Homeಕರ್ನಾಟಕಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

ಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

- Advertisement -
- Advertisement -

ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಿಮ್ಸ್‌ನಲ್ಲಿ ಅಕ್ರಮ ನೇಮಕಾತಿ, ಅವ್ಯವಹಾರ ಎಡೆಬಿಡದೆ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಡಾ. ಗಜಾನನ ನಾಯಕ್ ಡೀನ್ ಕಮ್ ಡೈರೆಕ್ಟರ್ ಆಗಿಬಂದ ನಂತರ ಕಿಮ್ಸ್‌ನಲ್ಲಿ ಆರ್ಥಿಕ ಅನುದಾನ ದುರ್ಬಳಕೆ ಮಿತಿ ಮೀರಿದೆಯೆಂದು ಅದೇ ಸಂಸ್ಥೆಯಲ್ಲಿ ಅಧೀಕ್ಷಕಿಯಾಗಿದ್ದ ವೀಣಾ ಪಾಟೀಲ್ ಜಿಲ್ಲಾಧಿಕಾರಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಬರೋಬ್ಬರಿ ಏಳು ಪುಟಗಳ ದೂರು ಕೊಟ್ಟಿದ್ದೂ ಆಗಿದೆ.

ಅಕ್ರಮ ನೇಮಕಾತಿ ಮನಸೋ ಇಚ್ಚೆ ಡೈರೆಕ್ಟರ್ ಸಾಹೇಬರು ಮಾಡಿಮುಗಿಸಿದ್ದಾರೆಂದು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ. ಸುಮಾರು 100 ತಾಂತ್ರಿಕ ಸಿಬ್ಬಂದಿ ಕಿಮ್ಸ್‌ಗೆ ಅತೀ ಜರೂರ್ ಇರುವಾಗ ಲಾಭದಾಯಕವಾದ ತಾತ್ಕಾಲಿಕ ಸ್ವಚ್ಚತಾಗಾರ, ಕಾವಲುಗಾರ ನೇಮಕಾತಿ ಮಾಡಿಕೊಳ್ಳಲಾಗಿದೆ. 80 ಸ್ವಚ್ಛತಾ ಕರ್ಮಚಾರಿಗಳು ಮತ್ತು 30 ಕಾವಲುಗಾರರು ಇದ್ದರೂ ಸಹ ಸುಮಾರು 90 ಅನಾವಶ್ಯಕ ನೇಮಕಾತಿ ನಡೆದಿದೆ. 2021ರ ಜನವರಿಯಲ್ಲಿ ನೇಮಕವಾಗಿರುವ ಈ ಅನರ್ಹರಿಗೆ 2019ರ ಅಕ್ಟೋಬರ್‌ನಿಂದ ಪೂರ್ವಾನ್ವಯವಾಗುವಂತೆ ಸಂಬಳ ನೀಡಲಾಗಿದೆ. ಈ ಮೂರು ತಿಂಗಳ ವೇತವೇ ಹತ್ತಿರತ್ತಿರ 75 ಲಕ್ಷ. ಇದು ಸರ್ಕಾರಿ ಬೊಕ್ಕಸಕ್ಕೆ ಹೊರೆಯೆಂದು ದೂರಲಾಗಿದೆ.

ಡೀನ್ ಡಾ. ಗಜಾನನ ನಾಯಕ್ ಮಾಡಿರುವ ಹಲವು ನೇಮಕಾತಿಗಳಿಗೆ ಹಣಕಾಸು ಇಲಾಖೆಯಿಂದಾಗಲಿ, ಇನ್ನಿತರ ಸಕ್ಷಮ ಪ್ರಾಧಿಕಾರದ್ದಾಗಲಿ ಅನುಮತಿ ಇಲ್ಲ. ತಾತ್ಕಾಲಿಕ ಮತ್ತು ಖಾಯಂ ಬೊಧಕ ಸಿಬ್ಬಂದಿ ನೇಮಕಾತಿ ಎಲ್ಲ ನೀತಿ-ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿದೆ. ಸರ್ಕಾರದಿಂದ ಮಂಜೂರಾತಿಯಿಲ್ಲದ ಹುದ್ದೆಗಳನ್ನು ಹುಟ್ಟು ಹಾಕುವುದರಲ್ಲಿ ಈ ಡೈರೆಕ್ಟರ್ ನಿಸ್ಸೀಮನೆನ್ನುವ ಅಧೀಕ್ಷಕಿ ವೀಣಾ ಪಾಟೀಲ್ ತಾನು ಡೀನ್ ಹೇಳಿದಂತೆ ಕೇಳುವುದಿಲ್ಲವೆಂಬ ಕಾರಣಕ್ಕೆ ತನ್ನ ಕೈಲಿದ್ದ ಆರ್ಥಿಕ ವ್ಯವಹಾರ ಮತ್ತು ನಗದು ವಿಭಾಗ ಬೇರೆಯವರಿಗೆ ವಹಿಸಿದ್ದಾರೆ; ಅಷ್ಟೇ ಅಲ್ಲ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿಲ್ಲದ ’ಹಿರಿಯ ಕಚೇರಿ ಅಧೀಕ್ಷಕಿ’ ಎಂಬ ಬಿರುದು ದಯಪಾಲಿಸಿದ್ದಾರೆಂದು ಆರೋಪಿಸಿದ್ದಾರೆ.

ಡೀನ್ ಡಾ. ಗಜಾನನ ನಾಯಕ್

ಡೀನ್ ಡಾ. ನಾಯಕ್ ತಮ್ಮ ಪರಮಾಪ್ತ ಶಿಷ್ಯೆ ಡಾ.ಮಹಾಲಕ್ಷ್ಮಿ ಕರ್ಲವಾಡ್‌ರನ್ನು ಮೀಸಲಾತಿ ಹಾಗು ನೇಮಕಾತಿ ನಿಯಮಗಳನ್ನೆಲ್ಲ ಧಿಕ್ಕರಿಸಿ ವಿಧಿ ವಿಜ್ಞಾನ ಶಾಸ್ತ್ರ [ಫಾರೆನ್ಸಿಕ್ ಸೈನ್ಸ್] ವಿಭಾಗದ ಸಹಾಯಕ ಅಧ್ಯಾಪಕಿಯಾಗಿ ನೇಮಿಸಿರುವುದು ದೊಡ್ಡ ವಿವಾದ ಹುಟ್ಟು ಹಾಕಿದೆ. ಫೊರೆನ್ಸಿಕ್ ವಿಭಾಗದಲ್ಲಿ ಹುದ್ದೆ ಖಾಲಿಯಿಲ್ಲದಿದ್ದರೂ, ಅವಶ್ಯಕತೆಯಿಲ್ಲದಿದ್ದರೂ ಈ ನೇಮಕಾತಿ ಮಾಡಿಕೊಳ್ಳಲಾಗಿದೆಯೆಂದು ಹೆಸರು ಹೇಳಿಕೊಳ್ಳದ ನೌಕರರು ಹೇಳುತ್ತಾರೆ. ಕೆಲವು ತಿಂಗಳ ಹಿಂದೆ ಆ ಅಧ್ಯಾಪಕಿಗೆ ಯಾವುದೇ ನಿಯಮ ಬದ್ದ ಪ್ರಕಿಯೆಯಿಲ್ಲದೆ ಖಾಯಂ ಮಾಡಿ ಲಕ್ಷಗಟ್ಟಲೆ ಸಂಬಳ ಬರುವಂತೆ ನೋಡಿಕೊಳ್ಳಲಾಗಿದೆ!

ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಖಾಯಂ ಅಧ್ಯಾಪಕರ ನೇಮಿಸುವಾಗ ವೈದ್ಯಕೀಯ ಶಿಕ್ಷಣ ಇಲಾಖೆಯ ಅನುಮತಿ, ಅನುಮೋದನೆ ಮತ್ತು ಆದೇಶವಿರಲೇಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಡಾ.ಮಹಾಲಕ್ಷ್ಮಿ ಕರ್ಲವಾಡ್‌ರ ನೇಮಕಾತಿಯಲ್ಲಿ ಈ ನಿಯಮಗಳ್ಯಾವುದನ್ನು ಪ್ರಜ್ಞಾಪೂರ್ವಕವಾಗೆ ಪಾಲಿಸಿಲ್ಲ ಎನ್ನಲಾಗಿದೆ. ತರಾತುರಿಯಲ್ಲಿ ಈ ನೇಮಕಾತಿ ನಡೆಸಲಾಗಿದ್ದು, ಡಾ.ನಾಯಕ್ ಕಿಮ್ಸ್ ನಿರ್ದೇಶಕರಾಗಿ ಬಂದ ಒಂದೇ ತಿಂಗಳಲ್ಲಿ ಅಂದರೆ 07-02-2020ರಂದು ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಫೊರೆನ್ಸಿಕ್ ಸೈನ್ಸ್ ವಿಭಾಗದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಬ್ಯಾಕ್‌ಲಾಗ್‌ನಲ್ಲಿ ಒಂದು ಸಹಾಯಕ ಪ್ರಾಧ್ಯಾಪಕಿ ಹುದ್ದಗೆ ಅರ್ಜಿ ಕರೆಯಲಾಗಿದೆ. ವಾಸ್ತವಿಕವಾಗಿ ಕಿಮ್ಸ್‌ನಲ್ಲಿ ಇಂತದೊಂದು ಹುದ್ದೆ ಖಾಲಿಯಿರುವುದಿಲ್ಲ.

ಹಿಂದಿನ ನೇಮಕಾತಿ ಪ್ರಕಟಣೆಯಲ್ಲಿ ಸೂಚಿಸಿದ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹುದ್ದೆಗಳು ಭರ್ತಿಯಾಗದಿದ್ದರಷ್ಟೇ ಅದನ್ನು ಮುಂದಿನ ಅಧಿಸೂಚನೆಯಲ್ಲಿ ಬ್ಯಾಕ್‌ಲಾಗ್ ಎಂದು ಪರಿಗಣಿಸಲಾಗುತ್ತದೆ. ಆದರೆ 8-8-2019 ಮತ್ತು 12-12-2019ರ ನೇಮಕಾತಿ ಪ್ರಕಟಣೆಯಲ್ಲಿ ಸದ್ರಿ ಹುದ್ದೆಯ ಪ್ರಸ್ತಾಪವೇ ಇಲ್ಲ. ಆದರೂ ಫೊರೆನ್ಸಿಕ್ ಸೈನ್ಸ್ -ಅಸಿಸ್ಟೆಂಟ್ ಪ್ರೊಫೆಸರ್ ಎಸ್‌ಟಿ ಲೇಡಿ ಬ್ಯಾಕ್ ಲಾಗ್ ಎಂದು ಸುಳ್ಳು ನಮೂದಿಸಲಾಗಿದೆ! ಕಿಮ್ಸ್‌ನಲ್ಲಿ ಒಟ್ಟೂ 49 ಸಹಾಯಕ ಅಧ್ಯಾಪಕ ಹುದ್ದೆಗಳಿವೆ. ಮೀಸಲಾತಿ ಅನುಪಾತದಂತೆ ಇದರಲ್ಲಿ ಎಸ್‌ಟಿ ವರ್ಗಕ್ಕೆ ಎರಡು ಹುದ್ದೆ ಮೀಸಲಿರಬೇಕು. ಡಾ.ಆಂಜನೇಯ ಎಸ್‌ಟಿ ಪುರುಷ ಮತ್ತು ಭಾಗ್ಯ ಶ್ರೀ ಬೋಯರ್ ಎಸ್‌ಟಿ ಮಹಿಳೆ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸಧ್ಯ ಎಸ್‌ಟಿ ಪ್ರವರ್ಗದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅವಕಾಶವಿಲ್ಲ. ವಿಧಿವಿಜ್ಞಾನ ವಿಭಾಗಕ್ಕೆ ಮಂಜೂರಾಗಿರುವುದು ಒಂದೇ ಒಂದು ಸಹಾಯಕ ಪ್ರಾಧ್ಯಾಪಕ ಸ್ಥಾನ. ಇದೂ ಕೂಡ ಭರ್ತಿಯಾಗಿದೆ. ಆದ್ದರಿಂದ ಮತ್ತೊಂದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ನಡೆಸುವಂತಿಲ್ಲ.

ಇದೆಲ್ಲ ಮರೆಮಾಚಿ ನೇಮಕಾತಿಗೆ ರಹಸ್ಯ ಅಧಿಸೂಚನೆ ಹೊರಡಿಸಲಾಗಿದೆ. ಇದೊಂದು ರಾಜ್ಯ ಮಟ್ಟದ ಆಯ್ಕೆಯಾದ್ದರಿಂದ ರಾಜ್ಯ ಮಟ್ಟದ ಎರಡು ದಿನ ಪತ್ರಿಕೆ [ಒಂದು ಕನ್ನಡ ಮತ್ತೊಂದು ಇಂಗ್ಲಿಷ್] ಎಲ್ಲಾ ಆವೃತ್ತಿಯಲ್ಲಿ ಜಾಹೀರಾತು ನೀಡಬೇಕು. ಆದರೆ ಸ್ಥಳೀಯ ಪತ್ರಿಕೆಯಲ್ಲಷ್ಟೇ ಪ್ರಕಟಣೆ ಬರುವಂತೆ ನೋಡಿಕೊಳ್ಳಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದವರಿಗೆ ನೀಡಬೇಕಾದ 371 [ಜೆ]ದಂತೆ ಶೇ.8 ಮೀಸಲಾತಿಗೂ ಆಸ್ಪದ ಕೊಡದೆ ಸರ್ಕಾರಿ ಆದೇಶ ಧಿಕ್ಕರಿಸಲಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ನಂತರ ಆಕ್ಷೇಪಗಳಿಗೆ ಕನಿಷ್ಟ 15 ದಿನ ಕಾಲಾವಕಾಶ ಕೊಡಬೇಕು. ಅಂತಿಮ ಆಯ್ಕೆ ಪಟ್ಟಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆ ಪಡೆದು ನೇಮಕಾತಿ ಆದೇಶ ಕೊಡಬೇಕು. ಆದರೆ ಕಿಮ್ಸ್‌ನ ಫೊರೆನ್ಸಿಕ್ ಪ್ರಾಧ್ಯಾಪಕಿ ನೇಮಕಾತಿ ಪ್ರಹಸನದಲ್ಲಿ 17-02-2020ರಂದು ಸಂದರ್ಶನ ನಡೆಸಿದಂತೆ ದಾಖಲೆ ಸೃಷ್ಟಿಸಲಾಗಿದೆ. 20-07-2020ರಂದು ಡಾ.ಮಹಾಲಕ್ಷ್ಮಿ ಕರ್ಲವಾಡ್‌ಗೆ ನೇಮಕಾತಿ ಆದೇಶ ಸಿಕ್ಕಿಬಿಟ್ಟಿದೆ! ತಾತ್ಕಾಲಿಕ ಪಟ್ಟಿ ಪ್ರಕಟವಾದಂದೇ ನೇಮಕಾತಿಯೂ ನಡೆದುಹೋಗಿದೆ!! ಆಕ್ಷೇಪಣೆಗೆ ಯಾವ ಅವಕಾಶವು ಕೊಟ್ಟಿಲ್ಲ. ಈ ಆದೇಶಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆಯೂ ಇಲ್ಲ. ಹಾಗಾಗಿ ಈ ನೇಮಕಾತಿಗೆ ಯಾವುದೆ ಸಿಂಧುತ್ವವಿಲ್ಲ. ಇಡೀ ಖೋಟಾ ಪ್ರಕ್ರಿಯೆಯಲ್ಲಿ ಕಿಮ್ಸ್ ನಿರ್ದೇಶಕ ಡಾ.ನಾಯಕ್ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್‌ಕುಮಾರ್‌ರನ್ನು ಯಾಮಾರಿಸಿದರೋ? ಅಥವಾ ಅನಿಲ್‌ಕುಮಾರ್ ಗೊತ್ತಿದ್ದೂ ಸುಮ್ಮನಿದ್ದಾರೋ ಅರ್ಥವಾಗುವುದಿಲ್ಲವೆಂದು ಕಿಮ್ಸ್‌ನಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಮಂತ್ರಿ ಡಾ.ಸುಧಾಕರ್‌ಗೆ ಕಿಮ್ಸ್‌ನ ಅಕ್ರಮ ನೇಮಕಾತಿ ಬಗ್ಗೆ ತಿಳಿದಿದೆಯೇ? ಇನ್ನಾದರು ಸಂಬಂಧಿಸಿದವರು ಎಚ್ಚೆತ್ತು ಪರಿಶಿಷ್ಟ ಪಂಗಡ ಅರ್ಹರಿಗಾದ ಅನ್ಯಾಯ ಸರಿಪಡಿಸುವರಾ? ಅನುದಾನಗಳು ಪೋಲಾಗುತ್ತಿರುವುದು, ಆಗುತ್ತಿರುವ ಆಧ್ವಾನಗಳ ತನಿಖೆ ನಡೆಸುವರಾ? ಕಾದು ನೋಡಬೇಕು.


ಇದನ್ನೂ ಓದಿ: ಕಾರವಾರ: ಕಾಂಗ್ರೆಸ್ ಕಾರ್ಯಕರ್ತನಿಗೆ PSIನಿಂದ ಥಳಿತ ಆರೋಪ – ಠಾಣೆಗೆ ಮುತ್ತಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...