Homeಕರ್ನಾಟಕದೊರೆ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಯಾಗುತ್ತಾರೆ ಎಂದ ವಿಶಿಷ್ಟ ವ್ಯಕ್ತಿ ಪೊನ್ನಮ್ಮಾಳ್

ದೊರೆ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಯಾಗುತ್ತಾರೆ ಎಂದ ವಿಶಿಷ್ಟ ವ್ಯಕ್ತಿ ಪೊನ್ನಮ್ಮಾಳ್

- Advertisement -
- Advertisement -

ಹಣಕ್ಕಿರುವ ‘ಖರೀದಿ ಗುಣ’ ವಿಪರೀತವಾಗಿರುವ ಕಾಲವಿದು. ಎಲ್ಲವನ್ನೂ ಖರೀದಿಸುವ ತೆವಲು ರಾಜಕಾರಣವನ್ನು ಬಹುಕೋಟಿ ಹೂಡಿಕೆಯ ವ್ಯವಹಾರವಾಗಿಸಿದೆ. ಜನಸಾಮಾನ್ಯರು ಹಣದ ಹರಿವಿನ ರಭಸಕ್ಕೆ ತತ್ತರಿಸಿದ್ದಾರೆ. ಅಲ್ಲಿಯ ಏರುಪೇರುಗಳನ್ನು ಮನರಂಜನೆಯೆಂಬ ಸಿನಿಕತನದಲ್ಲಿ ನೋಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಕರ್ನಾಟಕದ ರಾಜಕಾರಣ ನಡೆದುಬಂದ ಬಗೆಯನ್ನು, ಅದರಲ್ಲಿ ಬೆರೆತ ಮಹಿಳಾ ಸಂವೇದನೆಯ ಎಳೆಗಳನ್ನು ಕಾಣಬೇಕೆನಿಸಿತು. ಈಗ, ನಾಗರಿಕ ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿಯಂತೆ ರಾಜಕಾರಣದಲ್ಲಿಯೂ ಮಹಿಳೆ ಪಿತೃತ್ವದ ಸ್ಥಾಪಿತ ಮಾದರಿಯಲ್ಲಿ ಸೇರಿಹೋಗಿದ್ದಾಳೆ. ಪ್ರತ್ಯೇಕ ಚಹರೆ ಇಲ್ಲದಂತೆ.

ಜಗತ್ತಿನ ಎಲ್ಲ ಚಳುವಳಿಗಳಂತೆ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಮಹಿಳಾ ಪಾಲುದಾರಿಕೆ ಗಣನೀಯವಾಗಿತ್ತು. ಸ್ವಾತಂತ್ರ್ಯಾನಂತರದ ಭಾರತದ ಅಧಿಕಾರ ರಾಜಕಾರಣ ಮಹಿಳೆಯರ ಯೋಗ್ಯತೆಯನ್ನು ನಿರ್ಲಕ್ಷಿಸಿತು. 1952 ರ ಪಾರ್ಲಿಮೆಂಟರಿ ಚುನಾವಣೆಯಲ್ಲಿ ಚುನಾಯಿತರಾದವರು ಕೇವಲ ನಾಲ್ವರು ಮಾತ್ರ. ಈ ಅನುಪಾತದಲ್ಲೀಗ ಏರಿಕೆಯಾಗಿದೆ. ಆದರೆ ಏರಿಕೆ ದಾಖಲಾರ್ಹವಾಗೇನೂ ಇಲ್ಲ. ಕರ್ನಾಟಕದ ಮಟ್ಟಿಗೆ ಮಹಿಳಾ ರಾಜಕಾರಣದ ಮಹತ್ವದ ಹೆಸರು ಪೊನ್ನಮ್ಮಾಳ್. ಗಾಂಧೀ ಚಿಂತನೆಯನ್ನು ಬದುಕಿನ ಆದರ್ಶವಾಗಿಸಿಕೊಂಡು, ಸಮಾಜವಾದಿ ಚಿಂತನೆಯನ್ನು ವಿಚಾರಶಕ್ತಿಯಾಗಿಸಿಕೊಂಡು, ಜನಪರ ಕಾರ್ಯಗಳಲ್ಲಿ ಪಕ್ಕಾ ಎಡಪಂಥೀಯ ಕಾರ್ಯಕರ್ತೆಯಾಗಿದ್ದರು ಪೊನ್ನಮ್ಮಾಳ್. 1923 ರಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಜನಿಸಿದ್ದರು. ಇವರ ತಂದೆ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರೀಯರಾಗಿದ್ದರು. ಇವರು 1928ರಿಂದಲೇ ಶಿವಮೊಗ್ಗೆಯಲ್ಲಿ ಭಾರತ ಸೇವಾದಳವನ್ನು ಸ್ಥಾಪಿಸಿದ್ದರು. ಕೌಟುಂಬಿಕ ಪರಿಸರ, ಸೇವಾದಳದ ತರಬೇತಿ ಅವರನ್ನು ಸಾರ್ವಜನಿಕ ಬದುಕಿಗೆ ತಂದಿತ್ತು. ಎಳೆಯ ಮಗುವಾಗಿದ್ದಾಗಲೇ ಗಾಂಧೀಜಿಯ ತೊಡೆಯೇರಿ ಪಡೆದ ಮಾರ್ದವ ಮಮತೆಯನ್ನು ಮನಸ್ಸಿನಲ್ಲಿ ಸಂಚಿತವಾಗಿಟ್ಟುಕೊಂಡಿದ್ದರು. 1942ರ ಕ್ವಿಟ್ ಇಂಡಿಯಾ ಮೂವಮೆಂಟನಲ್ಲಿ ಪೊನ್ನಮ್ಮಾಳ್ ಬಿ.ಎಸ್.ಸಿ. ವಿದ್ಯಾರ್ಥಿನಿ. ವಿದ್ಯಾರ್ಥಿ ಚಳುವಳಿಯಲ್ಲಿದ್ದರು. ಗಾಂಧೀಜಿ ಬಂಧನವಾದ ನಂತರದ ಚಳುವಳಿಯಲ್ಲಿ ಪೂರ್ತಿ ತೊಡಗಿಸಿಕೊಂಡಿದ್ದರು. ಭೂಗತ ಹೋರಾಟಗಳನ್ನೂ ನಡೆಸಿದರು. ಅಂದಿನ ಬೆಂಗಳೂರಿನ ಬೀದಿ-ಬೀದಿಗಳನ್ನು ಚಳುವಳಿಯ ಕೆಲಸಗಳಿಗಾಗಿ ಸುತ್ತುತ್ತಿದ್ದರು. ಕಮಲಾದೇವಿ ಚಟ್ಟೋಪಾಧ್ಯಾಯರನ್ನು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಇಟ್ಟಿದ್ದರು. ಪೊನ್ನಮ್ಮಾಳ ಪೋಲಿಸರ ಭಯ ನೀಗಿಕೊಂಡು ಕಮಲಾದೇವಿಯವರನ್ನು ಕದ್ದು ಭೇಟಿಯಾಗುತ್ತಿದ್ದರು. ಅವರ ಹೋರಾಟದ ವ್ಯಾಪ್ತಿ ವಿಸ್ತಾರವಾಗಿತ್ತು. ಆಗ್ರಾ, ಅಹಮದಾಬಾದ್, ಮುಂಬೈ, ದೆಹಲಿಗಳನ್ನು ಸುತ್ತಿದ್ದರು. ಬಾಪೂಜಿಯ ಹತ್ಯೆಯಾದಾಗ, ತಾಯಿಯ ಅನಾರೋಗ್ಯದ ಕಾರಣದಿಂದ ಆಶ್ರಮದಿಂದ ಶಿವಮೊಗ್ಗೆಗೆ ಬಂದು ದಣೀ 2 ತಿಂಗಳಾಗಿತ್ತು. ಪೊನ್ನಮ್ಮಾಳ್ ಕುದ್ದು ಹೋಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆಯೂ ಪಿಂಚಣಿ ಪಡೆದ ಜನರಿದ್ದ ಕಾಲದಲ್ಲಿ; ಚಳುವಳಿಯ ಕಾರಣದಿಂದ ಜೈಲುವಾಸ ಅನುಭವಿಸಿಯೂ ಸರ್ಕಾರದ ಪಿಂಚಣಿ ಪಡೆಯಲು ಮನಸ್ಸು ಮಾಡದ ಅಪ್ಪಟ ಗಾಂಧೀವಾದಿಯಾಗಿದ್ದರು. ಅವರು ಉಡುತ್ತಿದ್ದ ಬಿಳಿಯ ಖಾದಿಯಂತೆ ಅವರ ಮನಸ್ಸಿತ್ತು.

ಗಾಂಧೀಹತ್ಯೆಯ ನಂತರದ ಭಾರತ ಅವರನ್ನು ಸಮಾಜವಾದಿ ಚಿಂತನೆಗೆ ಆಕರ್ಷಿಸಿತ್ತು. ಲೋಹಿಯಾ ವಿಚಾರಧಾರೆಯ ಪ್ರಭಾವಕ್ಕೆ ಒಳಗಾದರು. ಪೊನ್ನಮ್ಮಾಳ ಅವರ ರಾಜಕೀಯ ಚಿಂತನೆ ಮತ್ತು ಕಾರ್ಯತತ್ಪರತೆಯನ್ನು ಗಾಂಧೀವಾದ, ಲೋಹಿಯಾವಾದ ಮತ್ತು ಎಡ ಚಿಂತನೆಗಳು ಬೆರೆತು ಎರಕಗೊಂಡು ರೂಪಿಸಿದವು. ಹೆಣ್ಣುಮಕ್ಕಳು ಸಾಮಾಜಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದ ಕಾಲದಲ್ಲಿ ಪೊನ್ನಮ್ಮಾಳರ ಧೈರ್ಯದ ಓಡಾಟವನ್ನು ಜನ ಪಟಾಕಿ, ಬಜಾರಿ ಎಂದೆಲ್ಲ ಕರೆಯುತ್ತಿದ್ದರಂತೆ. ಆದರೆ ಪೊನ್ನಮ್ಮಾಳ್ ಇಂತಹ ಹಾಸ್ಯಗಳಿಗೆಲ್ಲ ಕಂಗಾಲಾಗಲಿಲ್ಲ. ಅವರು ವೃದ್ಧಾಪ್ಯದಲ್ಲೂ ನೆನೆಯುತ್ತಿದ್ದುದು ಸ್ವತಃ ಚಳುವಳಿಯಲ್ಲಿ ತೊಡಗಿಸಿಕೊಳ್ಳಲಾಗದ ಬಡವರು, ಬೀದಿ ಬದಿ ವ್ಯಾಪಾರಿಗಳು ಕೈಯೆತ್ತಿ ಕೊಡುತ್ತಿದ್ದ ಚಿಲ್ಲರೆ ಕಾಸು- ಚಳುವಳಿಯನ್ನು ಬೆಚ್ಚಗೆ ಪೊರೆಯುತ್ತಿತ್ತು ಎನ್ನುವುದನ್ನು.

ಪೊನ್ನಮ್ಮಾಳ್ ಎಂದೂ ಅಧಿಕಾರದ ಲಾಲಸೆಯನ್ನು ಹಚ್ಚಿಸಿಕೊಳ್ಳಲಿಲ್ಲ. ತಾವು ತುಂಬ ಗೌರವಿಸುತ್ತಿದ್ದ ಡಾಕ್ಟರ್ (ರಾಮಮನೋಹರ ಲೋಹಿಯಾ) ಅವರನ್ನೂ ವಿಮರ್ಶಿಸುವಷ್ಟು ಗಟ್ಟಿತನ ಅವರದ್ದು. ಹಾಗಾಗಿಯೇ ಹೈದ್ರಾಬಾದ್‍ನಲ್ಲಿ ನಡೆದ ಸೋಶಿಯಲಿಸ್ಟ ಕಾನ್‍ಫರೆನ್ಸಿನಲ್ಲಿ ಸಮಾಜವಾದಿಗಳು ಲೋಹಿಯಾ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಾಗ, ಪೊನ್ನಮ್ಮಾಳ್ ವಿರೋಧಿಸುತ್ತಾರೆ. ಅಧ್ಯಕ್ಷತೆಯ ಭಾರ ಸ್ವತಂತ್ರ ಕೆಲಸಗಳಿಗೆ ತಡೆಯಾದೀತೆಂಬ ಅಭಿಪ್ರಾಯ ಅವರದಾಗಿತ್ತು. ಇಂತಹ ಭಿನ್ನಮತಗಳು ರಾಜಕೀಯ ಬದುಕನ್ನು-ಸಂಬಂಧವನ್ನು ಶುದ್ಧೀಕರಿಸುತ್ತವೆಂಬ ಅಭಿಪ್ರಾಯ ಅವರದಾಗಿತ್ತು. ಶಿವಮೊಗ್ಗೆಯಲ್ಲಿ ನಡೆದ ಕಾಗೋಡು ಸತ್ಯಾಗ್ರಹದಿಂದ ತುಂಗಾಮೂಲ ಉಳಿಸಿ ಚಳುವಳಿಯವರೆಗೂ ಯಾವುದನ್ನೂ ಪೊನ್ನಮ್ಮಾಳರ ಹೆಸರಿಲ್ಲದೆ ಬರೆಯಲು ಸಾಧ್ಯವಿಲ್ಲ.

ಶಾಂತವೇರಿ ಗೋಪಾಲಗೌಡರು, ಶಂಕರನಾರಾಯಣ ಭಟ್ಟರು, ಕಾಗೋಡು ತಿಮ್ಮಪ್ಪ, ಜೆ.ಎಚ್. ಪಟೇಲ್, ಎಂ.ಪಿ. ಪ್ರಕಾಶ, ಸದಾಶಿವರಾಯರು, ಬಂಗಾರಪ್ಪ ಹೀಗೆ ಅಂದಿನ ಸಮಾಜವಾದಿಗಳೊಂದಿಗೆ ಆತ್ಮೀಯ ಒಡನಾಟ. ತಮ್ಮ ಸಂಗಾತಿ ಗಂಡಸರ ಕುಡಿತದ ಚಟವನ್ನೂ ಎದುರಾಎದುರೇ ಬಯ್ದುಬಿಡುವ ಗುಣ ಇವರದಾಗಿತ್ತಂತೆ. ಎಲ್ಲರನ್ನೂ ತೀಕ್ಷ್ಣವಾಗಿ ಹಂಗಿಸಿಯೂ ಯಾರ ಹಂಗಿಗೂ ಒಳಗಾಗದ ಅಪರೂಪದ ವ್ಯಕ್ತಿಯಾಗಿದ್ದರು. ರಾಜಕೀಯ ಅಧಿಕಾರವನ್ನು ನಿರಂತರ ಅನುಮಾನದಿಂದ ಪರೀಕ್ಷಿಸುತ್ತಿದ್ದರು. ಶಾಂತವೇರಿ ಗೋಪಾಲಗೌಡರು ಒಮ್ಮೆ ಪೊನ್ನಮ್ಮಾಳರನ್ನೇ ಚುನಾವಣೆಗೆ ನಿಲ್ಲಿಸಬೇಕೆಂದು ಪ್ರಸ್ತಾಪಿಸಿದಾಗ “ಕಂಡವರ ಹಣದಿಂದ ಮಾಡುವ ಚುನಾವಣೆ ನನಗೆ ಬೇಡ” ಎಂದುಬಿಟ್ಟಿದ್ದರಂತೆ.

ಜೆ.ಎಚ್. ಪಟೇಲರು ಮುಖ್ಯಮಂತ್ರಿಗಳಾಗಿ ಅಧಿಕಾರಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಬಂದ ಸ್ನೇಹಿತರಿಗೆ, ‘ಏನು, ಸಮಾಜವಾದಿಗಳ ಪಟ್ಟಾಭಿಷೇಕ ಪೂರೈಸಿಕೊಂಡು ಬಂದಿರಾ?’ ಎಂದು ವ್ಯಂಗ್ಯವಾಗಿ ಕೇಳಿದ್ದರಂತೆ ಪೊನ್ನಮ್ಮಾಳ್. ವಿಶ್ವಸುಂದರಿ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಿದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪೊನ್ನಮ್ಮಾಳ್ ಭಾಗವಹಿಸಿದ್ದರು. ಜೆ.ಎಚ್. ಪಟೇಲರು ಮುಖ್ಯಮಂತ್ರಿಗಳಾಗಿದ್ದಾರೆ ಎಂಬ ಮುಲಾಜೇನೂ ಅವರಿಟ್ಟುಕೊಳ್ಳಲಿಲ್ಲ. ಒಮ್ಮೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸ್ಲಂ ಏರಿಯಾ ಜನರಿಗಾಗಿ ಒಂದು ಮನವಿಪತ್ರ ಹಿಡಿದು ಪೊನ್ನಮ್ಮಾಳ್ ವಿಧಾನಸಭೆಯ ಮೆಟ್ಟಿಲು ಹತ್ತಿದ್ದರು. ದೂರದಿಂದ ಪೊನ್ನಮ್ಮಾಳರನ್ನು ಕಂಡ ಬಂಗಾರಪ್ಪನವರು, ಮುಖ್ಯಮಂತ್ರಿತನದ ಸಂಪ್ರದಾಯವನ್ನು ಮೀರಿ ಸ್ವತಃ ಬಂದರಂತೆ. ‘ಬನ್ನಿ, ಬನ್ನಿ ಏನಾಗಬೇಕು?’ ಎಂದರೆ- ‘ನನಗೇನೂ ಆಗಬೇಕಿಲ್ಲ ಈ ಜನರಿಗೆ…’ ಎಂದರಂತೆ. “ನನ್ನ ಜನಕ್ಕೆ ಅಗತ್ಯ ಬಿದ್ದರೆ ನಾನು ಮತ್ತೆ ಬರುವವಳೇ” ಎಂದು ನಗುತ್ತ ಮರಳಿದ್ದರಂತೆ.

ಹಡಗಲಿಯ ರಂಗಭಾರತಿ ಟ್ರಸ್ಟನ ಎಂ.ಪಿ. ಪ್ರಕಾಶ ಅವರು ತಮ್ಮ ತಂದೆಯ ಹೆಸರಿನಲ್ಲಿ ಕೊಡುತ್ತಿದ್ದ ಪ್ರಶಸ್ತಿಗೆ ಪೊನ್ನಮ್ಮಾಳರನ್ನು ಒಪ್ಪಿಸುವುದು ಹರಸಾಹಸವೇ ಆಗಿಬಿಟ್ಟಿತ್ತಂತೆ. ಆಗ ಗೃಹಮಂತ್ರಿಯಾಗಿದ್ದ ಎಂ.ಪಿ. ಪ್ರಕಾಶ ಅವರು ಪೊನ್ನಮ್ಮಾಳರ ಕಾಲಿಗೆ ನಮಸ್ಕರಿಸಿದ್ದಕ್ಕೆ ಆ ದಿನ ಸಾಕ್ಷಿಯಾಗಿತ್ತು. ಅಧಿಕಾರ ಲೋಭಕ್ಕಿಳಿಯದ ರಾಜಕೀಯ ದೃಢ ವ್ಯಕ್ತಿತ್ವ ಪೊನ್ನಮ್ಮಾಳರದು. ಸರ್ವಾಧಿಕಾರಿ ಕೂಡ ಜನರ ಮನಸ್ಸಿನ ಇಂಗಿತವನ್ನು ಗಮನಿಸುತ್ತಾನೆ. ಪ್ರಜಾಪ್ರಭುತ್ವದ ಗೆಲುವು ಜನರ ವಿಚಾರಶೀಲ ನಡೆಯಲ್ಲಿದೆ- ಎನ್ನುವುದನ್ನು ನಂಬಿದ್ದರು ಪೊನ್ನಮ್ಮಾಳ್.

ಪೊನ್ನಮ್ಮಾಳ್ ಈ ನೆಲದ ಬದುಕಿಗೆ ತಮ್ಮ ಶ್ರಮ ಸಾಧನೆಯ ರಂಗೋಲಿ ಬಿಡಿಸಿದರು. ತಳಮಟ್ಟದ ಕಾರ್ಯಕರ್ತೆಯಾಗಿ ನಿರಂತರ ದುಡಿದರು. ಜಿಲ್ಲೆಯಾದ್ಯಂತ ಮಹಿಳಾಸಂಘ, ಶಿಶುವಿಹಾರ, ಪುರಸಭೆ, ನೌಕರ ಸಂಘ, ಕ್ರೀಡಾ ಸಂಸ್ಥೆಗಳು, ಸಕ್ಕರೆ ಕಾರ್ಖಾನೆಗಳಂತಹ ಸಂಘಟನಾತ್ಮಕ ಕೆಲಸಗಳಲ್ಲಿ; ಬಾಲಭವನ, ಮಕ್ಕಳ ಪುಸ್ತಕ ಭಂಡಾರ, ರಿಮ್ಯಾಂಡ ಹೋಂ ಇಂತಹ ನೂರೆಂಟು ಕಾರ್ಯಕ್ರಮಗಳಲ್ಲಿ ಪೊನ್ನಮ್ಮಾಳ್ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದರು. ಕರ್ನಾಟಕ ಏಕೀಕರಣ ಚಳುವಳಿ, ಭೂ ದಾನ ಚಳುವಳಿ, ಸಮಾಜವಾದಿ ಹೋರಾಟ, ಗಣಿಗಾರಿಕೆ ವಿರೋಧಿ ಹೋರಾಟ, ತುಂಗಭದ್ರೆ ಹೋರಾಟ… ಇಂತಹ ನೂರಾರು ಹೋರಾಟಗಳ ಭಾಗವಾಗಿದ್ದರು.

87 ವರ್ಷಗಳ ಬಾಳಿನಲ್ಲಿ ನಿಸ್ವಾರ್ಥರಾಗಿದ್ದ ಪೊನ್ನಮ್ಮಾಳ್ ನೆನಪು ಮ್ಯಾಕ್ಸಿಂಗಾರ್ಕಿಯ ತಾಯಿಯ ಪಾತ್ರವನ್ನು ನೆನಪಿಸುವಂಥದ್ದು. ಸ್ವಲ್ಪ ಮನಸ್ಸು ಮಾಡಿದ್ದರೂ ರಾಜಕೀಯ ಅಧಿಕಾರವನ್ನು ಪಡೆಯಬಹುದಿತ್ತು. ಆದರೆ ಹಾಗೆ ಅಧಿಕಾರ ಪಡೆದವರು ‘ಅರ್ಧರ್ಧ ಶಿವಮೊಗ್ಗೆಯನ್ನೇ ಖರೀದಿಸಿ’ ಭ್ರಷ್ಟರಾಗಿದ್ದನ್ನು ನಿಷ್ಠುರ ವಿಷಾದದಿಂದ ನೋಡಿದ್ದರು. ಕಡೆಯ ದಿನಗಳಲ್ಲಿ ಗಾಂಧೀಜಿಯ ಅಹಿಂಸೆಯನ್ನು ನಕ್ಸಲ ಹಿಂಸೆಯನ್ನು ತಾತ್ವಿಕವಾಗಿ ಒರೆಹಚ್ಚುತ್ತಿದ್ದರು. “ಪಾರ್ವತಿ ಬಹು ಒಳ್ಳೆಯ ಹುಡುಗಿ ಹಾಗಿದ್ದರೆ ನಕ್ಸಲರೂ ಒಳ್ಳೆಯವರಿದ್ದಿರಬಹುದು” ಎನ್ನುತ್ತಿದ್ದರು. “ದೊರೆ ವ್ಯಾಪಾರಿಯಾದರೆ ಪ್ರಜೆಗಳು ಭಿಕಾರಿಗಳಾಗುತ್ತಾರೆ” ಎಂಬ ಎಚ್ಚರದ ಪೊನ್ನಮ್ಮಾಳರನ್ನು ಈ ಕೆಟ್ಟಕಾಲದಲ್ಲಿ ನೆನೆಯಬೇಕು. ಸ್ವಾಭಿಮಾನ, ಆತ್ಮಗೌರವ, ಜನಹಿತ, ತಾತ್ವಿಕತೆ ಎಂಬ ಪದಗಳೆಲ್ಲ ಮೈಲಿಗೆಯಾಗುತ್ತಿರುವಾಗ ಪೊನ್ನಮ್ಮಾಳರಂಥವರ ಸ್ಮರಣೆಯ ಜಲದಿಂದ ಅದನ್ನು ಶುದ್ಧೀಕರಿಸಿಕೊಳ್ಳುವ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಪೊನ್ನಮ್ಮಾಳ್ ರವರ ಚಿತ್ರದ ಹಾಕುವ ಬದಲು ಬಂಗಾರಪ್ಪ ಚಿತ್ರ ಏಕೆ ಹಾಕಿದೆ ಇಲ್ಲಿ?

LEAVE A REPLY

Please enter your comment!
Please enter your name here

- Advertisment -

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...

ಮಣಿಪುರ ಹಿಂಸಾಚಾರ: ಕಾಮ್ಜಾಂಗ್‌ನಲ್ಲಿ ಇಬ್ಬರು ಕುಕಿ ಪುರುಷರು ಶವವಾಗಿ ಪತ್ತೆ; ಹೆಚ್ಚಿದ ಉದ್ವಿಗ್ನತೆ 

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಕುಕಿ ಪುರುಷರು ಗುರುವಾರ ಥವಾಯ್ ಕುಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಜಿಲ್ಲೆಯ ಥಾವಾಯಿ ಕುಕಿ ಗ್ರಾಮದ 42 ವರ್ಷದ ಥೇಂಗಿನ್...

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ...

ಪಶ್ಚಿಮ ಏಷ್ಯಾ ಸಂಘರ್ಷ: ಲೆಬನಾನ್‌ನಲ್ಲಿ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ವೈದ್ಯರು, ದಾದಿಯರು ಸೇರಿ 12 ಮಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿರುವ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 12 ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಸಾರ್ವಜನಿಕ ಆರೋಗ್ಯ ಸಚಿವಾಲಯ ವರದಿ ಮಾಡಿದೆ.  ಲೆಬನಾನ್‌ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಈವರೆಗೂ 103 ಮಕ್ಕಳು...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಇಂದು (14 ಮಾರ್ಚ್)‌ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಒಳಮೀಸಲಾತಿ ಹೋರಾಟಗಾರರು...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ; ರೋಸ್ಟರ್ ಮೀಸಲು ಕ್ರಮ ಉಲ್ಲಂಘನೆ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ Central University of Karnataka ದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...

ಸಂಭಾಲ್ | ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆ ಮಿತಿಗೊಳಿಸಲು ಸಾಧ್ಯವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ

ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಫೆಬ್ರವರಿ 27ರಂದು...

ಇರಾನ್ ‘ಭಯೋತ್ಪಾದಕ ಆಡಳಿತ’ ಎಂದು ಕರೆದ NDTV ಹಿರಿಯ ಸಂಪಾದಕ: ವ್ಯಾಪಕ ಟೀಕೆಯ ನಂತರ ಪೋಸ್ಟ್ ಡಿಲಿಟ್ 

ಹೊಸದಿಲ್ಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ಮಾಧ್ಯಮ ಸಂಸ್ಥೆ NDTV ಹಿರಿಯ ಸಂಪಾದಕ ಆದಿತ್ಯ ರಾಜ್ ಕೌಲ್ ಅವರು ಇರಾನ್ “ಭಯೋತ್ಪಾದಕ...

ಎಲ್‌ಪಿಜಿ ಬಿಕ್ಕಟ್ಟು: ಹೋಟೆಲ್ ಮಾಲೀಕರಿಗೆ ವಿದ್ಯುತ್ ಒಲೆಗಳನ್ನು ಬಳಸಲು ಸೂಚಿಸಿದ ಸಚಿವ ಕೆ.ಎಚ್. ​​ಮುನಿಯಪ್ಪ

ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ಪ್ರಭಾವ ಭಾರತೀಯರ ಅಡುಗೆ ಮನೆಯನ್ನು ಪ್ರವೇಶಿಸಿದ್ದು, ಎಲ್‌ಪಿಜಿ  ಬಿಕ್ಕಟ್ಟಿನಿಂದ ನಾಗರೀಕರು, ಸೇರಿದಂತೆ ಹೋಟೆಲ್ ಉಧ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ನಡುವೆ ಯುದ್ಧದ ಪರಿಣಾಮ ಭಾರತದ ಮೇಲೆ...