Homeಮುಖಪುಟಫಾರ್ಬಿಡನ್‌ ಪ್ರಕಟಿಸುತ್ತಿರುವ ‘ಸ್ಟೋರಿ ಕಿಲ್ಲರ್ಸ್’ ಸರಣಿಗೆ ಗೌರಿ ಲಂಕೇಶ್‌ ಸ್ಫೂರ್ತಿ; ಗಾರ್ಡಿಯನ್‌ ಉಲ್ಲೇಖ

ಫಾರ್ಬಿಡನ್‌ ಪ್ರಕಟಿಸುತ್ತಿರುವ ‘ಸ್ಟೋರಿ ಕಿಲ್ಲರ್ಸ್’ ಸರಣಿಗೆ ಗೌರಿ ಲಂಕೇಶ್‌ ಸ್ಫೂರ್ತಿ; ಗಾರ್ಡಿಯನ್‌ ಉಲ್ಲೇಖ

- Advertisement -
- Advertisement -

ಪ್ರಖ್ಯಾತ ತನಿಖಾ ಸಂಸ್ಥೆಯಾಗಿರುವ ‘ಫಾರ್ಬಿಡನ್‌ ಸ್ಟೋರೀಸ್‌’ ಪ್ರಕಟಿಸುತ್ತಿರುವ ‘ಸ್ಟೋರಿ ಕಿಲ್ಲರ್ಸ್’ ವಿಶೇಷ ಸರಣಿಗೆ ‘ಗೌರಿ ಲಂಕೇಶ್‌’ ಅವರು ಸ್ಫೂರ್ತಿಯಾಗಿದ್ದಾರೆ ಎಂದು ‘ದಿ ಗಾರ್ಡಿಯನ್‌’ ವರದಿ ಮಾಡಿದೆ.

ಸುಳ್ಳು ಸುದ್ದಿಗಳಿಂದ ಆಗಿರುವ ಅನಾಹುತಗಳನ್ನು, ಕೊಲೆ, ಹಿಂಸೆಗಳನ್ನು ಈ ಸರಣಿ ಬಿಚ್ಚಿಡುತ್ತಿದೆ. ಗೌರಿ ಲಂಕೇಶ್ ಅವರ ಕುರಿತು ವಿಶೇಷ ವರದಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಗಾರ್ಡಿಯನ್ ತನ್ನ ವರದಿಯಲ್ಲಿ, “ಸುಳ್ಳು ಮಾಹಿತಿಗಳನ್ನು ನಮ್ಮ ಮಾಹಿತಿ ಪರಿಸರ ವ್ಯವಸ್ಥೆಯಲ್ಲಿನ ಪರಮಾಣು ಬಾಂಬ್‌ಗೆ ಹೋಲಿಸಲಾಗಿದೆ. ಸುಳ್ಳು ಮಾಹಿತಿಯು ಗಂಭೀರ ಸಮಸ್ಯೆಯಾಗಿದೆ. ಏಕೆಂದರೆ ಸತ್ಯಕ್ಕಿಂತ ವೇಗವಾಗಿ ದ್ವೇಷ, ಕೋಪ ಮತ್ತು ಪಿತೂರಿ ಸಿದ್ಧಾಂತಗಳು ಹರಡಲು ಸುಳ್ಳು ಮಾಹಿತಿಗಳು ಕಾರಣವಾಗುತ್ತವೆ. ಪತ್ರಕರ್ತೆ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ರೆಸ್ಸಾ ಅವರ ಹೇಳುವಂತೆ- ‘ಪ್ರಜಾಪ್ರಭುತ್ವ ಎಂಬುದು ಕನಸಷ್ಟೇ” ಎಂಬ ಸಾಲುಗಳನ್ನು ಉಲ್ಲೇಖಿಸಿದೆ.

ಉಕ್ರೇನ್‌ನ ಮೇಲೆ ರಷ್ಯಾದ ಕ್ರೂರ ಆಕ್ರಮಣ, ಅಮೆರಿಕದ ಸಂಸತ್‌ ಮೇಲೆ ದಾಳಿ, ಕೋವಿಡ್ -19ರ ಸುತ್ತ ಹುಟ್ಟಿದ ಸುಳ್ಳುಗಳು- ಇವೆಲ್ಲ ತಪ್ಪು ಮಾಹಿತಿಯ ಪ್ರಮುಖ ಜಾಗತಿಕ ಘಟನೆಗಳಾಗಿ ಕಾಣುತ್ತವೆ ಎಂದಿದೆ.

‘Disinfo black ops’ ಎಂಬ ವಿಶೇಷ ತನಿಖೆಯು ಪ್ರಪಂಚದಾದ್ಯಂತ ಆಗುತ್ತಿರುವ ಸುಳ್ಳು ಮಾಹಿತಿಯ ಉದ್ದೇಶಪೂರ್ವಕ ಹರಡುವಿಕೆಯ ಕುರಿತು ಬಹಿರಂಗಪಡಿಸುತ್ತಿದೆ. ಇದು ಸ್ಟೋರಿ ಕಿಲ್ಲರ್ಸ್‌ ಸರಣಿಯ ಭಾಗವಾಗಿದೆ. ಗಾರ್ಡಿಯನ್, ಅಬ್ಸರ್ವರ್, ಹಾರೆಟ್ಜ್, ಲೆ ಮಾಂಡೆ, ಡೆರ್ ಸ್ಪೀಗೆಲ್, ರೇಡಿಯೋ ಫ್ರಾನ್ಸ್, ದಿ ಮಾರ್ಕರ್, ಪೇಪರ್ ಟ್ರಯಲ್ ಮೀಡಿಯಾ ಮತ್ತು ವಾಷಿಂಗ್ಟನ್ ಪೋಸ್ಟ್ ಸೇರಿದಂತೆ 30 ಸುದ್ದಿ ಮಾಧ್ಯಮಗಳ ಪತ್ರಕರ್ತರನ್ನು ಒಳಗೊಂಡ ಅಂತಾರಾಷ್ಟ್ರೀಯ ಮಟ್ಟದ ಸಹಯೋಗದಲ್ಲಿ ನಡೆಯುತ್ತಿರುವ ಯೋಜನೆ ಇದಾಗಿದೆ.

ಲಾಭದ ಉದ್ದೇಶದಿಂದ ಅಂತರ್ಜಾಲದಾದ್ಯಂತ ನಕಲಿ ಮಾಹಿತಿಯನ್ನು ಹರಡುವ ಸರ್ಕಾರಿ-ಪ್ರಾಯೋಜಿತ ಘಟಕಗಳು ಅಥವಾ ಖಾಸಗಿ ಸಂಸ್ಥೆಗಳು ಹರಡುವ ಸುಳ್ಳು ಮಾಹಿತಿಗಳ ಬಗ್ಗೆ ಈ ತನಿಖೆ ಬೆಳಕು ಚೆಲ್ಲುತ್ತಿದೆ.

ಡ್ಯಾಫ್ನೆ ಪ್ರಾಜೆಕ್ಟ್ ಮತ್ತು ಪೆಗಾಸಸ್ ಪ್ರಾಜೆಕ್ಟ್‌ನ ಹಿಂದಿರುವ ‘ಫೋರ್ಬಿಡನ್ ಸ್ಟೋರೀಸ್’ (ಲಾಭೋದ್ದೇಶವಿಲ್ಲದ ಫ್ರೆಂಚ್ ಮೂಲದ ಸಂಸ್ಥೆ) ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಹತ್ಯೆಗೀಡಾದ, ಬೆದರಿಕೆ ಅಥವಾ ಜೈಲಿನಲ್ಲಿರುವ ಪತ್ರಕರ್ತರ ಆಶಯಗಳನ್ನು ಮುಂದುವರಿಸುವುದು ಈ ಯೋಜನೆಯ ಉದ್ದೇಶವಾಗಿದೆ.

2017ರಲ್ಲಿ ತಮ್ಮ ಬೆಂಗಳೂರಿನ ಮನೆಯ ಹೊರಗೆ ಹತ್ಯೆಯಾದ ಗೌರಿ ಲಂಕೇಶ್ ಅವರ ನಿರ್ಭೀತ ಕೆಲಸಗಳೇ ಈ ಎಂಟು ತಿಂಗಳ ಕಾಲ ನಡೆಸಿರುವ ತನಿಖೆಗೆ ಸ್ಫೂರ್ತಿಯಾಗಿದೆ ಎಂದು ‘ಗಾರ್ಡಿಯನ್‌’ ಉಲ್ಲೇಖಿಸಿದೆ.

ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಗೌರಿ ಲಂಕೇಶ್ ಅವರು ‘ಸುಳ್ಳು ಸುದ್ದಿಗಳ ಯುಗದಲ್ಲಿ’ ಎಂಬ ಲೇಖನಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದರು. ಆನ್‌ಲೈನ್‌ನಲ್ಲಿ ಫೇಕ್‌ನ್ಯೂಸ್ ಪ್ಯಾಕ್ಟರಿಗಳು ಹೇಗೆ ಭಾರತದಲ್ಲಿ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂಬುದನ್ನು ಈ ಲೇಖನ ಚರ್ಚಿಸಿದೆ ಎಂಬ ಸಂಗತಿಯನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

‘ಇನ್ ಏಜ್ ಆಫ್ ಫಾಲ್ಸ್ ನ್ಯೂಸ್’ ಲೇಖನವು ಗೌರಿಯವರ ಸಾವಿನ ನಂತರ ಪ್ರಕಟವಾಯಿತು. ಗೌರಿ ತಮ್ಮ ಅಂತಿಮ ವಾಕ್ಯದಲ್ಲಿ, “ನಕಲಿ ಸುದ್ದಿಗಳನ್ನು ಬಹಿರಂಗಪಡಿಸುವ ಎಲ್ಲರಿಗೂ ನಾನು ಸೆಲ್ಯೂಟ್ ಮಾಡಲು ಬಯಸುತ್ತೇನೆ. ಅಲ್ಲಿ ಇನ್ನೂ ಹೆಚ್ಚಿನವರು ಇರಬೇಕೆಂದು ನಾನು ಬಯಸುತ್ತೇನೆ” ಎಂದಿದ್ದರು.

ಹತ್ಯೆಗೆ ಸಂಬಂಧಿಸಿದಂತೆ 17 ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಗಳು ಮುಂದುವರಿದಿವೆ.

ಇಸ್ರೇಲ್‌ನ ಬೆನ್-ಗುರಿಯನ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ನಿರ್ ಗ್ರಿನ್‌ಬರ್ಗ್ ಪ್ರತಿಕ್ರಿಯಿಸಿ, “ತಪ್ಪು ಮಾಹಿತಿಗಳ ಕುರಿತು ಸ್ಟೋರಿ ಕಿಲ್ಲರ್ಸ್ ಯೋಜನೆಯಲ್ಲಿ ಬಹಿರಂಗವಾಗುತ್ತಿರುವ ಸಂಗತಿಗಳು ನವೀನವಾಗಿದೆ” ಎಂದಿದ್ದಾರೆ.

“ನಾಗರಿಕ ಸಮಾಜವು ಈ ಆನ್‌ಲೈನ್ ವೇದಿಕೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಪುನಾ ರಚಿಸದ ಹೊರತು, ಈ ವೇದಿಕೆಗಳನ್ನು ಹೊಣೆಗಾರರನ್ನಾಗಿ ಮಾಡದ ಹೊರತು, ಅಂತಹ ತಪ್ಪು ಮಾಹಿತಿಯ ಪ್ರಚಾರಗಳಿಗೆ ಯಾರಾದರೂ ಬಲಿಯಾಗಬಹುದೆಂಬ ಭವಿಷ್ಯವನ್ನು ನಾವು ನೋಡುತ್ತಿದ್ದೇವೆ” ಎಂದಿದ್ದಾರೆ ಗ್ರಿನ್‌ಬರ್ಗ್.

ಈ ಸುಳ್ಳು ಸುದ್ದಿಗಳಿಂದಾಗಿ ವಿಶೇಷವಾಗಿ ಜಗತ್ತಿನಾದ್ಯಂತ ಮಹಿಳಾ ಪತ್ರಕರ್ತರು ಟಾರ್ಗೆಟ್ ಆಗಿದ್ದಾರೆ. ರೆಸ್ಸಾ ಅವರು ತಮ್ಮ ‘ರಾಪ್ಲರ್’ ಡಿಜಿಟಲ್‌ ವೇದಿಕೆಯ ಮೂಲಕ ಮಾಡಿದ ವರದಿಗಳ ಕಾರಣಕ್ಕೆ ಟ್ರೋಲ್ ಆಗಿದ್ದಾರೆ.

‘ಫಿಲಿಪೈನ್ಸ್‌ನ ಮುಕ್ತ ಪತ್ರಿಕಾ ಮುಖ’ ಎಂದೇ ಖ್ಯಾತರಾಗಿರುವ ರೆಸ್ಸಾ, ತೆರಿಗೆ ವಂಚನೆ ಆರೋಪಗಳಿಂದ ಖುಲಾಸೆಗೊಂಡರು, ಒಂದು ಪ್ರಕರಣದಲ್ಲಿ ಅವರು ಕಿರುಕುಳ ಎದುರಿಸಿದ್ದಾರೆ. ಫಿನ್‌ಲ್ಯಾಂಡ್‌ನ ಪತ್ರಕರ್ತೆ ಜೆಸ್ಸಿಕ್ಕಾ ಅರೋ ಅವರು ಫೇಕ್‌ನ್ಯೂಸ್‌ಗಳ ದಾಳಿಗೆ ಗುರಿಯಾಗಿದ್ದಾರೆ. ಹೀಗೆ ಸುಳ್ಳು ಸುದ್ದಿಗಳಿಂದ ತೊಂದರೆಗೊಳಗಾದ ಪತ್ರಕರ್ತರ ಕುರಿತು ‘ಫಾರ್ಬಿಡನ್‌ ಸ್ಟೋರೀಸ್‌’ ಸರಣಿ ತನಿಖಾ ವರದಿಗಳನ್ನು ಪ್ರಕಟಿಸುತ್ತಿದೆ.

ಮಾಹಿತಿ ಕೃಪೆ: ದಿ ಗಾರ್ಡಿಯನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...