಿ ಮೂರನೇ ಸುತ್ತನ್ನು ಗೆದ್ದು, ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಂದಿನಿಂದ, ನಿರಂತರವಾಗಿ ಕೋರ್ಟ್‌ಗೆ ಮರಳಲು ಪ್ರಯತ್ನಿಸುತ್ತಿದ್ದರಾದರೂ ಈ ಪ್ರಯತ್ನದಲ್ಲಿ ರೋಜರ್ ಯಶಸ್ವಿಯಾಗಲಿಲ್ಲ.

ಫೆಡರರ್ 2018ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ಕೊನೆಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದರ ನಂತರ ಅವರು 2019ರ ವಿಂಬಲ್ಡನ್‌ನ ಫೈನಲ್ ತಲುಪಿದರಾದರೂ, ಅಲ್ಲಿ ನೊವಾಕ್ ಜೊಕೊವಿಕ್ ಎದುರಿನ ರೋಚಕ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು.

ಟೆನಿಸ್ ಬದುಕಿಗೆ ಫೆಡರರ್ ವಿದಾಯ!

ಫೆಡರರ್ ಅವರು ತಮ್ಮ ಅಭಿಮಾನಿಗಳಿಗೆ ವೀಡಿಯೊ ಮತ್ತು ನಾಲ್ಕು ಪುಟಗಳ ಭಾವನಾತ್ಮಕ ಹೇಳಿಕೆಯೊಂದಿಗೆ ನಿವೃತ್ತಿ ಘೋಷಿಸಿದ್ದಾರೆ. ನಿರಂತರ ಗಾಯ, ಫಿಟ್ನೆಸ್ ಮತ್ತು ವಯಸ್ಸು ತನ್ನ ಈ ನಿರ್ಧಾರದ ಹಿಂದಿನ ಕಾರಣ ಎಂಬುದನ್ನು ರೋಜರ್ ಉಲ್ಲೇಖಿಸಿದ್ದಾರೆ. “ನನಗೆ ಈಗ 41 ವರ್ಷ ವಯಸ್ಸಾಗಿದ್ದು, ನಾನು 24 ವರ್ಷಗಳ ವೃತ್ತಿಜೀವನದಲ್ಲಿ 1500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್ ಆಟವನ್ನು ನಾನು ಯಾವಾಗಲೂ ನನ್ನ ನಿರೀಕ್ಷೆಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಈಗ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಿದೆ ಎಂದು ಒಪ್ಪಿಕೊಳ್ಳಬೇಕು” ಎಂದು ಫೆಡರರ್ ಹೇಳಿಕೊಂಡಿದ್ದಾರೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.


ಇದನ್ನೂ ಓದಿ: ಎರಡು ದಶಕಗಳ ಯಶಸ್ವಿ ಓಟಕ್ಕೆ ಪೂರ್ಣ ವಿರಾಮ ಇಟ್ಟ ಸೆರೆನಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...