Homeಮುಖಪುಟಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ

ಬಿಹಾರದಲ್ಲಿ ಎಡಪಕ್ಷಗಳ ಗೆಲುವು: ಒಂದು ವಿಶ್ಲೇಷಣೆ

ಸ್ವತಃ ರಾಹುಲ್‌ಗಾಂಧಿ ಜನಿವಾರ ಹಾಕುವುದು, ಆಮ್ ಆದ್ಮಿ ಪಕ್ಷ ಮೃದು ಹಿಂದುತ್ವ ಪಾಲಿಸುವುದು ನೋಡಿದರೆ ಗೊತ್ತಾಗುತ್ತದೆ ಈ ಬಲಬಿಡಂಗಿತನ ಇರುವುದೂ ವಾಸ್ತವ ಎಂದು.

- Advertisement -
- Advertisement -

2015ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಬಿಟ್ಟರೆ ಬಿಹಾರದಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದಿರುವ ಪಕ್ಷಗಳೆಂದರೆ ಎಡಪಕ್ಷಗಳು. ಸಿಪಿಐ (ಎಂಎಲ್) 12, ಸಿಪಿಐ 02 ಮತ್ತು ಸಿಪಿಐ (ಎಂ) 02. ಮೂರೂ ಪಕ್ಷಗಳೂ ಇತ್ತೀಚಿನ ಚುನಾವಣೆಗಳಲ್ಲೇ ಅತೀ ಹೆಚ್ಚು ಸೀಟುಗಳನ್ನು ಗೆದ್ದಿವೆ. 2010ರಲ್ಲಿ ಸಿಪಿಐ ಒಂದು ಸೀಟು ಗೆದ್ದಿತ್ತು. 2015ರಲ್ಲಿ ಸಿಪಿಐ(ಎಂಎಲ್) 3 ಸೀಟುಗಳನ್ನು ಗೆದ್ದಿತ್ತು. ಅದಕ್ಕೂ ಹಿಂದೆ ಯಾವಾಗ ಇಷ್ಟು ಸೀಟುಗಳನ್ನು ಗೆದ್ದಿರಬಹುದೆಂದು ಹುಡುಕಲು ಬಹಳ ಅಧ್ಯಯನ ಮಾಡಬೇಕು. ಹಾಗೆ ನೋಡಿದರೆ ಅಖಿಲ ಭಾರತ ಮಟ್ಟದಲ್ಲೂ 2004ರ ಲೋಕಸಭಾ ಚುನಾವಣೆಯು ಕಳೆದ ಕೆಲವು ದಶಕಗಳಲ್ಲೇ ಎಡಪಕ್ಷಗಳು ಅತೀ ದೊಡ್ಡ ಸಾಧನೆ ಮಾಡಿದ (59 ಲೋಕಸಭಾ ಸ್ಥಾನಗಳು) ಸಂದರ್ಭವಾಗಿತ್ತು. ಬಿಹಾರದಲ್ಲಿ ಬಿಜೆಪಿಯೇ ಅತೀ ದೊಡ್ಡ ಪಕ್ಷವಾಗಿ, ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬರಬಹುದಾದರೂ ಎಡ ಪಕ್ಷಗಳ ಈ ಸಾಧನೆಗೆ ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಕಾಲಾವಕಾಶ ಬೇಕು.

ಅಮೆರಿಕದಲ್ಲಾದಂತೆ ಜನಸಾಮಾನ್ಯರಲ್ಲಿ ದೊಡ್ಡ ಮಟ್ಟದ ಧ್ರುವೀಕರಣ ಉಂಟಾಗಿ ಸೆಂಟ್ರಿಸ್ಟ್ ಪಕ್ಷಗಳಿಗಿಂತ ಎರಡು ತುದಿಗಳಲ್ಲಿರುವ ಪಕ್ಷಗಳಿಗೆ ಹೆಚ್ಚು ಮತ ಹಾಕುತ್ತಿದ್ದಾರೆಯೇ? ಏಕೆಂದರೆ ಬಿಹಾರದಲ್ಲಿ ಅತೀ ಹಳೆಯ ಸಿಪಿಐ ಅಥವಾ ಸಿಪಿಎಂಗಿಂತ ಹೆಚ್ಚಿನ ಸ್ಥಾನ ಪಡೆಯುತ್ತಿರುವುದು ನಕ್ಸಲೈಟ್ ಧಾರೆಯ ಸಿಪಿಐ(ಎಂಎಲ್). ಈ ರೀತಿಯ ಮಾತುಗಳನ್ನು ಕೇಳಿದರೆ ಎಡಪಕ್ಷಗಳು ಸಿಟ್ಟಿಗೇಳುವುದು ಖಚಿತ. ಏಕೆಂದರೆ ಅಮೆರಿಕಾದಲ್ಲಿ ಧ್ರುವೀಕರಣ ಉಂಟಾಗಿರುವುದು ಅತೀ ಬಲಪಂಥೀಯ ಟ್ರಂಪ್ ಮತ್ತು ಬಲಪಂಥೀಯ ಜೋ ಬೈಡೆನ್ ಮಧ್ಯೆ ಮಾತ್ರ ಎಂಬುದು ಎಲ್ಲಾ ಎಡಪಂಥೀಯರ ವಿಶ್ಲೇಷಣೆ. ಹಾಗಾಗಿಯೇ ಎಡ-ಮಧ್ಯದ ಬರ್ನಿ ಸ್ಯಾಂಡರ್ಸ್ರನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿಯೇ ಹಿಂದಕ್ಕೆ ಸರಿಯಲು ಸೂಚಿಸಲಾಯಿತು. ಅದು ಬಹುಮಟ್ಟಿಗೆ ನಿಜವಾದರೂ, ಬ್ಲಾಕ್ ಲೈವ್ಸ್ ಮ್ಯಾಟರ್ ಚಳವಳಿ, ದುಡಿಯುವ ಜನರ ಚಳವಳಿಯಲ್ಲೂ ಪಾಲ್ಗೊಳ್ಳುವ ಮತ್ತು ಆಕ್ಯುಪೈ ಚಳವಳಿಯ ಘೋಷಣೆಯಾದ 1% ವರ್ಸಸ್ 99% ಮಾತನಾಡುವ ಕಮಲಾ ಹ್ಯಾರಿಸ್‌ರನ್ನು ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿಕೊಳ್ಳಲೂ ಕಾರಣವಿತ್ತು. ಅತೀ ಕೆಡುಕನ್ನು ವಿರೋಧಿಸುವ ಸಂದರ್ಭದಲ್ಲಿ ವಿವಿಧ ರಂಗಿನ, ಶ್ರೇಣಿಯ ಜನರು ಒಂದೆಡೆಗೆ ಸರಿಯುತ್ತಾರೆ. ಅಂತಹ ಧ್ರುವೀಕರಣವು ಏರ್ಪಡುತ್ತಿರುವುದು ವಾಸ್ತವ. ದೇಶದ ದೊಡ್ಡ ಬಂಡವಾಳಸ್ಥರ ಬೆಂಬಲವನ್ನು ದೀರ್ಘಾವಧಿಗೆ ಪಡೆದಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ನೇರವಾಗಿ ಅಂಬಾನಿ-ಅದಾನಿಗಳ ಹೆಸರನ್ನು ಹೇಳಿ ಟೀಕೆ ಮಾಡುವ ಮಟ್ಟಿಗೆ ಎಡ ಪರಿಭಾಷೆ ಬಳಸುತ್ತಿರುವುದಕ್ಕೆ ಕಾರಣವಿದೆ.


ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

ತೀವ್ರ ಬಲಪಂಥೀಯರನ್ನು ಎದುರಿಸುವಾಗ ಸೆಂಟ್ರಿಸ್ಟ್ ಪಕ್ಷಗಳೂ ಎಡ-ಮಧ್ಯದ ಅಥವಾ ಒಮ್ಮೊಮ್ಮೆ ಎಡ ಎಂದು ತೋರಬಹುದಾದ ಭಾಷೆಯನ್ನು ಬಳಸುತ್ತಾರೆ, ರಾಹುಲ್ ಗಾಂಧಿ ಅದಕ್ಕೊಂದು ನಿದರ್ಶನ. ತಾವು ತೀರಾ ಎಡಕ್ಕೆ ವಾಲಿಬಿಟ್ಟೆವೇನೋ ಎನಿಸಿದಾಗ ಬಲದ ಭಾಷೆ, ಆಚಾರಗಳಿಗೂ ವಾಲುತ್ತಾರೆ. ಸ್ವತಃ ರಾಹುಲ್‌ಗಾಂಧಿ ಜನಿವಾರ ಹಾಕುವುದು, ಆಮ್ ಆದ್ಮಿ ಪಕ್ಷ ಮೃದು ಹಿಂದುತ್ವ ಪಾಲಿಸುವುದು ಮತ್ತು ಇವೆರಡೂ ಪಕ್ಷಗಳು ಮುಸ್ಲಿಂ ಮತದಾರರು ಇಲ್ಲವೇ ಇಲ್ಲವೇನೋ ಎಂಬಂತೆ ವರ್ತಿಸುವುದನ್ನು ನೋಡಿದರೆ ಅದು ಗೊತ್ತಾಗುತ್ತದೆ. ಈ ಬಲಬಿಡಂಗಿತನ ಇರುವುದೂ ವಾಸ್ತವವೇ.

ಇಂತಹ ವಾಲಾಟಗಳು ನಡೆಯುತ್ತಿರುವ ಹೊತ್ತಿನಲ್ಲೇ ಎಡ ಪಕ್ಷಗಳಿಗೂ ಬೆಂಬಲ ಹೆಚ್ಚಾಗುತ್ತದೆ. ತೀವ್ರ ಬಲಪಂಥವು ಯಾವಾಗ ಜನರನ್ನು ಯಾಮಾರಿಸಲು ಸಾಧ್ಯವಾಗುವುದಿಲ್ಲವೋ ಅಥವಾ ಜನರಿಗೆ ತಮ್ಮ ನಿತ್ಯದ ಬದುಕಿನ ಸಮಸ್ಯೆಗಳೇ ದೊಡ್ಡ ಐಡೆಂಟಿಟಿಗಿಂತ ಮುಖ್ಯ ಎನಿಸುತ್ತದೋ ಆಗ ಅವರು ನಿತ್ಯದ ಬದುಕಿನ ಸಮಸ್ಯೆಗಳಿಗೆ ಸ್ಪಂದಿಸುವವರ ಕಡೆಗೇ ವಾಲುತ್ತಾರೆ. ದೇಶವು ಸಂಕಷ್ಟದಲ್ಲಿದ್ದಾಗ ವಾಜಪೇಯಿ ನೇತೃತ್ವದ ಬಿಜೆಪಿಯು ‘ಭಾರತ ಪ್ರಕಾಶಿಸುತ್ತಿದೆ’ ಎಂದು ಆತ್ಮವಿಶ್ವಾಸದಿಂದ ಚುನಾವಣೆಗೆ ಹೋದಾಗ, ಜನರು ಅಷ್ಟು ಆತ್ಮವಿಶ್ವಾಸ ಹೊಂದಿರದಿದ್ದ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಕೊಟ್ಟರು. ಆಗಲೇ ಎಡ ಪಕ್ಷಗಳೂ 50ಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಂಡಿದ್ದು!

ಗಮನಿಸಬೇಕಾದ ಒಂದು ಸಂಗತಿಯೇನೆಂದರೆ, ಜೋ ಬೈಡೆನ್-ಕಮಲಾರು ಒಂದಾಗಿ ನಿಂತಾಗ ಆದಂತೆ, ಎಡಪಕ್ಷಗಳು-ಆರ್‌ಜೆಡಿ-ಕಾಂಗ್ರೆಸ್ ಘಟಬಂಧನದಲ್ಲಿ ಎಡವು ಹೆಚ್ಚಿನ ಸ್ಥಾನಗಳನ್ನು ಪಡೆಯಲು ಶಕ್ತವಾಗಿದೆ. ಅಂದರೆ ಎಡವು ಇಲ್ಲಿ ಸ್ವತಂತ್ರವಾಗಿ ತನ್ನ ಸೀಟುಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಲಪಂಥೀಯ (ಸೆಕ್ಯುಲರ್ ಬಲಪಂಥೀಯ ಎಂದು ಬೇಕಾದರೆ ಸೀಮಿತ ಅರ್ಥದಲ್ಲಿ ಹೇಳಬಹುದು) ಟಿಎಂಸಿಯನ್ನು ಎದುರಿಸಲು ಪ.ಬಂಗಾಳದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಾಗ ಸಿಪಿಎಂ ಪೆಟ್ಟು ತಿಂದಿದ್ದೇನೋ ನಿಜ (ಆಗ ಕಾಂಗ್ರೆಸ್ ಸಿಪಿಎಂಗಿಂತ ಹೆಚ್ಚಿನ ಸೀಟುಗಳನ್ನು ಗೆದ್ದುಕೊಂಡಿತ್ತು); ಆದರೆ ಬಿಹಾರದಲ್ಲಿ ಆರ್‌ಜೆಡಿ ಅಥವಾ ಕಾಂಗ್ರೆಸ್‌ನ ಬೆಂಬಲವಿಲ್ಲದೇ ತನ್ನಂತೆ ತಾನೇ ಎಡಪಕ್ಷಗಳು ಸ್ಪರ್ಧಿಸಿದ್ದರೆ ಈಗ ಗೆದ್ದಿರುವುದರಲ್ಲಿ ಕಾಲು ಭಾಗವನ್ನೂ ಗೆಲ್ಲುತ್ತಿರಲಿಲ್ಲ ಎಂಬುದೂ ನಿಜ. ಎಡಪಕ್ಷಗಳ ಬೆಂಬಲವೂ ಘಟಬಂಧನಕ್ಕೆ ಶಕ್ತಿ ತಂದುಕೊಟ್ಟಿರುತ್ತದೆ ಎಂಬುದರಲ್ಲೂ ಸಂಶಯವಿಲ್ಲ. ಈ ಶಕ್ತಿಯು ಕೇಡರ್, ಜನಸಮೂಹದಲ್ಲಿರುವ ಸಂಘಟನಾ ಬಲವೇ ಆಗಿರಬೇಕಿಲ್ಲ. ಜನಸಾಮಾನ್ಯರಿಗೆ ಅಪ್ಯಾಯವೆನಿಸುವ ಕಥನದ ಬಲವೂ ಆಗಿರಬಹುದು.

ಅಂದರೆ ಬಿಜೆಪಿಗೆದುರಾಗಿ ಇತರ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಕೇವಲ ಚುನಾವಣಾ ರಾಜಕಾರಣದ ಗೆಲುವು-ಸೋಲುಗಳ ಲೆಕ್ಕಾಚಾರದ ಕಾರಣಕ್ಕೆ ಮಾತ್ರವಲ್ಲಾ; ಧ್ರುವೀಕರಣವು ಏರ್ಪಟ್ಟಾಗ ಜನರ ಪರವಾದ ನೆರೇಟಿವ್‌ಅನ್ನು ಸೆಂಟ್ರಿಸ್ಟ್ ಶಕ್ತಿಗಳೇ ಪ್ರಧಾನವಾಗಿ ಮುಂದಕ್ಕೆ ಒಯ್ಯುವ ಸಾಧ್ಯತೆ ಇದ್ದಾಗ, ಎಡಚಳವಳಿಯು ಇನ್ನೂ ಬಲವಾಗಿರದಿದ್ದಾಗ ‘ಘಟಬಂಧನ’ದೊಳಗೆ ಇರುವುದೇ ಎಡಶಕ್ತಿಗಳು ಪ್ರಸ್ತುತವಾಗುಳಿಯುವುದಕ್ಕೆ ಇರುವ ಅವಕಾಶವಾಗಿರುತ್ತದೆ. ಇಲ್ಲದಿದ್ದರೆ ಅದರ ಲಾಭವನ್ನು ಸೆಂಟ್ರಿಸ್ಟ್ ಶಕ್ತಿಗಳು ಪಡೆದುಕೊಳ್ಳಬಹುದು; ಇಲ್ಲವೇ ಅದೂ ದುರ್ಬಲವಾಗಿ ಬಲಪಂಥೀಯ ಶಕ್ತಿಗಳೇ ಗೆಲ್ಲಬಹುದು. ಈ ಸದ್ಯ ಎಡ-ಆರ್‌ಜೆಡಿ ಮೈತ್ರಿಕೂಟದಿಂದ ಪರಸ್ಪರ ಲಾಭವೇ ಆಗಿರುವುದು ಕಾಣುತ್ತದೆ.

  • ನೀಲಗಾರ

ಇದನ್ನೂ ಓದಿ: ಉಪಚುನಾವಣೆ: ಗಾಳಿ ಬೀಸಿದತ್ತ ಹೋದ ಅಲೆಯಷ್ಟೇ ಅಲ್ಲ, ಆಡಳಿತದ ವಿರುದ್ಧದ ಭಾವನೆ ಘನೀಭವಿಸಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...