Homeಮುಖಪುಟಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಇಂದು ಖ್ಯಾತ ಕಾದಂಬರಿಕಾರಿ ಜಾರ್ಜ್ ಆರ್ವೆಲ್ ಹುಟ್ಟಿದ ದಿನ. ಅವರ ಎರಡು ಕೃತಿಗಳನ್ನು ಇಂದಿನ ಭಾರತದ ಸಂದರ್ಭಕ್ಕೆ ಅನ್ವಯಿಸಿದ್ದಾರೆ ಡೇಟಾಮ್ಯಾಟಿಕ್ಸ್‌ರವರು.

- Advertisement -
- Advertisement -

ನಾವು ಸಣ್ಣವರಿದ್ದಾಗ ಭಾರತದ ಸ್ವರೂಪದ ಬಗ್ಗೆ ಒಂದು ಹಾಡು ಹೇಳತಿದ್ದೆವಿ- ಕೇಸರಿ – ಬಿಳಿ – ಹಸಿರು ಬಣ್ಣ ನಡುವೆ ಚಕ್ರವು ಅಂತ ಅದರಾಗ ಒಂದು ಸಾಲು ಇತ್ತು.

ಈ ಬಣ್ಣಗಳ ನಡುವೆ ರಾಜಕೀಯ ಹುಟ್ಟತದ ಅಂತ ನಮಗ ಗೊತ್ತಿರಲಿಲ್ಲ. ಇದರ ಬಗ್ಗೆ ಸ್ವಲ್ಪ ತಿಳಕೊಳ್ಳೋಣ.

ಮೊಟ್ಟ ಮೊದಲಿಗೆ, ಅಂದರ ಲಕ್ಷಾಂತರ ಮಂದಿಗೆ ಕೊರೋನಾ ಬಂದು, ಸಾವಿರಾರು ಜನ ಸತ್ತ ಮ್ಯಾಲೆ, ಭಾರತ ಸರಕಾರದ ಕಣ್ಣು ತೆರದು ಲಾಕಡೌನು (ಕೀಲಿ ಕಿಟಕ್) ಘೋಷಿಸಿತು. ಆಮ್ಯಾಲೆ ದೇಶದ 700 ಜಿಲ್ಲೆಗಳನ್ನ ಕೆಂಪು, ಕಿತ್ತಳೆ ಹಾಗೂ ಹಸಿರು ಅಂತ ಹೇಳಿ ವಿಭಜನೆ ಮಾಡಿತು.

ಅದರ ಹಿಂದಿನ ಕಾರಣ ಅಂದರೆ 1. ಯಾವುದೇ ಜಿಲ್ಲೆಯೊಳಗ ಒಂದು ಕೊರೊನಾ ಪ್ರಕರಣ ಇದ್ದರೂ ಅದು ಕೆಂಪು. 2. ಯಾವುದೇ ಪ್ರಕರಣ ಇರದಿದ್ದರ ಅದು ಹಸಿರು ಹಾಗೂ 3. ಕಳೆದ 14 ದಿನದಲ್ಲಿ ಒಂದೂ ಹೊಸ ಪ್ರಕರಣ ಇರಲಿಲ್ಲ ಅಂದರ ಅದು ಕಿತ್ತಳೆ.

ಕೆಂಪು ಜಿಲ್ಲೆಯೊಳಗ ಯಾವುದೇ ಆರ್ಥಿಕ ಚಟುವಟಿಕೆ ಇಲ್ಲ, ಓಡಾಟ ಇಲ್ಲ. ಕಿತ್ತಳೆಯೊಳಗ ಬಹಳ ಮಟ್ಟಿಗೆ ಪ್ರತಿಬಂಧ ಹಾಗೂ ಹಸಿರಿನೊಳಗ ಎಲ್ಲ ರೀತಿಯ ಚಟುವಟಿಕೆ ಹಾಗೂ ಓಡಾಟ ಮುಕ್ತ.

ಆದರ ಸಮಸ್ಯಾ ಏನಪಾ ಅಂದರ ಎಂದಿನಂತೆ ಕೇಂದ್ರ ಸರಕಾರ ಕೀಲಿ ಕಿಟಕ್ ಆಗಲಿ, ಇತರ ಪರಿಹಾರ ಕ್ರಮಗಳನ್ನಾಗಲೀ ಸಾರಾಸಾರ ವಿಚಾರ ಮಾಡಿ ಮಾಡಿರಲಿಲ್ಲ.

ಇದರಿಂದ ದೊಡ್ಡ ಆಭಾಸ ಆತು. ಒಂದು ಸಾವಿರ ಕೇಸು ಇರೋ ಮುಂಬೈ ಕಿತ್ತಳೆ ವಲಯದಾಗ ಬಂದು, ಕರ್ನಾಟದ 14 ಜಿಲ್ಲೆ ಗಳು ಕೆಂಪು ವಲಯದಾಗ ಬಂದವು.

ಕೇಂದ್ರದ ಆಳುವ ಪಕ್ಷಕ್ಕೆ ಅತಿ ಹೆಚ್ಚು ದೇಣಿಗೆ ಕೊಟ್ಟ ಖಾಸಗಿ ಕಂಪನಿಗಳು ಸರಕಾರದ ಮೇಲೆ ಒತ್ತಡ ಹಾಕಿದರು. ಮುಂಬೈ- ಅಹಮದಾಬಾದು- ಸುರತ ಮುಂತಾದ ಕಡೆ ಕಾರಖಾನೆ- ಅಂಗಡಿ ತೆಗೆಯಬಹುದಾದರೆ ನಮ್ಮಲ್ಲೆ ಯಾಕೆ ಬೇಡ ಅಂತ ತಕರಾರು ಮಾಡಿದರು. ಅವರು ತಮ್ಮ ತಮ್ಮ ನೌಕರರಿಗೆ ಸಂಬಳ ಕೊಟ್ಟಿದ್ದರೋ ಇಲ್ಲೋ, ಆದರೆ ಪಿಎಂ ಕೇರ್ಸ ಅನ್ನೋ ಹುಂಡಿಗೆ ರೊಕ್ಕ ಹಾಕಿ ಭಕ್ತಿಯಿಂದ ಕೈ ಮುಗದಿದ್ದರು.

ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದ್ದಕ್ಕ ಜನರಿಗೆ ತೊಂದರೆ ಆಗಿತ್ತು. ಸರಕಾರಕ್ಕೆ ತೆರಿಗೆ ಸಿಗಲಾರದ ಹಂಗ ಆಗಿತ್ತು. ಸರಕಾರಿ ನೌಕರರಿಗೆ ಸಂಬಳ ತಡಾ ಆಗಲಿಕ್ಕೆ ಸುರು ಆಗಿತ್ತು. ವಿಶ್ವಬ್ಯಾಂಕು, ಮೋಡಿ, ಮತ್ತು ಇತರ ಸಂಸ್ಥೆಗಳು ಭಾರತದ ನಿವ್ವಳ ಉತ್ಪನ್ನ ಶೇಕಡಾ 1-2 ರ ಒಳಗೆ ಇಳಿಯಲಿದೆ ಅಂತ ಭವಿಷ್ಯ ಹೇಳಲಿಕ್ಕೆ ಸುರು ಮಾಡಿದರು.

ಅಷ್ಟರೊಳಗೆ ಪಂತ ಪ್ರಧಾನ ನಮೋ ಅವರು ಮೂರನೇ ಕೀಲಿ ಕಿಟಕ್ ಘೋಷಣೆ ಮಾಡಿದ್ದರು. ಇನ್ನು ಅದನ್ನು ಹೆಂಗ ಸರಿ ಮಾಡಬೇಕು ಅಂತ ಯಾರಿಗೂ ಗೊತ್ತಿರಲಿಲ್ಲ.

ಎಪ್ರಿಲ 30 ರಂದು ಕೇಂದ್ರದ ಕೆಲವು ಅಧಿಕಾರಿಗಳು ಒಂದು ಸಭೆ ನಡೆಸಿದರು. ಅದರಾಗ ಈ ಹಿಂದೆ ಮಾಡಿದ ಕಲರ ಕೋಡಿಂಗ (ವರ್ಣಾಧಾರಿತ ವಿಭಜನೆ) ಸರಿ ಇಲ್ಲ. ಅದನ್ನ ಬದಲಾಯಿಸಬೇಕು. ಬರೇ ಪ್ರಕರಣ ಪತ್ತೆ ಆಗೋದು ಮುಖ್ಯ ಅಲ್ಲ. ಅದರ ಸಂಖ್ಯೆ ಎಷ್ಟು ದಿನದೊಳಗ ದುಪ್ಪಟ್ಟು ಆಗತಾವು, ಎಷ್ಟು ಜನ ಗುಣ ಆಗಿದ್ದಾರ, ರಾಜ್ಯ ಹಾಗೂ ಜಿಲ್ಲೆ ಆಡಳಿತ ಎಷ್ಟರ ಮಟ್ಟಿಗೆ ತಯಾರು ಆಗಿದಾರು ಮುಂತಾದ ವಿಷಯಗಳನ್ನ ಆಧರಿಸಿ ಕೆಂಪು ನಿರ್ಧರಿಸೋಣ. ಕಳೆದ 21 ದಿನದೊಳಗ ಪ್ರಕರಣ ಇಲ್ಲಾ ಅಂದರ ಅದು ಹಸಿರು ಅಂತ ಅನ್ನೋಣ. ಇವು ಎರಡೂ ಇಲ್ಲದವು ಕಿತ್ತಳೆ ಜಿಲ್ಲೆಗಳು ಅಂತ ಆಗಲಿ ಅಂತ ಹೇಳಿದರು.

ರಾಜ್ಯ ಸರಕಾರಗಳು ಕೆಂಪು- ಕಿತ್ತಳೆ ಇದ್ದದ್ದನ್ನು ಹಸಿರು ಮಾಡಬಹುದು. ಆದರೆ ಉಲ್ಟಾ ಮಾಡಲು ಬರೋದಿಲ್ಲ. ಪಟ್ಟಿ ಬದಲಾವಣೆ ಮಾಡೋದಾದರ ನಾವು ಮಾಡತೇವಿ ಅಂದರು. ಕರ್ನಾಟಕದಲ್ಲಿ ಇದ್ದ 14 ಕೆಂಪು ಜಿಲ್ಲೆಗಳ ಸಂಖ್ಯೆ ಮೂರಕ್ಕೆ ಇಳಿಯಿತು.

ಹಿಂಗಾಗಿ ಮೂರನೇ ಹಂತದ ಲಾಕ್ ಡೌನ ಇದ್ದರೂ ಕೂಡ ಕಾರ್ಖಾನೆ- ಅಂಗಡಿ ತೆರೆಯಲಾಯಿತು. ಅತಿ ಕಮ್ಮಿ ಪ್ರಕರಣ ಇದ್ದಾಗ ಬಂದು ಮಾಡಿದ ಅಂಗಡಿಗಳು ಅತಿ ಹೆಚ್ಚು ಪ್ರಕರಣಗಳು ದಾಖಲಾದ ಮೇಲೆ ತೆರೆದುಕೊಂಡವು. ಇದೇ ನಿರ್ಧಾರ ತೊಗೊಳ್ಳೋದು ಆಗಿದ್ದರ ಇಷ್ಟೆಲ್ಲಾ ಸರ್ಕಸ್ಸು ಯಾಕ ಮಾಡಬೇಕಾಗಿತ್ತು. ಮೊದಲನೇ ದಿವಸವೇ ಈ ನಿರ್ಧಾರ ತೊಗೊಂಡಿದ್ದರ ಅಷ್ಟೊಂದು ಆರ್ಥಿಕ ಹಿನ್ನಡೆ ಆಗತಿರಲಿಲ್ಲ.

ಈ ಬಣ್ಣಗಳ ರಾಜಕಾರಣಕ್ಕೆ ವರ್ಣಕಾರಣ ಅನ್ನಬಹುದು. ಯಾಕ ಹಿಂಗಂದರ, ಸರಕಾರದ ನಿರ್ಧಾರಗಳು ವಿಜ್ಞಾನಿಗಳ ಮಾತು ಕೇಳಿ ನಡೆಯುತ್ತಿಲ್ಲ. ಅವು ಕೆಲವು ಐಎಎಸ್ಸು ಅಧಿಕಾರಿಗಳು ಹಾಗೂ ಕೆಲವೇ ಕೆಲವು ರಾಜಕಾರಣಿಗಳ ಮನಸೋಇಚ್ಛಿ ನಿರ್ಧಾರಗಳು. ಇವುಗಳಿಂದ ಯಾರಿಗೂ ಸ್ಪಷ್ಟತೆ ಇಲ್ಲ. ಯಾರಿಗೂ ಇವು ಸರಿಯಾಗಿ ಅರ್ಥವಾಗಿಲ್ಲ. ಇವುಗಳ ಬಗ್ಗೆ ಯಾರೂ ವೈಯಕ್ತಿಯ ಜವಾಬುದಾರಿ ತೊಗೊಳ್ಳೋದಿಲ್ಲ. ಸಧ್ಯಕ್ಕಂತೂ ಈ ಮುಖ ಇಲ್ಲದ ನಿರ್ಧಾರಗಳಿಂದ ನಮಗ ಮುಕ್ತಿ ಇಲ್ಲವೇನೋ.

ದೂರದರ್ಶಿ ಸಾಹಿತಿ ಭವಿಷ್ಯದಲ್ಲಿ ನಡಿಯೋದನ್ನು ಇಂದೇ ನಡೆದಂತೆ ಚಿತ್ರಿಸಿದ ಜಾರ್ಜ್ ಆರ್ವೆಲ್ ಅವರ ಅತಿ ಜನಪ್ರಿಯ ಕಾದಂಬರಿಯ ಹೆಸರು ʻ1984ʼ. ಅದರೊಳಗೆ ಕೆಲವು ಜನ ತಮ್ಮ ದೇಶದ ಜನರನ್ನ ಕತ್ತಲೆಯೊಳಗೆ ಇಟ್ಟು ಸರಕಾರ ನಡೆಸತಾರ. ಕಾಲ್ಪನಿಕ ʻಹಿರಿಯ ಅಣ್ಣʼನ ಹೆದರಿಕೆಯಿಂದ ಜನರ ಮೇಲೆ ದಬ್ಬಾಳಿಕೆ ನಡಸತಾರ.

ಅದೇ ಲೇಖಕನ ಇನ್ನೊಂದು ಕಾದಂಬರಿ ʻಎನಿಮಲ್ ಫಾರ್ಮʼ.

ರೈತನೊಬ್ಬನ ಮನೆಯ ಹಿತ್ತಲದಲ್ಲಿ ನಡೆಯುವ ಕತೆ ಇದು. ಬರೀ ತಿಂದುಂಡು ಹಾಯಾಗಿ ಮಲಗುವ ಚಾಲಾಕಿ ಹಂದಿಗಳು ಸರಕಾರ ರಚಿಸಿ ತಾವೇ ರಾಜರಾಗಿ ಬಿಡತಾರ. ರೈತನ ಹೊಲದಲ್ಲಿ ಕಷ್ಟಪಟ್ಟು ದುಡಿಯುವ ಕುದುರೆಗಳನ್ನು ಕಾರ್ಮಿಕರನ್ನಾಗಿ ಮಾಡಿಕೊಳ್ಳತಾವು. ಆ ತೋಟದ ಮನೆಯಲ್ಲಿ ಒಂದು ಫಲಕ ಇರತೈತಿ. ಅದರ ಮೇಲೆ ಇವತ್ತಿನ ನೀತಿ- ನಿಯಮಗಳು ಅಂತ ಬರದಿರತಾವು. ಅದನ್ನ ಯಾರು ಬರದಿತಾರ ಅಂತ ಯಾರಿಗೂ ಗೊತ್ತಿರೋದಿಲ್ಲ. ಅದರಾಗ ಒಂದು – ಎರಡು ಅಂತ ಹೇಳಿ ನಿಯಮಗಳ ಪಟ್ಟಿನ ಇರತೈತಿ. ಅವನ್ನ ಎಲ್ಲ ಪ್ರಾಣಿಗಳು ಭಕ್ತಿಯಿಂದ ಪಾಲಿಸತಿರತಾವು.

ಆದರ ಅವರ ಮೇಲೆ ದ್ವೇಷ ಸಾಧಿಸೋ ದೃಷ್ಟಿಯಿಂದ ಆ ಹಂದಿಗಳು ಒಂದು ಸಂಚು ರೂಪಿಸತಾವು. ರಾತ್ರಿ ಎಲ್ಲರೂ ಮಲಗಿದಾಗ ಎದ್ದು ಬಂದು ಆ ಪಟ್ಟಿಯ ಕೊನೆಯ ನಿಯಮಗಳನ್ನ ಅಳಿಸಿ ಸಂಪೂರ್ಣ ತದ್ವಿರುದ್ಧ ವಾದ ನಿಯಮಗಳನ್ನ ಬರದು ಬಿಡತಾವು. ಮರು ದಿನ ಬೆಳಿಗ್ಗೆ ಎದ್ದು ನಿನ್ನೆ ಎಲ್ಲರೂ ನಿಯಮ ಉಲ್ಲಂಘಿಸಿದ್ದೀರಿ ಅಂತ ಹೇಳಿ ಶಿಕ್ಷೆ ಕೊಡತಾವು. ಉಳಿದ ಪ್ರಾಣಿಗಳು ʻಇಲ್ಲ. ನಾವು ಇದರಲ್ಲಿ ಬರೆದ ನಿಯಮಗಳನ್ನೇ ಪಾಲನೆ ಮಾಡಿದ್ದೇವೆʼ ಅಂತ ತಿರುಗಿ ವಾದ ಮಾಡಿದರೆ, ಎಲ್ಲಿದೆ ನೋಡಿ? ಇಲ್ಲಿರುವ ನಿಯಮವೇ ಬೇರೆ, ನೀವು ಮಾಡಿದ್ದೇ ಬೇರೆ ಅಂತ ಅವರನ್ನು ಹೆದರಿಸುತ್ತವೆʼ.

ಕೊನೆಗೂ ಇವತ್ತಿನ ನಿಯಮ ಏನು? ನಿನ್ನೆಯದು ಏನು? ನಾಳೆಯದು ಏನು ಅಂತ ಯಾರಿಗೂ ಸರಿಯಾಗಿ ಗೊತ್ತೇ ಆಗೋದಿಲ್ಲ. ಆ ಸಂಶಯ, ಅಸ್ಪಷ್ಟತೆ, ಸಂದೇಹ, ಅಪಾರದರ್ಶಕತೆಗಳ ವಾತಾವರಣದಲ್ಲಿಯೇ ಜೀವನ ಮುಂದುವರೆಯುತ್ತದೆ. ನಿಯಮ ಪಾಲಿಸುವರಿಗೂ, ಆರಕ್ಷಕರಿಗೂ, ನಿಯಮ ಮುರಿಯುವವರಿಗೂ, ಜನಸಾಮಾನ್ಯರಿಗೂ ಎಲ್ಲರಿಗೂ ಭಯದ ವಾತಾವರಣ ಇರುತ್ತದೆ.

ಇವತ್ತಿನ ಆಗುಹೋಗುಗಳು ನಮಗ ಎನಿಮಲ್ ಫಾರ್ಮಿನ ನೆನಪು ಮಾಡಿಕೊಡತಾವು. ಅಚ್ಛೇ ದಿನ್ ಹೋಗಲಿ, ಬೊಹುತ ಬೂರೆ ದಿನ ಆನೆವಾಲೆ ಹೈಂ ಅಂತ ಅನ್ನಿಸತೈತಿ.


ಇದನ್ನೂ ಓದಿ: ನಾವು ನಂಬರ್ ಒನ್… ಯಾವುದರಲ್ಲಿ – ದೇಶ ಮಾರುವುದರಲ್ಲಿ? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...