Homeಡೇಟಾ ಖೋಲಿಭಾರತದಾಗ ಬರೇ 40,000 ವೆಂಟಿಲೇಟರ ಅವ. ಅಂದ್ರ ಕೊರೊನಾ ಬಂದ್ರ ಅಷ್ಟು ಜನ ಮಾತ್ರ ಉಳಿತಾರ?

ಭಾರತದಾಗ ಬರೇ 40,000 ವೆಂಟಿಲೇಟರ ಅವ. ಅಂದ್ರ ಕೊರೊನಾ ಬಂದ್ರ ಅಷ್ಟು ಜನ ಮಾತ್ರ ಉಳಿತಾರ?

ಮತ್ತ ಈಗ ನಮ್ಮ ಎದುರಿಗೆ ಇರೋ ಬಕಾಸುರನ್ನ ನಾವು ಸೋಲಿಸಲಿಕ್ಕೆ ಸಾಧ್ಯ ಇಲ್ಲ. ಅವನಿಗೆ ದಿನಾ ಒಂದು ಬಲಿ ಕೊಟ್ಟು ನಾವು ಸಾದು ಮಾಡಿ ಇಟಗೋಬೇಕು ಅಂತ ಅಂದು ಕೊಂಡಿದ್ದರು. ಅವರು ಕಷ್ಟ ಇರೋ ಪರಿಹಾರಗಳನ್ನು ಗಣನೆಗೆ ತೊಗೋಳಿಲ್ಲ. ಸರಳ ಹಾದಿ ಹಿಡದರು.

- Advertisement -
- Advertisement -

ಕೈಲೆ ಆಗಲಾರದಾಗ ಕಥಿ ಹೇಳಿದರೂ ಅನ್ನೋ ಹಂಗ ನಮ್ಮ ಜಾವಡೇಕರ ಅಣ್ಣಾರು ಠೀವಿ ಮ್ಯಾಲೆ ರಾಮಾಯಣ- ಮಹಾಭಾರತ, ಶಕ್ತಿಮಾನು- ವ್ಯೋಮಕೇಶ ಬಕ್ಷಿ ತೋರಸಾಕ ಹತ್ಯಾರು. ಯಾರೂ ಎಲ್ಯೂ ಹೊರಗ ಹೋಗಬ್ಯಾಡ್ರಿ, ಸುಮ್ಮನೆ ಒಂದ ಕಡೆ ಕುತಗೊಂಡು ನೋಡರಿ ಅಂತ ಹೇಳ್ಯಾರು. ಆ ರಾಮಾಯಣದಾಗ ಒಂದು ಕಥಿ ಬರತದ. ಲಕ್ಷ್ಮಣನ ಮ್ಯಾಲೆ ರಾವಣನ ಮಗಾ ಮೇಘನಾಥ ಶಿವನ ಪ್ರಸಾದವಾದ ಪಾಶುಪತ ಅಸ್ತ್ರವನ್ನು ಬಿಡತಾನ. ಅಲ್ಲಿ ತನಕಾ ಎಲ್ಲಾ ಅಸ್ತ್ರಗಳನ್ನ ಎದುರಿಸಿದ ಲಕ್ಷ್ಮಣ ಪಾಶುಪತಕ್ಕ ಮಾತ್ರ ವಿರೋಧ ಮಾಡೋದಿಲ್ಲ. ಅದಕ್ಕ ಶಿರಸಾವಹಿಸಿ ನಮಸ್ಕಾರ ಮಾಡತಾನ. ಅದು ಅವನ ಸುತ್ತ ಹಾಸಿ ಹೋಗಿ ಬಿಡತದ.

ಅವನಿಗೆ ಏನೂ ತೊಂದರೆ ಆಗಂಗಿಲ್ಲ.

ಈ ದುರಿತ ಕಾಲದಾಗ ತ್ರೇತಾಯುಗದ ನೆನಪು ಯಾಕ ಆತಪಾ ಅಂದರ ಈ ಕೊರೊನಾಸುರನ ವಿರುದ್ಧ ನಾವು ಇಟ್ಟಿರೋ ಎಲ್ಲಾ ಹೆಜ್ಜೆಗಳಿಗಿಂತ ಮೀರಿದ್ದು ಒಂದು ಹೆಜ್ಜೆ ಐತಿ. ಅದು ʻಹಿಂಡು ನಿರೋಧʼ. ಈಗಿನ ಕೆಲವು ವಿಜ್ಞಾನಿಗಳು ʻಹೆರ್ಡ ಇಮ್ಯುನಿಟಿʼ ಅಥವಾ ʻಹಿಂಡು ನಿರೋಧʼವೇ ಕೊರೋನಾ ಹೋರಾಟದ ಸುಲಭ ಉಪಾಯ ಅಂತ ಹೇಳಿಕೊಂಡು ಓಡಾಡಲಿಕ್ಕೆ ಹತ್ಯಾರ. ಏನು ಇದು ಹಿಂಡು ನಿರೋಧ?

ಈ ಥಿಯರಿ ಪ್ರಕಾರ ಒಂದು ದೇಶದ 10 ರಿಂದ 40 ಶೇಕಡಾ ಜನರಿಗೆ ಒಂದು ರೋಗದ ಸೋಂಕು ತಗಲಿದರ, ಅವರೂ ಸೇರಿದಂಗ ಇಡೀ ದೇಶ ಗುಣ ಆಗತದ. ಈ ಪ್ರಕ್ರಿಯಾದಾಗ ಕೆಲವರು ಸಾಯಬಹುದು. ಅವರನ್ನ ಕೆರೆಗೆ ಹಾರಕ್ಕ ನಾವು ಬಲಿ ಕೊಟ್ಟ ಸಣ್ಣ ಸೊಸೆ ಅಂತ ತಿಳಕೊಂಡು ಸುಮ್ಮನೇ ಇರಬೇಕು. ಅದನ್ನ ಬಿಟ್ಟು ಈ ಪೀಡೆಗೆ ಬ್ಯಾರೆ ಔಷಧ ಇಲ್ಲ, ಅಂತ ಅವರ ವಾದ.

ಹಂಗ ನೋಡಿದರ ಯಾವುದೇ ವೈರಸ್ಸಿಗೆ ಔಷಧ ಅನ್ನೋದು ಇಲ್ಲ. ವರ್ಷದಾಗ ಮೂರು ಸಲಾ ಬರೋ ನೆಗಡಿಗೂ ಇಲ್ಲ, ಹಣೆಬರಾ ಕೆಟ್ಟಾಗ ಬರೋ ಕರೋನಾಕ್ಕೂ ಇಲ್ಲ.

ಅದರ ವಿರುದ್ಧ ಔಷಧ ಮಾಡಲಿಕ್ಕೆ ಯಾಕ ಬರಂಗಿಲ್ಲ ಅಂದರ ಅದು ತನ್ನ ರೂಪ ತಾನು ಹಗಲೆಲ್ಲಾ ಬದಲಿ ಮಾಡಿಕೋತದ. ಟ್ರಾನ್ಸ್ ಫಾರ್ಮರ್ ಪಿಕ್ಚರನ್ಯಾಗ ಕಾರು ಹೋಗಿ ರೋಬೋಟ್ ಆದಂಗ. ಒಂದು ರೂಪಕ್ಕ ಔಷಧ ಕಂಡು ಹಿಡದರ ಅದು ಬ್ಯಾರೆ ರೂಪ ಧರಿಸಿ ಔಷಧವನ್ನ ನಿರುಪಯೋಗಿ ಮಾಡಿ ಬಿಡತದ.

ಆದರ ವೈರಸ್ಸಿಗೆ ಒಂದು ವರ್ಷದ ನಿರೋಧಕ ಶಕ್ತಿ ಕೊಡೋ ಹಂತಾ ಲಸಿಕೆ ತಯಾರಿಸಬಹುದು. ಲಸಿಕೆ ಅಂದರ ಅದೇ ವೈರಸ್ಸಿನ ನಿರುಪದ್ರವಿ ರೂಪ. ಎಲ್ಲಾರಿಗೂ ಸಣ್ಣ ಪ್ರಮಾಣದಾಗ ಅದೇ ವೈರಸ್ಸಿನ ನಿರುಪದ್ರವಿ ರೂಪವನ್ನು ಕೊಟ್ಟರ ಅವರ ದೇಹ ಅದರ ವಿರುದ್ಧ ನಿರೋಧಕ ಶಕ್ತಿ ಬೆಳಿಸಿಗೋತದ. ಢಿಪ್ತೀರಿಯಾದಂತ ಲಸಿಕೆಯಿಂದ ರೋಗಕ್ಕ ಜೀವನ ಪೂರ್ತಿ ನಿರೋಧಕ ಶಕ್ತಿ ಬರತದ. ವೈರಸ್ಸಿನ ಲಸಿಕೆಗಳಿಂದ ಒಂದು ವರ್ಷ- ಎರಡು ವರ್ಷದ ವರೆಗೆ ನಿರೋಧಕ ಶಕ್ತಿ ಬರತದ.

ಹಿಂಡು ನಿರೋಧದಾಗ ಏನು ಆಗತದ ಅಂದರ ಒಬ್ಬ ಮನುಷ್ಯನ ದೇಹದಿಂದ ಹೊರಗ ಬಂದ ವೈರಸ್ಸು ಇನ್ನೊಬ್ಬನ ದೇಹದಾಗ ಹೋಗತದ. ಹಂಗ ಆಗೋವಾಗ ಮೊದಲಿನವನ ದೇಹದ ಜೊತೆ ಜಗಳ ಆಡಿ, ತನ್ನ ಶಕ್ತಿ ಕಳಕೊಂಡು ದುರ್ಬಲ ಆಗಿರತದ. ಹಂಗ ಒಬ್ಬರಿಂದ ಒಬ್ಬರಿಗೆ ಹೋಗಿ ಹೋಗಿ ಕಡೀಕೆ ಅದು ನಮ್ಮ ದೇಹದಾಗ ಇದ್ದರೂ ಸಹ ನಮಗ ಏನೂ ಮಾಡಲಾರದ ಹಂಗ ಆಗಿ ಬಿಡತದ. ಆಗ ಅದಕ್ಕ ಯಾವ ಲಸಿಕೆನೂ ಬ್ಯಾಡ. ಇಡೀ ಸಮಾಜ ಅದರ ವಿರುದ್ಧ ಸ್ವಾಭಾವಿಕ ನಿರೋಧಕ ಶಕ್ತಿ ಬೆಳಿಸಕೊತದ.

ಇಂಥಾ ಪ್ರಯೋಗ ಈಗಾಗಲೇ ನಡದು ಬಿಟ್ಟಾವು . ಇಂಗ್ಲಂಡದಾಗ ರೋಗ ಹರಡಿದರ ಚಿಂತಿಲ್ಲ. ಹಬ್ಬಿದವರಿಗೆಲ್ಲ ಔಷಧಿ ಸಿಗಬೇಕು, ಸಿಗೋಹಂಗ ನಾವು ಮಾಡತೇವಿ ಅಂತ ಅವರು ಅಂತಾರು. ಕೇವಲ ಮುಂಜಾಗೃತೆ ಕ್ರಮ ಕೈಕೊಳ್ಳಲಿಕ್ಕೆ ಹತ್ಯಾರು.

ನೆದರಲ್ಯಾಂಡ್ಸದವರು ʻಬಾರದು ಬಪ್ಪುದು, ಬಪ್ಪುದು ತಪ್ಪುದುʼ ಅಂತ ಸುಮ್ಮನಿದ್ದು ಬಿಟ್ಟಾರ. ಎಷ್ಟು ಜನಾ ರೋಗಿಗಳಾದರೂ ಸರಿ ನಮ್ಮಲ್ಲೆ ಆಸ್ಪತ್ರೆ ಅದಾವು. ವೆಂಟಿಲೇಟರ ಅದಾವು. ನಾವು ಯಾರನ್ನೂ ಸಾಯಲಿಕ್ಕೆ ಬಿಡಂಗಿಲ್ಲ ಅಂತ ಹೇಳಿ ಸುಮ್ಮನೇ ಇದ್ದು ಬಿಟ್ಟಾರ.

ಆದರ ಭಾರತ ಹಿಂಗ ಮಾಡಲಿಕ್ಕೆ ಸಾಧ್ಯ ಅದ ಏನು? ನಮ್ಮ ಆರೋಗ್ಯ ವ್ಯವಸ್ಥೆ ಎಲ್ಲಾರನ್ನೂ ಕಾಳಜಿ ಮಾಡುವಂಥಾದ್ದು ಅದ ಏನು? ಒಂದು ನೂರಾ ಮೂವತ್ತು ಕೋಟಿ ಜನಸಂಖ್ಯೆಯ ಈ ದೇಶದಾಗ ಬರೇ 40,000 ವೆಂಟಿಲೇಟರ ಅವ ಅಂತ. ಮಹಾಮಹಿಮರ ಮೇಕಿನ್ ಇಂಡಿಯಾ ಆಗಲಿ, ಆಮದು – ರಫ್ತು ನೀತಿ ಆಗಲಿ ಅದನ್ನು ಹೆಚ್ಚು ಮಾಡಲಿಕ್ಕೆ ಆಗಿಲ್ಲ. ದೇಶದ ನಲವತ್ತು ಶೇಕಡಾ ಜನ ಅಂದರ ಸುಮಾರು 50 ಕೋಟಿ ಜನರಿಗೆ ಈ ರೋಗ ಬಂತಂತಂದರ ಏನು ಆಗಬಹುದು. ಈಗಿನ ಲೆಕ್ಕದಾಗ 100 ಜನರಿಗೆ ರೋಗ ಬಂದರ ಐದು ಜನ ಸಾಯತಾರ. ಆ ಲೆಕ್ಕದಾಗ ಸುಮಾರು 2.5 ಕೋಟಿ ಜನ ಸಾಯಬೇಕು. ಅದರಾಗ ಬರೇ 40,000 ಮಂದಿನ್ನ ನಾವು ಉಳಿಸಿಕೊಳ್ಳಬಹುದು. ಅದರಾಗ 25,000 ಶಾಸಕರು, ಅವರ ಕುಟುಂಬದವರು, 800 ಸಂಸತ್ತು ಸದಸ್ಯರು ಹಾಗೂ ಕುಟುಂಬದವರು, 6,000 ಐಎಎಸ್ಸು ಅಧಿಕಾರಿಗಳು ಹಾಗೂ ಅವರ ಸ್ಟೆನೋ- ಡ್ರೈವರುಗಳು ಇತ್ಯಾದಿಗಳನ್ನು ಬಿಟ್ಟರ ಉಳಿದವರಿಗೆ ಚಾನ್ಸು ಸಿಗಲಿಕ್ಕೆ ಇಲ್ಲ.

ಹಿಂಡು ನಿರೋಧದ ಹೆಸರಿನ್ಯಾಗ ನಾವು 2 ಕೋಟಿ, 40 ಲಕ್ಷ, 96 ಸಾವಿರ ಜನರನ್ನು ಕಳದು ಕೊಳ್ಳಲಿಕ್ಕೆ ತಯಾರಿದ್ದೇವೇನು? ಈ ಪ್ರಶ್ನೆ ಸರಳ, ಉತ್ತರ ಕಠಿಣ.

ರಾಮಾಯಣದಿಂದ ಶುರು ಮಾಡಿದ ಕಥಿ ಮಹಾಭಾರತದಿಂದ ಮುಗಸೋಣು. ಭಾರತದ ಅತಿ ಜನಪ್ರಿಯ ಅಡ್ಡಕತಿಯೊಳಗ ಒಂದು ಬಕಾಸುರನ ಕಥಿ. ಇದರಿಂದ ಕನ್ನಡ ಹಾಗೂ ಇತರ ಭಾಷಾದಾಗ ಗಾದಿ ಮಾತು ಶುರು ಆದವು. ಬಕಾಸುರನ ಗತೆ ತಿನ್ನೊದು, ಬಕಾಸುರನ ಹೊಟ್ಟಿಗೆ ಅರ್ಧಾ ರುಪಾಯಿ ಮಜ್ಜಿಗಿ, ಬಕಾಸುರನ ಹಸಿವು, ಇತ್ಯಾದಿ.

ಇದರಾಗ ಊರ ಹೊರಗಿನ ರಾಕ್ಷಸ ಬಂದು ಎಲ್ಲಾರನೂ ಒಂದ ಕಾಲಕ್ಕೆ ನಾಶ ಮಾಡಬಾರದು ಅಂತ ಹೇಳಿ ಅಲ್ಲಿನ ಜನ ಅವನ ಸಂಗ್ತೆ ಒಂದು ಒಪ್ಪಂದ ಮಾಡಿಕೊಂಡಿದ್ದರು. ಅದೇನಪಾ ಅಂದರ ದಿನಾ ಒಬ್ಬ ಮನುಷಾನ್ನ, ಒಂದು ಬಂಡಿ ಅನ್ನದ ಜೊತೆ ಆ ರಾಕ್ಷಸನಿಗೆ ತಿನ್ನಲಿಕ್ಕೆ ಕಳಸೋದು. ಅವಾ ಒಂದು ವರ್ಷದಾಗ 365 ಜನರನ್ನ ತಿನಕೊಂಡು ಸುಮ್ಮನೇ ಇದ್ದ. ಆ ಊರಿನ ಕಡೆ ವಾಕಿಂಗ್ ಬರಲಿಲ್ಲ. ಕಡೀಕೆ ಒಂದು ದಿವಸ ಕುಂತಿ ಹಾಗೂ ಅಕಿ ಮಕ್ಕಳು ಆ ಊರಿಗೆ ಅಜ್ಞಾತವಾಸಕ್ಕ ಬಂದರು. ಆ ಕಥೀ ಕೇಳಿದರು. ತಾಯಿಗೆ ತಕ್ಕ ಮಗ ಭೀಮ ಗಿನೀ ಪಿಗ್ ಆಗಲಿಕ್ಕೆ ಒಪ್ಪಿದ. ಬಕಾಸುರನ ಕಥಿ ಮುಗಸಿದ.

ಮೂಲ ಭಾರತದಾಗ ಇದು ಬರೇ ಒಂದು ಪುಟದಷ್ಟು ಸಣ್ಣ ಕಥಿ. ಆದರ ಅದರಾಗ ಭಾಳ ದೊಡ್ಡ ದೊಡ್ಡ ಪಾಠ ಅದಾವು. ಬಕಾಸುರನಿಗೆ ಎಲ್ಲಾರನ್ನೂ ಒಂದೇ ಕಾಲಕ್ಕ ನಾಶ ಮಾಡಲಿಕ್ಕೆ ಬರತಿತ್ತೋ ಇಲ್ಲೋ, ಆದರ ಜನಾ ಹಂಗ ತಿಳಕೊಂಡಿದ್ದರು. ಇನ್ನು ತಮ್ಮ ಊರಾಗ ಇರೋ ಕೆಲವರನ್ನು ಕೊಂದು ಉಳಿದವರು ಬದಕೋದು ಎನು ತಪ್ಪಲ್ಲ ಅಂತ ಅವರು ನಂಬಿದ್ದರು. ಅದರ ಬಗ್ಗೆ ಅವರಿಗೆ ನೈತಿಕ ಹಿಂಜರಿಕೆ ಇರಲಿಲ್ಲ. ಮೊನ್ನೆ ನಮ್ಮ ಬಿಳೇಮನಿ ಟ್ರಂಪಣ್ಣನವರ್ ಅವರು ಇಂಥಾದ ಮಾತು ಆಡ್ಯಾರ. ಕೆಲವು ಜನ ಸಾಯಬಹುದು, ಆದರ ವಿಶ್ವದ ಆರ್ಥಿಕ ಸ್ಥಿತಿ ಅಮೇರಿಕದ ಮ್ಯಾಲೆ ನಿಂತದ. ನಮ್ಮ ವ್ಯವಸ್ಥೆ ಕುಸಿದು ಬಿದ್ದರ ಇಡೀ ಜಗತ್ತು ಕುಸಿತದ, ಇತ್ಯಾದಿ, ಇತ್ಯಾದಿ.

ಮತ್ತ ಈಗ ನಮ್ಮ ಎದುರಿಗೆ ಇರೋ ಬಕಾಸುರನ್ನ ನಾವು ಸೋಲಿಸಲಿಕ್ಕೆ ಸಾಧ್ಯ ಇಲ್ಲ. ಅವನಿಗೆ ದಿನಾ ಒಂದು ಬಲಿ ಕೊಟ್ಟು ನಾವು ಸಾದು ಮಾಡಿ ಇಟಗೋಬೇಕು ಅಂತ ಅಂದು ಕೊಂಡಿದ್ದರು. ಅವರು ಕಷ್ಟ ಇರೋ ಪರಿಹಾರಗಳನ್ನು ಗಣನೆಗೆ ತೊಗೋಳಿಲ್ಲ. ಸರಳ ಹಾದಿ ಹಿಡದರು. ಇವತ್ತಿನ ನಮ್ಮ ದೇಶದ ಹಾಗೂ ಇತರ ದೇಶದ ನಾಯಕರು ಭಾಳ ಜನ ಹಿಂದ ಇದ್ದಾರ. ಅವರಿಗೆ ಸುಲಭವಾದ ಪರಿಹಾರ ಕಾಣತಾವ ಹೊರತು ಕಷ್ಟದ್ದವು ಕಾಣಂಗಿಲ್ಲ.

ಇವುಕುರ ಜೊತೆಗೆ ಚಾಣಕ್ಯ ಅಂತ ಇನ್ನೊಂದು ಸೀರಯಲ್ಲು ಬರತಿತ್ತು. ಅದರಾಗ ಒಂದು ಮಂತ್ರ ಇತ್ತು. ಸರ್ವೇ ಭವಂತು ಸುಖಿನಹ – ಸರ್ವೇ ಸಂತು ನಿರಾಮಯ ಅಂತ. ಅಂದರ ಸರ್ವೇ ಇಲಾಖೆ ಅವರು ಸುಖವಾಗಿರಲಿ, ನಿರೋಗಿಯಾಗಿರಲಿ ಅಂತ ಅಲ್ಲ. ಎಲ್ಲರೂ ಸುಖವಾಗಿರಲಿ, ಎಲ್ಲರೂ ನಿರೋಗಿಯಾಗಿರಲಿ ಅಂತ.

ನಮ್ಮ ಅಜ್ಜಾ- ಅಜ್ಜಿ ಕಡೆ ಕೇಳಿದ ಕಥಿ ನಾವು ಮರತಿರಬಹುದು. ಕನಿಷ್ಟ ಈಗ ಡೀಡೀ ಡಿಕ್ಕಿನ ಮಹಾಭಾರತ-ರಾಮಾಯಣ ನೋಡಿ ಚಾಣಕ್ಯನೂ ನೆನಪಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದೆಹಲಿ ಮರಕಜ ಬಗ್ಗೆ ಬರಿರಿ. ಆವಾಗ ನಿಮ್ಮ ಪತ್ರಿಕೆ ನಿಸ್ಸಂದೇಹವಾಗಿ ಜಾತಾತಿತ ಪತ್ರಿಕೆ.

LEAVE A REPLY

Please enter your comment!
Please enter your name here

- Advertisment -

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...