Homeಮುಖಪುಟಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ

ಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ

ಸ್ವತಃ ರಾಹುಲ್‌ಗಾಂಧಿ ಜನಿವಾರ ಹಾಕುವುದು, ಆಮ್ ಆದ್ಮಿ ಪಕ್ಷ ಮೃದು ಹಿಂದುತ್ವ ಪಾಲಿಸುವುದು ನೋಡಿದರೆ ಗೊತ್ತಾಗುತ್ತದೆ ಈ ಬಲಬಿಡಂಗಿತನ ಇರುವುದೂ ವಾಸ್ತವ ಎಂದು.

- Advertisement -
- Advertisement -

2015ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಬಿಟ್ಟರೆ ಬಿಹಾರದಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದಿರುವ ಪಕ್ಷಗಳೆಂದರೆ ಎಡಪಕ್ಷಗಳು. ಸಿಪಿಐ (ಎಂಎಲ್) 12, ಸಿಪಿಐ 02 ಮತ್ತು ಸಿಪಿಐ (ಎಂ) 02. ಮೂರೂ ಪಕ್ಷಗಳೂ ಇತ್ತೀಚಿನ ಚುನಾವಣೆಗಳಲ್ಲೇ ಅತೀ ಹೆಚ್ಚು ಸೀಟುಗಳನ್ನು ಗೆದ್ದಿವೆ. 2010ರಲ್ಲಿ ಸಿಪಿಐ ಒಂದು ಸೀಟು ಗೆದ್ದಿತ್ತು. 2015ರಲ್ಲಿ ಸಿಪಿಐ(ಎಂಎಲ್) 3 ಸೀಟುಗಳನ್ನು ಗೆದ್ದಿತ್ತು. ಅದಕ್ಕೂ ಹಿಂದೆ ಯಾವಾಗ ಇಷ್ಟು ಸೀಟುಗಳನ್ನು ಗೆದ್ದಿರಬಹುದೆಂದು ಹುಡುಕಲು ಬಹಳ ಅಧ್ಯಯನ ಮಾಡಬೇಕು. ಹಾಗೆ ನೋಡಿದರೆ ಅಖಿಲ ಭಾರತ ಮಟ್ಟದಲ್ಲೂ 2004ರ ಲೋಕಸಭಾ ಚುನಾವಣೆಯು ಕಳೆದ ಕೆಲವು ದಶಕಗಳಲ್ಲೇ ಎಡಪಕ್ಷಗಳು ಅತೀ ದೊಡ್ಡ ಸಾಧನೆ ಮಾಡಿದ (59 ಲೋಕಸಭಾ ಸ್ಥಾನಗಳು) ಸಂದರ್ಭವಾಗಿತ್ತು. ಬಿಹಾರದಲ್ಲಿ ಬಿಜೆಪಿಯೇ ಅತೀ ದೊಡ್ಡ ಪಕ್ಷವಾಗಿ, ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬರಬಹುದಾದರೂ ಎಡ ಪಕ್ಷಗಳ ಈ ಸಾಧನೆಗೆ ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಕಾಲಾವಕಾಶ ಬೇಕು.

ಅಮೆರಿಕದಲ್ಲಾದಂತೆ ಜನಸಾಮಾನ್ಯರಲ್ಲಿ ದೊಡ್ಡ ಮಟ್ಟದ ಧ್ರುವೀಕರಣ ಉಂಟಾಗಿ ಸೆಂಟ್ರಿಸ್ಟ್ ಪಕ್ಷಗಳಿಗಿಂತ ಎರಡು ತುದಿಗಳಲ್ಲಿರುವ ಪಕ್ಷಗಳಿಗೆ ಹೆಚ್ಚು ಮತ ಹಾಕುತ್ತಿದ್ದಾರೆಯೇ? ಏಕೆಂದರೆ ಬಿಹಾರದಲ್ಲಿ ಅತೀ ಹಳೆಯ ಸಿಪಿಐ ಅಥವಾ ಸಿಪಿಎಂಗಿಂತ ಹೆಚ್ಚಿನ ಸ್ಥಾನ ಪಡೆಯುತ್ತಿರುವುದು ನಕ್ಸಲೈಟ್ ಧಾರೆಯ ಸಿಪಿಐ(ಎಂಎಲ್). ಈ ರೀತಿಯ ಮಾತುಗಳನ್ನು ಕೇಳಿದರೆ ಎಡಪಕ್ಷಗಳು ಸಿಟ್ಟಿಗೇಳುವುದು ಖಚಿತ. ಏಕೆಂದರೆ ಅಮೆರಿಕಾದಲ್ಲಿ ಧ್ರುವೀಕರಣ ಉಂಟಾಗಿರುವುದು ಅತೀ ಬಲಪಂಥೀಯ ಟ್ರಂಪ್ ಮತ್ತು ಬಲಪಂಥೀಯ ಜೋ ಬೈಡೆನ್ ಮಧ್ಯೆ ಮಾತ್ರ ಎಂಬುದು ಎಲ್ಲಾ ಎಡಪಂಥೀಯರ ವಿಶ್ಲೇಷಣೆ. ಹಾಗಾಗಿಯೇ ಎಡ-ಮಧ್ಯದ ಬರ್ನಿ ಸ್ಯಾಂಡರ್ಸ್ರನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿಯೇ ಹಿಂದಕ್ಕೆ ಸರಿಯಲು ಸೂಚಿಸಲಾಯಿತು. ಅದು ಬಹುಮಟ್ಟಿಗೆ ನಿಜವಾದರೂ, ಬ್ಲಾಕ್ ಲೈವ್ಸ್ ಮ್ಯಾಟರ್ ಚಳವಳಿ, ದುಡಿಯುವ ಜನರ ಚಳವಳಿಯಲ್ಲೂ ಪಾಲ್ಗೊಳ್ಳುವ ಮತ್ತು ಆಕ್ಯುಪೈ ಚಳವಳಿಯ ಘೋಷಣೆಯಾದ 1% ವರ್ಸಸ್ 99% ಮಾತನಾಡುವ ಕಮಲಾ ಹ್ಯಾರಿಸ್‌ರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಳ್ಳಲೂ ಕಾರಣವಿತ್ತು. ಅತೀ ಕೆಡುಕನ್ನು ವಿರೋಧಿಸುವ ಸಂದರ್ಭದಲ್ಲಿ ವಿವಿಧ ರಂಗಿನ, ಶ್ರೇಣಿಯ ಜನರು ಒಂದೆಡೆಗೆ ಸರಿಯುತ್ತಾರೆ. ಅಂತಹ ಧ್ರುವೀಕರಣವು ಏರ್ಪಡುತ್ತಿರುವುದು ವಾಸ್ತವ. ದೇಶದ ದೊಡ್ಡ ಬಂಡವಾಳಸ್ಥರ ಬೆಂಬಲವನ್ನು ದೀರ್ಘಾವಧಿಗೆ ಪಡೆದಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ನೇರವಾಗಿ ಅಂಬಾನಿ-ಅದಾನಿಗಳ ಹೆಸರನ್ನು ಹೇಳಿ ಟೀಕೆ ಮಾಡುವ ಮಟ್ಟಿಗೆ ಎಡ ಪರಿಭಾಷೆ ಬಳಸುತ್ತಿರುವುದಕ್ಕೆ ಕಾರಣವಿದೆ.


ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

ತೀವ್ರ ಬಲಪಂಥೀಯರನ್ನು ಎದುರಿಸುವಾಗ ಸೆಂಟ್ರಿಸ್ಟ್ ಪಕ್ಷಗಳೂ ಎಡ-ಮಧ್ಯದ ಅಥವಾ ಒಮ್ಮೊಮ್ಮೆ ಎಡ ಎಂದು ತೋರಬಹುದಾದ ಭಾಷೆಯನ್ನು ಬಳಸುತ್ತಾರೆ, ರಾಹುಲ್ ಗಾಂಧಿ ಅದಕ್ಕೊಂದು ನಿದರ್ಶನ. ತಾವು ತೀರಾ ಎಡಕ್ಕೆ ವಾಲಿಬಿಟ್ಟೆವೇನೋ ಎನಿಸಿದಾಗ ಬಲದ ಭಾಷೆ, ಆಚಾರಗಳಿಗೂ ವಾಲುತ್ತಾರೆ. ಸ್ವತಃ ರಾಹುಲ್‌ಗಾಂಧಿ ಜನಿವಾರ ಹಾಕುವುದು, ಆಮ್ ಆದ್ಮಿ ಪಕ್ಷ ಮೃದು ಹಿಂದುತ್ವ ಪಾಲಿಸುವುದು ಮತ್ತು ಇವೆರಡೂ ಪಕ್ಷಗಳು ಮುಸ್ಲಿಂ ಮತದಾರರು ಇಲ್ಲವೇ ಇಲ್ಲವೇನೋ ಎಂಬಂತೆ ವರ್ತಿಸುವುದನ್ನು ನೋಡಿದರೆ ಅದು ಗೊತ್ತಾಗುತ್ತದೆ. ಈ ಬಲಬಿಡಂಗಿತನ ಇರುವುದೂ ವಾಸ್ತವವೇ.

ಇಂತಹ ವಾಲಾಟಗಳು ನಡೆಯುತ್ತಿರುವ ಹೊತ್ತಿನಲ್ಲೇ ಎಡ ಪಕ್ಷಗಳಿಗೂ ಬೆಂಬಲ ಹೆಚ್ಚಾಗುತ್ತದೆ. ತೀವ್ರ ಬಲಪಂಥವು ಯಾವಾಗ ಜನರನ್ನು ಯಾಮಾರಿಸಲು ಸಾಧ್ಯವಾಗುವುದಿಲ್ಲವೋ ಅಥವಾ ಜನರಿಗೆ ತಮ್ಮ ನಿತ್ಯದ ಬದುಕಿನ ಸಮಸ್ಯೆಗಳೇ ದೊಡ್ಡ ಐಡೆಂಟಿಟಿಗಿಂತ ಮುಖ್ಯ ಎನಿಸುತ್ತದೋ ಆಗ ಅವರು ನಿತ್ಯದ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವವರ ಕಡೆಗೇ ವಾಲುತ್ತಾರೆ. ದೇಶವು ಸಂಕಷ್ಟದಲ್ಲಿದ್ದಾಗ ವಾಜಪೇಯಿ ನೇತೃತ್ವದ ಬಿಜೆಪಿಯು ‘ಭಾರತ ಪ್ರಕಾಶಿಸುತ್ತಿದೆ’ ಎಂದು ಆತ್ಮವಿಶ್ವಾಸದಿಂದ ಚುನಾವಣೆಗೆ ಹೋದಾಗ, ಜನರು ಅಷ್ಟು ಆತ್ಮವಿಶ್ವಾಸ ಹೊಂದಿರದಿದ್ದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಕೊಟ್ಟರು. ಆಗಲೇ ಎಡ ಪಕ್ಷಗಳೂ 50ಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿದ್ದು!

ಗಮನಿಸಬೇಕಾದ ಒಂದು ಸಂಗತಿಯೇನೆಂದರೆ, ಜೋ ಬೈಡೆನ್-ಕಮಲಾರು ಒಂದಾಗಿ ನಿಂತಾಗ ಆದಂತೆ, ಎಡಪಕ್ಷಗಳು-ಆರ್‌ಜೆಡಿ-ಕಾಂಗ್ರೆಸ್ ಘಟಬಂಧನದಲ್ಲಿ ಎಡವು ಹೆಚ್ಚಿನ ಸ್ಥಾನಗಳನ್ನು ಪಡೆಯಲು ಶಕ್ತವಾಗಿದೆ. ಅಂದರೆ ಎಡವು ಇಲ್ಲಿ ಸ್ವತಂತ್ರವಾಗಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಲಪಂಥೀಯ (ಸೆಕ್ಯುಲರ್ ಬಲಪಂಥೀಯ ಎಂದು ಬೇಕಾದರೆ ಸೀಮಿತ ಅರ್ಥದಲ್ಲಿ ಹೇಳಬಹುದು) ಟಿಎಂಸಿಯನ್ನು ಎದುರಿಸಲು ಪ.ಬಂಗಾಳದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಾಗ ಸಿಪಿಎಂ ಪೆಟ್ಟು ತಿಂದಿದ್ದೇನೋ ನಿಜ (ಆಗ ಕಾಂಗ್ರೆಸ್ ಸಿಪಿಎಂಗಿಂತ ಹೆಚ್ಚಿನ ಸೀಟುಗಳನ್ನು ಗೆದ್ದುಕೊಂಡಿತ್ತು); ಆದರೆ ಬಿಹಾರದಲ್ಲಿ ಆರ್‌ಜೆಡಿ ಅಥವಾ ಕಾಂಗ್ರೆಸ್‌ನ ಬೆಂಬಲವಿಲ್ಲದೇ ತನ್ನಂತೆ ತಾನೇ ಎಡಪಕ್ಷಗಳು ಸ್ಪರ್ಧಿಸಿದ್ದರೆ ಈಗ ಗೆದ್ದಿರುವುದರಲ್ಲಿ ಕಾಲು ಭಾಗವನ್ನೂ ಗೆಲ್ಲುತ್ತಿರಲಿಲ್ಲ ಎಂಬುದೂ ನಿಜ. ಎಡಪಕ್ಷಗಳ ಬೆಂಬಲವೂ ಘಟಬಂಧನಕ್ಕೆ ಶಕ್ತಿ ತಂದುಕೊಟ್ಟಿರುತ್ತದೆ ಎಂಬುದರಲ್ಲೂ ಸಂಶಯವಿಲ್ಲ. ಈ ಶಕ್ತಿಯು ಕೇಡರ್, ಜನಸಮೂಹದಲ್ಲಿರುವ ಸಂಘಟನಾ ಬಲವೇ ಆಗಿರಬೇಕಿಲ್ಲ. ಜನಸಾಮಾನ್ಯರಿಗೆ ಅಪ್ಯಾಯವೆನಿಸುವ ಕಥನದ ಬಲವೂ ಆಗಿರಬಹುದು.

ಅಂದರೆ ಬಿಜೆಪಿಗೆದುರಾಗಿ ಇತರ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಕೇವಲ ಚುನಾವಣಾ ರಾಜಕಾರಣದ ಗೆಲುವು-ಸೋಲುಗಳ ಲೆಕ್ಕಾಚಾರದ ಕಾರಣಕ್ಕೆ ಮಾತ್ರವಲ್ಲಾ; ಧ್ರುವೀಕರಣವು ಏರ್ಪಟ್ಟಾಗ ಜನರ ಪರವಾದ ನೆರೇಟಿವ್‌ಅನ್ನು ಸೆಂಟ್ರಿಸ್ಟ್ ಶಕ್ತಿಗಳೇ ಪ್ರಧಾನವಾಗಿ ಮುಂದಕ್ಕೆ ಒಯ್ಯುವ ಸಾಧ್ಯತೆ ಇದ್ದಾಗ, ಎಡಚಳವಳಿಯು ಇನ್ನೂ ಬಲವಾಗಿರದಿದ್ದಾಗ ‘ಘಟಬಂಧನ’ದೊಳಗೆ ಇರುವುದೇ ಎಡಶಕ್ತಿಗಳು ಪ್ರಸ್ತುತವಾಗುಳಿಯುವುದಕ್ಕೆ ಇರುವ ಅವಕಾಶವಾಗಿರುತ್ತದೆ. ಇಲ್ಲದಿದ್ದರೆ ಅದರ ಲಾಭವನ್ನು ಸೆಂಟ್ರಿಸ್ಟ್ ಶಕ್ತಿಗಳು ಪಡೆದುಕೊಳ್ಳಬಹುದು; ಇಲ್ಲವೇ ಅದೂ ದುರ್ಬಲವಾಗಿ ಬಲಪಂಥೀಯ ಶಕ್ತಿಗಳೇ ಗೆಲ್ಲಬಹುದು. ಈ ಸದ್ಯ ಎಡ-ಆರ್‌ಜೆಡಿ ಮೈತ್ರಿಕೂಟದಿಂದ ಪರಸ್ಪರ ಲಾಭವೇ ಆಗಿರುವುದು ಕಾಣುತ್ತದೆ.

  • ನೀಲಗಾರ

ಇದನ್ನೂ ಓದಿ: ಉಪಚುನಾವಣೆ: ಗಾಳಿ ಬೀಸಿದತ್ತ ಹೋದ ಅಲೆಯಷ್ಟೇ ಅಲ್ಲ, ಆಡಳಿತದ ವಿರುದ್ಧದ ಭಾವನೆ ಘನೀಭವಿಸಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...