Homeಅಂಕಣಗಳುಕಲಾಮಾಧ್ಯಮವಾಗಿ ಹರಿಕಥೆ

ಕಲಾಮಾಧ್ಯಮವಾಗಿ ಹರಿಕಥೆ

- Advertisement -
- Advertisement -

 ಭಾರತೀ ದೇವಿ.ಪಿ |

ಬಹುತ್ವದ ನಾಡಾದ ಭಾರತದಲ್ಲಿ ನಮ್ಮ ನಡುವಣ ಹಲವು ಕಲೆಗಳು ನಮಗೆ ಕಾಣಿಸುವುದು ಧಾರ್ಮಿಕ ಪರಿವೇಷದೊಳಗೇ. ಯಕ್ಷಗಾನ, ಹರಿಕಥೆ, ಭಜನೆ, ಶಾಸ್ತ್ರೀಯ ಸಂಗೀತ ಹೀಗೆ ಕಲೆಗಳನ್ನು ಹಿಂದಿನಿಂದಲೂ ಒಂದು ತತ್ವದ ವಾಹಕವಾಗಿ ಬಳಸಿಕೊಂಡು ಬರಲಾಗಿದೆ. ಕಲೆ ಅನ್ನುವುದು ಯಾವಾಗಲೂ ಶುದ್ಧಾಂಗ ಕಲೆಯಾಗಿ ಇರುವುದು ಅಸಾಧ್ಯ. ಅದು ಶುದ್ಧಕಲೆಯಂತೆ ಕಾಣಿಸುತ್ತಿರುವ ಸಂದರ್ಭದಲ್ಲೂ ಹೀಗೆ ಇರುವ ಮೂಲಕವೇ ಏನೋ ಒಂದನ್ನು ಬೆಂಬಲಿಸುತ್ತಿರುತ್ತದೆ. ಅಲ್ಲದೇ, ಕಲೆ ಒದಗಿಸುವ ಆಹ್ಲಾದ, ಅರಿವಿನ ಆಚೆಗೂ ಯಾವುದೇ ವಿಚಾರದ ಸಂವಹನಕ್ಕೆ ಕಲೆ ಮಾಧ್ಯಮವಾಗಿ ಬಳಕೆಯಾಗುವುದು ನಮ್ಮ ನಡುವೆ ಅಪರೂಪದ ಮಾತೇನಲ್ಲ. ಕಲೆ ಯಾವ ವಿಚಾರವನ್ನು ಸಂವಹನ ಮಾಡುತ್ತಿದೆ ಎಂಬುದನ್ನು ವಿಮರ್ಶಿಸಿ ತಪ್ಪು-ಒಪ್ಪುಗಳ ಚರ್ಚೆ ಮಾಡುವುದು ಅಗತ್ಯ. ಆದರೆ ನಮ್ಮ ಚರ್ಚೆ ಅಷ್ಟಕ್ಕೇ ಸೀಮಿತವಾಗದೇ ಎಲ್ಲ ವಿಚಾರಗಳಾಚೆ ಒಂದು ಮಾಧ್ಯಮವಾಗಿ ಕಲೆಯ ಸಾಧ್ಯತೆಯ ಶೋಧ ನಡೆಸುವುದು ಮುಖ್ಯ ಎನಿಸುತ್ತದೆ.
ಹರಿಕಥೆ ಜನರ ನಡುವಣ ಒಂದು ಕಲೆ. ಭಾಗವತ ಪಂಥದ ಭಾಗವಾಗಿ, ಭಕ್ತಿ ಪರಂಪರೆಯ ಧಾರೆಯಾಗಿ, ಧಾರ್ಮಿಕ ತತ್ವಗಳ ವಾಹಕವಾಗಿ, ಜನರ ನಾಡಿಮಿಡಿತವನ್ನು ತಟ್ಟುವ ಪ್ರಕಾರವಾಗಿ ಹರಿಕಥೆ ಸಮುದಾಯಗಳ ಮಧ್ಯೆ ಬೆಳೆದಿದೆ. ಕಥನ, ಹಾಡು, ತತ್ವ ವಿವೇಚನೆಗಳು ಮಿಳಿತಗೊಂಡು ಈ ಪ್ರಕಾರ ಜನಾಕರ್ಷಕವಾಗಿದ್ದು ಪರಿಣಾಮಕಾರಿಯಾಗಿ ವಿಚಾರವನ್ನು ತಲುಪಿಸುತ್ತದೆ. ಇಂತಹ ಆಕರ್ಷಕ ಪ್ರಕಾರವನ್ನು ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ ಭಾರತದಾದ್ಯಂತ ಗುರುತಿಸಬಹುದು. ಕಥಾಕೀರ್ತನ, ಸಂಕೀರ್ತನ, ಅಭಂಗ ಸಂಕೀರ್ತನ, ಕಥಾ ಕಾಲಕ್ಷೇಪ, ಹರಿಕಥೆ, ಶಿವಕಥೆ ಹೀಗೆ ಹಲವು ಹೆಸರುಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ದೇವಸ್ಥಾನಗಳು ಮುಂತಾದ ಧಾರ್ಮಿಕ ಕೇಂದ್ರಗಳು, ಸಮುದಾಯಗಳು ಈ ಕಲೆಯನ್ನು ಪೋಷಿಸುತ್ತಾ ಬಂದಿರುವ ಬಗೆಯನ್ನೂ ಗಮನಿಸಬಹುದು. ಇದರ ಬಗ್ಗೆ ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ.
ಇಂದು ಯಕ್ಷಗಾನದಂತಹ ಕೆಲವು ಕಲೆಗಳನ್ನು ಹೊರತುಪಡಿಸಿದರೆ ಬಹುತೇಕ ಕಲೆಗಳು ಹಿಂದೆ ತಮಗೆ ಇದ್ದ ಅಪಾರ ಸಂಖ್ಯೆಯ ಪ್ರೇಕ್ಷಕ, ಶ್ರೋತೃ ವರ್ಗವನ್ನು ಕಳೆದುಕೊಂಡಿವೆ. ಇದಕ್ಕೆ ಆರ್ಥಿಕ ಕಾರಣಗಳಿದ್ದಂತೆ ಸಾಮಾಜಿಕ ಕಾರಣಗಳೂ ಇವೆ. ಹಿಂದೆ ಜಾತ್ರೆ, ಹಬ್ಬ, ವಿಶೇಷ ಸಮಾರಂಭಗಳಲ್ಲಿ ಇರುತ್ತಿದ್ದ ಕಲೆಗಳ ಜಾಗದಲ್ಲಿ ಆರ್ಕೆಸ್ಟ್ರಾ, ನೃತ್ಯಗಳು ಬಂದಿವೆ. ಮನೆಗಳಲ್ಲಿ ಟಿ.ವಿ ಆಗಮಿಸಿದೆ. ಇದು ಮೇಲುನೋಟಕ್ಕೆ ಎಲ್ಲರಿಗೂ ಕಾಣುತ್ತಿರುವ ಸ್ಥಿತ್ಯಂತರವಾದರೆ, ಕಲೆಗಳು ಪಡೆದಿರುವ ವಿಸ್ತರಣೆ ಮತ್ತು ಕಲೆಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಕೈವಶ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಯನ್ನೂ ಗಮನಿಸಬೇಕಾಗಿದೆ. ಇಂದಿನ ಲೌಕಿಕ ಅಗತ್ಯಗಳಿಗೆ ತಕ್ಕಂತೆ ಕಲೆಗಳನ್ನು ವಾಹಕವಾಗಿ ಬಳಸುತ್ತಿರುವ ಬಗೆ ಒಂದೆಡೆಯಾದರೆ ತಮ್ಮ ಅಜೆಂಡಾಗಳನ್ನು ಸಾರಲು ಕಲೆಗಳನ್ನು ಬಳಸಿಕೊಳ್ಳುತ್ತಿರುವ ಅಪಾಯ ಇನ್ನೊಂದೆಡೆ.
ಹರಿಕಥೆ, ಶಿವಕಥೆಗಳ ಕಲಾತ್ಮಕ ವಿನ್ಯಾಸ ಇಂದು ಕೇವಲ ಧಾರ್ಮಿಕ ಕಥನಗಳನ್ನು ಹೇಳುವ ಚೌಕಟ್ಟಿಗಷ್ಟೆ ಸೀಮಿತವಾಗಿ ಉಳಿದಿಲ್ಲ. ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಸಾಮಾಜಿಕ ಸಂಗತಿಗಳನ್ನು ಹೇಳುವುದಕ್ಕೆ ಬಳಕೆ ವಿಸ್ತರಣೆಗೊಂಡಿರುವ ಬಗೆಯನ್ನು ಗಮನಿಸಬಹುದು. ಮಹಾರಾಷ್ಟ್ರದಲ್ಲಿ ಇದೇ ಹಾಡು, ಕಥನ, ತತ್ವ ಚಿಂತನೆಯ ವಿನ್ಯಾಸದಲ್ಲಿ ಅಂಬೇಡ್ಕರ್ ಜೀವನಗಾಥೆಯನ್ನು ನಿರೂಪಿಸುವ ಬಗೆ ಮನಮುಟ್ಟುವಂತೆ ಕಾಣಿಸಿಕೊಳ್ಳುತ್ತದೆ. ಇದನ್ನು ಭಾರತದ ಮಹತ್ವದ ಚಿತ್ರನಿರ್ಮಾಣಕಾರ ಆನಂದ ಪಟವರ್ಧನ್ ಅವರು ತಮ್ಮ ‘ಜೈಭೀಮ್ ಕಾಮ್ರೇಡ್’ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಇನ್ನು ಕೆಲವೆಡೆ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಕತೆಗಳನ್ನು ಈ ವಿನ್ಯಾಸಕ್ಕೆ ಅಳವಡಿಸಿ ಪ್ರಸ್ತುತಪಡಿಸಿರುವ ಬಗೆ ಕಾಣಸಿಗುತ್ತದೆ. ಇನ್ನು ಈ ಬಗೆಯ ವಿಸ್ತರಣಗಳು ಒಂದುಕಡೆಯಾದರೆ ಇನ್ನೊಂದೆಡೆ ಕಲೆಗಳು ಕಾರ್ಪೊರೇಟೀಕರಣಗೊಂಡ ಬಗೆಯೂ ಗಮನಿಸಬೇಕಾದ ಸಂಗತಿ. ಕಲೆಯನ್ನು ಇಂದಿನ ಜನರ ಅಗತ್ಯಗಳಿಗೆ ಒಗ್ಗಿಸಿಕೊಳ್ಳುವ ಬಗೆ, ಮಾರುಕಟ್ಟೆ ನೀತಿಗಳಿಗೆ ಹೊಂದುವಂತೆ ಪ್ರಸ್ತುತಪಡಿಸುವ ಬಗೆ ಸಾಕಷ್ಟು ಬದಲಾವಣೆ, ವಿಸ್ತರಣೆಗೆ ಕಾರಣವಾಗಿದೆ. ಕ್ಯಾಸೆಟ್, ಸಿಡಿಗಳ ಅಗತ್ಯಕ್ಕನುಗುಣವಾಗಿ ಕತೆಯನ್ನು ಹಿಗ್ಗಿಸುವ, ಕುಗ್ಗಿಸುವ ರೀತಿಯಿಂದ ಹಿಡಿದು ವಿಷಯದ ಆಯ್ಕೆಯವರೆಗೂ ಇದು ಕೆಲಸ ಮಾಡಿದೆ. ಇನ್ನು, ಪ್ರಭುತ್ವಗಳು ತಮ್ಮ ಜನಪರ ಕಾರ್ಯಕ್ರಮಗಳ ಪ್ರಚಾರದ ಭಾಗವಾಗಿ ಕಲೆಗಳನ್ನು ಬಳಸಿಕೊಳ್ಳುವುದನ್ನೂ ನೋಡಬಹುದಾಗಿದೆ. ಸ್ವಚ್ಛ ಭಾರತ, ಕುಟುಂಬ ಯೋಜನೆ ಹೀಗೆ ಜನಜಾಗೃತಿ ಕಾರ್ಯಕ್ರಮಗಳ ಕುರಿತು ಜನರ ಗಮನ ಸೆಳೆಯುವಂತೆ ಈ ಕಲಾವಿನ್ಯಾಸವನ್ನು ಬಳಸಿಕೊಳ್ಳಲಾಗಿದೆ. ಇವೆಲ್ಲವುಗಳಾಚೆಗೆ ತುಂಬಾ ಅಪಾಯಕಾರಿ ಬೆಳವಣಿಗೆಯೆಂದರೆ ಕೋಮುವಾದಿ ಅಜೆಂಡಾಗಳನ್ನು ಜನಕ್ಕೆ ಹತ್ತಿರವಾದ ಕಲೆಗಳೊಳಗೆ ತುರುಕುವುದು. ತಾರತಮ್ಯದ ಎಳೆಗಳನ್ನು ಹೊಂದಿರುವ ಧಾರ್ಮಿಕ ಕಥನಗಳೊಳಗೆ ಬಹಳ ಸುಲಭವಾಗಿ ಇಂತಹ ವಿಚಾರಗಳನ್ನು ತುರುಕಬಹುದು. ಇತರ ಕಲೆಗಳೂ ಈ ಹಿಡಿತದಿಂದ ಪಾರಾಗಿಲ್ಲ. ಇದು ಕರಾವಳಿಯ ಕಲಾಪ್ರಕಾರವಾದ ಯಕ್ಷಗಾನದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಆಗಿರುವುದನ್ನು ಗಮನಿಸಬಹುದು.
ಹರಿಕಥೆಯ ರೀತಿಯಲ್ಲಿ ಜನಸಮೀಪವಾದ ಕಲೆಗಳಿಗಿರುವ ಬಹುದೊಡ್ಡ ಶಕ್ತಿಯೆಂದರೆ ಜನರನ್ನು ದೊಡ್ಡ ಪ್ರಮಾಣದಲ್ಲಿ ಒಳಗು ಮಾಡಿಕೊಳ್ಳುವ ಸಾಮಥ್ರ್ಯ. ಹರಿಕಥೆ ಮತ್ತು ಅದಕ್ಕೆ ಸಂವಾದಿಯಾದ ಕಲೆಗಳನ್ನು ಪ್ರದರ್ಶನ ಮಾಡುವವರಲ್ಲಿ ಎಲ್ಲ ಸಮುದಾಯಗಳ ಪ್ರಾತಿನಿಧ್ಯವೂ ಗೋಚರಿಸುತ್ತದೆ. ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು. ಅವು ಜನಪದ ಮಟ್ಟುಗಳಿಗೆ ಹತ್ತಿರವಾದ ಸಂಗೀತದ ಮೂಲಕ, ಜನಭಾಷೆಯ ಮೂಲಕ ಸಂವಾದಕ್ಕಿಳಿಸುತ್ತವೆ. ಇಂತಹ ಪ್ರಕಾರಗಳನ್ನು ಉಳಿಸಿಕೊಳ್ಳುವ, ಈ ಮೂಲಕ ಜನಪರ ವಿಚಾರಗಳನ್ನು ಹಬ್ಬುವ ಸಾಧ್ಯತೆ ಬಗ್ಗೆ ಚಿಂತಿಸಬೇಕಾಗಿದೆ.
ಈಗ ನಮ್ಮ ಮುಂದಿರುವ ಸವಾಲೆಂದರೆ, ಈ ಕಲಾವಿನ್ಯಾಸದೊಳಗಿನ ಹಲವು ವಿಚಾರಗಳನ್ನು ಒಪ್ಪದೇ ಇರುವ ಸಂದರ್ಭದಲ್ಲೂ ಒಂದು ಪ್ರಕಾರವಾಗಿ ಇದು ಜನರ ನಡುವೆ ಜೀವಂತವಾಗಿ ಇರುವಂತೆ ನೋಡಿಕೊಳ್ಳುವುದು ಹೇಗೆ ಎಂಬುದು. ವೈಚಾರಿಕವಾಗಿ ಚಿಂತಿಸುತ್ತಿರುವ ಸಂದರ್ಭದಲ್ಲೇ ಕಲೆಗಳ ಬಹುಮುಖ ಸಾಧ್ಯತೆಗಳನ್ನು ಕಡೆಗಣಿಸದೇ ಅವುಗಳನ್ನು ಹೇಗೆ ಜನರನ್ನು ಬೆಸೆಯುವ ಕೊಂಡಿಯಾಗಿಸಬಹುದು ಎಂಬ ಬಗ್ಗೆ ಯೋಚಿಸುವ ಅಗತ್ಯವಿದೆ. ಇದಕ್ಕೆ ಈಗಾಗಲೇ ಹಲವು ಮಾದರಿಗಳು ನಮ್ಮ ಮುಂದೆ ಇವೆ. ‘ಸಮುದಾಯ’ ಸಂಘಟನೆ ಬಹಳ ದೊಡ್ಡ ಪ್ರಮಾಣದಲ್ಲಿ ಈ ಯತ್ನ ಮಾಡಿದೆ, ಮಾಡುತ್ತಿದೆ. ಮಹಾರಾಷ್ಟ್ರದ ಕಬೀರ್ ಕಲಾಮಂಚ್ ಹಾಡು, ನಾಟಕ, ಕಥನಗಳ ನಿರೂಪಣೆಗಳ ಮೂಲಕ ಜನರನ್ನು ವ್ಯಾಪಕವಾಗಿ, ಪರಿಣಾಮಕಾರಿಯಾಗಿ ತಟ್ಟಿದ ಬಗೆ ನಮ್ಮ ಮುಂದಿದೆ. ರಂಗಭೂಮಿಯೂ ಹರಿಕಥೆ, ತಕ್ಷಗಾನ, ಬಾವುಲ್, ಪಾಂಡ್ವಾನಿ ಮೊದಲಾದ ಪ್ರಕಾರಗಳನ್ನು ನಿರೂಪಣೆಯಲ್ಲಿ ವೈವಿಧ್ಯತೆ ಸಾಧಿಸಿಕೊಳ್ಳುವ ದಾರಿಯಲ್ಲಿ ಬಳಸಿಕೊಳ್ಳುತ್ತಾ ಬಂದುದಕ್ಕೆ ಹಲವು ಉದಾಹರಣೆಗಳಿವೆ. ಈ ದಿಸೆಯಲ್ಲಿ ಹರಿಕಥೆಯ ಕಲಾವಿನ್ಯಾಸವನ್ನು ಇರಿಸಿಕೊಂಡು ಹೊಸ ಪ್ರಯೋಗಗಳಿಗೆ ಮುಂದಾಗಬಹುದು. ಜನಪರ ಚಳುವಳಿ, ಚಿಂತನೆ ಕಟ್ಟುವಲ್ಲಿ ಇದೂ ಒಂದು ದಾರಿಯಾಗಬಹುದು.
ಹರಿಕಥೆಯ ಪುನರುಜ್ಜೀವನಕ್ಕಾಗಿ ರೂಪುಗೊಂಡಿರುವ ಕಥಾ ಕೀರ್ತನ ಪರಿಷತ್ ಇದೆ; ಸಂಗೀತ ನೃತ್ಯ ಅಕಾಡೆಮಿ ಇದೆ. ಮಾತ್ರವಲ್ಲ ಇತರ ಯಾವುದೇ ಸಂಘಟನೆಯ ಮೂಲಕವಾಗಲೀ, ವೈಯಕ್ತಿಕ ನೆಲೆಯಲ್ಲಾಗಲೀ ಈ ಬಗೆಯ ಯತ್ನಕ್ಕೆ ಮನಸ್ಸು ಮಾಡಬಹುದಾಗಿದೆ. ಕೇವಲ ಧಾರ್ಮಿಕ ವಲಯದಲ್ಲಿ ಇಂತಹ ಕಲೆಗಳಿಗೆ ಪೋಷಣೆ ನೀಡುವುದರಾಚೆಗೆ ಸಾಮಾಜಿಕ ನೆಲೆಗಳನ್ನೂ ಒಳಗೊಂಡು ಪ್ರಜಾಸತ್ತಾತ್ಮಕವಾಗಿ ಚಿಂತಿಸುವ ಅಗತ್ಯವಿದೆ. ಕಲೆಗಳ ಉಳಿವು, ಪೋಷಣೆ, ಜನಪರ ಚಿಂತನೆಯ ಪ್ರಸಾರ ಈ ಎಲ್ಲವುಗಳ ದೃಷ್ಟಿಯಿಂದಲೂ ಇದು ಮುಖ್ಯವೆನಿಸುತ್ತದೆ.

(ಚರ್ಚೆಯ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಹಂಚಿಕೊಂಡ ವಿಚಾರಗಳಿಗೆ ಋಣಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...