Homeಅಂತರಾಷ್ಟ್ರೀಯಭಾರತ ಏಷ್ಯಾದಲ್ಲೇ ಅತ್ಯಂತ ಭ್ರಷ್ಟ ದೇಶ: ಸಮೀಕ್ಷಾ ವರದಿ

ಭಾರತ ಏಷ್ಯಾದಲ್ಲೇ ಅತ್ಯಂತ ಭ್ರಷ್ಟ ದೇಶ: ಸಮೀಕ್ಷಾ ವರದಿ

ಭಾರತದ ಬಹುಪಾಲು ನಾಗರಿಕರು (ಶೇಕಡಾ 63) ಭ್ರಷ್ಟಾಚಾರದ ಬಗ್ಗೆ ದೂರು ನೀಡಿದರೆ ಪ್ರತೀಕಾರಕ್ಕೆ ಒಳಗಾಗುತ್ತಾರೆ ಎಂದು ವರದಿ ಹೇಳಿದೆ.

- Advertisement -
- Advertisement -

ಭಾರತವು ಏಷ್ಯಾದಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ಹೊಂದಿರುವ ದೇಶವಾಗಿದ್ದು ಮತ್ತು ಸಾರ್ವಜನಿಕ ಸೇವೆಗಳನ್ನು ಪಡೆಯಲು ವೈಯಕ್ತಿಕ ಸಂಪರ್ಕಗಳನ್ನು ಬಳಸುವವರ ಸಂಖ್ಯೆ ಹೆಚ್ಚು ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನ ಸಮೀಕ್ಷಯಲ್ಲಿ ತಿಳಿದು ಬಂದಿದೆ.

ಲಂಚ ಪಾವತಿಸಿದ ಸುಮಾರು 50% ದಷ್ಟು ಜನರಲ್ಲಿ 32% ರಷ್ಟು ಜನರು ವೈಯಕ್ತಿಕ ಸಂಪರ್ಕಗಳನ್ನು ಬಳಸದೆ ತಾವು ಸೇವೆಯನ್ನು ಪಡೆಯಲು ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ. ಈ ವರ್ಷದ ಜೂನ್ 17 ಮತ್ತು ಜುಲೈ 17 ರ ನಡುವೆ ಭಾರತದಲ್ಲಿ 2,000 ಮಾದರಿ ಗಾತ್ರದೊಂದಿಗೆ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ಸಮೀಕ್ಷಾ ವರದಿ ತಯಾರಾಗಿದೆ.

ಇದನ್ನೂ ಓದಿ: ಬಡತನ, ಭ್ರಷ್ಟಾಚಾರದ ಮೇಲೆ‌ ಸರ್ಜಿಕಲ್ ಸ್ಟ್ರೈಕ್ ಮಾಡಿ: ಬಿಜೆಪಿ ವಿರುದ್ಧ ಆಕ್ರೋಶ 

ಭ್ರಷ್ಟಾಚಾರದ ಪ್ರಕರಣಗಳನ್ನು ತಡೆಯಲು ದೂರು ನೀಡುವುದು ಅಗತ್ಯವೆನಿಸಿದರೂ ಭಾರತದ ಬಹುಪಾಲು ನಾಗರಿಕರು (ಶೇಕಡಾ 63) ಭ್ರಷ್ಟಾಚಾರದ ಬಗ್ಗೆ ದೂರು ನೀಡಿದರೆ ಪ್ರತೀಕಾರಕ್ಕೆ ಒಳಗಾಗುತ್ತಾರೆ ಎಂದು ವರದಿ ಹೇಳಿದೆ.

ಭಾರತ, ಮಲೇಷ್ಯಾ, ಥೈಲ್ಯಾಂಡ್, ಶ್ರೀಲಂಕಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಲೈಂಗಿಕ ಸುಲಿಗೆ ಪ್ರಮಾಣವೂ ಹೆಚ್ಚಾಗಿದೆ ಮತ್ತು ಇದನ್ನು ತಡೆಗಟ್ಟಲು ಹಾಗೂ ನಿರ್ದಿಷ್ಟ ಲಿಂಗಭೇದದ ಭ್ರಷ್ಟಾಚಾರವನ್ನು ಪರಿಹರಿಸಲು ಹೆಚ್ಚಿನದನ್ನು ಮಾಡಬೇಕು ಎಂದು ವರದಿ ತಿಳಿಸಿದೆ.

ಲೈಂಗಿಕ ಸುಲಿಗೆ ಎನ್ನುವುದು ಫೋಟೋಗಳನ್ನು ತಿದ್ದಿ ಆ ಮೂಲಕ ಲೈಂಗಿಕ ಚಟುವಟಿಕೆಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುವ ಮೂಲಕ ಹಣ ಅಥವಾ ಲೈಂಗಿಕ ನೆರವು ಪಡೆಯುವುದಾಗಿದೆ.

ಇದನ್ನೂ ಓದಿ: ಇಡೀ ಕುಟುಂಬವನ್ನೇ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರುವ ಯಡಿಯೂರಪ್ಪ: ಸಿದ್ದರಾಮಯ್ಯ

ಭಾರತದಲ್ಲಿ, 89% ರಷ್ಟು ಜನರು ಸರ್ಕಾರದ ಭ್ರಷ್ಟಾಚಾರವು ಒಂದು ದೊಡ್ಡ ಸಮಸ್ಯೆ ಎಂದು ಭಾವಿಸುತ್ತಾರೆ, 18% ಜನರು ಮತಗಳಿಗಾಗಿ ಲಂಚ ಪಡೆಯುತ್ತಾರೆ ಮತ್ತು 11% ಲೈಂಗಿಕ ಸುಳಿಗೆಯ ಅನುಭವ ಹೊಂದಿದ್ದಾರೆ ಅಥವಾ ಅದು ನಡೆಸುವವರನ್ನು ತಿಳಿದಿದ್ದಾರೆ.

ಸಮೀಕ್ಷೆಯಲ್ಲಿ 63% ದಷ್ಟು ಜನರು ಭ್ರಷ್ಟಾಚಾರವನ್ನು ನಿಭಾಯಿಸುವಲ್ಲಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರೆ, 73% ಜನರು ದೇಶದ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

17 ದೇಶಗಳಲ್ಲಿ ನಡೆಸಿದ ಕ್ಷೇತ್ರಕಾರ್ಯದ ಆಧಾರದ ಮೇಲೆ, ಸಂಸ್ಥೆಯೂ ಒಟ್ಟು 20,000 ನಾಗರಿಕರನ್ನು ಸಮೀಕ್ಷೆ ಮಾಡಿದೆ.

ಇದನ್ನೂ ಓದಿ: ಭ್ರಷ್ಟಾಚಾರ ಪ್ರಶ್ನಿಸಿದ ಪತ್ರಕರ್ತನ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಲ್ಲೆ: ಅವ್ಯಾಹತವಾಗಿ ನಡೆದಿದೆ ಅರಣ್ಯ ಲೂಟಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...