Homeಅಂಕಣಗಳುಕಲಾಮಾಧ್ಯಮವಾಗಿ ಹರಿಕಥೆ

ಕಲಾಮಾಧ್ಯಮವಾಗಿ ಹರಿಕಥೆ

- Advertisement -
- Advertisement -

 ಭಾರತೀ ದೇವಿ.ಪಿ |

ಬಹುತ್ವದ ನಾಡಾದ ಭಾರತದಲ್ಲಿ ನಮ್ಮ ನಡುವಣ ಹಲವು ಕಲೆಗಳು ನಮಗೆ ಕಾಣಿಸುವುದು ಧಾರ್ಮಿಕ ಪರಿವೇಷದೊಳಗೇ. ಯಕ್ಷಗಾನ, ಹರಿಕಥೆ, ಭಜನೆ, ಶಾಸ್ತ್ರೀಯ ಸಂಗೀತ ಹೀಗೆ ಕಲೆಗಳನ್ನು ಹಿಂದಿನಿಂದಲೂ ಒಂದು ತತ್ವದ ವಾಹಕವಾಗಿ ಬಳಸಿಕೊಂಡು ಬರಲಾಗಿದೆ. ಕಲೆ ಅನ್ನುವುದು ಯಾವಾಗಲೂ ಶುದ್ಧಾಂಗ ಕಲೆಯಾಗಿ ಇರುವುದು ಅಸಾಧ್ಯ. ಅದು ಶುದ್ಧಕಲೆಯಂತೆ ಕಾಣಿಸುತ್ತಿರುವ ಸಂದರ್ಭದಲ್ಲೂ ಹೀಗೆ ಇರುವ ಮೂಲಕವೇ ಏನೋ ಒಂದನ್ನು ಬೆಂಬಲಿಸುತ್ತಿರುತ್ತದೆ. ಅಲ್ಲದೇ, ಕಲೆ ಒದಗಿಸುವ ಆಹ್ಲಾದ, ಅರಿವಿನ ಆಚೆಗೂ ಯಾವುದೇ ವಿಚಾರದ ಸಂವಹನಕ್ಕೆ ಕಲೆ ಮಾಧ್ಯಮವಾಗಿ ಬಳಕೆಯಾಗುವುದು ನಮ್ಮ ನಡುವೆ ಅಪರೂಪದ ಮಾತೇನಲ್ಲ. ಕಲೆ ಯಾವ ವಿಚಾರವನ್ನು ಸಂವಹನ ಮಾಡುತ್ತಿದೆ ಎಂಬುದನ್ನು ವಿಮರ್ಶಿಸಿ ತಪ್ಪು-ಒಪ್ಪುಗಳ ಚರ್ಚೆ ಮಾಡುವುದು ಅಗತ್ಯ. ಆದರೆ ನಮ್ಮ ಚರ್ಚೆ ಅಷ್ಟಕ್ಕೇ ಸೀಮಿತವಾಗದೇ ಎಲ್ಲ ವಿಚಾರಗಳಾಚೆ ಒಂದು ಮಾಧ್ಯಮವಾಗಿ ಕಲೆಯ ಸಾಧ್ಯತೆಯ ಶೋಧ ನಡೆಸುವುದು ಮುಖ್ಯ ಎನಿಸುತ್ತದೆ.
ಹರಿಕಥೆ ಜನರ ನಡುವಣ ಒಂದು ಕಲೆ. ಭಾಗವತ ಪಂಥದ ಭಾಗವಾಗಿ, ಭಕ್ತಿ ಪರಂಪರೆಯ ಧಾರೆಯಾಗಿ, ಧಾರ್ಮಿಕ ತತ್ವಗಳ ವಾಹಕವಾಗಿ, ಜನರ ನಾಡಿಮಿಡಿತವನ್ನು ತಟ್ಟುವ ಪ್ರಕಾರವಾಗಿ ಹರಿಕಥೆ ಸಮುದಾಯಗಳ ಮಧ್ಯೆ ಬೆಳೆದಿದೆ. ಕಥನ, ಹಾಡು, ತತ್ವ ವಿವೇಚನೆಗಳು ಮಿಳಿತಗೊಂಡು ಈ ಪ್ರಕಾರ ಜನಾಕರ್ಷಕವಾಗಿದ್ದು ಪರಿಣಾಮಕಾರಿಯಾಗಿ ವಿಚಾರವನ್ನು ತಲುಪಿಸುತ್ತದೆ. ಇಂತಹ ಆಕರ್ಷಕ ಪ್ರಕಾರವನ್ನು ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ ಭಾರತದಾದ್ಯಂತ ಗುರುತಿಸಬಹುದು. ಕಥಾಕೀರ್ತನ, ಸಂಕೀರ್ತನ, ಅಭಂಗ ಸಂಕೀರ್ತನ, ಕಥಾ ಕಾಲಕ್ಷೇಪ, ಹರಿಕಥೆ, ಶಿವಕಥೆ ಹೀಗೆ ಹಲವು ಹೆಸರುಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ದೇವಸ್ಥಾನಗಳು ಮುಂತಾದ ಧಾರ್ಮಿಕ ಕೇಂದ್ರಗಳು, ಸಮುದಾಯಗಳು ಈ ಕಲೆಯನ್ನು ಪೋಷಿಸುತ್ತಾ ಬಂದಿರುವ ಬಗೆಯನ್ನೂ ಗಮನಿಸಬಹುದು. ಇದರ ಬಗ್ಗೆ ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ.
ಇಂದು ಯಕ್ಷಗಾನದಂತಹ ಕೆಲವು ಕಲೆಗಳನ್ನು ಹೊರತುಪಡಿಸಿದರೆ ಬಹುತೇಕ ಕಲೆಗಳು ಹಿಂದೆ ತಮಗೆ ಇದ್ದ ಅಪಾರ ಸಂಖ್ಯೆಯ ಪ್ರೇಕ್ಷಕ, ಶ್ರೋತೃ ವರ್ಗವನ್ನು ಕಳೆದುಕೊಂಡಿವೆ. ಇದಕ್ಕೆ ಆರ್ಥಿಕ ಕಾರಣಗಳಿದ್ದಂತೆ ಸಾಮಾಜಿಕ ಕಾರಣಗಳೂ ಇವೆ. ಹಿಂದೆ ಜಾತ್ರೆ, ಹಬ್ಬ, ವಿಶೇಷ ಸಮಾರಂಭಗಳಲ್ಲಿ ಇರುತ್ತಿದ್ದ ಕಲೆಗಳ ಜಾಗದಲ್ಲಿ ಆರ್ಕೆಸ್ಟ್ರಾ, ನೃತ್ಯಗಳು ಬಂದಿವೆ. ಮನೆಗಳಲ್ಲಿ ಟಿ.ವಿ ಆಗಮಿಸಿದೆ. ಇದು ಮೇಲುನೋಟಕ್ಕೆ ಎಲ್ಲರಿಗೂ ಕಾಣುತ್ತಿರುವ ಸ್ಥಿತ್ಯಂತರವಾದರೆ, ಕಲೆಗಳು ಪಡೆದಿರುವ ವಿಸ್ತರಣೆ ಮತ್ತು ಕಲೆಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಕೈವಶ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಯನ್ನೂ ಗಮನಿಸಬೇಕಾಗಿದೆ. ಇಂದಿನ ಲೌಕಿಕ ಅಗತ್ಯಗಳಿಗೆ ತಕ್ಕಂತೆ ಕಲೆಗಳನ್ನು ವಾಹಕವಾಗಿ ಬಳಸುತ್ತಿರುವ ಬಗೆ ಒಂದೆಡೆಯಾದರೆ ತಮ್ಮ ಅಜೆಂಡಾಗಳನ್ನು ಸಾರಲು ಕಲೆಗಳನ್ನು ಬಳಸಿಕೊಳ್ಳುತ್ತಿರುವ ಅಪಾಯ ಇನ್ನೊಂದೆಡೆ.
ಹರಿಕಥೆ, ಶಿವಕಥೆಗಳ ಕಲಾತ್ಮಕ ವಿನ್ಯಾಸ ಇಂದು ಕೇವಲ ಧಾರ್ಮಿಕ ಕಥನಗಳನ್ನು ಹೇಳುವ ಚೌಕಟ್ಟಿಗಷ್ಟೆ ಸೀಮಿತವಾಗಿ ಉಳಿದಿಲ್ಲ. ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಸಾಮಾಜಿಕ ಸಂಗತಿಗಳನ್ನು ಹೇಳುವುದಕ್ಕೆ ಬಳಕೆ ವಿಸ್ತರಣೆಗೊಂಡಿರುವ ಬಗೆಯನ್ನು ಗಮನಿಸಬಹುದು. ಮಹಾರಾಷ್ಟ್ರದಲ್ಲಿ ಇದೇ ಹಾಡು, ಕಥನ, ತತ್ವ ಚಿಂತನೆಯ ವಿನ್ಯಾಸದಲ್ಲಿ ಅಂಬೇಡ್ಕರ್ ಜೀವನಗಾಥೆಯನ್ನು ನಿರೂಪಿಸುವ ಬಗೆ ಮನಮುಟ್ಟುವಂತೆ ಕಾಣಿಸಿಕೊಳ್ಳುತ್ತದೆ. ಇದನ್ನು ಭಾರತದ ಮಹತ್ವದ ಚಿತ್ರನಿರ್ಮಾಣಕಾರ ಆನಂದ ಪಟವರ್ಧನ್ ಅವರು ತಮ್ಮ ‘ಜೈಭೀಮ್ ಕಾಮ್ರೇಡ್’ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಇನ್ನು ಕೆಲವೆಡೆ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಕತೆಗಳನ್ನು ಈ ವಿನ್ಯಾಸಕ್ಕೆ ಅಳವಡಿಸಿ ಪ್ರಸ್ತುತಪಡಿಸಿರುವ ಬಗೆ ಕಾಣಸಿಗುತ್ತದೆ. ಇನ್ನು ಈ ಬಗೆಯ ವಿಸ್ತರಣಗಳು ಒಂದುಕಡೆಯಾದರೆ ಇನ್ನೊಂದೆಡೆ ಕಲೆಗಳು ಕಾರ್ಪೊರೇಟೀಕರಣಗೊಂಡ ಬಗೆಯೂ ಗಮನಿಸಬೇಕಾದ ಸಂಗತಿ. ಕಲೆಯನ್ನು ಇಂದಿನ ಜನರ ಅಗತ್ಯಗಳಿಗೆ ಒಗ್ಗಿಸಿಕೊಳ್ಳುವ ಬಗೆ, ಮಾರುಕಟ್ಟೆ ನೀತಿಗಳಿಗೆ ಹೊಂದುವಂತೆ ಪ್ರಸ್ತುತಪಡಿಸುವ ಬಗೆ ಸಾಕಷ್ಟು ಬದಲಾವಣೆ, ವಿಸ್ತರಣೆಗೆ ಕಾರಣವಾಗಿದೆ. ಕ್ಯಾಸೆಟ್, ಸಿಡಿಗಳ ಅಗತ್ಯಕ್ಕನುಗುಣವಾಗಿ ಕತೆಯನ್ನು ಹಿಗ್ಗಿಸುವ, ಕುಗ್ಗಿಸುವ ರೀತಿಯಿಂದ ಹಿಡಿದು ವಿಷಯದ ಆಯ್ಕೆಯವರೆಗೂ ಇದು ಕೆಲಸ ಮಾಡಿದೆ. ಇನ್ನು, ಪ್ರಭುತ್ವಗಳು ತಮ್ಮ ಜನಪರ ಕಾರ್ಯಕ್ರಮಗಳ ಪ್ರಚಾರದ ಭಾಗವಾಗಿ ಕಲೆಗಳನ್ನು ಬಳಸಿಕೊಳ್ಳುವುದನ್ನೂ ನೋಡಬಹುದಾಗಿದೆ. ಸ್ವಚ್ಛ ಭಾರತ, ಕುಟುಂಬ ಯೋಜನೆ ಹೀಗೆ ಜನಜಾಗೃತಿ ಕಾರ್ಯಕ್ರಮಗಳ ಕುರಿತು ಜನರ ಗಮನ ಸೆಳೆಯುವಂತೆ ಈ ಕಲಾವಿನ್ಯಾಸವನ್ನು ಬಳಸಿಕೊಳ್ಳಲಾಗಿದೆ. ಇವೆಲ್ಲವುಗಳಾಚೆಗೆ ತುಂಬಾ ಅಪಾಯಕಾರಿ ಬೆಳವಣಿಗೆಯೆಂದರೆ ಕೋಮುವಾದಿ ಅಜೆಂಡಾಗಳನ್ನು ಜನಕ್ಕೆ ಹತ್ತಿರವಾದ ಕಲೆಗಳೊಳಗೆ ತುರುಕುವುದು. ತಾರತಮ್ಯದ ಎಳೆಗಳನ್ನು ಹೊಂದಿರುವ ಧಾರ್ಮಿಕ ಕಥನಗಳೊಳಗೆ ಬಹಳ ಸುಲಭವಾಗಿ ಇಂತಹ ವಿಚಾರಗಳನ್ನು ತುರುಕಬಹುದು. ಇತರ ಕಲೆಗಳೂ ಈ ಹಿಡಿತದಿಂದ ಪಾರಾಗಿಲ್ಲ. ಇದು ಕರಾವಳಿಯ ಕಲಾಪ್ರಕಾರವಾದ ಯಕ್ಷಗಾನದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಆಗಿರುವುದನ್ನು ಗಮನಿಸಬಹುದು.
ಹರಿಕಥೆಯ ರೀತಿಯಲ್ಲಿ ಜನಸಮೀಪವಾದ ಕಲೆಗಳಿಗಿರುವ ಬಹುದೊಡ್ಡ ಶಕ್ತಿಯೆಂದರೆ ಜನರನ್ನು ದೊಡ್ಡ ಪ್ರಮಾಣದಲ್ಲಿ ಒಳಗು ಮಾಡಿಕೊಳ್ಳುವ ಸಾಮಥ್ರ್ಯ. ಹರಿಕಥೆ ಮತ್ತು ಅದಕ್ಕೆ ಸಂವಾದಿಯಾದ ಕಲೆಗಳನ್ನು ಪ್ರದರ್ಶನ ಮಾಡುವವರಲ್ಲಿ ಎಲ್ಲ ಸಮುದಾಯಗಳ ಪ್ರಾತಿನಿಧ್ಯವೂ ಗೋಚರಿಸುತ್ತದೆ. ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು. ಅವು ಜನಪದ ಮಟ್ಟುಗಳಿಗೆ ಹತ್ತಿರವಾದ ಸಂಗೀತದ ಮೂಲಕ, ಜನಭಾಷೆಯ ಮೂಲಕ ಸಂವಾದಕ್ಕಿಳಿಸುತ್ತವೆ. ಇಂತಹ ಪ್ರಕಾರಗಳನ್ನು ಉಳಿಸಿಕೊಳ್ಳುವ, ಈ ಮೂಲಕ ಜನಪರ ವಿಚಾರಗಳನ್ನು ಹಬ್ಬುವ ಸಾಧ್ಯತೆ ಬಗ್ಗೆ ಚಿಂತಿಸಬೇಕಾಗಿದೆ.
ಈಗ ನಮ್ಮ ಮುಂದಿರುವ ಸವಾಲೆಂದರೆ, ಈ ಕಲಾವಿನ್ಯಾಸದೊಳಗಿನ ಹಲವು ವಿಚಾರಗಳನ್ನು ಒಪ್ಪದೇ ಇರುವ ಸಂದರ್ಭದಲ್ಲೂ ಒಂದು ಪ್ರಕಾರವಾಗಿ ಇದು ಜನರ ನಡುವೆ ಜೀವಂತವಾಗಿ ಇರುವಂತೆ ನೋಡಿಕೊಳ್ಳುವುದು ಹೇಗೆ ಎಂಬುದು. ವೈಚಾರಿಕವಾಗಿ ಚಿಂತಿಸುತ್ತಿರುವ ಸಂದರ್ಭದಲ್ಲೇ ಕಲೆಗಳ ಬಹುಮುಖ ಸಾಧ್ಯತೆಗಳನ್ನು ಕಡೆಗಣಿಸದೇ ಅವುಗಳನ್ನು ಹೇಗೆ ಜನರನ್ನು ಬೆಸೆಯುವ ಕೊಂಡಿಯಾಗಿಸಬಹುದು ಎಂಬ ಬಗ್ಗೆ ಯೋಚಿಸುವ ಅಗತ್ಯವಿದೆ. ಇದಕ್ಕೆ ಈಗಾಗಲೇ ಹಲವು ಮಾದರಿಗಳು ನಮ್ಮ ಮುಂದೆ ಇವೆ. ‘ಸಮುದಾಯ’ ಸಂಘಟನೆ ಬಹಳ ದೊಡ್ಡ ಪ್ರಮಾಣದಲ್ಲಿ ಈ ಯತ್ನ ಮಾಡಿದೆ, ಮಾಡುತ್ತಿದೆ. ಮಹಾರಾಷ್ಟ್ರದ ಕಬೀರ್ ಕಲಾಮಂಚ್ ಹಾಡು, ನಾಟಕ, ಕಥನಗಳ ನಿರೂಪಣೆಗಳ ಮೂಲಕ ಜನರನ್ನು ವ್ಯಾಪಕವಾಗಿ, ಪರಿಣಾಮಕಾರಿಯಾಗಿ ತಟ್ಟಿದ ಬಗೆ ನಮ್ಮ ಮುಂದಿದೆ. ರಂಗಭೂಮಿಯೂ ಹರಿಕಥೆ, ತಕ್ಷಗಾನ, ಬಾವುಲ್, ಪಾಂಡ್ವಾನಿ ಮೊದಲಾದ ಪ್ರಕಾರಗಳನ್ನು ನಿರೂಪಣೆಯಲ್ಲಿ ವೈವಿಧ್ಯತೆ ಸಾಧಿಸಿಕೊಳ್ಳುವ ದಾರಿಯಲ್ಲಿ ಬಳಸಿಕೊಳ್ಳುತ್ತಾ ಬಂದುದಕ್ಕೆ ಹಲವು ಉದಾಹರಣೆಗಳಿವೆ. ಈ ದಿಸೆಯಲ್ಲಿ ಹರಿಕಥೆಯ ಕಲಾವಿನ್ಯಾಸವನ್ನು ಇರಿಸಿಕೊಂಡು ಹೊಸ ಪ್ರಯೋಗಗಳಿಗೆ ಮುಂದಾಗಬಹುದು. ಜನಪರ ಚಳುವಳಿ, ಚಿಂತನೆ ಕಟ್ಟುವಲ್ಲಿ ಇದೂ ಒಂದು ದಾರಿಯಾಗಬಹುದು.
ಹರಿಕಥೆಯ ಪುನರುಜ್ಜೀವನಕ್ಕಾಗಿ ರೂಪುಗೊಂಡಿರುವ ಕಥಾ ಕೀರ್ತನ ಪರಿಷತ್ ಇದೆ; ಸಂಗೀತ ನೃತ್ಯ ಅಕಾಡೆಮಿ ಇದೆ. ಮಾತ್ರವಲ್ಲ ಇತರ ಯಾವುದೇ ಸಂಘಟನೆಯ ಮೂಲಕವಾಗಲೀ, ವೈಯಕ್ತಿಕ ನೆಲೆಯಲ್ಲಾಗಲೀ ಈ ಬಗೆಯ ಯತ್ನಕ್ಕೆ ಮನಸ್ಸು ಮಾಡಬಹುದಾಗಿದೆ. ಕೇವಲ ಧಾರ್ಮಿಕ ವಲಯದಲ್ಲಿ ಇಂತಹ ಕಲೆಗಳಿಗೆ ಪೋಷಣೆ ನೀಡುವುದರಾಚೆಗೆ ಸಾಮಾಜಿಕ ನೆಲೆಗಳನ್ನೂ ಒಳಗೊಂಡು ಪ್ರಜಾಸತ್ತಾತ್ಮಕವಾಗಿ ಚಿಂತಿಸುವ ಅಗತ್ಯವಿದೆ. ಕಲೆಗಳ ಉಳಿವು, ಪೋಷಣೆ, ಜನಪರ ಚಿಂತನೆಯ ಪ್ರಸಾರ ಈ ಎಲ್ಲವುಗಳ ದೃಷ್ಟಿಯಿಂದಲೂ ಇದು ಮುಖ್ಯವೆನಿಸುತ್ತದೆ.

(ಚರ್ಚೆಯ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಹಂಚಿಕೊಂಡ ವಿಚಾರಗಳಿಗೆ ಋಣಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...