Homeಅಂಕಣಗಳುಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ

ಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ

- Advertisement -
- Advertisement -

ಗೌರಿ ಅವರಿಗೆ ಲಂಕೇಶ್ ಬರೆದಿದ್ದ ನಾಲ್ಕು ಪತ್ರಗಳು

1) 19-10-1993
ಪ್ರೀತಿಯ ಗೌರು,

ನಿನ್ನ ಪತ್ರ. Sorry. ಕಳೆದ ಮೂರು ದಿನಗಳಿಂದ ಉತ್ತರ ಬರೆಯಲು ಸಮಯ ಸಿಕ್ಕಿರಲಿಲ್ಲ.

ಆ ಯುರೋಪ್‍ನ ದೇಶಗಳು ಎಷ್ಟು ಸಜ್ಜಾಗಿ ವ್ಯವಸ್ಥಿತವಾಗಿವೆ ಎಂಬುದು ನನಗೆ ಗೊತ್ತು. ಆದರೆ ನಮ್ಮಂಥವರಿಗೆ ಅವರ ಪಿತ್ರಾರ್ಜಿತ ಕಲಾವಸ್ತುಗಳು ಉಸಿರುಗಟ್ಟಿಸುವಂತೆ ಇರುತ್ತವೆ. ಹಾಗೆಯೇ ಅವುಗಳಲ್ಲಿ ಅವರಿಗಿರುವ ಉತ್ಸಾಹ ಹಾಸ್ಯಾಸ್ಪದವಾಗಿ ಕಾಣುತ್ತದೆ,

ಆದರೆ ಪ್ಯಾರಿಸ್‍ನಂತಹ ನಗರ (ಈಗ ಅಲ್ಲಿಂದ ಜಗತ್‍ಪ್ರಖ್ಯಾತ ಮೇಧಾವಿಗಳು ಸಂಪೂರ್ಣವಾಗಿ ಮಾಯವಾಗಿದ್ದಾರೆ ಎಂದೆನಿಸುತ್ತದೆ) ನಿನಗೆ “Moveable Feast” (ಇದು ಏರ್ನೆಸ್ಟ್ ಹೆಮಿಂಗ್ವೆನ ಪುಸ್ತಕದ ಟೈಟಲ್ – ಗೌರಿ ಲಂಕೇಶ್) ಆಗುವುದು ಯಾವಾಗ ಅಂದರೆ, ನೀನು ಅದರ ಲಯವನ್ನು ಗ್ರಹಿಸಿದಾಗ; ಗೆಳೆಯರೊಂದಿಗೆ ಆ ನಗರವನ್ನು ಸೂಕ್ಷ್ಮವಾಗಿ ಗ್ರಹಿಸಿದಾಗ; ಇವೆಲ್ಲ ಅನೇಕ ದಿನ ನೀನು ಅಲ್ಲಿ ತಂಗಿದಾಗ ಮಾತ್ರ ಸಾಧ್ಯವಾಗುತ್ತದೆ.

ನೀನು ನಿನ್ನ ಕೋರ್ಸ್‍ನ್ನು ಇಷ್ಟಪಡುತ್ತಿರುವೆ ಎಂದು ನಂಬಿದ್ದೇನೆ. ಸಮಯವಾದಾಗ ಪ್ಯಾರಿಸ್‍ನಿಂದ ಹೊರಗೆ ಹೋಗಿ ಆ ದೇಶದ ಗ್ರಾಮ ಪ್ರದೇಶಗಳನ್ನು ನೋಡು.

ಈ ದೇಶ ಇದ್ದಹಾಗೇ ಇದೆ; ಹಲವು ದುರಂತಗಳನ್ನು ಹೊರತುಪಡಿಸಿದರೆ. ಭೂಕಂಪ, ಕಾಂಗ್ರೆಸ್ ಪಕ್ಷದ ದುರಾಡಳಿತ… ಎಲ್ಲವೂ ಅಸಹ್ಯಕರವಾಗಿವೆ.

ನಾನು ಆರೋಗ್ಯವಾಗಿದ್ದೇನೆ. ಎಲ್ಲರೂ ಸೌಖ್ಯ,

ನಿನ್ನ ಪ್ರೀತಿಯ
ಅಪ್ಪ

2) 2-11-1993
ಪ್ರೀತಿಯ ಗೌರು,

ಹತ್ತು ದಿನಗಳ ಹಿಂದೆ ನಾನು ಬರೆದ ಪತ್ರ ತಲುಪಿದೆ ಎಂದು ನಂಬಿರುವೆ. ಇಲ್ಲಿಂದ ಯಾರೂ ಪತ್ರ ಬರೆದಿಲ್ಲ ಎಂದು ನಿನಗೆ ಬೇಸರವಾಗಿದೆ ಎಂದು ಕೇಳಿದೆ. ಒಂದನ್ನು ನನಪಿನಲಿಟ್ಟುಕೋ. ಜನರು ಮೂಲಭೂತವಾಗಿ ಸ್ವಾರ್ಥಿಗಳಾಗಿರುತ್ತಾರೆ, ಯಾರಿಂದಲೂ ಯಾವುದನ್ನೂ ನಿರೀಕ್ಷಿಸುವುದು ತಪ್ಪು. ನೀನು ಇದನ್ನು ಅರಿತರೆ ಜೀವನದಲ್ಲಿ ಹೊರೆ ಕಡಿಮೆಯಾದಂತಾಗುತ್ತದೆ. ಸಾಕು ಈ ಉಪದೇಶಗಳು!

ಹೇಗಿದ್ದೀ? ಇಷ್ಟೋತ್ತಿಗಾಗಲೇ ನಿನಗೆ ಪ್ಯಾರಿಸ್ ಇಷ್ಟವಾಗಿರಬೇಕು. ಇಲ್ಲಿ ಮೊನ್ನೆಯವರೆಗೂ ಮಳೆ ಬರುತ್ತಿತ್ತು. ಆದರೆ ಈ ದಿನ ಸುಂದರವಾಗಿದೆ, bright, cool & thrilling! ಸದ್ಯದಲ್ಲೇ ಚಳಿಗಾಲ ಬರಲಿದೆ. ಈ ಬಾರಿಯ ದಸರಾ ಮತ್ತು ಗಣೇಶ ಹಬ್ಬಗಳು ತುಂಬಾ ಗದ್ದಲಮಯವಾಗಿದ್ದವು. ಈ ಗದ್ದಲಗಳ ನಡುವೆಯೇ 1970ರಲ್ಲಿ ಪ್ರಥಮವಾಗಿ ಪ್ರಕಟವಾಗಿದ್ದ ನನ್ನ “ಅಕ್ಷರ ಹೊಸಕಾವ್ಯ”ದ ಮರುಮುದ್ರಿಕೆಯನ್ನು ಹೊರತಂದೆವು.

ನಿನ್ನ ಪ್ರೀತಿಯ
ಅಪ್ಪ

3) 7-4-1994
ಪ್ರೀತಿಯ ಗೌರು,

ಇದೇ ಕೊನೆಯ ಕಾಗದ – ನೀನು ಪ್ಯಾರಿಸ್‍ನಿಂದ ಭಾರತಕ್ಕೆ ಹಿಂದಿರುಗುವ ಮುನ್ನ ಅನ್ನಿಸುತ್ತದೆ. ನೀನು ಟರ್ಕಿ ದೇಶದ ಜನರ ಬಗ್ಗೆ ಬರೆದದ್ದು ಕುತೂಹಲಕಾರಿಯಾಗಿತ್ತು. ಅವರು ಯುರೋಪಿಯನ್ ದೇಶದವರಿಗಿಂತ Courteous ಎಂದು ಬರೆದಿದ್ದೀ. ಆದರೆ ನ್ಯೂಸ್‍ವೀಕ್‍ನಲ್ಲಿ ಇತ್ತೀಚಿಗೆ ಮುಸ್ಲಿಂ ಮೂಲಭೂತವಾದಿಗಳು ಅಲ್ಜೀರಿಯ ಮತ್ತು ಈಜಿಪ್ಟ್ ದೇಶಗಳಲ್ಲಿಯಂತೆ ಟರ್ಕಿಯಲ್ಲಿಯೂ ತಮ್ಮ ಕಿತಾಪತಿ ಶುರು ಮಾಡಿದ್ದಾರೆ ಎಂದು ವರದಿಯಾಗಿತ್ತು. ಅದೊಂದು ದೊಡ್ಡ ದುರಂತ. ಯಾಕೆಂದರೆ, ಕಮಲ್ ಅತಾರುಕ್‍ನ ದೊಡ್ಡ ಸಾಧನೆ ಏನೆಂದರೆ, ಆತ ಟರ್ಕಿ ದೇಶವನ್ನು ಜಾತ್ಯತೀತ ರಾಜ್ಯವನ್ನಾಗಿಸಿದ್ದ. ಆದ್ದರಿಂದಲೇ ಟರ್ಕಿ ಯುರೋಪಿಗೆ ಹತ್ತಿರವಾಗಿತ್ತು.

ಈಗ ಫ್ರಾನ್ಸ್‌ನಲ್ಲಿ ವಸಂತ ಋತುಗಾಲ… ಪಶ್ಚಿಮ ಯುರೋಪ್ ದೇಶಗಳು ಈ ಸುಂದರವಾದ ಋತುಗಾಲಕ್ಕಾಗಿಯೇ ಹೇಳಿ ಮಾಡಿಸಿದಂತಿರಬೇಕು! ಅದರಲ್ಲಿಯೂ ಮೇ ತಿಂಗಳಂತೂ ಅತ್ಯಂತ ಆನಂದದಾಯಕವಾಗಿರುತ್ತದೆ ಎಂದು ಕೇಳಿದ್ದೇನೆ.

ನೀನು ಹಿಂದಿರುಗುವಾಗ ಮರೆಯದೇ ಒಂದೆರಡು ಸ್ಕಾಚ್ ಬಾಟಲ್‍ಗಳನ್ನು ತೆಗೆದುಕೊಂಡು ಬಾ. ತುಂಬಾ ದುಬಾರಿಯಾದದ್ದೇನೂ ಬೇಡ.

ನಿಜ, ನನಗೆ ಸಣ್ಣ ಸ್ಟ್ರೋಕ್ ಆಗಿತ್ತು. ಆದರೆ ಈಗ ಪರವಾಗಿಲ್ಲ.. ಡಾಲರ್‌ನಷ್ಟೇ ಸ್ಥಿರವಾಗಿದ್ದೇನೆ. (ಆದರೆ ಡಾಲರ್ ಮಾತ್ರ ಕುಸಿಯುತ್ತಿದೆಯಂತೆ!)

ಪುಸ್ತಕಗಳ ಬಗ್ಗೆ ಕೇಳಿದ್ದೀ. ಆದಷ್ಟು ಪುಸ್ತಕಗಳನ್ನು ತಗೊಂಡು ಬಾ. ಐಯೊನೆಸ್ಕೊ ತೀರಿಹೋದದ್ದು ಕೇಳಿ ಬೇಸರವಾಯಿತು. ಅವನು lovely fellow. ಆಲ್ಬರ್ಟ್ ಕಾಮು ಅಮೆರಿಕಾಕ್ಕೆ ಹೋಗಿ ಫಾಕ್‍ನರ್‌ನನ್ನು ಭೆಟ್ಟಿಯಾಗಿದ್ದರ ಪುಸ್ತಕ ಸಿಕ್ಕರೆ ತಗೊಂಡು ಬಾ. (ಅದರ ಹೆಸರು ಸದ್ಯಕ್ಕೆ ನನಗೆ ಬರುತ್ತಿಲ್ಲ).

ನಿನ್ನ ಪ್ರೀತಿಯ
ಅಪ್ಪ

4) 29-4-1994
ಪ್ರೀತಿಯ ಗೌರು,

ಇಂಗ್ಲೆಂಡ್‍ಗೆ ಮತ್ತೆ ಹೋದಾಗ ಒಂದು ಒಳ್ಳೆಯ ಅಂಗಡಿಗೆ ಹೋಗಿ ಜಾರ್ಜ್||| ಬಗ್ಗೆ ಪ್ರಕಟವಾಗಿರುವ ನಾಟಕದ ಪುಸ್ತಕವನ್ನು ಮರೆಯದೇ ತಗೊಂಡು ಬಾ. ಜಾರ್ಜ್||| ಎಂಬ ರಾಜನಿಗೆ ಅಮೆರಿಕಾದ ಸ್ವಾತಂತ್ರ್ಯ ಯುದ್ಧ ನಡೆಯುತ್ತಿರುವಾಗ ಹುಚ್ಚು ಹಿಡಿದಿತ್ತು. ಅವನು ಒಳ್ಳೆಯವನಾಗಿದ್ದರೂ ಅವನ ಸುತ್ತಲೂ ಇದ್ದ ಜನ ಅವನಿಗೆ ಹುಚ್ಚು ಹಿಡಿಸಿದ್ದರು! ಅವನ ಕಥೆ ಒಂದು ಒಳ್ಳೆಯ ನಾಟಕವಾಗಿ ಮೂಡಿಬಂದಿದೆಯಂತೆ. (ಆ ನಾಟಕದ ಪ್ರದರ್ಶನ ಈಗ ಇಂಗ್ಲೆಂಡ್‍ನಲ್ಲಿ ಆಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಬಹುಶಃ ನಾನು ಅಮೆರಿಕಾದಲ್ಲಿನ ಪ್ರದರ್ಶನದ ಬಗ್ಗೆ ವಿಮರ್ಶೆ ಓದಿರಬೇಕು) ಆ ನಾಟಕದ ಪುಸ್ತಕ ಸಿಕ್ಕರೆ ಮರೆಯದೇ ತಗೊಂಡು ಬಾ.

ನಾನೀಗ ಆರಾಮವಾಗಿದ್ದೇನೆ. rest, meditation ಮತ್ತು will powerಗಳಿಂದಾಗಿ!

ನೀ ಹೇಗಿದ್ದೀ? ಫ್ರಾನ್ಸ್ ಹೇಗಿದೆ? ನೀನು ನಿನ್ನ ಗೆಳೆಯರೊಂದಿಗೆ ಇರುವ ಹಲವು ಫೋಟೋಗಳನ್ನು ನೋಡಿದೆ. ನೀನು ಚೆನ್ನಾಗಿ ಕಾಣಿಸುತ್ತೀ..

ಚಿದು ಕಾಗದ ಬರೆದಿದ್ದ ಬೇರೆ ದೇಶಗಳಿಗೆ ಒಮ್ಮೆ ಪ್ರಯಾಣ ಮಾಡಿ ಎಂದು ಸೂಚಿಸಿದ್ದ. ಆದರೆ ನನಗೆ ಪ್ರಯಾಣ ಮಾಡುವಷ್ಟು ಆರೋಗ್ಯ ಇಲ್ಲ. ಹಾಗೆಯೇ ಈ ಟೂರಿಸ್ಟ್ ಜಾಗಗಳನ್ನು ಕಂಡರೆ ನನಗೆ ಆಸಹ್ಯ!

ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಮಳೆಯಾಗಿಲ್ಲ. ಬಹಳ ಸೆಖೆ. ಸಾಮಾನ್ಯವಾಗಿ ಏಪ್ರಿಲ್ ಕೊನೆಯ ಭಾಗದಲ್ಲಿ ಬೆಂಗಳೂರಿನಲ್ಲಿ ಮಳೆಯಾಗುತ್ತದೆ, ಅದಾದ ನಂತರ ಬೆಂಗಳೂರು ಟರ್ಫ್ ಕ್ಲಬ್‍ನವರು ರೇಸ್‍ಗಳಿಗೆ ತಮ್ಮ ಟ್ರ್ಯಾಕ್‍ಗಳನ್ನು ಸಿದ್ಧಪಡಿಸುತ್ತಾರೆ. ಈ ಬಾರಿ ಅದು doubtful.

ನಿನ್ನ ಪ್ರೀತಿಯ
ಅಪ್ಪ


ಇದನ್ನೂ ಓದಿ: ವಿದ್ಯಾರ್ಥಿ ಮಿತ್ರರಾಗಿ ಸ್ಫೂರ್ತಿ ತುಂಬುತ್ತಿದ್ದ ಗೌರಿ ಮೇಡಂ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...