Homeಅಂಕಣಗಳುಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

- Advertisement -
- Advertisement -

ಯಾವುದೇ ಪಕ್ಷವಾದರೂ ಹೊಂದಿಕೊಂಡು ಆ ಪಕ್ಷದ ವಕ್ತಾರನಂತೆ ಮಾತನಾಡುತ್ತ ಪಾರ್ಟಿಯ ಮಾನ ಮರ್ಯಾದೆ ಕಾಪಾಡುವಂತಹ ಶಿವರಾಮೇಗೌಡರನ್ನ ಮಾತನಾಡಿಸಿ, ಅವರು ಜೆಡಿಎಸ್‌ನಿಂದ ವಜಾಗೊಂಡಿರುವ ಸಮಯದಲ್ಲಿ ಸಾಂತ್ವನ ಹೇಳುವುದು ನಮ್ಮ ಕರ್ತವ್ಯವಲ್ಲವೆ ಎಂದು ಯೋಚಿಸಿ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ “ಯಾರು ಏನು ಮಾಡುವರು, ನನಗೇನೂ ಕೇಡು ಮಾಡುವರು, ಯಾರು…”

“ಹಲೋ ಯಾರು”

“ನಾನು ಸಾರ್ ನಿಮ್ಮ ಹಿತೈಷಿ ಯಾಹೂ.”

“ಹಿತೈಷಿ ಅನ್ನೊರಿಂದ್ಲೆ ಹಿಂಗಾದದ್ದು ಕಂಡ್ರಿ.”

“ನಾವಂಥೋರಲ್ಲ ಸಾ. ನೀವು ಮಾತಾಡಿದ್ದ ನಿಮ್ಮ ಬುಡಕೆ ತರೋದಿಲ್ಲ ಸಾ.”

“ಆಕೆ ಹೆಣ್ಣುಮಗಳು ವಳ್ಯೊಳು ಅಂತ ಮಾತಾಡಿದ್ನಪ್ಪ, ಹಿಂಗೆ ಮಾಡ್ತಳೆ ಅಂತ ಯಾರಿಗೊತ್ತು.”

“ಆಗೊದ್ಯಲ್ಲ ವಳ್ಳೆದ್ಕೆ ಅಂತ ಭಗವದ್ಗೀತೆ ಹೇಳ್ಯದೆ ಸಾ.”

“ಏನೊಳ್ಳೆದಾಯ್ತದೆ.”

“ಡಿ.ಕೆ ಶಿವಕುಮಾರ್ ಮತ್ತೆ ನೀವು ಆತ್ಮೀಯ ಗೆಳೆಯರಲ್ಲವ ಸಾ.”

“ಅದೇನೊ ನಿಜ.”

“ಮತ್ತೆ ಅವುರು ಮುಂದೆ ಪವರಿಗೆ ಬತ್ತಾಯಿರುವಾಗ ನೀವು ಜೆಡಿಎಸ್ಸಿನಲ್ಲಿರದು ಸರೀನಾ ಸಾರ್.”

“ನೀವೇಳಿದ್ದು ಸರಿನೆ, ಅದ್ರೆ ಕುಮಾರಣ್ಣ ನನ್ನ ಬುಟ್ಟು ಯಾರು ಸರಕಾರ ಮಾಡ್ತರೆ ನೋಡ್ತಿನಿ ಅಂದವುನಲಾ.”

“ಅಷ್ಟ್‌ವೊತ್ತಿಗೆ ಏನಾಗ್ತದೊ ಏನೋ, ಯಾರು ಕಂಡವುರೆ, ನೀವು ಡಿ.ಕೆಶಿಗೆ ತುಂಬ ಬೇಕಾದೊರಾದಾಗ ನಿಮ್ಮನ್ನ ನೆಗ್ಲೆಟ್ ಮಾಡಕ್ಕೆ ಬರಲ.”

“ನನ್ನನ್ನ ಯಾರೂ ನೆಗ್ಲೆಟ್ ಮಾಡಕ್ಕಾಗಲ್ಲ ಕಂಡ್ರಿ.”

“ಆಗಲ್ಲ ಸಾರ್, ಪವರಿಗೆ ಬಂದವುರ ಮನೆ ಬಾಗ್ಲಲ್ಲಿ ದಿನ ಹೋಗಿ ನಿಂತಗತ್ತಿರಿ, ಒಂದಿನ ವಳಿಗೆ ಕರದೇ ಕರಿತರೆ.”

“ಏನೇಳ್ತಯಿದ್ದಿರಿ ನೀವು.”

“ಆಗ ದೇವೆಗೌಡ್ರಿಗೆ ಅಂಗೆ ಮಾಡಿದ್ರಲ್ಲ ಸಾರ್, ಅವರು ಮುಖ್ಯಮಂತ್ರಿಯಾಗಿದ್ದಾಗ ಅಪ್ಪಾಜಿ, ಅಪ್ಪಾಜಿ ಅಂತ ಮನೆತಕ್ಕೊಗಿ ಕೂಗುತಿದ್ರಿ ಪಾಪ. ಅವುರ ಮಕ್ಕಾಳ್ಯಾರು ಅಂಗೆ ಕರಿತಿರಲಿಲ್ಲ. ಯಲ್ಲ ಯಪ್ಪ ಯಪ್ಪ ಅಂತಿದ್ದೊ ನೀವು ಅಪ್ಪಾಜಿ ಅಂತ ಕಾಲಿಗೆ ಬಿದ್ದಿದ್ದು ವರ್ಕೌಟಾಯ್ತು, ಹೌಸಿಂಗ್ ಬೋರ್ಡ್ ಛೇರ್ಮನ್ ಮಾಡಿದ್ರು.”

“ಅದ್ಯಲ್ಲ ಹಳೆ ಕತೆ, ಈಗಂಗಿಲ್ಲ ಅವುರು.”

“ನೀವಂಗೆ ಇದ್ದಿರಲ್ಲ ಸಾ, ನೀವು ಬದ್ಲಾಗಿದ್ರೆ ಹಿಂಗ್ಯಾಕಾಗದು.”

“ಅಲ್ಲ ಕಂಡ್ರಿ, ಸತ್ಯ ಮಾತಾಡದು ತಪ್ಪ.”

“ಏನು ಸತ್ಯ ಮಾತಾಡಿದ್ರಿ.”

“ಆ ಮಾದೇಗೌಡ ನನಿಗೆ ಎರಡು ಸತಿ ಟಿಕೆಟ್ ತಪ್ಪಿಸಿದ. ನಾನು ನಮ್ಮೂರಲ್ಲಿ ಒಬ್ಬನ ಮನೆ ಮ್ಯಾಲೆ ದಾಳಿ ಮಾಡಿಸಿದೆ. ಅದ ನೋಡಕ್ಕೆ ಬಂದ ಮಾದೇಗೌಡನಿಗೆ ನನ್ನ ಕಂಡ್ರಾಯ್ತಿರಲಿಲ್ಲ. ಸೋಲಂಗೆ ಮಾಡಿದ. ಆಗ ನಾನು ಗೆದ್ದಿದ್ರೆ ಯಸ್ಸೆಂ ಕೃಷ್ಣನ ಸಂಪುಟದಲ್ಲಿ ಡಿ.ಕೆ ಶಿವಕುಮಾರ್ ಜೊತೆ ನಾನು ಮಂತ್ರಿಯಾಯ್ತಿದ್ದೆ. ಡ್ರಸ್‌ನೂ ಕೂಡ ವಲಿಸಿದ್ದೆ ಕಂಡ್ರಿ, ವಟ್ಟುರಿಯಕ್ಕಿಲ್‌ವೆ ನನಿಗೆ.”

“ಡಿ.ಕೆ ಶಿವಕುಮಾರ್‌ಗೆ ಆಸ್ತಿ ಜಾಸ್ತಿಯಾಗಿ ತೊಂದ್ರೆ ಅನುಭವುಸ್ತಾಯಿದ್ರೆ, ನೀವು ನಾಳಗೆ ತೊಂದಗರಿಗೆ ಸಿಗಾತ್ತಾಯಿದ್ದಿರಿ ಸಾ.”

“ಸತ್ಯ ಮಾತಾಡದ್ರೆ ತಪ್ಪೇನ್ರಿ.”

“ಸತ್ಯ ಮಾತಾಡಿ ಅದರ ಪರಿಣಾಮ ಹೆದ್ರಸಕ್ಕೂ ರೆಡಿಯಾಗಿ.”

“ಈಗ ರೆಡಿಯಾಗಿ ಇದ್ದಿನಲ್ಲ, ನಿಂತ ನೆಲಿಲೆ ಕುಮಾರಸ್ವಾಮಿ ನನ್ನನ್ನ ವಜಾ ಮಾಡಿದ್ರೆ ಹೋಗಿ ಕಾಲಿಗೆ ಬೀಳಕ್ಕಾಯ್ತದಾ.”

“ಆಗಲ್ಲ ಸಾ, ಅವುರ ತಂದೆ ಕಾಲಿಗೇನೂ ಬೀಳಬಹುದು, ಆದ್ರೆ ಕುಮಾರಣ್ಣ ಕಾಲಿಗೆ ನಿಮ್ಮಂತ ಸೀನಿಯರು ಬೀಳಬಾರ್ದು.”

“ಅಲ್ಲ ಕಂಡ್ರಿ ಈ ಅಪ್ಪ ಮಕ್ಕಳು ನನ್ನ ಉಪಕಾರನೆ ಮರತುಬುಡ್ತರಲ್ಲ ಹೇಳಿ.”

“ಉಪಕಾರ ಏನು ಮಾಡಿದ್ರಿ ಸಾ.”

“ಸುಮಲತ ಎಲಕ್ಷನ್ನಿಗೆ ನಿಂತಾಗ ಇದೇ ನಾಗಮಂಗಲದಲ್ಲಿ ಪ್ರಧಾನ ಭಾಷಣಕಾರ ನಾನೆಯ, ಆಗ ಸುಮಲತಕ್ಕನ್ನ ಇವುಳು ಮಾಯಾಂಗನೆ ಜಯಲಲಿತ ಆಗಕ್ಕೆ ಬಂದವುಳೆ ಬುಡಬ್ಯಾಡಿ ಸೋಲಿಸಿ ಅಂದೆ. ಅಗ ದ್ಯಾವೇಗೌಡ್ರು ಮೆಚ್ಚಿ ಶಿವರಾಮೇಗೌಡರು ಮಾತನಾಡಿದ ಮೇಲೆ ನಾನು ಭಾಷಣ ಮಾಡೊ ಅಗತ್ಯ ಇಲ್ಲ ಅಂದ್ರು, ಅವತ್ತು ನಾನು ಕ್ಯಟ್ಟ ಮಾತಾಡಕ್ಕೆ ಪುಸಲಾಯಿಸಿದೋರು. ಇವತ್ತು ಅಂತವೇ ಮಾತಾಡಿದ್ರೆ ಪಾರ್ಟಿಯಿಂದ್ಲೆ ವಜಾ ಮಾಡ್ತಾರೆ ಇದಕೇನೇಳನ.”

“ಅದ್ಕೆ ಸಾರ್ ಯಾರಿಗೂ ಕೆಟ್ಟ ಮಾತಾಡಬಾರ್ದು.”

“ಅದ್ಯಂಗ್ರಿ ಇರಕ್ಕಾಯ್ತದೆ, ಕ್ಯಟ್ಟ ಮನುಸ್ರನ ವಳ್ಳೆ ಮನುಸ್ರು ಅನ್ನಕಾಯ್ತದೆ.”

“ಮಾದೇಗೌಡ್ರು ಕ್ಯಟ್ಟೊರಲ್ಲ, ಮಂಡ್ಯದ ರೈತ ನಾಯಕರು.”

“ಯಾವ ಸೀಮೆ ರೈತನಾಯಕ. ರೈತರಾಗಿದ್ರೆ ವಲ ಉಳತಿದ್ರು, ಮಂಡ್ಯಕ್ಕೆ ಬಂದು ರಾಜಕಾರಣ ಮಾಡತಿರಲಿಲ್ಲ.”

“ರೈತ ನಾಯಕರು ವಲ ಉಳೋ ಅಗತ್ಯಯಿಲ್ಲ, ಕೂಲಿಕೊಟ್ಟು ಉಳುಸಬಹುದು. ಇವತ್ತು ಕಾವೇರಿ ಇಶ್ಯೂ ಹಿಡಕಂಡು ಹೋರಾಡೊ ಅಂಥೋರು ವಬ್ರೂಯಿಲ್ಲ. ಯಾರಿಗೂ ಕೇರ್ ಮಾಡ್ದೆ ನೇರಾ ನೇರಾ ಮಾತಾಡತಿದ್ದ ಮಾದೇಗೌಡ್ರು ಸಮಾಧಿ ವಳಗಿದ್ದ ಕಂಡೇ ನಿಮ್ಮನ್ನ ವಜಾ ಮಾಡುಸ್ತರೆ ಅಂದ್ರೆ, ಅವುರ ಪವರೆಸ್ಟದೆ ಲ್ಯಕ್ಕ ಹಾಕಿ ಸಾ.”

“ಇದ್ಕೆ ನಿಮ್ಮನ್ನ ತಲಿಲ್ದ ಪತ್ರಕರ್ತರು ಅನ್ನದು.”

“ಅಂಗಂತಿರಾ.”

“ಮತ್ತಿನೇನು ಸಾಕ್ಷಿನೆ ಸಿಕ್ತಲ್ಲಾ, ಅಲ್ಲ ಕಂಡ್ರೀ ಜೆಡಿಎಸ್ಸು ಮಂಡ್ಯ ಜಿಲ್ಲೆಲಿ ನ್ಯಲೆ ಕಳಕತ್ತಾ ಅದೆ. ಅಂಥಾ ಟೈಮಲ್ಲಿ ನಾನು ಮಾದೇಗೌಡ್ರು ಬೋದಿದ್ದಿನಿ, ಅದ್ಕೆ ಕುಮಾರಣ್ಣ ಮಾದೇಗೌಡ್ರು ನಮ್ಮವರು, ಅವುರು ಒಕ್ಕಲಿಗರ ಲೀಡ್ರು ಅಂತ ಜಾತಿ ಮಾತಾಡಿ ನನ್ನ ವಜಾ ಮಾಡಿ ಜೆಡಿಎಸ್ ಬ್ಯಳಸಕ್ಕೆ ವಂಟವುರೆ, ಸುಮಲತನ್ನ ಬೈಯಿ ಅಂತ ಹೇಳಿದೋರು, ಮಾದೇಗೌಡ್ರು ಬೋದ್ರೆ ವಜಾ ಮಾಡ್ತರಲ್ಲಾ. ಇದು ರಾಜಕಾರಣ ಅಲವೇನ್ರಿ, ಅದರಲ್ಲೂ ಜಾತಿರಾಜಕಾರಣ ಅಲವೇನ್ರಿ. ಇಂತ ವಿಷಯನೆ ನಿಮಗೆ ತಿಳಿಯದಿಲ್ಲ. ಶಿವರಾಮೇಗೌಡ ಮಾದೇಗೌಡ್ರು ಬೋದ ಅಂತ ಅಲ್ಲೆ ಗಿರಕಿ ವಡಿತಿರಿ.”

“ಮಾದೇಗೌಡ್ರುನ ಏಕವಚನದಲ್ಲಿ ಅಂದು ಬಾಳ ಹಿಂದೆ ಸಾಯಬೇಕಾಗಿತ್ತು ಅಂದಿದ್ದು ತಪ್ಪಲವ ಸಾ.”

“ಅಂದಿದ್ದು ಆಯ್ತು, ಪಾರ್ಟಿಯಿಂದ ತಗದಾಕಿದ್ದು ಆಯ್ತು, ಈಗ್ಯಾಕ್ರಿ ತಪ್ಪಾಯ್ತು ಅನ್ನನಾ.”

“ಥೂತ್ತೇರಿ.”


ಇದನ್ನೂ ಓದಿ: ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...

‘ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದ ನೆಹರು, ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’: ಬಿಜೆಪಿ ಆರೋಪ

ನವದೆಹಲಿ: ಸೋಮನಾಥ ದೇವಾಲಯವನ್ನು ಹಿಂದೆ ಘಜ್ನಿ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿ ಲೂಟಿ ಮಾಡಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು ಎಂದು...

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...

ದೆಹಲಿ ಫೈಜ್-ಎ-ಇಲಾಹಿ ಮಸೀದಿ ಬಳಿ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ, ಉದ್ವಿಗ್ನತೆ; ಅಶ್ರುವಾಯು ಪ್ರಯೋಗ, 10 ಜನರ ಬಂಧನ

ದೆಹಲಿಯ ತುರ್ಕಮನ್ ಗೇಟ್-ರಾಮ್ಲೀಲಾ ಮೈದಾನ ಪ್ರದೇಶದಲ್ಲಿರುವ ಶತಮಾನಗಳಷ್ಟು ಹಳೆಯದಾದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಬುಧವಾರ ಮುಂಜಾನೆ ನಡೆದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ, ಇದು...