Homeಅಂತರಾಷ್ಟ್ರೀಯತೈವಾನ್ ದೇಶದ ಕೊರೊನಾ ಚಮತ್ಕಾರ: ನಾಗೇಶ್‌ ಹೆಗಡೆ ಅವರ ಲೇಖನ

ತೈವಾನ್ ದೇಶದ ಕೊರೊನಾ ಚಮತ್ಕಾರ: ನಾಗೇಶ್‌ ಹೆಗಡೆ ಅವರ ಲೇಖನ

- Advertisement -
- Advertisement -

ಚೀನಾದ ಪಕ್ಕದಲ್ಲೇ ಇರುವ ಪುಟ್ಟ ದ್ವೀಪದೇಶ ತೈವಾನ್. ಕೊರೊನಾ ದಾಳಿಯಿಂದ ತತ್ತರಿಸಿ ಹೋಗಬೇಕಿತ್ತು. ಏಕೆಂದರೆ ಸುಮಾರು ಹದಿಮೂರು ಲಕ್ಷ ಮಂದಿ ತೈವಾನೀಯರು ಚೀನಾದೊಂದಿಗೆ ನಿತ್ಯ ಸಂಪರ್ಕ ಇಟ್ಟುಕೊಂಡಿದ್ದಾರೆ. ದಿನವೂ ವುಹಾನ್ ಜೊತೆ ನೇರ ವಿಮಾನಗಳ ಸಂಚಾರವಿದೆ. (2019ರಲ್ಲಿ 27 ಲಕ್ಷ ಜನರು ಚೀನಾಕ್ಕೆ ಹೋಗಿ ಬಂದಿದ್ದಾರೆ.) ಆದರೆ ಅಚ್ಚರಿ ನೋಡಿ: ಅಲ್ಲಿ ಕೇವಲ 395 ಜನರಲ್ಲಿ ರೋಗಲಕ್ಷಣ ಕಂಡಿದೆ. 155 ಜನರು ಗುಣಮುಖರಾಗಿದ್ದಾರೆ. 6 ಜನ ಮಾತ್ರ ಸಾವಪ್ಪಿದ್ದಾರೆ. ಹಾಗೆಂದು ಅಲ್ಲಿನ ಪ್ರಜೆಗಳ ಮೇಲೆ ತುರ್ತುಸ್ಥಿತಿಯನ್ನು ಹೇರಿಲ್ಲ. ಯಾವ ಊರನ್ನೂ ಲಾಕ್‌ಡೌನ್ ಮಾಡಲಿಲ್ಲ. ಮನೆಮನೆಗೆ ಹೊಕ್ಕು ಟೆಸ್ಟಿಂಗ್ ಮಾಡಿಲ್ಲ. ಪೊಲೀಸರ ದಬ್ಬಾಳಿಕೆ ಇಲ್ಲ (ಅಲ್ಲಿ ಮಿಲಿಟರಿ ಆಡಳಿತವಿಲ್ಲ, ಪ್ರಜಾಪ್ರಭುತ್ವ ಇದೆ). ವಲಸೆ ಹೊರಟವರ ಗೋಳಿನ ಕತೆಗಳಿಲ್ಲ.

ಜಗತ್ತಿನ ಇತರೆಲ್ಲ ದೇಶಗಳಿಗೆ ಮಾದರಿಯಾಗುವಂಥ ಅದೇನು ಮ್ಯಾಜಿಕ್ ಅಲ್ಲಿ ನಡೆದಿದೆ ಗೊತ್ತೆ?

1. ಕೊರೊನಾದ ಹೊಸ ಅವತಾರ ತಲೆ ಎತ್ತಿದೆ ಎಂಬುದು ಗೊತ್ತಾದ ತಕ್ಷಣವೇ ಜನವರಿಯಲ್ಲೇ ತೈವಾನ್ ವಿಶೇಷ ನಿಗಾ ದಳವನ್ನು ಸೃಷ್ಟಿಸಿ, ಬಿಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತು. ಅಲ್ಲಿಂದ ಬರುವ ವಿಮಾನಗಳಲ್ಲಿ ಜ್ವರ ಪೀಡಿತರ ತಪಾಸಣೆಯನ್ನು ಆರಂಭಿಸಿತು. ವಿಮಾನ ನೆಲಕ್ಕಿಳಿಯುವ ಮೊದಲೇ ತಪಾಸಣೆ ನಡೆದಿದ್ದರಿಂದ ಉದ್ದುದ್ದ ಕ್ಯೂ ಇರಲಿಲ್ಲ.

2. ಫೆಬ್ರುವರಿ 10ರ ವೇಳೆಗೆ ಚೀನಾದಲ್ಲಿ 30 ಸಾವಿರ ಮಂದಿ ಕಾಯಿಲೆ ಬಿದ್ದಾಗ ತೈವಾನ್ನಲ್ಲಿ ಕೇವಲ 16 ರೋಗಿಗಳು ಪತ್ತೆ ಆಗಿದ್ದೇ ತಡ, ಚೀನಾದಿಂದ ಬರುವ ಎಲ್ಲ ಉಡ್ಡಾಣಗಳನ್ನೂ ಸ್ಥಗಿತಗೊಳಿಸಿ, ಹಾಂಗ್‌ಕಾಂಗ್ ಮೂಲಕ ಬರುವವರ ಪರೀಕ್ಷೆಯನ್ನು ವಿಮಾನದಲ್ಲೇ ನಡೆಸತೊಡಗಿತು. ತನ್ನ ದ್ವೀಪದ ಸುತ್ತ ಲಕ್ಷ್ಮಣ ರೇಖೆಯನ್ನು ಎಳೆಯಿತು.

2. ಮುಖವಾಡಗಳ ರಫ್ತನ್ನು ನಿಲ್ಲಿಸಿತು. ಉತ್ಪಾದನೆಯನ್ನು ಎಂಟು ಪಟ್ಟು ಹೆಚ್ಚಿಸಿತು. ಅವುಗಳ ತಯಾರಿಕೆಯನ್ನು ಮೊದಲು ಕೈದಿಗಳಿಗೆ (ಕೆಳಗಿನ ಚಿತ್ರ – ಹೊಲಿಗೆ ಕೆಲಸದಲ್ಲಿ ನಿರತರಾದ ಕೈದಿಗಳದ್ದು), ಆನಂತರ ಮಿಲಿಟರಿಗೇ ಒಪ್ಪಿಸಿತು. ಪ್ರತಿಯೊಬ್ಬ ಪ್ರಜೆಗೂ ವಾರಕ್ಕೆ ಮೂರು ನಾಲ್ಕು ಮುಖವಾಡಗಳ ವ್ಯವಸ್ಥೆ ಮಾಡಿತು. ಅದು ಎಲ್ಲಿ ಸಿಗುತ್ತದೆ ಎಂಬುದನ್ನು ಅವರವರ ಮೊಬೈಲ್‌ನಲ್ಲೇ ಮಾಹಿತಿ ಸಿಗುವಂತೆ ಮಾಡಿತು.

3. ಕೊರೊನಾ ಪೀಡಿತರನ್ನು ವೈರಸ್ ಥರಾ ಪರಿಗಣಿಸದೆ ಅವರನ್ನು ಪ್ರಜೆಗಳಂತೇ ನೋಡಿಕೊಂಡಿತು. ಅವರಿಗೆ ಅತ್ಯುತ್ತಮ ಕ್ವಾರಂಟೈನ್ ವ್ಯವಸ್ಥೆಯನ್ನು ಕಲ್ಪಿಸಿತು. ಅವರ ನಿವಾಸಕ್ಕೆ ಅನ್ನಾಹಾರ ಹಾಗೂ ಅಗತ್ಯ ವಸ್ತುಗಳ ಕೊರತೆ ಆಗದಂತೆ ನೋಡಿಕೊಂಡಿತು. ಪುಸ್ತಕಗಳನ್ನೂ ಒದಗಿಸಿತು. ದಿನಭತ್ಯೆಯನ್ನೂ ಘೋಷಿಸಿತು. ಜನರು ತಾವಾಗಿ ಖುಷಿಯಿಂದ ಕ್ವಾರಂಟೈನ್‌ಗೆ ಒಳಪಡುವಂತೆ ಮನವೊಲಿಸಿತು. ಅವರ ಫೋನ್ ನಂಬರನ್ನು ಪಡೆದು ಅದರಲ್ಲಿ ವಿಶೇಷ ಆಪ್ ಹಾಕಿತು. ಮನೆಬಿಟ್ಟು ಆಚೆ ಹೋದರೆ ಅವರ ಬ್ಯಾಂಕ್ ಖಾತೆಯಿಂದ ದೊಡ್ಡ ಮೊತ್ತದ ದಂಡ ವಜಾ ಆಗುತ್ತದೆಂದು ಟಿವಿ ಮೂಲಕ ಪ್ರಚಾರ ಕೊಟ್ಟಿತು. ಕಾಯಿಲೆ ಉಲ್ಪಣಗೊಂಡರೆ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿತು.

4. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುವದಂತಿಗಳನ್ನು ಪತ್ತೆ ಹಚ್ಚಬಲ್ಲ ವಿಶೇಷ ಅಲ್ಗೊರಿದಮ್ಮನ್ನು ಅದು ಸೃಷ್ಟಿಸಿತು. ಅದು ಚೀನಾದಿಂದ ಬರುವ ಸುಳ್ಳುಸುದ್ದಿಗಳನ್ನು ಫಿಲ್ಟರ್ ಮಾಡತೊಡಗಿತು. ದೇಶದೊಳಕ್ಕೆ ಬರುವ ಎಲ್ಲರ ಡೇಟಾಗಳನ್ನು ವಿಮಾ ಕಂಪನಿಗಳಿಂದ ತರಿಸಿಕೊಂಡು, ಅದನ್ನು ವೀಸಾ ವಿಭಾಗದ ಡೇಟಾ ಜೊತೆ ಜೋಡಿಸಿ, ಜ್ವರಪೀಡಿತರ ಕುರಿತ ಮಾಹಿತಿ ಎಲ್ಲ ಆಸ್ಪತ್ರೆ, ಔಷಧಾಲಯಗಳಿಗೂ ಮುಂಚಿತವಾಗಿಯೇ ಲಭಿಸುವಂತೆ ನೋಡಿಕೊಂಡಿತು.

 

* ಇತರ ಕೆಲವು ಮಹತ್ವದ ಮಾಹಿತಿಗಳು: ತೈವಾನ್ ದೇಶದ ಅಧ್ಯಕ್ಷರು ವಿಶ್ವವಿಖ್ಯಾತ ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದ ಅರ್ಥತಜ್ಞ. ಉಪಾಧ್ಯಕ್ಷರು ಸ್ವತಃ ಎಪಿಡೀಮಿಯಾಲಜಿ ಡಾಕ್ಟರು- ಅಂದರೆ ಸಾಂಕ್ರಾಮಿಕ ರೋಗತಜ್ಞ. ಅಲ್ಲಿ ಕೊರೊನಾ ಸಂದರ್ಭದ ಅವರ TTT ಘೋಷವಾಕ್ಯ ಏನೆಂದರೆ ಟ್ರಸ್ಟ್, ಟ್ರಾನ್ಸಪರೆನ್ಸಿ ಮತ್ತು ಟೆಕ್ನಾಲಜಿ. ಜನರೊಂದಿಗಿನ ವಿಶ್ವಾಸ, ಪಾರದರ್ಶಕತೆ ಮತ್ತು ತಂತ್ರಜ್ಞಾನ. ಅಲ್ಲಿ ಕೇವಲ 20 ನಿಮಿಷಗಳಲ್ಲಿ ಕೋವಿಡ್ ಟೆಸ್ಟ್ ಫಲಿತಾಂಶ ಬರುವಂಥ ವೈದ್ಯಕೀಯ ವಿಧಾನ ಚಾಲ್ತಿಗೆ ಬಂದಿದೆ (ನಮ್ಮಲ್ಲಿ ಫಲಿತಾಂಶ ಬರಲು 6 ಗಂಟೆಯಿಂದ 24 ಗಂಟೆ ಬೇಕು).

*ತೈವಾನ್ ಜನಸಂಖ್ಯೆ 238 ಲಕ್ಷ ನಿಜ. ಆದರೆ ವುಹಾನ್‌ನಿಂದ ಕೇವಲ 943 ಕಿ.ಮೀ. ದೂರದಲ್ಲಿದೆ. ಅದಕ್ಕೆ ಹೋಲಿಸಿದರೆ ವುಹಾನ್ನಿಂದ 7500 ಕಿ.ಮೀ. ದೂರದ, ಕೇವಲ 192 ಲಕ್ಷ ಜನರಿರುವ ರುಮೇನಿಯಾದಲ್ಲಿ 7700 ರೋಗಿಗಳಿದ್ದು 392 ಮೃತರಾಗಿದ್ದಾರೆ. ಸುಮಾರು ಅಷ್ಟೇ ದೂರದಲ್ಲಿರುವ ಇನ್ನೂ ಕಡಿಮೆ ಜನಸಂಖ್ಯೆಯ ಕತಾರ್ ದೇಶದಲ್ಲಿ 4103 ರೋಗಿಗಳಿದ್ದಾರೆ, 7 ಮಂದಿ ಗತಿಸಿದ್ದಾರೆ. ಸುಮಾರು ಅಷ್ಟೇ ದೂರದಲ್ಲಿರುವ ಬಹ್ರೇನ್ ದೇಶದಲ್ಲೂ 1703 ರೋಗಿಗಳಿದ್ದು 7 ಮಂದಿ ಗತಿಸಿದ್ದಾರೆ. ಕೊನೆಯ ಈ ಎರಡೂ ದೇಶಗಳು ಭಾರೀ ತೈಲಧನಿಕ ಅಷ್ಟೇ ಅಲ್ಲ, ಮುನ್ನೆಚ್ಚರಿಕೆಗೆ ಅವಕ್ಕೆ ಮೂರು ತಿಂಗಳು ಕಾಲಾವಧಿ ಇತ್ತು.

ಕೊನೆಯ ಕುಟುಕು: ವುಹಾನ್ ಮಹಾಮಾರಿಯ ಅಲೆ ದಶದಿಕ್ಕುಗಳಲ್ಲಿ ಹಬ್ಬುತ್ತಿದ್ದಾಗ, ಎಲ್ಲ ಬಿಬಿಸಿ-ಸಿಎನ್‌ಎನ್‌ಗಳಲ್ಲಿ ಅದರದೇ ಪ್ರಮುಖ ಸುದ್ದಿ ಬರುತ್ತಿದ್ದಾಗ ನಮ್ಮ ಮಾಧ್ಯಮಗಳ ಗಮನವೆಲ್ಲ ಕಮಲನಾಥ್ ಸರಕಾರವನ್ನು ಕೆಡವುವ ಕಮಲದ ಸರ್ಕಸ್ ಕಡೆ, ಹಾಗೂ ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಟ್ರಂಪ್ ಮಹಾಶಯನ ಟ್ರಂಪೆಟ್‌ ಕಡೆ ನೆಟ್ಟಿತ್ತು.

(ಕೃಪೆ: ನಾಗೇಶ್ ಹೆಗಡೆ ಅವರ ಫೇಸ್‌ಬುಕ್‌ ವಾಲ್‌ನಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...