Homeಮುಖಪುಟಉತ್ತಮ ಆಡಳಿತ ನೀಡದೆ, BJP ಚುನಾವಣೆ ಗೆಲ್ಲುತ್ತಿರುವುದು ಹೇಗೆ?

ಉತ್ತಮ ಆಡಳಿತ ನೀಡದೆ, BJP ಚುನಾವಣೆ ಗೆಲ್ಲುತ್ತಿರುವುದು ಹೇಗೆ?

- Advertisement -
- Advertisement -

ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆ ಮತ್ತು ದೇಶಾದ್ಯಂತ ನಡೆದ ಉಪಚುನಾವಣೆಗಳ ಫಲಿತಾಂಶಗಳು BJP ಗೆ ತಳ ಮಟ್ಟದ ಮತ್ತು ಡಿಜಿಟಲ್‌ ಕ್ಷೇತ್ರದಲ್ಲಿ ಬಲವಾದ ತಂಡವನ್ನು ಹೊಂದಿದೆ ಎಂಬುವುದನ್ನು ಸ್ಪಷ್ಟಪಡಿಸುತ್ತದೆ. ಆದರೆ, ಬಿಜೆಪಿಯು ಉತ್ತಮ ಆಡಳಿತ ನೀಡುಕ್ಕಿಂತ ಚುನಾವಣೆಗಳನ್ನು ಗೆಲ್ಲುವುದಲ್ಲೇ ಹೆಚ್ಚು ಉತ್ಸುಕವಾಗಿದೆ.

ಈ ಹಿಂದೆ ಕಾಂಗ್ರೆಸ್ ಪಕ್ಷ ಆಳಿದಂತೆ ಭಾರತವನ್ನು ಆಳಲು ಬಿಜೆಪಿ ಬಯಸುತ್ತದೆ. ಇದರಲ್ಲಿ ಬಿಜೆಪಿ ಸಾಕಷ್ಟು ಯಶಸ್ವಿಯೂ ಆಗಿದೆ. 2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಮತ್ತು ಆ ಎರಡೂ ಅವಧಿಯ ನಡುವಿನ ವರ್ಷಗಳ ಹಲವಾರು ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಚುನಾವಣಾ ಗೆಲುವಿಗಷ್ಟೇ ಉತ್ಸುವಾಗಿದೆ ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: ಹೈದರಾಬಾದ್‌ ಪಾಲಿಕೆ ಚುನಾವಣಾ ಪ್ರಚಾರಕ್ಕೆ ಮೋದಿ! ಬಿಜೆಪಿಯ ಈ ತಂತ್ರದ ವಾಸ್ತವವೇನು?

ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ, ಕರ್ನಾಟಕ ಮತ್ತು ಮಧ್ಯಪ್ರದೇಶದಂತೆ ಆಡಳಿತದಲ್ಲಿದ್ದ ಇತರ ಪಕ್ಷಗಳ ಶಾಸಕರನ್ನು ಭೇಟೆಯಾಡುವ ಮೂಲಕ ಸರ್ಕಾರಗಳನ್ನು ರಚಿಸಿದೆ. ತೀರಾ ಇತ್ತೀಚಿಗೆ ರಾಹುಲ್‌ ಗಾಂಧಿಯ ಆಪ್ತ ಕಾಂಗ್ರೆಸ್ ಮಾಜಿ ನಾಯಕ, ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನೂ ಬಿಜೆಪಿ ಸೆಳೆದುಕೊಂಡಿತು. ವಾಸ್ತವವಾಗಿ, ಇತರ ರಾಜ್ಯಗಳಲ್ಲಿನ ಹಲವು ಪಕ್ಷಗಳ ಉನ್ನತ ನಾಯಕರು ಮತ್ತು ಶಾಸಕರನ್ನು ಬೇಟೆಯಾಡುವಲ್ಲಿ ಬಿಜೆಪಿ ಬಹಳ ಯಶಸ್ವಿಯಾಗಿದೆ.

ಚಂಡೀಗಡ
PC: The Samikhsya

ಜನರ ಭಾವನೆಗಳೊಂದಿಗೆ ಬಿಜೆಪಿಯ ಆಟ:

ಚುನಾವಣೆಗಳನ್ನು ಗೆಲ್ಲುವಲ್ಲಿ ಬಿಜೆಪಿಯ ಯಶಸ್ಸಿಗೆ ಪ್ರಮುಖ ಕಾರಣವೆಂದರೆ, ಬಿಜೆಪಿಯ ನಾಯಕರು ಯಾವಾಗಲೂ ಜನರ ಭಾವನೆಗಳೊಂದಿಗೆ ಆಟವಾಡುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಜನರ ಗಮನ ತಮ್ಮ ಪರವಾಗಿರುವಂತೆ ಮಾಡುತ್ತಾರೆ. ನಾವು ಬಿಜೆಪಿಯ ರಾಜಕೀಯವನ್ನು “ಕಾಮನ್‌ಸೆನ್ಸಲ್ ರಾಜಕೀಯ” ಎಂದು ಉಲ್ಲೇಖಿಸಬಹುದು.

ಬಿಜೆಪಿ ಯಾವಾಗಲೂ ವಿವಾದಾತ್ಮಕ ವಿಷಯಗಳ ಬಗ್ಗೆ ಪ್ರಚಾರ ಮಾಡುತ್ತದೆ. ಜನರ ಸಹಾನುಭೂತಿ ಪಡೆಯಲು ಮತ್ತು ಅಂತಿಮವಾಗಿ ಮತಗಳನ್ನು ಪಡೆಯಲು ತಮ್ಮ ಸುತ್ತಲಿನ ವಿಚಾರಗಳ ಬಗ್ಗೆ ಪ್ರಚಾರದಲ್ಲಿ ಬಳಸುತ್ತಾರೆ. ಅಂತಹ ಕೆಲವು ವಿಷಯಗಳು ಮೀಸಲಾತಿ, ರಾಮ ಮಂದಿರ, ಹಿಂದೂ-ಮುಸ್ಲಿಂ ಸಂಘರ್ಷ, ಚೀನಾ-ಪಾಕಿಸ್ತಾನ, ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟಾ, ಇತ್ಯಾದಿಗಳ ಕುರಿತಾದ “ಚರ್ಚೆ”ಗಳನ್ನು ಅವರು ಬಳಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ದೆಹಲಿ ಚಲೋ: ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಬಿಜೆಪಿ ಸರ್ಕಾರ-ಭಾರಿ ವಿರೋಧ

ಈ ತಂತ್ರವು ಜನರು ಬಿಜೆಪಿಯತ್ತ ಆಕರ್ಷಿತರಾಗುವುದನ್ನು ಖಾತ್ರಿಗೊಳಿಸುತ್ತದೆ. ಇತರ ಪಕ್ಷಗಳು, ಈ ವಿವಾದಾತ್ಮಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ಹೊಂದಿದ್ದರೂ, ಅವುಗಳ ಬಗೆಗಿನ ಮುಕ್ತ ಚರ್ಚೆಯಿಂದ ದೂರ ಸರಿಯುತ್ತವೆ. ಈ ವಿಷಯದಲ್ಲಿ ಬಿಜೆಪಿ ಬಹಳ ಬುದ್ದಿವಂತಿಕೆಯಿಂದ ಜನರನ್ನು ಸೆಳೆಯುತ್ತಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಮಹಾಘಟಬಂಧನ್ 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರು. ಇದನ್ನು ಅರಿತುಕೊಂಡ ಬಿಜೆಪಿ ಮೊದಲ ಹಂತದ ಮತದಾನ ಮುಗಿದ ನಂತರ ತನ್ನ ಕಾರ್ಯತಂತ್ರವನ್ನು ಬದಲಾಯಿಸಿತು. “ಜಂಗಲ್ ರಾಜ್” ಎಂಬ ಪದವನ್ನು ಪದೇ ಪದೇ ತನ್ನ ಭಾಷಣಗಳಲ್ಲಿ ಉಲ್ಲೇಖಿಸುತ್ತಲೇ ಜನರ ತಲೆಗೆ ಆ ಪದವನ್ನು ತುಂಬಿತು.

Naanu Gauri,ನಾನು ಗೌರಿ, ಕೇರಳ ಬಿಜೆಪಿ

ಬಿಜೆಪಿ ನಾಯಕರು ರಾಷ್ಟ್ರೀಯ ಜನತಾದಳದ ನಾಯಕ ತೇಜಶ್ವಿ ಯಾದವ್ ಅವರನ್ನು “ಜಂಗಲ್ ರಾಜ್ ಕಾ ಯುವರಾಜ್” ಎಂದು ಕರೆದಿದ್ದಾರೆ. ಇದು ಎರಡನೇ ಮತ್ತು ಮೂರನೇ ಹಂತಗಳಲ್ಲಿ ಸತತವಾಗಿ 52 ಮತ್ತು 53 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಲು ಸಹಾಯ ಮಾಡಿತು. ಅದರ ಕಾರ್ಯತಂತ್ರದ ಬದಲಾವಣೆಯು ಹಳೆಯ ತಲೆಮಾರಿನ ಮತದಾರರು ಬಿಜೆಪಿಯನ್ನು ಬೆಂಬಲಿಸಲು ಸ್ಪಷ್ಟವಾಗಿ ಪ್ರೇರೇಪಿಸಿತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ಮೋದಿ ಯೋಗ ಮಾಡುತ್ತಿರುವ ವಿಡಿಯೋ! ಬಿಜೆಪಿಗರು ಹೇಳುತ್ತಿರುವುದು ನಿಜವೆ?

ಬಿಜೆಪಿ ಯಶಸ್ಸಿಗೆ ಸಾಮಾಜಿಕ ಮಾಧ್ಯಮ:

ಬಿಜೆಪಿ ಸೋಷಿಯಲ್ ಮೀಡಿಯಾ ತಂಡವು ಚುನಾವಣೆ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸೋಷಿಯಲ್ ಮೀಡಿಯಾ ಬಳಕೆ ಮತ್ತು ಪ್ರಭಾವದಲ್ಲಿ ಪಕ್ಷವು ಯಾವಾಗಲೂ ಕಾಂಗ್ರೆಸ್‌ಗಿಂತಲೂ ಬಹಳ ಮುಂದಿದೆ. ಉದಾಹರಣೆಗೆ, ಫೆಬ್ರವರಿ 1998 ರಲ್ಲಿ ಬಿಜೆಪಿ ತನ್ನ ಪಕ್ಷದ ವೆಬ್‌ಸೈಟ್ ಅನ್ನು ಸ್ಥಾಪಿಸಿತು. ಆದರೆ ಕಾಂಗ್ರೆಸ್ ತನ್ನ ಮೊದಲ ಅಧಿಕೃತ ವೆಬ್‌ಸೈಟ್ ಅನ್ನು ಏಳು ವರ್ಷಗಳ ನಂತರ, ಫೆಬ್ರವರಿ 2005 ರಲ್ಲಿ ಉದ್ಘಾಟಿಸಿತು.

ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ ಮತ್ತು 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರ ಪಕ್ಷವು ಆನ್‌ಲೈನ್ ಅಭಿಯಾನದೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರ ಪುಸ್ತಕ “ಐ ಆಮ್‌ ಎ ಟ್ರೋಲ್‌”ನಲ್ಲಿ ಮೋದಿಗೆ ಸಾಮಾಜಿಕ ಮಾಧ್ಯಮವು ಉತ್ಸಾಹ ಮಾತ್ರವಲ್ಲ, ಅವಶ್ಯಕತೆಯೂ ಇದೆ ಎಂದು ಹೇಳಿದ್ದಾರೆ.

ಬಿಹಾರ ಚುನಾವಣೆಯ ಸಮಯದಲ್ಲಿ, ಬಿಜೆಪಿ “ಒಂದು ಲಕ್ಷಕ್ಕೂ ಹೆಚ್ಚು” ವಾಟ್ಸಾಪ್ ಗುಂಪುಗಳನ್ನು ರಚಿಸಿದೆ ಎಂದು ಹೇಳಿಕೊಂಡಿದೆ. ಫೇಸ್‌ಬುಕ್ ಮತ್ತು ಗೂಗಲ್‌ನಲ್ಲಿ ನೀಡಲಾದ ಜಾಹೀರಾತುಗಳ ಮೂಲಕ ತನ್ನ ಆಲೋಚನೆಗಳನ್ನು ಹರಡಿದೆ.

2019 ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಪಶ್ಚಿಮ ಬಂಗಾಳದ ಮೂರು ಕೋಟಿ ಜನರನ್ನು ತಲುಪಲು ಪಕ್ಷವು 50,000 ಕ್ಕೂ ಹೆಚ್ಚು ವಾಟ್ಸಾಪ್ ಗುಂಪುಗಳನ್ನು ರಚಿಸಿದೆ ಎಂದು ತಿಳಿದುಬಂದಿದೆ. ಇದು ರಾಜ್ಯದಲ್ಲಿ 2014 ರಲ್ಲಿದ್ದ ತನ್ನ ಸ್ಥಾನದ ಬಲವನ್ನು 2 ರಿಂದ 18 ಕ್ಕೆ ಹೆಚ್ಚಿಸಲು ಮತ್ತು 17% ರಿಂದ ಸುಮಾರು 40% ವರೆಗೆ ಮತದ ಪಾಲು ಪಡೆಯಲು ಸಾಧ್ಯವಾಗಿದೆ.

ಇದನ್ನೂ ಓದಿ: ಬಿಜೆಪಿ ನನ್ನ ಜೈಲಿಗೆ ಹಾಕಿದರೂ, ಅಲ್ಲಿಂದಲೇ ಪಕ್ಷವನ್ನು ಗೆಲ್ಲಿಸುವೆ-ಮಮತಾ ಬ್ಯಾನರ್ಜಿ

2021 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರನ್ನು ಪಶ್ಚಿಮ ಬಂಗಾಳದ ಉಸ್ತುವಾರಿಗಳಾಗಿ ನೇಮಕ ಮಾಡಿರುವುದು ತೃಣಮೂಲ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸುತ್ತದೆ. ಇಂಗ್ಲಿಷ್ ಮಾಧ್ಯಮಗಳು ಮತ್ತು ಉದಾರವಾದಿ ವರ್ಗಗಳು ಮೋದಿಯನ್ನು ಬೆಂಬಲಿಸುವುದಿಲ್ಲ ಎಂದು ತಿಳಿದ ನಂತರ, ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಯೋಜಿಸುವುದು ಪಕ್ಷದ ಅವಶ್ಯಕತೆಯಾಗಿದೆ.

ಆದ್ದರಿಂದ ಬಿಜೆಪಿಯ ಬೃಹತ್ ಸೋಷಿಯಲ್‌ ಮೀಡಿಯಾ ನೆಟ್‌ವರ್ಕ್‌ನ ಮನ್ನಣೆ ಅವರಿಗೆ ದೊರೆತಿದೆ. ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಪಾತ್ರವನ್ನು ನಿರ್ಲಕ್ಷಿಸಲಾಗುವುದಿಲ್ಲ. ಆದರೆ ಪ್ರತಿಪಕ್ಷಗಳು ನಿರಂತರವಾಗಿ ಹಾಗೆ ಮಾಡುತ್ತಿವೆ. ವೈಎಸ್ಆರ್ ಕಾಂಗ್ರೆಸ್ ನಂತಹ ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮದ ಅಪಾರ ಶಕ್ತಿಯನ್ನು ಅರಿತುಕೊಂಡಿವೆ. ಅದರಲ್ಲಿ ಸಮಯ ಮತ್ತು ಸಂಪನ್ಮೂಲಗಳನ್ನು ಹೂಡಿಕೆ ಮಾಡಿವೆ. ಹಾಗೆ ಮಾಡುವುದರಿಂದ ಲಾಭ ಕೂಡಾ ಪಡೆದಿವೆ.

ಅಧಿಕಾರ ದಾಹ: 6 ವರ್ಷಗಳಲ್ಲಿ 11 ನೇ ಭಾರಿ ಅಧಿಕಾರ ಕಸಿಯಲು ಪ್ರಯತ್ನಿಸುತ್ತಿರುವ ಬಿಜೆಪಿ

ಈಗ ತೃಣಮೂಲ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಹಾಯದಿಂದ ಸಾಮಾಜಿಕ ಮಾಧ್ಯಮ ಪ್ರಚಾರದಲ್ಲೂ ಹಣವನ್ನು ಹೂಡಿಕೆ ಮಾಡುತ್ತಿದ್ದಾರೆ.

ಅಸಲಿ ಸಮಸ್ಯೆಗಳನ್ನು ಬದಿಗೊತ್ತಿ; ಆಕ್ರಮಣಕಾರಿಯಾಗಿ ಅಜೆಂಡಾ ಹೇರಿಕೆ:

ಜನರನ್ನು ತಲುಪಲು ಬಿಜೆಪಿ ಶಕ್ತಿ ಮತ್ತು ಹಣವನ್ನು ಹೂಡಿಕೆ ಮಾಡಿದ್ದಾರೆ. ಸಾರ್ವಜನಿಕರು ಮತ್ತು ಆಡಳಿತ ಪಕ್ಷದ ನಡುವೆ ಸಂವಹನಕ್ಕೆ ಏಕಮುಖ ಮಾರ್ಗವನ್ನು ಅವರು ಕಟ್ಟಿಕೊಂಡಿದ್ದಾರೆ. ಬಿಜೆಪಿ ನಾಯಕರ ಭಾವೋದ್ರಿಕ್ತ ವಾಕ್ಚಾತುರ್ಯದಿಂದ ಸಾರ್ವಜನಿಕರು ಬಿಜೆಪಿಯತ್ತ ವಾಲುತ್ತಿದ್ದಾರೆ. ಆದರೆ ತಮ್ಮದೇ ಆದ ಕುಂದುಕೊರತೆಗಳನ್ನು ಸಾರ್ವಜನಿಕರು ಕೇಳುತ್ತಿಲ್ಲ. ಪ್ರಶ್ನಿಸುವುದೂ ಇಲ್ಲ.

ಇದನ್ನೂ ಓದಿ: ಬಡತನ, ಭ್ರಷ್ಟಾಚಾರದ ಮೇಲೆ‌ ಸರ್ಜಿಕಲ್ ಸ್ಟ್ರೈಕ್ ಮಾಡಿ: ಬಿಜೆಪಿ ವಿರುದ್ಧ ಆಕ್ರೋಶ

ಇದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು, ಈರುಳ್ಳಿಯ ಬೆಲೆಗಳು ಹೆಚ್ಚಾಗುವುದರಿಂದ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಯಾಕೆಂದರೆ ತರಕಾರಿ ತನ್ನ ಆಹಾರದ ಭಾಗವಾಲ್ಲ ಎಂದು ಹೇಳಿದ್ದರು.

ಬಿಜೆಪಿಯ ಆದ್ಯತೆಯೆಂದರೆ, ಜನರು ಬಯಸುತ್ತಾರೋ ಇಲ್ಲವೋ, ಆದರೆ ತನ್ನದೇ ಆದ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುಂದಕ್ಕಿಡುವುದು. ಸಂಸತ್ತಿನಲ್ಲಿ ಮಸೂದೆಗಳನ್ನು ಆಕ್ರಮಣಕಾರಿಯಾಗಿ ಅಂಗೀಕರಿಸುವುದು ಈ ಮನಸ್ಥಿತಿಗೆ ಸಾಕ್ಷಿಯಾಗಿದೆ. ವಾಸ್ತವವಾಗಿ, “ಲವ್ ಜಿಹಾದ್” ವಿರುದ್ಧದ ಇತ್ತೀಚಿನ ಕಾನೂನುಗಳು ಸಾಮಾಜಿಕ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನಕ್ಕಿಂತ “ಹಿಂದೂ ಖತ್ರೇ ಮಿ ಹೈ” ಎಂಬ ಕಟ್ಟುಕತೆಯನ್ನು ನಿಜವಾಗಿಯು ಇದೆ ಎಂಬ ಸ್ಪಷ್ಟ ಪ್ರಯತ್ನವಾಗಿದೆ.

ಅಂತರ್‌ಧರ್ಮಿಯ ವಿವಾಹಗಳು ಭಾರತೀಯ ಸಮಾಜಕ್ಕೆ ಸಮಸ್ಯೆಯಲ್ಲ. ನಿಜವಾದ ಸಮಸ್ಯೆ ಲೈಂಗಿಕ ದೌರ್ಜನ್ಯವಾಗಿದೆ. ಆದರೂ ಬಿಜೆಪಿ ಅಂತರ್‌ಧರ್ಮೀಯ ವಿವಾಹಗಳನ್ನು ತಡೆಯುವ ಗುರಿಯನ್ನು ಹೊಂದಿದೆಯೆ ಹೊರತು ಲೈಂಗಿಕ ದೌರ್ಜನ್ಯಗಳನ್ನಲ್ಲ. ಹಾಗಾಗಿ ದೌರ್ಜನ್ಯ ಎಸಗುವ ಅಪರಾಧಿಗಳು ನಿರ್ಭಯದಿಂದ ತಿರುಗಾಡುತ್ತಾರೆ.

ಅಷ್ಟೇ ಅಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆ-2019 ರ ಅಂಗೀಕಾರ ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಬಿಜೆಪಿ ಸ್ಪಷ್ಟ ಕೋಮು ದ್ರುವೀಕರಣದ ಆಡಳಿತಾತ್ಮಕ ದೃಷ್ಟಿಕೋನದ ಜೊತೆಗೆ ಈ ಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಅಲ್ಲದೆ, ನಿಜಕ್ಕೂ, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಗಳನ್ನು ಬೆದರಿಕೆ-ಭಯದ ವಾತಾವರಣವನ್ನು ಹೇರುವ ಮತ್ತು ಉಳಿಸಿಕೊಳ್ಳುವ ನಿರಂತರ ಪ್ರಯತ್ನಗಳ ಜೊತೆಗೆ ದೊಡ್ಡ ಸಾರ್ವಜನಿಕರನ್ನು ಅಧೀನವಾಗಿಡಲು ಬಿಜೆಪಿಯು ಬಯಸುತ್ತಿದೆ.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್‌ನ ಒಳ ಒಪ್ಪಂದದಿಂದ ಉಪಚುನಾವಣೆಯನ್ನು ಗೆಲ್ಲಲಾಗಿದೆ: ಸಿದ್ದರಾಮಯ್ಯ

ಬಿಜೆಪಿ ಬಗ್ಗೆ ಪ್ರವಚನ ನೀಡುವ ಮಾಧ್ಯಮಗಳು:

ಭಾರತೀಯ ಸುದ್ದಿ ವಾಹಿನಿಗಳು ಬಿಜೆಪಿಯ ಪ್ರಚಾರವನ್ನು ನ್ಯಾಯಸಮ್ಮತಗೊಳಿಸಲು ನೆರವಾಗುತ್ತವೆ. ದೇಶಾದ್ಯಂತ ಜನರು ಈ ಚಾನೆಲ್‌ಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ ಮತ್ತು ಅವರು ಪ್ರಸಾರ ಮಾಡುವ ಬಿಜೆಪಿ ಬಗೆಗಿನ ಪ್ರವಚನವನ್ನು ಖರೀದಿಸುತ್ತಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದೆನಿಸಿಕೊಂಡಿರುವ ಮಾಧ್ಯಮ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ, ಆಡಳಿತ ಪಕ್ಷವು ಚುನಾವಣೆಯಲ್ಲಿ ಗೆಲ್ಲುವುದನ್ನು ತಡೆಯುವುದು ಅಸಾಧ್ಯವಾಗುತ್ತದೆ.

ವೆಟ್ರಿವೇಲ್ ಯಾತ್ರೆ ನಡೆಸಲು ಬಿಜೆಪಿ ಕೋರಿದ್ದ ಅನುಮತಿ ತಿರಸ್ಕರಿಸಿದ ತಮಿಳುನಾಡು!
ತಮಿಳುನಾಡಿನಲ್ಲಿ ಕೋಮುದ್ವೇಷ ಹರಡಲು ಯತ್ನಿಸುತ್ತಿರುವ ಬಿಜೆಪಿ

 

ಮಾಧ್ಯಮಗಳು ವಹಿಸಿರುವ ಪಾತ್ರದಿಂದಾಗಿ ಭಾರತದಲ್ಲಿ ಮೋದಿ, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್, ಬ್ರೆಜಿಲ್‌ನ ಜೈರ್ ಬೋಲ್ಸನಾರೊ ಮತ್ತು ಇತರ ಪ್ರಬಲರು ಒಂದೇ ರೀತಿಯಲ್ಲಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ. ಅಧ್ಯಕ್ಷ ಟ್ರಂಪ್ ಅವರು ಇಲ್ಲಿಯವರೆಗೆ ಹೇಳಿರುವ ಎಲ್ಲಾ ಸುಳ್ಳುಗಳನ್ನು ನ್ಯೂಯಾರ್ಕ್ ಟೈಮ್ಸ್ ನಲ್ಲಿ ನೀವು ಕಾಣಬಹುದು. ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಇಡೀ ಮಾಧ್ಯಮವನ್ನು ಒಬ್ಬ ವ್ಯಕ್ತಿಯಿಂದ ನಿಯಂತ್ರಿಸಲಾಗುವುದಿಲ್ಲ, ಆದರೆ ಭಾರತದಲ್ಲಿ ಮಾಧ್ಯಮಗಳು ಸುಳ್ಳನ್ನು ಕ್ರಮಬದ್ಧವಾಗಿ ಪ್ರಚಾರ ಮಾಡುವುದನ್ನು ನಾವು ನೋಡಬಹುದು.

ಜನರ ಮನಸ್ಸಿನ ದುರ್ಬಲತೆಯನ್ನು ಬಿಜೆಪಿ ಬೇಟೆಯಾಡುತ್ತಿದೆ. ಅವರು ತಮ್ಮ ಸ್ವಂತ ಅಗತ್ಯಗಳನ್ನು ಪೂರೈಸಲು ಆರ್ಥಿಕ ಅಸ್ಥಿರತೆ ಮತ್ತು ಕಳಪೆ ಜೀವನಮಟ್ಟದಂತಹ ಅಂಶಗಳನ್ನು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯು ಚುನಾವಣೆಯಲ್ಲಿ ಗೆಲ್ಲುವ ಪಕ್ಷವಾಗುತ್ತಿದೆಯೆ ಹೊರತು ದೇಶವನ್ನು ಉತ್ತಮವಾಗಿ ಹೇಗೆ ನಡೆಸಬಹುವುದು ಎಂಬುದಕ್ಕೆ ಉದಾಹರಣೆಯಾಗಿಯಲ್ಲ.

ಕೃಪಿ: ನ್ಯೂಸ್‌ ಕ್ಲಿಕ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಇದನ್ನೂ ಓದಿ: ಲವ್ ಜಿಹಾದ್ ವಿರುದ್ದದ ಕಾನೂನನ್ನು ಮೊದಲು ಬಿಜೆಪಿ ನಾಯಕರ ವಿರುದ್ದ ಬಳಸಿ: ಖ್ಯಾತ ಉರ್ದು ಕವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...