Homeಕರ್ನಾಟಕಕರಾವಳಿ: ಬಿಜೆಪಿ ಬೆನ್ನಿಗೇ ಬಂದು ನಿಂತಿದೆ ಕಾಂಗ್ರೆಸ್!

ಕರಾವಳಿ: ಬಿಜೆಪಿ ಬೆನ್ನಿಗೇ ಬಂದು ನಿಂತಿದೆ ಕಾಂಗ್ರೆಸ್!

- Advertisement -
- Advertisement -

ಕರಾವಳಿಯ ತ್ರಿವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಗಿದ ಎಂಜಿಪಿ(ಮೆಂಬರ್ ಆಫ್ ಗ್ರಾಮ್ ಪಂಚಾಯತ್) ಚುನಾವಣಾ ರಣಕೇಕೆ ಎಂಪಿ(ಮೆಂಬರ್ ಆಫ್ ಪಾರ್ಲಿಮೆಂಟ್) ಚುನಾವಣೆಗಿಂತ ಒಂದು ಗುಂಜಿ ಹೆಚ್ಚೇ ಇತ್ತೆಂದು ಚುನಾವಣಾ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಗ್ರಾಪಂ ಎಲೆಕ್ಷನ್‌ನಲ್ಲಿ ಪಕ್ಷಗಳ ಸಿಂಬಲ್ ಮೇಲೆ ಪೈಪೋಟಿಗೆ ಅವಕಾಶವಿಲ್ಲ. ಆದರೆ ಬಿಟ್ಟೆನೆಂದರೂ ಬಿಡದು ನಿನ್ನ ಮಾಯೆ ಎಂಬಂತೆ ಹಳ್ಳಿ ಜಿದ್ದಾಜಿದ್ದಿಯಲ್ಲಿ ಪಕ್ಷ ರಾಜಕೀಯದ ಅಮಲು-ಘಮಲಿನ ಅಂಡರ್‌ಕರೆಂಟ್ ಹರಿದಾಡಿತ್ತು! ಬಿಜೆಪಿಯ ಧರ್ಮರಾಜಕಾರಣದ ತಂತ್ರಗಾರಿಕೆ ಜೋರಾಗಿರುವ ಈ ಕಾಲಘಟ್ಟದಲ್ಲಿ ಜರುಗಿದ ಪಂಚಾಯ್ತಿ ಪೈಟಿಂಗ್‌ನಲ್ಲಿ ಕರಾವಳಿಯಲ್ಲಂತೂ ಆ ಪಕ್ಷದ ಅಡ್ಡ ಆಕ್ರಮಣದ ಅನೇಕ ಆಯಾಮಗಳನ್ನು ತೆರೆದು ತೋರಿಸಿದೆ..

ಗ್ರಾಪಂ-ತಾಪಂ-ಜಿಪಂನಂಥ ಸ್ಥಳೀಯ ಸಂಸ್ಥೆ ಚುನಾವಣೆಗಳು ಅಸೆಂಬ್ಲಿ ಪಾರ್ಲಿಮೆಂಟ್ ಮಹಾಯುದ್ಧದ ಗೆಲುವು-ಸೋಲಿನ ಮುನ್ಸೂಚನೆ ಎಂಬ ಅಭಿಪ್ರಾಯವಿದೆ. ಆದರೆ ಕರಾವಳಿಯ ಉತ್ತರಕನ್ನಡ-ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಈ ಸೂತ್ರ ಸಮೀಕರಣದ ಲೆಕ್ಕಾಚಾರ ಪಲ್ಟಿ ಹೊಡೆದದ್ದೇ ಹೆಚ್ಚು! ಹಿಂದುತ್ವದ ಪ್ರಯೋಗ ಶಾಲೆಯಂತಾಗಿರುವ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕೇಸರಿ ರಾಜಕಾರಣದ ಬೇರುಗಳು ಕುಗ್ರಾಮದಲ್ಲೂ ಹಬ್ಬಿ ಹೆಚ್ಚುಕಮ್ಮಿ ಎರಡು ದಶಕಗಳೇ ಕಳೆದುಹೋಗಿದೆ. ಬಿಜೆಪಿಯ ಕುರ್ಚಿ ಕಸರತ್ತಿಗೆ ಹಿಂದುತ್ವದ ಸಿದ್ಧಾಂತದಷ್ಟೇ ದೊಡ್ಡ ಅನುಕೂಲ ಕಾಂಗ್ರೆಸ್‌ನ ಒಳ ಜಗಳದಿಂದಲೂ ಆಗಿದೆ. ಉತ್ತರಕನ್ನಡದ ಮಟ್ಟಿಗೆ ಹೇಳಬೇಕೆಂದರೆ ಗ್ರಾಮಗಳಲ್ಲಿ ಬಿಜೆಪಿ ನೆಲೆ ದಕ್ಷಿಣ ಕನ್ನಡದಷ್ಟು ವ್ಯಾಪಕವಾಗಿ ವ್ಯಾಪಿಸಿಲ್ಲ. ಹಿಂದುತ್ವದ ಬೆಂಕಿ ಚೆಂಡಾದ ಅನಂತಕುಮಾರ್ ಹೆಗಡೆಯಂಥವರು ಜನಪರ ಕೆಲಸವೇನೂ ಮಾಡದಿದ್ದರೂ ಮತ್ತೆ ಮತ್ತೆ ಗೆಲ್ಲುತ್ತಿದ್ದಾರೆಂದರೆ ಅದಕ್ಕೆ ಕಾರಣ ಕಾಂಗ್ರೆಸ್‌ನ ಹಿರಿತಲೆಗಳಾದ ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವರ ಬಣದ ಲಾಗಾಯ್ತಿನ ಮನೆಮುರುಕುತನ!

ಈ ಮೂರು ಕೇಸರಿ ಕೋಟೆಯಲ್ಲಿ ಮೊನ್ನೆ ಮುಗಿದ ಗ್ರಾಪಂ ಫಲಿತಾಂಶದ ಮೇಲೊಮ್ಮೆ ಕಣ್ಣು ಹಾಯಿಸಿದರೆ ಬಿಜೆಪಿ ಬೀಗುವಂಥ ಸಾಧನೆಯೇನೂ ಮಾಡಿದಂತೆ ಕಾಣಿಸದು. ಚುಕ್ಕಾಣಿಯೇ ಇಲ್ಲದೆ ದಿಕ್ಕೆಟ್ಟು ಹೊಯ್ದಾಡುತ್ತಿರುವ ಕಾಂಗ್ರೆಸ್ ಎದುರು ಬಿಜೆಪಿ ಕನಿಷ್ಠವೆಂದರೂ ಮುಕ್ಕಾಲು ಪಾಲು ಸ್ಥಾನಗಳನ್ನಾದರೂ ಗೆದ್ದುಕೊಳ್ಳಬೇಕಿತ್ತು. ಬಿಜೆಪಿಯ ನಳಿನ್‌ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ ಮತ್ತು ಶೋಭಾ ಕರಂದ್ಲಾಜೆಯಂಥ ಬೆಂಕಿ ಬ್ರ್ಯಾಂಡಿನವರ ಬಡಾಯಿಯೂ ಜೋರಾಗಿಯೇ ಇತ್ತು. ಆದರೆ ಹೊಂದಾಣಿಕೆ, ಸಂಘಟನೆಯಿಲ್ಲದೆ ಹೋದದ್ದಕ್ಕೆ, ಮೂರೂ ಜಿಲ್ಲೆಗಳಲ್ಲಿಯೂ ದುರ್ಬಲ ಕಾಂಗ್ರೆಸ್ ಬಲಾಢ್ಯ ಬಿಜೆಪಿಯನ್ನು ಅಟ್ಟಾಡಿಸಿಕೊಂಡು ಬಂದು ಈಗ ಅದರ ಬೆನ್ನಿಗೇ ನಿಂತಿದೆ!

2005ರಲ್ಲಿ ನಡೆದ ಗ್ರಾಪಂ ಸಮರದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯನವರ ಸರ್ಕಾರವಿತ್ತು. ಆಗ ಅವಿಭಜಿತ ದಕ್ಷಿಣಕನ್ನಡದಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿತ್ತು. ಅಂದರೆ ದಕ್ಷಿಣಕನ್ನಡ ಮತ್ತು ಉಡುಪಿ ಹುಸಿ ಹಿಂದುತ್ವಕ್ಕೆ ಮರುಳಾಗುವ ಮಾಮೂಲಿ ’ಸಂಪ್ರದಾಯ’ಕ್ಕೆ ಶರಣಾಗಿತ್ತು. ಈ ಬಾರಿಯೂ ಅದೇ ಪರಂಪರೆ ಪುನರಾವರ್ತನೆಯಾಗಿದೆಯಷ್ಟೆ. ಹಾಗಂತ ಗತಿ-ಗೋತ್ರವಿಲ್ಲದ ಕಾಂಗ್ರೆಸ್ ಅಂಥ ಹೀನಾಯ ಪ್ರದರ್ಶನವೇನೂ ತೋರಿಸಿಲ್ಲ. ಮೂಡಬಿದರೆ, ಉಳ್ಳಾಲ, ಬಂಟ್ವಾಳ, ಬೈಂದೂರುಗಳಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಹಿಂದೆ ಹಾಕಿದೆಯೆಂಬ ಚರ್ಚೆಗಳು ನಡೆದಿದೆ. ಹಲವೆಡೆ ಬಿಜೆಪಿ ತನ್ನ ಸುಪರ್ದಿಯಲ್ಲಿದ್ದ ಪಂಚಾಯ್ತಿಗಳನ್ನು ಬಿಟ್ಟುಕೊಡಬೇಕಾಗಿದೆ. ಹೇಗಾದರೂ ಮಾಡಿ ಕರಾವಳಿ ಮೇಲಿನ ಹಿಡಿತ ಬಿಗಿಗೊಳಿಸಿಕೊಳ್ಳವ ಹಠಕ್ಕೆ ಬಿದ್ದಿದ್ದ ಬಿಜೆಪಿ ಹಣ ಹಾಗೂ ಆಡಳಿತ ಯಂತ್ರದ ಬಲ ಬಳಸಿದೆ. ಇಷ್ಟಾದರೂ ಕೇಸರಿ ಪಡೆ ನಿರೀಕ್ಷಿಸಿದ್ದ ಭರ್ಜರಿ ದಿಗ್ವಿಜಯ ಸಾಧ್ಯವಾಗಿಲ್ಲ! ಕಾಂಗ್ರೆಸ್ ’ಕಲಿ’ಗಳು ಪರಸ್ಪರ ಕಾಲೆಳೆವ ಕಸರತ್ತು ಬಿಟ್ಟು ಒಂದಾದರೆ ಬಿಜೆಪಿಯನ್ನು ಹಿಮ್ಮೆಟ್ಟಿಸುವುದೇನೂ ಕಷ್ಟವಲ್ಲವೆಂಬ ಸಂದೇಶವನ್ನಂತೂ ಗ್ರಾಪಂ ಚುನಾವಣೆ ನೀಡಿದೆ.

ಹಾಗಂತ ಉತ್ತರ ಕನ್ನಡದಲ್ಲಿರುವುದು ಹಿಂದುತ್ವದ ಅಮಲಲ್ಲ. ಅದು ಬಿಜೆಪಿ ಎಂಎಲ್‌ಎಗಳು ತಮ್ಮ ಅಸ್ತಿತ್ವಕ್ಕಾಗಿ ಅಧಿಕಾರ, ಶಕ್ತಿ ಪ್ರಯೋಗಿಸಿ ದಕ್ಕಿಸಿಕೊಂಡ ಜಯ. ಹಳ್ಳಿಗಳಲ್ಲಿ ಬಿಜೆಪಿ ನಾಯಕರು ಅಂದುಕೊಂಡಷ್ಟು ಆಳಕ್ಕೆ ಆ ಪಕ್ಷದ ಬೇರುಗಳಿನ್ನೂ ಇಳಿದಿಲ್ಲ ಎಂಬುದನ್ನು ಈ ಫಲಿತಾಂಶ ಪಕ್ಕಾ ಮಾಡಿದೆ. ಕುಮಟಾದ ಬಿಜೆಪಿ ಶಾಸಕ ದಿನಕರ ಶೆಟ್ಟಿ, ಭಟ್ಕಳ ಹೊನ್ನಾವರದ ಸುನಿಲ್ ನಾಯ್ಕ್, ಶಿರಸಿ ಸಿದ್ದಾಪುರದ ಕಾಗೇರಿ (ಸ್ಪೀಕರ್) ಹಗಲಿರುಳು ಬೆವರಿಳಿಸಿದರೂ ಕಾಂಗ್ರೆಸನ್ನು ಸಂಪೂರ್ಣವಾಗಿ ಸೋಲಿಸಲಾಗಿಲ್ಲ. ಹಾಲಿ ಶಾಸಕರಾಗಿರುವುದರಿಂದ ಸಣ್ಣ ಅಂತರದಿಂದ ಗೆಲುವು ಬೀರಿ ಮುಖ ಉಳಿಸಿಕೊಂಡರೂ ವಿರೋಚಿತ ಗೆಲವು ಪಡೆಯಲಾಗಿಲ್ಲ. ಭಟ್ಕಳದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಶಿರಸಿ ಸಿದ್ದಾಪುರದಲ್ಲಿ ಬೀಮಣ್ಣ, ವಸಂತ್ ನಾಯ್ಕ್, ಸಶ್ಮಾರೆಡ್ಡಿ(ಹೊನ್ನಾವರ) ಬಳಗ, ಹಳಿಯಾಳ ಕ್ಷೇತ್ರದಲ್ಲಿ ದೇಶಪಾಂಡೆ, ಘೋಟನೇಕರ್ ತಂಡ ಬಿಜೆಪಿ ಬಲಾಢ್ಯರಿಗೆ ಬೆಚ್ಚಿ ಬೀಳಿಸಿದೆ!

ಎಂಎಲ್‌ಎ ದೀಕ್ಷೆ ನೀಡಿದ್ದ ಪೂರ್ವಾಶ್ರಮದ ಕಾಂಗ್ರೆಸನ್ನು ನಿರ್ನಾಮ ಮಾಡುವ ವೀರಾವೇಷದ ಆಟ ಆಡಿದ್ದ ಮಂತ್ರಿ ಶಿವರಾಮ ಹೆಬ್ಬಾರ್‌ನ ಹಲವು ಭ್ರಮೆಗಳನ್ನು ಗ್ರಾಪಂ ಎಲೆಕ್ಷನ್ ಇಳಿಸಿದೆ. ಆತ ಯಲ್ಲಾಪುರ, ಮುಂಡಗೋಡಲ್ಲಿ ತನ್ನ ನಿಷ್ಠರಿಗೆ ಮಣೆಹಾಕಿ ಬಿಜೆಪಿಯನ್ನೇ ಮುಗಿಸಿದ್ದಾರೆಂದು ಮೂಲ ಬಿಜೆಪಿಗರು ಗೊಣಗಾಡುತ್ತಿದ್ದಾರೆ. ಸ್ವಜಾತಿಯ ಹವ್ಯಕರು ಹೆಚ್ಚಿರುವ ಯಲ್ಲಾಪುರದಲ್ಲಿ ಹೆಚ್ಚು ಹಿಂಬಾಲಕರನ್ನು ಗೆಲ್ಲಿಸಿಕೊಂಡಿರುವ ಹೆಬ್ಬಾರ್ ಮುಂಡಗೋಡಿನಲ್ಲಿ ಮುಗ್ಗರಿಸಿದ್ದಾರೆ! ಮಾಜಿ ಮಂತ್ರಿ ಪಕ್ಕದ ಕಲಘಟಗಿಯ ಮಾಜಿ ಶಾಸಕ ಸಂತೋಷ್ ಲಾಡ್ ಕಾಂಗ್ರೆಸ್‌ನ ಎಲೆಕ್ಷನ್ ಉಸ್ತುವಾರಿಯಾಗಿ ಹೆಬ್ಬಾರ್‌ಗೆ ಸೆಡ್ಡುಹೊಡೆದು ನಿಂತಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಂತೋಷ್ ಲಾಡ್ ಹೆಬ್ಬಾರ್ ವಿರುದ್ಧ ಕಾಂಗ್ರೆಸ್ ಕ್ಯಾಂಡಿಡೇಟಾಗುವ ಸುದ್ದಿಗಳಿಗೀಗ ರೆಕ್ಕೆಪುಕ್ಕ ಬಂದುಬಿಟ್ಟಿದೆ. ಹಂಗೇನಾದರೂ ಆದರೆ ಗಣಿಧಣಿಗಳ ನಡುವೆ ’ಹಣಾ’ಹಣಿಯೇ ಏರ್ಪಡಲಿದೆ. ಪಾರ್ಟಿ ಕಟ್ಟುವುದು ಬಿಟ್ಟು ಸ್ವ ಸಾಮ್ರಾಜ್ಯ ವಿಸ್ತರಣೆಗೆ ಹವಣಿಸುತ್ತಿರುವ ಹೆಬ್ಬಾರ್ ಬಿಜೆಪಿಗೆ ಮಗ್ಗಲು ಮುಳ್ಳಾಗಿರುವುದಂತೂ ಖರೆ.

ಪತ್ರಿಕೆಗಳಿಗೆ ಪ್ರತಿದಿನ ಲಕ್ಷಾಂತರ ರೂ ಜಾಹೀರಾತು ಕೊಡುತ್ತ ಕಾರವಾರ, ಅಂಕೋಲಾದಲ್ಲಿ ’ಜಾಹೀರಾತು ರಾಣಿ’ ಎಂದೇ ಹೆಸರುವಾಸಿಯಾಗಿರುವ ಶಾಸಕಿ ರೂಪಾಲಿ ನಾಯ್ಕ್ ನೆಲೆ ಗಟ್ಟಿಗೊಳಿಸಿಕೊಂಡಿದ್ದಾರೆ. 24/7 ಎಲೆಕ್ಷನ್ ರಾಜಕಾರಣ ಮಾಡಿದ ಅವರು ಕ್ಷೇತ್ರದಲ್ಲಿನ ತಮ್ಮ ಸಾಧನೆ, ಬಿಜೆಪಿ ಹೈಕಮಾಂಡ್‌ನ ಕಣ್ಣು ಕೋರೈಸಿದರೆ ಮಂತ್ರಿಗಿರಿ ಕರುಣಿಸಬಹುದೆಂದು ಭಾವಿಸಿದ್ದಾರೆ.

ಹಿಂದೆಂದಿಗಿಂತ ಈಗ ಗ್ರಾಪಂ ಅಧಿಕಾರ ಆಕರ್ಷಣೆ ಜೋರಾಗಿರುವುದರಿಂದ ಹಳ್ಳಿ ಸರ್ಕಾರ ರಚನೆ ರಾಜಕಾರಣ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಎಂಜಿಪಿಯಾಗಲಿಕ್ಕೇ ಕಷ್ಟಪಟ್ಟ ಈ ರಾಜಕಾರಣಿಗಳು ಅಧ್ಯಕ್ಷ, ಉಪಾಧ್ಯಕ್ಷ ಆಗುವ ಅವಕಾಶ ಸಿಕ್ಕರೆ ಬಿಡುವರಾ?! ಗ್ರಾಪಂಗಳ ಚಹರೆ ಬದಲಾಗುವ ಸೂಚನೆಗಳಂತೂ ಗೋಚರಿಸಲಾರಂಭಿಸಿದೆ.


ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಬಿರುಕು: ಯತ್ನಾಳ್ ವಿರುದ್ಧ ರಾಷ್ಟ್ರ ನಾಯಕರಿಗೆ ದೂರು ನೀಡಿದ ಸಿಎಂ ಬೆಂಬಲಿಗರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...