Homeಮುಖಪುಟಫಾರ್ಬಿಡನ್‌ ಪ್ರಕಟಿಸುತ್ತಿರುವ ‘ಸ್ಟೋರಿ ಕಿಲ್ಲರ್ಸ್’ ಸರಣಿಗೆ ಗೌರಿ ಲಂಕೇಶ್‌ ಸ್ಫೂರ್ತಿ; ಗಾರ್ಡಿಯನ್‌ ಉಲ್ಲೇಖ

ಫಾರ್ಬಿಡನ್‌ ಪ್ರಕಟಿಸುತ್ತಿರುವ ‘ಸ್ಟೋರಿ ಕಿಲ್ಲರ್ಸ್’ ಸರಣಿಗೆ ಗೌರಿ ಲಂಕೇಶ್‌ ಸ್ಫೂರ್ತಿ; ಗಾರ್ಡಿಯನ್‌ ಉಲ್ಲೇಖ

- Advertisement -
- Advertisement -

ಪ್ರಖ್ಯಾತ ತನಿಖಾ ಸಂಸ್ಥೆಯಾಗಿರುವ ‘ಫಾರ್ಬಿಡನ್‌ ಸ್ಟೋರೀಸ್‌’ ಪ್ರಕಟಿಸುತ್ತಿರುವ ‘ಸ್ಟೋರಿ ಕಿಲ್ಲರ್ಸ್’ ವಿಶೇಷ ಸರಣಿಗೆ ‘ಗೌರಿ ಲಂಕೇಶ್‌’ ಅವರು ಸ್ಫೂರ್ತಿಯಾಗಿದ್ದಾರೆ ಎಂದು ‘ದಿ ಗಾರ್ಡಿಯನ್‌’ ವರದಿ ಮಾಡಿದೆ.

ಸುಳ್ಳು ಸುದ್ದಿಗಳಿಂದ ಆಗಿರುವ ಅನಾಹುತಗಳನ್ನು, ಕೊಲೆ, ಹಿಂಸೆಗಳನ್ನು ಈ ಸರಣಿ ಬಿಚ್ಚಿಡುತ್ತಿದೆ. ಗೌರಿ ಲಂಕೇಶ್ ಅವರ ಕುರಿತು ವಿಶೇಷ ವರದಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಗಾರ್ಡಿಯನ್ ತನ್ನ ವರದಿಯಲ್ಲಿ, “ಸುಳ್ಳು ಮಾಹಿತಿಗಳನ್ನು ನಮ್ಮ ಮಾಹಿತಿ ಪರಿಸರ ವ್ಯವಸ್ಥೆಯಲ್ಲಿನ ಪರಮಾಣು ಬಾಂಬ್‌ಗೆ ಹೋಲಿಸಲಾಗಿದೆ. ಸುಳ್ಳು ಮಾಹಿತಿಯು ಗಂಭೀರ ಸಮಸ್ಯೆಯಾಗಿದೆ. ಏಕೆಂದರೆ ಸತ್ಯಕ್ಕಿಂತ ವೇಗವಾಗಿ ದ್ವೇಷ, ಕೋಪ ಮತ್ತು ಪಿತೂರಿ ಸಿದ್ಧಾಂತಗಳು ಹರಡಲು ಸುಳ್ಳು ಮಾಹಿತಿಗಳು ಕಾರಣವಾಗುತ್ತವೆ. ಪತ್ರಕರ್ತೆ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ರೆಸ್ಸಾ ಅವರ ಹೇಳುವಂತೆ- ‘ಪ್ರಜಾಪ್ರಭುತ್ವ ಎಂಬುದು ಕನಸಷ್ಟೇ” ಎಂಬ ಸಾಲುಗಳನ್ನು ಉಲ್ಲೇಖಿಸಿದೆ.

ಉಕ್ರೇನ್‌ನ ಮೇಲೆ ರಷ್ಯಾದ ಕ್ರೂರ ಆಕ್ರಮಣ, ಅಮೆರಿಕದ ಸಂಸತ್‌ ಮೇಲೆ ದಾಳಿ, ಕೋವಿಡ್ -19ರ ಸುತ್ತ ಹುಟ್ಟಿದ ಸುಳ್ಳುಗಳು- ಇವೆಲ್ಲ ತಪ್ಪು ಮಾಹಿತಿಯ ಪ್ರಮುಖ ಜಾಗತಿಕ ಘಟನೆಗಳಾಗಿ ಕಾಣುತ್ತವೆ ಎಂದಿದೆ.

‘Disinfo black ops’ ಎಂಬ ವಿಶೇಷ ತನಿಖೆಯು ಪ್ರಪಂಚದಾದ್ಯಂತ ಆಗುತ್ತಿರುವ ಸುಳ್ಳು ಮಾಹಿತಿಯ ಉದ್ದೇಶಪೂರ್ವಕ ಹರಡುವಿಕೆಯ ಕುರಿತು ಬಹಿರಂಗಪಡಿಸುತ್ತಿದೆ. ಇದು ಸ್ಟೋರಿ ಕಿಲ್ಲರ್ಸ್‌ ಸರಣಿಯ ಭಾಗವಾಗಿದೆ. ಗಾರ್ಡಿಯನ್, ಅಬ್ಸರ್ವರ್, ಹಾರೆಟ್ಜ್, ಲೆ ಮಾಂಡೆ, ಡೆರ್ ಸ್ಪೀಗೆಲ್, ರೇಡಿಯೋ ಫ್ರಾನ್ಸ್, ದಿ ಮಾರ್ಕರ್, ಪೇಪರ್ ಟ್ರಯಲ್ ಮೀಡಿಯಾ ಮತ್ತು ವಾಷಿಂಗ್ಟನ್ ಪೋಸ್ಟ್ ಸೇರಿದಂತೆ 30 ಸುದ್ದಿ ಮಾಧ್ಯಮಗಳ ಪತ್ರಕರ್ತರನ್ನು ಒಳಗೊಂಡ ಅಂತಾರಾಷ್ಟ್ರೀಯ ಮಟ್ಟದ ಸಹಯೋಗದಲ್ಲಿ ನಡೆಯುತ್ತಿರುವ ಯೋಜನೆ ಇದಾಗಿದೆ.

ಲಾಭದ ಉದ್ದೇಶದಿಂದ ಅಂತರ್ಜಾಲದಾದ್ಯಂತ ನಕಲಿ ಮಾಹಿತಿಯನ್ನು ಹರಡುವ ಸರ್ಕಾರಿ-ಪ್ರಾಯೋಜಿತ ಘಟಕಗಳು ಅಥವಾ ಖಾಸಗಿ ಸಂಸ್ಥೆಗಳು ಹರಡುವ ಸುಳ್ಳು ಮಾಹಿತಿಗಳ ಬಗ್ಗೆ ಈ ತನಿಖೆ ಬೆಳಕು ಚೆಲ್ಲುತ್ತಿದೆ.

ಡ್ಯಾಫ್ನೆ ಪ್ರಾಜೆಕ್ಟ್ ಮತ್ತು ಪೆಗಾಸಸ್ ಪ್ರಾಜೆಕ್ಟ್‌ನ ಹಿಂದಿರುವ ‘ಫೋರ್ಬಿಡನ್ ಸ್ಟೋರೀಸ್’ (ಲಾಭೋದ್ದೇಶವಿಲ್ಲದ ಫ್ರೆಂಚ್ ಮೂಲದ ಸಂಸ್ಥೆ) ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಹತ್ಯೆಗೀಡಾದ, ಬೆದರಿಕೆ ಅಥವಾ ಜೈಲಿನಲ್ಲಿರುವ ಪತ್ರಕರ್ತರ ಆಶಯಗಳನ್ನು ಮುಂದುವರಿಸುವುದು ಈ ಯೋಜನೆಯ ಉದ್ದೇಶವಾಗಿದೆ.

2017ರಲ್ಲಿ ತಮ್ಮ ಬೆಂಗಳೂರಿನ ಮನೆಯ ಹೊರಗೆ ಹತ್ಯೆಯಾದ ಗೌರಿ ಲಂಕೇಶ್ ಅವರ ನಿರ್ಭೀತ ಕೆಲಸಗಳೇ ಈ ಎಂಟು ತಿಂಗಳ ಕಾಲ ನಡೆಸಿರುವ ತನಿಖೆಗೆ ಸ್ಫೂರ್ತಿಯಾಗಿದೆ ಎಂದು ‘ಗಾರ್ಡಿಯನ್‌’ ಉಲ್ಲೇಖಿಸಿದೆ.

ಹತ್ಯೆಯಾಗುವ ಕೆಲವೇ ಗಂಟೆಗಳ ಮೊದಲು ಗೌರಿ ಲಂಕೇಶ್ ಅವರು ‘ಸುಳ್ಳು ಸುದ್ದಿಗಳ ಯುಗದಲ್ಲಿ’ ಎಂಬ ಲೇಖನಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದರು. ಆನ್‌ಲೈನ್‌ನಲ್ಲಿ ಫೇಕ್‌ನ್ಯೂಸ್ ಪ್ಯಾಕ್ಟರಿಗಳು ಹೇಗೆ ಭಾರತದಲ್ಲಿ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂಬುದನ್ನು ಈ ಲೇಖನ ಚರ್ಚಿಸಿದೆ ಎಂಬ ಸಂಗತಿಯನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

‘ಇನ್ ಏಜ್ ಆಫ್ ಫಾಲ್ಸ್ ನ್ಯೂಸ್’ ಲೇಖನವು ಗೌರಿಯವರ ಸಾವಿನ ನಂತರ ಪ್ರಕಟವಾಯಿತು. ಗೌರಿ ತಮ್ಮ ಅಂತಿಮ ವಾಕ್ಯದಲ್ಲಿ, “ನಕಲಿ ಸುದ್ದಿಗಳನ್ನು ಬಹಿರಂಗಪಡಿಸುವ ಎಲ್ಲರಿಗೂ ನಾನು ಸೆಲ್ಯೂಟ್ ಮಾಡಲು ಬಯಸುತ್ತೇನೆ. ಅಲ್ಲಿ ಇನ್ನೂ ಹೆಚ್ಚಿನವರು ಇರಬೇಕೆಂದು ನಾನು ಬಯಸುತ್ತೇನೆ” ಎಂದಿದ್ದರು.

ಹತ್ಯೆಗೆ ಸಂಬಂಧಿಸಿದಂತೆ 17 ಮಂದಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಗಳು ಮುಂದುವರಿದಿವೆ.

ಇಸ್ರೇಲ್‌ನ ಬೆನ್-ಗುರಿಯನ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ನಿರ್ ಗ್ರಿನ್‌ಬರ್ಗ್ ಪ್ರತಿಕ್ರಿಯಿಸಿ, “ತಪ್ಪು ಮಾಹಿತಿಗಳ ಕುರಿತು ಸ್ಟೋರಿ ಕಿಲ್ಲರ್ಸ್ ಯೋಜನೆಯಲ್ಲಿ ಬಹಿರಂಗವಾಗುತ್ತಿರುವ ಸಂಗತಿಗಳು ನವೀನವಾಗಿದೆ” ಎಂದಿದ್ದಾರೆ.

“ನಾಗರಿಕ ಸಮಾಜವು ಈ ಆನ್‌ಲೈನ್ ವೇದಿಕೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಪುನಾ ರಚಿಸದ ಹೊರತು, ಈ ವೇದಿಕೆಗಳನ್ನು ಹೊಣೆಗಾರರನ್ನಾಗಿ ಮಾಡದ ಹೊರತು, ಅಂತಹ ತಪ್ಪು ಮಾಹಿತಿಯ ಪ್ರಚಾರಗಳಿಗೆ ಯಾರಾದರೂ ಬಲಿಯಾಗಬಹುದೆಂಬ ಭವಿಷ್ಯವನ್ನು ನಾವು ನೋಡುತ್ತಿದ್ದೇವೆ” ಎಂದಿದ್ದಾರೆ ಗ್ರಿನ್‌ಬರ್ಗ್.

ಈ ಸುಳ್ಳು ಸುದ್ದಿಗಳಿಂದಾಗಿ ವಿಶೇಷವಾಗಿ ಜಗತ್ತಿನಾದ್ಯಂತ ಮಹಿಳಾ ಪತ್ರಕರ್ತರು ಟಾರ್ಗೆಟ್ ಆಗಿದ್ದಾರೆ. ರೆಸ್ಸಾ ಅವರು ತಮ್ಮ ‘ರಾಪ್ಲರ್’ ಡಿಜಿಟಲ್‌ ವೇದಿಕೆಯ ಮೂಲಕ ಮಾಡಿದ ವರದಿಗಳ ಕಾರಣಕ್ಕೆ ಟ್ರೋಲ್ ಆಗಿದ್ದಾರೆ.

‘ಫಿಲಿಪೈನ್ಸ್‌ನ ಮುಕ್ತ ಪತ್ರಿಕಾ ಮುಖ’ ಎಂದೇ ಖ್ಯಾತರಾಗಿರುವ ರೆಸ್ಸಾ, ತೆರಿಗೆ ವಂಚನೆ ಆರೋಪಗಳಿಂದ ಖುಲಾಸೆಗೊಂಡರು, ಒಂದು ಪ್ರಕರಣದಲ್ಲಿ ಅವರು ಕಿರುಕುಳ ಎದುರಿಸಿದ್ದಾರೆ. ಫಿನ್‌ಲ್ಯಾಂಡ್‌ನ ಪತ್ರಕರ್ತೆ ಜೆಸ್ಸಿಕ್ಕಾ ಅರೋ ಅವರು ಫೇಕ್‌ನ್ಯೂಸ್‌ಗಳ ದಾಳಿಗೆ ಗುರಿಯಾಗಿದ್ದಾರೆ. ಹೀಗೆ ಸುಳ್ಳು ಸುದ್ದಿಗಳಿಂದ ತೊಂದರೆಗೊಳಗಾದ ಪತ್ರಕರ್ತರ ಕುರಿತು ‘ಫಾರ್ಬಿಡನ್‌ ಸ್ಟೋರೀಸ್‌’ ಸರಣಿ ತನಿಖಾ ವರದಿಗಳನ್ನು ಪ್ರಕಟಿಸುತ್ತಿದೆ.

ಮಾಹಿತಿ ಕೃಪೆ: ದಿ ಗಾರ್ಡಿಯನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಿರಣ್ ರಿಜಿಜು ‘ಸೇಫ್‌’ವಾದ ಅಲ್ಲಗಳೆದ ಸರಣಿ ಮುಸ್ಲಿಂ ವಿರೋಧಿ ಹಿಂಸಾಚಾರಾಗಳು

ಜೂನ್ 15, 2026ರಂದು ಪ್ರಕಟಗೊಂಡ ಇಂಡಿಯನ್ ಎಕ್ಸ್‌ಪ್ರೆಸ್‌ನ 'ಐಡಿಯಾ ಎಕ್ಸ್‌ಚೇಂಜ್' ಕಾರ್ಯಕ್ರಮದ ಸಂದರ್ಶನವೊಂದರಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, “ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿಲ್ಲ ಎಂದು ಹೇಳುವ ಮೂಲಕ ನೀವು ದೇಶದ ಚಾರಿತ್ರ್ಯಕ್ಕೆ...

ರಾಮ ಮಂದಿರ ದೇಣಿಗೆ ದುರುಪಯೋಗ ವಿವಾದ; ಪ್ರಾಥಮಿಕ ವರದಿ ಸಲ್ಲಿಸಿದ ಎಸ್‌ಐಟಿ

ಅಯೋಧ್ಯೆಯ ರಾಮ ಮಂದಿರದಲ್ಲಿ ಸ್ವೀಕರಿಸಿದ ದೇಣಿಗೆಯ ದುರುಪಯೋಗದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಜೂನ್ 23 ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿದೆ...

ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ನೋಟಿಸ್ ಜಾರಿ ಮಾಡಿದ ಕಲ್ಕತ್ತಾ ಹೈಕೋರ್ಟ್

ಭವಾನಿಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ (TMC) ನಾಯಕಿ ಮಮತಾ ಬ್ಯಾನರ್ಜಿ ಸಲ್ಲಿಕೆ ಮಾಡಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ...

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...