Homeಮುಖಪುಟಜಾಗತಿಕ ಸನ್ನಿವೇಶದಲ್ಲಿ ಗೌರಿಯವರ ಹುತಾತ್ಮತೆ : ಬಿನು ಮ್ಯಾಥ್ಯೂ

ಜಾಗತಿಕ ಸನ್ನಿವೇಶದಲ್ಲಿ ಗೌರಿಯವರ ಹುತಾತ್ಮತೆ : ಬಿನು ಮ್ಯಾಥ್ಯೂ

- Advertisement -
- Advertisement -

ಕೇರಳದ ಬಿನು ಮ್ಯಾಥ್ಯೂ ‘ಕೌಂಟರ್ ಕರೆಂಟ್ಸ್’ ವೆಬ್‍ಸೈಟ್‍ನ ಸ್ಥಾಪಕರಲ್ಲೊಬ್ಬರು. ವೆಬ್‍ಲೋಕ ಇನ್ನೂ ತೆರೆಯುತ್ತಿರುವಾಗಲೇ ಇಂಗ್ಲಿಷಿನಲ್ಲಿ ದೇಶದ ಪರ್ಯಾಯ ದನಿಗಳಿಗೆ ಅದರಲ್ಲಿ ವೇದಿಕೆಯನ್ನು ಕಲ್ಪಿಸಿದ್ದು ಕೌಂಟರ್‍ಕರೆಂಟ್ಸ್. ಬಹು ಹಿಂದೆಯೇ ಜನಪರ ಆಂದೋಲನಗಳ ಕುರಿತ ಮಾಹಿತಿ ಮತ್ತು ಚಿಂತನೆಗಳು ಆ ವೆಬ್‍ತಾಣದಲ್ಲಿ ಜಗತ್ತಿನ ಓದುಗರಿಗೆ ಲಭ್ಯವಿದ್ದವು. 2001ರಿಂದ ಇಲ್ಲಿಯವರೆಗೆ ನಿರಂತರವಾಗಿ ಅದನ್ನು ನಡೆಸಿಕೊಂಡು ಬಂದಿದ್ದು ಬಿನು ಮ್ಯಾಥ್ಯೂ.ಈ ಲೇಖನವನ್ನು ಕನ್ನಡಕ್ಕೆ ಶಂಕರ ಎನ್. ಕೆಂಚನೂರುಅವರು ಅನುವಾದಿಸಿದ್ದಾರೆ

ಭಯೋತ್ಪಾದನೆಯೆದುರಿನ ಹೋರಾಟದಲ್ಲಿ ನಾವು ಗೌರಿ ಲಂಕೇಶ್ ಅವರನ್ನು ಕಳೆದುಕೊಂಡಿದ್ದೇವೆ. ಈ ಭಯೋತ್ಪಾದನೆಗೆ ಒಂದು ಸಂದರ್ಭವಿದೆ. ಈ ಲೇಖನದಲ್ಲಿ ನಾನು ಗೌರಿಯ ಹುತಾತ್ಮತೆಯನ್ನು ಆ ಸಂದರ್ಭದ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

ನಾನು 2002ರಲ್ಲಿ ಕೌಂಟರ್ ಕರೆಂಟ್ಸ್.ಆರ್ಗ್ (Counter Currents.org) ಪ್ರಾರಂಭಿಸಿದಾಗ, ವಾತಾವರಣದಲ್ಲಿನ CO2 ಮಟ್ಟವು 370 ಪಿ.ಪಿ.ಎಮ್ (ಪಾರ್ಟ್ಸ್ ಪರ್ ಮಿಲಿಯನ್) ಇತ್ತು. 17 ವರ್ಷಗಳ ನಂತರ ಈಗ ಅದು 420 ಪಿಪಿಎಂ ತಲುಪಿದೆ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ CO2 ಮತ್ತು CO2 ಸಮಾನ ಅಂಶಗಳು 496 ಪಿ.ಪಿ.ಎಮ್ ತಲುಪಿದೆ ಎಂದು ಇತ್ತೀಚೆಗೆ ನಾಸಾ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ವಾತಾವರಣದಲ್ಲಿ CO2 ಮಟ್ಟವು ವಾರ್ಷಿಕ 3 ಪಿ.ಪಿ.ಎಮ್‍ನಷ್ಟು ಹೆಚ್ಚುತ್ತಿದೆ. ಹೆಚ್ಚುತ್ತಿರುವ ತಾಪಮಾನದಿಂದ ಭೂಮಿಯನ್ನು ಉಳಿಸಲು ನಮಗೆ ಕೇವಲ ಒಂದು ದಶಕವಷ್ಟೇ ಉಳಿದಿದೆಯೆಂದು ಹವಾಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇಂಟರ್‍ನ್ಯಾಷನಲ್ ಎನರ್ಜಿ ಏಜೆನ್ಸಿ (ಐ.ಇ.ಎ) 2010ರಲ್ಲಿ ಪ್ರಕಟಿಸಿದ ತನ್ನ ‘ವರ್ಲ್ಡ್ ಪವರ್ ಔಟ್‍ಲುಕ್’ ಎಂಬ ವರದಿಯು ಆಶ್ವರ್ಯಗೊಳಿಸುವ ಅಂಶಗಳನ್ನು ಬಹಿರಂಗ ಮಾಡಿದೆ. ಸಾಂಪ್ರದಾಯಿಕ ತೈಲ ಅಂದರೆ, ಸುಲಭವಾಗಿ ಹೊರತೆಗೆಯಬಹುದಾದ ತೈಲದ ಉತ್ಪಾದನಾ ಮಟ್ಟವು 2005ರ ಆಸುಪಾಸಿನಲ್ಲಿ ಗರಿಷ್ಠ ಉತ್ಪಾದನೆಯನ್ನು ತಲುಪಿತ್ತು.

ಅದು ಆಧುನಿಕ ನಾಗರಿಕತೆಯನ್ನು ನಿರ್ಮಿಸಿದ ಸುಲಭವಾಗಿ ಲಭ್ಯವಿರುವ ತೈಲವೆನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಅಂದರೆ ತೈಲವು ಮುಗಿದುಹೋದ ನಂತರ, ನಾಗರಿಕತೆಯೂ ಸಹ ಮುಗಿದುಹೋಗುತ್ತದೆ. ಅಂದರೆ ತಮ್ಮದಲ್ಲದ ತಪ್ಪಿಗಾಗಿ ನೂರಾರು ಕೋಟಿ ಜನರು ನಾಶವಾಗುತ್ತಾರೆ. ಆಧುನಿಕ ನಾಗರಿಕತೆಯನ್ನು ಸಾಧ್ಯವಾಗಿಸುವ ನೀರು ಮತ್ತು ಖನಿಜಗಳಂತಹ ನೈಸರ್ಗಿಕ ಸಂಪನ್ಮೂಲಗಳ ವಿಷಯದಲ್ಲೂ ಹೀಗೇ ಆಗುತ್ತಿದೆ.

ಈಗ ನಾವು ನಮ್ಮ ಚರ್ಚೆಯ ಚೌಕಟ್ಟನ್ನು ಸಿದ್ಧಪಡಿಸಿದ್ದಾಯಿತು, ಮುಂದಿನ ಭವಿಷ್ಯದ ಬಗ್ಗೆ ಅವಲೋಕಿಸೋಣ. ನಾವು ಅವನತಿಯ ಹಾದಿಯಲ್ಲಿ ಸಾಗುತ್ತಿದ್ದೇವೆ.

ಪರಿಸರ ಕುಸಿತ

ಪ್ಯಾರಿಸ್ ಒಪ್ಪಂದದಲ್ಲಿನ ಪ್ರಕಾರ ಇಂಗಾಲದ ಹೊರಸೂಸುವಿಕೆಯ ಕಡಿತದ ಪ್ರಮಾಣವನ್ನು ಸಾಧಿಸಿದರೂ ಸಹ, ವಿಜ್ಞಾನಿಗಳು `ಹಾಟ್ ಹೌಸ್ ಅರ್ಥ್”ಎಂದು ಕರೆಯುವ ಪರಿಸ್ಥಿತಿಗಳು ಭೂಮಿಗೆ ಪ್ರವೇಶಿಸುವ ಅಪಾಯವಿದೆ ಎಂದು ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು ಪ್ರಕಟಿಸಿದ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (ಪಿ.ಎನ್.ಎ.ಎಸ್) ವರದಿಯು ಸಾರಿ ಹೇಳಿದೆ. “ಹಾಟ್ ಹೌಸ್ ಅರ್ಥ್” ಹವಾಮಾನವು ದೀರ್ಘಾವಧಿಯಲ್ಲಿ ಕೈಗಾರಿಕಾ ಪೂರ್ವದ ತಾಪಮಾನಕ್ಕಿಂತ ಜಾಗತಿಕ ಸರಾಸರಿ 4-5 ಡಿಗ್ರಿ ಸೆಂಟಿಗ್ರೇಡ್‍ಗಳಷ್ಟು ತಾಪಮಾನ ಏರಿಕೆಯಾಗಲಿದೆ ಮತ್ತು ಸಮುದ್ರ ಮಟ್ಟವು ಇಂದಿನ ಮಟ್ಟಕ್ಕಿಂತ 10-60 ಮೀ ಏರಿಕೆಯಾಗಲಿದೆ. “ಈ ಸನ್ನಿವೇಶವನ್ನು ತಪ್ಪಿಸಬೇಕೆಂದರೆ ಭೂ-ಪರಿಸರದ ಶೋಷಣೆಯಲ್ಲಿ ತೊಡಗಿರುವ ಮಾನವ ಕ್ರಿಯೆಗಳನ್ನು ಬದಲಿಸಿ ಭೂ-ಪರಿಸರ ವ್ಯವಸ್ಥೆಯ ಉಸ್ತುವಾರಿ ಕಡೆಗೆ ಮರುನಿರ್ದೇಶಿಸುವ ಅಗತ್ಯವಿದೆ” ಎಂದು ವರದಿ ಎಚ್ಚರಿಸಿದೆ. ಭೂಮಿಯ ಮೇಲಿನ ಬಹುತೇಕ ಪ್ರಭೇದಗಳು ಹಾಗೂ ಮಾನವ ಪ್ರಭೇದದ ಬಹುತೇಕರ ಮೇಲೆ ಈ ಹಾಟ್ ಹೌಸ್ ಅರ್ಥ್‍ನ ದುಷ್ಪರಿಣಾಮಗಳು ಉಂಟಾಗಲಿವೆ.

ಆರ್ಥಿಕ ಕುಸಿತ

ನಮ್ಮ ಭೂಮಿಯು ವೆಂಟಿಲೇಟರ್‍ನಲ್ಲಿ ಇರುವುದರಿಂದ ಮತ್ತು ನಮ್ಮ ಹೆಚ್ಚಿನ ಸಂಪನ್ಮೂಲಗಳು ಖಾಲಿಯಾದ ನಂತರ ನಾವು ಆರ್ಥಿಕ ಕುಸಿತವನ್ನು ಎದುರಿಸಲಿದ್ದೇವೆ. ಇಲ್ಲಾ ಇಲ್ಲ. ನಾವು ಈಗಾಗಲೇ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದೇವೆ.

ಸಾಮಾಜಿಕ ಕುಸಿತ

ಮೇಲೆ ತಿಳಿಸಿದ ಎರಡೂ ಕುಸಿತಗಳು ಊಹಿಸಲಾಗದ ಪ್ರಮಾಣದಲ್ಲಿ ಸಾಮಾಜಿಕ ಕುಸಿತವನ್ನು ತರುತ್ತವೆ. ಹೌದು, ಇದು ಈಗಾಗಲೇ ನಡೆಯುತ್ತಿದೆ. ಈ ಕುಸಿತವು ಸಾಮಾಜಿಕ ಅಸಹನೆ, ದ್ವೇಷ, ಯುದ್ಧಗಳು, ಗಲಭೆಗಳು ಮತ್ತು ತಪ್ಪಿಸಬಹುದಾದ ನೂರಾರು ಕೋಟಿ ಸಾವುಗಳಿಗೆ ಸಾಕ್ಷಿಯಾಗಲಿದೆ. ಇದು ಜನಸಂಖ್ಯೆಯ ಪ್ರಬಲ ವಿಭಾಗಗಳು ಸರ್ವಾಧಿಕಾರಿಗಳನ್ನು ಬಯಸುವ ಪ್ರವೃತ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಾವು ಈಗಾಗಲೇ ಇದಕ್ಕೆ ಸಾಕ್ಷಿಯಾಗಿದ್ದೇವೆ. ಇದು ಭಾರತದಲ್ಲಿ ನರೇಂದ್ರ ಮೋದಿ ರೂಪದಲ್ಲಿದ್ದರೆ, ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಆಗಿದೆ. ಈ ಪ್ರವೃತ್ತಿ ಮುಂದುವರೆಯಲಿದೆ ಮಾತ್ರವಲ್ಲ, ಪ್ರಪಂಚದ ಇತರ ಭಾಗಗಳಿಗೂ ಹರಡಲಿದೆ. ಗೌರಿ ಲಂಕೇಶ್ ಅವರ ಜೀವವನ್ನು ತೆಗೆದುಕೊಂಡ ಸನಾತನ ಸಂಸ್ಥೆಯಂತಹ ದ್ವೇಷದ ಬೀಜಗಳು ಅನೇಕ ಕಡೆಗಳಲ್ಲಿ ಮೊಳಕೆಯೊಡೆಯುವುದನ್ನು ನಾವು ನೋಡಲಿದ್ದೇವೆ. ಮುಂದಿನ ದಿನಗಳಲ್ಲಿ ಅನೇಕರು ಗೌರಿಯ ಸ್ಥಿತಿಯನ್ನು ಎದುರಿಸಬಹುದೆಂಬ ಆತಂಕ ನನ್ನನ್ನು ಕಾಡುತ್ತಿದೆ.

ನಾವು ಏನು ಮಾಡಬಹುದು?

ಶಿಕ್ಷಣ, ಸಂಘಟನೆ, ಆಂದೋಲನ ಮತ್ತು ಕ್ರಿಯೆಗಿಳಿಯುವುದು!

ಪ್ರತಿರೋಧದ ಬೀಜಗಳು ಪ್ರಪಂಚದ ಅನೇಕ ಭಾಗಗಳಲ್ಲಿ ಚಿಗುರೊಡೆಯುತ್ತಿವೆ. ಅವುಗಳಲ್ಲಿ ಪ್ರಮುಖವಾದುದು ಸ್ವೀಡಿಷ್ ಹುಡುಗಿ ಗ್ರೆಟಾ ಥನ್ಬರ್ಗ್ ನೇತೃತ್ವದ ಶಾಲಾ ಮುಷ್ಕರ. ಕೊನೆಗೆ, ಮುಂದಿನ ಪೀಳಿಗೆಯವರು ಹಳೆಯ ತಲೆಮಾರುಗಳ ಲಾಭಕ್ಕಾಗಿ ಬೆಲೆ ತೆರಲಿದ್ದಾರೆ. ಎಕ್ಸ್ಟಿಂಕ್ಷನ್ ರೆಬೆಲಿಯನ್ (ಅಳಿವಿನಂಚಿನ ಬಂಡಾಯ) ಯುರೋಪಿನಲ್ಲಿ ಜನಪ್ರಿಯವಾಗುತ್ತಿರುವ ಮತ್ತೊಂದು ಪ್ರತಿಭಟನಾ ಕ್ರಮವಾಗಿದೆ. ಟ್ರಾನ್ಸಿಷನ್ ಟೌನ್ಸ್ (ಪರಿವರ್ತನಾ ಪಟ್ಟಣಗಳು) ಪ್ರಪಂಚದಾದ್ಯಂತ ಜನಪ್ರಿಯವಾಗುತ್ತಿರುವ ಇನ್ನೊಂದು ಪರ್ಯಾಯ ಮಾರ್ಗವಾಗಿದೆ.

ಜಾಗತಿಕ ತಾಪಮಾನ ಏರಿಕೆ, ಸಂಪನ್ಮೂಲ ಬಿಕ್ಕಟ್ಟು, ಪರಿಸರ ನಾಶಗಳು ನಮ್ಮನ್ನು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕುಸಿತದ ಹಾದಿಗೆ ಕೊಂಡೊಯ್ದಿರುವ ಈ ಸಂದರ್ಭದಲ್ಲಿ ನಮ್ಮ ಪತ್ರಿಕೋದ್ಯಮ, ಕಲೆ, ಸಾಹಿತ್ಯ ಇತ್ಯಾದಿಗಳು ನಡೆದಿರುವ ಹಾದಿಯನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಈ ಕಟು ವಾಸ್ತವಗಳನ್ನು ಗಣನೆಗೆ ತೆಗೆದುಕೊಳ್ಳದ ಎಲ್ಲವೂ ನನಗೆ ಶೂನ್ಯ ಎನಿಸುತ್ತದೆ. ಪ್ರಸ್ತುತದಲ್ಲಿ ನಡೆಯುತ್ತಿರುವುದು ಮಾತ್ರ ಕುರುಡರು ಮತ್ತು ಆನೆಯ ಕತೆಯಂತೆ ಕಾಣುತ್ತಿದೆ.

ನಾವೆಲ್ಲರೂ ನಿಧಾನವಾಗಿ ಕಾವೇರುತ್ತಿರುವ ನೀರಿನಲ್ಲಿ ಇರುವ ಕಪ್ಪೆಗಳು. ನಿಜವಾಗಿಯೂ ಏನಾಗುತ್ತಿದೆ ಎಂಬುದು ನಮಗೆ ತಿಳಿಯುವಷ್ಟರಲ್ಲಿ ಬಹಳ ತಡವಾಗಿರುತ್ತದೆ. ನಿಧಾನವಾಗಿ ಬಿಸಿಯೇರುತ್ತಿರುವ ನೀರಿನಿಂದ ಹೊರಬಂದು ನಾವು ಎದುರಿಸುತ್ತಿರುವ ವಿಪತ್ತನ್ನು ಅರಿತುಕೊಳ್ಳಲೇಬೇಕಾದ ಸಮಯವಿದು. ನಮ್ಮ ಕತೆಗಳನ್ನು ಹೇಳಲು, ನಮ್ಮ ಪ್ರತಿರೋಧವನ್ನು ಸಂಘಟಿಸಲು ನಾವು ಸಂಪೂರ್ಣ ಹೊಸ ಮಾದರಿಗಳನ್ನು ಹುಟ್ಟುಹಾಕದಿದ್ದರೆ ನಮಗೆ ಉಳಿಗಾಲವಿಲ್ಲ.

ಹಳೆಯ ಜಗತ್ತು ಸತ್ತು ಬಿದ್ದಿದೆ. ಹೊಸ ಪ್ರಪಂಚದ ಹುಟ್ಟಿನ ಹೆರಿಗೆ ನೋವುಗಳನ್ನು ನಾವು ಆಲಿಸುತ್ತಿದ್ದೇವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...