Homeಅಂಕಣಗಳು"ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!"

“ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!”

- Advertisement -
- Advertisement -

ನೀವು ನಮ್ಮ ರೈಲುಗಳನ್ನು ನೋಡಿದ್ದೀರಾ? ನೋಡದಿದ್ದರೆ ಈಗ ಸರಿಯಾಗಿ ನೋಡಿ. ಎಷ್ಟೇ ದಿನ ತೊಳೆಯದಿದ್ದರೂ ಧೂಳು ಕಾಣದಂತೆ ಕಡುನೀಲಿ ಬಣ್ಣ ಹೊದ್ದು ಸಂಚರಿಸುತ್ತಿದ್ದ ರೈಲುಗಳನ್ನ ಹಿಡಿದುಕೊಂಡು ಹಳದಿ ಬಣ್ಣ ಬಳಿದದ್ದೂ ಅಲ್ಲದೆ, ಅವುಗಳ ಮೇಲೆ ರಕ್ತ ಬಣ್ಣದ ಕೆಂಪು ಪಟ್ಟಿ ಎಳೆದು ಹದಗೆಡಿಸಿದ್ದು ಬಿಜೆಪಿ ಅವದಿಯಲ್ಲಿ. ಇದೂ ಹಾಳುಬಿದ್ದು ಹೋಗಲಿ, ಒಳಗೆ ಕುಳಿತು ಪ್ರಯಾಣ ಮಾಡುವವನಿಗೆ ರೈಲು ಯಾವ ಬಣ್ಣದಲ್ಲಿದ್ದರೇನು. ಆದರೆ ಈ ಹೊಸ ರೈಲು ಬೋಗಿ ನಿರ್ಮಾಪಕರಾದ ಮಂದಮತಿಗಳು ಕೂರಲಾಗದ ಒಂದು ಅನಾಹುತ ಮಾಡಿದ್ದಾರೆ. ಅದೇನೆಂದರೆ, ಸೀಟುಗಳ ಉದ್ದವನ್ನೇ ಕಮ್ಮಿ ಮಾಡಿರುವುದು. ಅದರಿಂದ ಸೀಟುಗಳು ತೊಡೆಗೆ ಒತ್ತಿ ಹಿಂಸೆ ಕೊಡುತ್ತವೆ. ಸರಿಯಾಗಿ ಕೂರಲು ಹೋದರೆ ಬೆನ್ನಿನ ಭಾಗದಲ್ಲಿ ನೋವು ಆರಂಭವಾಗುತ್ತದೆ. ಜನಕ್ಕೆ ತೊಂದರೆ ಕೊಡುವುದೆಂದರೆ ಇದೆ. ಎಷ್ಟೆ, ಆಗಲಿ ಇದು ಪ್ರಜಾಪೀಡಕ ಸರಕಾರ ಆದ್ದರಿಂದ ಈ ಹಿಂದಿನ ಸುಖಕರ ಪ್ರಯಾಣವೀಗ ಹಿಂಸಾಯಾನವಾಗಿದೆ. ರೈಲ್ವೆ ಇಲಾಖೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಿರಿಯ ನಾಗರಿಕರ ರಿಯಾಯಿತಿ ದರವನ್ನು ರದ್ದು ಮಾಡಿದೆ. ಸಾಮಾಜಿಕವಾಗಿ ಎಲ್ಲರ ತಾತ್ಸಾರಕ್ಕೆ ಗುರಿಯಾದ ವೃದ್ಧರು ರೈಲ್ವೆ ಕಳ್ಳರಿಂದಲೂ ಅವಕೃಪೆಗೊಳಗಾದರಲ್ಲಾ, ಥೂತ್ತೇರಿ.

***

ರೈಲ್ವೆ ಅವಾಂತರ ಇಷ್ಟಕ್ಕೆ ಮುಗಿಯಲಿಲ್ಲ. ಈ ರಾಷ್ಟ್ರದ ಮೇಲೆ ನಿಧಾನವಾಗಿ ಹಿಂದಿ ಹೇರುವ ಸಂಚು ರೂಪಿಸಿರುವ ಬಿಜೆಪಿಗಳು ರೈಲ್ವೆ ನಿಲ್ದಾಣದಲ್ಲಿ ಪ್ರಧಾನವಾಗಿದ್ದ ಕನ್ನಡ ಬೋರ್ಡಿನ ಬದಲು ಹಿಂದಿ ಬಳಸತೊಡಗಿದ್ದಾರೆ. ಒಟ್ಟು ರೈಲ್ವೆ ಬೋಗಿ ಮತ್ತು ನಿಲ್ದಾಣದಿಂದಲೇ ಕನ್ನಡವನ್ನ ಕೊನೆಗಾಣಿಸುತ್ತಿದ್ದಾರೆ. ಇನ್ನು ಬಿಜೆಪಿಗಳ ಇನ್ನೊಂದು ಸಂಚು ಆಶ್ಚರ್ಯ ಹುಟ್ಟಿಸಿದೆ. ಕೆಲ ರೈಲು ಬೋಗಿಗಳ ಹೊಟ್ಟೆಯ ಮೇಲೆ ದೀನದಯಾಳು ಬೋಗಿ ಎಂದು ಬರೆಯಲಾಗಿದೆ. ಈ ದಿನದಯಾಳಿಗೂ ರೈಲ್ವೆ ಬೋಗಿಗೂ ಏನು ಸಂಬಂಧ ಎಂಬುದು ಹೊಸ ತಲೆಮಾರಿಗೆ ತಿಳಿಯುತ್ತಿರುವುದು ಹೀಗೆ: ರೈಲ್ವೆ ಬೋಗಿಗಳು ಈ ರೂಪದಲ್ಲಿ ಇರಬೇಕಾದರೆ ದೀನದಯಾಳರೇ ಇಂತವನ್ನ ತಯಾರಿಸಿ ಹಳಿಗಳ ಮೇಲೆ ಕೂರಿಸಿರಬೇಕು ಅಥವ ರೈಲು ಕಂಡುಹಿಡಿದವರು ಇವರೇ ಇರಬೇಕು ಎಂದು ಅಂದಾಜು ಮಾಡುವ ಸಂಭವವಿದೆ. ಮುಂದೆ ಹರ್ಡಿಕರ್ ಹವಾನಿಯಂತ್ರಿಕ ಬೋಗಿ, ಗೋಳ್ವಾಲ್ಕರ್ ಇಂಜನ್, ಹೆಡೆಗೆವಾರ್ ಕೋಚ್, ವಾಜಪೇಯಿ ಮಹಿಳಾ ಬೋಗಿ ಇಂತಹ ಹೆಸರುಹೊತ್ತ ಬೋಗಿಗಳು ರೈಲ್ವೆ ಹಳಿಗಳ ಮೇಲೆ ಕಾಣಿಸಿಕೊಳ್ಳಹುದಂತಲ್ಲಾ, ಥೂತ್ತೇರಿ.

****

ಕರ್ನಾಟಕದ ಮಟ್ಟಿಗೆ ಈ ವಾರ ಎರಡು ಮಹಾ ಘಟನೆಗಳು ಸಂಭವಿಸಿವೆಯಲ್ಲಾ. ಆ ಎರಡೂ ಘಟನೆಗಳು ಶಿವಮೊಗ್ಗ ಜಿಲ್ಲೆಯ ಜೋಡೆತ್ತಿನಂತಿದ್ದ ಎಡೂರಪ್ಪ ಮತ್ತು ಈಶ್ವರಪ್ಪನವರಿಗೆ ಸಂಬಂಧಿಸಿದ್ದು. ಒಬ್ಬರು ರಾಜಕೀಯದ ರಾಡಿಯಿಂದ ಚುಕ್ತಾ ಆಗಲು ತೀರ್ಮಾನಿಸಿದರೆ ಮತ್ತೊಬ್ಬರು 40 ಪರೆಸೆಂಟ್ ಆಪಾದನೆ ಮಾಡಿ ಸಾವಾದ ಪ್ರಕರಣದಿಂದ ಚುಕ್ತವಾಗಿದ್ದಾರೆ. ಮೊದಲನೆಯದಾಗಿ ತಮ್ಮ ರಾಜಕಾರಣಕ್ಕೆ ಇತಿಶ್ರೀ ಹಾಡಿ, ತಾವು ನಿಂತ ನೆಲವನ್ನ ಮಗನಿಗೆ ಬಿಟ್ಟುಕೊಟ್ಟು ನಿರ್ಗಮಿಸುವ ನಿರ್ಧಾರ ತೆಗೆದುಕೊಂಡಿರುವ ಎಡೂರಪ್ಪನ ಬಗ್ಗೆ ಎಲ್ಲರಿಂದ ಅನುಕಂಪ ವ್ಯಕ್ತವಾಗಿದೆ. ಏಕೆಂದರೆ ಅವರೇ ಇದ್ದಿದ್ದರೆ ಈ ನಾಡು ಈ ರೂಪದ ಕ್ಷೋಭೆಗೆ ಒಳಗಾಗುತ್ತಿರಲಿಲ್ಲ. ಬೆನ್ನು ಮೂಳೆಯಿಲ್ಲದ ಬೊಮ್ಮಾಯಿಯವರಿಂದ ನಡೆದ ಅನಾಹುತಗಳಾವುವೂ ಅವರಿದ್ದರೆ ಸಂಭವಿಸುತ್ತಿರಲಿಲ್ಲ ಶಿಕಾರಿಪುರದಲ್ಲಿ ಮುಸ್ಲಿಮರ ಓಟನ್ನು ತೆಗೆದುಕೊಳ್ಳುತ್ತಿರುವ ಎಡೂರಪ್ಪ ಮುಸ್ಲಿಮರಿಗೂ ಇಷ್ಟವಾದ ವ್ಯಕ್ತಿಯಾಗಿದ್ದರು. ಎಡೂರಪ್ಪನ ಬಗ್ಗೆ ಇನ್ನೊಂದು ರೂಪದ ಅನುಕಂಪ ಯಾವುದೆಂದರೆ, ಮುಖ್ಯಮಂತ್ರಿ ಹುದ್ದೆಯನ್ನು ಘನತೆಯಿಂದ ನಿಭಾಯಿಸಲಾಗದೆ, ಬರೀ ಹಗರಣ, ವಿವಾದ ಮತ್ತು ಸ್ವಜನಪಕ್ಷಪಾತ, ಕಾರಾಗೃಹದ ಕೆಟ್ಟ ಕನಸು ಬರೀ ಇಂತದರಲ್ಲೇ ಅವರ ಅವಧಿ ಮುಗಿದಂತೆ ಕಾಣುತ್ತಿದೆ; ಇದನ್ನೆಲ್ಲಾ ಎಡೂರಪ್ಪ ಮಾತ್ರ ತಡೆದುಕೊಳ್ಳುವ ಶಕ್ತಿ ಪಡೆದಿದ್ದರಂತಲ್ಲಾ, ಥೂತ್ತೇರಿ.

*****

ಈ ಬಿಜೆಪಿ ಹಿಂದಿನಿಂದಲೂ ಧನವಂತರು, ಖ್ಯಾತಿವಂತರು ಮತ್ತು ತೋಳ್ಬಲದ ಮಂದಮತಿಗಳನ್ನ ಮನಸೋ ಇಚ್ಛೆ ಬಳಸಿಕೊಂಡು ಒಂದು ಹಂತದಲ್ಲಿ ಬಿಸಾಡಿ ನಡೆಯುತ್ತಿರುವುದು, ಅದರ ಅಜೆಂಡಾದಂತೆಯೇ ನಡೆದು ಬರುತ್ತಿದೆಯಂತಲ್ಲಾ. ಎಡೂರಪ್ಪನ ಮುಖಾಂತರ ಲಿಂಗಾಯತರು ಬಿಜೆಪಿಯ ಪಡಸಾಲೆಗೆ ಬರಬೇಕಿತ್ತು, ಅದೂ ಆಯ್ತು. ಇನ್ನವರ ಅಗತ್ಯವಿಲ್ಲ. ಇನ್ನ ಧನವಂತರಾಗಿ ಮೆರೆದ ರೆಡ್ಡಿಗಳು ಗಣಿಮಣ್ಣಿನಲ್ಲಿ ಮರೆಯಾದರು. ತೋಳ್ಬಲದ ಈಶ್ವರಪ್ಪನ ಕಾಲ ಇನ್ನೊಂದಿಷ್ಟು ದಿನ ನಡೆಯಬಹುದು. ಆದರೆ ನಲವತ್ತು ಪರಸೆಂಟ್ ಆರೋಪ ಮಾಡಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಸಂತೋಷ್ ಪಾಟೀಲ್ ಈಶ್ವರಪ್ಪನವರ ಮೇಲೆ ಆರೋಪ ಹೊರಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸರಕಾರದ ಪೊಲಿಸ್ ಪೇದೆಗಳು ಎಲ್ಲರ ನಿರೀಕ್ಷೆಯಂತೆ, ’ಪಾಪ ಧರ್ಮವಂತರು, ಸತ್ಯವಂತರು, ನೀತಿವಂತರೂ ಆದ ಈಶ್ವರಪ್ಪನವರಿಗೂ ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ; ಅವರು ಬೆಳಗಾವಿ ಕಡೆಯವರು, ಈಶ್ವರಪ್ಪ ಶಿವಮೊಗ್ಗದವರು. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಉಡುಪಿಯಲ್ಲಿ. ಹೇಗೆ ನೋಡಿದರೂ ಈ ಪ್ರಕರಣಕ್ಕೂ ಈಶ್ವರಪ್ಪರಿಗೂ ಕನಿಷ್ಟ ನಾನೂರು ಕಿಲೋಮೀಟರ್ ದೂರ. ಆದ್ದರಿಂದ ನಾವು ಮಾಡದೆ ಇದ್ದರೂ ಬಿ ರಿಪೋರ್ಟ್ ತಂತಾನೆ ರೂಪುಗೊಳ್ಳುತ್ತದೆ’ ಎಂದು ವಾದಿಸುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...