Homeಅಂಕಣಗಳು"ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!"

“ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!”

- Advertisement -
- Advertisement -

ನೀವು ನಮ್ಮ ರೈಲುಗಳನ್ನು ನೋಡಿದ್ದೀರಾ? ನೋಡದಿದ್ದರೆ ಈಗ ಸರಿಯಾಗಿ ನೋಡಿ. ಎಷ್ಟೇ ದಿನ ತೊಳೆಯದಿದ್ದರೂ ಧೂಳು ಕಾಣದಂತೆ ಕಡುನೀಲಿ ಬಣ್ಣ ಹೊದ್ದು ಸಂಚರಿಸುತ್ತಿದ್ದ ರೈಲುಗಳನ್ನ ಹಿಡಿದುಕೊಂಡು ಹಳದಿ ಬಣ್ಣ ಬಳಿದದ್ದೂ ಅಲ್ಲದೆ, ಅವುಗಳ ಮೇಲೆ ರಕ್ತ ಬಣ್ಣದ ಕೆಂಪು ಪಟ್ಟಿ ಎಳೆದು ಹದಗೆಡಿಸಿದ್ದು ಬಿಜೆಪಿ ಅವದಿಯಲ್ಲಿ. ಇದೂ ಹಾಳುಬಿದ್ದು ಹೋಗಲಿ, ಒಳಗೆ ಕುಳಿತು ಪ್ರಯಾಣ ಮಾಡುವವನಿಗೆ ರೈಲು ಯಾವ ಬಣ್ಣದಲ್ಲಿದ್ದರೇನು. ಆದರೆ ಈ ಹೊಸ ರೈಲು ಬೋಗಿ ನಿರ್ಮಾಪಕರಾದ ಮಂದಮತಿಗಳು ಕೂರಲಾಗದ ಒಂದು ಅನಾಹುತ ಮಾಡಿದ್ದಾರೆ. ಅದೇನೆಂದರೆ, ಸೀಟುಗಳ ಉದ್ದವನ್ನೇ ಕಮ್ಮಿ ಮಾಡಿರುವುದು. ಅದರಿಂದ ಸೀಟುಗಳು ತೊಡೆಗೆ ಒತ್ತಿ ಹಿಂಸೆ ಕೊಡುತ್ತವೆ. ಸರಿಯಾಗಿ ಕೂರಲು ಹೋದರೆ ಬೆನ್ನಿನ ಭಾಗದಲ್ಲಿ ನೋವು ಆರಂಭವಾಗುತ್ತದೆ. ಜನಕ್ಕೆ ತೊಂದರೆ ಕೊಡುವುದೆಂದರೆ ಇದೆ. ಎಷ್ಟೆ, ಆಗಲಿ ಇದು ಪ್ರಜಾಪೀಡಕ ಸರಕಾರ ಆದ್ದರಿಂದ ಈ ಹಿಂದಿನ ಸುಖಕರ ಪ್ರಯಾಣವೀಗ ಹಿಂಸಾಯಾನವಾಗಿದೆ. ರೈಲ್ವೆ ಇಲಾಖೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಿರಿಯ ನಾಗರಿಕರ ರಿಯಾಯಿತಿ ದರವನ್ನು ರದ್ದು ಮಾಡಿದೆ. ಸಾಮಾಜಿಕವಾಗಿ ಎಲ್ಲರ ತಾತ್ಸಾರಕ್ಕೆ ಗುರಿಯಾದ ವೃದ್ಧರು ರೈಲ್ವೆ ಕಳ್ಳರಿಂದಲೂ ಅವಕೃಪೆಗೊಳಗಾದರಲ್ಲಾ, ಥೂತ್ತೇರಿ.

***

ರೈಲ್ವೆ ಅವಾಂತರ ಇಷ್ಟಕ್ಕೆ ಮುಗಿಯಲಿಲ್ಲ. ಈ ರಾಷ್ಟ್ರದ ಮೇಲೆ ನಿಧಾನವಾಗಿ ಹಿಂದಿ ಹೇರುವ ಸಂಚು ರೂಪಿಸಿರುವ ಬಿಜೆಪಿಗಳು ರೈಲ್ವೆ ನಿಲ್ದಾಣದಲ್ಲಿ ಪ್ರಧಾನವಾಗಿದ್ದ ಕನ್ನಡ ಬೋರ್ಡಿನ ಬದಲು ಹಿಂದಿ ಬಳಸತೊಡಗಿದ್ದಾರೆ. ಒಟ್ಟು ರೈಲ್ವೆ ಬೋಗಿ ಮತ್ತು ನಿಲ್ದಾಣದಿಂದಲೇ ಕನ್ನಡವನ್ನ ಕೊನೆಗಾಣಿಸುತ್ತಿದ್ದಾರೆ. ಇನ್ನು ಬಿಜೆಪಿಗಳ ಇನ್ನೊಂದು ಸಂಚು ಆಶ್ಚರ್ಯ ಹುಟ್ಟಿಸಿದೆ. ಕೆಲ ರೈಲು ಬೋಗಿಗಳ ಹೊಟ್ಟೆಯ ಮೇಲೆ ದೀನದಯಾಳು ಬೋಗಿ ಎಂದು ಬರೆಯಲಾಗಿದೆ. ಈ ದಿನದಯಾಳಿಗೂ ರೈಲ್ವೆ ಬೋಗಿಗೂ ಏನು ಸಂಬಂಧ ಎಂಬುದು ಹೊಸ ತಲೆಮಾರಿಗೆ ತಿಳಿಯುತ್ತಿರುವುದು ಹೀಗೆ: ರೈಲ್ವೆ ಬೋಗಿಗಳು ಈ ರೂಪದಲ್ಲಿ ಇರಬೇಕಾದರೆ ದೀನದಯಾಳರೇ ಇಂತವನ್ನ ತಯಾರಿಸಿ ಹಳಿಗಳ ಮೇಲೆ ಕೂರಿಸಿರಬೇಕು ಅಥವ ರೈಲು ಕಂಡುಹಿಡಿದವರು ಇವರೇ ಇರಬೇಕು ಎಂದು ಅಂದಾಜು ಮಾಡುವ ಸಂಭವವಿದೆ. ಮುಂದೆ ಹರ್ಡಿಕರ್ ಹವಾನಿಯಂತ್ರಿಕ ಬೋಗಿ, ಗೋಳ್ವಾಲ್ಕರ್ ಇಂಜನ್, ಹೆಡೆಗೆವಾರ್ ಕೋಚ್, ವಾಜಪೇಯಿ ಮಹಿಳಾ ಬೋಗಿ ಇಂತಹ ಹೆಸರುಹೊತ್ತ ಬೋಗಿಗಳು ರೈಲ್ವೆ ಹಳಿಗಳ ಮೇಲೆ ಕಾಣಿಸಿಕೊಳ್ಳಹುದಂತಲ್ಲಾ, ಥೂತ್ತೇರಿ.

****

ಕರ್ನಾಟಕದ ಮಟ್ಟಿಗೆ ಈ ವಾರ ಎರಡು ಮಹಾ ಘಟನೆಗಳು ಸಂಭವಿಸಿವೆಯಲ್ಲಾ. ಆ ಎರಡೂ ಘಟನೆಗಳು ಶಿವಮೊಗ್ಗ ಜಿಲ್ಲೆಯ ಜೋಡೆತ್ತಿನಂತಿದ್ದ ಎಡೂರಪ್ಪ ಮತ್ತು ಈಶ್ವರಪ್ಪನವರಿಗೆ ಸಂಬಂಧಿಸಿದ್ದು. ಒಬ್ಬರು ರಾಜಕೀಯದ ರಾಡಿಯಿಂದ ಚುಕ್ತಾ ಆಗಲು ತೀರ್ಮಾನಿಸಿದರೆ ಮತ್ತೊಬ್ಬರು 40 ಪರೆಸೆಂಟ್ ಆಪಾದನೆ ಮಾಡಿ ಸಾವಾದ ಪ್ರಕರಣದಿಂದ ಚುಕ್ತವಾಗಿದ್ದಾರೆ. ಮೊದಲನೆಯದಾಗಿ ತಮ್ಮ ರಾಜಕಾರಣಕ್ಕೆ ಇತಿಶ್ರೀ ಹಾಡಿ, ತಾವು ನಿಂತ ನೆಲವನ್ನ ಮಗನಿಗೆ ಬಿಟ್ಟುಕೊಟ್ಟು ನಿರ್ಗಮಿಸುವ ನಿರ್ಧಾರ ತೆಗೆದುಕೊಂಡಿರುವ ಎಡೂರಪ್ಪನ ಬಗ್ಗೆ ಎಲ್ಲರಿಂದ ಅನುಕಂಪ ವ್ಯಕ್ತವಾಗಿದೆ. ಏಕೆಂದರೆ ಅವರೇ ಇದ್ದಿದ್ದರೆ ಈ ನಾಡು ಈ ರೂಪದ ಕ್ಷೋಭೆಗೆ ಒಳಗಾಗುತ್ತಿರಲಿಲ್ಲ. ಬೆನ್ನು ಮೂಳೆಯಿಲ್ಲದ ಬೊಮ್ಮಾಯಿಯವರಿಂದ ನಡೆದ ಅನಾಹುತಗಳಾವುವೂ ಅವರಿದ್ದರೆ ಸಂಭವಿಸುತ್ತಿರಲಿಲ್ಲ ಶಿಕಾರಿಪುರದಲ್ಲಿ ಮುಸ್ಲಿಮರ ಓಟನ್ನು ತೆಗೆದುಕೊಳ್ಳುತ್ತಿರುವ ಎಡೂರಪ್ಪ ಮುಸ್ಲಿಮರಿಗೂ ಇಷ್ಟವಾದ ವ್ಯಕ್ತಿಯಾಗಿದ್ದರು. ಎಡೂರಪ್ಪನ ಬಗ್ಗೆ ಇನ್ನೊಂದು ರೂಪದ ಅನುಕಂಪ ಯಾವುದೆಂದರೆ, ಮುಖ್ಯಮಂತ್ರಿ ಹುದ್ದೆಯನ್ನು ಘನತೆಯಿಂದ ನಿಭಾಯಿಸಲಾಗದೆ, ಬರೀ ಹಗರಣ, ವಿವಾದ ಮತ್ತು ಸ್ವಜನಪಕ್ಷಪಾತ, ಕಾರಾಗೃಹದ ಕೆಟ್ಟ ಕನಸು ಬರೀ ಇಂತದರಲ್ಲೇ ಅವರ ಅವಧಿ ಮುಗಿದಂತೆ ಕಾಣುತ್ತಿದೆ; ಇದನ್ನೆಲ್ಲಾ ಎಡೂರಪ್ಪ ಮಾತ್ರ ತಡೆದುಕೊಳ್ಳುವ ಶಕ್ತಿ ಪಡೆದಿದ್ದರಂತಲ್ಲಾ, ಥೂತ್ತೇರಿ.

*****

ಈ ಬಿಜೆಪಿ ಹಿಂದಿನಿಂದಲೂ ಧನವಂತರು, ಖ್ಯಾತಿವಂತರು ಮತ್ತು ತೋಳ್ಬಲದ ಮಂದಮತಿಗಳನ್ನ ಮನಸೋ ಇಚ್ಛೆ ಬಳಸಿಕೊಂಡು ಒಂದು ಹಂತದಲ್ಲಿ ಬಿಸಾಡಿ ನಡೆಯುತ್ತಿರುವುದು, ಅದರ ಅಜೆಂಡಾದಂತೆಯೇ ನಡೆದು ಬರುತ್ತಿದೆಯಂತಲ್ಲಾ. ಎಡೂರಪ್ಪನ ಮುಖಾಂತರ ಲಿಂಗಾಯತರು ಬಿಜೆಪಿಯ ಪಡಸಾಲೆಗೆ ಬರಬೇಕಿತ್ತು, ಅದೂ ಆಯ್ತು. ಇನ್ನವರ ಅಗತ್ಯವಿಲ್ಲ. ಇನ್ನ ಧನವಂತರಾಗಿ ಮೆರೆದ ರೆಡ್ಡಿಗಳು ಗಣಿಮಣ್ಣಿನಲ್ಲಿ ಮರೆಯಾದರು. ತೋಳ್ಬಲದ ಈಶ್ವರಪ್ಪನ ಕಾಲ ಇನ್ನೊಂದಿಷ್ಟು ದಿನ ನಡೆಯಬಹುದು. ಆದರೆ ನಲವತ್ತು ಪರಸೆಂಟ್ ಆರೋಪ ಮಾಡಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಸಂತೋಷ್ ಪಾಟೀಲ್ ಈಶ್ವರಪ್ಪನವರ ಮೇಲೆ ಆರೋಪ ಹೊರಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸರಕಾರದ ಪೊಲಿಸ್ ಪೇದೆಗಳು ಎಲ್ಲರ ನಿರೀಕ್ಷೆಯಂತೆ, ’ಪಾಪ ಧರ್ಮವಂತರು, ಸತ್ಯವಂತರು, ನೀತಿವಂತರೂ ಆದ ಈಶ್ವರಪ್ಪನವರಿಗೂ ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ; ಅವರು ಬೆಳಗಾವಿ ಕಡೆಯವರು, ಈಶ್ವರಪ್ಪ ಶಿವಮೊಗ್ಗದವರು. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಉಡುಪಿಯಲ್ಲಿ. ಹೇಗೆ ನೋಡಿದರೂ ಈ ಪ್ರಕರಣಕ್ಕೂ ಈಶ್ವರಪ್ಪರಿಗೂ ಕನಿಷ್ಟ ನಾನೂರು ಕಿಲೋಮೀಟರ್ ದೂರ. ಆದ್ದರಿಂದ ನಾವು ಮಾಡದೆ ಇದ್ದರೂ ಬಿ ರಿಪೋರ್ಟ್ ತಂತಾನೆ ರೂಪುಗೊಳ್ಳುತ್ತದೆ’ ಎಂದು ವಾದಿಸುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...