Homeಕರ್ನಾಟಕಗಾಂಧಿ ತಾತನ ಶಾಂತಿ ಸಂದೇಶ ಸಾರಲು ಮುಂದಾದ ’ನಮ್ಮ ಧ್ವನಿ’ ಬಳಗದಿಂದ ವಿಶಿಷ್ಟ ಗಾಂಧಿ ಜಯಂತಿ

ಗಾಂಧಿ ತಾತನ ಶಾಂತಿ ಸಂದೇಶ ಸಾರಲು ಮುಂದಾದ ’ನಮ್ಮ ಧ್ವನಿ’ ಬಳಗದಿಂದ ವಿಶಿಷ್ಟ ಗಾಂಧಿ ಜಯಂತಿ

"ನಮ್ಮ ಧ್ವನಿ" ಎಂಬ ಉತ್ಸಾಹಿ ತಂಡವನ್ನು ಪ್ರಗತಿಪರ ಚಿಂತಕರಾದ ದಿವಂಗತ ಮಹೇಂದ್ರ ಕುಮಾರ್‌ರವರು ಕಟ್ಟಿದ್ದರು. ಸಮಾಜದಲ್ಲಿ ನಡೆಯುವ ಹಾಗುಹೋಗುಗಳ ಬಗ್ಗೆ ವಿಮರ್ಶಿಸುತ್ತಾ, ವಿಶ್ಲೇಷಿಸುತ್ತಾ ಅವರು ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

- Advertisement -
- Advertisement -

ಪ್ರಗತಿಪರ ಚಿಂತಕ ದಿವಂಗತ ಮಹೇಂದ್ರ ಕುಮಾರ್‌ ಅವರು ಪ್ರಾರಂಭಿಸಿದ್ದ ’ನಮ್ಮ ಧ್ವನಿ’ ತಂಡವು ಗಾಂಧಿ ಜಯಂತಿಯನ್ನು ’ನಮ್ಮ ನಡೆ ಗಾಂಧಿ ಕಡೆ’ ಎಂಬ ಧ್ಯೇಯದೊಂದಿಗೆ ಎಂಬ ವಿನೂತನ ರೀತಿಯಲ್ಲಿ ಆಚರಿಸಿತು.

ಬೆಂಗಳೂರಿನ ಟೌನ್‌ಹಾಲ್‌‌ನಿಂದ ಕಾಲ್ನಡಿಗೆಯಲ್ಲಿ ಹೊರಟ ತಂಡವು ಮೆಜೆಸ್ಟಿಕ್ ಮೂಲಕ ಹಾದು ಮೌರ್ಯ ಸರ್ಕಲ್‌ನ ಗಾಂಧಿ ಪ್ರತಿಮೆಯವರೆಗೂ ಮೆರವಣಿಗೆ ನಡೆಸಿತು. ಗಾಂಧಿಯ ಆಶಯಗಳ ಪೋಸ್ಟರ್‌ ಪ್ರದರ್ಶನ, ಗಾಂಧಿ ಜಯಂತಿಯ ಶುಭಾಶಯ ಪತ್ರ ಹಾಗೂ ಶಾಂತಿಯ ಸಂಕೇತವಾಗಿ ಬಿಳಿ ಗುಲಾಬಿಯನ್ನು ಹಂಚುತ್ತಾ ಗಮನ ಸೆಳೆಯಿತು.

ಇದನ್ನೂ ಓದಿ: ಮಹೇಂದ್ರ ಕುಮಾರ್ ಎಂಬ ‘ನಮ್ಮ ಧ್ವನಿ’ಯ ನೆನಪು: ಮುನೀರ್‌ ಕಾಟಿಪಳ್ಳ

ಜಾಥಾದಲ್ಲಿ ಚಿಂತಕ, ನಟ ಚೇತನ್, ಹಾಗೂ ಸಾಹಿತಿ ಯೋಗೇಶ್ ಮೇಷ್ಟ್ರ ಕೂಡಾ ಭಾಗವಹಿಸಿದ್ದರು. ಕನ್ನಡ ಸಂಘಟನೆಯ ಕಾರ್ಯಕರ್ತರು, ಹಾಗೂ ವಿದ್ಯಾರ್ಥಿಗಳು ಹಾಗೂ ಹಲವಾರು ಪಾದಚಾರಿಗಳು ಮೆರವಣಿಗೆಯಲ್ಲಿ ಹೆಜ್ಜೆಯಾಕಿದರು.

“ಜಗತ್ತಿನಲ್ಲಿ ಶಾಂತಿ ಬೇಕು ಎಂದರೆ ಅದನ್ನು ನಿಮ್ಮ ಮಕ್ಕಳಿಂದಲೇ ಆರಂಭಿಸಿ. ಸತ್ಯ, ಪ್ರೀತಿ, ಅಹಿಂಸೆ ಎಲ್ಲಿ ನೆಲೆಸಿರುತ್ತದೆಯೋ ಅಲ್ಲಿ ಶಾಂತಿ ತೃಪ್ತಿ ನೆಲೆಸುತ್ತದೆ. ಸಹನೆ ಕಳೆದುಕೊಳ್ಳುವುದೆಂದರೆ ಯುದ್ಧವನ್ನು ಸೋತಂತೆ. ಅಹಿಂಸೋ ಪರಮೋ ಧರ್ಮ” ಎಂಬ ಬರಹಗಳಿದ್ದ ಪ್ಲಕಾರ್ಡುಗಳನ್ನು ಹಿಡಿದು, ಗಾಂಧೀಜಿ ಅಮರರಾಗಲಿ, ಮಹೇಂದ್ರ ಕುಮಾರ್ ಅಮರರಾಗಲಿ ಎಂಬ ಘೋಷಣೆಗಳೊಂದಿಗೆ ಮೆರವಣಗೆ ನಡೆಯಿತು.

ಜಾಥಾದಲ್ಲಿ ಸಾಹಿತಿ ಯೋಗೇಶ್ ಮೇಷ್ಟ್ರು ಭಾಗವಹಿಸಿದರು.

ಯುವ ಮುಖಂಡ, ಚಿಂತಕ ರಾ ಚಿಂತನ್ ಮಾತನಾಡಿ, “ನಮ್ಮ ಧ್ವನಿ ಮಹೇಂದ್ರ ಕುಮಾರ್ ಮತ್ತು ನಮ್ಮೆಲ್ಲರ ಕನಸು. ಈ ದೇಶದ ಶಾಂತಿ ಸೌಹಾರ್ದತೆಯನ್ನು ಕದಡುವ ಕೆಲಸಗಳು ನಡೆಯುತ್ತಿರುವಾಗ ಅದನ್ನು ಶಾಶ್ವತವಾಗಿ ನಿಲ್ಲಿಸಲು ನಮ್ಮ ಧ್ವನಿ ಆರಂಭವಾಯಿತು. ಈ ನಡುವೆ ನಾವು ಮಹೇಂದ್ರ ಕುಮಾರ್‌ರವರನ್ನು ಕಳೆದುಕೊಂಡು ಅಕ್ಷರಶಃ ತಬ್ಬಲಿಗಳಾಗಿದ್ದೆವು. ನಮ್ಮಧ್ವನಿಯನ್ನು ಮುಂದುವರೆಸಲು ಗಾಂಧಿ ಜಯಂತಿಯ ದಿನ ಪ್ರಸಸ್ತವಾದ ದಿನ. ಹಾಗಾಗಿ ನಾವು ಮೊಟ್ಟ ಮೊದಲ ಬಾರಿಗೆ ಬೀದಿಗಿಳಿದು ಗಾಂಧಿ ತಾತನ ಶಾಂತಿಯ ಸಂದೇಶಗಳನ್ನು ಜನರಿಗೆ ತಲುಪಿಸಲು ಈ ಜಾಥವನ್ನು ಹಮ್ಮಿಕೊಂಡಿದ್ದೇವೆ” ಎಂದರು.

ನಾನುಗೌರಿ.ಕಾಂ ಜೊತೆ ಮಾತನಾಡಿದ ’ನಮ್ಮ ಧ್ವನಿ’ ಬಳಗದ ಸಂಸ್ಥಾಪಕ ಸದಸ್ಯರಾದ ರುದ್ರು ಪುನೀತ್‌ ಆರ್‌.ಸಿ, “ಮಹೇಂದ್ರ ಕುಮಾರ್‌ ಅವರ ಆಶಯಗಳನ್ನು ಮುಂದುವರೆಸಲು ’ನಮ್ಮ ಧ್ವನಿ’ ತಂಡ ಬದ್ದವಾಗಿದೆ. ಮಹೇಂದ್ರರವರ ಆಶಯದಂತೆ ಅನ್ಯಾಯದ ವಿರುದ್ದ ’ನಮ್ಮ ಧ್ವನಿ’ ತಂಡವು ಯಾವತ್ತಿಗೂ ನಿಲ್ಲುತ್ತದೆ. ಕೊರೊನಾ ಕಾರಣದಿಂದ ತಂಡದ ಚಟುವಟಿಕೆ ತುಸು ನಿಧಾನವಾಗಿತ್ತಾದರೂ, ಇದೀಗ ತಂಡದ ಚಟುವಟಿಕೆಯನ್ನು ಮತ್ತೇ ಉತ್ಸಾಹದಿಂದ ಪ್ರಾರಂಭಿಸಿದ್ದೇವೆ” ಎಂದರು.

ಇದನ್ನೂ ಓದಿ: ಮಹೇಂದ್ರ ಕುಮಾರ್ ನಿಧನದ ಸಂಧಿಕಾಲ ಮತ್ತು ಫಿಡೆಲ್ ಕ್ಯಾಸ್ಟ್ರೊ!

ಜಾಥಾದಲ್ಲಿ ಭಾಗವಹಿಸಿದ ನಟ ಚೇತನ್

“ನಮ್ಮ ಧ್ವನಿ” ಎಂಬ ಉತ್ಸಾಹಿ ತಂಡವನ್ನು ಪ್ರಗತಿಪರ ಚಿಂತಕರಾದ ದಿವಂಗತ ಮಹೇಂದ್ರ ಕುಮಾರ್‌ರವರು ಕಟ್ಟಿದ್ದರು. ಸಮಾಜದಲ್ಲಿ ನಡೆಯುವ ಹಾಗುಹೋಗುಗಳ ಬಗ್ಗೆ ವಿಮರ್ಶಿಸುತ್ತಾ, ವಿಶ್ಲೇಷಿಸುತ್ತಾ ಅವರು ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು.

ಯುವಕರನ್ನು ತಲುಪಲು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿದ್ದ ಮಹೇಂದ್ರ ಕುಮಾರ್‌, ಪ್ರತಿನಿತ್ಯ ತಮ್ಮ ಹರಿತ ಬರಹ ಮತ್ತು ವಿಡಿಯೋಗಳ ಮೂಲಕ ಲಕ್ಷಾಂತರ ಜನರನ್ನು ತಲುಪುತ್ತಿದ್ದರು. ನಮ್ಮ ಧ್ವನಿ ಯೂಟ್ಯೂಬ್ ಚಾನೆಲ್‌ನಲ್ಲಿ ಚಿಂತನಾರ್ಹ ಮತ್ತು ಸಕಾಲಿಕ ಸರಣಿ ವಿಡಿಯೋಗಳಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದರು.

ಇದನ್ನೂ ಓದಿ: ಪ್ರಗತಿಪರ ಚಿಂತಕ, ನಮ್ಮಧ್ವನಿ ಬಳಗದ ಮಹೇಂದ್ರ ಕುಮಾರ್

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...