Homeಅಂಕಣಗಳುಹಿಂಗೇ ಹೊರಟರ ಖಾಸಗಿ ಕಂಪನಿ ಸಿಈಓ ಬಜೆಟ್ ಮಂಡಿಸುವ ದಿನವೂ ದೂರವಿಲ್ಲ

ಹಿಂಗೇ ಹೊರಟರ ಖಾಸಗಿ ಕಂಪನಿ ಸಿಈಓ ಬಜೆಟ್ ಮಂಡಿಸುವ ದಿನವೂ ದೂರವಿಲ್ಲ

- Advertisement -
- Advertisement -

‘ಸರಕಾರ’ ಎನ್ನುವುದು ಪರ್ಶಿಯನ್ ಭಾಷೆ ಪದ. ಅದರ ಅನೇಕ ಅರ್ಥಗಳಲ್ಲಿ ಒಂದು ‘ಕೆಲಸದಲ್ಲಿ ಇರುವುದು’ ಅಂತ. ಸರಕಾರ ಅನ್ನುವುದೇ ಕೆಲಸ ಅನ್ನುವುದಕ್ಕ ಸಮಾನಾರ್ಥಕ ಪದ ಅನ್ನೋದಾದರ, ಸರ್ಕಾರದ ಕೆಲಸ ಏನು?

ಈ ಸರಕಾರದ ಕೆಲಸ ಏನು ಎನ್ನುವ ಸರಳವಾದ ಪ್ರಶ್ನೆ ಇಡೀ ಜಗತ್ತನ್ನು ಇಬ್ಭಾಗ ಮಾಡಿಬಿಟ್ಟಿದೆ.
ಕೆಲವರು ಸರಕಾರಕ್ಕ ಕೆಲಸನ ಇಲ್ಲ ಅನ್ನೋರು. ಇನ್ನೂ ಕೆಲವರು ಎಲ್ಲವೂ ಸರ್ಕಾರದ ಕೆಲಸ ಅನ್ನೋರು. ಅವರ ನಡುವೆ ಬಹಳ ದೊಡ್ಡ ಸಂಖ್ಯೆಯಲ್ಲಿ ಮಧ್ಯಮ ಮಾರ್ಗಿಗಳು. ಸರ್ಕಾರದ ಕೆಲಸ ಏನು ಅನ್ನೋದು ನಮಗ ಗೊತ್ತಿಲ್ಲ. ಅದು ಏನು ಅಂತ ತಿಳಕೋಳೋದು ಬೇಕಾಗಿಲ್ಲ, ಅಂತ ಇವರು ಗಟ್ಟಿಯಾಗಿ ನಂಬತಾರ. ಮಜಾ ಏನು ಅಂದ್ರ ಈ ರೀತಿಯ ಜನಗಳಿಗೆ ಅತಿ ಕಠೋರವಾದ ರಾಜಕೀಯ ನಿಲುವು ಇರ್ತಾವ. ಯಾವುದನ್ನು ನಾವು ಸ್ಪಷ್ಟವಾಗಿ ತಿಳಕೊಂಡಿರೋದಿಲ್ಲವೋ ಅದರ ಬಗ್ಗೆ ಅಭಿಪ್ರಾಯ ಮಾತ್ರ ಗಟ್ಟಿಯಾಗಿ ರೂಪಿಸಿಕೊಂಡು ಬಿಟ್ಟಿರತೀವಿ.

ಯಥಾ ಪ್ರಜಾ ತಥಾ ರಾಜಾ ಅನ್ನುವ ಗಾದಿಮಾತಿನ ಹಂಗ, ನಾವು ಹೆಂಗ ಇರತೆವೋ, ನಮ್ಮನ್ನ ಆಳುವ ಧೀರರು ಹಂಗೆ ಇರ್ತಾರ. ಎಲ್ಲ ವಿಷಯದ ಬಗ್ಗೆ ನಾವು ಸರಿಯಾಗಿ ಓದಿ, ಕೇಳಿ, ಅರ್ಥಮಾಡಿಕೊಂಡರ, ನಮಗೆ ಅರ್ಥ ಆಗಲಾರದ ವಿಷಯದ ಬಗ್ಗೆ ಪ್ರಶ್ನೆ ಮಾಡಿದರ ಅವರು ಸರಿಯಾಗಿ ಎಚ್ಚರದಿಂದ ಇರ್ತಾರ. ಅದನ್ನ ಬಿಟ್ಟು ನಮಗ ಏನು ಸರಿಯಾಗಿ ಗೊತ್ತಿಲ್ಲ. ಆದರೆ ನಾವು ಅವರ ಪರವಾಗಿ ಇದ್ದೇವೆ. ನಾವು ಅವರನ್ನ ಪ್ರಶ್ನೆ ಮಾಡೋದಿಲ್ಲ. ಯಾಕ ಅಂದ್ರ ಅವರು ತಪ್ಪು ಮಾಡಲಿಕ್ಕೆ ಸಾಧ್ಯ ಇಲ್ಲ ಅನ್ನುವ ಪ್ರಶ್ನಾತೀತ ಮಾತೃ ಪ್ರೇಮದ ನಾಗರಿಕರು ಇದ್ದರೆ, ಸರಕಾರ ಎನ್ನುವುದು ಕೈಕಯಿಯಂತಹ ತಾಯಿ ಆಗಿ ಬಿಡುತ್ತದೆ. ತನಗೆ ಓಟು ಕೊಟ್ಟ ಹಲವರನ್ನು ಮರೆತು ನೋಟು ಕೊಟ್ಟ ಕೆಲವರನ್ನು ಮಾತ್ರ ಪೋಷಿಸುತ್ತದೆ. ಆ ನೋಟು ಕೊಟ್ಟ ಕೆಲವರು ರಾಮನ ತಮ್ಮ ಭರತನ ಹಂಗ ಇದ್ದರ ಅಡ್ಡಿಯಿಲ್ಲ. ಆದರೆ ಅವರು ರಾವಣನ ತಂಗಿ ಶೂರ್ಪನಖಿ ಹಂಗ ಚೂಪಾದ ಉಗುರಿನಿಂದ ಬಡವರ ರಕ್ತ ಹೀರುವವರು ಇರ್ತಾರ.

ಮೊನ್ನೆ ನಮ್ಮ ಉಳ್ಳಿ ಪಥ್ಯದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಆಯವ್ಯಯ ಪತ್ರ ಭಾರತೀಯ ಕಂಪನಿ ವಿದೇಶಿ ಸಾಮಾನು ಬಳಸಿ ತಯಾರು ಮಾಡಿದ ಪಾಟಿ ಕಂಪ್ಯೂಟರ್‌ದೊಳಗ (ಟ್ಯಾಬ್ಲೆಟ್) ಓದಿದರು. ಹೆಸರಿನೊಳಗ ಸೀತಾ ಹಾಗೂ ರಾಮ್ ಎರಡೂ ಇರುವ ಅವರು ಜನರನ್ನು ಮಾತ್ರ ಅಯೋಧ್ಯಾ ನಾಗರಿಕರಂತೆ ನೋಡಲಿಲ್ಲ.

ನನ್ನ ಭಾಷಣದ ಮೂಲಮಂತ್ರ ಕನಿಷ್ಠ ಸರಕಾರ, ಗರಿಷ್ಟ ಆಡಳಿತ ಅಂತ ಘೋಷಿಸಿದ ಅವರು ಆ ಗುರಿ ಮುಟ್ಟುವುದು ಹೇಗೆ ಅಂತ ಬಿಡಿಸಿ ಹೇಳಲಿಲ್ಲ. ಆಡಳಿತದಲ್ಲಿ ಸರ್ಕಾರದ ಪಾಲು ಕಮ್ಮಿ ಆಗುತ್ತಾ ಹೋದರೆ ಗರಿಷ್ಟ ಆಡಳಿತ ಸಾಧ್ಯ ಆಗೋದು ಹೇಗೆ ಅನ್ನುವುದು ಅವರು ಹೇಳಲಿಲ್ಲ, ನಾವು ಕೇಳಲಿಲ್ಲ.

ಉನ್ನತ ಶಿಕ್ಷಣದ ಸ್ಥಿತಿ ಸುಧಾರಿಸುವ ಯೋಜನೆ ಒಳಗೆ ಖಾಸಗಿ ಬಂಡವಾಳ ತಂತ್ರ ಕುಶಲತೆಯು ಭಾಗ ವಹಿಸಲಿದೆಯಂತೆ. ಅಂದ್ರ ಸರಕಾರ ಕೈಚೆಲ್ಲಿ ಖಾಸಗಿಯವರಿಗೆ ದಾರಿ ಮಾಡಿಕೊಟ್ಟದ.

ಪ್ರಾಥಮಿಕ ಶಿಕ್ಷಣದೊಳಗ ಸರ್ಕಾರದ ನಿಯಂತ್ರಣ ಹಂತಹಂತವಾಗಿ ಕಮ್ಮಿಯಾಗಿ ಖಾಸಗಿಯವರ ಭಾಗಿದಾರಿಕೆ ಹೆಚ್ಚು ಆಗಲಿಕ್ಕೆ ಶುರು ಆಗತದ. ಹಿಂದೆ ಈ ಕೆಲಸ ಸಣ್ಣಗ ಶುರು ಆಗಿತ್ತು. ಇನ್ನು ಮುಂದ ಇದು ಗತಿ ಪಡತಿದ. ಅದಕ್ಕ ಸದ್ಗತಿ ಸಿಗತದೋ ಇಲ್ಲೋ.

ಸಚಿವರ ಪ್ರಕಾರ ಅಂಕೀಕೃತ ಆರೋಗ್ಯ ವಾಗ್ದಾನ ಯೋಜನೆ (ಡಿಜಿಟಲ್ ಹೆಲ್ತ್ ಅಷ್ಯೂರೆನ್ಸ್) ಪ್ರಕಾರ ಎಲ್ಲ 130 ಕೋಟಿ ಭಾರತೀಯ ರಹವಾಸಿಗಳ ಆರೋಗ್ಯ ಸೂಚಕಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಮೇಲೆ ಅದರ ಪ್ರಕಾರ ನಿಮ್ಮ ರೋಗದ ಲಕ್ಷಣ, ಸ್ಥಿತಿ, ರೋಗ ನಿರೋಧಕ ಶಕ್ತಿ, ಅದಕ್ಕೆ ಚಿಕಿತ್ಸೆ ಎಲ್ಲಾ. ಅದನ್ನು ಮಾಡೋರು ಯಾರು? ಖಾಸಗಿ ಕಂಪನಿಯವರು. ಅವರು ಬರೆ ನಿಮ್ಮ ರೋಗ ಚೆಕ್ ಮಾಡೋದಿಲ್ಲ. ನಿಮ್ಮ ಹಾಗೂ ನಿಮ್ಮ ಮನೆಯವರ, ನಿಮ್ಮ ಕಂಪನಿ ಉದ್ಯೋಗಿಗಳ, ಎಲ್ಲರ ಮಾಹಿತಿ ಇಟ್ಟುಕೊಂಡು ನಿಮ್ಮನ್ನ ಆಟ ಅಡಿಸತಾರ. ಅದನ್ನ ವಿಮಾ ಕಂಪನಿಗೆ ಮಾರಾಟ ಮಾಡಿಬಿಡತಾರ. ಅವರು ನಿಮ್ಮ ಆರೋಗ್ಯದ ಸ್ಥಿತಿ ಗೊತ್ತಿದ್ದರಿಂದ ನಿಮಗೆ ವಿಮೆ ಕೊಡಲಿಕ್ಕೆ ಇಲ್ಲೆ, ಅಥವಾ ಅತಿ ಹೆಚ್ಚಿನ ವೆಚ್ಚದ ಪಾಲಿಸಿ ಕೊಡಬಹುದು. ಎಲ್ಲ ಚಿಕಿತ್ಸೆ ಕೊಡಲಿಕ್ಕೆ ಮಾತ್ರ ಇರಲಿಕ್ಕಿಲ್ಲ.

ಕೋವಿಡ್ ಮಾರಿಯ ಕಾಲದಾಗ ಖಾಸಗಿ ಆಸ್ಪತ್ರೆ, ಖಾಸಗಿ ಶಾಲೆ ಹಾಗೂ ಖಾಸಗಿ ಮಾಧ್ಯಮಗಳು ಆಡಿದ ಆಟ ನೋಡಿದ ಮೇಲೆ ಸಹಿತ ಎಲ್ಲಾ ರೋಗಕು ಖಾಸಗಿ ಕ್ಷೇತ್ರ ರಾಮ ಬಾಣ ಅಲ್ಲ ಅನ್ನುವುದು ನಮಗ ಇನ್ನೂ ಖಾತರಿ ಯಾಗಿಲ್ಲ ಅಂತ ಅನ್ನಿಸತದ.

ಇನ್ನ ಉದ್ಯೋಗ ಸೃಷ್ಟಿ ಸಲುವಾಗಿ ಸರಕಾರ ಹಮ್ಮಿಕೊಂಡಿರುವ ಅನೇಕ ಯೋಜನೆಗಳಿಗೆ ಖಾಸಗಿಯವರೇ ಇಂಜಿನ್, ಗಾಲಿ ಹಾಗೂ ಇಂಧನ. ಸರಕಾರ ಯಾವುದೇ ಉದ್ಯೋಗ ಸೃಷ್ಟಿ ಮಾಡೋದಿಲ್ಲ. ಇರುವ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡೋದರಿಂದ ಜನರಿಗೆ ಒಳ್ಳೆಯದು ಆಗತದ. ಎರಡು ಬ್ಯಾಂಕು ಹಾಗೂ ಎಲ್‌ಐಸಿಗಳನ್ನು ಖಾಸಗಿಗೆ ಮಾರಾಟ ಮಾಡಿದರ ಎಲ್ಲ ಸಮಸ್ಯೆ ಪರಿಹಾರ ಆಗತದ ಅಂತ ಸಚಿವರು ಹೇಳಿದ್ದಾರ. ಅದಕ್ಕ ಸರ್ಕಾರಿ-ಖಾಸಗಿ ಸಹ ಭಾಗಿತ್ವದ ಮೊದಲ ಮಾದರಿಯಾದ ಮಾರುತಿ ಕಂಪನಿಯ ಹಿಂದಿನ ಮುಖ್ಯಸ್ಥ ಭಾರ್ಗವ ಅವರು ಒಪ್ಪಿಗೆ ಸೂಚಿಸಿಬಿಟ್ಟಾರ. ಮಾರುತಿ ಕಂಪನಿ ಸರಕಾರದಿಂದ ಅನೇಕ ಬಾರಿ ಸಹಾಯ ಪಡೆಯಿತು ಅನ್ನೋದನ್ನ ಮರ್ತುಬಿಟ್ಟಾರ.

ಸರಕಾರ ಮನಿ ಕಟ್ಟುವುದಿಲ್ಲ. ಆ ಕೆಲಸ ಮಾಡುವ ಖಾಸಗಿಯವರಿಗೆ ಸಹಾಯ ಮಾಡತದ ಅಂತ ಸಚಿವರು ಹೇಳಿಬಿಟ್ಟಾರ. ಅವರಿಗೆ ಸುಲಭ ಸಾಲ, ಕಟ್ಟು ಬಾಕಿ ಸಾಲಗಾರರ ಕಡೆ ಮೃದು ಧೋರಣೆ, ಈ ರೀತಿಯ ಡೆವಲಪರ್‌ಗಳ ಕೈಗೆ ಸಿಕ್ಕುವ ಬಡಪಾಯಿ ಮಧ್ಯಮ ವರ್ಗದವರಿಗೆ ಎರಡು ಶೇಕಡಾ ಬಡ್ಡಿ ಕಮ್ಮಿ, ಇತ್ಯಾದಿ ಘೋಷಣೆ ಮಾಡಿದ್ದಾರೆ.

ಕುಡಿಯುವ ನೀರು ಖಾಸಗಿಯವರಿಂದ ಪಡೆಯಬೇಕು. ಅದನ್ನು ಸರಕಾರ ಕೊಡಲಿಕ್ಕೆ ಆಗೋದಿಲ್ಲ. ಅದು ಸರ್ಕಾರದ ಕೆಲಸ ಅಲ್ಲ. ಅದಕ್ಕೆ ಜಲವೆ ಜೀವನ ಅನ್ನುವ ಯೋಜನೆ ಒಳಗ ಖಾಸಗಿ ಕಂಪನಿಗಳು ನೀರು ಕೊಡತಾವ. ಅವರಿಗೆ ಅನುಕೂಲ ಆಗು ಹಂಗ ಸರ್ಕಾರಿ ಅಧಿಕಾರಿಗಳು ನಡೆದುಕೊಳ್ಳಬೇಕು. ಆಡಳಿತ ಪಕ್ಷದ ಮಾಲೀಕರೆ ಸರ್ಕಾರಿ ಅಧಿಕಾರಿಗಳ ಮಾಲೀಕರು, ಅಷ್ಟೂ ತಿಳಿಯದೇ?

ಎಲ್ಲಾ ಹೋಗಲಿ, ಮುಂದಿನ ವರ್ಷದ ಜನಗಣತಿ ಸಹಿತ ಖಾಸಗಿಯವರು ಮಾಡೋರು. ಹಂಗಾರ ಇನ್ನೇನು ಉಳಿಯಿತು? ಶಾಸನ ಸಭೆ, ಚುನಾವಣೆ, ಕಾನೂನು ಮತ್ತು ಸುವ್ಯವಸ್ಥೆ, ದೇಶ ರಕ್ಷಣೆ ಹಾಗೂ ಯುದ್ಧ ಮಾಡುವುದು, ನಾಣ್ಯ ಟಂಕಿಸುವುದು ಇತ್ಯಾದಿ ಸಣ್ಣ ಪುಟ್ಟ ಕೆಲಸಗಳು. ಮುಂದಿನ ಸಾರಿ ಖಾಸಗಿ ವಿಶ್ವವಿದ್ಯಾಲಯದಿಂದ ಎಂಬಿಎ ಮಾಡಿದ ಖಾಸಗಿ ಕಂಪನಿ ಸಿಈಒ ಒಬ್ಬರು ನಮ್ಮ ಹಣಕಾಸು ಸಚಿವರ ಬದಲಿಗೆ ಬಜೆಟ್ ಮಂಡಿಸಿದರೂ ಮಂಡಿಸಬಹುದು. ಏನೇನೋ ಆಗುತ್ತಿರುವಾಗ ಇದು ಆದರೆ ಆಶ್ಚರ್ಯ ಏನು?


ಇದನ್ನೂ ಓದಿ: ಈ ಬಜೆಟ್ ಶ್ರೀಮಂತರು ಮತ್ತು ಕಾರ್ಪೋರೇಟ್‌‌ಗಳಿಗೆ ಮಾತ್ರ: ನೆಟ್ಟಿಗರ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...