Homeಮುಖಪುಟಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ

ಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ

ಸ್ವತಃ ರಾಹುಲ್‌ಗಾಂಧಿ ಜನಿವಾರ ಹಾಕುವುದು, ಆಮ್ ಆದ್ಮಿ ಪಕ್ಷ ಮೃದು ಹಿಂದುತ್ವ ಪಾಲಿಸುವುದು ನೋಡಿದರೆ ಗೊತ್ತಾಗುತ್ತದೆ ಈ ಬಲಬಿಡಂಗಿತನ ಇರುವುದೂ ವಾಸ್ತವ ಎಂದು.

- Advertisement -
- Advertisement -

2015ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಬಿಟ್ಟರೆ ಬಿಹಾರದಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದಿರುವ ಪಕ್ಷಗಳೆಂದರೆ ಎಡಪಕ್ಷಗಳು. ಸಿಪಿಐ (ಎಂಎಲ್) 12, ಸಿಪಿಐ 02 ಮತ್ತು ಸಿಪಿಐ (ಎಂ) 02. ಮೂರೂ ಪಕ್ಷಗಳೂ ಇತ್ತೀಚಿನ ಚುನಾವಣೆಗಳಲ್ಲೇ ಅತೀ ಹೆಚ್ಚು ಸೀಟುಗಳನ್ನು ಗೆದ್ದಿವೆ. 2010ರಲ್ಲಿ ಸಿಪಿಐ ಒಂದು ಸೀಟು ಗೆದ್ದಿತ್ತು. 2015ರಲ್ಲಿ ಸಿಪಿಐ(ಎಂಎಲ್) 3 ಸೀಟುಗಳನ್ನು ಗೆದ್ದಿತ್ತು. ಅದಕ್ಕೂ ಹಿಂದೆ ಯಾವಾಗ ಇಷ್ಟು ಸೀಟುಗಳನ್ನು ಗೆದ್ದಿರಬಹುದೆಂದು ಹುಡುಕಲು ಬಹಳ ಅಧ್ಯಯನ ಮಾಡಬೇಕು. ಹಾಗೆ ನೋಡಿದರೆ ಅಖಿಲ ಭಾರತ ಮಟ್ಟದಲ್ಲೂ 2004ರ ಲೋಕಸಭಾ ಚುನಾವಣೆಯು ಕಳೆದ ಕೆಲವು ದಶಕಗಳಲ್ಲೇ ಎಡಪಕ್ಷಗಳು ಅತೀ ದೊಡ್ಡ ಸಾಧನೆ ಮಾಡಿದ (59 ಲೋಕಸಭಾ ಸ್ಥಾನಗಳು) ಸಂದರ್ಭವಾಗಿತ್ತು. ಬಿಹಾರದಲ್ಲಿ ಬಿಜೆಪಿಯೇ ಅತೀ ದೊಡ್ಡ ಪಕ್ಷವಾಗಿ, ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬರಬಹುದಾದರೂ ಎಡ ಪಕ್ಷಗಳ ಈ ಸಾಧನೆಗೆ ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಕಾಲಾವಕಾಶ ಬೇಕು.

ಅಮೆರಿಕದಲ್ಲಾದಂತೆ ಜನಸಾಮಾನ್ಯರಲ್ಲಿ ದೊಡ್ಡ ಮಟ್ಟದ ಧ್ರುವೀಕರಣ ಉಂಟಾಗಿ ಸೆಂಟ್ರಿಸ್ಟ್ ಪಕ್ಷಗಳಿಗಿಂತ ಎರಡು ತುದಿಗಳಲ್ಲಿರುವ ಪಕ್ಷಗಳಿಗೆ ಹೆಚ್ಚು ಮತ ಹಾಕುತ್ತಿದ್ದಾರೆಯೇ? ಏಕೆಂದರೆ ಬಿಹಾರದಲ್ಲಿ ಅತೀ ಹಳೆಯ ಸಿಪಿಐ ಅಥವಾ ಸಿಪಿಎಂಗಿಂತ ಹೆಚ್ಚಿನ ಸ್ಥಾನ ಪಡೆಯುತ್ತಿರುವುದು ನಕ್ಸಲೈಟ್ ಧಾರೆಯ ಸಿಪಿಐ(ಎಂಎಲ್). ಈ ರೀತಿಯ ಮಾತುಗಳನ್ನು ಕೇಳಿದರೆ ಎಡಪಕ್ಷಗಳು ಸಿಟ್ಟಿಗೇಳುವುದು ಖಚಿತ. ಏಕೆಂದರೆ ಅಮೆರಿಕಾದಲ್ಲಿ ಧ್ರುವೀಕರಣ ಉಂಟಾಗಿರುವುದು ಅತೀ ಬಲಪಂಥೀಯ ಟ್ರಂಪ್ ಮತ್ತು ಬಲಪಂಥೀಯ ಜೋ ಬೈಡೆನ್ ಮಧ್ಯೆ ಮಾತ್ರ ಎಂಬುದು ಎಲ್ಲಾ ಎಡಪಂಥೀಯರ ವಿಶ್ಲೇಷಣೆ. ಹಾಗಾಗಿಯೇ ಎಡ-ಮಧ್ಯದ ಬರ್ನಿ ಸ್ಯಾಂಡರ್ಸ್ರನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿಯೇ ಹಿಂದಕ್ಕೆ ಸರಿಯಲು ಸೂಚಿಸಲಾಯಿತು. ಅದು ಬಹುಮಟ್ಟಿಗೆ ನಿಜವಾದರೂ, ಬ್ಲಾಕ್ ಲೈವ್ಸ್ ಮ್ಯಾಟರ್ ಚಳವಳಿ, ದುಡಿಯುವ ಜನರ ಚಳವಳಿಯಲ್ಲೂ ಪಾಲ್ಗೊಳ್ಳುವ ಮತ್ತು ಆಕ್ಯುಪೈ ಚಳವಳಿಯ ಘೋಷಣೆಯಾದ 1% ವರ್ಸಸ್ 99% ಮಾತನಾಡುವ ಕಮಲಾ ಹ್ಯಾರಿಸ್‌ರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಳ್ಳಲೂ ಕಾರಣವಿತ್ತು. ಅತೀ ಕೆಡುಕನ್ನು ವಿರೋಧಿಸುವ ಸಂದರ್ಭದಲ್ಲಿ ವಿವಿಧ ರಂಗಿನ, ಶ್ರೇಣಿಯ ಜನರು ಒಂದೆಡೆಗೆ ಸರಿಯುತ್ತಾರೆ. ಅಂತಹ ಧ್ರುವೀಕರಣವು ಏರ್ಪಡುತ್ತಿರುವುದು ವಾಸ್ತವ. ದೇಶದ ದೊಡ್ಡ ಬಂಡವಾಳಸ್ಥರ ಬೆಂಬಲವನ್ನು ದೀರ್ಘಾವಧಿಗೆ ಪಡೆದಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ನೇರವಾಗಿ ಅಂಬಾನಿ-ಅದಾನಿಗಳ ಹೆಸರನ್ನು ಹೇಳಿ ಟೀಕೆ ಮಾಡುವ ಮಟ್ಟಿಗೆ ಎಡ ಪರಿಭಾಷೆ ಬಳಸುತ್ತಿರುವುದಕ್ಕೆ ಕಾರಣವಿದೆ.


ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

ತೀವ್ರ ಬಲಪಂಥೀಯರನ್ನು ಎದುರಿಸುವಾಗ ಸೆಂಟ್ರಿಸ್ಟ್ ಪಕ್ಷಗಳೂ ಎಡ-ಮಧ್ಯದ ಅಥವಾ ಒಮ್ಮೊಮ್ಮೆ ಎಡ ಎಂದು ತೋರಬಹುದಾದ ಭಾಷೆಯನ್ನು ಬಳಸುತ್ತಾರೆ, ರಾಹುಲ್ ಗಾಂಧಿ ಅದಕ್ಕೊಂದು ನಿದರ್ಶನ. ತಾವು ತೀರಾ ಎಡಕ್ಕೆ ವಾಲಿಬಿಟ್ಟೆವೇನೋ ಎನಿಸಿದಾಗ ಬಲದ ಭಾಷೆ, ಆಚಾರಗಳಿಗೂ ವಾಲುತ್ತಾರೆ. ಸ್ವತಃ ರಾಹುಲ್‌ಗಾಂಧಿ ಜನಿವಾರ ಹಾಕುವುದು, ಆಮ್ ಆದ್ಮಿ ಪಕ್ಷ ಮೃದು ಹಿಂದುತ್ವ ಪಾಲಿಸುವುದು ಮತ್ತು ಇವೆರಡೂ ಪಕ್ಷಗಳು ಮುಸ್ಲಿಂ ಮತದಾರರು ಇಲ್ಲವೇ ಇಲ್ಲವೇನೋ ಎಂಬಂತೆ ವರ್ತಿಸುವುದನ್ನು ನೋಡಿದರೆ ಅದು ಗೊತ್ತಾಗುತ್ತದೆ. ಈ ಬಲಬಿಡಂಗಿತನ ಇರುವುದೂ ವಾಸ್ತವವೇ.

ಇಂತಹ ವಾಲಾಟಗಳು ನಡೆಯುತ್ತಿರುವ ಹೊತ್ತಿನಲ್ಲೇ ಎಡ ಪಕ್ಷಗಳಿಗೂ ಬೆಂಬಲ ಹೆಚ್ಚಾಗುತ್ತದೆ. ತೀವ್ರ ಬಲಪಂಥವು ಯಾವಾಗ ಜನರನ್ನು ಯಾಮಾರಿಸಲು ಸಾಧ್ಯವಾಗುವುದಿಲ್ಲವೋ ಅಥವಾ ಜನರಿಗೆ ತಮ್ಮ ನಿತ್ಯದ ಬದುಕಿನ ಸಮಸ್ಯೆಗಳೇ ದೊಡ್ಡ ಐಡೆಂಟಿಟಿಗಿಂತ ಮುಖ್ಯ ಎನಿಸುತ್ತದೋ ಆಗ ಅವರು ನಿತ್ಯದ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವವರ ಕಡೆಗೇ ವಾಲುತ್ತಾರೆ. ದೇಶವು ಸಂಕಷ್ಟದಲ್ಲಿದ್ದಾಗ ವಾಜಪೇಯಿ ನೇತೃತ್ವದ ಬಿಜೆಪಿಯು ‘ಭಾರತ ಪ್ರಕಾಶಿಸುತ್ತಿದೆ’ ಎಂದು ಆತ್ಮವಿಶ್ವಾಸದಿಂದ ಚುನಾವಣೆಗೆ ಹೋದಾಗ, ಜನರು ಅಷ್ಟು ಆತ್ಮವಿಶ್ವಾಸ ಹೊಂದಿರದಿದ್ದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಕೊಟ್ಟರು. ಆಗಲೇ ಎಡ ಪಕ್ಷಗಳೂ 50ಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿದ್ದು!

ಗಮನಿಸಬೇಕಾದ ಒಂದು ಸಂಗತಿಯೇನೆಂದರೆ, ಜೋ ಬೈಡೆನ್-ಕಮಲಾರು ಒಂದಾಗಿ ನಿಂತಾಗ ಆದಂತೆ, ಎಡಪಕ್ಷಗಳು-ಆರ್‌ಜೆಡಿ-ಕಾಂಗ್ರೆಸ್ ಘಟಬಂಧನದಲ್ಲಿ ಎಡವು ಹೆಚ್ಚಿನ ಸ್ಥಾನಗಳನ್ನು ಪಡೆಯಲು ಶಕ್ತವಾಗಿದೆ. ಅಂದರೆ ಎಡವು ಇಲ್ಲಿ ಸ್ವತಂತ್ರವಾಗಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಲಪಂಥೀಯ (ಸೆಕ್ಯುಲರ್ ಬಲಪಂಥೀಯ ಎಂದು ಬೇಕಾದರೆ ಸೀಮಿತ ಅರ್ಥದಲ್ಲಿ ಹೇಳಬಹುದು) ಟಿಎಂಸಿಯನ್ನು ಎದುರಿಸಲು ಪ.ಬಂಗಾಳದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಾಗ ಸಿಪಿಎಂ ಪೆಟ್ಟು ತಿಂದಿದ್ದೇನೋ ನಿಜ (ಆಗ ಕಾಂಗ್ರೆಸ್ ಸಿಪಿಎಂಗಿಂತ ಹೆಚ್ಚಿನ ಸೀಟುಗಳನ್ನು ಗೆದ್ದುಕೊಂಡಿತ್ತು); ಆದರೆ ಬಿಹಾರದಲ್ಲಿ ಆರ್‌ಜೆಡಿ ಅಥವಾ ಕಾಂಗ್ರೆಸ್‌ನ ಬೆಂಬಲವಿಲ್ಲದೇ ತನ್ನಂತೆ ತಾನೇ ಎಡಪಕ್ಷಗಳು ಸ್ಪರ್ಧಿಸಿದ್ದರೆ ಈಗ ಗೆದ್ದಿರುವುದರಲ್ಲಿ ಕಾಲು ಭಾಗವನ್ನೂ ಗೆಲ್ಲುತ್ತಿರಲಿಲ್ಲ ಎಂಬುದೂ ನಿಜ. ಎಡಪಕ್ಷಗಳ ಬೆಂಬಲವೂ ಘಟಬಂಧನಕ್ಕೆ ಶಕ್ತಿ ತಂದುಕೊಟ್ಟಿರುತ್ತದೆ ಎಂಬುದರಲ್ಲೂ ಸಂಶಯವಿಲ್ಲ. ಈ ಶಕ್ತಿಯು ಕೇಡರ್, ಜನಸಮೂಹದಲ್ಲಿರುವ ಸಂಘಟನಾ ಬಲವೇ ಆಗಿರಬೇಕಿಲ್ಲ. ಜನಸಾಮಾನ್ಯರಿಗೆ ಅಪ್ಯಾಯವೆನಿಸುವ ಕಥನದ ಬಲವೂ ಆಗಿರಬಹುದು.

ಅಂದರೆ ಬಿಜೆಪಿಗೆದುರಾಗಿ ಇತರ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಕೇವಲ ಚುನಾವಣಾ ರಾಜಕಾರಣದ ಗೆಲುವು-ಸೋಲುಗಳ ಲೆಕ್ಕಾಚಾರದ ಕಾರಣಕ್ಕೆ ಮಾತ್ರವಲ್ಲಾ; ಧ್ರುವೀಕರಣವು ಏರ್ಪಟ್ಟಾಗ ಜನರ ಪರವಾದ ನೆರೇಟಿವ್‌ಅನ್ನು ಸೆಂಟ್ರಿಸ್ಟ್ ಶಕ್ತಿಗಳೇ ಪ್ರಧಾನವಾಗಿ ಮುಂದಕ್ಕೆ ಒಯ್ಯುವ ಸಾಧ್ಯತೆ ಇದ್ದಾಗ, ಎಡಚಳವಳಿಯು ಇನ್ನೂ ಬಲವಾಗಿರದಿದ್ದಾಗ ‘ಘಟಬಂಧನ’ದೊಳಗೆ ಇರುವುದೇ ಎಡಶಕ್ತಿಗಳು ಪ್ರಸ್ತುತವಾಗುಳಿಯುವುದಕ್ಕೆ ಇರುವ ಅವಕಾಶವಾಗಿರುತ್ತದೆ. ಇಲ್ಲದಿದ್ದರೆ ಅದರ ಲಾಭವನ್ನು ಸೆಂಟ್ರಿಸ್ಟ್ ಶಕ್ತಿಗಳು ಪಡೆದುಕೊಳ್ಳಬಹುದು; ಇಲ್ಲವೇ ಅದೂ ದುರ್ಬಲವಾಗಿ ಬಲಪಂಥೀಯ ಶಕ್ತಿಗಳೇ ಗೆಲ್ಲಬಹುದು. ಈ ಸದ್ಯ ಎಡ-ಆರ್‌ಜೆಡಿ ಮೈತ್ರಿಕೂಟದಿಂದ ಪರಸ್ಪರ ಲಾಭವೇ ಆಗಿರುವುದು ಕಾಣುತ್ತದೆ.

  • ನೀಲಗಾರ

ಇದನ್ನೂ ಓದಿ: ಉಪಚುನಾವಣೆ: ಗಾಳಿ ಬೀಸಿದತ್ತ ಹೋದ ಅಲೆಯಷ್ಟೇ ಅಲ್ಲ, ಆಡಳಿತದ ವಿರುದ್ಧದ ಭಾವನೆ ಘನೀಭವಿಸಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...