Homeಕರ್ನಾಟಕವೃದ್ಧ ಯಡಿಯೂರಪ್ಪನವರಿಗೆ ಕೈ ಕೊಡುತ್ತಿವೆ ಈ ಮೂರು ಸಂಗತಿಗಳು

ವೃದ್ಧ ಯಡಿಯೂರಪ್ಪನವರಿಗೆ ಕೈ ಕೊಡುತ್ತಿವೆ ಈ ಮೂರು ಸಂಗತಿಗಳು

ಬಿಎಸ್‍ವೈ ಬಹಳ ದಿನಗಳ ಕಾಲ ಸಿಎಂ ಆಗಿ ಮುಂದುವರೆಯುವುದು ಅಸಾಧ್ಯ. ಅದಕ್ಕೆ ಇರುವ ಹೊರಗಿನ ಕಾರಣಗಳಿಗಿಂತ ಸಿಎಂ ಸ್ಥಾನಕ್ಕೆ ಅಗತ್ಯವಿರುವ ಷಾರ್ಪ್‍ನೆಸ್ ಅವರು ಕಳೆದುಕೊಂಡಿರುವುದೇ ಪ್ರಮುಖ ಕಾರಣವಾಗಿದೆ.

- Advertisement -
- Advertisement -

ಯಡಿಯೂರಪ್ಪನವರ ವಿರುದ್ಧದ ಕಾರಸ್ತಾನವಂತೂ ನಿರಂತರವಾಗಿ ನಡೆಯುತ್ತಲೇ ಇದೆ. ಇತ್ತೀಚೆಗೆ ನಡೆದ ಕತ್ತಿ ಔತಣಕೂಟವು ಅದರಲ್ಲಿ ಒಂದು ಭಾಗ ಅಷ್ಟೇ. ಅದಕ್ಕಿಂತಲೂ ದೊಡ್ಡ ಏಟು ಕೊಡಲು ಹೊರಟಿರುವುದು ಮೀಡಿಯಾಗಳ ಮೂಲಕ. ದಿನನಿತ್ಯ ಮೋದಿ ಭಜನೆ ಮಾತ್ರವಲ್ಲದೇ, ಬಿಜೆಪಿ ಪರ ಹಾಗೂ ಆರೆಸ್ಸೆಸ್‍ನ ದ್ವೇಷಪೂರಿತ ಅಜೆಂಡಾಕ್ಕೆ ಗಾಳಿ ಹಾಕುತ್ತಲೇ ಇರುವ ಮೀಡಿಯಾಗಳು ಇದ್ದಕ್ಕಿದ್ದಂತೆ ಯಡಿಯೂರಪ್ಪನವರ ವಿರುದ್ಧ ಜಿದ್ದಿಗೆ ಬಿದ್ದಂತೆ ಸ್ಟೋರಿ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಮನೆಯಲ್ಲೇ ಇರುವುದನ್ನು ಖಚಿತಪಡಿಸಿಕೊಂಡು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಮುಖ್ಯವಾದ ಸಂಗತಿಗಳನ್ನು ತಲುಪಿಸಲು ಧವಳಗಿರಿಗೆ ಬರುತ್ತಾರೆ. ಅಧಿಕಾರಿಯ ಮಟ್ಟಿಗೆ ಅದು ಸಿಎಂ ಕಿವಿಗೆ ಹಾಕಲೇಬೇಕಾದ ವಿಚಾರವಾಗಿತ್ತು. ಎದುರಿಗೆ ಬಂದು ಕೂತ ಅಧಿಕಾರಿಯು ಮೂರ್ನಾಲ್ಕು ನಿಮಿಷಗಳಲ್ಲಿ ಮುಖ್ಯವಾದ ಸಂಗತಿಗಳನ್ನು ಹೇಳುತ್ತಾರೆ. ಯಡಿಯೂರಪ್ಪನವರು ‘ಸರಿ, ಮುಗೀತಾ?’ ಎಂದು ಸೌಮ್ಯವಾಗಿಯೇ ಕೇಳಿದಾಗ, ಅಧಿಕಾರಿ ‘ಯಸ್ ಸರ್’ ಎಂದು ಹೇಳಿ ಸಿಎಂ ಪ್ರತಿಕ್ರಿಯೆಗಾಗಿ ಕಾಯುತ್ತಾರೆ. ಸಿಎಂ ಎದ್ದು ನಿಂತು ‘ಆಯ್ತು’ ಎಂದು ಬಾಗಿಲಿನ ಕಡೆ ನಡೆದುಬಿಡುತ್ತಾರೆ. ಅಷ್ಟು ಗಹನವಾದ ಸಂಗತಿಯ ಕುರಿತು ಸಿಎಂ ಒಂದೇ ಒಂದು ಪ್ರತಿಕ್ರಿಯೆ ಕೊಡದೇ, ಸೂಚನೆಗಳನ್ನು ನೀಡದೇ, ಕನಿಷ್ಠ ನಂತರ ಮಾತಾಡ್ತೀನಿ ಎಂತಲೂ ಹೇಳದೇ ಹೇಗೆ ಹೋಗುತ್ತಾರೆ ಎಂದು ಇವರಿಗೆ ಆಶ್ಚರ್ಯ. ತಾವು ವರದಿಯನ್ನು ಹೇಳುವಾಗಲೂ ಯಡಿಯೂರಪ್ಪನವರು ದೂರದಲ್ಲಿ ಏನನ್ನೋ ನಿರ್ಭಾವುಕವಾಗಿ ನೋಡುತ್ತಿದ್ದುದನ್ನು ಅಧಿಕಾರಿ ಗಮನಿಸಿದ್ದರು.

ಸಿದ್ದರಾಮಯ್ಯನವರೂ ಹಾಗೆಯೇ. ಮೂಡ್ ಚೆನ್ನಾಗಿದ್ದರೆ ಮಾತುಗಳನ್ನು ಕೇಳಿಕೊಂಡು ಮಧ್ಯೆ ತಮಾಷೆ ಮಾಡುತ್ತಾ, ಅದಕ್ಕೆ ತಮ್ಮದೇ ಪ್ರತಿಕ್ರಿಯೆಗಳನ್ನು ನೀಡುತ್ತಾ ಕೇಳಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಅಲ್ಲಿ ಕೂತಿರುವವರಲ್ಲಿ ಒಬ್ಬರ ಮುಖ ನೋಡುತ್ತಾ ಇದ್ದುಬಿಡುತ್ತಾರೆ. ಯಾರ ಮುಖ ನೋಡುತ್ತಿರುತ್ತಾರೋ ಅವರಿಗೂ ತನ್ನನ್ನು ನೋಡುತ್ತಿದ್ದಾರಾ ಇಲ್ಲವಾ ಡೌಟು. ವರದಿ ಒಪ್ಪಿಸುತ್ತಿರುವವರಿಗೂ ತಾನು ಮಾತು ಮುಂದುವರೆಸಲಾ ಬೇಡವಾ ಅಂತ ಅನುಮಾನ. ಆದರೆ ಅವರ ಜೊತೆ ಕೆಲಸ ಮಾಡಿರುವ ಎಲ್ಲರಿಗೂ ಖಚಿತವಾಗಿರುವುದೆಂದರೆ, ಈ ವರದಿಯ ಪ್ರತಿ ಪದವೂ ಅವರಿಗೆ ತಲುಪಿರುತ್ತದೆ. ಏಕೆಂದರೆ ಈಗ ಅನ್ಯಮನಸ್ಕರಾಗಿ ಕೇಳುತ್ತಿದ್ದಂತಹ ಸಿದ್ದು ಮುಂದೊಂದು ದಿನ ಅದರಲ್ಲಿನ ಅತೀ ಸಣ್ಣ ವಿವರವನ್ನೂ ಎತ್ತಿಕೊಂಡು ಮಾತಾಡುತ್ತಾರೆ. ಹಾಗಾಗಿ ಕೆಲವು ಸಂದರ್ಭಗಳಲ್ಲಿ ತನ್ನೊಂದಿಗೆ ಮಾತನಾಡುವವರ ಮುಖವನ್ನು ನೋಡದೇ ಎತ್ತಲೋ ನೋಡುವುದು ಕೇವಲ ಮ್ಯಾನರಿಸಂ ಅಥವಾ ಉದ್ದೇಶಪೂರ್ವಕ ನಡವಳಿಕೆಯೇ ಹೊರತು ಅನ್ಯಮನಸ್ಕತೆಯಲ್ಲವೆಂದು ಗೊತ್ತಾಗಿರುವ ಎಲ್ಲರೂ ಗಂಭೀರವಾಗಿಯೇ ವರದಿ ಒಪ್ಪಿಸುತ್ತಾರೆ.

ಚುರುಕು ಯಡಿಯೂರಪ್ಪನವರ ಮೊದಲ ಇನ್ನಿಂಗ್ಸ್

ಆದರೆ ಯಡಿಯೂರಪ್ಪನವರ ವಿಚಾರದಲ್ಲಿ ಆಗುತ್ತಿರುವುದೇ ಬೇರೆ. ಮೊದಲ ಸಾರಿ ಮುಖ್ಯಮಂತ್ರಿಯಾಗಿದ್ದಾಗ ಅವರು ಹೀಗಿರಲಿಲ್ಲ. ನೇರವಾಗಿ ಎಲ್ಲಕ್ಕೂ ಪ್ರತಿಕ್ರಿಯಿಸುತ್ತಿದ್ದರು. ಖಚಿತ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು. ಇಡೀ ಆಡಳಿತ ಯಂತ್ರದ ಮೇಲೆ ಅವರದ್ದೇ ನೇರ ಹತೋಟಿ ಇರುತ್ತಿತ್ತು. ಅವರದ್ದೊಂದು ತಂಡವಿದ್ದು ಹಲವು ಕೆಲಸಗಳನ್ನು ತೆರೆಮರೆಯಲ್ಲಿ ಮತ್ತು ಮುನ್ನೆಲೆಯಲ್ಲಿ ನಿಭಾಯಿಸುತ್ತಿತ್ತಾದರೂ ಕಮ್ಯಾಂಡರ್ ಸ್ವತಃ ಅವರೇ ಆಗಿದ್ದರು. ಅವರನ್ನು ಸಿಎಂ ಪಟ್ಟದಿಂದ ಇಳಿಸುವ ಸಂದರ್ಭ ಬಂದ ಒಂದು ಘಟನೆಯನ್ನು ಇಲ್ಲಿ ಉದಾಹರಿಸಬಹುದು. ಮಾತಾಡಬೇಕು ಎಂದು ದೆಹಲಿಗೆ ಕರೆಸಿಕೊಂಡ ಬಿಜೆಪಿಯ ಹೈಕಮ್ಯಾಂಡ್ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕೆಂದು ಸ್ಪಷ್ಟವಾಗಿ ಹೇಳಿತು. ಅಡ್ವಾಣಿಯವರ ಮನೆಯಿಂದ ಬಿಎಸ್‍ವೈ ಸೀದಾ ಏರ್‌ಪೋರ್ಟಿಗೆ ಹೋದರು. ಎಲ್ಲಾ ಟಿವಿ ಚಾನೆಲ್‍ಗಳ ಕ್ಯಾಮೆರಾಗಳು ಅವರನ್ನೇ ಹಿಂಬಾಲಿಸುತ್ತಿದ್ದವು. ವಿಮಾನ ಹತ್ತಿದ ಮೇಲೆ ಮೊಬೈಲ್ ಫೋನ್ ಸಹಾ ಇರುವುದಿಲ್ಲ. ಆದರೆ ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಇಳಿಯುವ ಹೊತ್ತಿಗೆ ಅವರ ಬೆಂಗಳೂರು ನಿವಾಸದಲ್ಲಿ ಅರ್ಧದಷ್ಟು ಎಂಎಲ್‍ಎಗಳು ಸೇರಿಯಾಗಿತ್ತು.

ದೆಹಲಿಯಲ್ಲಿ ವಿಮಾನ ಹತ್ತುವ ಮುಂಚೆ ಕೋಪವಿದ್ದರೂ ಹೈಕಮಾಂಡ್ ಮಾತಿಗೆ ಬಾಗಬಹುದೆಂಬ ರೀತಿ ತೋರ್ಪಡಿಸಿದ್ದ ಬಿಎಸ್‍ವೈ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಉಲ್ಟಾ ಹೊಡೆದಿದ್ದರು. 2 ಗಂಟೆಗಳ ಕಾಲ ಫೋನ್ ಇರದಿದ್ದರೂ, ಅದಕ್ಕೆ ಮುಂಚಿನ ಅರ್ಧ ಗಂಟೆಯಲ್ಲಿ ಮುಂದೇನು ಮಾಡಬೇಕೆಂಬ ಕುರಿತು ತಮ್ಮ ಹಿಂಬಾಲಕರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಬೆಂಗಳೂರಿಗೆ ಅವರು ಬಂದಿಳಿಯುವ ಹೊತ್ತಿಗೆ ಯಡಿಯೂರಪ್ಪನವರು ಬಂಡಾಯವೇಳಲು ಬೇಕಾದ ತಯಾರಿಯಾಗಿ ಹೋಗಿದೆ ಎಂಬ ವಾತಾವರಣ ನಿರ್ಮಾಣವಾಗಿತ್ತು. ಕೆಲ ಕಾಲದ ನಂತರ ಬಿಎಸ್‍ವೈ ರಾಜೀನಾಮೆ ಕೊಟ್ಟರಾದರೂ, ಅದನ್ನೂ ಒಂದು ರೋಡ್‍ಷೋ ಮೂಲಕ ಮಾಡಿದ್ದರು. 68 ವರ್ಷದವರಾಗಿದ್ದ ಅವರು ಪ್ರತಿಯೊಂದು ವಿಚಾರದಲ್ಲೂ ಚುರುಕುತನ ಮತ್ತು ಸಾಮಥ್ರ್ಯವನ್ನು ತೋರಿದ್ದರು.

ಆ ಷಾರ್ಪ್‍ನೆಸ್ ಈಗ ಎಲ್ಲಿ ಹೋಯಿತು?

ಈಗ ಯಡಿಯೂರಪ್ಪನವರಿಗೆ 77 ವರ್ಷ ವಯಸ್ಸು. ಈ ಸದ್ಯ ದೇವೇಗೌಡರು ಮತ್ತು ಖರ್ಗೆಯವರನ್ನು ಬಿಟ್ಟರೆ ರಾಜ್ಯದ ದೊಡ್ಡ ನಾಯಕರುಗಳಲ್ಲಿ ಇವರೇ ಸೀನಿಯರ್. ಆದರೆ, ಆ ಇಬ್ಬರು ಸೀನಿಯರ್ ನಾಯಕರುಗಳ ಷಾರ್ಪ್‍ನೆಸ್‍ಗೂ ಹೋಲಿಸಲಾಗದ ಪ್ರಮಾಣಕ್ಕೆ ಬಿಎಸ್‍ವೈ ಕುಸಿದಿದ್ದಾರೆ. ಯಾವ್ಯಾವ ಅಧಿಕಾರಿ ಯಾವ್ಯಾವ ಆಯಕಟ್ಟಿನ ಸ್ಥಾನದಲ್ಲಿ ನಿಯೋಜಿತರಾಗಿದ್ದಾರೆ ಎಂಬುದೇ ಮುಖ್ಯಮಂತ್ರಿಯ ನೆನಪಿನಲ್ಲಿ ಇಲ್ಲ. ಈ ಬರಹದ ಮೊದಲಲ್ಲಿ ಹೇಳಲಾದ ಘಟನೆ ಒಬ್ಬ ಅಧಿಕಾರಿಯ ಅನುಭವವಲ್ಲ. ಹಲವಾರು ಹಿರಿಯ ಅಧಿಕಾರಿಗಳು ಇದನ್ನು ನೋಡಿದ್ದಾರೆ ಮತ್ತು ಹಿರಿಯ ಅಧಿಕಾರಿಗಳ ವಲಯದಲ್ಲಿ ಇದು ಬಹುತೇಕ ಎಲ್ಲರಿಗೂ ಗೊತ್ತಿರುವ ಸಂಗತಿ.

ಇದಕ್ಕೆ ಮೂರು ಕಾರಣಗಳಿರಬಹುದು ಎಂಬ ಊಹೆಯನ್ನು ಬಿಜೆಪಿ ವಲಯದಲ್ಲಿ ಹಲವರು ಒಪ್ಪುತ್ತಾರೆ. ಅಧಿಕಾರಿಗಳ ಜೊತೆಗೆ ಕ್ರಾಸ್‍ಚೆಕ್ ಮಾಡಿದರೆ ಹೆಚ್ಚಿನವರು ಅದನ್ನು ಖಚಿತಪಡಿಸಿದರು ಮತ್ತು ಅದಕ್ಕೆ ಬೇಕಾದ ಪುರಾವೆಗಳನ್ನು ಒದಗಿಸಿದರು. ಆ ಪುರಾವೆಗಳ ಹಿಂದೆ ಬಿದ್ದರೆ ಕರ್ನಾಟಕದ ಇತಿಹಾಸದ ಅತೀ ದೊಡ್ಡ ಭ್ರಷ್ಟಾಚಾರದ ಲಿಂಕುಗಳು ದೊರೆಯುವುದರಲ್ಲಿ ಸಂಶಯವಿಲ್ಲ. (ಒಂದು ಸಣ್ಣ ಹಗರಣವಷ್ಟೇ ಈ ಸಾರಿಯ ಸಂಚಿಕೆಯಲ್ಲಿ ವರದಿಯಾಗಿದೆ).

ಮೊದಲನೆಯ ಕಾರಣ: ವಯಸ್ಸು ಎಲ್ಲರನ್ನೂ ಒಂದೇ ರೀತಿ ಬಾಧಿಸುವುದಿಲ್ಲ. ಆದರೆ ಯಡಿಯೂರಪ್ಪನವರನ್ನು ಅದು ಮೆತ್ತಗೆ ಮಾಡಿರುವುದರಲ್ಲಿ ಸಂಶಯವೇ ಇಲ್ಲ. ಅವರ ನಡಿಗೆ ವಿಪರೀತ ನಿಧಾನ ಆಗಿಲ್ಲವಾದರೂ, ಅವರ ಮುಖವು ಭಾವರಹಿತವಾಗಿರುವುದು ಮತ್ತು ದೇಹದ ಚಲನವಲನಗಳು ನಿಧಾನವಾಗಿರುವುದು ಎದ್ದುಕಾಣುತ್ತದೆ. ಈ ದೌರ್ಬಲ್ಯ ಎಲ್ಲರಿಗೂ ಗೋಚರವಾಗಿದ್ದರಿಂದಲೇ ಮುಖ್ಯಮಂತ್ರಿಯಾದ ಕೆಲದಿನಗಳಲ್ಲೇ ಅವರಿಗೆ ವಯಸ್ಸಾಗಿದೆ ಎಂಬ ಮಾತು ಪದೇ ಪದೇ ಕೇಳಿಬಂದಿತು.

ವರ್ಗಾವಣೆ ಮತ್ತು ಹಣ ಜಮಾವಣೆಯ ಉಸ್ತುವಾರಿ ಸೂಪರ್ ಸಿಎಂರದ್ದು

ಎರಡನೆಯ ಕಾರಣ, ಸ್ವತಃ ಯಡಿಯೂರಪ್ಪನವರು ಮುಖ್ಯಮಂತ್ರಿಗಳೇ ಮಾಡಬೇಕಾದ ಪ್ರತಿಯೊಂದನ್ನೂ ನಿಭಾಯಿಸುತ್ತಿಲ್ಲ ಎಂಬುದು. ಅದರಲ್ಲಿ ಹಲವಾರು ಸಂಗತಿಗಳನ್ನು ನೋಡಿಕೊಳ್ಳುತ್ತಿರುವುದು ಅವರ ಎರಡನೆ ಸುಪುತ್ರ ವಿಜಯೇಂದ್ರ. ದೈನಂದಿನ ಆಡಳಿತಕ್ಕೆ ಯಡಿಯೂರಪ್ಪನವರೇ ಉಸ್ತುವಾರಿಯಾದರೂ, ಅಧಿಕಾರಿಗಳ ವರ್ಗಾವಣೆ ಮತ್ತು ಹಣ ಜಮಾವಣೆ ಮಾಡುತ್ತಿರುವುದು ಮಾತ್ರ ವಿಜಯೇಂದ್ರ. ಹಣ ಕೊಡುವ ಕೇಸುಗಳು, ಕೊಡದಿರುವ ಕೇಸುಗಳು ಎಲ್ಲವೂ ವಿಜಯೇಂದ್ರರ ಮುಖಾಂತರವೇ ನಿಭಾವಣೆಯಾಗುತ್ತವೆ.

ಹಣ ಪಡೆದುಕೊಳ್ಳುವುದರಲ್ಲೂ ಎರಡು ವಿಧವಿದೆ. ಒಂದು ಪ್ರೀಪೇಯ್ಡ್, ಇನ್ನೊಂದು ಪೋಸ್ಟ್‌ಪೇಯ್ಡ್. ಮೇಯಬಲ್ಲ ಜಾಗಗಳಿಗೆ ಮೊದಲೇ ಇಂತಿಷ್ಟು ಎಂದು ನೀಡಿ ಅಲ್ಲಿಗೆ ವರ್ಗಾವಣೆ ಮಾಡಿಸಿಕೊಳ್ಳುವುದು ಪ್ರೀಪೇಯ್ಡ್. ವರ್ಗಾವಣೆ ಆದ ನಂತರ ಹಣ ಮಾಡುವ ಮಾರ್ಗಗಳನ್ನು ಹುಡುಕಿಕೊಂಡು ಸಂದಾಯ ಮಾಡುವುದು ಪೋಸ್ಟ್‌ಪೇಯ್ಡ್. ಪ್ರೀಪೇಯ್ಡ್ ಮಾಡಿ ಆಯಕಟ್ಟಿನ ಜಾಗಗಳಿಗೆ ಹಾಕಿಸಿಕೊಂಡ ಭ್ರಷ್ಟ ಅಧಿಕಾರಿಗಳಲ್ಲಿ ಕನಿಷ್ಠ ಒಂದು ವರ್ಷ ತಮ್ಮಿಂದ ಹಫ್ತಾ ವಸೂಲಿ ಮಾಡಲಾರರು ಎಂಬ ಭಾವದಲ್ಲಿದ್ದವರಿಗೆ ಶಾಕ್ ಕಾದಿತ್ತು. ಎರಡನೇ ತಿಂಗಳಿಂದಲೇ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್‌ಗಳಿಗೆ ವ್ಯತ್ಯಾಸವಿಲ್ಲದಂತಾಯಿತು. ನಿರ್ದಿಷ್ಟ ಇಲಾಖೆಗಳ ಕಾಮಗಾರಿಗಳನ್ನು ನಡೆಸುವ ಇಲ್ಲವೇ ಸರಬರಾಜುಗಳಿಗೆ ಕೈ ಹಾಕುವ ಎಲ್ಲಾ ಗುತ್ತಿಗೆದಾರರೂ ಮೊದಲು ಸೂಪರ್ ಸಿಎಂರನ್ನು ಭೇಟಿ ಮಾಡಿದ ನಂತರವೇ ಅಧಿಕಾರಿಯಿಂದ ಅನುಮೋದನೆ ಪಡೆದುಕೊಳ್ಳಬೇಕು. ಇಂದಿಗೂ ಯಡಿಯೂರಪ್ಪನವರೇ ಹಣಕಾಸು, ಇಂಧನ ಖಾತೆಯಲ್ಲದೇ ಬೆಂಗಳೂರು ಅಭಿವೃದ್ಧಿಯ ಖಾತೆಯನ್ನೂ ಹೊಂದಿದ್ದಾರೆ. ಇನ್ನೊಬ್ಬ ಸಚಿವರಿಗೆ ಬೆಂಗಳೂರು ಉಸ್ತುವಾರಿ ವಹಿಸಿದರೆ ಪಾಲು ಕೊಡಬೇಕಾಗುತ್ತದೆಂದು ಮುಖ್ಯಮಂತ್ರಿಯೇ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿಬಿಟ್ಟಿದ್ದಾರೆ.

ಕರ್ನಾಟಕದಲ್ಲಿ ಇಂದು ಚಿನ್ನದ ಮೊಟ್ಟೆ ಇಡುವ ಖಾತೆಗಳೆಂದರೆ ಇಂಧನ, ಬೆಂಗಳೂರು ಅಭಿವೃದ್ಧಿ, ಲೋಕೋಪಯೋಗಿ ಮತ್ತು ಜಲಸಂಪನ್ಮೂಲ. ಇದರಲ್ಲಿ ಮೊದಲೆರಡಕ್ಕೆ ಸ್ವತಃ ವಿಜಯೇಂದ್ರರೇ ಮಂತ್ರಿ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಈ ಇಲಾಖೆಗಳ ಪ್ರಮುಖ ಸ್ಥಾನಗಳಲ್ಲಿ ಕುಳಿತಿರುವವರು ಗುತ್ತಿಗೆದಾರರನ್ನು ಮೊದಲು ಅಲ್ಲಿ ಹೋಗಿ ಮಾತಾಡಿಕೊಂಡು ಬನ್ನಿ ಎಂದು ಕಳಿಸುತ್ತಾರೆ. ಇನ್ನು ಜಲಸಂಪನ್ಮೂಲ ಹೊಂದಿರುವ ರಮೇಶ್ ಜಾರಕಿಹೊಳಿಗೆ ಅವರ ಪಾಲು ಸಂದಾಯವಾದರೆ ಸಾಕು ಮತ್ತು ಲೋಕೋಪಯೋಗಿ ಇಲಾಖೆಯನ್ನು ಹೊಂದಿರುವ ಗೋವಿಂದ ಕಾರಜೋಳರಿಗೆ ಈ ಖಾತೆ ಕೊಟ್ಟಿದ್ದೇ ಡಮ್ಮಿ ಮಾಡಲು. ಅವರ ಪಾಲಿಗೆ ಇರುವ ಇನ್ನೊಂದು ಖಾತೆ ಸಮಾಜ ಕಲ್ಯಾಣ ಇಲಾಖೆಯ ಆದಾಯ ಮತ್ತು ಅದು ದಲಿತ ಸಮುದಾಯದೊಳಗೆ ತಂದುಕೊಡುವ ಸಂಪರ್ಕ ಹಾಗೂ ಪ್ರಭಾವ ಸಾಕು. ಇವೆಲ್ಲಾ ಖಾತೆಗಳಿಂದ ಬರುವ ಆದಾಯ ಮಾತ್ರವಲ್ಲದೇ, ಎಲ್ಲಾ ಪ್ರಮುಖ ವರ್ಗಾವಣೆಗಳನ್ನು ವಿಜಯೇಂದ್ರರೇ ನೋಡಿಕೊಳ್ಳುತ್ತಾರೆ. ಯಾವ ಪ್ರಮಾಣಕ್ಕೆಂದರೆ ಹಲವು ಇಲಾಖೆಗಳ ಪ್ರಮುಖ ವರ್ಗಾವಣೆಗಳು ಯಡಿಯೂರಪ್ಪನವರ ಮನಸ್ಸಿನಲ್ಲಿ ರಿಜಿಸ್ಟರ್ರೇ ಆಗಿರುವುದಿಲ್ಲ.

ಬಿಎಸ್‍ವೈ ಜಾಗಕ್ಕೆ ಯಾರು?

ಯಡಿಯೂರಪ್ಪನವರು ಮೆತ್ತಗಾಗಿರುವುದು ಮತ್ತು ಒಂದು ರೀತಿಯ ಅಯೋಮಯದ ಸ್ಥಿತಿಯಲ್ಲಿರಲು ಕಾರಣವಾಗಿರುವ ಮೂರನೆಯ ಸಂಗತಿಯೆಂದರೆ ಬಿಜೆಪಿ ಹೈಕಮಾಂಡ್. ಅದು 2009-2012ರಲ್ಲಿದ್ದಂತೆ ದುರ್ಬಲವಾಗಿಲ್ಲ. ಪ್ರಬಲವಾಗಿದೆ ಮತ್ತು ಹೈಕಮ್ಯಾಂಡ್‍ನಲ್ಲಿರುವ ಕರ್ನಾಟಕದ ಬಿ.ಎಲ್.ಸಂತೋಷ್ ಇವರ ನಿದ್ದೆಗೆಡಿಸಿದ್ದಾರೆ. ಈ ಸಂಗತಿ ಈಗಾಗಲೇ ಸಾಕಷ್ಟು ಚರ್ಚೆಯಾಗಿರುವುದರಿಂದ ಅದನ್ನು ವಿವರಿಸಲು ಹೋಗುವುದಿಲ್ಲ. ಕೇಂದ್ರವು ಕರ್ನಾಟಕಕ್ಕೆ ಹಣ ನೀಡದಿರಲು ಅಲ್ಲಿ ಕೂತಿರುವವರ ‘ಕೇಂದ್ರೀಕೃತ ಆಲೋಚನೆ’ಯ ಜೊತೆಗೆ ಬಿಎಸ್‍ವೈ ನಿಯಂತ್ರಿಸುವುದೂ ಒಂದು ಕಾರಣವಾಗಿದೆ. ಯಾವಾಗ ಸಾಧ್ಯವೋ ಆಗ ಕರ್ನಾಟಕದ ಸಿಎಂ ಪಟ್ಟದಲ್ಲಿ ಸಂತೋಷ್ ಅವರ ಮನುಷ್ಯ ಬಂದು ಕೂರಬೇಕೆಂಬುದು ಅವರಿಗೆ ಆದ್ಯತೆಯ ವಿಚಾರವಾಗಿದೆ. ಆ ಮನುಷ್ಯ ಯಾರು ಎಂಬುದು ಇನ್ನೂ ಬಗೆಹರಿದಿಲ್ಲ.

ಲಕ್ಷ್ಮಣ್ ಸವದಿಯಲ್ಲಿ ಸಿಎಂ ಮೆಟೀರಿಯಲ್ ಇದೆ ಎಂದು ಅಂದುಕೊಂಡಿರುವುದು ಸಾಧ್ಯವಿಲ್ಲ. ಆದರೆ ಬಿಎಸ್‍ವೈರನ್ನು ಇಳಿಸುವ ಸಂದರ್ಭ ಬಂದರೆ ಲಿಂಗಾಯಿತರನ್ನೇ ಮುಂದಿಟ್ಟುಕೊಳ್ಳಲು ನಿಷ್ಠಾವಂತರಾದ ಲಿಂಗಾಯಿತ ನಾಯಕರ ಅಗತ್ಯ ಬಿ.ಎಲ್.ಸಂತೋಷ್‍ರಿಗಿತ್ತು. ಮೂರು ಡಿಸಿಎಂಗಳನ್ನಿಟ್ಟುಕೊಂಡು, ಸಿಎಂ ಸ್ಥಾನಕ್ಕೆ ಪ್ರಹ್ಲಾದ್ ಜೋಷಿಯನ್ನು ಈ ಸ್ಥಾನಕ್ಕೆ ತರಬೇಕೆಂಬ ಇರಾದೆಯಿದೆ ಎಂಬ ಸುದ್ದಿ ಫೆಬ್ರವರಿಯಲ್ಲಿ ಉನ್ನತ ವಲಯಗಳಲ್ಲಿ ಚಲಾವಣೆಯಲ್ಲಿತ್ತು. ಯಡಿಯೂರಪ್ಪ ತನ್ನ ಉತ್ತರಾಧಿಕಾರಿಯನ್ನು ಆರಿಸಿಕೊಳ್ಳಬೇಕಾಗಿ ಬಂದರೆ ಅದು ವಿಜಯೇಂದ್ರರಲ್ಲದೇ ಮತ್ಯಾರೂ ಆಗಿರಲು ಸಾಧ್ಯವಿಲ್ಲ. ಆದರೆ ಹೈಕಮಾಂಡ್ ಮಟ್ಟಿಗೆ ಆ ಒಬ್ಬರು ಇನ್ನೂ ಫಿಕ್ಸ್ ಆಗಿಲ್ಲ.

ಆದರೆ ಯಡಿಯೂರಪ್ಪನವರ ವಿರುದ್ಧದ ಕಾರಸ್ತಾನವಂತೂ ನಿರಂತರವಾಗಿ ನಡೆಯುತ್ತಲೇ ಇದೆ. ಇತ್ತೀಚೆಗೆ ನಡೆದ ಕತ್ತಿ ಔತಣಕೂಟವು ಅದರಲ್ಲಿ ಒಂದು ಭಾಗ ಅಷ್ಟೇ. ಅದಕ್ಕಿಂತಲೂ ದೊಡ್ಡ ಏಟು ಕೊಡಲು ಹೊರಟಿರುವುದು ಮೀಡಿಯಾಗಳ ಮೂಲಕ. ದಿನನಿತ್ಯ ಮೋದಿ ಭಜನೆ ಮಾತ್ರವಲ್ಲದೇ, ಬಿಜೆಪಿ ಪರ ಹಾಗೂ ಆರೆಸ್ಸೆಸ್‍ನ ದ್ವೇಷಪೂರಿತ ಅಜೆಂಡಾಕ್ಕೆ ಗಾಳಿ ಹಾಕುತ್ತಲೇ ಇರುವ ಮೀಡಿಯಾಗಳು ಇದ್ದಕ್ಕಿದ್ದಂತೆ ಯಡಿಯೂರಪ್ಪನವರ ವಿರುದ್ಧ ಜಿದ್ದಿಗೆ ಬಿದ್ದಂತೆ ಸ್ಟೋರಿ ಮಾಡುತ್ತಾರೆ. ಅದು ಕೆಲವೊಮ್ಮೆ ಚಾನೆಲ್‍ಗಳಿಗೆ ಬಿಎಸ್‍ವೈ ಕಾಸು ಬಿಚ್ಚುತ್ತಿಲ್ಲ ಎಂಬ ಕಾರಣಕ್ಕೋ ಅಥವಾ ಯಡಿಯೂರಪ್ಪನವರ ವಿರುದ್ಧದ ಕಾರಸ್ತಾನದ ಭಾಗವಾಗಿಯೋ ಎಂಬುದು ಗೊತ್ತಾಗುವುದಿಲ್ಲವಾದರೂ, ಎರಡೂ ಕೆಲಸ ಮಾಡುತ್ತಿರುವ ಸಾಧ್ಯತೆಗಳಂತೂ ಇದ್ದೇ ಇದೆ.

ಒಟ್ಟಿನಲ್ಲಿ ಚಿತ್ರಣ ಇನ್ನೂ ಸ್ಪಷ್ಟವಾಗಿರದಿದ್ದರೂ ದಿಕ್ಕಂತೂ ಸ್ಪಷ್ಟ. ಬಿಎಸ್‍ವೈ ಬಹಳ ದಿನಗಳ ಕಾಲ ಸಿಎಂ ಆಗಿ ಮುಂದುವರೆಯುವುದು ಅಸಾಧ್ಯ. ಅದಕ್ಕೆ ಇರುವ ಹೊರಗಿನ ಕಾರಣಗಳಿಗಿಂತ ಸಿಎಂ ಸ್ಥಾನಕ್ಕೆ ಅಗತ್ಯವಿರುವ ಷಾರ್ಪ್‍ನೆಸ್ ಅವರು ಕಳೆದುಕೊಂಡಿರುವುದೇ ಪ್ರಮುಖ ಕಾರಣವಾಗಿದೆ. ಅವರಿಗೆ ಈಗಾಗಲೇ ಆಡಳಿತ ಯಂತ್ರದ ಮೇಲಿನ ಹಿಡಿತ ತಪ್ಪಿಹೋಗಿದ್ದು, ಸಂಪುಟ ಸಚಿವರು ಒಂದು ಟೀಂ ಆಗಿ ಅದನ್ನು ನಿಭಾಯಿಸಲಾಗದಂತೆ ಸೂಪರ್‌ ಸಿಎಂ ಹಿಡಿತ ಬಿಗಿಯಾಗಿದೆ. ವಿಜಯೇಂದ್ರರನ್ನೂ ನಿಭಾಯಿಸಿ ಬಿಎಸ್‍ವೈರ ಜಾಗಕ್ಕೆ ಬಂದು ಕೂರಬಹುದಾದ ವ್ಯಕ್ತಿ ಹೈಕಮ್ಯಾಂಡ್‍ಗೆ ಇನ್ನೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಾಗುವ ಬೆಳವಣಿಗೆಗಳು ಚಿತ್ರಣವನ್ನು ಸ್ಪಷ್ಟಪಡಿಸಬಹುದೇ ಹೊರತು ಈಗಲೇ ‘ಬದಲಾವಣೆ’ ಏನಿರಬಹುದು ಎಂದು ಹೇಳುವುದು ಕಷ್ಟ.


ಇದನ್ನು ಓದಿ: ಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ – ಡಿ. ಉಮಾಪತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...