Homeಕರ್ನಾಟಕಕರಾವಳಿ: ಬಿಜೆಪಿ ಬೆನ್ನಿಗೇ ಬಂದು ನಿಂತಿದೆ ಕಾಂಗ್ರೆಸ್!

ಕರಾವಳಿ: ಬಿಜೆಪಿ ಬೆನ್ನಿಗೇ ಬಂದು ನಿಂತಿದೆ ಕಾಂಗ್ರೆಸ್!

- Advertisement -
- Advertisement -

ಕರಾವಳಿಯ ತ್ರಿವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಗಿದ ಎಂಜಿಪಿ(ಮೆಂಬರ್ ಆಫ್ ಗ್ರಾಮ್ ಪಂಚಾಯತ್) ಚುನಾವಣಾ ರಣಕೇಕೆ ಎಂಪಿ(ಮೆಂಬರ್ ಆಫ್ ಪಾರ್ಲಿಮೆಂಟ್) ಚುನಾವಣೆಗಿಂತ ಒಂದು ಗುಂಜಿ ಹೆಚ್ಚೇ ಇತ್ತೆಂದು ಚುನಾವಣಾ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಗ್ರಾಪಂ ಎಲೆಕ್ಷನ್‌ನಲ್ಲಿ ಪಕ್ಷಗಳ ಸಿಂಬಲ್ ಮೇಲೆ ಪೈಪೋಟಿಗೆ ಅವಕಾಶವಿಲ್ಲ. ಆದರೆ ಬಿಟ್ಟೆನೆಂದರೂ ಬಿಡದು ನಿನ್ನ ಮಾಯೆ ಎಂಬಂತೆ ಹಳ್ಳಿ ಜಿದ್ದಾಜಿದ್ದಿಯಲ್ಲಿ ಪಕ್ಷ ರಾಜಕೀಯದ ಅಮಲು-ಘಮಲಿನ ಅಂಡರ್‌ಕರೆಂಟ್ ಹರಿದಾಡಿತ್ತು! ಬಿಜೆಪಿಯ ಧರ್ಮರಾಜಕಾರಣದ ತಂತ್ರಗಾರಿಕೆ ಜೋರಾಗಿರುವ ಈ ಕಾಲಘಟ್ಟದಲ್ಲಿ ಜರುಗಿದ ಪಂಚಾಯ್ತಿ ಪೈಟಿಂಗ್‌ನಲ್ಲಿ ಕರಾವಳಿಯಲ್ಲಂತೂ ಆ ಪಕ್ಷದ ಅಡ್ಡ ಆಕ್ರಮಣದ ಅನೇಕ ಆಯಾಮಗಳನ್ನು ತೆರೆದು ತೋರಿಸಿದೆ..

ಗ್ರಾಪಂ-ತಾಪಂ-ಜಿಪಂನಂಥ ಸ್ಥಳೀಯ ಸಂಸ್ಥೆ ಚುನಾವಣೆಗಳು ಅಸೆಂಬ್ಲಿ ಪಾರ್ಲಿಮೆಂಟ್ ಮಹಾಯುದ್ಧದ ಗೆಲುವು-ಸೋಲಿನ ಮುನ್ಸೂಚನೆ ಎಂಬ ಅಭಿಪ್ರಾಯವಿದೆ. ಆದರೆ ಕರಾವಳಿಯ ಉತ್ತರಕನ್ನಡ-ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಈ ಸೂತ್ರ ಸಮೀಕರಣದ ಲೆಕ್ಕಾಚಾರ ಪಲ್ಟಿ ಹೊಡೆದದ್ದೇ ಹೆಚ್ಚು! ಹಿಂದುತ್ವದ ಪ್ರಯೋಗ ಶಾಲೆಯಂತಾಗಿರುವ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕೇಸರಿ ರಾಜಕಾರಣದ ಬೇರುಗಳು ಕುಗ್ರಾಮದಲ್ಲೂ ಹಬ್ಬಿ ಹೆಚ್ಚುಕಮ್ಮಿ ಎರಡು ದಶಕಗಳೇ ಕಳೆದುಹೋಗಿದೆ. ಬಿಜೆಪಿಯ ಕುರ್ಚಿ ಕಸರತ್ತಿಗೆ ಹಿಂದುತ್ವದ ಸಿದ್ಧಾಂತದಷ್ಟೇ ದೊಡ್ಡ ಅನುಕೂಲ ಕಾಂಗ್ರೆಸ್‌ನ ಒಳ ಜಗಳದಿಂದಲೂ ಆಗಿದೆ. ಉತ್ತರಕನ್ನಡದ ಮಟ್ಟಿಗೆ ಹೇಳಬೇಕೆಂದರೆ ಗ್ರಾಮಗಳಲ್ಲಿ ಬಿಜೆಪಿ ನೆಲೆ ದಕ್ಷಿಣ ಕನ್ನಡದಷ್ಟು ವ್ಯಾಪಕವಾಗಿ ವ್ಯಾಪಿಸಿಲ್ಲ. ಹಿಂದುತ್ವದ ಬೆಂಕಿ ಚೆಂಡಾದ ಅನಂತಕುಮಾರ್ ಹೆಗಡೆಯಂಥವರು ಜನಪರ ಕೆಲಸವೇನೂ ಮಾಡದಿದ್ದರೂ ಮತ್ತೆ ಮತ್ತೆ ಗೆಲ್ಲುತ್ತಿದ್ದಾರೆಂದರೆ ಅದಕ್ಕೆ ಕಾರಣ ಕಾಂಗ್ರೆಸ್‌ನ ಹಿರಿತಲೆಗಳಾದ ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವರ ಬಣದ ಲಾಗಾಯ್ತಿನ ಮನೆಮುರುಕುತನ!

ಈ ಮೂರು ಕೇಸರಿ ಕೋಟೆಯಲ್ಲಿ ಮೊನ್ನೆ ಮುಗಿದ ಗ್ರಾಪಂ ಫಲಿತಾಂಶದ ಮೇಲೊಮ್ಮೆ ಕಣ್ಣು ಹಾಯಿಸಿದರೆ ಬಿಜೆಪಿ ಬೀಗುವಂಥ ಸಾಧನೆಯೇನೂ ಮಾಡಿದಂತೆ ಕಾಣಿಸದು. ಚುಕ್ಕಾಣಿಯೇ ಇಲ್ಲದೆ ದಿಕ್ಕೆಟ್ಟು ಹೊಯ್ದಾಡುತ್ತಿರುವ ಕಾಂಗ್ರೆಸ್ ಎದುರು ಬಿಜೆಪಿ ಕನಿಷ್ಠವೆಂದರೂ ಮುಕ್ಕಾಲು ಪಾಲು ಸ್ಥಾನಗಳನ್ನಾದರೂ ಗೆದ್ದುಕೊಳ್ಳಬೇಕಿತ್ತು. ಬಿಜೆಪಿಯ ನಳಿನ್‌ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ ಮತ್ತು ಶೋಭಾ ಕರಂದ್ಲಾಜೆಯಂಥ ಬೆಂಕಿ ಬ್ರ್ಯಾಂಡಿನವರ ಬಡಾಯಿಯೂ ಜೋರಾಗಿಯೇ ಇತ್ತು. ಆದರೆ ಹೊಂದಾಣಿಕೆ, ಸಂಘಟನೆಯಿಲ್ಲದೆ ಹೋದದ್ದಕ್ಕೆ, ಮೂರೂ ಜಿಲ್ಲೆಗಳಲ್ಲಿಯೂ ದುರ್ಬಲ ಕಾಂಗ್ರೆಸ್ ಬಲಾಢ್ಯ ಬಿಜೆಪಿಯನ್ನು ಅಟ್ಟಾಡಿಸಿಕೊಂಡು ಬಂದು ಈಗ ಅದರ ಬೆನ್ನಿಗೇ ನಿಂತಿದೆ!

2005ರಲ್ಲಿ ನಡೆದ ಗ್ರಾಪಂ ಸಮರದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯನವರ ಸರ್ಕಾರವಿತ್ತು. ಆಗ ಅವಿಭಜಿತ ದಕ್ಷಿಣಕನ್ನಡದಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿತ್ತು. ಅಂದರೆ ದಕ್ಷಿಣಕನ್ನಡ ಮತ್ತು ಉಡುಪಿ ಹುಸಿ ಹಿಂದುತ್ವಕ್ಕೆ ಮರುಳಾಗುವ ಮಾಮೂಲಿ ’ಸಂಪ್ರದಾಯ’ಕ್ಕೆ ಶರಣಾಗಿತ್ತು. ಈ ಬಾರಿಯೂ ಅದೇ ಪರಂಪರೆ ಪುನರಾವರ್ತನೆಯಾಗಿದೆಯಷ್ಟೆ. ಹಾಗಂತ ಗತಿ-ಗೋತ್ರವಿಲ್ಲದ ಕಾಂಗ್ರೆಸ್ ಅಂಥ ಹೀನಾಯ ಪ್ರದರ್ಶನವೇನೂ ತೋರಿಸಿಲ್ಲ. ಮೂಡಬಿದರೆ, ಉಳ್ಳಾಲ, ಬಂಟ್ವಾಳ, ಬೈಂದೂರುಗಳಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಹಿಂದೆ ಹಾಕಿದೆಯೆಂಬ ಚರ್ಚೆಗಳು ನಡೆದಿದೆ. ಹಲವೆಡೆ ಬಿಜೆಪಿ ತನ್ನ ಸುಪರ್ದಿಯಲ್ಲಿದ್ದ ಪಂಚಾಯ್ತಿಗಳನ್ನು ಬಿಟ್ಟುಕೊಡಬೇಕಾಗಿದೆ. ಹೇಗಾದರೂ ಮಾಡಿ ಕರಾವಳಿ ಮೇಲಿನ ಹಿಡಿತ ಬಿಗಿಗೊಳಿಸಿಕೊಳ್ಳವ ಹಠಕ್ಕೆ ಬಿದ್ದಿದ್ದ ಬಿಜೆಪಿ ಹಣ ಹಾಗೂ ಆಡಳಿತ ಯಂತ್ರದ ಬಲ ಬಳಸಿದೆ. ಇಷ್ಟಾದರೂ ಕೇಸರಿ ಪಡೆ ನಿರೀಕ್ಷಿಸಿದ್ದ ಭರ್ಜರಿ ದಿಗ್ವಿಜಯ ಸಾಧ್ಯವಾಗಿಲ್ಲ! ಕಾಂಗ್ರೆಸ್ ’ಕಲಿ’ಗಳು ಪರಸ್ಪರ ಕಾಲೆಳೆವ ಕಸರತ್ತು ಬಿಟ್ಟು ಒಂದಾದರೆ ಬಿಜೆಪಿಯನ್ನು ಹಿಮ್ಮೆಟ್ಟಿಸುವುದೇನೂ ಕಷ್ಟವಲ್ಲವೆಂಬ ಸಂದೇಶವನ್ನಂತೂ ಗ್ರಾಪಂ ಚುನಾವಣೆ ನೀಡಿದೆ.

ಹಾಗಂತ ಉತ್ತರ ಕನ್ನಡದಲ್ಲಿರುವುದು ಹಿಂದುತ್ವದ ಅಮಲಲ್ಲ. ಅದು ಬಿಜೆಪಿ ಎಂಎಲ್‌ಎಗಳು ತಮ್ಮ ಅಸ್ತಿತ್ವಕ್ಕಾಗಿ ಅಧಿಕಾರ, ಶಕ್ತಿ ಪ್ರಯೋಗಿಸಿ ದಕ್ಕಿಸಿಕೊಂಡ ಜಯ. ಹಳ್ಳಿಗಳಲ್ಲಿ ಬಿಜೆಪಿ ನಾಯಕರು ಅಂದುಕೊಂಡಷ್ಟು ಆಳಕ್ಕೆ ಆ ಪಕ್ಷದ ಬೇರುಗಳಿನ್ನೂ ಇಳಿದಿಲ್ಲ ಎಂಬುದನ್ನು ಈ ಫಲಿತಾಂಶ ಪಕ್ಕಾ ಮಾಡಿದೆ. ಕುಮಟಾದ ಬಿಜೆಪಿ ಶಾಸಕ ದಿನಕರ ಶೆಟ್ಟಿ, ಭಟ್ಕಳ ಹೊನ್ನಾವರದ ಸುನಿಲ್ ನಾಯ್ಕ್, ಶಿರಸಿ ಸಿದ್ದಾಪುರದ ಕಾಗೇರಿ (ಸ್ಪೀಕರ್) ಹಗಲಿರುಳು ಬೆವರಿಳಿಸಿದರೂ ಕಾಂಗ್ರೆಸನ್ನು ಸಂಪೂರ್ಣವಾಗಿ ಸೋಲಿಸಲಾಗಿಲ್ಲ. ಹಾಲಿ ಶಾಸಕರಾಗಿರುವುದರಿಂದ ಸಣ್ಣ ಅಂತರದಿಂದ ಗೆಲುವು ಬೀರಿ ಮುಖ ಉಳಿಸಿಕೊಂಡರೂ ವಿರೋಚಿತ ಗೆಲವು ಪಡೆಯಲಾಗಿಲ್ಲ. ಭಟ್ಕಳದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಶಿರಸಿ ಸಿದ್ದಾಪುರದಲ್ಲಿ ಬೀಮಣ್ಣ, ವಸಂತ್ ನಾಯ್ಕ್, ಸಶ್ಮಾರೆಡ್ಡಿ(ಹೊನ್ನಾವರ) ಬಳಗ, ಹಳಿಯಾಳ ಕ್ಷೇತ್ರದಲ್ಲಿ ದೇಶಪಾಂಡೆ, ಘೋಟನೇಕರ್ ತಂಡ ಬಿಜೆಪಿ ಬಲಾಢ್ಯರಿಗೆ ಬೆಚ್ಚಿ ಬೀಳಿಸಿದೆ!

ಎಂಎಲ್‌ಎ ದೀಕ್ಷೆ ನೀಡಿದ್ದ ಪೂರ್ವಾಶ್ರಮದ ಕಾಂಗ್ರೆಸನ್ನು ನಿರ್ನಾಮ ಮಾಡುವ ವೀರಾವೇಷದ ಆಟ ಆಡಿದ್ದ ಮಂತ್ರಿ ಶಿವರಾಮ ಹೆಬ್ಬಾರ್‌ನ ಹಲವು ಭ್ರಮೆಗಳನ್ನು ಗ್ರಾಪಂ ಎಲೆಕ್ಷನ್ ಇಳಿಸಿದೆ. ಆತ ಯಲ್ಲಾಪುರ, ಮುಂಡಗೋಡಲ್ಲಿ ತನ್ನ ನಿಷ್ಠರಿಗೆ ಮಣೆಹಾಕಿ ಬಿಜೆಪಿಯನ್ನೇ ಮುಗಿಸಿದ್ದಾರೆಂದು ಮೂಲ ಬಿಜೆಪಿಗರು ಗೊಣಗಾಡುತ್ತಿದ್ದಾರೆ. ಸ್ವಜಾತಿಯ ಹವ್ಯಕರು ಹೆಚ್ಚಿರುವ ಯಲ್ಲಾಪುರದಲ್ಲಿ ಹೆಚ್ಚು ಹಿಂಬಾಲಕರನ್ನು ಗೆಲ್ಲಿಸಿಕೊಂಡಿರುವ ಹೆಬ್ಬಾರ್ ಮುಂಡಗೋಡಿನಲ್ಲಿ ಮುಗ್ಗರಿಸಿದ್ದಾರೆ! ಮಾಜಿ ಮಂತ್ರಿ ಪಕ್ಕದ ಕಲಘಟಗಿಯ ಮಾಜಿ ಶಾಸಕ ಸಂತೋಷ್ ಲಾಡ್ ಕಾಂಗ್ರೆಸ್‌ನ ಎಲೆಕ್ಷನ್ ಉಸ್ತುವಾರಿಯಾಗಿ ಹೆಬ್ಬಾರ್‌ಗೆ ಸೆಡ್ಡುಹೊಡೆದು ನಿಂತಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಂತೋಷ್ ಲಾಡ್ ಹೆಬ್ಬಾರ್ ವಿರುದ್ಧ ಕಾಂಗ್ರೆಸ್ ಕ್ಯಾಂಡಿಡೇಟಾಗುವ ಸುದ್ದಿಗಳಿಗೀಗ ರೆಕ್ಕೆಪುಕ್ಕ ಬಂದುಬಿಟ್ಟಿದೆ. ಹಂಗೇನಾದರೂ ಆದರೆ ಗಣಿಧಣಿಗಳ ನಡುವೆ ’ಹಣಾ’ಹಣಿಯೇ ಏರ್ಪಡಲಿದೆ. ಪಾರ್ಟಿ ಕಟ್ಟುವುದು ಬಿಟ್ಟು ಸ್ವ ಸಾಮ್ರಾಜ್ಯ ವಿಸ್ತರಣೆಗೆ ಹವಣಿಸುತ್ತಿರುವ ಹೆಬ್ಬಾರ್ ಬಿಜೆಪಿಗೆ ಮಗ್ಗಲು ಮುಳ್ಳಾಗಿರುವುದಂತೂ ಖರೆ.

ಪತ್ರಿಕೆಗಳಿಗೆ ಪ್ರತಿದಿನ ಲಕ್ಷಾಂತರ ರೂ ಜಾಹೀರಾತು ಕೊಡುತ್ತ ಕಾರವಾರ, ಅಂಕೋಲಾದಲ್ಲಿ ’ಜಾಹೀರಾತು ರಾಣಿ’ ಎಂದೇ ಹೆಸರುವಾಸಿಯಾಗಿರುವ ಶಾಸಕಿ ರೂಪಾಲಿ ನಾಯ್ಕ್ ನೆಲೆ ಗಟ್ಟಿಗೊಳಿಸಿಕೊಂಡಿದ್ದಾರೆ. 24/7 ಎಲೆಕ್ಷನ್ ರಾಜಕಾರಣ ಮಾಡಿದ ಅವರು ಕ್ಷೇತ್ರದಲ್ಲಿನ ತಮ್ಮ ಸಾಧನೆ, ಬಿಜೆಪಿ ಹೈಕಮಾಂಡ್‌ನ ಕಣ್ಣು ಕೋರೈಸಿದರೆ ಮಂತ್ರಿಗಿರಿ ಕರುಣಿಸಬಹುದೆಂದು ಭಾವಿಸಿದ್ದಾರೆ.

ಹಿಂದೆಂದಿಗಿಂತ ಈಗ ಗ್ರಾಪಂ ಅಧಿಕಾರ ಆಕರ್ಷಣೆ ಜೋರಾಗಿರುವುದರಿಂದ ಹಳ್ಳಿ ಸರ್ಕಾರ ರಚನೆ ರಾಜಕಾರಣ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಎಂಜಿಪಿಯಾಗಲಿಕ್ಕೇ ಕಷ್ಟಪಟ್ಟ ಈ ರಾಜಕಾರಣಿಗಳು ಅಧ್ಯಕ್ಷ, ಉಪಾಧ್ಯಕ್ಷ ಆಗುವ ಅವಕಾಶ ಸಿಕ್ಕರೆ ಬಿಡುವರಾ?! ಗ್ರಾಪಂಗಳ ಚಹರೆ ಬದಲಾಗುವ ಸೂಚನೆಗಳಂತೂ ಗೋಚರಿಸಲಾರಂಭಿಸಿದೆ.


ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಬಿರುಕು: ಯತ್ನಾಳ್ ವಿರುದ್ಧ ರಾಷ್ಟ್ರ ನಾಯಕರಿಗೆ ದೂರು ನೀಡಿದ ಸಿಎಂ ಬೆಂಬಲಿಗರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...