Homeಅಂಕಣಗಳುಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

- Advertisement -
- Advertisement -

ಯಾವುದೇ ಪಕ್ಷವಾದರೂ ಹೊಂದಿಕೊಂಡು ಆ ಪಕ್ಷದ ವಕ್ತಾರನಂತೆ ಮಾತನಾಡುತ್ತ ಪಾರ್ಟಿಯ ಮಾನ ಮರ್ಯಾದೆ ಕಾಪಾಡುವಂತಹ ಶಿವರಾಮೇಗೌಡರನ್ನ ಮಾತನಾಡಿಸಿ, ಅವರು ಜೆಡಿಎಸ್‌ನಿಂದ ವಜಾಗೊಂಡಿರುವ ಸಮಯದಲ್ಲಿ ಸಾಂತ್ವನ ಹೇಳುವುದು ನಮ್ಮ ಕರ್ತವ್ಯವಲ್ಲವೆ ಎಂದು ಯೋಚಿಸಿ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ “ಯಾರು ಏನು ಮಾಡುವರು, ನನಗೇನೂ ಕೇಡು ಮಾಡುವರು, ಯಾರು…”

“ಹಲೋ ಯಾರು”

“ನಾನು ಸಾರ್ ನಿಮ್ಮ ಹಿತೈಷಿ ಯಾಹೂ.”

“ಹಿತೈಷಿ ಅನ್ನೊರಿಂದ್ಲೆ ಹಿಂಗಾದದ್ದು ಕಂಡ್ರಿ.”

“ನಾವಂಥೋರಲ್ಲ ಸಾ. ನೀವು ಮಾತಾಡಿದ್ದ ನಿಮ್ಮ ಬುಡಕೆ ತರೋದಿಲ್ಲ ಸಾ.”

“ಆಕೆ ಹೆಣ್ಣುಮಗಳು ವಳ್ಯೊಳು ಅಂತ ಮಾತಾಡಿದ್ನಪ್ಪ, ಹಿಂಗೆ ಮಾಡ್ತಳೆ ಅಂತ ಯಾರಿಗೊತ್ತು.”

“ಆಗೊದ್ಯಲ್ಲ ವಳ್ಳೆದ್ಕೆ ಅಂತ ಭಗವದ್ಗೀತೆ ಹೇಳ್ಯದೆ ಸಾ.”

“ಏನೊಳ್ಳೆದಾಯ್ತದೆ.”

“ಡಿ.ಕೆ ಶಿವಕುಮಾರ್ ಮತ್ತೆ ನೀವು ಆತ್ಮೀಯ ಗೆಳೆಯರಲ್ಲವ ಸಾ.”

“ಅದೇನೊ ನಿಜ.”

“ಮತ್ತೆ ಅವುರು ಮುಂದೆ ಪವರಿಗೆ ಬತ್ತಾಯಿರುವಾಗ ನೀವು ಜೆಡಿಎಸ್ಸಿನಲ್ಲಿರದು ಸರೀನಾ ಸಾರ್.”

“ನೀವೇಳಿದ್ದು ಸರಿನೆ, ಅದ್ರೆ ಕುಮಾರಣ್ಣ ನನ್ನ ಬುಟ್ಟು ಯಾರು ಸರಕಾರ ಮಾಡ್ತರೆ ನೋಡ್ತಿನಿ ಅಂದವುನಲಾ.”

“ಅಷ್ಟ್‌ವೊತ್ತಿಗೆ ಏನಾಗ್ತದೊ ಏನೋ, ಯಾರು ಕಂಡವುರೆ, ನೀವು ಡಿ.ಕೆಶಿಗೆ ತುಂಬ ಬೇಕಾದೊರಾದಾಗ ನಿಮ್ಮನ್ನ ನೆಗ್ಲೆಟ್ ಮಾಡಕ್ಕೆ ಬರಲ.”

“ನನ್ನನ್ನ ಯಾರೂ ನೆಗ್ಲೆಟ್ ಮಾಡಕ್ಕಾಗಲ್ಲ ಕಂಡ್ರಿ.”

“ಆಗಲ್ಲ ಸಾರ್, ಪವರಿಗೆ ಬಂದವುರ ಮನೆ ಬಾಗ್ಲಲ್ಲಿ ದಿನ ಹೋಗಿ ನಿಂತಗತ್ತಿರಿ, ಒಂದಿನ ವಳಿಗೆ ಕರದೇ ಕರಿತರೆ.”

“ಏನೇಳ್ತಯಿದ್ದಿರಿ ನೀವು.”

“ಆಗ ದೇವೆಗೌಡ್ರಿಗೆ ಅಂಗೆ ಮಾಡಿದ್ರಲ್ಲ ಸಾರ್, ಅವರು ಮುಖ್ಯಮಂತ್ರಿಯಾಗಿದ್ದಾಗ ಅಪ್ಪಾಜಿ, ಅಪ್ಪಾಜಿ ಅಂತ ಮನೆತಕ್ಕೊಗಿ ಕೂಗುತಿದ್ರಿ ಪಾಪ. ಅವುರ ಮಕ್ಕಾಳ್ಯಾರು ಅಂಗೆ ಕರಿತಿರಲಿಲ್ಲ. ಯಲ್ಲ ಯಪ್ಪ ಯಪ್ಪ ಅಂತಿದ್ದೊ ನೀವು ಅಪ್ಪಾಜಿ ಅಂತ ಕಾಲಿಗೆ ಬಿದ್ದಿದ್ದು ವರ್ಕೌಟಾಯ್ತು, ಹೌಸಿಂಗ್ ಬೋರ್ಡ್ ಛೇರ್ಮನ್ ಮಾಡಿದ್ರು.”

“ಅದ್ಯಲ್ಲ ಹಳೆ ಕತೆ, ಈಗಂಗಿಲ್ಲ ಅವುರು.”

“ನೀವಂಗೆ ಇದ್ದಿರಲ್ಲ ಸಾ, ನೀವು ಬದ್ಲಾಗಿದ್ರೆ ಹಿಂಗ್ಯಾಕಾಗದು.”

“ಅಲ್ಲ ಕಂಡ್ರಿ, ಸತ್ಯ ಮಾತಾಡದು ತಪ್ಪ.”

“ಏನು ಸತ್ಯ ಮಾತಾಡಿದ್ರಿ.”

“ಆ ಮಾದೇಗೌಡ ನನಿಗೆ ಎರಡು ಸತಿ ಟಿಕೆಟ್ ತಪ್ಪಿಸಿದ. ನಾನು ನಮ್ಮೂರಲ್ಲಿ ಒಬ್ಬನ ಮನೆ ಮ್ಯಾಲೆ ದಾಳಿ ಮಾಡಿಸಿದೆ. ಅದ ನೋಡಕ್ಕೆ ಬಂದ ಮಾದೇಗೌಡನಿಗೆ ನನ್ನ ಕಂಡ್ರಾಯ್ತಿರಲಿಲ್ಲ. ಸೋಲಂಗೆ ಮಾಡಿದ. ಆಗ ನಾನು ಗೆದ್ದಿದ್ರೆ ಯಸ್ಸೆಂ ಕೃಷ್ಣನ ಸಂಪುಟದಲ್ಲಿ ಡಿ.ಕೆ ಶಿವಕುಮಾರ್ ಜೊತೆ ನಾನು ಮಂತ್ರಿಯಾಯ್ತಿದ್ದೆ. ಡ್ರಸ್‌ನೂ ಕೂಡ ವಲಿಸಿದ್ದೆ ಕಂಡ್ರಿ, ವಟ್ಟುರಿಯಕ್ಕಿಲ್‌ವೆ ನನಿಗೆ.”

“ಡಿ.ಕೆ ಶಿವಕುಮಾರ್‌ಗೆ ಆಸ್ತಿ ಜಾಸ್ತಿಯಾಗಿ ತೊಂದ್ರೆ ಅನುಭವುಸ್ತಾಯಿದ್ರೆ, ನೀವು ನಾಳಗೆ ತೊಂದಗರಿಗೆ ಸಿಗಾತ್ತಾಯಿದ್ದಿರಿ ಸಾ.”

“ಸತ್ಯ ಮಾತಾಡದ್ರೆ ತಪ್ಪೇನ್ರಿ.”

“ಸತ್ಯ ಮಾತಾಡಿ ಅದರ ಪರಿಣಾಮ ಹೆದ್ರಸಕ್ಕೂ ರೆಡಿಯಾಗಿ.”

“ಈಗ ರೆಡಿಯಾಗಿ ಇದ್ದಿನಲ್ಲ, ನಿಂತ ನೆಲಿಲೆ ಕುಮಾರಸ್ವಾಮಿ ನನ್ನನ್ನ ವಜಾ ಮಾಡಿದ್ರೆ ಹೋಗಿ ಕಾಲಿಗೆ ಬೀಳಕ್ಕಾಯ್ತದಾ.”

“ಆಗಲ್ಲ ಸಾ, ಅವುರ ತಂದೆ ಕಾಲಿಗೇನೂ ಬೀಳಬಹುದು, ಆದ್ರೆ ಕುಮಾರಣ್ಣ ಕಾಲಿಗೆ ನಿಮ್ಮಂತ ಸೀನಿಯರು ಬೀಳಬಾರ್ದು.”

“ಅಲ್ಲ ಕಂಡ್ರಿ ಈ ಅಪ್ಪ ಮಕ್ಕಳು ನನ್ನ ಉಪಕಾರನೆ ಮರತುಬುಡ್ತರಲ್ಲ ಹೇಳಿ.”

“ಉಪಕಾರ ಏನು ಮಾಡಿದ್ರಿ ಸಾ.”

“ಸುಮಲತ ಎಲಕ್ಷನ್ನಿಗೆ ನಿಂತಾಗ ಇದೇ ನಾಗಮಂಗಲದಲ್ಲಿ ಪ್ರಧಾನ ಭಾಷಣಕಾರ ನಾನೆಯ, ಆಗ ಸುಮಲತಕ್ಕನ್ನ ಇವುಳು ಮಾಯಾಂಗನೆ ಜಯಲಲಿತ ಆಗಕ್ಕೆ ಬಂದವುಳೆ ಬುಡಬ್ಯಾಡಿ ಸೋಲಿಸಿ ಅಂದೆ. ಅಗ ದ್ಯಾವೇಗೌಡ್ರು ಮೆಚ್ಚಿ ಶಿವರಾಮೇಗೌಡರು ಮಾತನಾಡಿದ ಮೇಲೆ ನಾನು ಭಾಷಣ ಮಾಡೊ ಅಗತ್ಯ ಇಲ್ಲ ಅಂದ್ರು, ಅವತ್ತು ನಾನು ಕ್ಯಟ್ಟ ಮಾತಾಡಕ್ಕೆ ಪುಸಲಾಯಿಸಿದೋರು. ಇವತ್ತು ಅಂತವೇ ಮಾತಾಡಿದ್ರೆ ಪಾರ್ಟಿಯಿಂದ್ಲೆ ವಜಾ ಮಾಡ್ತಾರೆ ಇದಕೇನೇಳನ.”

“ಅದ್ಕೆ ಸಾರ್ ಯಾರಿಗೂ ಕೆಟ್ಟ ಮಾತಾಡಬಾರ್ದು.”

“ಅದ್ಯಂಗ್ರಿ ಇರಕ್ಕಾಯ್ತದೆ, ಕ್ಯಟ್ಟ ಮನುಸ್ರನ ವಳ್ಳೆ ಮನುಸ್ರು ಅನ್ನಕಾಯ್ತದೆ.”

“ಮಾದೇಗೌಡ್ರು ಕ್ಯಟ್ಟೊರಲ್ಲ, ಮಂಡ್ಯದ ರೈತ ನಾಯಕರು.”

“ಯಾವ ಸೀಮೆ ರೈತನಾಯಕ. ರೈತರಾಗಿದ್ರೆ ವಲ ಉಳತಿದ್ರು, ಮಂಡ್ಯಕ್ಕೆ ಬಂದು ರಾಜಕಾರಣ ಮಾಡತಿರಲಿಲ್ಲ.”

“ರೈತ ನಾಯಕರು ವಲ ಉಳೋ ಅಗತ್ಯಯಿಲ್ಲ, ಕೂಲಿಕೊಟ್ಟು ಉಳುಸಬಹುದು. ಇವತ್ತು ಕಾವೇರಿ ಇಶ್ಯೂ ಹಿಡಕಂಡು ಹೋರಾಡೊ ಅಂಥೋರು ವಬ್ರೂಯಿಲ್ಲ. ಯಾರಿಗೂ ಕೇರ್ ಮಾಡ್ದೆ ನೇರಾ ನೇರಾ ಮಾತಾಡತಿದ್ದ ಮಾದೇಗೌಡ್ರು ಸಮಾಧಿ ವಳಗಿದ್ದ ಕಂಡೇ ನಿಮ್ಮನ್ನ ವಜಾ ಮಾಡುಸ್ತರೆ ಅಂದ್ರೆ, ಅವುರ ಪವರೆಸ್ಟದೆ ಲ್ಯಕ್ಕ ಹಾಕಿ ಸಾ.”

“ಇದ್ಕೆ ನಿಮ್ಮನ್ನ ತಲಿಲ್ದ ಪತ್ರಕರ್ತರು ಅನ್ನದು.”

“ಅಂಗಂತಿರಾ.”

“ಮತ್ತಿನೇನು ಸಾಕ್ಷಿನೆ ಸಿಕ್ತಲ್ಲಾ, ಅಲ್ಲ ಕಂಡ್ರೀ ಜೆಡಿಎಸ್ಸು ಮಂಡ್ಯ ಜಿಲ್ಲೆಲಿ ನ್ಯಲೆ ಕಳಕತ್ತಾ ಅದೆ. ಅಂಥಾ ಟೈಮಲ್ಲಿ ನಾನು ಮಾದೇಗೌಡ್ರು ಬೋದಿದ್ದಿನಿ, ಅದ್ಕೆ ಕುಮಾರಣ್ಣ ಮಾದೇಗೌಡ್ರು ನಮ್ಮವರು, ಅವುರು ಒಕ್ಕಲಿಗರ ಲೀಡ್ರು ಅಂತ ಜಾತಿ ಮಾತಾಡಿ ನನ್ನ ವಜಾ ಮಾಡಿ ಜೆಡಿಎಸ್ ಬ್ಯಳಸಕ್ಕೆ ವಂಟವುರೆ, ಸುಮಲತನ್ನ ಬೈಯಿ ಅಂತ ಹೇಳಿದೋರು, ಮಾದೇಗೌಡ್ರು ಬೋದ್ರೆ ವಜಾ ಮಾಡ್ತರಲ್ಲಾ. ಇದು ರಾಜಕಾರಣ ಅಲವೇನ್ರಿ, ಅದರಲ್ಲೂ ಜಾತಿರಾಜಕಾರಣ ಅಲವೇನ್ರಿ. ಇಂತ ವಿಷಯನೆ ನಿಮಗೆ ತಿಳಿಯದಿಲ್ಲ. ಶಿವರಾಮೇಗೌಡ ಮಾದೇಗೌಡ್ರು ಬೋದ ಅಂತ ಅಲ್ಲೆ ಗಿರಕಿ ವಡಿತಿರಿ.”

“ಮಾದೇಗೌಡ್ರುನ ಏಕವಚನದಲ್ಲಿ ಅಂದು ಬಾಳ ಹಿಂದೆ ಸಾಯಬೇಕಾಗಿತ್ತು ಅಂದಿದ್ದು ತಪ್ಪಲವ ಸಾ.”

“ಅಂದಿದ್ದು ಆಯ್ತು, ಪಾರ್ಟಿಯಿಂದ ತಗದಾಕಿದ್ದು ಆಯ್ತು, ಈಗ್ಯಾಕ್ರಿ ತಪ್ಪಾಯ್ತು ಅನ್ನನಾ.”

“ಥೂತ್ತೇರಿ.”


ಇದನ್ನೂ ಓದಿ: ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...