HomeUncategorizedನೊವೆಲ್ ಕೊರೋನಾ ವೈರಸ್ ಭಾರತಕ್ಕೆ ಬಂದರೆ?ಬೈ ಡೇಟಾಮ್ಯಾಟಿಕ್ಸ್

ನೊವೆಲ್ ಕೊರೋನಾ ವೈರಸ್ ಭಾರತಕ್ಕೆ ಬಂದರೆ?ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ತಮ್ಮ ಪ್ರಾಮಾಣಿಕ ಸೇವೆಯಿಂದಾಗಿ ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿದ ಕರ್ನಾಟಕದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರು ಸಣ್ಣ ವಯಸ್ಸಿನಲ್ಲಿಯೇ ತೀರಿಹೋದರು.

ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುತ್ತಲೇ ಜೀವನ ಸವೆಸಿದ ಅವರು ಒಂದು ಅರ್ಥದಲ್ಲಿ ಅಭಿನವ ಅಭಿಮನ್ಯು. ಹೈದರಾಬಾದಿನ ಪೋಲೀಸ್ ಅಕಾಡೆಮಿಯಲ್ಲಿ ಯುವ ಅಧಿಕಾರಿಗಳಿಗೆ ಜಂಗಲ್ ಹೋರಾಟದ ತರಬೇತಿ ನೀಡುತ್ತಿದ್ದಾಗ ಅವರಿಗೆ ಸೋಂಕು ತಗುಲಿತು. ಒಂದೇ ದಿವಸದಾಗ ಅದು ಅವರ ಹೃದಯಕ್ಕೆ ವ್ಯಾಪಿಸಿತು. ಅಮೆರಿಕೆಯಲ್ಲಿ ಇದ್ದ ಅವರ ಪತ್ನಿ ಹಾಗೂ ಮಗಳು ಭಾರತಕ್ಕೆ ಬರೋ ಮುಂಚೆ ಅವರ ಕೊನೆಯುಸಿರು ಎಳೆದಿದ್ದರು. ಅದು ಎಚ್1 ಎನ್1 ವೈರಸ್ ಇರಬಹುದು ಅಂತ ಕೆಲವರು ಹೇಳಿದರು.

ಅವರಿಗೆ ಏನಾಗಿತ್ತು? ಅದಕ್ಕೆ ಔಷಧ ಏನು? ಅದನ್ನು ಗುಣಪಡಿಸಲಿಕ್ಕೆ ಯಾಕೆ ಆಗಲಿಲ್ಲ? ಈ ಪ್ರಶ್ನೆಗಳು ಜನರನ್ನು ಕಾಡಿದವು. ಐಜಿಪಿ ಮಟ್ಟದ ಐಪಿಎಸ್ ಅಧಿಕಾರಿಗೆ ಈ ಪರಿಸ್ಥಿತಿಯಾದರೆ ಇತರರಿಗೆ ಏನು ಅಂತ ಎಲ್ಲಾರೂ ಮಾತಾಡಲಿಕ್ಕೆ ಹತ್ತಿದರು. ಇದನ್ನು ಪತ್ತೆ ಹಚ್ಚಲಿಕ್ಕೆ ರಾಜ್ಯಸರಕಾರ ಡಾ. ದೇವಿಪ್ರಸಾದ ಶೆಟ್ಟಿ ಅವರ ಅಧ್ಯಕ್ಷತೆಯೊಳಗ ಒಂದು ಸಮಿತಿ ನೇಮಿಸಿತು. ಅದರ ವರದಿ ಇನ್ನೂ ಬಂದಿಲ್ಲ.

ಈ ವಾರದ ಸುದ್ದಿ ಏನಪಾ ಅಂದರ ಚೈನಾದಾಗ ನೊವೆಲ್ ಕೊರೋನಾ ಅಥವಾ ಹೊಸಾ ಕಿರೀಟಿ ವೈರಸ್ ಅಂತ ಪತ್ತೆ ಆಗೇದ.

ಆರ್ಥೋ ಕರೋನೊವಿರಿನೆ ಜಾತಿಯ ನಿಡೋವಿರಲೇ ಉಪಜಾತಿಯ ಈ ವೈರಸ್ಸು ನೋಡಲಿಕ್ಕೆ ಕಿರೀಟದಂಗ ಕಾಣತದ ಅಂತ ಇದಕ್ಕ ಕೊರೋನಾ ಅಥವಾ ಕಿರೀಟಿ ವೈರಸ್ ಅಂತಾರ. ಇದು ಆರ್‍ಎನ್‍ಎ ವೈರಸ್ಸು, ಪ್ರಾಣಿ ಹಾಗೂ ಮನುಷ್ಯನಲ್ಲಿ ಇದು ಪುಪ್ಪಸದ ಕೆಲಸ ನಿಲ್ಲಸತದ. ಉಸಿರಾಟ ಸಾಧ್ಯವಾಗದೇ ಸಾವು ಬರತದ. ಇದಕ್ಕೆ ಪರಿಹಾರವಾಗಲಿ, ಲಸಿಕೆ ಆಗಲೀ, ಇನ್ನೂ ಇಲ್ಲ.

ಅದು ವುಹಾನ್ ಪ್ರಾಂತದ ಸುಮಾರು 5,000 ಜನಕ್ಕ ಸೋಂಕಿರಬಹುದು ಅಂತ ಅಂದಾಜು. ಅದರಿಂದ ಸುಮಾರು 100 ಜನ ಸತ್ತು ಹೋಗ್ಯಾರ. ಅಲ್ಲಿಂದ ಬಂದವರು ಕೆಲವರಿಗೆ ಅದು ಬಂದಿರಬಹುದು ಅಂತ ಅಮೆರಿಕಾದ ಅವರನ್ನು ಡಾಕ್ಟರ್‍ಗಳ ನೋಡಕೊಳ್ಳಲಿಕ್ಕೆ ಹತ್ಯಾರ. ಭಾರತದಾಗೂ ಸಹ ಕೆಲವರಿಗೆ ಅದು ಬಂದಿರಬಹುದು ಅಂತ ಸಂಶಯ. ಇಲ್ಲಿಯವರೆಗೂ ಅದು ಯಾರಿಗೂ ಬಂದಿರೋ ಖಾತ್ರಿ ಆಗಿಲ್ಲ ಅಂತ ಸರಕಾರ ಹೇಳೇದ. ಭಾರತದ ಎಲ್ಲಾ ವಿಮಾನ ನಿಲ್ದಾಣದೊಳಗ ಒಂದು ವಿಶೇಷ ಕೌಂಟರ್ ಮಾಡಿ ಅವರನ್ನು ಚೆಕ್ ಮಾಡಲಿಕ್ಕೆ ಹತ್ಯಾರ.

ಆದರ ಇದು ಸುದ್ದಿ ಅಲ್ಲ.
ಚೈನಾದ ವುಹಾನ್ ಪ್ರಾಂತದಾಗ ಈ ಸೋಂಕು ಪತ್ತೆ ಆದಮ್ಯಾಲೆ ಅಲ್ಲಿಯವರು ಏನು ಮಾಡಿದರು ಅಂತ ಅನ್ನೋದು ವಿಶೇಷ. ಮೊದಲನೇ ರೋಗಿ ಪತ್ತೆ ಆದ 24 ತಾಸಿನೊಳಗ ಆ ವೈರಸ್ಸಿನ ಸಂಪೂರ್ಣ ಅಧ್ಯಯನ ನಡೀತು. ಅದರ ಜೀನೋಮು ಮ್ಯಾಪಿಂಗ್ ಅಂದರ ವಿಜ್ಞಾನಿಗಳು ಅದರ ವಂಶವಾಹಿನಿ ತಳಿಯನ್ನ ಪ್ರತ್ಯೇಕಿಸಿ ಅಭ್ಯಾಸ ಮಾಡಿದರು. ರೋಗಿಗಳ ಸಂಖ್ಯೆ ಹೆಚ್ಚು ಆದಂಗೆಲ್ಲಾ ಅವರನ್ನ ಪ್ರತ್ಯೇಕಿಸಿ ಇಡಲಾತು. ಇನ್ನೂ ಹೆಚ್ಚು ಆದಂಗ ಇವರ ಸಲುವಾಗೇನ ಒಂದು ವಿಶೇಷ ಆಸ್ಪತ್ರೆ ಕಟ್ಟಬೇಕು ಅಂತ ನಿರ್ಧಾರ ಆತು. ಹತ್ತು ದಿನದಾಗ ಆ ಆಸ್ಪತ್ರೆ ಕಟ್ಟಡ ಕಟ್ಟಬೇಕು ಅಂತ ಒಂದು ನೂರು ಭೂಚಾಲಕ ಯಂತ್ರಗಳನ್ನು ಕೆಲಸಕ್ಕೆ ಹಚ್ಚಲಾಗೇದ. ಅದು ಮುಗೀಲಿಕ್ಕೆ ಬಂದದ. ಅದಕ್ಕೆ ವಿಶೇಷ ತರಬೇತಿ ಪಡೆದ ಡಾಕ್ಟರಗಳನ್ನು ನೇಮಿಸಲಾಗೇದ.

ಸೋಂಕು ಹಬ್ಬೇದ ತಪ್ಪಸಬೇಕು ಅಂತ ಚೈನಾ ಸರಕಾರ ವುಹಾನ ಪ್ರಾಂತದ ಸುಮಾರು 50 ಲಕ್ಷ ಜನರನ್ನು ಒಂದು ವಾರದಾಗ ಬೇರೆ ಕಡೆ ಸ್ಥಳಾಂತರ ಮಾಡೇದ. ಇನ್ನೂ ತೊಂಬತ್ತು ಲಕ್ಷ ಜನರನ್ನು ಸ್ಥಳಾಂತರಿಸತೇವಿ ಅಂತ ಅಲ್ಲಿನ ಸರಕಾರಿ ವಕ್ತಾರರು ಹೇಳ್ಯಾರ. `2012′ ಅನ್ನೋ ಹೆಸರಿನ ಸಿನಿಮಾದಾಗ ವಿಶ್ವದ ಎಲ್ಲಾ ನಾಯಕರು ಲಕ್ಷಾಂತರ ಜನರನ್ನ ಸಮುದ್ರದಾಗ ಬೇರೆ ಕಡೆ ಕರಕೊಂಡು ಹೋಗಬೇಕು ಅಂತ ನಿರ್ಧಾರ ಮಾಡತಾರ. ಆದರ ಅಷ್ಟು ಜನರನ್ನ ಕರಕೊಂಡು ಹೋಗೋವಂಥಾ ಹಡಗು ಕಟ್ಟುವವರು ಯಾರು ಅಂತ ಒಬ್ಬವ ಕೇಳಿದಾಗ ಅಮೆರಿಕದ ವಿಜ್ಞಾನಿಯೊಬ್ಬ ಇಂಥದೆಲ್ಲಾ ಮಾಡೋರ ಚೈನಾದವರಷ್ಟ, ಅಂತ ಹೇಳತಾನ.  ಅಷ್ಟೋತ್ತಿಗೆ ಚೈನಾದವರು ನಾವಾಗಲೇ ಮಾಡಿ ಬಿಟ್ಟೇವಿ ಅಂತ ಹೇಳತಾರ. ಅವರೆಲ್ಲರನ್ನೂ ಸುರಕ್ಷಿತ ಕರಕೊಂಡು ಹೋಗತಾರ.

ಚೈನಾದವರ ಚುರುಕುತನ ಎಲ್ಲರಿಗೂ ಜಗಜ್ಜಾಹೀರು ಆಗೇದ ಅಂತ ಆತು. ನಾವು ಹಿಂಗ ಆಗೋದು ಯಾವಾಗ? ನಮ್ಮಲ್ಲೆ ಒಂದೊಂದು ನಿರ್ಧಾರ ತೊಗೊಳ್ಳೋದು ವರ್ಷಾನುಗಟ್ಟಲೇ ತಡ ಆಗತದ. ಸ್ವಾತಂತ್ರ ಬಂದು 70 ವರ್ಷ ಆದರೂ ಸಹ ‌ ಎಷ್ಟೋ ಜಿಲ್ಲೆ / ತಾಲೂಕುದಾಗ ಶಿಕ್ಷಿತ ಡಾಕ್ಟರುಗಳು ಇಲ್ಲ. ಗಡಿ ತಾಲೂಕುಗಳಾದ ಔರಾದ, ಖಾನಾಪುರ, ಕೊಳ್ಳೇಗಾಲ ಮುಂತಾದ ಕಡೆ ಸ್ನಾತಕೋತ್ತರ ಪದವಿ ಪಡೆದ ಒಬ್ಬ ವೈದ್ಯರೂ ಇಲ್ಲ. ಎಷ್ಟೋ ಜಿಲ್ಲಾ ಆಸ್ಪತ್ರೆಯೊಳಗ ಹಾವು ಕಡಿತಕ್ಕ ಔಷಧಿ ಇಲ್ಲ. ಬ್ರಿಟಿಷರ ಕಾಲದಾಗ ಶುರುವಾದ ಮಲೇರಿಯಾ ಕಂಟ್ರೋಲ್ ಪ್ರೋಗ್ರಾಮು ಇನ್ನೂ ನಡಿಲಿಕ್ಕೆ ಹತ್ತೇದ. ಪ್ರತಿ ಮಾನಸೂನಿನ್ಯಾಗ ಅತಿ ಮುಂದುವರೆದ ಮಂಗಳೂರು ನಗರದಾಗ ಅತಿಹೆಚ್ಚು ಮಲೇರಿಯಾ ರೋಗಿಗಳು ಆಸ್ಪತ್ರೆಗೆ ದಾಖಲಾಗತಾರ. ಆಸ್ಪತ್ರೆಯೊಳಗ ಆಮ್ಲಜನಕ ಇಲ್ಲದೇ ಕೂಸು ಸಾಯತಾವ. ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಅತಿ ಹೆಚ್ಚಿರುವ ದೇಶಗಳೊಳಗ ನಮ್ಮದೂ ಒಂದು. ಬಾಣಂತಿಯರ ಸಾವು, ಗುಣಪಡಿಸಬಹುದಾದ ರೋಗದಿಂದ ಸಾಯುವವರ ಸಂಖ್ಯೆ ನಮ್ಮ ಸುತ್ತಮುತ್ತಲಿನ ದೇಶಗಳಿಗಿಂತ ನಮ್ಮಲ್ಲಿ ಹೆಚ್ಚು. ಇವು ಯಾವಾಗ ಸಮಾ ಆಗಬೇಕು? ಛಲೋ ಪರಿಚಯ, ಅನುಭವ ಇರೋ ರೋಗಗಳ ಹಣೆಬರಹಾನ ಹಿಂಗ ಅಂದರ ನಮಗೇನರ ಹೊಸಾ ರೋಗ ಬಂದರ ಹೆಂಗ?

ಅಂದಂಗ ಒಂದು ಮಾತು. ಇದು ಜೋಕು ಅಲ್ಲ. ನಡೆದುಹೋದ ವಿಷಯ.

ಕನ್ನಡವನ್ನು ಬಾಳೆಹಣ್ಣು ಸುಲದು ಸಿಪ್ಪಿ ಬಿಸಾಡುವಷ್ಟು ಸುಲಲಿತವಾಗಿ ಮಾತಾಡುವ ಯುವ ನಾಯಕ ಶ್ರೀರಾಮುಲು ಅವರು ಹಿಂದೊಮ್ಮೆ ಆರೋಗ್ಯ ಸಚಿವರಾಗಿದ್ದಾಗ ಒಂದು ಧುರಂದರ ಘೋಷಣೆ ಮಾಡಿದ್ದರು. ನಮ್ಮ ಆಡಳಿತದಾಗ ಆರೋಗ್ಯ ಇಲಾಖೆ ಎಷ್ಟು ಗಟ್ಟಿ ಆಗೇದ ಅಂದರ ನಾವು ಎಚ್1 ಎನ್1 ಅಲ್ಲಾ, ಎಚ್10 ಎನ್10 ಇದ್ದರೂ ನಾವು ಸಂಭಾಳಸತೇವಿ ಅಂತ. ಆ ಅಚ್ಛೇ ದಿನ ಬಂದೀತು ಅಂತ ನಾವೆಲ್ಲಾ ಕಾಯಕೊಂಡು ಇದ್ದೇವಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...