Homeಅಂಕಣಗಳುಕಲಾಮಾಧ್ಯಮವಾಗಿ ಹರಿಕಥೆ

ಕಲಾಮಾಧ್ಯಮವಾಗಿ ಹರಿಕಥೆ

- Advertisement -
- Advertisement -

 ಭಾರತೀ ದೇವಿ.ಪಿ |

ಬಹುತ್ವದ ನಾಡಾದ ಭಾರತದಲ್ಲಿ ನಮ್ಮ ನಡುವಣ ಹಲವು ಕಲೆಗಳು ನಮಗೆ ಕಾಣಿಸುವುದು ಧಾರ್ಮಿಕ ಪರಿವೇಷದೊಳಗೇ. ಯಕ್ಷಗಾನ, ಹರಿಕಥೆ, ಭಜನೆ, ಶಾಸ್ತ್ರೀಯ ಸಂಗೀತ ಹೀಗೆ ಕಲೆಗಳನ್ನು ಹಿಂದಿನಿಂದಲೂ ಒಂದು ತತ್ವದ ವಾಹಕವಾಗಿ ಬಳಸಿಕೊಂಡು ಬರಲಾಗಿದೆ. ಕಲೆ ಅನ್ನುವುದು ಯಾವಾಗಲೂ ಶುದ್ಧಾಂಗ ಕಲೆಯಾಗಿ ಇರುವುದು ಅಸಾಧ್ಯ. ಅದು ಶುದ್ಧಕಲೆಯಂತೆ ಕಾಣಿಸುತ್ತಿರುವ ಸಂದರ್ಭದಲ್ಲೂ ಹೀಗೆ ಇರುವ ಮೂಲಕವೇ ಏನೋ ಒಂದನ್ನು ಬೆಂಬಲಿಸುತ್ತಿರುತ್ತದೆ. ಅಲ್ಲದೇ, ಕಲೆ ಒದಗಿಸುವ ಆಹ್ಲಾದ, ಅರಿವಿನ ಆಚೆಗೂ ಯಾವುದೇ ವಿಚಾರದ ಸಂವಹನಕ್ಕೆ ಕಲೆ ಮಾಧ್ಯಮವಾಗಿ ಬಳಕೆಯಾಗುವುದು ನಮ್ಮ ನಡುವೆ ಅಪರೂಪದ ಮಾತೇನಲ್ಲ. ಕಲೆ ಯಾವ ವಿಚಾರವನ್ನು ಸಂವಹನ ಮಾಡುತ್ತಿದೆ ಎಂಬುದನ್ನು ವಿಮರ್ಶಿಸಿ ತಪ್ಪು-ಒಪ್ಪುಗಳ ಚರ್ಚೆ ಮಾಡುವುದು ಅಗತ್ಯ. ಆದರೆ ನಮ್ಮ ಚರ್ಚೆ ಅಷ್ಟಕ್ಕೇ ಸೀಮಿತವಾಗದೇ ಎಲ್ಲ ವಿಚಾರಗಳಾಚೆ ಒಂದು ಮಾಧ್ಯಮವಾಗಿ ಕಲೆಯ ಸಾಧ್ಯತೆಯ ಶೋಧ ನಡೆಸುವುದು ಮುಖ್ಯ ಎನಿಸುತ್ತದೆ.
ಹರಿಕಥೆ ಜನರ ನಡುವಣ ಒಂದು ಕಲೆ. ಭಾಗವತ ಪಂಥದ ಭಾಗವಾಗಿ, ಭಕ್ತಿ ಪರಂಪರೆಯ ಧಾರೆಯಾಗಿ, ಧಾರ್ಮಿಕ ತತ್ವಗಳ ವಾಹಕವಾಗಿ, ಜನರ ನಾಡಿಮಿಡಿತವನ್ನು ತಟ್ಟುವ ಪ್ರಕಾರವಾಗಿ ಹರಿಕಥೆ ಸಮುದಾಯಗಳ ಮಧ್ಯೆ ಬೆಳೆದಿದೆ. ಕಥನ, ಹಾಡು, ತತ್ವ ವಿವೇಚನೆಗಳು ಮಿಳಿತಗೊಂಡು ಈ ಪ್ರಕಾರ ಜನಾಕರ್ಷಕವಾಗಿದ್ದು ಪರಿಣಾಮಕಾರಿಯಾಗಿ ವಿಚಾರವನ್ನು ತಲುಪಿಸುತ್ತದೆ. ಇಂತಹ ಆಕರ್ಷಕ ಪ್ರಕಾರವನ್ನು ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ ಭಾರತದಾದ್ಯಂತ ಗುರುತಿಸಬಹುದು. ಕಥಾಕೀರ್ತನ, ಸಂಕೀರ್ತನ, ಅಭಂಗ ಸಂಕೀರ್ತನ, ಕಥಾ ಕಾಲಕ್ಷೇಪ, ಹರಿಕಥೆ, ಶಿವಕಥೆ ಹೀಗೆ ಹಲವು ಹೆಸರುಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ದೇವಸ್ಥಾನಗಳು ಮುಂತಾದ ಧಾರ್ಮಿಕ ಕೇಂದ್ರಗಳು, ಸಮುದಾಯಗಳು ಈ ಕಲೆಯನ್ನು ಪೋಷಿಸುತ್ತಾ ಬಂದಿರುವ ಬಗೆಯನ್ನೂ ಗಮನಿಸಬಹುದು. ಇದರ ಬಗ್ಗೆ ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ.
ಇಂದು ಯಕ್ಷಗಾನದಂತಹ ಕೆಲವು ಕಲೆಗಳನ್ನು ಹೊರತುಪಡಿಸಿದರೆ ಬಹುತೇಕ ಕಲೆಗಳು ಹಿಂದೆ ತಮಗೆ ಇದ್ದ ಅಪಾರ ಸಂಖ್ಯೆಯ ಪ್ರೇಕ್ಷಕ, ಶ್ರೋತೃ ವರ್ಗವನ್ನು ಕಳೆದುಕೊಂಡಿವೆ. ಇದಕ್ಕೆ ಆರ್ಥಿಕ ಕಾರಣಗಳಿದ್ದಂತೆ ಸಾಮಾಜಿಕ ಕಾರಣಗಳೂ ಇವೆ. ಹಿಂದೆ ಜಾತ್ರೆ, ಹಬ್ಬ, ವಿಶೇಷ ಸಮಾರಂಭಗಳಲ್ಲಿ ಇರುತ್ತಿದ್ದ ಕಲೆಗಳ ಜಾಗದಲ್ಲಿ ಆರ್ಕೆಸ್ಟ್ರಾ, ನೃತ್ಯಗಳು ಬಂದಿವೆ. ಮನೆಗಳಲ್ಲಿ ಟಿ.ವಿ ಆಗಮಿಸಿದೆ. ಇದು ಮೇಲುನೋಟಕ್ಕೆ ಎಲ್ಲರಿಗೂ ಕಾಣುತ್ತಿರುವ ಸ್ಥಿತ್ಯಂತರವಾದರೆ, ಕಲೆಗಳು ಪಡೆದಿರುವ ವಿಸ್ತರಣೆ ಮತ್ತು ಕಲೆಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಕೈವಶ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಯನ್ನೂ ಗಮನಿಸಬೇಕಾಗಿದೆ. ಇಂದಿನ ಲೌಕಿಕ ಅಗತ್ಯಗಳಿಗೆ ತಕ್ಕಂತೆ ಕಲೆಗಳನ್ನು ವಾಹಕವಾಗಿ ಬಳಸುತ್ತಿರುವ ಬಗೆ ಒಂದೆಡೆಯಾದರೆ ತಮ್ಮ ಅಜೆಂಡಾಗಳನ್ನು ಸಾರಲು ಕಲೆಗಳನ್ನು ಬಳಸಿಕೊಳ್ಳುತ್ತಿರುವ ಅಪಾಯ ಇನ್ನೊಂದೆಡೆ.
ಹರಿಕಥೆ, ಶಿವಕಥೆಗಳ ಕಲಾತ್ಮಕ ವಿನ್ಯಾಸ ಇಂದು ಕೇವಲ ಧಾರ್ಮಿಕ ಕಥನಗಳನ್ನು ಹೇಳುವ ಚೌಕಟ್ಟಿಗಷ್ಟೆ ಸೀಮಿತವಾಗಿ ಉಳಿದಿಲ್ಲ. ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಸಾಮಾಜಿಕ ಸಂಗತಿಗಳನ್ನು ಹೇಳುವುದಕ್ಕೆ ಬಳಕೆ ವಿಸ್ತರಣೆಗೊಂಡಿರುವ ಬಗೆಯನ್ನು ಗಮನಿಸಬಹುದು. ಮಹಾರಾಷ್ಟ್ರದಲ್ಲಿ ಇದೇ ಹಾಡು, ಕಥನ, ತತ್ವ ಚಿಂತನೆಯ ವಿನ್ಯಾಸದಲ್ಲಿ ಅಂಬೇಡ್ಕರ್ ಜೀವನಗಾಥೆಯನ್ನು ನಿರೂಪಿಸುವ ಬಗೆ ಮನಮುಟ್ಟುವಂತೆ ಕಾಣಿಸಿಕೊಳ್ಳುತ್ತದೆ. ಇದನ್ನು ಭಾರತದ ಮಹತ್ವದ ಚಿತ್ರನಿರ್ಮಾಣಕಾರ ಆನಂದ ಪಟವರ್ಧನ್ ಅವರು ತಮ್ಮ ‘ಜೈಭೀಮ್ ಕಾಮ್ರೇಡ್’ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಇನ್ನು ಕೆಲವೆಡೆ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಕತೆಗಳನ್ನು ಈ ವಿನ್ಯಾಸಕ್ಕೆ ಅಳವಡಿಸಿ ಪ್ರಸ್ತುತಪಡಿಸಿರುವ ಬಗೆ ಕಾಣಸಿಗುತ್ತದೆ. ಇನ್ನು ಈ ಬಗೆಯ ವಿಸ್ತರಣಗಳು ಒಂದುಕಡೆಯಾದರೆ ಇನ್ನೊಂದೆಡೆ ಕಲೆಗಳು ಕಾರ್ಪೊರೇಟೀಕರಣಗೊಂಡ ಬಗೆಯೂ ಗಮನಿಸಬೇಕಾದ ಸಂಗತಿ. ಕಲೆಯನ್ನು ಇಂದಿನ ಜನರ ಅಗತ್ಯಗಳಿಗೆ ಒಗ್ಗಿಸಿಕೊಳ್ಳುವ ಬಗೆ, ಮಾರುಕಟ್ಟೆ ನೀತಿಗಳಿಗೆ ಹೊಂದುವಂತೆ ಪ್ರಸ್ತುತಪಡಿಸುವ ಬಗೆ ಸಾಕಷ್ಟು ಬದಲಾವಣೆ, ವಿಸ್ತರಣೆಗೆ ಕಾರಣವಾಗಿದೆ. ಕ್ಯಾಸೆಟ್, ಸಿಡಿಗಳ ಅಗತ್ಯಕ್ಕನುಗುಣವಾಗಿ ಕತೆಯನ್ನು ಹಿಗ್ಗಿಸುವ, ಕುಗ್ಗಿಸುವ ರೀತಿಯಿಂದ ಹಿಡಿದು ವಿಷಯದ ಆಯ್ಕೆಯವರೆಗೂ ಇದು ಕೆಲಸ ಮಾಡಿದೆ. ಇನ್ನು, ಪ್ರಭುತ್ವಗಳು ತಮ್ಮ ಜನಪರ ಕಾರ್ಯಕ್ರಮಗಳ ಪ್ರಚಾರದ ಭಾಗವಾಗಿ ಕಲೆಗಳನ್ನು ಬಳಸಿಕೊಳ್ಳುವುದನ್ನೂ ನೋಡಬಹುದಾಗಿದೆ. ಸ್ವಚ್ಛ ಭಾರತ, ಕುಟುಂಬ ಯೋಜನೆ ಹೀಗೆ ಜನಜಾಗೃತಿ ಕಾರ್ಯಕ್ರಮಗಳ ಕುರಿತು ಜನರ ಗಮನ ಸೆಳೆಯುವಂತೆ ಈ ಕಲಾವಿನ್ಯಾಸವನ್ನು ಬಳಸಿಕೊಳ್ಳಲಾಗಿದೆ. ಇವೆಲ್ಲವುಗಳಾಚೆಗೆ ತುಂಬಾ ಅಪಾಯಕಾರಿ ಬೆಳವಣಿಗೆಯೆಂದರೆ ಕೋಮುವಾದಿ ಅಜೆಂಡಾಗಳನ್ನು ಜನಕ್ಕೆ ಹತ್ತಿರವಾದ ಕಲೆಗಳೊಳಗೆ ತುರುಕುವುದು. ತಾರತಮ್ಯದ ಎಳೆಗಳನ್ನು ಹೊಂದಿರುವ ಧಾರ್ಮಿಕ ಕಥನಗಳೊಳಗೆ ಬಹಳ ಸುಲಭವಾಗಿ ಇಂತಹ ವಿಚಾರಗಳನ್ನು ತುರುಕಬಹುದು. ಇತರ ಕಲೆಗಳೂ ಈ ಹಿಡಿತದಿಂದ ಪಾರಾಗಿಲ್ಲ. ಇದು ಕರಾವಳಿಯ ಕಲಾಪ್ರಕಾರವಾದ ಯಕ್ಷಗಾನದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಆಗಿರುವುದನ್ನು ಗಮನಿಸಬಹುದು.
ಹರಿಕಥೆಯ ರೀತಿಯಲ್ಲಿ ಜನಸಮೀಪವಾದ ಕಲೆಗಳಿಗಿರುವ ಬಹುದೊಡ್ಡ ಶಕ್ತಿಯೆಂದರೆ ಜನರನ್ನು ದೊಡ್ಡ ಪ್ರಮಾಣದಲ್ಲಿ ಒಳಗು ಮಾಡಿಕೊಳ್ಳುವ ಸಾಮಥ್ರ್ಯ. ಹರಿಕಥೆ ಮತ್ತು ಅದಕ್ಕೆ ಸಂವಾದಿಯಾದ ಕಲೆಗಳನ್ನು ಪ್ರದರ್ಶನ ಮಾಡುವವರಲ್ಲಿ ಎಲ್ಲ ಸಮುದಾಯಗಳ ಪ್ರಾತಿನಿಧ್ಯವೂ ಗೋಚರಿಸುತ್ತದೆ. ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು. ಅವು ಜನಪದ ಮಟ್ಟುಗಳಿಗೆ ಹತ್ತಿರವಾದ ಸಂಗೀತದ ಮೂಲಕ, ಜನಭಾಷೆಯ ಮೂಲಕ ಸಂವಾದಕ್ಕಿಳಿಸುತ್ತವೆ. ಇಂತಹ ಪ್ರಕಾರಗಳನ್ನು ಉಳಿಸಿಕೊಳ್ಳುವ, ಈ ಮೂಲಕ ಜನಪರ ವಿಚಾರಗಳನ್ನು ಹಬ್ಬುವ ಸಾಧ್ಯತೆ ಬಗ್ಗೆ ಚಿಂತಿಸಬೇಕಾಗಿದೆ.
ಈಗ ನಮ್ಮ ಮುಂದಿರುವ ಸವಾಲೆಂದರೆ, ಈ ಕಲಾವಿನ್ಯಾಸದೊಳಗಿನ ಹಲವು ವಿಚಾರಗಳನ್ನು ಒಪ್ಪದೇ ಇರುವ ಸಂದರ್ಭದಲ್ಲೂ ಒಂದು ಪ್ರಕಾರವಾಗಿ ಇದು ಜನರ ನಡುವೆ ಜೀವಂತವಾಗಿ ಇರುವಂತೆ ನೋಡಿಕೊಳ್ಳುವುದು ಹೇಗೆ ಎಂಬುದು. ವೈಚಾರಿಕವಾಗಿ ಚಿಂತಿಸುತ್ತಿರುವ ಸಂದರ್ಭದಲ್ಲೇ ಕಲೆಗಳ ಬಹುಮುಖ ಸಾಧ್ಯತೆಗಳನ್ನು ಕಡೆಗಣಿಸದೇ ಅವುಗಳನ್ನು ಹೇಗೆ ಜನರನ್ನು ಬೆಸೆಯುವ ಕೊಂಡಿಯಾಗಿಸಬಹುದು ಎಂಬ ಬಗ್ಗೆ ಯೋಚಿಸುವ ಅಗತ್ಯವಿದೆ. ಇದಕ್ಕೆ ಈಗಾಗಲೇ ಹಲವು ಮಾದರಿಗಳು ನಮ್ಮ ಮುಂದೆ ಇವೆ. ‘ಸಮುದಾಯ’ ಸಂಘಟನೆ ಬಹಳ ದೊಡ್ಡ ಪ್ರಮಾಣದಲ್ಲಿ ಈ ಯತ್ನ ಮಾಡಿದೆ, ಮಾಡುತ್ತಿದೆ. ಮಹಾರಾಷ್ಟ್ರದ ಕಬೀರ್ ಕಲಾಮಂಚ್ ಹಾಡು, ನಾಟಕ, ಕಥನಗಳ ನಿರೂಪಣೆಗಳ ಮೂಲಕ ಜನರನ್ನು ವ್ಯಾಪಕವಾಗಿ, ಪರಿಣಾಮಕಾರಿಯಾಗಿ ತಟ್ಟಿದ ಬಗೆ ನಮ್ಮ ಮುಂದಿದೆ. ರಂಗಭೂಮಿಯೂ ಹರಿಕಥೆ, ತಕ್ಷಗಾನ, ಬಾವುಲ್, ಪಾಂಡ್ವಾನಿ ಮೊದಲಾದ ಪ್ರಕಾರಗಳನ್ನು ನಿರೂಪಣೆಯಲ್ಲಿ ವೈವಿಧ್ಯತೆ ಸಾಧಿಸಿಕೊಳ್ಳುವ ದಾರಿಯಲ್ಲಿ ಬಳಸಿಕೊಳ್ಳುತ್ತಾ ಬಂದುದಕ್ಕೆ ಹಲವು ಉದಾಹರಣೆಗಳಿವೆ. ಈ ದಿಸೆಯಲ್ಲಿ ಹರಿಕಥೆಯ ಕಲಾವಿನ್ಯಾಸವನ್ನು ಇರಿಸಿಕೊಂಡು ಹೊಸ ಪ್ರಯೋಗಗಳಿಗೆ ಮುಂದಾಗಬಹುದು. ಜನಪರ ಚಳುವಳಿ, ಚಿಂತನೆ ಕಟ್ಟುವಲ್ಲಿ ಇದೂ ಒಂದು ದಾರಿಯಾಗಬಹುದು.
ಹರಿಕಥೆಯ ಪುನರುಜ್ಜೀವನಕ್ಕಾಗಿ ರೂಪುಗೊಂಡಿರುವ ಕಥಾ ಕೀರ್ತನ ಪರಿಷತ್ ಇದೆ; ಸಂಗೀತ ನೃತ್ಯ ಅಕಾಡೆಮಿ ಇದೆ. ಮಾತ್ರವಲ್ಲ ಇತರ ಯಾವುದೇ ಸಂಘಟನೆಯ ಮೂಲಕವಾಗಲೀ, ವೈಯಕ್ತಿಕ ನೆಲೆಯಲ್ಲಾಗಲೀ ಈ ಬಗೆಯ ಯತ್ನಕ್ಕೆ ಮನಸ್ಸು ಮಾಡಬಹುದಾಗಿದೆ. ಕೇವಲ ಧಾರ್ಮಿಕ ವಲಯದಲ್ಲಿ ಇಂತಹ ಕಲೆಗಳಿಗೆ ಪೋಷಣೆ ನೀಡುವುದರಾಚೆಗೆ ಸಾಮಾಜಿಕ ನೆಲೆಗಳನ್ನೂ ಒಳಗೊಂಡು ಪ್ರಜಾಸತ್ತಾತ್ಮಕವಾಗಿ ಚಿಂತಿಸುವ ಅಗತ್ಯವಿದೆ. ಕಲೆಗಳ ಉಳಿವು, ಪೋಷಣೆ, ಜನಪರ ಚಿಂತನೆಯ ಪ್ರಸಾರ ಈ ಎಲ್ಲವುಗಳ ದೃಷ್ಟಿಯಿಂದಲೂ ಇದು ಮುಖ್ಯವೆನಿಸುತ್ತದೆ.

(ಚರ್ಚೆಯ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಹಂಚಿಕೊಂಡ ವಿಚಾರಗಳಿಗೆ ಋಣಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...