Homeಸಿನಿಮಾಕ್ರೀಡೆಟೆನಿಸ್ ಪ್ರೇಮಿಗಳ ಹೃದಯ ಭಾರಗೊಳಿಸಿದ ಫೆಡರರ್ ವಿದಾಯ!

ಟೆನಿಸ್ ಪ್ರೇಮಿಗಳ ಹೃದಯ ಭಾರಗೊಳಿಸಿದ ಫೆಡರರ್ ವಿದಾಯ!

- Advertisement -
- Advertisement -

sa“Dear Roger, my friend and rival. I wish this day would have never come. It’s a sad day for me personally and for sports around the world”(ಪ್ರಿಯ ರೋಜರ್, ನನ್ನ ಗೆಳೆಯ ಮತ್ತು ಪ್ರಬಲ ಪ್ರತಿಸ್ಪರ್ಧಿ. ಈ ದಿನ ಬರಲೇಬಾರದಿತ್ತು. ವೈಯಕ್ತಿಕವಾಗಿ ಮತ್ತು ಜಾಗತಿಕ ಕ್ರೀಡೆಗೆ ಈ ದಿನ ಅತ್ಯಂತ ದುಃಖಭರಿತ ದಿನ).

ಟೆನಿಸ್ ಲೋಕದ ಜೀವಂತ ದಂತಕಥೆ ರೋಜರ್ ಫೆಡರರ್ ಟೆನಿಸ್ ಅಂಗಳಕ್ಕೆ ವಿದಾಯ ಘೋಷಿಸಿದ ಮರುಕ್ಷಣ ಮತ್ತೋರ್ವ ಸಮಕಾಲೀನ ದಿಗ್ಗಜ ರಫೇಲ್ ನಡಾಲ್ ಮಾಡಿದ್ದ ಈ ಒಂದು ಟ್ವೀಟ್ ಫೆಡರರ್ ಅಭಿಮಾನಿಗಳ ಆ ಕ್ಷಣದ ನೋವು ಮತ್ತು ದುಗುಡವನ್ನು ಪ್ರತಿಬಿಂಬಿಸುವಂತಿತ್ತು. ಏಕೆಂದರೆ ವಿಶ್ವದ ಎಲ್ಲ ಟೆನಿಸ್ ಪ್ರಿಯರು ಅಂದು ತಮ್ಮ ಮನಸ್ಸಿನಲ್ಲಿ ಹೇಳಿಕೊಂಡಿದ್ದ ಮಾತು ಇದೊಂದೆ, “ಈ ದಿನ ಬರಬಾರದಿತ್ತು!”

ಹೌದು ಈ ದಿನ ಬರಬಾರದಿತ್ತು. ಏಕೆಂದರೆ ಟೆನಿಸ್ ಅಂಗಳದಲ್ಲಿ ಫೆಡರರ್ ಮಾಡಿದ್ದ ಸಾಧನೆ ಮತ್ತು ಟೆನಿಸ್ ಅಂಗಳದ ಆಚೆಗೂ ಅನುಕರಣೆಯಾಗಬಲ್ಲ ಆತನ ವ್ಯಕ್ತಿತ್ವ ಕೋಟಿಕೋಟಿ ಸಂಖ್ಯೆಯ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿದ್ದ ಸಂಗತಿಗಳಾಗಿದ್ದವು. ಇದರಾಚೆಗೂ ಟೆನಿಸ್ ಅಷ್ಟೇನು ಪ್ರಸಿದ್ಧಿಯಲ್ಲದ, ಬರೀ ಕ್ರಿಕೆಟನ್ನಷ್ಟೇ ಕೊಂಡಾಡುವ ಭಾರತದಂತಹ ದೇಶಗಳಲ್ಲೂ ಅಪಾರ ಪ್ರಮಾಣದ ಪ್ರೇಕ್ಷಕರನ್ನು ಟೆನಿಸ್ ನೋಡಲೆಂದು ಟಿವಿ ಪರದೆಯ ಮುಂದೆ ಕೂರಿಸಿದ ಹಿರಿಮೆ ಖಚಿತವಾಗಿ ರೋಜರ್ ಫೆಡರರ್ ಅವರಿಗೇ ಸಲ್ಲುತ್ತದೆ. ರೋಜರ್ ಫೆಡರರ್ ಕಾಲವನ್ನು ಟೆನಿಸ್ ಲೋಕದ ಸುವರ್ಣ ಯುಗ ಎಂದು ಟೆನಿಸ್ ವಿಶ್ಲೇಷಕರು ಕೊಂಡಾಡುವುದು ಸಹ ಇದೇ ಕಾರಣಕ್ಕೆ.

ಗಾಡ್ ಆಫ್ ಗ್ರಾಸ್ ಸರ್ಫೇಸ್

1981 ಆಗಸ್ಟ್.8 ರಂದು ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ನಗರದಲ್ಲಿ ಹುಟ್ಟಿದ ಫೆಡರರ್‌ನ ತಂದೆ ಸ್ವಿಸ್, ತಾಯಿ ದಕ್ಷಿಣ ಆಫ್ರಿಕಾದವರು. ಫೆಡರರ್ ಹುಟ್ಟು ಕ್ರೀಡಾಪಟು. ಸ್ವಿಸ್ ಮತ್ತು ಆಫ್ರಿಕಾ ಪ್ರಜೆ. ಬ್ಯಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್ ಪಟುವಾದ ಫೆಡರರ್‌ಗೆ ಕೈ ಮತ್ತು ಕಣ್ಣುಗಳ ಉತ್ತಮ ಸಮನ್ವಯವಿತ್ತು. ಹಾಗಾಗಿ, ಟೆನಿಸ್ ಆತನ ಸಹಜ ಆಯ್ಕೆಯಾಗಿತ್ತು. ಆತ ಟೆನಿಸ್ ಅಂಗಳಕ್ಕೆ ಕಾಲಿಟ್ಟಾಗ ವಯಸ್ಸಿನ್ನೂ ಒಂಭತ್ತು. 1992-93ನೇ ವರ್ಷದಲ್ಲಿ ತನ್ನ ನಗರದ ಟೆನಿಸ್ ಕೋರ್ಟ್‌ಗಳಲ್ಲಿ ’ಬಾಲ್ ಬಾಯ್’ ಆಗಿದ್ದ ಆ ಪುಟಾಣಿ ಹುಡುಗ ಭವಿಷ್ಯದಲ್ಲಿ 20 ಗ್ರ್ಯಾಂಡ್ ಸ್ಲಾಮ್ ಜಯಿಸುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸುತ್ತಾನೆ, ಟೆನಿಸ್ ಪ್ರೇಮಿಗಳು ಮತ್ತು ಕ್ರೀಡಾ ವಿಶ್ಲೇಷಕರಿಂದ ಗಾಡ್ ಆಫ್ ಗ್ರಾಸ್ ಸರ್ಫೇಸ್ ಎಂಬ ಬಿರುದನ್ನೂ ಪಡೆಯುತ್ತಾನೆ ಎಂದು ಆಗ ಯಾರು ತಾನೆ ಊಹಿಸಿಯಾರು?

ರೋಜರ್ ಫೆಡರರ್‌ನ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಪೈಕಿ ಆತ ತನ್ನ ಮೊದಲ ಪ್ರಶಸ್ತಿಯನ್ನು ಜಯಿಸಿದ್ದೇ ವಿಂಬಲ್ಡನ್‌ನ ಹಸಿರು ಹುಲ್ಲುಹಾಸಿನ ಅಂಗಳದಲ್ಲಿ ಎಂಬುದು ವಿಶೇಷ. ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳ ಪೈಕಿ ಹುಲ್ಲು ಹಾಸು ಹೊಂದಿರುವ ಏಕೈಕ ಟೂರ್ನಿ ವಿಂಬಲ್ಡನ್ ಎಂಬುದು ವಿಶೇಷ.

ಹುಲ್ಲು ಹಾಸಿನ ಅಂಗಳದಲ್ಲಿ ಫೆಡರರ್‌ನನ್ನು ಸೋಲಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಂಗಳದಲ್ಲಿನ ಗಾಳಿಯ ವೇಗವನ್ನು ಖಚಿತವಾಗಿ ಗುರುತಿಸಿ ಫೆಡರರ್ ಹೊಡೆಯುವ ಸರ್ವ್ ಮತ್ತು ಬ್ಯಾಕ್‌ಹ್ಯಾಂಡ್ ರಿವರ್ಸ್‌ಗಳಿಗೆ ಎದುರಾಳಿಗಳು ಈವರೆಗೆ ಉತ್ತರ ಕಂಡುಕೊಂಡಿಲ್ಲ. ಆತನ ಹಗುರಾದ ಪಾದ ಚಲನೆ (footwork) ಮತ್ತು ಸುಲಲಿತ ಆಟವನ್ನು ನೋಡುವುದೇ ಒಂದು ಸೊಬಗು. ಇನ್ನೂ ಬೇಸ್ ಲೈನ್‌ನಲ್ಲಿ ಪಾಯಿಂಟ್ ಗಿಟ್ಟಿಸುವ ಆತನ ಡ್ರಾಪ್ ಶಾಟ್‌ಗಳ ಬಗ್ಗೆ ಟೆನಿಸ್ ಲೋಕದಲ್ಲಿ ದಂತಕಥೆಗಳೇ ಇವೆ. ವಿಂಬಲ್ಡನ್‌ನಲ್ಲಿ ಆತ ಗೆದ್ದ ಪ್ರಶಸ್ತಿಗಳೇ ಈ ಎಲ್ಲ ಹೊಗಳಿಕೆಗಳಿಗೂ ಸಾಕ್ಷಿ ನುಡಿಯುವಂತಿದೆ. ಏಕೆಂದರೆ ಫೆಡರರ್ ಗೆದ್ದ 20 ಗ್ರ್ಯಾಂಡ್ ಸ್ಲಾಮ್‌ಗಳ ಪೈಕಿ ಅತಿಹೆಚ್ಚು ಪ್ರಶಸ್ತಿಗಳನ್ನು ಬಂದದ್ದು ವಿಂಬಲ್ಡನ್‌ನಿಂದಲೇ. ಕಳೆದ 150 ವರ್ಷಗಳ ಇತಿಹಾಸದಲ್ಲಿ ವಿಂಬಲ್ಡನ್‌ನಲ್ಲಿ ಅತಿಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ದಾಖಲೆಯೂ ಫೆಡರರ್ ಹೆಸರಲ್ಲೇ ಇದೆ.

ಬ್ರಿಟನ್‌ನ ದಂತಕಥೆ ವಿಲಿಯಂ ರೆನ್ಷಾ ಒಟ್ಟಾರೆ 7 ಬಾರಿ ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರೆ, ರೋಜರ್ ಫೆಡರರ್ 8 ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಇದೇ ಕಾರಣಕ್ಕೆ ಫೆಡರರ್‌ನನ್ನು ಗಾಡ್ ಆಫ್ ಗ್ರಾಸ್ ಸರ್ಫೇಸ್ ಎಂದು ಗುರುತಿಸಲಾಗುತ್ತದೆ.

ರೋಮಾಂಚನಗೊಳಿಸಿತ್ತು ಆ ಒಂದು ಸೋಲು

ಈ ಹೊತ್ತಿನಲ್ಲಿ ಎಲ್ಲರೂ ಫೆಡರರ್ ಗೆದ್ದ 20 ಗ್ರಾಂಡ್ ಸ್ಲಾಮ್‌ಗಳನ್ನು ನೆನಪಿಸಿಕೊಂಡರೆ, ಹಲವು ಟೆನಿಸ್ ಪ್ರಿಯರಲ್ಲಿ ಪದೇಪದೆ ನೆನಪಾಗೋದು ಫೆಡರರ್ ಸೋತ 2008ರ ವಿಂಬಲ್ಡನ್ ಫೈನಲ್. ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದ ಆ ಪಂದ್ಯವನ್ನು ಟೆನಿಸ್ ಲೋಕದ ಶ್ರೇಷ್ಠ ಪಂದ್ಯವೆಂದು ಗುರುತಿಸಲಾಗುತ್ತದೆ. ಸುಮಾರು ಐದು ಗಂಟೆಗಳ ಕಾಲ ನಡೆದ 5 ಸೆಟ್‌ಗಳ ಆ ಪಂದ್ಯದಲ್ಲಿ ರಫೇಲ್ ನಡಾಲ್ ಗೆದ್ದರೂ ಫೆಡರರ್ ಸೋಲಲಿಲ್ಲ! ಟೆನಿಸ್ ಕ್ರೀಡೆ ಗೆದ್ದ ದಿನವದು.

ಆ ಪಂದ್ಯದಲ್ಲಿ ಮೊದಲ ಎರಡು ಸೆಟ್‌ಗಳಲ್ಲಿ ಫೆಡರರ್ ವಿರುದ್ಧ 4-6, 4-6 ಅಂತರದಲ್ಲಿ ಸೋಲು ಕಂಡಿದ್ದ ರಫೇಲ್ ನಡಾಲ್ ಮುಂದಿನ ಮೂರೂ ಸೆಟ್‌ಗಳನ್ನು ಟೈ ಬ್ರೇಕ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಗೆದ್ದು ಬೀಗಿದ್ದರು. ಈ ಮೂಲಕ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಆ ಪಂದ್ಯದಲ್ಲಿ ಫೆಡರರ್ ಸೋಲುಂಡಿರಬಹುದು. ಆದರೆ, ಐದೂ ಸೆಟ್‌ಗಳಲ್ಲಿ ಆತ ತೋರಿದ ಹೋರಾಟದ ಕಾರಣಕ್ಕೆ ಆ ಪಂದ್ಯ ಟೆನಿಸ್ ಲೋಕದ ಅತ್ಯಂತ ಮಹತ್ವದ ಪಂದ್ಯಗಳಲ್ಲೊಂದು ಎಂಬ ಶ್ರೇಯಕ್ಕೆ ಪಾತ್ರವಾಗಿದೆ.

ಟೆನಿಸ್ ಅಂಗಳದಲ್ಲಿ ರಫೇಲ್ ನಡಾಲ್‌ನ ಬಿರುಸಿನ ಆಟ, ಫೆಡರರ್‌ನ ಸಮಚಿತ್ತತೆ, ಶಾಂತಭಾವ ಮತ್ತು ನೊವಾಕ್ ಜೊಕೊವಿಕ್‌ನ ಹಠ, ಛಲಕ್ಕೆ ಬಹುಶಃ ಮುಂದಿನ ಪೀಳಿಗೆಯವರು ಸಾಕ್ಷಿಯಾಗಲಾರರು. ಈ ಮೂವರನ್ನೂ ಏಕಕಾಲಕ್ಕೆ ನೋಡಿದ ಸೌಭಾಗ್ಯ ನಮ್ಮ ಪೀಳಿಗೆಯದು ಎಂಬುದೇ ಹಲವರಿಗೆ ಹೆಮ್ಮೆಯ ವಿಚಾರವಾಗಿರುವುದೂ ಸುಳ್ಳಲ್ಲ. ಏಕೆಂದರೆ ಕಳೆದ 20 ವರ್ಷದಲ್ಲಿ ಈ ಮೂವರು ಆಟಗಾರರು ಒಟ್ಟಾರೆಯಾಗಿ 62 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಸದ್ಯಕ್ಕಂತೂ ಯಾರೂ ಇವರ ಹತ್ತಿರವೂ ಸುಳಿಯಲು ಸಾಧ್ಯವಿಲ್ಲದ ಕಾರಣ ಈ ಮೂವರೂ ಆಟಗಾರರ ದಾಖಲೆ ಇನ್ನೂ ದಶಕಗಳ ಕಾಲ ಹಾಗೆಯೇ ಉಳಿಯಲಿದೆ.

ಫೆಡರರ್ ಎಂದರೆ ಫೀನಿಕ್ಸ್!

ರೋಜರ್ ಫೆಡರರ್‌ನ ಹೋರಾಟದ ಮನೋಭಾವವನ್ನು ಸೂಚಿಸುವ ಹಲವು ಉದಾಹರಣೆಗಳಿವೆ. 2003ರಲ್ಲಿ ವಿಂಬಲ್ಡನ್ ಗೆಲುವಿನೊಂದಿಗೆ ತನ್ನ ಮೊದಲ ಗ್ರ್ಯಾಂಡ್ ಗೆಲುವಿನ ಓಟಕ್ಕೆ ಮುನ್ನುಡಿ ಬರೆದ ಫೆಡರರ್ 2012ರ ವೇಳೆಗೆ ಬರೋಬ್ಬರಿ 17 ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿದ್ದ. ಕೇವಲ 31ನೇ ವಯಸ್ಸಿನಲ್ಲೇ ತನ್ನ ಆರಾಧ್ಯ ದೈವ ಪೀಟ್ ಸಾಂಪ್ರಸ್‌ನನ್ನೂ ಆತ ಹಿಂದಿಕ್ಕಿದ್ದ. ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಇಲ್ಲಿಂದ ಎಲ್ಲವೂ ಬದಲಾಗತೊಡಗಿತ್ತು. ಟೆನಿಸ್ ಲೋಕದ ಅಗ್ರ ಶ್ರೇಯಾಂಕಿತ ಆಟಗಾರ ಎನಿಸಿಕೊಂಡಿದ್ದರೂ 2012ರಿಂದ ಸತತ ಐದು ವರ್ಷ ಫೆಡರರ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯ ಬರ ಎದುರಿಸಿದ್ದರು.

ಈ ವೇಳೆ ಎಂದಿನಂತೆ ಕ್ರೀಡಾ ವಿಮರ್ಶಕರು ಮತ್ತು ಪತ್ರಕರ್ತರು ಆತನನ್ನು ಯಾವಾಗ ನಿವೃತ್ತಿ, ಇನ್ನು ನಿಮ್ಮ ಆಟ ಮುಗಿಯಿತು ಎಂದು ಕಿಚಾಯಿಸತೊಡಗಿದ್ದರು. ಈ ನಿರಾಸೆಯ ಮಧ್ಯೆ ಒಂದು ಶಸ್ತ್ರಚಿಕಿತ್ಸೆಗೂ ಆತ ಒಳಗಾಗಿದ್ದ. ಪರಿಣಾಮ ಸುಮಾರು 6 ತಿಂಗಳು ಮೈದಾನದಿಂದ ಹೊರಗಿರಬೇಕಾಯಿತು. ನಂತರ ಚೇತರಿಸಿಕೊಂಡು ಆಸ್ಟ್ರೇಲಿಯಾ ಓಪನ್‌ಗೆ ಪ್ರವೇಶಿಸಿದ್ದ ಫೆಡರರ್ 2017 ಮತ್ತು 2018ರಲ್ಲಿ ಸತತ ಎರಡು ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಗೆದ್ದು ಬೀಗಿದ್ದ. ಅದೂ ತನ್ನ 36ನೇ ವಯಸ್ಸಿನಲ್ಲಿ!

ಫೆಡರರದ ದಾಖಲೆಗಳ ಇನ್ನೊಂದು ವಿಶೇಷವೆಂದರೆ, ಇಲ್ಲಿಯವರೆಗೂ ಆರ್ಥರ್ ಆಶ್ ಎಂಬ ಮತ್ತೊಬ್ಬ ಟಿನಿಸ್ ಪ್ರತಿಭೆ, 1973ರಲ್ಲಿ ಎದುರಾಳಿಗಳಿಗೆ ಒಂದೂ ಸೆಟ್ ಬಿಟ್ಟುಕೊಡದೆ ಗೆದ್ದ ನಂತರ ಫೆಡರರ್ 36ನೇ ವಯಸ್ಸಿನಲ್ಲಿ ಮತ್ತೆ ಅದೇ ಸಾಧನೆಯನ್ನು ಪುನರಾವರ್ತಿಸಿದ್ದರು.

24 ವರ್ಷಗಳ ವೃತ್ತಿಜೀವನದಲ್ಲಿ 1500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಫೆಡರರ್, ತನ್ನ ಕೇವಲ 21ನೇ ವಯಸ್ಸಿನಲ್ಲೇ 2003ರಲ್ಲಿ ನಡೆದ ವಿಂಬಲ್ಡನ್‌ನಲ್ಲಿ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದು, ಈಗ 41ನೇ ವಯಸ್ಸಿನ ಅಂತ್ಯಕ್ಕೆ ಒಟ್ಟು 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಅವರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ. ಕಳೆದ ಸುಮಾರು ಮೂರು ವರ್ಷಗಳಿಂದ ಗಾಯದಿಂದ ಬಳಲುತ್ತಿರುವ ಫೆಡರರ್, ಕೊನೆಯ ಬಾರಿಗೆ 2021ರ ಫ್ರೆಂಚ್ ಓಪನ್‌ನಲ್ಲಿ ಆಡಿದ್ದರು. ಅಲ್ಲೂ ಕೂಡ ಗಾಯದ ಸಮಸ್ಯೆಗೆ ತುತ್ತಾಗಿ ಮೂರನೇ ಸುತ್ತನ್ನು ಗೆದ್ದು, ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಂದಿನಿಂದ, ನಿರಂತರವಾಗಿ ಕೋರ್ಟ್‌ಗೆ ಮರಳಲು ಪ್ರಯತ್ನಿಸುತ್ತಿದ್ದರಾದರೂ ಈ ಪ್ರಯತ್ನದಲ್ಲಿ ರೋಜರ್ ಯಶಸ್ವಿಯಾಗಲಿಲ್ಲ.

ಫೆಡರರ್ 2018ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ಕೊನೆಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದರ ನಂತರ ಅವರು 2019ರ ವಿಂಬಲ್ಡನ್‌ನ ಫೈನಲ್ ತಲುಪಿದರಾದರೂ, ಅಲ್ಲಿ ನೊವಾಕ್ ಜೊಕೊವಿಕ್ ಎದುರಿನ ರೋಚಕ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು.

ಟೆನಿಸ್ ಬದುಕಿಗೆ ಫೆಡರರ್ ವಿದಾಯ!

ಫೆಡರರ್ ಅವರು ತಮ್ಮ ಅಭಿಮಾನಿಗಳಿಗೆ ವೀಡಿಯೊ ಮತ್ತು ನಾಲ್ಕು ಪುಟಗಳ ಭಾವನಾತ್ಮಕ ಹೇಳಿಕೆಯೊಂದಿಗೆ ನಿವೃತ್ತಿ ಘೋಷಿಸಿದ್ದಾರೆ. ನಿರಂತರ ಗಾಯ, ಫಿಟ್ನೆಸ್ ಮತ್ತು ವಯಸ್ಸು ತನ್ನ ಈ ನಿರ್ಧಾರದ ಹಿಂದಿನ ಕಾರಣ ಎಂಬುದನ್ನು ರೋಜರ್ ಉಲ್ಲೇಖಿಸಿದ್ದಾರೆ. “ನನಗೆ ಈಗ 41 ವರ್ಷ ವಯಸ್ಸಾಗಿದ್ದು, ನಾನು 24 ವರ್ಷಗಳ ವೃತ್ತಿಜೀವನದಲ್ಲಿ 1500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್ ಆಟವನ್ನು ನಾನು ಯಾವಾಗಲೂ ನನ್ನ ನಿರೀಕ್ಷೆಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಈಗ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಿದೆ ಎಂದು ಒಪ್ಪಿಕೊಳ್ಳಬೇಕು” ಎಂದು ಫೆಡರರ್ ಹೇಳಿಕೊಂಡಿದ್ದಾರೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.


ಇದನ್ನೂ ಓದಿ: ಎರಡು ದಶಕಗಳ ಯಶಸ್ವಿ ಓಟಕ್ಕೆ ಪೂರ್ಣ ವಿರಾಮ ಇಟ್ಟ ಸೆರೆನಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...