Homeನ್ಯಾಯ ಪಥಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; "ಪೌರವೀರ" ದೊರೆಸ್ವಾಮಿಯವರು

ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; “ಪೌರವೀರ” ದೊರೆಸ್ವಾಮಿಯವರು

- Advertisement -
- Advertisement -

ದೊರೆಸ್ವಾಮಿ ತಾತನ ಎಂಟು ದಶಕಗಳಿಗೂ ಮೀರಿದ ಸುದೀರ್ಘ ಸಾರ್ವಜನಿಕ ಜೀವನವನ್ನು ಇಂದು ಅವಲೋಕಿಸಿದಾಗ, ಅದರ ಮೂಲಸೆಲೆ ಅವರು ಪೌರತ್ವ ಮತ್ತು ಸ್ವಾತಂತ್ರ್ಯಗಳನ್ನು ಸತತವಾಗಿ ಮರುವ್ಯಾಖ್ಯಾನಿಸುತ್ತಲೇ ಸಾಗಿದ್ದು ಅನಿಸುತ್ತೆ. ಸರ್ಕಾರವನ್ನು ಪ್ರಶ್ನೆ ಕೇಳುವುದೇ ದೇಶದ್ರೋಹವೆಂದು ಬಗೆಯಲಾಗುತ್ತಿರುವ ಇಂದಿನ ದಿನಮಾನದಲ್ಲಿ ತಾತನ ಬದುಕು ಆದರ್ಶ ಪೌರತ್ವದ ಆಚರಣೆ ಎನಿಸುತ್ತದೆ. ‘It is not the Government’s job to keep its Citizens in check, but the other way around. The Citizens need to keep the Governments in check’ ಎಂಬ ಮಾತಿದೆ. ದೊರೆಸ್ವಾಮಿಯವರು ತಮ್ಮ ಜೀವನದುದ್ದಕ್ಕೂ ಪ್ರಯತ್ನ ಮಾಡಿದ್ದು ಅದನ್ನೇ.

ಬಹುತೇಕ ಸ್ವಾತಂತ್ರ್ಯ ಹೋರಾಟಗಾರರು 1947ರ ನಂತರ ಇಲ್ಲ ಅಧಿಕಾರ ರಾಜಕಾರಣದೆಡೆ ನಡೆದುಬಿಟ್ಟರು, ಇಲ್ಲ ತಮ್ಮ ಕೆಲಸ ಮುಗಿಯಿತೆಂದು ನಿವೃತ್ತರಾಗಿಬಿಟ್ಟರು. ದೊರೆಸ್ವಾಮಿಯವರ ವಿಶೇಷತೆಯೆಂದರೆ, ಅವರು ಎರಡೂ ಮಾಡಲಿಲ್ಲ. ಅವರು ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸಿನಿಂದಲೂ ಹೊರಬಂದುಬಿಟ್ಟರು. ಅಷ್ಟೇ ಅಲ್ಲ ಅವರು ಜೀವನದುದ್ದಕ್ಕೂ ಯಾವುದೇ ಸಂಘಟನೆಯನ್ನು ಕಟ್ಟಲಿಲ್ಲ, ಯಾವುದೇ ಸಂಘಟನೆಯ ಜೊತೆ ಸಂಪೂರ್ಣವಾಗಿ ಗುರುತಿಸಿಕೊಳ್ಳಲಿಲ್ಲ. ಎಲ್ಲ ಸಾಮಾಜಿಕ ಹೋರಾಟಗಳು, ಸಂಘಟನೆಗಳಲ್ಲಿ ದೊರೆಸ್ವಾಮಿಯವರು ಇದ್ದರು, ಆದರೆ ತಾವರೆ ಎಲೆಯ ಮೇಲಿನ ನೀರಿನ ಗುಳ್ಳೆಯಂತೆಯೇ ಇದ್ದರು. ಸ್ವಾತಂತ್ರ್ಯಾ ನಂತರ ದೊರೆಸ್ವಾಮಿಯವರು ತಮ್ಮ ಇಡೀ ಜೀವನದಲ್ಲಿ ಎಂದೂ ಚುನಾವಣೆಗೆ ನಿಲ್ಲಲಿಲ್ಲ, ಯಾವುದೇ ಸಾರ್ವಜನಿಕ ಹುದ್ದೆಯನ್ನು ಅಲಂಕರಿಸಲಿಲ್ಲ. ಕಡೆಗೆ ದೊರೆಸ್ವಾಮಿಯವರು ಒಬ್ಬ ಪ್ರಜ್ಞಾವಂತ ಪೌರನಾಗಿ ತನ್ನ ಕರ್ತವ್ಯ ನಿರ್ವಹಿಸಿದರಷ್ಟೆ, ಪೌರತ್ವದ ಶ್ರೇಷ್ಠ ಮಾದರಿಯನ್ನು ಜೀವಿಸಿ ನಮಗೆ ತೋರಿಸಿಕೊಟ್ಟು ಹೋಗಿದ್ದಾರೆ. ಯಾವುದೇ ಅನ್ಯಾಯ, ಸರ್ಕಾರಗಳ ಜನವಿರೋಧಿ ನಿಲುವುಗಳು ಕಂಡರೆ ಬೀದಿಗಿಳಿದು ಪ್ರತಿಭಟಿಸುವುದು, ಅವುಗಳ ಕುರಿತು ಜನಾಭಿಪ್ರಾಯ ರೂಪಿಸುವುದಕ್ಕಾಗಿ ಪತ್ರಕರ್ತರಾದ ದೊರೆಸ್ವಾಮಿಯವರು ಬರೆದರು. ನೀವೇ ಮತ ಚಲಾಯಿಸಿದ ಪಕ್ಷದ ಸರ್ಕಾರವಾದರೂ, ಆಳುವ ಸರ್ಕಾರಗಳನ್ನು ಪ್ರಶ್ನಿಸುವುದು, ಅವು ಎಲ್ಲೆ ಮೀರದಂತೆ ಕಾಯುವುದೇ ದೊರೆಸ್ವಾಮಿಯವರು ತೋರಿಸಿಕೊಟ್ಟ ಪೌರತ್ವದ ಶ್ರೇಷ್ಠ ಮಾದರಿ. ಸರ್ಕಾರ ಜನಪರ ಕೆಲಸ ಮಾಡಿದಾಗ ಅದನ್ನು ಬೆಂಬಲಿಸಲೂ ಬೇಕು, ಆದರೆ ಅದು ಈಗ ಪ್ರಚಲಿತದಲ್ಲಿರುವಂತೆ ಅಂಧ ಭಕ್ತಿಯಾಗಬಾರದು ಎಂದು ನಂಬಿದ್ದವರು ಅವರು. ಸ್ವತಃ ತನ್ನ ಮಾತೃ ಪಕ್ಷವಾದ ಕಾಂಗ್ರೆಸ್ಸಿನ ವಿರುದ್ಧ ದೊರೆಸ್ವಾಮಿಯವರು ಅನೇಕ ಹೋರಾಟಗಳನ್ನು ರೂಪಿಸಿರುವುದೇ ಅದಕ್ಕೆ ಸಾಕ್ಷಿ.

ಗಾಂಧಿವಾದಿಗಳಾದ ದೊರೆಸ್ವಾಮಿಯವರು ಬಹುಶಃ ಸ್ವತಂತ್ರ ಭಾರತದಲ್ಲಿ ಗಾಂಧೀಜಿ ಇನ್ನೂ ಹೆಚ್ಚು ಕಾಲ ಬದುಕಿದ್ದರೆ ಹೇಗೆ ಬದುಕುತ್ತಿದ್ದರೋ, ಹಾಗೆ ಬದುಕಿದವರು ಎಂದು ನನಗನ್ನಿಸುತ್ತೆ. ಸ್ವಾತಂತ್ರ್ಯ ಬಂದು ನೆಹರೂ ದೆಹಲಿಯಲ್ಲಿ ತಿರಂಗಾ ಝಂಡಾ ಹಾರಿಸುತ್ತಿದ್ದರೆ, ಇಡೀ ಸ್ವಾತಂತ್ರ್ಯ ಚಳುವಳಿಯ ರೂವಾರಿ ಗಾಂಧೀಜಿ ಕೊಲ್ಕತ್ತೆಯಲ್ಲಿ ಹತ್ತಿಕೊಂಡು ಉರಿಯುತ್ತಿದ್ದ ಹಿಂದೂ-ಮುಸ್ಲಿಂ ಕೋಮು ದಳ್ಳುರಿಯನ್ನು ತಹಬಂದಿಗೆ ತರಲು ಪ್ರಯತ್ನಿಸುತ್ತಿದ್ದರು. ಅಂದು ಅವರು ಉಪವಾಸ ಕೂತಿದ್ದರು, ಪ್ರಾರ್ಥನೆಯಲ್ಲಿ ಇಡೀ ದಿನವನ್ನು ಕಳೆದಿದ್ದರು. ಗಾಂಧೀಜಿ ಸ್ವಾತಂತ್ರ್ಯಾನಂತರ ಕಾಂಗ್ರೆಸ್ಸನ್ನು ಒಂದು ರಾಜಕೀಯ ಪಕ್ಷವಾಗಿ ವಿಸರ್ಜಿಸಬೇಕು ಎಂದು ಬಯಸಿದ್ದರು. “ಸ್ವಾತಂತ್ರ್ಯ ಪಡೆಯಲು ಬಲಿದಾನ ಮಾಡಿದ ಸಂಸ್ಥೆ, ದೇಶದಿಂದ ಇಂಗ್ಲಿಷರನ್ನು ಓಡಿಸಿ ಗುಲಾಮಗಿರಿಯಿಂದ ದೇಶವನ್ನು ಪಾರು ಮಾಡಿದ ಕಾಂಗ್ರೆಸ್ ಸಂಸ್ಥೆಯು ಮುಂಚೂಣಿಯಲ್ಲಿರುವವರೆಗೆ ಸತತವಾಗಿ ಅಧಿಕಾರದಲ್ಲಿರಬೇಕು, ಅಧಿಕಾರ ಅನುಭವಿಸಬೇಕು ಎಂಬ ಹಂಬಲ ಸಹಜವಾಗಿಯೇ ಇರುತ್ತದೆ. ಆದರೆ ಕಾಂಗ್ರೆಸ್ ಅಧಿಕಾರ ದಾಹ ಬಿಟ್ಟು ರಾಜಕೀಯದಿಂದ ನಿವೃತ್ತಿ ಆಗಿ ಲೋಕಸೇವಾಸಂಘವಾಗಿ ಪರಿವರ್ತನೆಯಾಗಬೇಕು, ದುರಾಡಳಿತ ನಡೆಸುವ ಸರ್ಕಾರ ಮತ್ತು ಪಕ್ಷದ ವಿರುದ್ಧ ಸಂಘರ್ಷ ನಡೆಸಬೇಕು (ಬ್ರಿಟಿಷರ ವಿರುದ್ಧ ಹೋರಾಡಿದ ರೀತಿಯಲ್ಲೇ) ಎಂಬುದು ಗಾಂಧೀಜಿಯ ಆಶಯವಾಗಿತ್ತು.. ಆದರೆ ಅಂದಿನ ಕಾಂಗ್ರೆಸ್ ಧುರೀಣರು ಗಾಂಧೀಜಿಯವರ ಈ ಮಾತನ್ನಾಗಲೀ, ಅದರ ಹಿಂದಿನ ಉದ್ದೇಶವನ್ನಾಗಲೀ ಕೇಳಲಿಲ್ಲ ಎಂದು ಇದೇ ಪತ್ರಿಕೆಯ ’ನೂರರ ನೋಟ’ ಅಂಕಣದಲ್ಲಿ ಏಪ್ರಿಲ್ 2018ರಲ್ಲಿ ದೊರೆಸ್ವಾಮಿಯವರು ಬರೆಯುತ್ತಾರೆ.

ಕಾಂಗ್ರೆಸ್ಸಿಗರು ಕೇಳಲಿಲ್ಲ ನಿಜ. ಆದರೆ ದೊರೆಸ್ವಾಮಿಯವರು ಆ ಕರೆಗೆ ಓಗೊಟ್ಟರು ಮತ್ತು ಜೀವನಪರ್ಯಂತ ಹಾಗೇ ಬದುಕಿದರು ಕೂಡ – ‘ಪೌರವಾಣಿ’ಯಾಗಿ, ಆಳ್ವಿಕೆಗೆ ಬಂದ ಎಲ್ಲ ಸರ್ಕಾರಗಳಿಗೆ ಶಾಶ್ವತ ವಿರೋಧ ಪಕ್ಷವಾಗಿ. ಸ್ವಾತಂತ್ರ್ಯ ಬಂದು ನಮ್ಮವರದೇ ಸರ್ಕಾರ ಬಂದಕೂಡಲೇ ಎಲ್ಲವೂ ಸರಿಹೋಗುತ್ತೆ ಎಂಬ ಯಾವ ಉಟೋಪಿಯಾ ಅವರಿಗೆ ಇದ್ದಂತಿರಲಿಲ್ಲ. ಜನಸಾಮಾನ್ಯರ ನಡುವೆಯೇ ಬದುಕುತ್ತಿದ್ದ ದೊರೆಸ್ವಾಮಿಯವರಿಗೆ ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂಬುದರ ಅರಿವು ಚೆನ್ನಾಗಿತ್ತು ಅನ್ನಿಸುತ್ತೆ. ಪ್ರಜಾಪ್ರಭುತ್ವದಲ್ಲಿ ಆಳುವ ಸರ್ಕಾರವನ್ನು ಪ್ರಶ್ನಿಸುವುದರ ಪ್ರಾಮುಖ್ಯತೆಯನ್ನು ಬಲ್ಲವರಾಗಿದ್ದರು ಅವರು. ಅದಕ್ಕೆ ಅವರ ಚಳುವಳಿಯ ಹಿನ್ನೆಲೆ, ಗಾಂಧೀಜಿಯ ಅನಾರ್ಕಿಯ ಸೆಲೆಗಳು ಮತ್ತು ಒಬ್ಬ ಪತ್ರಕರ್ತನಾಗಿ ವ್ಯವಸ್ಥೆಯನ್ನು ಪ್ರಶ್ನಿಸುವ ಸಹಜ ಪ್ರವೃತ್ತಿ ಅವರ ಪ್ರಜ್ಞೆಯನ್ನು ಸದಾ ಜಾಗೃತವಾಗಿಟ್ಟಿತ್ತು.

ಅವರು ಮನಸ್ಸು ಮಾಡಿದ್ದರೆ ಎಂದೋ ಮಂತ್ರಿಯಾಗಬಹುದಿತ್ತು, ಅಧಿಕಾರ ರಾಜಕಾರಣಕ್ಕೆ ಹೋಗಿದ್ದರೆ ಮುಖ್ಯಮಂತ್ರಿಯೂ ಆಗುತ್ತಿದ್ದರೋ ಏನೋ ಬಲ್ಲವರಿಲ್ಲ, ಆದರೆ ಅವರಿಗೆ ಅದರಲ್ಲಿ ಎಳ್ಳಷ್ಟೂ ಆಸಕ್ತಿ ಇರಲಿಲ್ಲ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರು ದೊರೆಸ್ವಾಮಿಯವರನ್ನು ಕರೆದು ಮಂತ್ರಿ ಮಾಡುತ್ತೇನೆ ಅಂದರಂತೆ. ಅದಕ್ಕೆ ದೊರೆಸ್ವಾಮಿಯವರು ತಾನು ಸರ್ಕಾರದ ತಪ್ಪುಗಳ ಬಗ್ಗೆ ಮಾತಾಡುವುದು ನಿಲ್ಲ್ಲಿಸುವುದಿಲ್ಲ ಎಂದದ್ದಕ್ಕೆ, ಕೆಂಗಲ್ ಅವರು ಹಾಗೆ ಮಾಡುವಂತಿಲ್ಲ ಎಂದರಂತೆ. ದೊರೆಸ್ವಾಮಿಯವರು ಕೈಮುಗಿದು ಎದ್ದು ಬಂದುಬಿಟ್ಟರು. ಇತ್ತೀಚೆಗೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ದೊರೆಸ್ವಾಮಿಯವರ ಬಳಿ ಕೊಂಚ ಸಲುಗೆಯಿತ್ತು. ತಾತ ಇನ್ನೂ ಬಾಡಿಗೆ ಮನೆಯಲ್ಲೇ ಇರುವುದು ತಿಳಿದು ಸರ್ಕಾರದಿಂದ ಸ್ವಂತ ಮನೆ ಮಂಜೂರು ಮಾಡುವ ಪ್ರಸ್ತಾಪ ಇಟ್ಟಾಗ ಅದನ್ನೂ ತಿರಸ್ಕರಿಸಿದರು. ಬಹುಶಃ ಸ್ವತಂತ್ರ್ಯ ಯೋಧರ ಪಿಂಚಣಿ ಒಂದನ್ನು ಬಿಟ್ಟು ಸರ್ಕಾರದಿಂದ ಅವರು ಯಾವ ಸವಲತ್ತನ್ನೂ ಪಡೆದವರೇ ಅಲ್ಲ. ಸಿದ್ಧರಾಮಯ್ಯನವರಿಗೆ ದೊರೆಸ್ವಾಮಿಯವರಲ್ಲಿ ಇದ್ದ ಸಲುಗೆ ಅವರು ಬರೆದ ಲೇಖನದಲ್ಲಿ ಕಂಡುಬರುತ್ತದೆ. ಹೇಗೆ ದೊರೆಸ್ವಾಮಿಯವರು ಒಮ್ಮೆಯೂ ವೈಯಕ್ತಿಕವಾದ ಯಾವುದೇ ವಿಷಯಕ್ಕೆ ತಮ್ಮನ್ನು ಭೇಟಿಯಾಗಲಿಲ್ಲವೆಂದು ಹೇಳುತ್ತಾ, “ಸ್ವಾರ್ಥದ ಲವಲೇಶವೂ ಇಲ್ಲದ ಅವರ ಕಠೋರ ನೈತಿಕತೆ ಎದುರು ರಾಜಕಾರಣದಲ್ಲಿರುವ ನಾವೆಲ್ಲರೂ ತಲೆ ತಗ್ಗಿಸಲೇಬೇಕಾಗುತ್ತಿತ್ತು” ಎಂದು ಬರೆಯುತ್ತಾರೆ. ಹಾಗೆಯೇ ಅವರು “ಕೊಡಗಿನಲ್ಲಿ ಭೂಮಾಲೀಕರು ಬಡ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಕೆಂಡಾಮಂಡಲವಾಗಿದ್ದ ದೊರೆಸ್ವಾಮಿಗಳು ನನ್ನ ಜೊತೆ ಜಗಳಕ್ಕೆ ನಿಂತಿದ್ದನ್ನು ನಾನು ಮರೆಯಲಾರೆ” ಎಂದೂ ಬರೆಯುತ್ತಾರೆ. ಮುಂದುವರೆದು ಹೀಗೆ ಧಾಖಲಿಸುತ್ತಾರೆ: “ವೈಯಕ್ತಿಕವಾಗಿ ನನ್ನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ನನಗೆ ಅವರ ಬಗ್ಗೆ ಅಷ್ಟೇ ಗೌರವ ಇತ್ತು. ದೊರೆಸ್ವಾಮಿಯವರು ಭೇಟಿಯಾಗಲು ಬರುತ್ತಾರೆಂದ ಕೂಡಲೆ ನಾನು ಸ್ವಲ್ಪ ವಿಚಲಿತನಾಗುತ್ತಿದ್ದೆ. ರಾಜಕೀಯದ ಚಕ್ರವ್ಯೂಹದೊಳಗಿದ್ದು ನಮ್ಮದೇ ಇತಿಮಿತಿಯೊಳಗೆ ಕೆಲಸಮಾಡಬೇಕಾದ ನನ್ನಂತಹವರಿಗೆ ದೊರೆಸ್ವಾಮಿಯವರಂತಹ ಪ್ರಾಮಾಣಿಕ ಹೋರಾಟಗಾರರ ಎಲ್ಲ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಾಗುತ್ತಿತ್ತು”. ಅದೇ ದೊರೆಸ್ವಾಮಿಯವರ ಶಕ್ತಿಯಾಗಿತ್ತು, ಆಳುವ ಮುಖ್ಯಮಂತ್ರಿಯಲ್ಲಿ ಇಂಥದೊಂದು ಅಳುಕು, ಭಯವನ್ನು ಒಬ್ಬ ಪ್ರಜ್ಞಾವಂತ ಪೌರನಾಗಿಯಷ್ಟೆ ದೊರೆಸ್ವಾಮಿಯವರು ಮೂಡಿಸುತ್ತಿದ್ದರು.

ಇನ್ನು ಇತರೆ ಅನೇಕ ಹೋರಾಟಗಾರರಂತೆ ದೊರೆಸ್ವಾಮಿಯವರು ಒಂದು ವಿಷಯಕ್ಕೆ ಅಂಟಿಕೊಂಡವರಲ್ಲ. ಅವರು ಸ್ವಾತಂತ್ರ್ಯ ಭಾರತದ ಪ್ರಜ್ಞಾಪ್ರವಾಹದೊಂದಿಗೆ ನಡೆಯುತ್ತಾ ತಮ್ಮ ಸುತ್ತಲಿನ ಸಮಾಜ ಬಗ್ಗೆ ಒಂದು ಆಳದ ಸಮಷ್ಠಿ ಪ್ರಜ್ಞೆ, ಜನಪರತೆ ಮತ್ತು ನೈತಿಕತೆಯೊಂದಿಗೆ ಪ್ರತಿಕ್ರಿಯಿಸುತ್ತಾ ಹೋದರಷ್ಟೆ. ಹಾಗೆ ಮಾಡುತ್ತಾ ಅವರು ಸ್ವಾತಂತ್ರ್ಯವನ್ನು ಮರಳಿ ಮರಳಿ ಮರು ವ್ಯಾಖ್ಯಾನಿಸುತ್ತಾ ಹೋದರು. ಭೂಮಿ ಹಕ್ಕು, ತುರ್ತು ಪರಿಸ್ಥಿತಿಯಲ್ಲಿ ವೈಯಕ್ತಿಕ ಸಾಮಾಜಿಕ ಹಕ್ಕುಗಳು, ಮಾನವ ಹಕ್ಕುಗಳು, ಪರಿಸರ ನ್ಯಾಯ, ಗ್ರಾಹಕ ಹಕ್ಕುಗಳು, ವಾಕ್ ಸ್ವಾತಂತ್ರ್ಯ, ನವ ಆರ್ಥಿಕತೆಯ ಅಭಿವೃದ್ಧಿಯ ಮಾದರಿ, ಭ್ರಷ್ಟಾಚಾರ ಮತ್ತು ಕೋಮುವಾದದ ವಿರುದ್ಧ ಹೋರಾಟ ಹೀಗೆ.

ನಮ್ಮ ಸುತ್ತಲಿನ ಪರಿಸರ, ಸಮಾಜದ ಬಗ್ಗೆ ಒಂದು ನೈತಿಕ ಮತ್ತು ಸಮಷ್ಟಿ ಪ್ರಜ್ಞೆಯೊಂದಿಗೆ ಪ್ರತಿಕಿಯಿಸುತ್ತಾ, ಪಕ್ಷಾತೀತವಾಗಿ ಎಲ್ಲ ಸರ್ಕಾರಗಳನ್ನೂ ಪ್ರಶ್ನೆ ಮಾಡುತ್ತಾ ಅವುಗಳು ಎಲ್ಲೆ ಮೀರದಂತೆ, ಜನಪರ ಕೆಲಸ ಮಾಡುವಂತೆ ಒತ್ತಡ ಹಾಕಿ ಕೆಲಸ ಮಾಡುವುದೇ ಪ್ರಜಾಪ್ರಭುತ್ವದಲ್ಲಿ ಪೌರರೆಲ್ಲರ ಪವಿತ್ರ ಕರ್ತವ್ಯ. ಅದನ್ನು ನಾವೆಲ್ಲರೂ ನಿರ್ವಹಿಸುವುದೇ ತಾತನಿಗೆ ನಾವು ಸಲ್ಲಿಸುವ ನಿಜವಾದ ಗೌರವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...