Homeದಲಿತ್ ಫೈಲ್ಸ್ಅಯೋಧ್ಯೆ- ದಲಿತ ಜಮೀನು ಲಪಟಾಯಿಸಿದ ಪ್ರಸಂಗ

ಅಯೋಧ್ಯೆ- ದಲಿತ ಜಮೀನು ಲಪಟಾಯಿಸಿದ ಪ್ರಸಂಗ

- Advertisement -
- Advertisement -

ಅಯೋಧ್ಯೆಯ ಬಾಬರಿ ಮಸೀದಿ-ರಾಮಜನ್ಮಭೂಮಿಯ 2.77 ಎಕರೆಗಳಷ್ಟು ವಿವಾದಿತ ಜಮೀನನ್ನು ರಾಮಮಂದಿರ ಕಟ್ಟಿಕೊಳ್ಳಲು ಸುಪ್ರೀಮ್ ಕೋರ್ಟು ಹಿಂದೂಗಳಿಗೆ ಒಪ್ಪಿಸಿತ್ತು. ಸುಪ್ರೀಮ್ ತೀರ್ಪಿನ ಅನ್ವಯ ರಚಿಸಲಾದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ 2.77 ಎಕರೆಗಳ ಸುತ್ತಮುತ್ತ ಈವರೆಗೆ 70 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ಈ ಎರಡು ವರ್ಷಗಳಲ್ಲಿ ಅಯೋಧ್ಯೆಯ ರಿಯಲ್ ಎಸ್ಟೇಟ್ ದಂಧೆ ಅತಿಶಯವಾಗಿ ಗರಿಗೆದರಿದೆ. ಭವ್ಯ ರಾಮಮಂದಿರದ ಸುತ್ತಮುತ್ತಲ ಜಮೀನಿನ ಖರೀದಿ ದರ ಆಕಾಶಕ್ಕೇರುವ ನಿರೀಕ್ಷೆ ಹೊಂದಿರುವ ಖಾಸಗಿ ಖರೀದಿದಾರರೂ ಈ ಜಮೀನಿಗೆ ಮುಗಿ ಬೀಳತೊಡಗಿದ್ದಾರೆ.

ಸ್ಥಳೀಯ ಶಾಸಕರು ಮತ್ತು ಅಯೋಧ್ಯೆಯ ಉನ್ನತ ಸರ್ಕಾರಿ ಅಧಿಕಾರಿಗಳ ಹತ್ತಿರದ ಸಂಬಂಧಿಕರು ಇಲ್ಲಿನ ಬಡ ದಲಿತರ ಜಮೀನು ಖರೀದಿ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ರಾಮಮಂದಿರ ನಿವೇಶನದಿಂದ ಕೆಲವೇ ಕಿಲೋಮೀಟರುಗಳ ದೂರದ ಬರ್ಹಟ ಮಾಂಝಾ ಮತ್ತಿತರೆ ಗ್ರಾಮಗಳ ದಲಿತರಿಂದ 21 ಬಿಘಾಗಳಷ್ಟು (52,000 ಚದರ ಗಜಗಳು) ಜಮೀನನ್ನು 1990ರ ದಶಕಗಳಲ್ಲಿ ಮಹೇಶ್ ಯೋಗಿ ವಿದ್ಯಾಪೀಠ ಟ್ರಸ್ಟ್ ಖರೀದಿಸಿತ್ತು. 2016ರಲ್ಲಿ ಸಂಬಂಧಪಟ್ಟ ಕಾಯಿದೆ ತಿದ್ದುಪಡಿಗೆ ಮುನ್ನ ದಲಿತರು ತಮ್ಮ ಜಮೀನನ್ನು ದಲಿತೇತರರಿಗೆ ಮುಕ್ತವಾಗಿ ಪರಭಾರೆ ಮಾಡುವಂತಿರಲಿಲ್ಲ. ಆದರೆ ಮಹೇಶ್ ಯೋಗಿ ಟ್ರಸ್ಟ್ ಮೋಸ ಮರೆಯಿಂದ ಹತ್ತು ಹನ್ನೆರಡು ಮಂದಿ ದಲಿತರಿಂದ ಜಮೀನು ಖರೀದಿಸಿತ್ತು. ತನ್ನ ದಲಿತ ಉದ್ಯೋಗಿ ರೊಂಘೈ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿತ್ತು. ಈ ಜಮೀನನ್ನು ರೊಂಘೈನಿಂದ 1996ರಲ್ಲಿ ದಾನವಾಗಿ ಬರೆಯಿಸಿಕೊಂಡಿತ್ತು. ಕೇವಲ 6.38 ಲಕ್ಷ ರುಪಾಯಿಗೆ ದಲಿತರಿಂದ ದಕ್ಕಿಸಿಕೊಂಡಿದ್ದ ಈ ಜಮೀನಿನ ಇಂದಿನ ಮಾರುಕಟ್ಟೆ ಬೆಲೆ ಕೋಟ್ಯಂತರ ರುಪಾಯಿಗಳು. ಮಹಾದೇವನೆಂಬ ದಲಿತನಿಂದ ಬರೆಯಿಸಿಕೊಂಡಿದ್ದ ಮೂರು ಬಿಘಾಗಳಷ್ಟು ಜಮೀನಿಗೆ ಟ್ರಸ್ಟ್ ಅಂದು ನೀಡಿದ್ದ ಮೊತ್ತ 1.02 ಲಕ್ಷ ರುಪಾಯಿ. ಉತ್ತರಪ್ರದೇಶದಲ್ಲಿ ಒಂದು ಎಕರೆ ಜಮೀನು ಅಂದಾಜು ಒಂದೂವರೆ ಎಕರೆ ಬಿಘಾಕ್ಕೆ ಸಮ. ಹೀಗೆ ದಲಿತರಿಂದ ಪಡೆದ ಜಮೀನನ್ನು ಮಹೇಶ್ ಯೋಗಿ ಟ್ರಸ್ಟ್ ತನಗೆ ಬೇಕಾದವರಿಗೆ ಮಾರಾಟ ಮಾಡಲಾರಂಭಿಸಿತು. ತನ್ನ ಜಮೀನನ್ನು ಅಕ್ರಮವಾಗಿ ವರ್ಗ ಮಾಡಿಸಿಕೊಳ್ಳಲಾಗಿದೆ ಎಂದು ದಲಿತ ಮಹಾದೇವ ರೆವಿನ್ಯೂ ಮಂಡಳಿಗೆ ದೂರು ನೀಡಿದ. ಪರಿಣಾಮವಾಗಿ ಜರುಗಿದ ತನಿಖೆಯ ವರದಿಯು ಅಕ್ರಮ ವರ್ಗಾವಣೆಯ ದೂರನ್ನು ಎತ್ತಿ ಹಿಡಿದು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಶಿಫಾರಸು ಮಾಡಿತು. ಈ ಶಿಫಾರಸನ್ನು ಅನುಮೋದಿಸಿದ ಅಯೋಧ್ಯಾ ವಿಭಾಗಾಧಿಕಾರಿ ಎಂ.ಪಿ.ಅಗರವಾಲ್ ಸಂಬಂಧಿಕರು ಮಹೇಶ್ ಯೋಗಿ ಟ್ರಸ್ಟ್‌ನಿಂದ ನಿವೇಶನಗಳನ್ನು ಪಡೆದಿದ್ದಾರೆ. ಅಗರವಾಲ್ ಅವರ ಪತ್ನಿಯ ತಂದೆ ಮತ್ತು ಪತ್ನಿಯ ಸೋದರರಿಬ್ಬರೂ ತಲಾ ಎರಡೂವರೆ ಸಾವಿರ ಮತ್ತು 1,260 ಚದರ ಗಜಗಳ ಅಳತೆಯ ನಿವೇಶನಗಳನ್ನು 2020ರ ಡಿಸೆಂಬರ್‌ನಲ್ಲಿ ಗಿಟ್ಟಿಸಿದ್ದಾರೆ. ಇದೇ ಟ್ರಸ್ಟಿನಿಂದ ಮುಖ್ಯ ಕಂದಾಯ ಅಧಿಕಾರಿ ಪುರುಷೋತ್ತಮ ದಾಸ್ ಗುಪ್ತಾ ಮತ್ತು ಡಿ.ಐ.ಜಿ. ದೀಪಕ್ ಕುಮಾರ್ ಅವರ ಸಮೀಪದ ಸಂಬಂಧಿಕರು 1,130 ಚದರ ಗಜ ಮತ್ತು 1,020 ಚದರ ಗಜಗಳ ವಿಸ್ತೀರ್ಣದ ನಿವೇಶನಗಳನ್ನು ಬರ್ಹಾಟ ಮಾಂಝಾ ಗ್ರಾಮದಲ್ಲಿ ಖರೀದಿಸಿದ್ದಾರೆ. ಅಯೋಧ್ಯೆಯ ಜಿಲ್ಲಾಧಿಕಾರಿಯ ತಂದೆ ಕೂಡ ಭವ್ಯ ರಾಮಮಂದಿರದಿಂದ ಒಂದು ಕಿ.ಮೀ. ಫಾಸಲೆಯಲ್ಲಿ ಮಹೇಶ್ ಯೋಗಿ ಟ್ರಸ್ಟ್‌ನಿಂದ ನಿವೇಶನ ಖರೀದಿಸಿದ್ದಾರೆ.

ಉಳಿದಂತೆ ಅಯೋಧ್ಯಾ ಜಿಲ್ಲೆಯ ಗೋಸಾಯಿಗಂಜ್ ಬಿಜೆಪಿ ಶಾಸಕ ಇಂದ್ರಪ್ರತಾಪ ತಿವಾರಿ 2019ರ ನವೆಂಬರಿನಲ್ಲಿ 2,593 ಚದರ ಗಜ, ನಿವೃತ್ತ ಐ.ಎ.ಎಸ್. ಅಧಿಕಾರಿ ಉಮಾಧರ ದ್ವಿವೇದಿ ಅವರು 2021ರ ಅಕ್ಟೋಬರಿನಲ್ಲಿ 1,680 ಚದರ ಗಜಗಳ ಅಳತೆಯ ನಿವೇಶನಗಳ ಖರೀದಿಸಿದ್ದಾರೆ.

ಈ ಅಧಿಕಾರಿಗಳು ಮತ್ತು ಅವರ ಸಂಬಂಧಿಕರು ಖರೀದಿಸಿರುವ ನಿವೇಶನಗಳು ವಿವಾದಗ್ರಸ್ತ ದಲಿತ ಜಮೀನಿಗೆ ಸೇರಿಲ್ಲ. ಆದರೆ ದಲಿತರಿಂದ ಅಕ್ರಮವಾಗಿ ಜಮೀನು ಖರೀದಿಸಿದ್ದ ತಪ್ಪಿಗಾಗಿ ಮಹೇಶ್ ಯೋಗಿ ಟ್ರಸ್ಟ್ ಕಟಕಟೆಯಲ್ಲಿ ನಿಂತಿದೆ. ತನಿಖೆಗೆ ಗುರಿಯಾಗಿದೆ. ಅಂತಹ ಟ್ರಸ್ಟಿನಿಂದ ಹಾಲಿ ಅಧಿಕಾರಿಗಳು, ಅವರ ಆಪ್ತಸಂಬಂಧಿಕರು, ನಿವೃತ್ತ ಅಧಿಕಾರಿಗಳು ನಿವೇಶನ ಖರೀದಿಸಿರುವುದು ಔಚಿತ್ಯಪೂರ್ಣ ಎನಿಸಿಕೊಳ್ಳುವುದಿಲ್ಲ. ಈ ನಿವೇಶನಗಳು ತಾನು ಆಪಾದನೆಯಿಂದ ಪಾರಾಗಲೆಂದು ಟ್ರಸ್ಟ್ ನೀಡುತ್ತಿರುವ ’ಲಂಚ’ ಎನಿಸಿಕೊಳ್ಳುತ್ತವೆ. ಖರೀದಿ ಮಾಡಿರುವವರು ಟ್ರಸ್ಟ್‌ಅನ್ನು ಕಾನೂನು ಕ್ರಮದ ಕುಣಿಕೆಯಿಂದ ಬಚಾವು ಮಾಡುವುದಿಲ್ಲವೆಂಬ ಖಾತರಿಯೇನು?

ದಲಿತರ ಜಮೀನನ್ನು ಲಪಟಾಯಿಸಲು ಟ್ರಸ್ಟ್ ಗಾಳವಾಗಿ ಬಳಸಿಕೊಂಡ ದಲಿತ ರೊಂಘೈ ಮತ್ತು ಅವನ ಕುಟುಂಬ ಅಯೋಧ್ಯೆಯಿಂದ ದೂರದಲ್ಲಿ ವಾಸಿಸಿದೆ.

ಭರತ ಭೂಮಿಯ ದಲಿತರು ಸಾವಿರಾರು ವರ್ಷಗಳಿಂದ ಜಮೀನುವಂಚಿತರು. ಜಾತಿವ್ಯವಸ್ಥೆಯು ಅವರಿಗೆ ಜಮೀನಿನ ಒಡೆತನವನ್ನು ನಿರಾಕರಿಸಿತ್ತು. ಭೂಹೀನ ಸ್ಥಿತಿಯು ಬಲಿಷ್ಠ ಜಾತಿಗಳ ಗುಲಾಮಗಿರಿಗೆ
ಅವರನ್ನು ನೂಕಿದೆ.

2011ರ ಜನಗಣತಿಯ ಪ್ರಕಾರ ದೇಶದ ಶೇ.71ರಷ್ಟು ದಲಿತರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ, ಬಳಿ ಸ್ವಂತ ಜಮೀನಿಲ್ಲ. ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಶೇ.90ರಷ್ಟು.

ಸ್ವಾತಂತ್ರ್ಯ ಬಂದು ಏಳು ದಶಕಗಳೇ ಉರುಳಿದ್ದರೂ ಭೂಮಿಯ ಕ್ರಮಬದ್ಧ ಮರುಹಂಚಿಕೆ ನಡೆದೇ ಇಲ್ಲ. ಒಂದು ಅಧ್ಯಯನದ ಪ್ರಕಾರ ಏಳು ಹೆಕ್ಟೇರುಗಳ ಭೂಒಡೆತನ ಮಿತಿ ಹೇರಿದರೆ ಮರು ಹಂಚಿಕೆಗೆ ಲಭಿಸುವ ಹೆಚ್ಚುವರಿ ಭೂಮಿ 75 ಲಕ್ಷ ಹೆಕ್ಟೇರುಗಳು.

ಭೂಒಡೆತನವು ಆತ್ಮಗೌರವದ ಮೂಲ ಎಂಬುದು ಗ್ರಾಮೀಣ ಭಾರತದ ವಾಸ್ತವ. ಹೀಗಾಗಿ ಭೂಸುಧಾರಣೆಯು ಸಾಮಾಜಿಕ ನ್ಯಾಯದ ಬಹುಮುಖ್ಯ ಭಾಗ. ಭಾರತದ ದಮನಿತ ಸಮುದಾಯಗಳ ಘನತೆಯೊಂದಿಗೆ ಬೆಸೆದುಕೊಂಡಿರುವ ಪರಿಹಾರ.

ಹಿಂದಿಯ ಬಹುಮುಖ್ಯ ಕವಿಗಳಲ್ಲಿ ಒಬ್ಬರಾದ ಜ್ಞಾನಪೀಠ ಪ್ರಶಸ್ತಿ ವಿಜೇತ ಕುಂವರ ನಾರಾಯಣ ಅವರ ’ಅಯೋಧ್ಯೆ ಕವಿತೆ ನೆನಪಾಗುತ್ತಿದೆ-

ಹೇ ರಾಮ,
ಬದುಕು ಒಂದು ಕಟು ಯಥಾರ್ಥ
ಮತ್ತು ನೀನೊಂದು ಮಹಾಕಾವ್ಯ!

ನಿನ್ನ ಕೈಯಿಂದಾಗದು
ಆ ಅವಿವೇಕವನ್ನು ಗೆಲ್ಲುವುದು
ಹತ್ತು ಇಪ್ಪತ್ತಲ್ಲ, ಅದಕ್ಕೆ
ಈಗ ಲಕ್ಷ ತಲೆಗಳು- ಲಕ್ಷಾಂತರ ಹಸ್ತಗಳು
ಮತ್ತು ವಿಭೀಷಣ ಕೂಡ ಈಗ
ಯಾರ ಜೊತೆಗಿರುವನೋ ತಿಳಿಯದು.

ಇದಕ್ಕಿಂತ ಇನ್ನೇನಾಗಬೇಕು.
ನಮ್ಮ ದೌರ್ಭಾಗ್ಯ
ಒಂದು ವಿವಾದಿತ ಸ್ಥಳಕ್ಕೆ ಕುಗ್ಗಿ
ಕುಸಿಯಿತಲ್ಲ ನಿನ್ನ ಸಾಮ್ರಾಜ್ಯ

ಅಯೋಧ್ಯೆ ಈಗ ನಿನ್ನ ಆಯೋಧ್ಯೆ ಅಲ್ಲ
ಅದು ಯೋಧರ ಲಂಕೆ
’ಮಾನಸ’ ನಿನ್ನ ’ಚರಿತೆ’ ಅಲ್ಲ
ಅದು ಚುನಾವಣೆಯ ನಗಾರಿ!

ಹೇ ರಾಮ, ಈ ಯುಗವೆಲ್ಲಿ
ಎಲ್ಲಿ ನಿನ್ನ ತ್ರೇತಾಯುಗ,
ಎಲ್ಲಿ ನೀನು ಮರ್ಯಾದಾ ಪುರುಷೋತ್ತಮ
ಎಲ್ಲಿ ಈ ನೇತಾ ಯುಗ!

ಸವಿನಯ ನಿವೇದನೆ ಪ್ರಭೂ, ವಾಪಸು ಹೋಗಿಬಿಡು
ಯಾವುದಾದರೂ ಪುರಾಣ- ಮತ್ಯಾವುದೋ ಧರ್ಮಗ್ರಂಥದೊಳಕ್ಕೆ
ಸಕುಶಲ ಸಪತ್ನೀಕ….
ವಾಲ್ಮೀಕಿ ಅಲೆದಾಡಿದ ಆ ಅಡವಿಯಲ್ಲ!
ಈಗಿನ ಅಡವಿ


ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ದಿನ: ರಾಮ್‌ ಕೆ ನಾಮ್ | ರಾಮನ ಹೆಸರಿನಲ್ಲಿ | In the name of God | ಸಾಕ್ಷ್ಯಚಿತ್ರ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...